ದಾವಣಗೆರೆ : ವೃತ್ತಿ ರಂಗಭೂಮಿ ರಂಗಾಯಣವು ದಿನಾಂಕ 15, 16 ಮತ್ತು 17 ಮಾರ್ಚ್ 2025ರಂದು ದಾವಣಗೆರೆ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ವೃತ್ತಿ ರಂಗೋತ್ಸವ – 2025 ಕಾರ್ಯಕ್ರಮ ಹಮ್ಮಿಕೊಂಡಿದೆ.
ವಿಚಾರ ಸಂಕಿರಣ, ರಂಗ ದಾಖಲೆ ಮತ್ತು ಚಿತ್ರಕಲಾ ಪ್ರದರ್ಶನ, ರಂಗ ಸಂವಾದ ಸೇರಿದಂತೆ ಮೂರು ದಿವಸಗಳಲ್ಲಿ ಮೂರು ಮಹತ್ವದ ನಾಟಕಗಳ ಪ್ರದರ್ಶನ ಜರುಗುತ್ತವೆ. ಮೂರು ನಾಟಕಗಳ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ‘ನಾಟಕ ವಿಮರ್ಶಾ’ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರಥಮ ಬಹುಮಾನ ₹ 3000/-, ದ್ವಿತೀಯ ಬಹುಮಾನ ₹ 2000/-, ತೃತೀಯ ಬಹುಮಾನ ₹ 1000/-
ಸ್ಪರ್ಧೆಯ ನಿಯಮಗಳು :
• ವಿಮರ್ಶೆಯು ಐದುನೂರು ಪದಗಳ ಮಿತಿಯಲ್ಲಿರಬೇಕು.
• ವಿಮರ್ಶೆಯು ಮೂರು ನಾಟಕಗಳ ಕುರಿತು ಇರಬೇಕು.
• ವಿಮರ್ಶಾ ಕೈ ಬರಹ ಸ್ಪಷ್ಟವಾಗಿದ್ದು, ಪದಗಳ ಸಂಖ್ಯೆ ಸಮೇತ ಇರಬೇಕು. ಡಿ.ಟಿ.ಪಿ. ಮಾಡಿ ಕಳಿಸಿದರೆ ಹೆಚ್ಚು ಉತ್ತಮ.
• ಕಾಲೇಜು ಪ್ರಾಚಾರ್ಯರಿಂದ ತಾವು ವಿದ್ಯಾರ್ಥಿ ಎಂಬುದರ ದಾಖಲೆ ಸಲ್ಲಿಸಬೇಕು.
• ಫೋನ್ ನಂ. ಸಮೇತ ಪೂರ್ಣ ವಿಳಾಸದೊಂದಿಗೆ ವಿಮರ್ಶಾ ಬರಹ ಸಲ್ಲಿಸಲು ಕೊನೆಯ ದಿನಾಂಕ 20 ಮಾರ್ಚ್ 2025.
• ದಿನಾಂಕ 27 ಮಾರ್ಚ್ 2025ರಂದು ವಿಶ್ವ ರಂಗಭೂಮಿ ದಿನಾಚರಣೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು.
ಬರಹ ಕಳಿಸುವ ವಿಳಾಸ : ನಿರ್ದೇಶಕರು /ವಿಶೇಷಾಧಿಕಾರಿಗಳು, ವೃತ್ತಿ ರಂಗಭೂಮಿ ರಂಗಾಯಣ, ಕೊಠಡಿ ಸಂಖ್ಯೆ : 38 A, ಮೊದಲ ಮಹಡಿ, ಜಿಲ್ಲಾಡಳಿತ ಭವನ, ಪಿ.ಬಿ. ರಸ್ತೆ ದಾವಣಗೆರೆ – 577006. ಇಮೇಲ್ : [email protected]