Subscribe to Updates

    Get the latest creative news from FooBar about art, design and business.

    What's Hot

    ಲೋಕಾರ್ಪಣೆಗೊಂಡ “ನದಿ ತಟದ ವೃಕ್ಷ” ಕವನ ಸಂಕಲನ

    June 25, 2025

    ಮಂಗಳೂರು ವಿ. ವಿ. ಯಲ್ಲಿ ‘ಯಕ್ಷಮಂಗಳ ಪ್ರಶಸ್ತಿ’ ಪ್ರದಾನ ಸಮಾರಂಭ | ಜೂನ್ 27

    June 25, 2025

    ಉದ್ಘಾಟನೆಗೊಂಡ ತುಳು ನಾಟಕ ಕಾರ್ಯಾಗಾರ

    June 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಲೋಕಾರ್ಪಣೆಗೊಂಡ ‘ಕನ್ನಡ ಜೈನ ಸಾಹಿತ್ಯ ಚರಿತ್ರೆ’
    Book Release

    ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಲೋಕಾರ್ಪಣೆಗೊಂಡ ‘ಕನ್ನಡ ಜೈನ ಸಾಹಿತ್ಯ ಚರಿತ್ರೆ’

    January 17, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು: ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಸಹಯೋಗದೊಂದಿಗೆ ‘ಕನ್ನಡ ಜೈನ ಸಾಹಿತ್ಯ ಚರಿತ್ರೆ’ಯ ಆರು ಸಂಪುಟಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 11 ಜನವರಿ 2025ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ನಡೆಯಿತು.
    ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಪ್ರೊ. ಹಂಪನಾ ಮಾತನಾಡಿ “ಯಾವುದೇ ಭಾಷೆಯಲ್ಲಿ ಕಾಲ ಕಾಲಕ್ಕೆ ಸಾಹಿತ್ಯ ಚರಿತ್ರೆಗಳು ರಚನೆಯಾಗಬೇಕು. ಆಗ ಮಾತ್ರ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮಹತ್ವ ಮನದಟ್ಟಾಗುತ್ತದೆ. ತುಂಬಾ ಪ್ರಾಚೀನವಾದ ಹಾಗೂ ವಿಸ್ತಾರವಾದ ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಈ ದಿನ ಬಿಡುಗಡೆ ಆಗಿರುವ ‘ಕನ್ನಡ ಜೈನ ಸಾಹಿತ್ಯ ಚರಿತ್ರೆ’ಯ ಸಂಪುಟಗಳು ತುಂಬಾ ಉಪಯುಕ್ತ” ಎಂದು ಹೇಳಿದರು.
    ಕೃತಿಯ ಕುರಿತು ಮಾತನಾಡಿದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯಂ “ಈ ಕೃತಿಯ ರಚನೆಯ ಹಿಂದೆ 50 ರಿಂದ 60ವರ್ಷಗಳ ಗಂಭೀರವಾದ ಅಧ್ಯಯನವಿದೆ ಎಂಬುದು ಎದ್ದು ಕಾಣುತ್ತದೆ. ಈ ರೀತಿಯ ಆಕರಕೃತಿಗಳು ಹೆಚ್ಚು ಹೆಚ್ಚು ಚರ್ಚೆಯಾಗಲಿ. ಈ ಕೃತಿಯಲ್ಲಿ ಶ್ರೀವಿಜಯನಿಂದ ಇಲ್ಲಿಯವರೆಗಿನ ಸಾಹಿತ್ಯ ಮತ್ತು ಸಂಸ್ಕೃತಿಯ ತಿರುಳನ್ನು ಅರ್ಥೈಸಿರುವ ಕ್ರಮ ತುಂಬಾ ವಿಶಿಷ್ಟವಾಗಿದೆ” ಎಂದು ಸಂಪುಟಗಳ ಮಹತ್ವದ ಬಗ್ಗೆ ತಿಳಿಸಿದರಮತ್ತೆರಡು ಕೃತಿಗಳ ಬಗ್ಗೆ ಮಾತನಾಡಿದ ವಿಮರ್ಶಕಿ ಎಂ. ಎಸ್. ಆಶಾದೇವಿ “ಕನ್ನಡ ಸಾಹಿತ್ಯ ಧಾರ್ಮಿಕ ಸಾಮರಸ್ಯಕ್ಕೆ ಈ ಕೃತಿಗಳು ಹೆಚ್ಚು ಒತ್ತು ನೀಡಿವೆ. ಮಾನವೀಯ ಮೌಲ್ಯಗಳನ್ನು ಒಳಗೊಂಡ ಹಲವಾರು ನಿದರ್ಶನಗಳ ಮೂಲಕ ಈ ಕೃತಿಗಳಲ್ಲಿ ಚರ್ಚಿಸಲಾಗಿದೆ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಾಡೋಜ ವೂಡೇ ಪಿ. ಕೃಷ್ಣ ಮಾತನಾಡಿ “ ‘ಕನ್ನಡ ಜೈನ ಸಾಹಿತ್ಯ ಚರಿತ್ರೆ’ ರಚನೆಯ ಈ ಕಾರ್ಯ ಅತ್ಯಂತ ಮಹತ್ವಪೂರ್ಣವಾದುದು. ಈ ಮಹೋನ್ನತ ಕಾರ್ಯವು ಬರೀ ಇಂದಿಗಷ್ಟೇ ಅಲ್ಲ ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯುತ್ತದೆ” ಎಂದರು. ಕಾರ್ಯಕ್ರಮದಲ್ಲಿ ನಾಡಿನ ಪ್ರಖ್ಯಾತ ವಿದ್ವಾಂಸರಾದ ಡಾ. ಪಿ. ವಿ. ನಾರಾಯಣ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಧರಣೇಂದ್ರ ಕುರಕುರಿ ಉಪಸ್ಥಿತರಿದ್ದರು.ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲರನ್ನು ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ. ಪ್ರಕಾಶ್ ಮೂರ್ತಿಯವರು ಸ್ವಾಗತಿಸಿ, ಶೇಷಾದ್ರಿಪುರಂ ಕಾಲೇಜಿನ ಅಧ್ಯಾಪಕರಾದ ಡಾ. ಮಹೇಶ್ವರಿ ಕಾರ್ಯಕ್ರಮವನ್ನು ನಿರೂಪಿಸಿ, ಸಾಹಿತಿ ಡಾ. ರಾಮಲಿಂಗೇಶ್ವರ(ಸಿಸಿರಾ) ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು.

    Book release Literature
    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ – ವೈಜ್ಞಾನಿಕ ಕನ್ನಡ ಸಾಹಿತ್ಯದ ಅಧಿಕೃತ ಜನಕ ಪ್ರೊ. ರಾಜಶೇಖರ ಭೂಸನೂರಮಠ
    Next Article ಕೋರಂಗಾಲದಲ್ಲಿ ದತ್ತಿನಿಧಿ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮ | ಜನವರಿ 20
    roovari

    Add Comment Cancel Reply


    Related Posts

    ಲೋಕಾರ್ಪಣೆಗೊಂಡ “ನದಿ ತಟದ ವೃಕ್ಷ” ಕವನ ಸಂಕಲನ

    June 25, 2025

    ಕಾಳಿದಾಸಕಾವ್ಯ – ಕಥಾಸಪ್ತಾಹಃ | ಜೂನ್ 26

    June 25, 2025

    Book Review | ‘The Aquarium’

    June 25, 2025

    ಕಾಸರಗೋಡಿನ ಕನ್ನಡ ಭವನದಲ್ಲಿ ‘ವಾಚನ ವಾರಾಚರಣೆ ಸಮಾರಂಭ’ | ಜೂನ್ 27

    June 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.