Subscribe to Updates

    Get the latest creative news from FooBar about art, design and business.

    What's Hot

    ಕಲಾ ವೈಭವದೊಂದಿಗೆ ‘ನಾಟ್ಯಂ ಅವಧಾರಯೇ–ನಟರಾಜ ಪೂಜನ’

    August 5, 2026

    ನೃತ್ಯ ವಿಮರ್ಶೆ | ಕರಾವಳಿ ಕಲಾ ವಲಯದಲ್ಲೊಂದು ಆಪ್ತ ಕಲಾನುಭವ, ‘ಕಲಾಭವ’

    August 5, 2026

    ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ವೆಬ್ ಸೈಟ್ ನಲ್ಲಿ ಭರ್ಜರಿ ಆಫರ್

    August 5, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮೈಸೂರಿನ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಸ್ಮರಣೀಯ ಸಾಹಿತ್ಯಿಕ ಸಮಾರಂಭ
    Book Release

    ಮೈಸೂರಿನ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಸ್ಮರಣೀಯ ಸಾಹಿತ್ಯಿಕ ಸಮಾರಂಭ

    August 5, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ನಿರಂತರ ಫೌಂಡೇಶನ್ (ರಿ.) ಮೈಸೂರು ಹಾಗೂ ತಮಟೆ ಪುಸ್ತಕ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕವಯತ್ರಿ ಸಂಘಮಿತ್ರೆ ನಾಗರಘಟ್ಟ ಇವರ ಕವನ ಸಂಕಲನ ‘ಎಲ್ಲಾದರು ಹದವಿದ್ದರೆ’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 02 ಆಗಸ್ಟ್ 2026ರಂದು ಮೈಸೂರಿನ ರಂಗಾಯಣದ ಶ್ರೀರಂಗ ಸಭಾಂಗಣದಲ್ಲಿ ಸಾಹಿತ್ಯದ ಸೊಗಡಿನ ನಡುವೆ ಅರ್ಥಪೂರ್ಣವಾಗಿ ನೆರವೇರಿತು.

    ಖ್ಯಾತ ಬರಹಗಾರ್ತಿ ರೂಪ ಹಾಸನ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ, “ಕವಿಗೆ ಮುಗ್ಧತೆ, ನಿರ್ದಿಷ್ಟತೆ ಮತ್ತು ಸಂವೇದನಾಶೀಲತೆ ಎಂಬ ಗುಣಗಳು ಸದಾ ಜೊತೆಯಾಗಿರಬೇಕು. ಈ ಎಲ್ಲ ಅಂಶಗಳನ್ನು ಒಳಗೊಂಡಿರುವ ‘ಎಲ್ಲಾದರು ಹದವಿದ್ದರೆ’ ಕೃತಿ ಕನ್ನಡ ಕಾವ್ಯಲೋಕಕ್ಕೆ ಮೌಲಿಕ ಕೊಡುಗೆಯಾಗಿದೆ. ಬದುಕಿನ ಸೂಕ್ಷ್ಮ ಅನುಭವಗಳನ್ನು ಕಾವ್ಯದ ಮೂಲಕ ಮನಮುಟ್ಟುವಂತೆ ಅಭಿವ್ಯಕ್ತಿಸುವ ಶಕ್ತಿ ಈ ಸಂಕಲನಕ್ಕಿದೆ” ಎಂದು ಅಭಿಪ್ರಾಯಪಟ್ಟರು.

    ಕೃತಿಯನ್ನು ಪರಿಚಯಿಸಿ ಮಾತನಾಡಿದ ಡಾ. ಎಚ್. ಉಮಾಶಂಕರ್, “ಆಧುನಿಕ ದಲಿತ ಕಾವ್ಯದ ಆಶಯಗಳನ್ನು ಒಳಗೊಂಡಿರುವ ಈ ಸಂಕಲನದಲ್ಲಿ ಕವಯತ್ರಿ ಸಮಸಮಾಜದ ಕನಸನ್ನು ಹೊಸ ರೂಪಕಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಪ್ರಬುದ್ಧತೆ, ಪಕ್ವತೆ ಮತ್ತು ಮಾನವೀಯ ಮೌಲ್ಯಗಳಿಂದ ಕೂಡಿದ ಪ್ರೀತಿಯ ಹೊಸ ಆಯಾಮಗಳನ್ನು ತಮ್ಮ ಕಾವ್ಯದ ಮೂಲಕ ಅನಾವರಣಗೊಳಿಸಿದ್ದಾರೆ. ಸಮಕಾಲೀನ ಬದುಕಿನ ತಲ್ಲಣ, ಸಾಮಾಜಿಕ ಅಸಮಾನತೆ ಮತ್ತು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಈ ಕೃತಿ ಪರಿಣಾಮಕಾರಿಯಾಗಿ ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ನಿರಂತರ ಫೌಂಡೇಶನ್‌ನ ಕಾರ್ಯದರ್ಶಿ ಪ್ರಸಾದ್ ಕುಂದೂರು, ನಿರ್ದೇಶಕ ಶ್ರೀನಿವಾಸ್ ಪಾಲಹಳ್ಳಿ, ಸುಗುಣ, ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು, ತಮಟೆ ಪ್ರಕಾಶನದ ಹುಲಿಕುಂಟೆ ಮೂರ್ತಿ, ಕವಯತ್ರಿ ಸಂಘಮಿತ್ರೆ ನಾಗರಘಟ್ಟ, ಮಂಜುಳ ಕಿರುಗಾವಲು, ಧನಂಜಯ ಎಲಿಯೂರು, ಪತ್ರಕರ್ತ ಸ್ವಾಮಿ ಆನಂದ್, ಗಾಯಕ ದೇವಾನಂದ್ ವರಪ್ರಸಾದ್, ಕವಿ ಆಲೂರು ದೊಡ್ಡನಿಂಗಪ್ಪ, ವಿಕಾಸ್ ಮೌರ್ಯ, ಶೈಲಜ ನಾಗರಘಟ್ಟ, ರಾಜೇಶ್ ಹೆಬ್ಬಾರ್, ಅಭಿರುಚಿ ಗಣೇಶ್, ಪಲ್ಲವಿ ಟಿ.ಎಸ್., ಪ್ರೊ. ಕಾಳೇಗೌಡ ನಾಗವಾರ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳು, ಕವಿಗಳು, ಕಲಾವಿದರು, ಸಾಹಿತ್ಯಾಸಕ್ತರು ಹಾಗೂ ಪುಸ್ತಕ ಪ್ರೇಮಿಗಳು ಉಪಸ್ಥಿತರಿದ್ದರು. ಕಾವ್ಯ, ಚಿಂತನೆ ಮತ್ತು ಸಾಹಿತ್ಯ ಸಂವಾದಗಳ ಸಂಗಮವಾಗಿ ಮೂಡಿಬಂದ ಈ ಕಾರ್ಯಕ್ರಮವು ಸಾಹಿತ್ಯಾಸಕ್ತರಿಗೆ ಚಿಂತನಾತ್ಮಕ ಅನುಭವವನ್ನು ನೀಡುವುದರೊಂದಿಗೆ, ಸಮಕಾಲೀನ ಕನ್ನಡ ಕಾವ್ಯಕ್ಕೆ ಹೊಸ ಧ್ವನಿಯೊಂದನ್ನು ಆತ್ಮೀಯವಾಗಿ ಪರಿಚಯಿಸಿದ ಸ್ಮರಣೀಯ ಸಾಹಿತ್ಯಿಕ ಸಮಾರಂಭವಾಗಿ ಗಮನ ಸೆಳೆಯಿತು.

    baikady Book release Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಗಾನ ಗುರು ಕೃಷ್ಣಸ್ವಾಮಿ ಜೋಯಿಸ್ ನಿಧನ
    Next Article ಪುರಾಣಲೋಕ – ನೀರಾಜನ ಅವಳಿ ಕಾರ್ಯಕ್ರಮಗಳ ಲೋಕಾರ್ಪಣೆ
    roovari

    Add Comment Cancel Reply


    Related Posts

    ಕಲಾ ವೈಭವದೊಂದಿಗೆ ‘ನಾಟ್ಯಂ ಅವಧಾರಯೇ–ನಟರಾಜ ಪೂಜನ’

    August 5, 2026

    ನೃತ್ಯ ವಿಮರ್ಶೆ | ಕರಾವಳಿ ಕಲಾ ವಲಯದಲ್ಲೊಂದು ಆಪ್ತ ಕಲಾನುಭವ, ‘ಕಲಾಭವ’

    August 5, 2026

    ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ವೆಬ್ ಸೈಟ್ ನಲ್ಲಿ ಭರ್ಜರಿ ಆಫರ್

    August 5, 2026

    ಕುಂಭಾಶಿಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ತಾಳಮದ್ದಳೆ

    August 5, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.