Author: roovari

ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ‘ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.)’ ಇದರ ವತಿಯಿಂದ ದತ್ತಿ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ ಸಮಾರಂಭವನ್ನು ದಿನಾಂಕ 07 ಫೆಬ್ರುವರಿ 2026ರಂದು ಅಪರಾಹ್ನ 2-30 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ಸಾಹಿತ್ಯ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಶಕುಂತಳಾ ಟಿ. ಶೆಟ್ಟಿಯವರು ವಹಿಸಲಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲ ಸಚಿವರಾದ ಡಾ. ಎ. ಸುಬ್ಬಣ್ಣ ರೈ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಪ್ರಕಟಿತ ಕವನ ಸಂಕಲನದ ಬಗ್ಗೆ ಕವಿ ಡಾ. ವಸಂತಕುಮಾರ್ ಪೆರ್ಲ ಹಾಗೂ ಸಂಶೋಧನಾತ್ಮಕ ಕೃತಿಯ ಬಗ್ಗೆ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಪಿ. ಇವರು ಅನಿಸಿಕೆಗಳನ್ನಾಡಲಿದ್ದಾರೆ. ಮುಂಬಯಿಯ ಸುನೀತಾ ಎಂ. ಶೆಟ್ಟಿ ಪ್ರಾಯೋಜಿಸುವ ‘ತೌಳವ ಸಿರಿ’ ಪ್ರಶಸ್ತಿಗೆ ತುಳು, ಕನ್ನಡ ಮತ್ತು ಕೊಂಕಣಿ ಭಾಷೆಯ ಹಿರಿಯ ಲೇಖಕಿ ಕ್ಯಾಥರಿನ್…

Read More

ಕಾಸರಗೋಡು : “ಬಹು ಭಾಷಾ ಸಂಗಮ ಭೂಮಿಯಾದ ಕಾಸರಗೋಡು ಪ್ರದೇಶದಲ್ಲಿ ವಿವಿಧ ಆಚಾರ, ವಿಚಾರಗಳು ಧ್ವನಿಸುತ್ತವೆ. ಇಲ್ಲಿನ ಭಾಷಾ ವೈವಿಧ್ಯತೆಗಳು ಉಳಿದೆಲ್ಲಾ ಪ್ರದೇಶಗಳಿಗೆ ಮಾದರಿ. ನೂರ ಇಪ್ಪತ್ತೈದು ಗಾಯಕ-ಗಾಯಕಿಯರನ್ನ ಒಂದೇ ವೇದಿಕೆಯಲ್ಲಿ ವಿವಿಧ ಭಾಷೆಗಳ ಹಾಡುಗಳನ್ನು ಹಾಡುವುದೆಂದರೆ ದೊಡ್ಡ ಸಾಹಸವೇ ಸರಿ” ಎಂದು ಕಾಸರಗೋಡಿನ ಶಾಸಕ ಎನ್.ಎ. ನೆಲ್ಲಿಕುನ್ನು ಹೇಳಿದರು. ಅವರು ಕಾಸರಗೋಡಿನ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು (ರಿ.) ಇದರ ಸಂಗೀತ ಘಟಕವಾದ ‘ಸ್ವರಚಿನ್ನಾರಿ’ಯ ನೇತೃತ್ವದಲ್ಲಿ ದಿನಾಂಕ 05 ಜನವರಿ 2026ರಂದು ಪದ್ಮಗಿರಿ ಕಲಾಕುಟೀರದಲ್ಲಿ ಏರ್ಪಡಿಸಿದ ‘ಅಂತರ್ಧ್ವನಿ’ ಕರೋಕೆ ಗಾಯಕರ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಇಲ್ಲಿನ ನಾಡು ನುಡಿ ಸಂಸ್ಕೃತಿಗಳಿಗಾಗಿ ಕಳೆದ ಎರಡು ದಶಕಗಳಿಂದ ದುಡಿಯುತ್ತಿರುವ ರಂಗಚಿನ್ನಾರಿಯ ಸಾಧನೆಗಳನ್ನು ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು. ಕಾಸರಗೋಡಿನ ಎಲ್ಲಾ ವರ್ಗದ ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸಂಭ್ರಮಿಸುವುದೆಂದರೆ ನಿಜಕ್ಕೂ ಅಭಿನಂದನೀಯ ಎಂದರು. ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ವಿ. ಮನೋಹರ್, ಕಾಸರಗೋಡಿನ ನಗರ ಸಭಾ ಮಾಜಿ…

Read More

ಮಂಗಳೂರು : ಸ್ಪೀಕ್ ಮಕೇ ಎನ್.ಐ.ಟಿ.ಕೆ. ಇವರು ಪ್ರಸ್ತುತ ಪಡಿಸುವ ‘ವಿರಾಸತ್’ ಸಂಗೀತ, ನೃತ್ಯ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ದಿನಾಂಕ 4ರಿಂದ 8 ಫೆಬ್ರುವರಿ 2026ರಂದು ಸುರತ್ಕಲ್ಲಿನ ಎನ್.ಐ.ಟಿ.ಕೆ.ಯ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ದಿನಾಂಕ 4 ಫೆಬ್ರುವರಿ 2026ರಂದು ಸಂಜೆ 5-00 ಗಂಟೆಗೆ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಪದ್ಮಶ್ರೀ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ಇವರ ಹಿಂದೂಸ್ತಾನಿ ಗಾಯನಕ್ಕೆ ನರೇಂದ್ರ ನಾಯಕ್ ಹಾರ್ಮೋನಿಯಂ ಮತ್ತು ಪಂಡಿತ್ ಕೇಶವ್ ಜೋಶಿ ತಬಲಾ ಸಾಥ್ ನೀಡಲಿದ್ದಾರೆ. ದಿನಾಂಕ 5 ಫೆಬ್ರುವರಿ 2026ರಂದು ಸಂಜೆ 6-00 ಗಂಟೆಗೆ ವಿದ್ವಾನ್ ಆರ್.ಕೆ. ಶ್ರೀರಾಮಕುಮಾರ್ ಇವರ ಕರ್ಣಾಟಿಕ್ ವಯೋಲಿನ್ ವಾದನಕ್ಕೆ ವಿದ್ವಾನ್ ಮನೋಜ್ ಸಿವ ಮೃದಂಗದಲ್ಲಿ ಮತ್ತು ವಿದ್ವಾನ್ ಅನಿರುದ್ಧ ಆತ್ರೇಯ ಇವರು ಕಾಂಜೀರದಲ್ಲಿ ಸಹಕರಿಸಲಿದ್ದಾರೆ. ದಿನಾಂಕ 6 ಫೆಬ್ರುವರಿ 2026ರಂದು ಬೆಳಗ್ಗೆ 9-30 ಗಂಟೆಗೆ ವಿದುಷಿ ವೈಜಯಂತಿ ಕಾಶಿ ಇವರಿಂದ ಕೂಚಿಪುರಿ ಮತ್ತು ವಿದ್ವಾನ್ ಪ್ರವೀಣ್ ಕುಮಾರ್ ಇವರಿಂದ ಭರತನಾಟ್ಯ ಹಾಗೂ 1-30 ಗಂಟೆಗೆ…

Read More

ಕಾಸರಗೋಡು : ಕೇರಳ ಸಂಗೀತ ಅಕಾಡೆಮಿಯ ಸ್ಕಾಲರ್ಷಿಪ್, ಇಂಡಿಯನ್ ಪೀಪಲ್ ಥೀಯೇಟರ್ ನ ‘ಗಾನ ಸುಧಾ’ ಪ್ರಶಸ್ತಿ ವಿಜೇತೆ 1997ರಿಂದಲೇ ಕಾಸರಗೋಡಿನಲ್ಲಿ ‘ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯ’ ಸ್ಥಾಪಿಸಿ ಸಾವಿರಾರು ಸಂಗೀತ ವಿದ್ಯಾರ್ಥಿಗಳಿಗೆ ಪ್ರತಿಭೆ ಬೆಳಗಿಸಲು ಸಂಗೀತ ಉಪಕರಣ ವಿಧಗ್ದ ತನ್ನ ಪತಿ ಶ್ರೀ ಈಶ್ವರ ಭಟ್ ಇವರ ಪ್ರೋಸ್ತಾಹದಿಂದ ಕಲಾ ತಪಸ್ಸು ಮಾಡುತ್ತಿರುವ ಹಾಗೂ ನೆರೆಯ ಹೊಸದುರ್ಗದಲ್ಲಿ ಸದ್ಗುರು ತ್ಯಾಗ ಬ್ರಹ್ಮ ಸಭಾ ಹುಟ್ಟು ಹಾಕುವಲ್ಲಿ ಪಾಲುಗೊಂಡು, ಕರ್ನಾಟಕ, ಕೇರಳ, ತಮಿಳುನಾಡಿನ ಸಭಾಗಳಲ್ಲಿ ತಮ್ಮ ಪ್ರತಿಭೆಯನ್ನು ಮಿಂಚಿಸಿ ಕಾಸರಗೋಡಿನ ಹೆಸರನ್ನು ದೇಶ ವ್ಯಾಪಿ ಮಾಡಿದ, ಮಾಡುತ್ತಿರುವ ಕಾಸರಗೋಡಿನ ವಿದ್ಯಾನಗರದ ನಿವಾಸಿಗಳಾದ ಸಂಗೀತ ಲೋಕದ ಶಾಸ್ತ್ರೀಯ ಕಲಾ ತಪಸ್ವಿಗಳಾದ ಉಷಾ ಈಶ್ವರ ಭಟ್ ದಂಪತಿಗಳಿಗೆ ‘ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008) ಇದರ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ ‘ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026’ ನೀಡಿ ಗೌರವಿಸಲು ತೀರ್ಮಾನಿಸಿದೆ. ಈ ಪ್ರಶಸ್ತಿಯನ್ನು ಕನ್ನಡ ಭವನದ…

Read More

ನುಳ್ಳಿಪ್ಪಾಡಿ : ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದಿಂದ ಸ್ಥಾಪಿತವಾಗಿ ಕಾಸರಗೋಡು ಜಿಲ್ಲೆಯಲ್ಲದೆ ಕರ್ನಾಟಕದ ದ.ಕ. ಜಿಲ್ಲೆ, ಕೊಡಗು, ಮೈಸೂರು, ಕೋಲಾರ, ಗದಗ, ಚಿತ್ರದುರ್ಗ, ಕೊಪ್ಪಳ, ಉಡುಪಿ, ಬೆಂಗಳೂರು ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಸಮಿತಿ ಕಾಸರಗೋಡು ಕನ್ನಡ ಭವನದ ಪ್ರಾಯೋಜಕತ್ವದಲ್ಲಿ ದಿನಾಂಕ 22 ಫೆಬ್ರುವರಿ 2026 ಭಾನುವಾರದಂದು ಕನ್ನಡ ಭವನದ ‘ಚುಟುಕು ಯುಗಾಚಾರ್ಯ ಎಂ.ಜಿ.ಆರ್. ಅರಸ್’ ವೇದಿಕೆಯಲ್ಲಿ ನಡೆಯುವ ‘ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ-2026’ದ ಸ್ವಾಗತ ಸಮಿತಿ ರೂಪೀಕರಣ ಹಾಗೂ ಸಮಾಲೋಚನಾ ಸಭೆಯು ದಿನಾಂಕ 01 ಫೆಬ್ರುವರಿ 2026ರಂದು ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಆರಿಸಲ್ಪಟ್ಟ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ “ಕನ್ನಡ ತಾಯಿಯ ಈ ನಿಸ್ವಾರ್ಥ ಸೇವೆಗೆ ಸಂಪೂರ್ಣವಾಗಿ ಸಹಕರಿಸಿ. ಕನ್ನಡ ಕಾರ್ಯಕ್ರಮ ಯಾರೇ ಮಾಡಿದರೂ ಕನ್ನಡದ ಉದ್ದೀಪನದ ಕಾರ್ಯವೇ ಆಗಿರುತ್ತದೆ. ಸಂಘಟನೆಗಳ ಮುಂದಾಳುಗಳು ಪರಸ್ಪರ ಸಹಕರಿಸಬೇಕು, ಬೆಂಬಲ ನೀಡಬೇಕು…

Read More

ಪುತ್ತೂರು : ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ (ರಿ.) ಇದರ ವತಿಯಿಂದ ಸ್ಥಾಪಕ ಗುರು, ಸಂಗೀತ ರತ್ನ ಋಷಿ ಗಂಧರ್ವ ವಿ. ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ 105ನೇ ಜನ್ಮ ವರ್ಷ ಮಹೋತ್ಸವದ ಅಂಗವಾಗಿ ಪುತ್ತೂರು ಕಾಂಚನದಲ್ಲಿ ನಿರ್ಮಾಣವಾಗಿರುವ ನೂತನ ಸಂಗೀತ ಕಲಾ ಶಾಲೆ, ಸಭಾಭವನ ಹಾಗೂ ಭೋಜನ ಶಾಲೆಯ ಲೋಕಾರ್ಪಣೆ, 72ನೇ ವರ್ಷದ ‘ಕಾಂಚನೋತ್ಸವ-2026’ ಕಾರ್ಯಕ್ರಮ ದಿನಾಂಕ 05ರಿಂದ 07 ಫೆಬ್ರುವರಿ 2026ರ ತನಕ ನಡೆಯಲಿದೆ. ದಿನಾಂಕ 05 ಫೆಬ್ರುವರಿ 2026ರಂದು 72ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ, ಸ್ಥಾಪಕ ಗುರು, ಸಂಗೀತ ರತ್ನ ಕಾಂಚನ ವೆಂಕಟಸುಬ್ರಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ. ಸುಬ್ಬರತ್ನಂ ಪುಣ್ಯ ಸ್ಮರಣೆಯ ಅಂಗವಾಗಿ ಆರಂಭ ಸ್ತುತಿಯಲ್ಲಿ ಸಂವಿತ್ ಆರ್.ಎಸ್. ಅವರು ತಬಲ, ಕೆ.ಜೆ. ಋತ ವಯಲಿನ್ ನುಡಿಸಲಿದ್ದಾರೆ. ಸಂಜೆ 6-15ರಿಂದ ನಡೆಯುವ ಸ್ವರ ಲಯ ಲಹರಿಯಲ್ಲಿ ಕೆ.ಜೆ. ಋತ, ಅಭಯ್ ಸಂಪಿಗೆತ್ತಾಯ, ಶ್ರೀಕೃಷ್ಣ ಭಟ್, ತೇಜಸ್ವಿ ಸಂಜಯ್,…

Read More

ಮಂಗಳೂರು : ಕಟೀಲು ದೇಗುಲದ ಕುದ್ರು ನಂದಿನಿ ನದಿಯ ಮಧ್ಯದಲ್ಲಿರುವ ಪ್ರಕೃತಿ ವಿಸ್ಮಯ. ಕಟೀಲು ದೇಗುಲ ಹಾಗೂ ಮೂಲಸ್ಥಳವೆಂದು ನಂಬಲಾಗಿರುವ ಈ ಕುದ್ರು ನಂದಿನಿ ನದಿಯ ಮಧ್ಯದಲ್ಲಿರುವ ಎರಡು ಪುಟ್ಟ ದ್ವೀಪಗಳು. ಇವೆರಡೂ ಅಧ್ಯಾತ್ಮದ ಧ್ಯಾನಾಸಕ್ತರಿಗೆ ವಿಶಿಷ್ಟ ಅನುಭವ ನೀಡಬಲ್ಲ ಆರಾಧನಾ ಕೇಂದ್ರಗಳು. ಬರವ ನೀಗಲು ಭುವಿಗೆ ಬಾರೆಂದು ಜಾಬಾಲಿ, ಕಾಮಧೇನುವಿನ ಮಗಳು ನಂದಿನಿಯಲ್ಲಿ ಪ್ರಾರ್ಥಿಸಿದಾಗ ಬರಲಾರೆ ಎಂದು ನಿರಾಕರಿಸಿ ಭುವಿಯನ್ನು ಜರೆದಾಗ, ಮುನಿದ ಮುನಿ ಜಾಬಾಲಿ ನದಿಯಾಗಿ ಹರಿ ಎಂದು ಶಪಿಸಿದ. ತಪ್ಪಿನರಿವಾಗಿ ನಂದಿನಿ ಜಗನ್ಮಾತೆ ದೇವಿಯ ಮೊರೆಹೋದಳು. ಋಷಿ ಶಾಪ ಹುಸಿಯಾಗದು. ನದಿಯಾಗಿ ಹರಿ. ನಿನ್ನ ಕಟಿ ಪ್ರದೇಶದಲ್ಲಿ ನಿನ್ನ ಮಗಳಾಗಿ ನೆಲೆಸುವೆ ಎಂದು ಹರಸಿದಳು. ಕನಕಗಿರಿಯಿಂದ ನದಿಯಾಗಿ ಹರಿದು ಬರವ ಕಳೆದು ಭುವಿಯ ಹಸಿರಾಗಿಸಿದಳು. ಉಸಿರಾದಳು. ದುರುಳ ಅರುಣಾಸುರನ ತರಿದು ಕಟೀಲಿನಲ್ಲಿ ನೆಲೆಯಾದ ಭ್ರಮರಾಂಬೆ ಭಕ್ತ ಜನರ ಹರಿಸಿದಳು. ಇದು ಪುರಾಣದ ಕತೆ. ಈಗಿನ ಮಿಜಾರುವಿನ ಕನಕಬೆಟ್ಟುವಿನ ನಾಗಬನವೊಂದರ ಸಮೀಪ ಪುಟ್ಟ ಕಾಡಮಧ್ಯೆ ನೀರ ಒಸರು ಕಾಣುತ್ತದೆ.…

Read More

ಉಡುಪಿ : ಉಡುಪಿಯ ಪ್ರತಿಷ್ಠಿತ ರಾಗಧನ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ 38ನೆಯ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವ ದಿನಾಂಕ 6ರಿಂದ 8 ಫೆಬ್ರವರಿ 2026ರಂದು ನಡೆಯಲಿದೆ. ದಿನಾಂಕ 06 ಫೆಬ್ರವರಿ 2026ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ‘ಆರೋಹಣಂ’ ಸಂಗೀತ ಶಾಲೆಯ ಡಾ. ಅನೀಶ್ ಭಟ್ ಇವರ ಶಿಷ್ಯರಿಂದ ಹಾಡುಗಾರಿಕೆ, ವಯೊಲಿನ್ ನಲ್ಲಿ ಕುಮಾರಿ ಧನಶ್ರೀ ಶಬರಾಯ ಹಾಗೂ ಡಾ. ಬಾಲಚಂದ್ರ ಆಚಾರ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಸಂಜೆ 6-00 ಗಂಟೆಗೆ ಮೈಸೂರಿನ ಖ್ಯಾತ ಕಲಾ ವಿಮರ್ಶಕರಾದ ಪ್ರೊ.ಕೆ. ರಾಮಮೂರ್ತಿ ರಾವ್ ಇವರಿಂದ ಕಾರ್ಯಕ್ರಮ ಉದ್ಘಾಟನೆ ನೆರವೇರಲಿದೆ. ಮುಖ್ಯ ಅತಿಥಿಗಳಾಗಿ ಅದಾನಿ ಸಂಸ್ಥೆಯ ನಿರ್ದೇಶಕ ಕಿಶೋರ್ ಆಳ್ವ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಭಾಗವಹಿಸುವರು. ತದನಂತರ ಇತ್ತೀಚೆಗೆ ‘ಪುರಂದರ ಗಾನ ನರ್ತನ’ ಎಂಬ ಶೀರ್ಷಿಕೆಯಡಿ ಸತತವಾಗಿ 6 ಗಂಟೆ 13 ನಿಮಿಷಗಳ ಕಾಲ…

Read More

ಕಾಸರಗೋಡು : ಇರಾ ನೇಮು ಪೂಜಾರಿಯವರು ಕವಿಯಾಗಿ, ಸಾಹಿತಿಯಾಗಿ ಮಂಗಳೂರು ಕಾರಾಗೃಹದಲ್ಲಿ ಕೈದಿಗಳಿಗೆ ಒಂದು ತಿಂಗಳು ಮೇಲ್ಪಟ್ಟು ಕನ್ನಡ ಕಲಿಕೆ ಕಾರ್ಯಕ್ರಮ, ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಮ್ಮೇಳನ, ರಾಜ್ಯ ಸಮ್ಮೇಳನ, ದೆಹಲಿಯಲ್ಲಿ ಕನ್ನಡ ಸಂಘದಲ್ಲಿ ಕವಿಗೋಷ್ಠಿ, ವಿವಿಧ ಜಿಲ್ಲೆಯಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಡೆನ್ಮಾರ್ಕ್ ದೇಶದವರೊಂದಿಗೆ ಹೆಚ್ಚಿನ ಶಿಕ್ಷಣ ಪಡೆದು, ಸುಮಾರು 12 ಕೃತಿ ರಚನೆ, ಸಾಕ್ಷರತೆಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ, ಧಾರ್ಮಿಕ ಕ್ಷೇತ್ರದಲ್ಲಿ, ಸಾಹಿತ್ಯ ಕಾರ್ಯಕ್ರಮ, ಕೃತಿ ಬಿಡುಗಡೆ ಹೀಗೆ ಕನ್ನಡದ ಸೇವೆ ಮಾಡಿರುವುದನ್ನು ಗಮನಿಸಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ದಿನಾಂಕ 22 ಫೆಬ್ರುವರಿ 2026ರಂದು ಕಾಸರಗೋಡು ಕನ್ನಡ ಭವನದಲ್ಲಿ ಜರಗಲಿರುವ ಚುಟುಕು ಸಾಹಿತ್ಯ ಸಮ್ಮೇಳದಲ್ಲಿ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಸರ್ವಧ್ಯಕ್ಷರಾಗಿರುವ ವೇದಿಕೆಯಲ್ಲಿ ‘ಕವಿ ಕಾವ್ಯ ವಿಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಗುವುದೆಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ರವರು ತಿಳಿಸಿರುತ್ತಾರೆ. ಇದೇ ಸಂದರ್ಭದಲ್ಲಿ 101 ಮಂದಿಯಿಂದ…

Read More

ಧಾರವಾಡ : ಸಾಧನಕೇರಿಯಲ್ಲಿರುವ ವರಕವಿ ಅಂಬಿಕಾತನಯದತ್ತರ ‘ಶ್ರೀಮಾತಾ’ ಮನೆಯಂಗಳದಲ್ಲಿ ದಿನಾಂಕ 31 ಜನವರಿ 2026ರಂದು ಕವಿದಿನ “ಇದು ಬರೀ ಬೆಳಗಲ್ಲೋ ಅಣ್ಣಾ” ಬೇಂದ್ರೆ ಕಾವ್ಯ ವಾಚನ ಗಾಯನ ಕಾರ್ಯಕ್ರಮವನ್ನು ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಆಯೋಜಿಸಿತ್ತು. ಇಂದು ಬೇಂದ್ರೆಯವರ 130ನೇ ಜನ್ಮ ದಿನ. “ಬೇಂದ್ರೆ ನಮ್ಮ ಹೆಮ್ಮೆ. ಅವರ ಊರಲ್ಲಿ ಇರೋದು ನಮ್ಮ ಸೌಭಾಗ್ಯ. ಧಾರವಾಡದ ಪೋತ್ನಿಸ ಗಲ್ಲಿಯಲ್ಲಿರುವ ಅವರ ಮನೆಯನ್ನು ಸ್ಮಾರಕ ಮಾಡುವದಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾಪೌರರಾದ ಜ್ಯೋತಿ ಪಾಟೀಲ ನುಡಿದರು. ಬೇಂದ್ರೆಯವರು ಜನಮಾನಸದಲ್ಲಿ ಉಳಿಯುವ ಶ್ರೇಷ್ಠ ಕವಿ. ಹೊರಗೆ ಹೋದಲ್ಲೆಲ್ಲಾ ಬೇಂದ್ರೆ ಊರಿನವರೇ ನೀವು ಎಂದು ಜನ ನಮ್ಮನ್ನು ಪ್ರೀತಿ ಗೌರವದಿಂದ ಮಾತನಾಡಿಸುತ್ತಾರೆ” ಎಂದು ಅಭಿಮಾನ ಹಂಚಿಕೊಂಡರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕವಿ ನರಸಿಂಹ ಪರಾಂಜಪೆ “ಅವರು ಕವಿಯಂಗಳದ ಅಂಬೆಗಾಲಿನ ಕೂಸು ನಾನು. ಬೇಂದ್ರೆಯವರ ಆಶೀರ್ವಾದ ಇರುವದರಿಂದಲೇ ನಾಲ್ಕು ಸಾಲು ಬರೆಯುವಂತಾಯಿತು” ಎಂದರು. ಅನೇಕ ದಿಗ್ಗಜರ ಬೇಂದ್ರೆ ವರ್ಣನೆ ವಿವರಿಸುತ್ತ ‘ಬಾ ಹತ್ರರ’ ಬೇಂದ್ರೆ ಕವಿತೆಯ…

Read More