Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ‘ಅದಮ್ಯ ರಂಗೋತ್ಸವ’ | ಮಾರ್ಚ್ 24, 25 ಮತ್ತು 26

    March 21, 2026

    ಉಡುಪಿಯ ವಿಶೇಷ ಉಪನ್ಯಾಸ ಹಾಗೂ ಗೋವಿಂದ ಪೈಗಳ ಕಾವ್ಯ ಪ್ರಸ್ತುತಿ

    March 21, 2026

    ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನ

    March 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸಂಗೀತವು ಮನಸ್ಸಿನ ಕಲ್ಮಶವನ್ನು ದೂರ ಮಾಡುತ್ತದೆ – ಉದ್ಯಮಿ ಮುರಳೀಧರ್ ಭಟ್
    Felicitation

    ಸಂಗೀತವು ಮನಸ್ಸಿನ ಕಲ್ಮಶವನ್ನು ದೂರ ಮಾಡುತ್ತದೆ – ಉದ್ಯಮಿ ಮುರಳೀಧರ್ ಭಟ್

    March 18, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ‘ಒಳ್ಳೆಯ ಸಂಗೀತವನ್ನು ಕೇಳುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಅದರಿಂದ ಮನಸ್ಸಿನ ಕಲ್ಮಶವು ದೂರವಾಗುತ್ತದೆ ಎಂದು ಖ್ಯಾತ ಉದ್ಯಮಿ ಕೆ. ಮುರಳೀಧರ್ ಭಟ್ ಅವರು ಹೇಳಿದರು.

    ಅವರು ಕಾಸರಗೋಡಿನ ಸಾಂಸ್ಕೃತಿಕ ಸಾಹಿತ್ಯಿಕ ಸಂಸ್ಥೆಯಾದ ರಂಗಚಿನ್ನಾರಿ ನೇತೃತ್ವದ ಸ್ವರಚಿನ್ನಾರಿ ಸಂಗೀತ ಘಟಕ ಏರ್ಪಡಿಸಿದ ‘ಅಂತರಧ್ವನಿ – 14’ರ ಕಾರ್ಯಕ್ರಮವನ್ನು ಪದ್ಮಗಿರಿ ಕಲಾ ಕುಟೀರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

    ಹಾಡಿನ ಸ್ಥಿರತೆ ಮತ್ತು ಸೌಂದರ್ಯವನ್ನು ಕಾಪಾಡುವ ಶಬ್ದದ ಮೂಲ ತಳಹದಿಯೇ ಶ್ರುತಿ – ಅದನ್ನು ಗಟ್ಟಿಯಾಗಿ ಅಭ್ಯಾಸ ಮಾಡಿಕೊಂಡರೆ ಕಲಾವಿದ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಾನೆ ಎಂದರು.

    ಮುಖ್ಯ ಅತಿಥಿಯಾಗಿ ಭಾಗವಹಿಸಿದ ನ್ಯಾಯವಾದಿ ಕಲಾವಿದೆ ಅಕ್ಷತಾ ಎಂ.ಎ. ಮಾತನಾಡಿ ಕಳೆದ ಎರಡು ದಶಕಗಳಿಂದ ಕಾಸರಗೋಡಿನಲ್ಲಿ ನಾಡು – ನುಡಿ – ಸಂಸ್ಕೃತಿಗಾಗಿ ತೊಡಗಿಸಿಕೊಂಡಿರುವ ರಂಗಚಿನ್ನಾರಿ ಸಂಸ್ಥೆಯ ಯುವ ಕಲಾವಿದರಿಗೆ ಮಹಿಳೆಯರಿಗೆ, ಗಾಯಕರಿಗೆ ವೇದಿಕೆಯನ್ನು ನಿರ್ಮಿಸಿಕೊಟ್ಟದ್ದನ್ನು ಶ್ಲಾಘಿಸಿ ಮತ್ತಷ್ಟು ಹೊಸ ಪ್ರತಿಭೆಗಳು ಬೆಳಕಿಗೆ ಬರಲು ಶ್ರಮಿಸಬೇಕು ಎಂದರು.

    ಕುಮಾರಿ ಕೀರ್ತನಾ ಭಟ್ ಪಾರ್ಥನೆ ಹಾಡಿದರು. ರಂಗಚಿನ್ನಾರಿಯ ನಿರ್ದೇಶಕರೂ, ಸಂಚಾಲಕರೂ ಆಗಿರುವ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

    ರಂಗಚಿನ್ನಾರಿ ಟ್ರಸ್ಟ್ ಗೆ ಕಾಸರಗೋಡಿನ ನೋಟರಿ ನ್ಯಾಯವಾದಿ ಎ.ಎನ್. ಅಶೋಕ ಕುಮಾರ್, ಖ್ಯಾತ ವೈದ್ಯರೂ ಗಾಯಕರೂ ಆಗಿರುವ ಡಾ. ಸಂತೋಷ ಕಾಮತ್ ಅವರನ್ನು ಸೇರಿಸಿ ಅವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.

    ರಂಗಚಿನ್ನಾರಿಯ ನಿರ್ದೇಶಕರಾದ ಕೆ. ಸತೀಶ್ಚಂದ್ರ ಭಂಡಾರಿ, ನಿರ್ದೇಶಕ ಸತ್ಯನಾರಾಯಣ ಕೆ., ಎ.ಎನ್. ಅಶೋಕ ಕುಮಾರ್ ವೇದಿಕೆಯಲ್ಲಿದ್ದರು.

    ಸಮಾರೋಪ ಸಮಾರಂಭದಲ್ಲಿ ಸಾಹಿತಿ ವೈ. ಸತ್ಯನಾರಾಯಣ ಅವರು ತಾವು ರಚಿಸಿದ ‘ನಿಮಗೂ ಧನ್ಯವಾದ’ ಎಂಬ ಪುಸ್ತಕವನ್ನು ಎಲ್ಲಾ ಗಾಯಕ – ಗಾಯಕಿಯರಿಗೆ ನೀಡಿ ಶುಭ ಹಾರೈಸಿದರು. ಕಾಸರಗೋಡಿನ ಹಿರಿಯ ವೈದ್ಯರೂ, ಸ್ವತಃ ಗಾಯಕರೂ ಆಗಿರುವ ಡಾ. ಕೆ.ಕೆ. ಶ್ಯಾನುಭೋಗ್ ರವರು ಕಾಸರಗೋಡಿನ ಗಾಯಕ – ಗಾಯಕಿಯರಿಗೆ ಮುಕ್ತ ವೇದಿಕೆಯನ್ನು ನಿರ್ಮಿಸಿಕೊಟ್ಟ ರಂಗಚಿನ್ನಾರಿ ಸಂಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆ. ಸತೀಶ್ಚಂದ್ರ ಭಂಡಾರಿ ಉಷಾ ಟೀಚರ್, ಬಬಿತಾ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಜನಾರ್ದನ ಅಣಂಗೂರ್ ರವರು ಧ್ಯನವಾದವಿತ್ತರು. ಸುಮಾರು ಅರುವತ್ತು ಗಾಯಕ – ಗಾಯಕಿಯರು ವಿವಿಧ ಭಾಷೆಯ ಹಾಡುಗಳನ್ನು ಹಾಡಿ ರಂಜಿಸಿದರು.

    baikady felicitation Music roovari
    Share. Facebook Twitter Pinterest LinkedIn Tumblr WhatsApp Email
    Previous Articleಹಿರಿಯ ನಾಗರಿಕರಿಗೆ ಕಾರಂತ ಲೇಖನ ಸ್ಪರ್ಧೆ | ಕೊನೆಯ ದಿನಾಂಕ ಮಾರ್ಚ್ 20
    Next Article ಸುರತ್ಕಲ್‌ನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಕಾರ್ಯಕ್ರಮ
    roovari

    Add Comment Cancel Reply


    Related Posts

    ಬೆಂಗಳೂರಿನ ಸಂಸ ಬಯಲು ರಂಗಮಂದಿರದಲ್ಲಿ ‘ಅದಮ್ಯ ರಂಗೋತ್ಸವ’ | ಮಾರ್ಚ್ 24, 25 ಮತ್ತು 26

    March 21, 2026

    ಉಡುಪಿಯ ವಿಶೇಷ ಉಪನ್ಯಾಸ ಹಾಗೂ ಗೋವಿಂದ ಪೈಗಳ ಕಾವ್ಯ ಪ್ರಸ್ತುತಿ

    March 21, 2026

    ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನ

    March 21, 2026

    ಮಂಗಳೂರಿನಲ್ಲಿ ‘ವಸಂತ ಸಂಗೀತೋತ್ಸವ’ ಕಾರ್ಯಕ್ರಮ

    March 21, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.