ಬೆಂಗಳೂರು : ಕನ್ನಡ ಜಾನಪದ ಪರಿಷತ್ ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಘಟಕ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆ (ನೋಂ) ಹಿರಿಯೂರು ಚಿತ್ರದುರ್ಗಾ ಜಿಲ್ಲೆ ಇವುಗಳ ಸಹಯೋಗದಲ್ಲಿ ರಾಜ್ಯಮಟ್ಟದ ‘ಕನ್ನಡ ಜಾನಪದ ಸಮ್ಮೇಳನ’ವನ್ನು ದಿನಾಂಕ 26 ಮತ್ತು 27 ಜುಲೈ 2025ರಂದು ಬೆಂಗಳೂರಿನ ಟಿ. ದಾಸರಹಳ್ಳಿ ಸೌಂದರ್ಯ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ.
ಜಾನಪದ ಕಲಾ ತಂಡಗಳಿಗೆ ವಿಶೇಷ ಪ್ರದರ್ಶನ ಸ್ಪರ್ಧೆ ಮತ್ತು ಬಹುಮಾನ ವಿತರಣೆ ಹಾಗೂ ಪ್ರಶಸ್ತಿ ಪುರಸ್ಕಾರ. ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಬಹುಮಾನ ಹಾಗೂ ‘ಕನ್ನಡ ಜಾನಪದ ಸಿರಿ ಪ್ರಶಸ್ತಿ’ ನೀಡಲಾಗುವುದು ಹಾಗೂ ಭಾಗವಹಿಸಿದವರೆಲ್ಲರಿಗೂ ‘ಕನ್ನಡ ಜಾನಪದ ಪ್ರಶಂಸನಾ ಪತ್ರ’ ಪ್ರದಾನ ಮಾಡಲಾಗುವುದು.
ಸ್ಪರ್ಧೆಯ ನಿಯಮಗಳು ಮತ್ತು ಸೂಚನೆಗಳು :
ಸ್ಪರ್ಧೆಯಲ್ಲಿ ಭಾಗವಹಿಸುವ ಜಾನಪದ ಕಲಾ ತಂಡಗಳು : ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಕೋಲಾಟ, ಲಂಬಾಣಿ ಕುಣಿತ, ಕಂಸಾಳೆ, ನಂದಿ ಧ್ವಜದ ಕುಣಿತ, ಕರಗದ ಕುಣಿತ, ಸುಗ್ಗಿಯ ಕುಣಿತ, ಸಾಮೂಹಿಕ ಹಾಗೂ ವೈಯಕ್ತಿಕ ಕನ್ನಡ ಜಾನಪದ ಗಾಯನ. ದಿನಾಂಕ 26 ಜುಲೈ 2025ರ ಶನಿವಾರ ಬೆಳಗ್ಗೆ 8:00 ರಿಂದ ರಾತ್ರಿ 10:00 ಗಂಟೆಯವರೆಗೆ ಆಯ್ಕೆ ಇರುತ್ತದೆ.
ಕಿರಿಯರ ವಿಭಾಗ ವಯೋಮಿತಿ : 6 ರಿಂದ 12 ವರ್ಷಗಳು
ಹಿರಿಯರ ವಿಭಾಗ ವಯೋಮಿತಿ : 13ರಿಂದ ಅಧಿಕ ವಯೋಮಿತಿಯವರು
ಹೆಸರು ನೊಂದಾಯಿಸಲು ಕೊನೆಯ ದಿನಾಂಕ 25 ಜೂನ್ 2025. ದಿನಾಂಕ 27 ಜುಲೈ 2025ರಂದು ಜರುಗುವ ಕನ್ನಡ ಜಾನಪದ ಸಮ್ಮೇಳನದಲ್ಲಿ ಕಲಾ ತಂಡಗಳ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.