Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ‘ಸ್ಮರಣೆ ಸ್ವರಾಂಜಲಿ’ | ಜೂನ್ 28

    June 23, 2025

    ಬೆಂಗಳೂರಿನಲ್ಲಿ ರಂಗ ನಟನಾ ಶಿಬಿರ ಮತ್ತು ಸಂಸ್ಕೃತಿ ನೆಲೆಯ ಕಾರ್ಯಾಗಾರ | ಜುಲೈ 1ರಿಂದ 17

    June 23, 2025

    ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 25

    June 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸುಳ್ಯದ ರಂಗಮನೆಯಲ್ಲಿ ‘ನೀನಾಸಂ ನಾಟಕೋತ್ಸವ’
    Drama

    ಸುಳ್ಯದ ರಂಗಮನೆಯಲ್ಲಿ ‘ನೀನಾಸಂ ನಾಟಕೋತ್ಸವ’

    January 8, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸುಳ್ಯ : ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ದಿನಾಂಕ 04 ಜನವರಿ 2025 ಮತ್ತು 05 ಜನವರಿ 2025ರಂದು ನೀನಾಸಂ ನಾಟಕೋತ್ಸವ ನಡೆಯಿತು.

    ಈ ಉತ್ಸವವನ್ನು ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲ ಡಾ. ಎನ್.ಎನ್. ಗೋವಿಂದ ಇವರು ಮಾತನಾಡಿ “ಆಧುನಿಕ ರಂಗಭೂಮಿಯ ಹುಟ್ಟಿಗೆ ಕಾರಣವಾದ ನೀನಾಸಂ ಸಂಸ್ಥೆ ಜಗತ್ತಿನ ಶ್ರೇಷ್ಠ ಕೃತಿಗಳನ್ನು ಕನ್ನಡದಲ್ಲಿ ರಂಗಕ್ಕೆ ತರುವ ಮೂಲಕ ಸದಭಿರುಚಿಯ ಪ್ರೇಕ್ಷಕ ಬಳಗವನ್ನು ಸೃಷ್ಟಿಸಿದೆ” ಎಂದರು.

    ರಂಗಮನೆಯ ಅಧ್ಯಕ್ಷರಾದ ಡಾ. ಜೀವನ್ ರಾಂ ಸುಳ್ಯ ಮಾತನಾಡಿ “ಹೆಗ್ಗೋಡಿನ ನೀನಾಸಂಗೆ ಇದೀಗ 75ನೇ ವರ್ಷದ ಸಂಭ್ರಮ, ನೀನಾಸಂ ತಿರುಗಾಟಕ್ಕೆ 40 ವರ್ಷ. ಸದಭಿರುಚಿಯ ನಾಟಕಗಳನ್ನು ನಿರಂತರ ನೀಡುತ್ತಿರುವ ಈ ತರಹದ ವೃತ್ತಿನಿರತ ಕಲಾವಿದರ ತಂಡ ಮತ್ತೊಂದಿಲ್ಲ” ಎಂದರು.

    ವೇದಿಕೆಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸಾಹಿತಿ ಕುಮಾರಸ್ವಾಮಿ ತೆಕ್ಕುಂಜ, ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶಿವರಾಮ ಶಾಸ್ತ್ರಿ, ರಂಗಮನೆಯ ಸದಸ್ಯರಾದ ಲತಾ ಮಧುಸೂದನ, ರವೀಶ್ ಪಡ್ಡಂಬೈಲು ಉಪಸ್ಥಿತರಿದ್ದರು.

    ಇದೇ ಸಂದರ್ಭದಲ್ಲಿ ನೀನಾಸಮ್ ತಿರುಗಾಟದ ಸಂಚಾಲಕ ರಾಘವೇಂದ್ರ ಪುರಪ್ಪೆಮನೆಯವರನ್ನು ಸನ್ಮಾನಿಲಾಯಿತು. ಈ ವರ್ಷ ನೀನಾಸಂ ತಿರುಗಾಟದ ಶ್ರೇಷ್ಠ ನಾಟಕಗಳೆಂದು ಪ್ರಸಿದ್ದಿ ಪಡೆದ ‘ಮಾಲತೀ ಮಾಧವ’ ಮತ್ತು ‘ಅಂಕದ ಪರದೆ’ ನಾಟಕಗಳು ಪ್ರದರ್ಶನಗೊಂಡವು.

    Share. Facebook Twitter Pinterest LinkedIn Tumblr WhatsApp Email
    Previous Articleಯು. ವೆಂಕಟ್ರಾಜ ರಾವ್, ಅಶೋಕ ಪಕ್ಕಳ, ಅನಿತಾ ತಾಕೋಡೆ ಇವರುಗಳಿಗೆ ‘ವಿಕಾಸ’ ಪುಸ್ತಕ ಬಹುಮಾನ
    Next Article ವಿಶೇಷ ಲೇಖನ | ಭಾಷಾಂತರದ ಮೂಲಕ ಸಾಹಿತ್ಯ ಶ್ರೀಮಂತಗೊಳಿಸಿದ ವಿದ್ವಾಂಸ ಎಲ್. ಗುಂಡಪ್ಪ
    roovari

    Add Comment Cancel Reply


    Related Posts

    ಬೆಂಗಳೂರಿನಲ್ಲಿ ರಂಗ ನಟನಾ ಶಿಬಿರ ಮತ್ತು ಸಂಸ್ಕೃತಿ ನೆಲೆಯ ಕಾರ್ಯಾಗಾರ | ಜುಲೈ 1ರಿಂದ 17

    June 23, 2025

    ಬೆಂಗಳೂರಿನ ನಯನ ಸಭಾಂಗಣದಲ್ಲಿ ‘ಮಾಸದ ನೆನೆಪು’ ಸರಣಿ ಕಾರ್ಯಕ್ರಮದ ಉದ್ಘಾಟನೆ | ಜೂನ್ 27

    June 20, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನ | ಜೂನ್ 22

    June 20, 2025

    ಇಳಕಲ್ ಸ್ನೇಹರಂಗ ಸಾಂಸ್ಕೃತಿಕ ಭವನದಲ್ಲಿ ‘ಮೇಘರತ್ನ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ | ಜೂನ್ 21

    June 19, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.