Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಕ್ಲೇ ಮಾಡೆಲಿಂಗ್ ಪ್ರದರ್ಶನ | ಮೇ 24

    May 21, 2025

    ಬಾನು ಮುಷ್ತಾಕ್‌ ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ‘ಬೂಕರ್ ಪ್ರಶಸ್ತಿ’

    May 21, 2025

    ಹರಿಹರಪುರದಲ್ಲಿ ‘ಭಾಗವತರ ಸಂಸ್ಮರಣೆ ಗಾನಾರಾಧನೆ’ | ಮೇ 25

    May 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ಧರ್ಮನಟಿ’ ಐತಿಹಾಸಿಕ ಕನ್ನಡ ನಾಟಕ | ಜನವರಿ 31
    Drama

    ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ಧರ್ಮನಟಿ’ ಐತಿಹಾಸಿಕ ಕನ್ನಡ ನಾಟಕ | ಜನವರಿ 31

    January 29, 2025No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಅರೆಹೊಳೆ ಪ್ರತಿಷ್ಠಾನ, ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಕಾಲೇಜು ಪರಿಗಣಿತ ವಿಶ್ವವಿದ್ಯಾನಿಲಯ, ಅಸ್ತಿತ್ವ (ರಿ.) ಮತ್ತು ಕಲಾಭಿ (ರಿ.) ಆಯೋಜಿಸುವ ರಂಗರಥ ಟ್ರಸ್ಟ್ ಬೆಂಗಳೂರು ಅಭಿನಯಿಸುವ ‘ಧರ್ಮನಟಿ’ ನಾಟಕ ಪ್ರದರ್ಶನವನ್ನು ದಿನಾಂಕ 31 ಜನವರಿ 2025ರಂದು ಸಂಜೆ ಗಂಟೆ 6-45ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ರಂಗಭೂಮಿ ಉಡುಪಿ ಆಯೋಸಿದ್ದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ನಾಟಕ ಇದಾಗಿದೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ಪ್ರಸ್ತುತಗೊಳ್ಳಲಿರುವ ಸಂಗೀತಮಯ ಐತಿಹಾಸಿಕ ಕನ್ನಡ ನಾಟಕಕ್ಕೆ ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ ಇವರು ನಿರ್ದೇಶನ ಮಾಡಿದ್ದು, ಭಿನ್ನಷಡ್ಜ ಸಂಗೀತದಲ್ಲಿ ಸಹಕರಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8050157443 (ಶ್ವೇತಾ ಶ್ರೀನಿವಾಸ್) ಅಥವಾ 9448286776 ಆಸಿಫ್ ಕ್ಷತ್ರಿಯ ಇವರನ್ನು ಸಂಪರ್ಕಿಸಿ.

    ರಂಗರಥ ಸಂಸ್ಥೆಯ ಬಗ್ಗೆ :
    ಭಾರತೀಯ ಪ್ರದರ್ಶನ ಕಲಾ ಸಂಸ್ಥೆಯಾದ ‘ರಂಗರಥ’ ಎಂಬುದು ರಂಗಪ್ರೇಕ್ಷಕರ ಮನಸೂರೆಗೊಂಡ ಬೆಂಗಳೂರಿನ ಕೆಲವು ರಂಗತಂಡಗಳಲ್ಲಿ ಒಂದು. ಹಲವು ವರ್ಷಗಳ ರಂಗಾನುಭವದ ಆಧಾರದ ಮೇಲೆ ರಂಗರಥದ ಪಯಣ ಸಾಗಿದೆ. ಅನುಭವೀ ರಂಗಕರ್ಮಿಗಳು, ನಾಟಕಕಾರರು, ಸಾಹಿತಿಗಳು, ಸಂಗೀತ ಸಂಯೋಜಕರು ಒಂದಾಗಿ, ರಂಗಪ್ರಯೋಗಗಳಲ್ಲಿ ಹೊಸ ಆಯಾಮ ಮತ್ತು ಸಾಧ್ಯತೆಗಳನ್ನು ಅಳವಡಿಸಿಕೊಂಡು, ಒಳ್ಳೆ ಅಭಿರುಚಿಯ ನಾಟಕ, ಯಕ್ಷಗಾನ, ನೃತ್ಯನಾಟಕಗಳನ್ನು ತಯಾರಿಸಿ ದೇಶಾದ್ಯಂತ ಪ್ರದರ್ಶಿಸುತ್ತಿದೆ. ವಿವಿಧ ತಂತ್ರಜ್ಞರು ಮತ್ತು ಹಲವು ವಿಭಾಗಗಳ ಪರಿಣಿತರ ಸಹಯೋಗದೊಂದಿಗೆ, ಪುರಾಣ, ಇತಿಹಾಸ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಇಂದಿನ ಪೀಳಿಗೆಯವರಿಗೆ ತಲುಪಿಸಲು, ಮನರಂಜನಾತ್ಮಕ ಹಾಗೂ ಶೈಕ್ಷಣಿಕ ಮಹತ್ವವುಳ್ಳ ರಂಗಚಟುವಟಿಕೆಗಳನ್ನು ಮಾಡುವಲ್ಲಿ ರಂಗರಥ ನಿರತವಾಗಿದೆ.

    ರಂಗರಥ ತಂಡವು, ಮಕ್ಕಳಿಗೆ ಹಾಗೂ ಎಲ್ಲಾ ವಯಸ್ಸಿನ ಆಸಕ್ತರಿಗೆ, ರಂಗಭೂಮಿಯ ವಿಭಾಗಗಳಾದ ವಾಕ್-ವಿಜ್ಞಾನ, ಹಾವಭಾವ ತಂತ್ರಜ್ಞಾನ, ಮಾನಸ-ಚಲನೆ, ಇತ್ಯಾದಿ ವಿಶಿಷ್ಟ ವಿಷಯಗಳಲ್ಲಿ ಆನ್ಲೈನ್ ಮತ್ತು ಆಫ್‌ ಲೈನ್ ನಲ್ಲಿ ತರಬೇತಿ ನೀಡುತ್ತಿದೆ. ಈ ತಂಡವು, ವಿಶೇಷವಾಗಿ ನಟರಿಗೆ, ನೃತ್ಯಪಟುಗಳಿಗೆ ಮತ್ತು ಅನೇಕ ಪ್ರದರ್ಶನ ಕಲಾವಿದರಿಗಾಗಿಯೇ ವಿಶಿಷ್ಟವಾಗಿ ಸಿದ್ಧಪಡಿಸಿದ ‘ನಟಯೋಗ’ ಯೋಗ ವಿಧಾನವನ್ನು ಕಲಿಸುವುದರಲ್ಲಿ ನಿರತವಾಗಿದೆ.

    ಇದಲ್ಲದೇ, ಗ್ರಾಮೀಣ ಯುವ ಆಸಕ್ತರಿಗೆ, ಬೆಳಕಿನ ವಿನ್ಯಾಸ, ರಂಗಸಜ್ಜಿಕೆ, ರಂಗ ನಿರ್ವಹಣೆ, ವಿತ್ತ ನಿರ್ವಹಣೆ, ಚಲನಚಿತ್ರ ನಿರ್ದೇಶನ, ಚಿತ್ರಕಥೆ, ಸಂಭಾಷಣೆ, ಇತ್ಯಾದಿಗಳಲ್ಲಿ ಕೂಡ ತರಬೇತಿ ನೀಡುವ ಪ್ರಮಾಣಿಕೃತ ತರಗತಿಗಳನ್ನು ನಡೆಸಲು ರಂಗರಥ ಟ್ರಸ್ಟ್ ಸಜ್ಜಾಗಿದೆ. ಜೊತೆಗೆ, ಬೇರೆ ಪ್ರತಿಷ್ಠಿತ ರಂಗಶಾಲೆ ಅಥವಾ ಚಲನಚಿತ್ರ ತರಬೇತಿ ಸಂಸ್ಥೆಗಳಿಂದ ಉತ್ತೀರ್ಣರಾಗಿ ಬಂದಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ, ‘ಥಿಯೇಟರ್ ಇಂಟರ್ನ್‌ ಶಿಪ್ ಕೋರ್ಸ್’ಗಳನ್ನು ಕೂಡ ರಂಗರಥ ತಂಡವು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಜೊತೆಗೆ, ಹಲವಾರು ಹೊಸ ಹೊಸ ನಾಟಕಕಗಳನ್ನು ನಿರ್ಮಿಸಿ ಪ್ರದರ್ಶಿಸುತ್ತಾ ಇದೆ.

    ಆಸಿಫ್ ಕ್ಷತ್ರಿಯ (ನಿರ್ದೇಶಕರು):


    ವಿಜ್ಞಾನ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ವಿಶಿಷ್ಟ ಮಿಶ್ರಣದ ವ್ಯಕ್ತಿತ್ವ ಹೊಂದಿರುವ, ರಂಗಭೂಮಿ ಮತ್ತು ಚಲನಚಿತ್ರ ರಂಗದಲ್ಲಿ ಚಿರಪರಿಚಿತ ವ್ಯಕ್ತಿ ಆಸಿಫ್ ಕ್ಷತ್ರಿಯ, ದಕ್ಷಿಣ ಭಾರತದಲ್ಲಿ ದಶಕಗಳ ಹಿಂದೆಯೇ ಕಿರುಚಿತ್ರ ನಿರ್ಮಾಣ ಸಂಸ್ಕೃತಿಯನ್ನು ಹುಟ್ಟುಹಾಕಿದ ಇವರಿಗೆ ಚಿತ್ರರಂಗ ಮತ್ತು ರಂಗಭೂಮಿಯ ಒಡನಾಟ ಕಳೆದ 40 ವರ್ಷಗಳಿಂದಲೂ ಇದೆ. ಈ ಎರಡೂ ವಲಯಗಳಲ್ಲಿ ಆಸಿಫ್ ಕ್ಷತ್ರಿಯ ಅವರು ಒಬ್ಬ ಬರಹಗಾರರಾಗಿ, ಸಂವೇದನಾಶೀಲ ನಟರಾಗಿ ಹಾಗೂ ಸೃಜನಶೀಲ ನಿರ್ದೇಶಕರಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

    ಕಲಾ ದಿಗ್ಗಜರಾದ ಬಿ.ವಿ. ಕಾರಂತ, ಎಂ.ಎಸ್. ಸತ್ಯು. ಆರ್.ಎನ್. ಜಯಗೋಪಾಲ್, ಭಾರ್ಗವ, ಪೀಟರ್ ಬ್ರೂಕ್, ಇರ್ಶಾದ್ ಪಂಜತನ್, ಸಿ.ಜಿ.ಕೆ., ಗಿರೀಶ್ ಕಾರ್ನಾಡ್, ಅರುಂಧತಿ ನಾಗ್, ಪ್ರೋತಿಮಾ ಬೇಡಿ, ಸಿರಿಗಂಧ ಶ್ರೀನಿವಾಸಮೂರ್ತಿ, ಎಚ್.ಎಲ್. ನಾಗೇಗೌಡ, ಮುಂತಾದವರೊಡನೆ ಕೆಲಸ ಮಾಡಿದ ಆಸಿಫ್ ಅವರು ನಟನೆ ಮತ್ತು ನಿರ್ದೇಶನದ ಸೂತ್ರಗಳನ್ನು ಇಂತಹ ಅನೇಕ ದಿಗ್ಗಜರಿಂದ ಕಲಿತು, ತಮ್ಮ ನಾಟಕ ಮತ್ತು ಚಲನಚಿತ್ರಗಳಲ್ಲಿ ಅಳವಡಿಸಿಕೊಂಡು ಬಂದಿದ್ದಾರೆ.

    ಇವರು ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ನಂತರ ತಮ್ಮನ್ನು ತಾವು ಸಂಪೂರ್ಣವಾಗಿ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಅರ್ಪಿಸಿಕೊಂಡಿದ್ದಾರೆ. ಅನೇಕ ನಾಟಕಗಳು, ಕಿರುಚಿತ್ರಗಳು, ಚಲನಚಿತ್ರಗಳು, ವನ್ಯಜೀವಿ ಮತ್ತು ಜನಪದ ಸಂಸ್ಕೃತಿಯ ಸಾಕ್ಷ್ಯಚಿತ್ರಗಳು, ಕಾರ್ಪೋರೇಟ್ ಮತ್ತು ಜಾಹೀರಾತು ಚಿತ್ರಗಳನ್ನು ಮಾಡಿ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

    ಪ್ರಸ್ತುತ, 4 ವರ್ಷಗಳ ಹಿಂದೆ ಸ್ಥಾಪಿಸಿದ, ‘ರಂಗರಥ – ಭಾರತೀಯ ಪ್ರದರ್ಶನ ಕಲಾ ಸಂಸ್ಥೆ’ಯ ಸಂಸ್ಥಾಪಕ ನಿರ್ದೇಕರಾಗಿ ಮತ್ತು ವ್ಯವಸ್ಥಾಪಕ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಾ, ಹಲವು ನಾಟಕಗಳನ್ನು ಬರೆದು ನಿರ್ದೇಶಿಸುತ್ತಾ, ಹೊಸ ಪೀಳಿಗೆಯ ಯುವಕ ಯುವತಿಯರಿಗೆ ರಂಗಭೂಮಿ ಮತ್ತು ನಟನೆಯ ಪಾಠಗಳನ್ನು ಹೇಳಿಕೊಡುವುದರಲ್ಲಿ ನಿರತರಾಗಿದ್ದಾರೆ.

    ಶ್ವೇತಾ ಶ್ರೀನಿವಾಸ್ (ನಿರ್ದೇಶಕರು):

    ಶ್ವೇತಾ ಶ್ರೀನಿವಾಸ್ ಅವರು ಕನ್ನಡ ರಂಗಭೂಮಿಯ ಒಬ್ಬ ಚಿರಪರಿಚಿತ ಪ್ರತಿಭಾನ್ವಿತ ನಟಿ. ಬಾಲ್ಯದಿಂದಲೂ ರಂಗಭೂಮಿಯ ಒಡನಾಟ ಹೊಂದಿರುವ ಇವರು, ನಟನೆಯ ಜೊತೆಗೆ ಸೃಜನಶೀಲ ವಸ್ತ್ರ ವಿನ್ಯಾಸ ಮತ್ತು ನೃತ್ಯ ಸಂಯೋಜನೆಗೆ ದೇಶಾದ್ಯಂತ ಹೆಸರಾದವರು. ಇದಕ್ಕಾಗಿ ಇವರು ಹಲವು ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದಾರೆ. ನೀನಾಸಂ ಪದವೀಧರರಾದ ಇವರು, 60ಕ್ಕೂ ಹೆಚ್ಚು ಪ್ರಮುಖ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದಲ್ಲದೇ ಅನೇಕ ಚಲನಚಿತ್ರಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ.

    ಶ್ವೇತಾ ಶ್ರೀನಿವಾಸ್ ಅವರು ‘ಪಂಚರಂಗಿ’, ‘ದ್ಯಾವ್ರೆ’, ಬೆಂಕಿಪೊಟ್ಟಣ’, ‘ಕೃಷ್ಣಲೀಲಾ’, ‘ಡಿ.ಎನ್.ಎ. ‘ನೀರು ತಂದವರು’, ‘ನಾತಿಚರಾಮಿ, ‘ಗಂಗಾ’, ‘ತರ್ಕ’, ‘ಬ್ಯಾಚಲರ್ ಪಾರ್ಟಿ’, ‘ಬೇಲಿ ಹೂ’ ಮುಂತಾದ ಜನಮನಗೆದ್ದ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿದ ಚಲನಚಿತ್ರಗಳಲ್ಲಿ ನಟಿಸಿ ಅಪಾರ ಮನ್ನಣೆಯನ್ನು ಗಳಿಸಿದ್ದಾರೆ. ಜೊತೆಗೆ ಶ್ವೇತ ಶ್ರೀನಿವಾಸ್ ಅವರು ಒಬ್ಬ ಸಮರ್ಥ ಯಕ್ಷಗಾನ ಪಟು ಆಗಿರುವುದಲ್ಲದೇ, ಗುರುಗಳಾದ ಉದಯಕುಮಾರ್ ಶೆಟ್ಟಿ, ಪಾರ್ವತಿದತ್ತ ಮತ್ತು ಮಧುಲಿತ ಮಹಾಪಾತ್ರ ಇವರುಗಳ ಮಾರ್ಗದರ್ಶನದಲ್ಲಿ ಒಡಿಸ್ಸಿ ಶಾಸ್ತ್ರೀಯ ನೃತ್ಯವನ್ನೂ ಅಭ್ಯಸಿಸಿದ್ದಾರೆ. ಸಧ್ಯ ಗುರು ಶ್ವೇತಾ ಕೃಷ್ಣ ಅವರ ಬಳಿ ಒಡಿಸ್ಸಿ ನೃತ್ಯಾಭ್ಯಾಸವನ್ನು ಮುಂದುವರೆಸಿದ್ದಾರೆ.

    ಹಿರಿಯ ರಂಗಕರ್ಮಿಗಳಾದ ಸಿ.ಜಿ.ಕೆ, ಕೆ.ವಿ. ಅಕ್ಷರ, ಅಭಿಲಾಷ್ ಪಿಳ್ಳೆ, ಮಾನವ್ ಕೌಲ್, ವೆಂಕಟರಮಣ ಐತಾಳ್, ಜಿ. ವೇಣು, ಇವರುಗಳ ಜೊತೆ ಕೆಲಸ ಮಾಡಿದ ಶ್ವೇತಾ ಇವರು ‘ಚಿತ್ರಪಟ’ ನಾಟಕದಲ್ಲಿನ ತಮ್ಮ ನಟನೆಗೆ ಮತ್ತು ವಸ್ತ್ರವಿನ್ಯಾಸಕ್ಕೆ ‘ಮೆಟಾ’ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಲ್ಲದೇ ‘ಮುಕ್ಕಾಂ ಪೋಸ್ಟ್ ಬೊಂಬಿಲವಾಡಿ’ ನಾಟಕಕ್ಕೆ ಅತ್ಯುತ್ತಮ ನಟಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆ ಇವರದು.

    ಇದರ ಜೊತೆಗೇ, ಶ್ವೇತಾ ಶ್ರೀನಿವಾಸ್ ಅವರು ಭಾರತ ಸರ್ಕಾರದ, ಆಯುಷ್ ಮತ್ತು ಯೋಗ ಅಲಾಯನ್ಸ್ ಮಂತ್ರಾಲಯದಿಂದ ಧೃಡೀಕರಿಸಲ್ಪಟ್ಟ ಪ್ರಮಾಣಪತ್ರವನ್ನು ಪಡೆದು ಈಗ, ವಿಶೇಷವಾಗಿ ನಟರಿಗೆ, ನೃತ್ಯಪಟುಗಳಿಗೆ ಮತ್ತು ಅನೇಕ ಪ್ರದರ್ಶನ ಕಲಾವಿದರಿಗಾಗಿಯೇ ವಿಶಿಷ್ಟವಾಗಿ ಸಿದ್ಧಪಡಿಸಿದ ಯೋಗ ವಿಧಾನವನ್ನು ಕಲಿಸುವುದರಲ್ಲಿ ನಿರತರಾಗಿದ್ದಾರೆ.

    ಪ್ರಸ್ತುತ 4 ವರ್ಷಗಳ ಹಿಂದೆ ಸ್ಥಾಪಿಸಿದ. ‘ರಂಗರಥ – ಭಾರತೀಯ ಪ್ರದರ್ಶನ ಕಲಾ ಸಂಸ್ಥೆ’ಯ ಸಂಸ್ಥಾಪಕ ನಿರ್ದೇಶಕರಾಗಿ ಮತ್ತು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾ, ಹಲವು ನಾಟಕಗಳನ್ನು ನಿರ್ದೇಶಿಸುತ್ತಾ, ಹೊಸ ಪೀಳಿಗೆಯ ಯುವಕ ಯುವತಿಯರಿಗೆ ರಂಗಭೂಮಿಯ ಸಮಗ್ರ ಪರಿಚಯವನ್ನು ನೀಡುತ್ತಾ ರಂಗತಂತ್ರಗಳನ್ನು ಕಲಿಸುವುದರಲ್ಲಿ ನಿರತರಾಗಿದ್ದಾರೆ.

    ‘ಧರ್ಮನಟಿ’ ನಾಟಕದ ಬಗ್ಗೆ : (ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಅನುವಾದಿತ ನಾಟಕ ‘ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ’)

    ಇದು 10ನೇ ಶತಮಾನದ ಮಲ್ಲರಾಜ್ಯದ ರಾಜನ ಕಥೆ, ವರ್ಷಗಳೇ ಕಳೆದರೂ, ರಾಜನಿಗೆ ಮಕ್ಕಳಾಗದೇ, ರಾಜಸಿಂಹಾಸನಕ್ಕೆ ಉತ್ತರಾಧಿಕಾರಿ ಸಿಗುವ ಸಂಭವ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ, ನೆರೆಯ ರಾಜ್ಯಗಳ ರಾಜರು, ಮಲ್ಲರಾಜ್ಯವನ್ನು ಕಬಳಿಸುವ ಯತ್ನಗಳನ್ನು ಮಾಡತೊಡಗುತ್ತಾರೆ. ಮಲ್ಲರಾಜ್ಯದ ಅಮಾತ್ಯ ಪರಿಷತ್ತು, ವೈರಿಗಳ ಯತ್ನಗಳನ್ನು ವಿಫಲಗೊಳಿಸಲು, ‘ನಿಯೋಗ’ ಪದ್ಧತಿಯ ಮೂಲಕ ರಾಜಸಿಂಹಾಸನಕ್ಕೆ ಉತ್ತರಾಧಿಕಾರಿಯನ್ನು ಪಡೆಯುವ ಯೋಜನೆ ರೂಪಿಸುತ್ತದೆ. ಈ ಯೋಜನೆಯು ಮಹಾರಾಣಿ ಶೀಲಾವತಿ ಮತ್ತು ಮಹಾರಾಜ ಓಕ್ಕಾಕನ ಅಸ್ತಿತ್ವಗಳನ್ನೇ ಬುಡಮೇಲು ಮಾಡುತ್ತದೆ.

    ಈ ನಾಟಕದ ವಸ್ತು, ಹೆಣ್ಣಿನ ಅಸ್ಮಿತೆಯನ್ನು ಪ್ರಶ್ನಿಸುತ್ತದೆಯಲ್ಲದೇ, ಅಂದಿನ ಹಾಗೂ ಇಂದಿನ ಸಾಮಾಜಿಕ ಮತ್ತು ರಾಜಕೀಯ ಸಂಕೀರ್ಣತೆಯನ್ನು ಚರ್ಚಿಸುತ್ತದೆ. ಇದಲ್ಲದೆ ಪುರುಷ ಮತ್ತು ಸ್ತ್ರೀಯರ ಭಿನ್ನತೆ ಮತ್ತು ಅಪೂರ್ಣತೆಯ ಮೂಲಕ ಪೂರ್ಣತೆಯನ್ನು ಪಡೆಯುವ ಅವರ ಅಂತರಿಕ ಹೋರಾಟವನ್ನು ವಿಶ್ಲೇಷಿಸುತ್ತದೆ. ಈ ‘ಧರ್ಮನಟಿ’ ನಾಟಕ 1೦ನೇ ಶತಮಾನದ್ದೇ ಆದರೂ, ಇದರಲ್ಲಿರುವ ಹೆಣ್ಣಿನ ಸಂಘರ್ಷ, ಆಕೆಯ ತಾಯ್ತನದ ಗ್ರಹಿಕೆ, ಗಂಡಸಿನ ಅಸಹಾಯಕತೆ ಇವತ್ತಿನ ಸಮಾಜದಲ್ಲೂ ಪ್ರಸ್ತುತ. ಈ ನಾಟಕದ ತಿರುಳು ಈಗಿನ ಅನೇಕ ಪುರುಷ ಮತ್ತು ಮಹಿಳೆಯರ ಪ್ರತಿಫಲನವೇ ಆಗಿದೆ.

    ಇಲ್ಲಿ ನಾಟಕದ ಅನುವಾದಕರಾದ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಲಿಖಿತ ಅನುಮತಿಯೊಂದಿಗೆ, ಮೂಲ ಕಥಾ ಹಂದರಕ್ಕೆ ಕಿಂಚಿತ್ತೂ ಧಕ್ಕೆಬಾರದ ಹಾಗೆ, ಈಗಿನ ಪೇಕ್ಷಕರ ಗ್ರಹಿಕೆಗೆ ಸುಲಭ ಆಗುವ ರೀತಿಯಲ್ಲಿ ಕೆಲವು ಸೂಕ್ತ ಬದಲಾವಣೆಗಳನ್ನು ಮಾಡಿ, ಅರ್ಥಗರ್ಭಿತವಾದ ಹಾಡುಗಳನ್ನು ಸೇರಿಸಿ ಒಂದು ಸಂಗೀತಮಯ ವಾತಾವರಣವನ್ನು ಸೃಷ್ಟಿಮಾಡಲು ಪ್ರಯತ್ನಿಸಲಾಗಿದೆ.

    Kannada drama
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಶೇಷಾದ್ರಿಪುರಂನಲ್ಲಿ ರಾಜ್ಯ ಮಟ್ಟದ ಎಂಟನೇ ಯುವಜನ ಸಮ್ಮೇಳನ | ಫೆಬ್ರವರಿ 02
    Next Article ವಿಶೇಷ ಲೇಖನ : ಭಾರತೀಯ ಪತ್ರಿಕೋದ್ಯಮದ ಪಿತಾಮಹ ಜೇಮ್ಸ್ ಆಗಸ್ಟಸ್ ಹಿಕ್ಕಿ
    roovari

    Add Comment Cancel Reply


    Related Posts

    ಹರಿಹರಪುರದಲ್ಲಿ ‘ಭಾಗವತರ ಸಂಸ್ಮರಣೆ ಗಾನಾರಾಧನೆ’ | ಮೇ 25

    May 21, 2025

    ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ‘ಸುಗಮ ಸಂಗೀತ’ ಕಾರ್ಯಕ್ರಮ | ಮೇ 25        

    May 21, 2025

    ಕರ್ನಾಟಕ ನಾಟಕ ಅಕಾಡೆಮಿಯಿಂದ ತಿಂಗಳ ನಾಟಕ ಸಂಭ್ರಮ

    May 21, 2025

    ವಿನಮ್ರ ಇಡ್ಕಿದು ಹಾಡಿದ ದೃಶ್ಯ ಗೀತೆಗಳು ಬಿಡುಗಡೆ ಕಾರ್ಯಕ್ರಮ

    May 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.