Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಬೆಸೆಂಟ್ ಮಂದಿರದಲ್ಲಿ ‘ಗುರು ಪೂಣಿ೯ಮಾ’

    July 18, 2025

    ಯಕ್ಷದೇಗುಲ ಕಾಂತಾವರದ ‘ಯಕ್ಷೋಲ್ಲಾಸ’ | ಜುಲೈ 20

    July 18, 2025

    ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಸಮಾರೋಪಗೊಂಡ ಯಕ್ಷಗಾನ ತರಬೇತಿ

    July 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪರ್ಕಳದ ಸರಿಗಮ ಭಾರತಿಯಲ್ಲಿ ವಿಜಯದಶಮಿ ಸಂಗೀತೋತ್ಸವ : ರಜತ ಸಂಭ್ರಮ -2024
    Bharathanatya

    ಪರ್ಕಳದ ಸರಿಗಮ ಭಾರತಿಯಲ್ಲಿ ವಿಜಯದಶಮಿ ಸಂಗೀತೋತ್ಸವ : ರಜತ ಸಂಭ್ರಮ -2024

    October 14, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ದಿನಾಂಕ 12 ಅಕ್ಟೋಬರ್ 2024ರಂದು ವಿಜಯದಶಮಿ ಸಂಗೀತೋತ್ಸವ, ಸಂಸ್ಥೆಯ ರಜತ ಸಂಭ್ರಮ ಸಮಾರಂಭ ಜರಗಿತು.

    ಬೆಳಗ್ಗೆ 8-00 ಗಂಟೆಗೆ ಮಣಿಪಾಲದ ಹಿಂದುಸ್ತಾನಿ ಗಾಯಕ ಪಂಡಿತ್‌ ರವಿಕಿರಣ್‌ ಅವರು ‘ಶ್ರೀ ದುರ್ಗಾ ಮಾತೆ’ಯ ಪ್ರಾರ್ಥನೆಯನ್ನು ಪ್ರಸ್ತುತ ಪಡಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪಿಳ್ಳಾರಿ ಗೀತೆಗಳನ್ನು ಹಾಡಿದರು ಹಾಗೂ ಅಭಿನವ್‌ ಭಟ್‌ ಹಾಗೂ ತನ್ವಿ ಶಾಸ್ತ್ರಿ ಇವರಿಂದ ಹಾಡುಗಾರಿಕೆ ನಡೆಯಿತು.

    ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಇವರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಉಡುಪಿಯ ಹಿರಿಯ ಸಾಹಿತಿ ಪ್ರೊ. ಮುರಲೀಧರ ಉಪಾಧ್ಯ ಹಾಗೂ ಪರ್ಕಳದ ಮಂಜುನಾಥ ಉಪಾಧ್ಯ ಭಾಗವಹಿಸಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಕಲಾವಿದೆ ಶ್ರೀಮತಿ ಸುರೇಖಾ ಭಟ್‌ ಪಟ್ಲ ಇವರನ್ನು ಅಭಿನಂದಿಸಿ ಸರಿಗಮ ಭಾರತಿ ಪರವಾಗಿ ಗೌರವಿಸಲಾಯಿತು. ಸಂಸ್ಥೆಯ ನಿರ್ದೇಶಕ ಡಾ. ಉದಯಶಂಕರ ಭಟ್‌ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ನಿರ್ದೇಶಕಿ, ಸಂಗೀತ ಗುರು ಉಮಾಶಂಕರಿ ವಂದಿಸಿ, ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.

    ಉಡುಪಿಯ ಹೇಮಲತಾ ರಾವ್‌ ಇವರ ಸಂಗೀತ ಕಛೇರಿಗೆ ವಯೋಲಿನ್‌ ಪ್ರಮಥ್‌ ಭಾಗವತ್‌, ಮೃದಂಗದಲ್ಲಿ ಶಾಶ್ವತ್‌ ಕೆ. ಭಟ್‌ ಸಹಕರಿಸಿದರು. ಸ್ವಸ್ತಿ ಎಂ. ಭಟ್‌ , ಅನುಶ್ರೀ, ರೋಶ್ನಿ ಎನ್‌. ಶೆಟ್ಟಿ, ಕಶಿಕ ಕೆ. ಶೆಟ್ಟಿ, ಕ್ಷಿತಿಜ್‌ ಕೆ. ಶರ್ಮ, ತೀಕ್ಷಣ್‌ ಎಸ್‌. ಶೆಟ್ಟಿ, ಮನ್ವಿ ಹಾಗೂ ಸಾನ್ವಿಕ ಇವರು ಸಂಗೀತ ಕೃತಿಗಳ ಪ್ರಸ್ತುತ ಪಡಿಸಿದರು. ವಯೊಲಿನ್‌ನಲ್ಲಿ ಪ್ರಮಥ್‌ ಭಾಗವತ್‌, ಅನುಶ್ರೀ ಮಳಿ, ಮೃದಂಗದಲ್ಲಿ ಶ್ರೀವರ್ಚಸ್‌, ಶಾಶ್ವತ್‌ ಕೆ. ಭಟ್‌ ಸಹಕರಿಸಿದರು.

    ಬೆಂಗಳೂರಿನ ಉಷಾ ರಾಮಕೃಷ್ಣ ಭಟ್‌ ಇವರ ಹಾಡುಗಾರಿಕೆಗೆ ವಯೋಲಿನ್‌ನಲ್ಲಿ ಕೇಶವ ಮೋಹನ್‌ ಕುಮಾರ್‌ ಮತ್ತು ಮೃದಂಗದಲ್ಲಿ ಸುನಾದಕೃಷ್ಣ ಅಮೈ ಸಹಕರಿಸಿದರು. ಬಳಿಕ ಕಲಾವಿದರಿಂದ ‘ಶ್ರೀ ತ್ಯಾಗರಾಜರ ಪಂಚರತ್ನ ಗೋಷ್ಠಿ ಗಾಯನ’ ಹಾಗೂ ‘ನವಾವರಣ ಕೃತಿ’ಗಳ ಪ್ರಸ್ತುತಿ ನಡೆಯಿತು. ಮಣಿಪಾಲದ ದಿವ್ಯಶ್ರೀ ಭಟ್‌ ಇವರ ಹಾಡುಗಾರಿಕೆಗೆ ವಯೋಲಿನ್‌ನಲ್ಲಿ ಮೈಸೂರಿನ ಪೃಥ್ವಿ ಭಾಸ್ಕರ್‌, ಮೃದಂಗದಲ್ಲಿ ನಿಕ್ಷಿತ್‌ ಟಿ. ಪುತ್ತೂರು ಸಹಕರಿಸಿದರು. ಅನಂತರ ಉಡುಪಿಯ ಮಾನಸಾ ಹಾಗೂ ಮಂಗಳೂರಿನ ‘ನೃತ್ಯಾಂಗನ್‌’ ಇದರ ನಿರ್ದೇಶಕಿ ವಿದುಷಿ ರಾಧಿಕಾ ಶೆಟ್ಟಿಯವರಿಂದ ಭರತನಾಟ್ಯ ಕಾರ್ಯಕ್ರಮ ಸೇರಿದ್ದವರ ಮನಸೂರೆಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದವರಿಂದ ಯಕ್ಷಗಾನ ತಾಳಮದ್ದಳೆ
    Next Article ಪುಸ್ತಕ ವಿಮರ್ಶೆ | ಡಾ. ಚನ್ನಪ್ಪ ಕಟ್ಟಿಯವರ ಸಮಗ್ರ ಕಥೆಗಳ ಸಂಕಲನ ‘ಕಥಾ ಕಿನ್ನುರಿ’
    roovari

    Add Comment Cancel Reply


    Related Posts

    ಗುತ್ತಿಗಾರಿನಲ್ಲಿ ಸುಳ್ಯ ತಾಲೂಕು ಘಟಕದ ಕ.ಸಾ.ಪ. ವತಿಯಿಂದ ಸರಣಿ ಕಾರ್ಯಕ್ರಮ

    July 18, 2025

    ಬೆಂಗಳೂರಿನಲ್ಲಿ ಸಾಧನ ಸಂಗಮದ ವಿಶಿಷ್ಟ ‘ನೃತ್ಯ ಸಮಾಗಮ’ 2025 | ಜುಲೈ 20

    July 18, 2025

    ಕೋಲಾರ ಪತ್ರಕರ್ತರ ಭವನದಲ್ಲಿ ‘ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ-2025’ | ಜುಲೈ 19

    July 17, 2025

    ಬೆಂಗಳೂರಿನಲ್ಲಿ ರಾಷ್ಟ್ರೀಯ ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ | ಜುಲೈ 20

    July 17, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.