Author: roovari

ಗೋಣಿಕೊಪ್ಪಲು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿರಾಜಪೇಟೆ ನಾಟ್ಯಮಯೂರಿ ನೃತ್ಯ ಟ್ರಸ್ಟ್ ನೀಡುವ ‘ಕರುನಾಡ ಕಲ್ಪವೃಕ್ಷ’ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಗೋಣಿಕೊಪ್ಪಲಿನ ಭರತನಾಟ್ಯ ಕಲಾವಿದೆ ಪಿ. ಎಂ. ಲಿದಿನಾ ಪಡೆದುಕೊಂಡರು. ಬೆಂಗಳೂರಿನ ಕನ್ನಡ ಭವನದ ರವೀಂದ್ರ ಕಲಾಕ್ಷೇತ್ರದ ನಯನಾ ಸಭಾಂಗಣದಲ್ಲಿ ದಿನಾಂಕ 15 ಜೂನ್ 2025ರಂದು ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಕಲಾವಿದ ಶಶಿಧರ್ ಕೋಟೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ನಾಟ್ಯ ಮಯೂರಿ ನೃತ್ಯ ಸಂಸ್ಥೆಯ ಪ್ರೇಮಾಂಜಲಿ, ಸಾಹಿತಿ ಡಾ. ಹೆಂಚನೂರು ಶಂಕರ ಉಪಸ್ಥಿತರಿದ್ದರು .

Read More

ಮೂಡುಬಿದಿರೆ : ಸಪಳಿಗರ ಯಾನೆ ಗಾಣಿಗರ ಸೇವಾ ಸಂಘ (ರಿ.), ಗಾಣಿಗರ ಯುವ ವೇದಿಕೆ ಮತ್ತು ಗಾಣಿಗರ ಮಹಿಳಾ ವೇದಿಕೆ ಇವರ ಸಹಯೋಗದಲ್ಲಿ ಪ್ರಸ್ತುತ ಪಡಿಸುವ ಕಲಾ ಸಂಗಮ ಕಲಾವಿದರು ಅಭಿನಯಿಸುವ ‘ಛತ್ರಪತಿ ಶಿವಾಜಿ’ ಅದ್ದೂರಿ ತುಳು ಚಾರಿತ್ರಿಕ ನಾಟಕ ಪ್ರದರ್ಶನವನ್ನು ದಿನಾಂಕ 29 ಜೂನ್ 2025ರಂದು ಸಂಜೆ 6-30 ಗಂಟೆಗೆ ಮೂಡುಬಿದಿರೆ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. ಈ ನಾಟಕಕ್ಕೆ ಶಶಿರಾಜ್ ಕಾವೂರು ಇವರ ಕಥೆ ಸಂಭಾಷಣೆ, ಎ.ಕೆ. ವಿಜಯ್ ಕೋಕಿಲ ಮತ್ತು ಕದ್ರಿ ಮಣಿಕಾಂತ್ ಇವರ ಸಂಗೀತ ಹಾಗೂ ವಿಜಯ್ ಕುಮಾರ್ ಕೊಡಿಯಾಲ್ ಬೈಲು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9845191269, 9845288217 ಮತ್ತು 9964427968.

Read More

ಕಾಂತಾವರ : ಯಕ್ಷದೇಗುಲ ಕಾಂತಾವರದ ವಾರ್ಷಿಕ ಆಟ, ಕೂಟ, ಬಯಲಾಟ ಸಹಿತ 23ನೇ ‘ಯಕ್ಷೋಲ್ಲಾಸ’ ಕಾರ್ಯಕ್ರಮವು ದಿನಾಂಕ 20 ಜುಲೈ 2025ರಂದು ಶ್ರೀ ಕ್ಷೇತ್ರ ಕಾಂತಾವರದಲ್ಲಿ ಕಾಂತಾವರ ಕ್ಷೇತ್ರದ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳ್ ರವರ ಅಧ್ಯಕ್ಷತೆಯಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಜರಗಲಿದೆ. ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದ ಹನುಮಗಿರಿ ಮೇಳದ ಹಿರಿಯ ನಿವೃತ್ತ ಕಲಾವಿದರಾದ ಬಿ.ಸಿ. ರೋಡ್ ಶಿವರಾಮ ಜೋಗಿಯವರಿಗೆ ‘ಸವ್ಯಸಾಚಿ ಕಲಾವಿದ ಬಾಯಾರು ಪ್ರಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿ’ ಹಾಗೂ ಕಟೀಲು ಮೇಳದ ನಿವೃತ್ತ ಕಲಾವಿದ ಗುಂಡಿಮಜಲು ಗೋಪಾಲ ಭಟ್ರಿಗೆ ‘ಯಕ್ಷರಂಗದ ಸಿಡಿಲಮರಿ ಖ್ಯಾತಿಯ ಪುತ್ತೂರು ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯಾಧ್ಯಕ್ಷ ಮಹಾವೀರ ಪಾಂಡಿ ಕಾಂತಾವರ ತಿಳಿಸಿರುತ್ತಾರೆ.

Read More

ಬೆಂಗಳೂರು : ‘ನುಡಿ ತೋರಣ’ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಬೆಂಗಳೂರು ಇದರ ತ್ರೈವಾರ್ಷಿಕ ಸಾಹಿತ್ಯ ಸಮಾವೇಶ ದಿನಾಂಕ 29-06-2025ರ ಭಾನುವಾರದಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಬೆಳಗ್ಗೆ ಘಂಟೆ 9.30 ರಿಂದ ಸಂಜೆ ಘಂಟೆ 5.00ರ ವರೆಗೆ ನಡೆಯಲಿದೆ. ಸಮಾವೇಶವನ್ನು ಕರ್ನಾಟಕದ ಹೆಸರಾಂತ ಸಾಹಿತಿ, ಅಷ್ಟಾವಧಾನಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕಬ್ಬಿನಾಲೆ ವಸಂತ ಭಾರದ್ವಾಜ್ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯದ ಸಮಕಾಲೀನ ಚಿಂತಕರು, ಬರಹಗಾರರು, ವಿಮರ್ಶಕರಾದ ಶ್ರೀ ಜಿ. ಬಿ. ಹರೀಶ್ ರೊಡನೆ ‘ಬರಹಗಾರ ಮತ್ತು ಓದುಗನ ನಡುವಿನ ಅನುಸಂಧಾನ’ ಕುರಿತು ಸಂವಾದ ಏರ್ಪಡಿಸಲಾಗಿದೆ. ವೇದಿಕೆಯು ಪ್ರತಿವರ್ಷ ಕೊಡಮಾಡುವ ‘ನುಡಿ ಭೂಷಣ’ ಪ್ರಶಸ್ತಿಯನ್ನು ಮಂಡ್ಯ ಜಿಲ್ಲೆಯ ಖ್ಯಾತ ಸಾಹಿತಿ ತ. ನಾ. ಶಿವಕುಮಾರ್ (ತನಾಶಿ), ಕಲುಬುರ್ಗಿಯ ಖ್ಯಾತ ನೇತ್ರತಜ್ಞ ಡಾ. ಉದಯ ಪಾಟೀಲ ಹಾಗು ಬೆಂಗಳೂರಿನ ಖ್ಯಾತ ಸಾಹಿತಿ ಅನುಸೂಯ ಸಿದ್ಧರಾಮ ಇವರಿಗೆ ಪ್ರದಾನ ಮಾಡಲಾಗುವುದು. ಅಲ್ಲದೆ ಬಳಗದ ಸದಸ್ಯರಿಂದ ‘ಜಾನಪದ ಸಾಂಸ್ಕೃತಿಕ ವೈಭವ’,…

Read More

ಕಾರ್ಕಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇವರ ವತಿಯಿಂದ ನಡೆಯುವ ಯಕ್ಷಧ್ರುವ-ಯಕ್ಷಶಿಕ್ಷಣ ಯಕ್ಷಗಾನ ಶಿಕ್ಷಣ ಅಭಿಯಾನವು ಯಕ್ಷಧ್ರುವ ಪಟ್ಲ ಫೌಂಡೇಶನ್ ಪಳ್ಳಿ-ನಿಂಜೂರು ಘಟಕದ ಸಹಯೋಗದಲ್ಲಿ 2025-26ನೇ ಸಾಲಿನ ಉಚಿತ ಯಕ್ಷಗಾನ ತರಬೇತಿಯು ದಿನಾಂಕ 28 ಜೂನ್ 2025ರಂದು ಪಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಪಳ್ಳಿ-ನಿಂಜೂರು ಘಟಕದ ಗೌರವಾಧ್ಯಕ್ಷರಾದ ಶ್ರೀ ಭರತ್ ಹೆಗ್ಡೆ ಪಳ್ಳಿ ಇವರು ದೀಪ ಬೆಳಗಿ ಈ ತರಬೇತಿಯನ್ನು ಉದ್ಘಾಟನೆಗೊಳಿಸಿ ಮಕ್ಕಳ ಯಕ್ಷಯಾನಕ್ಕೆ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಪಳ್ಳಿ-ನಿಂಜೂರು ಘಟಕದ ಅಧ್ಯಕ್ಷರಾದ ಶ್ರೀ ಸುನಿಲ್ ಶೆಟ್ಟಿ, ಘಟಕದ ಉಪಾಧ್ಯಕ್ಷರಾದ ಶ್ರೀ ರಮಾನಂದ ಕಿಣಿ, ಘಟಕದ ಸಂಚಾಲಕರಾದ ಶ್ರೀ ಸುನಿಲ್ ಕೋಟ್ಯಾನ್, ಘಟಕದ ಕೋಶಾಧಿಕಾರಿ ಶ್ರೀ ನಿಧೀಶ್ ಆಚಾರ್ಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಭಾಕರ ಬಂಗೇರ, ಕಲಾ ಪೋಷಕರಾದ ಶ್ರೀ ಸುರೇಶ್ ಪಾಣರ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರೇಮಲತಾ ಉಪಸ್ಥಿತರಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಪಳ್ಳಿ…

Read More

ಮಂಗಳೂರು :  ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಬೆಸೆಂಟ್ ಮಹಿಳಾ ಪದವಿ ಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ 106 ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮವು ಬೆಸೆಂಟ್ ಮಹಿಳಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ 27 ಜೂನ್ 2025ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಸೆಂಟ್ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಯಕ್ ರೂಪಸಿಂಗ್ ವಹಿಸಿದ್ದರು. ಮುಖ್ಯ ಸಂಪನ್ಮೂಲ ಅತಿಥಿಯಾಗಿ ಜನಪದ ವಿದ್ವಾಂಸರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಹಾಗೂ ನಿವೃತ್ತ ಪ್ರಾಧ್ಯಾಪಕಿ ಹಾಗೂ ಲೇಖಕಿಯಾದ ಡಾ. ಮೀನಾಕ್ಷಿ ರಾಮಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಗೌರವ ಅತಿಥಿಗಳಾಗಿ ಮಂಗಳೂರು ಪ್ರೆಸ್ ಕ್ಲಬ್ ಇದರ ಅಧ್ಯಕ್ಷರಾದ ಪಿ. ಬಿ. ಹರೀಶ್ ರೈ ಹಾಗೂ ಜಾನಪದ ಪರಿಷತ್ ಬೆಂಗಳೂರು ಇದರ ಜಿಲ್ಲಾಧ್ಯಕ್ಷರಾದ ಪಮ್ಮಿ ಕೊಡಿಯಾಲ್ ಬೈಲ್ ಭಾಗವಹಿಸಿದ್ದರು. ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕಿ ಲೇಖಕಿ ಸುರೇಖಾ ಯಾಳವಾರ ಕಾರ್ಯಕ್ರಮವನ್ನು…

Read More

ಗದಗ : ದಿ. ಶ್ರೀ ಶಿವಯೋಗೆಪ್ಪ ರುದ್ರಪ್ಪ ಹುರಕಡ್ಲಿಯವರ 9ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಕುಮಾರಿ ಭಾಗ್ಯಶ್ರೀ ಶಿ. ಹುರಕಡ್ಲಿಯವರ ‘ಮಿಡಿದ ಹೃದಯ’ ಚೊಚ್ಚಲ ಕವನ ಸಂಕಲನ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 29 ಜೂನ್ 2025ರಂದು ಬೆಳಗ್ಗೆ 10-30 ಗಂಟೆಗೆ ಗದಗದ ಅಬ್ದುಲ್ ಕಲಾಂ ಶಾದಿ ಮಹಲ್ ನಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ನಾಗಲೇಖರವರು ವಹಿಸಿದ್ದು, ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷರಾದ ಡಾ. ರಶ್ಮಿ ಅಂಗಡಿ ಇವರು ಉದ್ಘಾಟನೆ ಮಾಡಲಿದ್ದಾರೆ. ಎಸ್.ಎಮ್.ಇ. ಸೊಸೈಟಿ ಚೇರ್ ಮನ್ನರಾದ ಅಹ್ಮದಹುಸೇನ ಖಾಜಿ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ಕನ್ನಡ ಉಪನ್ಯಾಸಕರಾದ ಪ್ರೊ. ಎಚ್.ಎಸ್. ದಳವಾಯಿ ಇವರು ಕೃತಿ ಪರಿಚಯ ಮಾಡಲಿದ್ದಾರೆ.

Read More

ವ್ಯಾಸ ಮಹಾಭಾರತವು ಸಾವಿರಾರು ಕೃತಿಗಳಿಗೆ ಜನ್ಮವಿತ್ತ ಮೂಲ ಬೇರು. ಸಾವಿರಾರು ಮಂದಿ ಲೇಖಕರು ಇದರ ಕಥೆಯನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಕೆಲವರು ಇದ್ದದ್ದಿದ್ದ ಹಾಗೆಯೇ ರಚಿಸಿದರೆ ಇನ್ನು ಕೆಲವರು ಆಧುನಿಕ ಯುಗಕ್ಕೆ ಅನ್ವಯಿಸುವ ಹಾಗೆ ತಮ್ಮ ಕಲ್ಪನೆಗಳ ಮೂಸೆಯಲ್ಲಿ ಅದನ್ನು ಅದ್ದಿ ಕಥೆಗೆ ಬೇರೆಯೇ ಆದ ಸ್ವರೂಪವನ್ನು ಕೊಟ್ಡಿದ್ದಾರೆ.‌ ಉದಯಕುಮಾರ್ ಹಬ್ಬು ಅವರ ‘ಉತ್ತರೆ’ ಮೂಲದ ಮರು ಓದು ಎಂಬ ಪರಿಕಲ್ಪನೆಯಲ್ಲಿ ಬರೆಯಲ್ಪಟ್ಟಿಲ್ಲವಾದರೂ ಮೂಲದ ಕೆಲವು ವಿಚಾರಗಳ ಮೇಲೆ ಹೊಸ ಬೆಳಕನ್ನು ಹಾಯಿಸಲು ಪ್ರಯತ್ನಿಸಿದೆ. ಉತ್ತರೆಯ ಪಾತ್ರವು ಮೂಲದಲ್ಲಿ ಯಾವುದೇ ಪ್ರಾಮುಖ್ಯವನ್ನು ಪಡೆಯದೆ ಅವಗಣನೆಗೆ ತುತ್ತಾದ ಪಾತ್ರ. ಹಬ್ಬು ಅವರು ಈ ಪಾತ್ರಕ್ಕೆ ತಮ್ಮ ಕಲ್ಪನೆಯ ಮೂಲಕ ಜೀವತುಂಬಿ ಆಕೆಯನ್ನು ಒಂದು ಪ್ರಬುದ್ಧ ಚಿಂತನೆಯುಳ್ಳ ಮಹತ್ವದ ಪಾತ್ರವನ್ನಾಗಿಸಿದ್ದಾರೆ. 206 ಪುಟಗಳ ಈ ಕಾದಂಬರಿ ಪೌರಾಣಿಕವೂ ಹೌದು. ಮರು ಸೃಷ್ಟಿಯೂ ಹೌದು. ‘ಉತ್ತರೆ’ ಕಾದಂಬರಿ ಆರಂಭವಾಗುವುದು ವಿರಾಟಪರ್ವದಲ್ಲಿ ಉತ್ತರೆಯ ಆಗಮನದೊಂದಿಗೆ. ಈ ನೆಪದಲ್ಲಿ ಲೇಖಕರು ನಮಗೆ ಪಾಂಡವರ ಅಜ್ಣಾತವಾಸದ ಕಥೆಯನ್ನೂ ಅದಕ್ಕೆ…

Read More

ಕಾರ್ಕಳ : ಕಾರ್ಕಳ ಯಕ್ಷ ಕಲಾರಂಗದವರು ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸಹಯೋಗದೊಂದಿಗೆ ಹದಿನಾಲ್ಕನೇ ವರ್ಷದ ಯಕ್ಷಗಾನ ಶಿಕ್ಷಣ ಅಭಿಯಾನವು ದಿನಾಂಕ 26 ಜೂನ್ 2025ರಂದು ಕಾರ್ಕಳ ಕಾರೋಲ್ ಗುಡ್ಡೆ ಕಲ್ಲಗುಪ್ಪೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ತರಗತಿಯ ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿವೃತ್ತ ಪ್ರಾಚಾರ್ಯ ಕಲಾರಂಗದ ಸಂಚಾಲಕ ಪ್ರೊ. ಪದ್ಮನಾಭ ಗೌಡ ಇವರು ಮಾತನಾಡಿ “ಕಲೆಯನ್ನು ಪ್ರೀತಿಸಿದವರು ಕಲಾವಿದರಾಗುತ್ತಾರೆ, ಕಲಾವಿದರನ್ನು ಪ್ರೀತಿಸಿದವರು ಕಾಮಧೇನು ಆಗುತ್ತಾರೆ. ಈ ಮಾತಿಗೆ ಸಾಕ್ಷಿ ನಮ್ಮ ಕಲಾವಿದರ ಕಾಮಧೇನು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟರು” ಎಂದು ಹೇಳಿದರು. ಮಿಯ್ಯಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಸನ್ಮತಿ ನಾಯಕ್ ಅಧ್ಯಕ್ಷತೆ ವಹಿಸಿ, ಯಕ್ಷ ಶಿಕ್ಷಣ ತರಗತಿ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಶಾಲಾ ಸಂಸ್ಥಾಪಕರಾದ ಇಸ್ರೋ ವಿಜ್ಞಾನಿ ಜನಾರ್ದನ ರಾವ್ ಇಡ್ಯಾ ಮಾತನಾಡಿ “ನಮ್ಮ ಕಲೆಯನ್ನು ಮುಂದಿನ ಕಾಲಕ್ಕೆ ಕೊಂಡೊಯ್ಯುವ ಸುಲಭ ವಿಧಾನ ಈ ಯಕ್ಷ…

Read More

ಬೆಂಗಳೂರು : ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಸಂಸ್ಥೆ ವತಿಯಿಂದ ದಿನಾಂಕ 15 ಜೂನ್ 2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ರಾಷ್ಟ್ರ ಮಟ್ಟದ ‘ಕರುನಾಡ ಕಲ್ಪವೃಕ್ಷ ಪ್ರಶಸ್ತಿ’ ಪ್ರದಾನ ಸಮಾರಂಭ ಹಾಗೂ ನೃತ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ನ್ಯಾಯಾಧೀಶರು ಸರ್ವೋಚ್ಚ ನ್ಯಾಯಾಲಯ ಹಾಗೂ ಮಾಜಿ ಲೋಕಾಯುಕ್ತರು ಶ್ರೀಮಾನ್ ಎನ್. ಸಂತೋಷ್ ಹೆಗ್ಡೆಯವರು ದೀಪ ಬೆಳಗಿಸಿ ಉದ್ಘಾಟನಾ ಭಾಷಣವನ್ನು ಮಾಡಿದರು. ಸಾಧಕರಿಗೆ ‘ಕರುನಾಡ ಕಲ್ಪವೃಕ್ಷ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲೆಯ ಡಾ. ಶೇಖ್ ವಾಹಿದ್ ದಾವೂದ್, ಖ್ಯಾತ ಗಾಯಕರು ಚಲನಚಿತ್ರ ನಟರಾದ ಶಶಿಧರ್ ಕೋಟೆ, ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿ ಕಾರ್ಗದ್ದೆ, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ರವಿ ಶೆಟ್ಟಿ ಬೈಂದೂರು, ಗೌರವ ಅಧ್ಯಕ್ಷರಾದ ಡಾ. ಕೆಂಚನೂರು ಶಂಕರ್, ನಾಟ್ಯ ಮಯೂರಿ ನೃತ್ಯ ಸಂಸ್ಥೆ ಸ್ಥಾಪಕ ಅಧ್ಯಕ್ಷರಾದ ವಿದುಷಿ ಪ್ರೇಮಾಂಜಲಿ ಆಚಾರ್ಯ ಹಾಗೂ…

Read More