ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇದರ ವತಿಯಿಂದ ಆಯೋಜಿಸಿದ್ದ ‘ನಾಡೋಜ ಡಾ. ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ಪ್ರದಾನ ಸಮಾರಂಭವು ದಿನಾಂಕ 28 ಜೂನ್ 2025ರಂದು ಮುಂಜಾನೆ 10-30 ಗಂಟೆಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಶ್ರೀ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ನಡೆಯಲಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಡಾ. ಸಂಜೀವ ಕುಲಕರ್ಣಿ ಇವರು ವಹಿಸಲಿದ್ದು, ಹೊಸಕೋಟೆಯ ಹಿರಿಯ ವಿಮರ್ಶಕ ಡಾ. ರಹಮತ್ ತುರೀಕೆರೆ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಧಾರವಾಡದ ಸಾಹಿತಿ ಡಾ. ಜಿ.ಎಂ. ಹೆಗಡೆ ಇವರು ಬಹುಮಾನ ಪ್ರದಾನ ಮಾಡಲಿದ್ದು, ಧಾರವಾಡದ ಸಾಹಿತಿ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರು ನಿರ್ಣಾಯಕರ ನುಡಿಗಳನ್ನಾಡಲಿದ್ದಾರೆ.