Subscribe to Updates

    Get the latest creative news from FooBar about art, design and business.

    What's Hot

    ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನೃತ್ಯಾಭಿಮಾನಿಗಳನ್ನು ರಂಜಿಸಿದ ನೃತ್ಯೋತ್ಸವ

    December 11, 2025

    ಹಾಸನ ಜಿಲ್ಲಾ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗ್ಯಾರಂಟಿ ರಾಮಣ್ಣನವರಿಗೆ ಅಧಿಕೃತ ಆಹ್ವಾನ

    December 11, 2025

    ನೃತ್ಯ ವಿಮರ್ಶೆ | ಹೃದಯಂಗಮ ಅಭಿನಯ – ಕಣ್ತುಂಬಿದ ‘ರಮ್ಯ’ ನರ್ತನ

    December 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮನೋಹರ ಗ್ರಂಥ ಮಾಲಾದಲ್ಲಿ ‘ಆರ್ಯ ನೆನಪು’ ಕಾರ್ಯಕ್ರಮ
    Commemoration

    ಮನೋಹರ ಗ್ರಂಥ ಮಾಲಾದಲ್ಲಿ ‘ಆರ್ಯ ನೆನಪು’ ಕಾರ್ಯಕ್ರಮ

    December 11, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ ಧಾರವಾಡ ಇವರ ವತಿಯಿಂದ ಆರ್ಯರ ಎಂಬತ್ತನೆಯ ಹುಟ್ಟುಹಬ್ಬದ ನೆನಪಿಗಾಗಿ ‘ಆರ್ಯ ನೆನಪು’ ಕಾರ್ಯಕ್ರಮವು ದಿನಾಂಕ 08 ಡಿಸೆಂಬರ್ 2025ರಂದು ಧಾರವಾಡದ ಮನೋಹರ ಗ್ರಂಥ ಮಾಲಾ ಅಟ್ಟದಲ್ಲಿ ನಡೆಯಿತು.

    ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಾಹಿತಿ ಮತ್ತು ಚಿಂತಕ ಜಿ.ಸಿ. ತಲ್ಲೂರ ಮಾತನಾಡಿ “ಸನ್ಯಾಸತ್ವ ತ್ಯಜಿಸಿ ಧಾರವಾಡಕ್ಕೆ ಬಂದು ನೆಲೆಸಿ ಆರ್ಯರು ಸಾಹಿತ್ಯ, ಚಿತ್ರಕಲೆ, ನಾಟಕ ನಿರ್ದೇಶನ, ಚಲನಚಿತ್ರ ನಿರ್ದೇಶನ, ಅನುವಾದ, ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಧಿಸಿದ ಸಾಧನೆ ಊಹಾತೀತ. ಅವರ ನಾಟಕಗಳು, ಕಥೆಗಳು, ಕವನಗಳು, ಕಾದಂಬರಿ ಹೀಗೆ ವಿವಿಧ ಬಗೆಯ ಎಲ್ಲ ಬರಹಗಳನ್ನು ಸಮಗ್ರವಾಗಿ ಹೊರತರಬೇಕು. ಮನೋಹರ ಗ್ರಂಥಮಾಲೆ ಈ ಕೆಲಸ ಮಾಡಲಿ. ಅದಕ್ಕೆ ನಾವೆಲ್ಲರೂ ಗ್ರಂಥಮಾಲೆ ಜತೆ ಕೈ ಜೋಡಿಸೋಣ. ಹಾಗೆಯೇ ಅವರ ಚಿತ್ರಕಲೆ, ಸಾಹಿತ್ಯ ಕುರಿತು ವಿಮರ್ಶೆ ಹೊರಬರಬೇಕು. ಸಂವಾದ ಗೋಷ್ಠಿ ಏರ್ಪಾಡಾಗಬೇಕು. ಅವರಿಗೆ ಯಥೋಚಿತ ಗೌರವ ಸಿಗಬೇಕು” ಎಂದು ಹೇಳಿದರು.

    ಮತ್ತೋರ್ವ ಅತಿಥಿಯಾಗಿದ್ದ ಆನಂದ ನಿಲೇಕಣಿ ಮಾತನಾಡುತ್ತಾ “ಆರ್ಯರ ಬದುಕು ಬಹುದೊಡ್ಡ ಆದರ್ಶದಿಂದ ಕೂಡಿತ್ತು. ಸದಾ ಹಸನ್ಮುಖಿಯಾಗಿದ್ದ ಆರ್ಯರು ಯಾವಾಗಲೂ ಇತರರ ವಿಷಯದಲ್ಲಿ ತೋರುತ್ತಿದ್ದ ಆದರ ಈಗಲೂ ಕಣ್ಣಿಗೆ ಕಟ್ಟಿದೆ. ವಿಶೇಷವಾಗಿ ಅವರು ತಮ್ಮ ಶ್ರೀಮತಿ ವಿದ್ಯಾ ಅಂದರೆ ನನ್ನ ಅಕ್ಕ ಗುಣವಾಗದ ಕಾಯಿಲೆಯಿಂದ ಬಳಲುತ್ತಿದ್ದಾಗ ಅವರು ತೋರಿದ ಪ್ರೀತಿ, ಸ್ನೇಹ ಎಂದೂ ಮರೆಯಲಾಗದಂತಹದು. ಎಂದೂ ಯಾರಿಂದಲೂ ಏನನ್ನೂ ಬಯಸಲಿಲ್ಲ. ಬಹುದೊಡ್ಡ ಬರಹಗಾರ, ಕಲಾವಿದ, ಚಿಂತಕರಾಗಿದ್ದರೂ ಸಾಮಾನ್ಯರ ಜತೆ ಸಾಮಾನ್ಯನಾಗಿ ಬದುಕಿದರು. ಮನೋಹರ ಗ್ರಂಥಮಾಲೆ ಇಂದು ಅವರ 80ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಳ್ಳುವ ಈ ಸಭೆ ಆಯೋಜಿಸಿದ್ದಕ್ಕೆ ಮನದಾಳದ ಕೃತಜ್ಞತೆಗಳು” ಎಂದು ಹೇಳಿದರು ಮತ್ತು 80ರ ಹುಟ್ಟುಹಬ್ಬದ ನಿಮಿತ್ತ ಮುಂದಿನ ದಿನಗಳಲ್ಲಿ ಆರ್ಯರ ಸಾಹಿತ್ಯ, ಚಿತ್ರಕಲೆ ಕುರಿತು ಸಂವಾದ, ವಿಮರ್ಶೆ ಗೋಷ್ಠಿ, ಚರ್ಚಾಗೋಷ್ಠಿ ನಡೆಸುವುದಿದ್ದಲ್ಲಿ ತಾವು ಮತ್ತು ತಮ್ಮ ಕುಟುಂಬದ ಪರವಾಗಿ ಎಲ್ಲ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

    ಶಶಿಧರ ನರೇಂದ್ರ, ಲೋಹಿತ ನಾಯ್ಕರ, ವಿಶ್ವನಾಥ ಕೋಳಿವಾಡ, ವಿನಾಯಕ ನಾಯಿಕ, ಕೃಷ್ಣ ಕಟ್ಟಿ, ರಾಜಶೇಖರ ಜಾಡರ, ಶಿವಶಂಕರ ಹಿರೇಮಠ ಮತ್ತು ಹರ್ಷ ಡಂಬಳ ಮಾತನಾಡಿ ಆರ್ಯರ ಬಹುಮುಖ ಪ್ರತಿಭೆಯ ಕುರಿತು ತಮ್ಮ ನೆನಪುಗಳನ್ನು ಹಂಚಿಕೊಂಡರು. ಜಿ.ಸಿ. ತಲ್ಲೂರರ ಪ್ರಧಾನ ಸಂಪಾದಕತ್ವದಲ್ಲಿ ಆರ್ಯರ ಸಮಗ್ರ ಸಾಹಿತ್ಯ ಹೊರಬರಲಿ ಎಂದು ಎಲ್ಲರೂ ಅಪೇಕ್ಷೆ ಪಟ್ಟರು. ಶರಭೇಂದ್ರ ಸ್ವಾಮಿ, ಶ್ರೀದೇವಿ ಜೋಶಿ, ವಿಷಯಾ ಜೇವೂರ, ಸಮೀರ ಜೋಶಿ ಮೊದಲಾದವರು ಉಪಸ್ಥಿತರಿದ್ದರು. ಹ. ವೆಂ. ಕಾಖಂಡಿಕಿ ಕಾರ್ಯಕ್ರಮ ನಿರ್ವಹಿಸಿದರು.

    baikady commemoration Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಮಂತ್ರಮುಗ್ಧಗೊಳಿಸಿದ ‘ಜ್ಞಾನ ನೃತ್ಯ ವಂದನಮ್’
    Next Article ನೃತ್ಯ ವಿಮರ್ಶೆ | ಹೃದಯಂಗಮ ಅಭಿನಯ – ಕಣ್ತುಂಬಿದ ‘ರಮ್ಯ’ ನರ್ತನ
    roovari

    Add Comment Cancel Reply


    Related Posts

    ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನೃತ್ಯಾಭಿಮಾನಿಗಳನ್ನು ರಂಜಿಸಿದ ನೃತ್ಯೋತ್ಸವ

    December 11, 2025

    ಹಾಸನ ಜಿಲ್ಲಾ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗ್ಯಾರಂಟಿ ರಾಮಣ್ಣನವರಿಗೆ ಅಧಿಕೃತ ಆಹ್ವಾನ

    December 11, 2025

    ನೃತ್ಯ ವಿಮರ್ಶೆ | ಹೃದಯಂಗಮ ಅಭಿನಯ – ಕಣ್ತುಂಬಿದ ‘ರಮ್ಯ’ ನರ್ತನ

    December 11, 2025

    ಮಂತ್ರಮುಗ್ಧಗೊಳಿಸಿದ ‘ಜ್ಞಾನ ನೃತ್ಯ ವಂದನಮ್’

    December 10, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.