Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕೃತಿ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನ

    July 8, 2025

    ಬಹುವಚನಂನ ಪದ್ಮಿನೀ ಸಭಾಭವನದಲ್ಲಿ ಶಾಸ್ತ್ರೀಯ ಸಂಗೀತ ಕಛೇರಿ | ಜುಲೈ 13

    July 8, 2025

    ‘ಕಾಂತೆ ಕವಿತೆ’ ಮತ್ತು ‘ಮಾತು ಎಂಬ ವಿಸ್ಮಯ’ ಕೃತಿಗಳ ಅವಲೋಕನ.

    July 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » 20ನೇ ಕಲಾಕಾರ್ ಪುರಸ್ಕಾರ ಹಸ್ತಾಂತರ
    Awards

    20ನೇ ಕಲಾಕಾರ್ ಪುರಸ್ಕಾರ ಹಸ್ತಾಂತರ

    November 5, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕಾರ್ವಾಲ್ ಕುಟುಂಬ ಮತ್ತು ಮಾಂಡ್ ಸೊಭಾಣ್ ಜಂಟಿಯಾಗಿ ಕೊಡಮಾಡುವ ಕಲಾಕಾರ್ ಪುರಸ್ಕಾರ ಹಸ್ತಾಂತರ ಸಂಭ್ರಮವು 03 ನವೆಂಬರ್ 2024ರಂದು ಶಕ್ತಿನಗರದ ಕಲಾಂಗಣದಲ್ಲಿ ನೆರವೇರಿತು.
    ಕಾರ್ವಾಲ್ ಕುಟುಂಬದ ಪ್ರತಿನಿಧಿ ಹಾಗೂ ಭಾಷಾ ತಜ್ಞ ವಂ. ಡಾ. ಪ್ರತಾಪ್ ನಾಯ್ಕ್ ಪ್ರಸ್ತಾವಿಕ ನುಡಿಗಳಾನ್ನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುಂಬಯಿಯ ಯಶಸ್ವಿ ಬ್ಯಾಂಕರ್ ಹಾಗೂ ಕೊಂಕಣಿ ಮುಂದಾಳು ಜೊನ್ ಡಿಸಿಲ್ವಾ ಇವರು 20 ನೇ ಕಲಾಕಾರ್ ಪುರಸ್ಕಾರಕ್ಕೆ ಆಯ್ಕೆಗೊಂಡ ಸಂಗೀತಗಾರ ರೋಶನ್ ಕ್ರಾಸ್ತಾ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿಯು ಶಾಲು, ಫಲಪುಷ್ಪ, ಕೊಂಕಣಿ ಪೇಟ ಉರ್ಮಾಲ್, ಸನ್ಮಾನ ಪತ್ರ, ಸ್ಮರಣಿಕೆ ಹಾಗೂ ರೂಪಾಯಿ ಐವತ್ತು ಸಾವಿರದ ಚೆಕ್ ಒಳಗೊಂಡಿತ್ತು.

    ಕಾರ್ವಾಲ್ ಕುಟುಂಬದಿಂದ ಫ್ಲೊರಿನ್ ಲೋಬೊ, ಫೆಲಿಕ್ಸ್ ಲೋಬೊ ಮತ್ತು ರೆನಿಟಾ ಲೋಬೊ ಹಾಗೂ ರೋಶನ್ ಪತ್ನಿ ರೇಷ್ಮಾ, ಮಗ ಯೊಹಾನ್, ತಂದೆ ತಾಯಿ ಸ್ಟ್ಯಾನಿ-ರೋಜಿ ಕ್ರಾಸ್ತಾ ಹಾಗೂ ಅತ್ತೆ ಲೀನಾ ಸಿಕ್ವೇರಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
    ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೊನ್ ಡಿಸಿಲ್ವಾ “ಕೊಂಕಣಿಯ ಕೆಲಸಗಳ ನಿರಂತರತೆ ಬಗ್ಗೆ ಮಾಂಡ್ ಸೊಭಾಣ್ ಸಂಸ್ಥೆ ಮಾಡಿರುವ ಕಾರ್ಯ ಅಭಿನಂದನಾರ್ಹ.” ಎಂದರು., ಸನ್ಮಾನ ಸ್ವೀಕರಿಸಿ ರೋಶನ್ ಮಾತನಾಡಿ ಸಂಗೀತಗಾರರ ಕಷ್ಟಗಳ ಬಗ್ಗೆ ತನ್ನ ಮಾತುಗಳನ್ನು ಹಂಚಿಕೊಂಡು, ತನ್ನ ಸಂಗೀತ ಪಯಣದಲ್ಲಿ ಸಹಕರಿಸಿದವರನ್ನು ನೆನಪಿಸಿದರು.
    ನಂತರ ರೂಪಾಯಿ ಒಂದು ಲಕ್ಷ ಮೊತ್ತದ ಎರಿಕ್ ಒಝೇರಿಯೊ ಅಮೃತೋತ್ಸವ ಸಂಶೋಧನಾ ಅನುದಾನಕ್ಕೆ ಆಯ್ಕೆಗೊಂಡ ಮಾಧ್ಯಮ ಮತ್ತು ಸಂವಹನ ಸ್ನಾತಕೋತ್ತರ ಪದವೀಧರೆ ಪ್ರಿಥುಮ ಮೊಂತೇರೊ, ವಾಮಂಜೂರು ಇವರ ಹೆಸರನ್ನು ಅರುಣ್ ರಾಜ್ ರೊಡ್ರಿಗಸ್ ಘೋಷಿಸಿದರು. `ಕೊಂಕಣಿ ಕ್ರೈಸ್ತರ ಜನಪದ: ನಡೆದು ಬಂದ ದಾರಿ’ ಈ ವಿಷಯದ ಬಗ್ಗೆ ಅವರು ಸಂಶೋಧನೆ ನಡೆಸುವರು.

    ತಿಂಗಳ ವೇದಿಕೆ ಸರಣಿಯಲ್ಲಿ 275ನೇ ಕಾರ್ಯಕ್ರಮದ ತಂಡದ ಮುಖ್ಯಸ್ಥ ಗೋವಾದ ಪಿಯೊ ಆಗ್ನೆಲೊ ಇವರನ್ನು ಗೌರವಿಸಲಾಯಿತು. ಆದರೆ ಧಾರಾಕಾರ ಮಳೆಯ ಕಾರಣದಿಂದ ಈ ಕಾರ್ಯಕ್ರಮ ಮುಂದೂಡಲ್ಪಟ್ಟಿತು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಕಾರ್ಕಳದ ಕ್ರಿಯೇಟಿವ್ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ
    Next Article ಕ.ಸಾ.ಪ. ಉಡುಪಿ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಸಂಭ್ರಮ
    roovari

    Add Comment Cancel Reply


    Related Posts

    ಬೆಂಗಳೂರಿನ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕೃತಿ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನ

    July 8, 2025

    ಬಹುವಚನಂನ ಪದ್ಮಿನೀ ಸಭಾಭವನದಲ್ಲಿ ಶಾಸ್ತ್ರೀಯ ಸಂಗೀತ ಕಛೇರಿ | ಜುಲೈ 13

    July 8, 2025

    ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ | ಜುಲೈ 12

    July 8, 2025

    ಮಡಿಕೇರಿಯ ಪತ್ರಿಕಾ ಭವನದಲ್ಲಿ ಮಳೆಗಾಲ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

    July 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.