ಧಾರವಾಡ : ಬೆಂಗಳೂರಿನ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ.) ಕರ್ನಾಟಕ ಇದರ ವತಿಯಿಂದ ‘ಕಾವ್ಯಶ್ರೀ ಶಿಕ್ಷಕರ ಸಾಹಿತ್ಯ ಸಮ್ಮೇಳನ 2026’ ಸಮಾರಂಭವನ್ನು ದಿನಾಂಕ 12 ಸೆಪ್ಟೆಂಬರ್ 2026ರಂದು ಬೆಳಿಗ್ಗೆ 10-00 ಗಂಟೆಗೆ ಧಾರವಾಡದ ರಾಜ್ಯ ಸರಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾಹಿತಿ ಡಾ. ಸಿದ್ದಣ್ಣ ಬಾಡಗಿ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಡಾ. ಧನವಂತ ಹಾಜವಗೋಳ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಸಾಹಿತಿ ಪ್ರೊ. ಪ್ರವೀಣ ವಿ. ಕುಲಕರ್ಣಿ ಇವರು ವಿಚಾರಗೋಷ್ಠಿ ಅಧ್ಯಕ್ಷತೆ ವಹಿಸಲಿದ್ದು, ಶ್ರೀಮತಿ ಸಾವಿತ್ರಿ ಮಹಾದೇವಪ್ಪ ಮತ್ತು ಆನಂದ ಸಿ. ತಿರುಮಲ ಇವರು ಕೃತಿ ಬಿಡುಗಡೆ ಮಾಡಲಿದ್ದಾರೆ. ಶರಣಪ್ಪ ರುದ್ರಗೌಡ ಚಿಕ್ಕಣಗೌಡ್ರ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ, ನಗೆ ಹನಿ, ವಚನಗಳು, ಗಾಯನ, ಹಲಗಿ ವಾದನ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದೆ.



