Subscribe to Updates

    Get the latest creative news from FooBar about art, design and business.

    What's Hot

    ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ‘ಗಾನ ಶಾರದೆಗೆ ನಮನ’ | ಜನವರಿ 26

    January 24, 2026

    ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ‘ಸಂಗೀತೋತ್ಸವ-2026’ | ಜನವರಿ 25

    January 24, 2026

    ಮಂಗಳೂರಿನ ಪುರಭವನದಲ್ಲಿ ವಿದುಷಿ ಶ್ರಾವ್ಯ ಎಂ. ಭಟ್ ರಂಗಪ್ರವೇಶಂ | ಜನವರಿ 24

    January 24, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಭಾಗವತ ಬಲಿಪ ಮತ್ತು ಹಿರಿಯ ವೇಷಧಾರಿ ಕುಲಾಲ್ ಇವರಿಗೆ ಪೂಲ ವಿಠ್ಠಲ ಶೆಟ್ಟಿ ಪ್ರಶಸ್ತಿ
    Awards

    ಭಾಗವತ ಬಲಿಪ ಮತ್ತು ಹಿರಿಯ ವೇಷಧಾರಿ ಕುಲಾಲ್ ಇವರಿಗೆ ಪೂಲ ವಿಠ್ಠಲ ಶೆಟ್ಟಿ ಪ್ರಶಸ್ತಿ

    January 19, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಕಟೀಲು ಮೇಳದ ಪ್ರಧಾನ ಭಾಗವತ ಬಲಿಪ ಶಿವಶಂಕರ ಭಟ್ ಮತ್ತು ಬಹುಮುಖ ಪ್ರತಿಭೆಯ ಹಿರಿಯ ವೇಷಧಾರಿ ನಾರಾಯಣ ಕುಲಾಲ್ ವೇಣೂರು ಇವರಿಗೆ ‘ಪೂಲ ವಿಠ್ಠಲ ಶೆಟ್ಟಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

    ರಾಧಾ ವಿಠ್ಠಲ ಶೆಟ್ಟಿ ಮತ್ತು ಮಕ್ಕಳು ಇವರ ವತಿಯಿಂದ ಎರ್ಮಾಳು ಜನಾರ್ದನ ದೇವಸ್ಥಾನದ ಬಳಿ ದಿನಾಂಕ 18 ಜನವರಿ 2026ರಂದು ನಡೆದ ಕಟೀಲು ಮೇಳದ 28ನೇ ವರ್ಷದ ಯಕ್ಷಗಾನ ಸೇವೆ ಬಯಲಾಟ ವೇದಿಕೆಯಲ್ಲಿ ಕಟೀಲು ಲಕ್ಷ್ಮೀ ನಾರಾಯಣ ಆಸ್ರಣ್ಣರು ಸನ್ಮಾನಿಸಿ ಅಭಿನಂದಿಸಿದರು. ಬಲಿಪ ಪರಂಪರೆ ಹಾಗೂ ಕಟೀಲು ಮೇಳದ ಅನುಬಂಧವನ್ನು ಉಲ್ಲೇಖಿಸಿ ಬಲಿಪ ಭಾಗವತರುಗಳ ಸಾಧನೆಯನ್ನು ಸ್ಮರಿಸಿದರು. ಕಟೀಲು ಮೂಲ ಕುದುರಿನ ಸ್ಥಳ ದಾನಿಗಳಾಗಿ ನಿರಂತರ ಧಾರ್ಮಿಕ ಸೇವೆಗೈಯುವ ಸೇವಾಕರ್ತ, ಉದ್ಯಮಿ ಎರ್ಮಾಳ್ ಸತೀಶ್ ವಿಠ್ಠಲ ಶೆಟ್ಟಿ ಪರಿವಾರದ ಕಲಾಪ್ರೀತಿಯನ್ನು ಶ್ಲಾಘಿಸಿದರು.

    “ಕಂಬಳ ಕ್ಷೇತ್ರದಲ್ಲಿ ಕೋಣಗಳ ಯಜಮಾನರಾಗಿ ಮೂರು ದಶಕಗಳ ಹಿಂದೆ ದಾಖಲೆ ಮಾಡಿದ್ದ ಘಾಟ್ ಕೋಪರ್ ನ ಭಾರತ್ ಕೆಫೆಯ ಸ್ಥಾಪಕ ಪೂಲ ವಿಠ್ಠಲ ಶೆಟ್ಟಿಯವರ ಸ್ಮರಣಾರ್ಥ ಪ್ರತೀ ವರ್ಷ ಯಕ್ಷ ಕಲಾ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಗುತ್ತಿದೆ.” ಎಂದು ಸಂಯೋಜಕ ಐಕಳ ವಿಶ್ವನಾಥ ಶೆಟ್ಟಿ ತಿಳಿಸಿದರು.

    ಕದ್ರಿ ನವನೀತ ಶೆಟ್ಟಿ ಅಭಿನಂದನಾ ನುಡಿ ಗೌರವ ಸಲ್ಲಿಸಿದರು. ಉದ್ಯಮಿ ಎರ್ಮಾಳ್ ನಾರಾಯಣ ಶೆಟ್ಟಿ, ಯಶ್ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು. ವಿಶು ಕುಮಾರ್ ಬ್ರಹ್ಮಾವರ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಬಲಿಪ ನಾರಾಯಣ ಭಾಗವತರು ರಚಿಸಿದ ‘ಮದನ ಸುಂದರಿ-ಸ್ವಯಂ ಪ್ರಭಾ’ ಯಕ್ಷಗಾನ ಬಯಲಾಟ ಜರಗಿತು.

    award baikady felicitation roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಕಲಾರಾಧಕರನ್ನು ಮಂತ್ರಮುಗ್ಧರನ್ನಾಗಿಸಿದ ‘ನೃತ್ಯೋತ್ಕ್ರಮಣ’ ಭರತನಾಟ್ಯ ಕಾರ್ಯಕ್ರಮ
    Next Article ಕೊಡಗು ಜಿಲ್ಲಾ ಕ.ಸಾ.ಪ.ದ ದತ್ತಿನಿಧಿಯ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟ
    roovari

    Add Comment Cancel Reply


    Related Posts

    ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ‘ಗಾನ ಶಾರದೆಗೆ ನಮನ’ | ಜನವರಿ 26

    January 24, 2026

    ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ‘ಸಂಗೀತೋತ್ಸವ-2026’ | ಜನವರಿ 25

    January 24, 2026

    ಮಂಗಳೂರಿನ ಪುರಭವನದಲ್ಲಿ ವಿದುಷಿ ಶ್ರಾವ್ಯ ಎಂ. ಭಟ್ ರಂಗಪ್ರವೇಶಂ | ಜನವರಿ 24

    January 24, 2026

    ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ‘ಸಾಹಿತ್ಯ ವೈಭವ 2026’ | ಜನವರಿ 25

    January 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.