Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಸೈಯ್ಯದ ನಜೀರೊದ್ದಿನ ಮುತವಲ್ಲಿ ನಾಮ ನಿರ್ದೇಶನ

    August 11, 2025

    ಕಾಸರಗೋಡಿನಲ್ಲಿ “ಗುರುದಕ್ಷಿಣೆ” ಯಕ್ಷಗಾನ ತಾಳಮದ್ದಳೆ

    August 11, 2025

    ಕೊಡವೂರು ಶ್ರೀ ದೇವಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    August 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಾಟಕ ವಿಮರ್ಶೆ | ಆಧುನಿಕ ಜೀವನದ ಹಲವು ಮಜಲು ತೋರಿಸಿದ ಆಧುನಿಕ ರಂಗಭೂಮಿಯ ‘ಧರ್ಮನಟಿ’
    Drama

    ನಾಟಕ ವಿಮರ್ಶೆ | ಆಧುನಿಕ ಜೀವನದ ಹಲವು ಮಜಲು ತೋರಿಸಿದ ಆಧುನಿಕ ರಂಗಭೂಮಿಯ ‘ಧರ್ಮನಟಿ’

    February 1, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ರಂಗಭೂಮಿ ಉಡುಪಿಯ ವಾರ್ಷಿಕ ನಾಟಕ ಸ್ಪರ್ಧೆ, ಕರ್ನಾಟಕದ ಹಳೆಯ ಮತ್ತು ಇಂದಿಗೂ ಯಶಸ್ಸಿಯಾಗಿ ಮುನ್ನಡೆಯುತ್ತಿರುವ ಒಂದು ವಿದ್ಯಮಾನ. ಬಹುಶಃ ಸಾಂಪ್ರದಾಯಿಕ ಅಥವ ಪರದೆ ನಾಟಕಗಳ ಕಾಲದಿಂದ ಆರಂಭಗೊಂಡು ಮುಂದುವರಿಯುತ್ತ ಆಧುನಿಕ ರಂಗಭೂಮಿಯ ಇಂದಿನವರೆಗೂ ಸತತ ಆರ್ಕಷಣೆಯನ್ನು ಉಳಿಸಿಕೊಂಡಿರುವ ಸ್ಪರ್ಧೆ, ಸಹಜವಾಗಿ ಒಂದಿಷ್ಟು ಏರಿಳಿತಗಳ ನಡುವೆಯೂ. ಈ ನಿಟ್ಟಿನಲ್ಲಿ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಾಟಕಗಳೆಂದರೆ ಅವುಗಳಿಗೆ ಒಂದು ಹಂತದ ವಿಶೇಷ ಸ್ಥಾನಮಾನ ಇದ್ದೇ ಇದೆ, ನೀರ್ದಿಷ್ಟ ಮಾನದಂಡಗಳ ಜತೆಗೆ.

    ಈ ಹಿನ್ನೆಲೆಯಲ್ಲಿ ಈ ಬಾರಿಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರು ರಂಗರಥ ಟ್ರಸ್ಟಿನ ‘ಧರ್ಮನಟಿ’ ನಾಟಕ ಪೌರಾಣಿಕ ಮತ್ತು ಐತಿಹಾಸಿಕ ನೆಲೆಗಳೊಂದಿಗೆ ಆಧುನಿಕ ರಂಗಭೂಮಿ ಆಧಾರಿತ ಪ್ರಯೋಗದ ಮೂಲಕ, ಆಧುನಿಕ ಜೀವನದ ಅದರಲ್ಲೂ ವೈವಾಹಿಕ ಬದುಕಿನ ಹಲವು ಮಜಲುಗಳನ್ನು ತೆರೆದಿಟ್ಟಿದೆ ಹೆಚ್ಚು ಕಡಿಮೆ ಉತ್ತಮ ಎನ್ನಬಹುದಾದ ರೀತಿಯಲ್ಲಿ.

    ರಾಜಮನೆತನ ಅವುಗಳ ನೀತಿ ನಿಯಮ ಕಟ್ಟುಪಾಡುಗಳ ಆಧಾರದ ಅರಮನೆಯೊಳಗಿನ ಜೀವನದ ವಿಭಿನ್ನ ಮುಖಗಳು, ಸಮಾಜದ ಬಡತನ, ಗಂಡು ಹೆಣ್ಣಿನ ಪ್ರೇಮ, ಕಾಮ ಮತ್ತು ಇದರೊಂದಿಗೆ ಬೆಸೆದಿರುವ ಸತ್ಯ, ಹೀಗೆ ಒಂದಾರ್ಥದಲ್ಲಿ ಲೈಂಗಿಕತೆಯ ಸುತ್ತ ಗಿರಕಿ ಹೊಡೆಯುವ ಈ ನಾಟಕ ಇನ್ನೊಂದು ಕಡೆ ಮಹಾಭಾರತವನ್ನೇ ಜಗತ್ತಿನಲ್ಲಿ ಸೃಷ್ಟಿಸಲು ಕಾರಣವಾದ ನಿಯೋಗ ಪದ್ದತಿಯ ಸಾಧ್ಯ ಸಾಧ್ಯತೆಯನ್ನು ಸುಪ್ತವಾಗಿ ಹೊರಚೆಲ್ಲುತ್ತದೆ, ಲೀವಿಂಗ್ ಟುಗೇದರ್ – ಮುಕ್ತ ಲೈಂಗಿಕತೆ- Extra marital affair – sex satisfaction.. ಇಂತಹ ಗಂಭೀರ ಚಿಂತನೆ /ಪ್ರಶ್ನೆಗಳನ್ನು ರಂಗದ ಮೂಲಕ hypocrisy ಮಾನಸಿಕತೆಯ ಸಮಾಜದೆದುರು ತೆರೆದಿಟ್ಟು!

    ಬಹುತೇಕ ಎಲ್ಲರ ಉತ್ತಮ ಅಭಿನಯದ ಹೊರತಾಗಿಯೂ ಕೆಲವು ಪಾತ್ರಗಳಿಂದ ಮತ್ತೊಂದಿಷ್ಟು ಖಂಡಿತ ಸಾಧ್ಯ ಇತ್ತು. ನಾಟಕದುದ್ದಕ್ಕೂ ರಂಗದಲ್ಲಿ ವಿಪರೀತ ಚೆಲ್ಲಿದ ಬೆಳಕು ಅತೀ ಅನಿಸಿತ್ತು. ಹಾಡುಗಳನ್ನು ಮಾತ್ರ ಇನ್ನಷ್ಟು ನೆನಪಿನಲ್ಲಿ ಉಳಿಯುವಂತೆ ಗಟ್ಟಿ ಮಾಡಲೇಬೇಕಿತ್ತು. ಸಂಗೀತ ಹದ ಎನಿಸಿ ವಸ್ತ್ರ ಮತ್ತು ರಂಗ ವಿನ್ಯಾಸ ಮುದ ನೀಡಿತು. ಇಂತಹ ಪ್ರಯೋಗದ ಹಿಂದಿನ ಎಲ್ಲರಿಗೂ ಅಭಿನಂದನೆಗಳು.

    ಕಲ್ಲಚ್ಚು ಮಹೇಶ ಆರ್. ನಾಯಕ್ ಮಂಗಳೂರು

    drama review
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀನಿವಾಸ ದೇವಾಡಿಗ ಇವರಿಗೆ ಎಂ. ಎಂ. ಹೆಗ್ಡೆ ಪ್ರಶಸ್ತಿ | ಫೆಬ್ರವರಿ 08
    Next Article ಕಾಸರಗೋಡಿನಲ್ಲಿ ‘ಮನೆಗೊಂದು ಗ್ರಂಥಾಲಯ’ ಪ್ರಚಾರ ಹಾಗೂ ಕರಪತ್ರ ಬಿಡುಗಡೆ | ಫೆಬ್ರವರಿ 02
    roovari

    Add Comment Cancel Reply


    Related Posts

    ಯುವ ನಾಟಕಕಾರ ನಾರಾಯಣ ಕೊಯಿಲ ನಿಧನ

    August 11, 2025

    ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ತಮಾಷಾ’ ವಿದ್ಯಾರ್ಥಿ ನಾಟಕೋತ್ಸವ | ಆಗಸ್ಟ್ 14ರಿಂದ 17

    August 11, 2025

    ಹೈದರಾಬಾದಿನ ರವೀಂದ್ರ ಭಾರತಿಯಲ್ಲಿ ‘ತಲ್ಕಿ’ ನಾಟಕದ ಪ್ರದರ್ಶನ | ಆಗಸ್ಟ್ 13

    August 11, 2025

    ಲೇಖನ | ಲೇಖಕರ ಸೃಜನಶೀಲ ಆಟ ‘ಬರವಣಿಗೆಯ ತಾಲೀಮು’

    August 9, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.