ಕುಂದಾಪುರ : ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ ಕುಂದಾಪುರ ಆಯೋಜಿಸಿದ ಕರಾವಳಿ ಮಹಿಳಾ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ವಿಜಯಶ್ರೀ ಎಂ. ಹಾಲಾಡಿ ಇವರ ‘ಮುಂಡಪ್ಪ ಮಾವಿನ ಮರ’ ಕಥೆ ಪ್ರಥಮ ಸ್ಥಾನ ಪಡೆದಿದೆ. ಪೂರ್ಣಿಮಾ ಹೆಗಡೆಯವರ ‘ನಾಳೆಗಳನ್ನು ಬಿತ್ತಿದ ನಿನ್ನೆಗಳು’ ಕಥೆ ದ್ವಿತೀಯ, ಶ್ರೀರಂಜನಿ ಅಡಿಗರವರ ‘ಮಂಜುಮಾಮಿಯ ಹೂದೋಟ’ ಕಥೆ ತೃತೀಯ ಸ್ಥಾನ ಪಡೆದಿದೆ.

ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳು : ಶಾಂತಲಾ ರಾವ್ ಇವರ ‘ಮನೆಯೊಳಗೊಂದು ಮನೆ’, ಭಾರತಿ ಮರವಂತೆ ಇವರ ‘ಗಂಗಿ’, ಭವ್ಯ ಹಳೆಯೂರು ಇವರ ‘ಅವಳ ನಿರ್ಧಾರ’, ಯಶಸ್ವಿನಿ ಶ್ರೀಧರ ಮೂರ್ತಿಯವರ ‘ಕಥೆಯ ಹೂವೊಂದು ಅರಳಿ’, ನಿರ್ಮಲಾ ಸುರತ್ಕಲ್ ಇವರ ‘ತನು ಸುಟ್ಟ ಬೂದಿಯಲ್ಲಿ ಪುನಃ ಹುಟ್ಟಿ’ ಮತ್ತು ಆಶಾ ಮಯ್ಯ ಪುತ್ತೂರು ಇವರ ‘ಟ್ರಂಕಿನೊಳಗಣ ಬೆಚ್ಚನೆ ಕನಸು’. ಈ ಕಥಾಸ್ಪರ್ಧೆಯಲ್ಲಿ 125ಕ್ಕೂ ಹೆಚ್ಚು ಕಥೆಗಳು ಬಂದಿದ್ದವು. ದಿನಾಂಕ 08 ಆಗಸ್ಟ್ 2026ರಂದು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ ಗೌರವಾಧ್ಯಕ್ಷರಾದ ಡಾ. ಪಾರ್ವತಿ ಜಿ. ಐತಾಳ್ ತಿಳಿಸಿದ್ದಾರೆ.
