Subscribe to Updates

    Get the latest creative news from FooBar about art, design and business.

    What's Hot

    ‘ಗೆಳೆಯರ ಬಳಗ ಕಾರಂತ ಪುರಸ್ಕಾರ – 2025 ಪ್ರಶಸ್ತಿ’ಗೆ ಎಚ್. ಶಕುಂತಳಾ ಭಟ್ ಆಯ್ಕೆ

    September 17, 2025

    ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ‘ಸುವರ್ಣ ಪರ್ವ -13’ | ಸೆಪ್ಟೆಂಬರ್ 21

    September 17, 2025

    ಕಥೆಗಳು ಮನಸ್ಸಿನಲ್ಲಿ ಅನುರಣಿಸುವಂತೆ ಇರಬೇಕು – ಕಾಸರಗೋಡು ಚಿನ್ನ

    September 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಣಿಪಾಲದಲ್ಲಿ ಉಪನ್ಯಾಸ ಹಾಗೂ ನೃತ್ಯ ಪ್ರದರ್ಶನ
    Dance

    ಮಣಿಪಾಲದಲ್ಲಿ ಉಪನ್ಯಾಸ ಹಾಗೂ ನೃತ್ಯ ಪ್ರದರ್ಶನ

    March 22, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಣಿಪಾಲ : ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸ್ ನ ಆಶ್ರಯದಲ್ಲಿ “ನೃತ್ಯ ಮತ್ತು ಶಾಂತಿ – ಕಲಾವಿದೆ ಮತ್ತು ಮನೋವೈದ್ಯೆಯ ಒಳನೋಟ” ಎಂಬ ವಿಷಯದ ಕುರಿತು ಉಪನ್ಯಾಸ-ನೃತ್ಯ ಪ್ರದರ್ಶನ ಕಾರ್ಯಕ್ರಮವು ದಿನಾಂಕ 09-03-2024ರಂದು ನಡೆಯಿತು.

    ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಖ್ಯಾತ ಮನೋವೈದ್ಯೆ, ನೃತ್ಯ ಕಲಾವಿದೆ ಹಾಗೂ ಲೇಖಕಿಯಾದ ಡಾ.ಕೆ.ಎಸ್.ಪವಿತ್ರಾ ಮಾತನಾಡಿ “ನೃತ್ಯ ಕಲೆಯಿಂದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿ ಮನಃಶಾಂತಿಗೆ ಕಾರಣವಾಗಲು ಸಾಧ್ಯವಾಗುತ್ತದೆ. ಆದಾಗ್ಯೂ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕೇವಲ ನೃತ್ಯ ಪ್ರಕಾರದ ಸರಳವಾದ ಮತ್ತು ಯಾಂತ್ರಿಕ ಅನ್ವಯಿಕೆಯನ್ನು ಮಾಡಬಾರದು. ನೃತ್ಯವು ಶಾಂತಿಯ ಮಾಧ್ಯಮವಾಗಬಹುದು, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಹುದು, ಸ್ವಾತಂತ್ರ‍್ಯದ ಅನುಭೂತಿಯನ್ನೂ ಉಂಟುಮಾಡಬಹುದು.” ಎಂದು ತಿಳಿಸಿದರು.

    ತಾತ್ವಿಕ ಸಾಹಿತ್ಯದ ಚೌಕಟ್ಟನ್ನು ತೆಗೆದುಕೊಂಡು, ಅನ್ನಮಯ, ಆನಂದಮಯ, ಪ್ರಾಣಮಯ, ಮನೋಮಯ ಮತ್ತು ವಿಜ್ಞಾನಮಯ ಕೋಶಗಳ ನಡುವೆ ನೃತ್ಯ ಹೇಗೆ ಆನಂದಕ್ಕೆ ಕಾರಣವಾಗಬಲ್ಲವು ಎಂಬುದನ್ನು ವಿವರಿಸಿದರು. ದ.ರಾ.ಬೇಂದ್ರೆ, ವೈದೇಹಿ, ಕನಕದಾಸರು, ಆದಿಕವಿ ಪಂಪ ಅವರ ಆಯ್ದ ಕಾವ್ಯಕ್ಕೆ ನೃತ್ಯ ಮಾಡುವ ಮೂಲಕ ಆ ಕವಿತೆಗಳಲ್ಲಿ ವ್ಯಕ್ತವಾಗುವ ಭಾವವನ್ನು ನೃತ್ಯವು ಹೇಗೆ ಹೊರತರುತ್ತದೆ ಎಂಬುದನ್ನು ಪ್ರದರ್ಶಿಸಿದರು. ಬೇಂದ್ರೆಯವರ ‘ಗಂಗಾವತರಣ’, ವೈದೇಹಿಯವರ ‘ಶಿವನ ಮೀಯಿಸುವ ಹಾಡು’ ಮತ್ತಿತರ ಕಾವ್ಯ-ನರ್ತನ ಗಮನ ಸೆಳೆದವು.


    ಜಿ. ಸಿ. ಪಿ. ಎ. ಎಸ್. ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಮಾತನಾಡಿ “ಎಕೋಸೊಫಿ, ಎಸ್ತೆಟಿಕ್ಸ್, ಪೀಸ್(ಶಾಂತಿ), ಆರ್ಟ್ಸ್ ಮೀಡಿಯಾ(ಕಲಾಮಾಧ್ಯಮ)- ಗಾಂಧಿಯನ್ ಸೆಂಟರಿನ ಮುಖ್ಯ ಅಧ್ಯಯನ ವಿಷಯಗಳಾಗಿವೆ.” ಎಂದರು. ಡಾ. ಭ್ರಮರಿ ಶಿವಪ್ರಕಾಶ್ ಹಾಗೂ ಕು. ಅಪೂರ್ವ ಕಾರ್ಯಕ್ರಮ ಸಂಯೋಜಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಗೋವಿಂದ ದಾಸ ಕಾಲೇಜಿನಲ್ಲಿ ‘ಪುಸ್ತಕ ಪ್ರೀತಿ ಪರಿಚಯ’ ಸರಣಿಯ 3ನೇ ಕಾರ್ಯಕ್ರಮ
    Next Article ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್ ವತಿಯಿಂದ ‘ಚಿಣ್ಣರ ಡ್ರಾಮಾ ಕ್ಯಾಂಪ್’ | ಏಪ್ರಿಲ್ 15ರಿಂದ ಮೇ 1
    roovari

    Add Comment Cancel Reply


    Related Posts

    ಬೈಲೂರಿನಲ್ಲಿ ಕೃತಿಯ ನರ್ಸಿಂಗ್ ರಾಣ ಇವರಿಂದ ಒಡಿಸ್ಸಿ ನೃತ್ಯ | ಸೆಪ್ಟೆಂಬರ್ 19

    September 16, 2025

    ಮಂಚಿ ಲಯನ್ಸ್ ಕ್ಲಬ್ ನಲ್ಲಿ ನೃತ್ಯಸರಣಿ ಮಾಲಿಕೆ ‘ಕಲಾಧಾರಾ’

    September 16, 2025

    ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ‘ಬಿ.ವಿ. ಕಾರಂತ ನೆನಪು’ | ಸೆಪ್ಟೆಂಬರ್ 18, 19 ಮತ್ತು 20

    September 15, 2025

    ಕಲಾಸೂರ್ಯ ನೃತ್ಯಾಲಯ ಪ್ರಸ್ತುತ ಪಡಿಸುವ ‘ಕಲಾಭವ -02’ | ಸೆಪ್ಟೆಂಬರ್ 13

    September 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.