Subscribe to Updates

    Get the latest creative news from FooBar about art, design and business.

    What's Hot

    ಶಾಲೆಗಳಲ್ಲಿ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’ ಪ್ರದರ್ಶನ

    October 27, 2025

    ಅನುಪಲ್ಲವಿಯಲ್ಲಿ ದೀಪಾವಳಿ ವಿಶೇಷ ಉದಯ ರಾಗ

    October 27, 2025

    ಯಡಾಡಿ ಮತ್ಯಾಡಿಯಲ್ಲಿ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’

    October 27, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಡಮರುಗ ಚಿಣ್ಣರ ಬಣ್ಣದ ಶಿಬಿರದ ಸಮಾರೋಪ ಹಾಗೂ ‘ನನ್ನ ಗೋಪಾಲ’ ಮಕ್ಕಳ ನಾಟಕ ಪ್ರಯೋಗ
    Camp

    ಡಮರುಗ ಚಿಣ್ಣರ ಬಣ್ಣದ ಶಿಬಿರದ ಸಮಾರೋಪ ಹಾಗೂ ‘ನನ್ನ ಗೋಪಾಲ’ ಮಕ್ಕಳ ನಾಟಕ ಪ್ರಯೋಗ

    May 10, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತುಮಕೂರು : ತುಮಕೂರು ತಾಲ್ಲೂಕಿನ ಮೆಳೇಹಳ್ಳಿಯ ಡಮರುಗ ರಂಗ ಸಂಪನ್ಮೂಲ ಕೇಂದ್ರವು ಆಯೋಜಿಸಿದ್ದ 18ನೇ ವರ್ಷದ ಚಿಣ್ಣರ ಬಣ್ಣದ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 06-05-2023ನೇ ಶನಿವಾರ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ನೆರವೇರಿತು.

    ಅತಿಥಿಯಾಗಿ ಭಾಗವಹಿಸಿದ ಜಿ.ಎಂ.ಹೆಚ್.ಪಿ.ಎಸ್. ಕೋರಾ ಇದರ ಮುಖ್ಯ ಶಿಕ್ಷಕರಾದ ಶ್ರೀ ಮಧುಸೂಧನ್ ರಾವ್
    ಮಾತನಾಡುತ್ತಾ “ಶಾಲೆಯಲ್ಲಿ ಒಂದು ವರ್ಷ ಪೂರ್ತಿ ಮಾಡಲಾಗದ ಕಾರ್ಯವನ್ನು ಒಂದು ತಿಂಗಳ ಶಿಬಿರ ಮಾಡಿ ಬಿಡುತ್ತದೆ. ಇದು ಉತ್ಪ್ರೇಕ್ಷೆಯಲ್ಲ. ನನ್ನ ಶಾಲೆಯ ಮಕ್ಕಳು ಶಿಬಿರದಲ್ಲಿದ್ದಾರೆ ಅವರ ಬದಲಾವಣೆಯನ್ನು ಕಂಡು ನಾನು ಹೇಳುತ್ತಿದ್ದೇನೆ. ಮಕ್ಕಳು ಬಹುಮುಖಿಯಾಗಿ ವಿಕಾಸಗೊಳ್ಳಲು ಇಂತಹ ಶಿಬಿರಗಳು ಬೇಕು” ಎಂದು ಅಭಿಪ್ರಾಯಪಟ್ಟರು.

    ಸಮಾರಂಭದಲ್ಲಿ ಸಾಹಿತಿಗಳಾದ ಪ್ರಕಾಶ್ ನಾಡಿಗ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧಕ್ಷರಾದ ಸಿದ್ದರಾಮಯ್ಯ, ನಿವೃತ್ತ ಪ್ರಾಂಶುಪಾಲರಾದ ಕುಮಾರಸ್ವಾಮಿ ಹಾಗೂ ತುಮಕೂರಿನ ಉಪನಿರ್ದೇಶಕ ಕಚೇರಿಯ ಡಿ.ವೈ.ಎಸ್.ಪಿ. ರಂಗಧಾಮಯ್ಯ ಉಪಸ್ಥಿತರಿದ್ದರು.

    ನಂತರ ಸುಮಾರು ಐವತ್ತು ಮಕ್ಕಳು ಮೆಳೇಹಳ್ಳಿ ದೇವರಾಜ್ ನಿರ್ದೇಶನದಲ್ಲಿ ಕುವೆಂಪುರವರ ‘ನನ್ನ ಗೋಪಾಲ’ ನಾಟಕ ಪ್ರಯೋಗಿಸಿದರು. ಕಾಡಿನ ಸೌಂದರ್ಯ, ಪ್ರಾಣಿ-ಪಕ್ಷಿಗಳ ಕಲರವ, ಮನುಷ್ಯ ಮತ್ತು ಜೀವ ಸಂಕುಲಗಳ ಬಾಂಧವ್ಯ ಮನುಷ್ಯನ ಆಧುನಿಕತೆಗೆ ಬಲಿಯಾಗಿ ಅಳಿವಿನತ್ತ ಸಾಗುತ್ತಿರುವ ವನ ಮತ್ತು ಪ್ರಾಣಿಗಳ ಸಂಕಟಗಳನ್ನು ಮತ್ತು ಗೋಪಾಲನೆಯ ನೆಲ-ಮೂಲ ಸಂಸ್ಕೃತಿ, ಭವಿಷ್ಯದ ಅಕ್ಷಯ ಪಾತ್ರೆಯೆಂಬ ಒಳಹುಗಳನ್ನು ನಿರ್ದೇಶಕರು ತುಂಬಾ ಚೆನ್ನಾಗಿ ಹೊರ ಹೊಮ್ಮಿಸಿದರು. ಮಕ್ಕಳು ಲವಲವಿಕೆಯಿಂದ ಅಭಿನಯಿಸಿ ಕುವೆಂಪುರವರ ನಾಟಕದ ಅರ್ಥ ವ್ಯಾಪ್ತಿ ಹಿಗ್ಗಿಸಿದರು.

    ಶಿಬಿರದ ಎಲ್ಲಾ ಚಿಣ್ಣರು ಲವಲವಿಕೆಯಿಂದ ಅಭಿನಯಿಸಿದರು. ಶಿಬಿರಕ್ಕಾಗಿ ದುಡಿದ, ಶಿಬಿರದಲ್ಲಿ ತರಬೇತಿ ನೀಡಿದ
    ಸಂಪನ್ಮೂಲ ವ್ಯಕ್ತಿಗಳನ್ನು ಮತ್ತು ಪ್ರತಿದಿನದ ದಾಸೋಹಿಗಳನ್ನು ಅಭಿನಂದಿಸಲಾಯಿತು.

     

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ‘ಅನಾಮಿಕನ ಸಾವು’ | ಮೇ 11ಕ್ಕೆ
    Next Article ನಾಟಕ ವಿಮರ್ಶೆ: ಇಂಜಿನಿಯರುಗಳು ಕಟ್ಟಿದ ‘ಅಸಂಗತಗಳು’ – ಗಣೇಶ ಅಮೀನಗಡ
    roovari

    Add Comment Cancel Reply


    Related Posts

    ರಾಜ್ಯ ಮಟ್ಟದ ಯುವ ಕಲಾವಿದರ ಚಿತ್ರಕಲಾ ಶಿಬಿರ | ಅಕ್ಟೋಬರ್ 29

    October 27, 2025

    ಕಿಶೋರ್ ಡಿ. ಶೆಟ್ಟಿಯವರು ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆ

    October 25, 2025

    ಯಕ್ಷ ರಂಗಾಯಣದಲ್ಲಿ ‘ನಾಟಕದ ಮಾತು ಕತೆ’ ಕಥನ-6 | ಅಕ್ಟೋಬರ್ 25

    October 24, 2025

    ನಟಿ ಉಮಾಶ್ರೀ ಗೆ ‘ಶ್ರೀ ಶಿವಕುಮಾರ ಪ್ರಶಸ್ತಿ’

    October 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.