Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ‘ಅದಮ್ಯ ರಂಗೋತ್ಸವ’ | ಮಾರ್ಚ್ 24, 25 ಮತ್ತು 26

    March 21, 2026

    ಉಡುಪಿಯ ವಿಶೇಷ ಉಪನ್ಯಾಸ ಹಾಗೂ ಗೋವಿಂದ ಪೈಗಳ ಕಾವ್ಯ ಪ್ರಸ್ತುತಿ

    March 21, 2026

    ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನ

    March 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮಂಗಳೂರಿನಲ್ಲಿ ‘ವಸಂತ ಸಂಗೀತೋತ್ಸವ’ ಕಾರ್ಯಕ್ರಮ
    Music

    ಮಂಗಳೂರಿನಲ್ಲಿ ‘ವಸಂತ ಸಂಗೀತೋತ್ಸವ’ ಕಾರ್ಯಕ್ರಮ

    March 21, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ದಿ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವತಿಯಿಂದ ಶ್ರೀ ನಾರಾಯಣಿ ಸಂಗೀತ ಕಲಾ ಕೇಂದ್ರ ಇವರ ಸಹಯೋಗದಲ್ಲಿ ‘ವಸಂತ ಸಂಗೀತೋತ್ಸವ’ ಕಾರ್ಯಕ್ರಮವನ್ನು ದಿನಾಂಕ 15 ಮಾರ್ಚ್ 2026ರಂದು ಮಂಗಳೂರಿನ ಸುಜೀರ್ ಸಿ.ವಿ. ನಾಯಕ್ ಸಭಾಂಗಣದಲ್ಲಿ ಆಯೋಜಿಸಿತ್ತು.

    ಕಾರ್ಯಕ್ರಮದಲ್ಲಿ ವಿದುಷಿ ನಂದಿತಾ ಪೈ, ವಿಭಾ ನಾಯಕ್, ಶಾಂತೇರಿ ಕಾಮತ್ ಮತ್ತು ವಿದುಷಿ ಮೇಘಾ ಪೈ ಸೇರಿದಂತೆ ಪ್ರತಿಭಾನ್ವಿತ ಯುವ ಕಲಾವಿದರು ಸುಮಾರು ನಾಲ್ಕು ಗಂಟೆಗಳ ಕಾಲ ಸುಮಧುರ ಹಿಂದೂಸ್ತಾನಿ ಗಾಯನ ಸಂಗೀತ ಪ್ರದರ್ಶನ ನೀಡಿದರು. ಸಾಂಪ್ರದಾಯಿಕ ಶಾಸ್ತ್ರೀಯ ರಾಗಗಳಿಗೆ ಹೊಂದಿಸಲಾದ ವಿಶೇಷ ಕೊಂಕಣಿ ಸಂಯೋಜನೆಗಳ ಪ್ರಸ್ತುತಿ ಮಾಡಿದರು. ಯುವ ಬಾನ್ಸುರಿ ವಾದಕ ಪಿ. ಕಾರ್ತಿಕ್ ಭಟ್ ಇವರಿಂದ ಬಾನ್ಸುರಿ ವಾದನ ಜರಗಿತು. ಶ್ರೀವತ್ಸ ಭಟ್, ರಾಜೇಶ್ ಭಾಗವತ್ ತಬಲಾದಲ್ಲಿ ಮೇಧಾ ಭಟ್, ಹೇಮಂತ್ ಭಾಗವತ್ ಹಾರ್ಮೋನಿಯಂನಲ್ಲಿ ಸಾಥ್ ನೀಡಿದರು. ಜಿ.ಎಸ್‌.ಬಿ. ಸೇವಾ ಸಂಘದ ಅಧ್ಯಕ್ಷ ಡಾ. ಕಸ್ತೂರಿ ಮೋಹನ್ ಪೈಯವರು ಅತಿಥಿ ಕಲಾವಿದರಾಗಿ ಪ್ರದರ್ಶನ ನೀಡಿದರು.

    ಸೇವಾ ಸಂಘದ ಅಧ್ಯಕ್ಷ ಡಾ. ಕಸ್ತೂರಿ ಮೋಹನ್ ಪೈ, ಕಾರ್ಯದರ್ಶಿ ಡಾ. ರಮೇಶ್ ಪೈ ಎ., ಖಜಾಂಚಿ ಕುಂಬಳೆ ನರಸಿಂಹ ಪ್ರಭು, ಶ್ರೀ ನಾರಾಯಣಿ ಸಂಗೀತ ಕಲಾ ಕೇಂದ್ರದ ಸಂಸ್ಥಾಪಕಿ ವಿದುಷಿ ನಂದಿತಾ ಪೈ, ಯಜ್ಞವಂತ ಪೈ, ಐಡಿಯಲ್ ಐಸ್‌ಕ್ರೀಂನ ಜಯಾ ಕಾಮತ್, ಎನ್.ಕೆ.ಜಿ.ಎಸ್.ಬಿ. ಕೋ-ಆಪರೇಟಿವ್ ಬ್ಯಾಂಕ್‌ನ ಕಿರಣ್ ಕುಮಾರನಾಯಕ, ಯೂನಿಯನ್ ಬ್ಯಾಂಕ್‌ನ ಪೂರ್ಣಚಂದ್ರ ನಾಯ್ಡ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಚಿತ್ರಾ ಎಸ್. ಶೆಣೈ, ಮಂಗಳಾ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಡಾ. ರಮೇಶ ಪೈ ವಂದಿಸಿದರು. ಎಂ.ಆರ್. ಕಾಮತ್, ಗೋವಿಂದರಾಯ ಪ್ರಭು ಅವರು ಕಲಾವಿದರ ಪರಿಚಯ ನೀಡಿದರು. ಡಾ. ಕಸ್ತೂರಿ ಮೋಹನ ಪೈ, ಬಿ.ಆರ್. ಶೆಣೈ, ಜಿ. ಮಾಧವರಾಯ ಪ್ರಭು, ಅರವಿಂದ ಆಚಾರ್ಯ, ವಿಜಯಚಂದ್ರ ಕಾಮತ್, ಮೋಹನದಾಸ ಪೈ, ಪ್ರತಿಮಾ ಪ್ರಭು ಕಲಾವಿದರನ್ನು ಸನ್ಮಾನಿಸಿದರು.

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Article‘ಯಕ್ಷಗಾನದ ಭೀಷ್ಮ’ ಸೂರಿಕುಮೇರು ಗೋವಿಂದ ಭಟ್ ನಿಧನ
    Next Article ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನ
    roovari

    Add Comment Cancel Reply


    Related Posts

    ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ‘ಅದಮ್ಯ ರಂಗೋತ್ಸವ’ | ಮಾರ್ಚ್ 24, 25 ಮತ್ತು 26

    March 21, 2026

    ಉಡುಪಿಯ ವಿಶೇಷ ಉಪನ್ಯಾಸ ಹಾಗೂ ಗೋವಿಂದ ಪೈಗಳ ಕಾವ್ಯ ಪ್ರಸ್ತುತಿ

    March 21, 2026

    ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನ

    March 21, 2026

    ‘ಯಕ್ಷಗಾನದ ಭೀಷ್ಮ’ ಸೂರಿಕುಮೇರು ಗೋವಿಂದ ಭಟ್ ನಿಧನ

    March 21, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.