Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಖ್ಯಾತ ಇತಿಹಾಸಕಾರರಾದ ರಜನಿ ಪ್ರಸನ್ನರಿಂದ ‘ಟ್ರಾನ್ಸ್ ಪೋಸಿಂಗ್ ಎಕ್ಸ್ ಪೀರಿಯೆನ್ಸ್’ ಕಲಾ ಪ್ರದರ್ಶನ ಉದ್ಘಾಟನೆ
    Drawing

    ಖ್ಯಾತ ಇತಿಹಾಸಕಾರರಾದ ರಜನಿ ಪ್ರಸನ್ನರಿಂದ ‘ಟ್ರಾನ್ಸ್ ಪೋಸಿಂಗ್ ಎಕ್ಸ್ ಪೀರಿಯೆನ್ಸ್’ ಕಲಾ ಪ್ರದರ್ಶನ ಉದ್ಘಾಟನೆ

    February 12, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಮಂಗಳೂರಿನ ಬಲ್ಲಾಲ್‌ಬಾಗ್ ಇಲ್ಲಿರುವ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರ, ಆರ್ಟ್ ಕೆನರಾ ಟ್ರಸ್ಟ್ ವತಿಯಿಂದ ಕರಾವಳಿಯ 17 ಪ್ರತಿಭಾವಂತ ಕಲಾವಿದರ ಸಂಗ್ರಹವನ್ನು ಒಳಗೊಂಡಿರುವ ‘ಟ್ರಾನ್ಸ್ ಪೋಸಿಂಗ್ ಎಕ್ಸ್ ಪೀರಿಯೆನ್ಸ್’ (ಪರಿವರ್ತನೆ ಅನುಭವಗಳು) ಎಂಬ ಪ್ರದರ್ಶನವು ದಿನಾಂಕ 03-02-2024 ಮತ್ತು 04-02-2024ರಂದು ನಡೆಯಿತು. ಈ ಕಲಾ ಪ್ರದರ್ಶನವನ್ನು ಖ್ಯಾತ ಕಲಾ ಇತಿಹಾಸಕಾರರಾದ ರಜನಿ ಪ್ರಸನ್ನ ಅವರು ದಿನಾಂಕ 03-02-2024ರ ಶನಿವಾರದಂದು ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ (BIC) ನಲ್ಲಿ ಉದ್ಘಾಟಿಸಿದರು.

    ಈ ಕಾರ್ಯಕ್ರಮವು ಭಾಷಾ ರೋಗ ತಜ್ಞ ಡಾ. ಪ್ರತಿಭಾ ಕಾರಂತ್, ಸಂರಕ್ಷಣಾ ಪ್ರಾಣಿಶಾಸ್ತ್ರಜ್ಞ ಡಾ. ಉಲ್ಲಾಸ್ ಕಾರಂತ್ ಮತ್ತು ಶ್ರೀ ಪ್ರಸನ್ನ ಸೇರಿದಂತೆ ಇತರ ಗಣ್ಯ ಅತಿಥಿಗಳ ಉಪಸ್ಥಿತಿಗೆ ಸಾಕ್ಷಿಯಾಯಿತು. ಆರ್ಟ್ ಕೆನರಾ ಟ್ರಸ್ಟ್ ಆಯೋಜಿಸಿರುವ ಈ ಪ್ರದರ್ಶನವು ಕರಾವಳಿ ಕರ್ನಾಟಕದ ಬೇರುಗಳನ್ನು ಹೊಂದಿರುವ 17 ಕಲಾವಿದರು ರಚಿಸಿದ ವರ್ಣ ಚಿತ್ರಗಳು, ಶಿಲ್ಪಗಳು, ಛಾಯಾಚಿತ್ರಗಳು ಮತ್ತು ಇನ್ ಸ್ವಾಲೇಶನ್ ಆರ್ಟ್ ಗಳ ವೈವಿಧ್ಯಮಯ ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ.

     

    ಶ್ರೀಮತಿ ರಜನಿ ಪ್ರಸನ್ನ ಅವರು ತಮ್ಮ ಆರಂಭಿಕ ಭಾಷಣದಲ್ಲಿ ಕರಾವಳಿಯ ಕಲಾವಿದರನ್ನು ಪೋಷಿಸುವ ಮಹತ್ವವನ್ನು ಒತ್ತಿ ಹೇಳಿದರು. “ಕರಾವಳಿ ಕರ್ನಾಟಕದ ಯುವ ಸಮಕಾಲೀನ ಕಲಾವಿದರ ಪ್ರತಿಭೆಯನ್ನು ಗುರುತಿಸಬೇಕು ಮತ್ತು ಅನನ್ಯ ಕಲಾಕೃತಿಗಳನ್ನು ರಚಿಸುವುದನ್ನು ಮುಂದುವರಿಸಲು ಮತ್ತು ಪ್ರೋತ್ಸಾಹಿಸಲು ಅವರನ್ನು ಜನಪ್ರಿಯ ಸಾಂಸ್ಕೃತಿಕ ನಕ್ಷೆಯಲ್ಲಿ ತರಬೇಕು” ಎಂದು ಅವರು ಹೇಳಿದರು. ಕರಾವಳಿ ಕರ್ನಾಟಕದ ಖ್ಯಾತ ಕಲಾವಿದರಾದ ಕೆ.ಕೆ. ಹೆಬ್ಬಾರ್ ಮತ್ತು ಶಿವರಾಮ ಕಾರಂತರ ಕೊಡುಗೆಯನ್ನು ಅತಿಥಿಗಳು ಗೌರವಿಸಿದರು. ಆರ್ಟ್ ಕೆನರಾ ಟ್ರಸ್ಟಿನ ಸುಭಾಸಚಂದ್ರ ಬಸು ಕಾರ್ಯಕ್ರಮ ನಿರೂಪಿಸಿದರು.

    ಕಲಾವಿದರಾದ ಹರೀಶ್ ಕೊಡಿಯಾಲ್ಬೈಲ್, ಜನಾರ್ದನ್ ಹಾವಂಜೆ, ಜಯವಂತ ಶೆಟ್ಟಿಗಾರ್, ಜೀವನ್ ಸಾಲಿಯಾನ್, ನೇಮಿರಾಜ್ ಶೆಟ್ಟಿ, ಪೆರ್ಮುದೆ ಮೋಹನ್ ಕುಮಾರ್, ಪ್ರವೀಣ್ ಪುಂಚಿತ್ತಾಯ, ರಾಜೇಂದ್ರ ಕೇದಿಗೆ, ರಾಮಕೃಷ್ಣ ನಾಯಕ್, ರೇಷ್ಮಾ ಎಸ್.ಶೆಟ್ಟಿ, ಸಂತೋಷ್ ಅಂದ್ರಾದೆ, ಸಂತೋಷ್ ಪೈ, ಶಿಲ್ಪಾ ಭಟ್, ಉಮೇಶ್ ವಿ.ಎಂ., ವೆಂಕಿ ಪಲಿಮಾರ್, ವಿಶ್ವಾಸ್ ಎಂ. ಮತ್ತು ವಿಲ್ಸನ್ ಡಿ’ಸೋಜಾ ಭಾಗವಹಿಸಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ನಾದಬ್ರಹ್ಮ ಶಾರದ ಮಂದಿರದಲ್ಲಿ ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ ಹಾಗೂ ಮೋಹನ ತರಂಗಿಣಿ ಸಂಗೀತ ಸಭಾದ ಸರಣಿ ಕಾರ್ಯಕ್ರಮ | ಫೆಬ್ರವರಿ 11 
    Next Article ರಮೇಶ್ ಶೆಟ್ಟಿ ಬಾಯಾರಿಗೆ ಕೇರಳ ‘ಪೋಕ್ಲೋರ್ ಅಕಾಡಮಿ ಪ್ರಶಸ್ತಿ’
    roovari

    Add Comment Cancel Reply


    Related Posts

    ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ‘ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025’ | ಜೂನ್ 01

    May 28, 2025

    ಪೆರ್ವಾಜೆ ಶಾಲೆಯಲ್ಲಿ ನಾಟಕ ಮತ್ತು ಕವನ ಸಂಕಲನ ಕೃತಿ ಬಿಡುಗಡೆ ಕಾರ್ಯಕ್ರಮ

    May 27, 2025

    ಬೆಂಗಳೂರಿನಲ್ಲಿ ಕ್ಲೇ ಮಾಡೆಲಿಂಗ್ ಪ್ರದರ್ಶನ | ಮೇ 24

    May 21, 2025

    ಉಡುಪಿಯ ಬ್ರಾಹ್ಮಿ ಸಭಾಭವನದಲ್ಲಿ ಜಾನಪದ ನೃತ್ಯ ಸ್ಪರ್ಧೆ ‘ನೃತ್ಯ ಸಂಭ್ರಮ-2025’ | ಮೇ 18

    May 17, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.