ಕೋಟ : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ವತಿಯಿಂದ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣೆ ಮತ್ತು ಉಡುಪ ಹಂದೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 18 ಜನವರಿ 2026ರಂದು ಸಂಜೆ 4-00 ಗಂಟೆಗೆ ಕೋಟ ಪಟೇಲರ ಮನೆ ಅಂಗಣದಲ್ಲಿ ಆಯೋಜಿಸಲಾಗಿದೆ.
4-00 ಗಂಟೆಗೆ ನಡೆಯಲಿರುವ ಗಮಕ ವಾಚನ – ವ್ಯಾಖ್ಯಾನದಲ್ಲಿ ಕಾಸರಗೋಡಿನ ದಿವ್ಯಾ ಕಾರಂತ್ ವಾಚನ ಹಾಗೂ ಜಯಲಕ್ಷ್ಮೀ ಕಾರಂತ್ ವ್ಯಾಖ್ಯಾನ ನೀಡಲಿದ್ದಾರೆ. 5-00 ಗಂಟೆಗೆ ಸಾಲಿಗ್ರಾಮ ಮಕ್ಕಳ ಮೇಳದ ಪ್ರಾಕ್ತನ ಕಲಾವಿದರಾದ ಪ್ರದೀಪ ಶೆಟ್ಟಿ ಇವರಿಂದ ಉಡುಪ ಸಂಸ್ಮರಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಮೊಳಹಳ್ಳಿ ಕೃಷ್ಣ ಮೊಗವೀರ ಇವರಿಗೆ ‘ಉಡುಪ ಪ್ರಶಸ್ತಿ’ ಮತ್ತು ನಿವೃತ್ತ ಶಿಕ್ಷಕ ಸಾಂಸ್ಕೃತಿಕ ಚಿಂತಕರಾದ ಮುರಳಿ ಕಡೆಕಾರ್ ಇವರಿಗೆ ‘ಹಂದೆ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಗುವುದು. 6-30 ಗಂಟೆಗೆ ಸಾಲಿಗ್ರಾಮ ಶ್ರೀ ಗುರು ಪ್ರಸಾದಿತ ಯಕ್ಷಗಾನ ಮಂಡಳಿಯ ಕಲಾವಿದರಿಂದ ಯಕ್ಷಕವಿ ಹಳೆಮಕ್ಕಿ ರಾಮ ವಿರಚಿತ ‘ಕೃಷ್ಣಾರ್ಜುನ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

