ಹಾವೇರಿ : ಹಾವೇರಿಯ ಪ್ರತಿಮಾನ ಸಾಹಿತ್ಯ ಸಂಘವು ದಿನಾಂಕ 07 ಮತ್ತು 08 ಫೆಬ್ರವರಿ 2026ರಂದು ಕಾಗಿನೆಲೆಯಲ್ಲಿ ಎರಡು ದಿನಗಳ ರಾಜ್ಯಮಟ್ಟದ ಕಥಾ ಕಮ್ಮಟ ಆಯೋಜಿಸಿದೆ. ಈ ಕಥಾ ಕಮ್ಮಟಕ್ಕೆ ಮುಕ್ತ ಪ್ರವೇಶವಿದ್ದು, ಆಸಕ್ತ ಲೇಖಕ/ಕಿಯರು, ಓದುಗರು ಮತ್ತು ಸಹೃದಯರು ನಿಯಾಮಾನುಸಾರವಾಗಿ ಅರ್ಜಿ ಸಲ್ಲಿಸಿ, ಭಾಗವಹಿಸಬಹುದು.
ನಿಯಮಗಳು :
ಹಾವೇರಿ ಜಿಲ್ಲೆಯ ಖ್ಯಾತ ಪ್ರವಾಸಿ ತಾಣವಾದ ಕಾಗಿನೆಲೆಯಲ್ಲಿ ಫೆಬ್ರವರಿ 07 ಮತ್ತು 08ರಂದು ಈ ಕಥಾ ಕಮ್ಮಟ ನಡೆಯಲಿದೆ.
ಈ ಕಥಾ ಕಮ್ಮಟಕ್ಕೆ ಮುಕ್ತ ಪ್ರವೇಶಿಸಿದ್ದು, ಲೇಖಕ/ಕಿಯರು, ಓದುಗರು ಮತ್ತು ಸಹೃದಯರು ಇದರಲ್ಲಿ ಭಾಗವಹಿಸಬಹುದು.
ಎರಡು ದಿನಗಳ ಈ ಕಥಾ ಕಮ್ಮಟಕ್ಕೆ ರೂ.600/- ಫೀಸು ಇದ್ದು ವಿದ್ಯಾರ್ಥಿಗಳಿಗೆ ರೂ.400/- ಫೀಸು ಇರಲಿದೆ.
ಕಥಾ ಕಮ್ಮಟದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ತಿಂಡಿ, ಊಟ ಮತ್ತು ವಸತಿ ವ್ಯವಸ್ಥೆ (ಹಾಸಿಗೆ ಮತ್ತು ಹೊದಿಕೆಯನ್ನು ಶಿಬಿರಾರ್ಥಿಗಳೇ ತರಬೇಕು) ಇರಲಿದೆ.
ಎಲ್ಲ ಶಿಬಿರಾರ್ಥಿಗಳಿಗೆ ಲೇಖನ ಸಾಮಗ್ರಿ ಮತ್ತು ಪುಸ್ತಕಗಳ ಕಿಟ್ ವೊಂದನ್ನು ನೀಡಲಾಗುವುದು.
ಆಸಕ್ತರು ದಿನಾಂಕ 04 ಫೆಬ್ರವರಿ 2026ರೊಳಗಾಗಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು.
ಆಸಕ್ತರು ತಮ್ಮ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ, ಪಾಸ್ಪೋರ್ಟ್ ಅಳತೆಯ ಒಂದು ಫೋಟೋ ಮತ್ತು ಫೀ ರಶೀದಿಯನ್ನು ಸಂಚಾಲಕರ ವಿಳಾಸಕ್ಕೆ ವಾಟ್ಸಪ್ ಮೂಲಕ ಕಳುಹಿಸಿ ನೋಂದಣಿ ಮಾಡಿಕೊಳ್ಳಬೇಕು.
ಕಥಾ ಕಮ್ಮಟದ ಕುರಿತ ಎಲ್ಲ ವಿವರಗಳು, ನೋಂದಣಿ, ಫೀ ಪಾವತಿ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಪ್ರತಿಮಾನ ಸಾಹಿತ್ಯ ಸಂಘದ ಸಂಚಾಲಕರಾದ ಶ್ರೀ ಲಿಂಗರಾಜ ಸೊಟ್ಟಪ್ಪನವರ (8970731194) ಇವರನ್ನು ಸಂಪರ್ಕಿಸಬಹುದು.
