Subscribe to Updates
Get the latest creative news from FooBar about art, design and business.
Author: roovari
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಹಿರಿಯರ ಕವಿಗೋಷ್ಠಿಯು ದಿನಾಂಕ 09 ಡಿಸೆಂಬರ್ 2025ರಂದು ಮಡಿಕೇರಿಯ ಕೊಡಗು ಪತ್ರಿಕಾ ಭವನ ಸಭಾಂಗಣದಲ್ಲಿ ಪ್ರಸ್ತುತಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕವಿ ಕಾಜೂರು ಸತೀಶ್ “ಆಧುನಿಕತೆಯ ಸ್ಪರ್ಶವಿಲ್ಲದೆ, ಮೊಬೈಲ್ ಪೂರ್ವ ಯುಗದಲ್ಲಿ ಬದುಕಿನ ಅನುಭವಗಳನ್ನು ಸಾಹಿತ್ಯದ ಮೂಲಕ ಹೊರ ಹೊಮ್ಮಿಸುತ್ತಿದ್ದ ಹಿರಿಯ ಸಾಹಿತಿಗಳು ಹಾಗೂ ಯುವ ಬರಹಗಾರರಿಗೆ ಸಾಹಿತ್ಯ ರಚನೆಯತ್ತ ಹಿರಿಯರು ಪ್ರೇರಣೆ ನೀಡುವ ಮೂಲಕ ಎರಡು ಪೀಳಿಗೆಗಳ ಕೊಂಡಿ ಹಿರಿಯ ಸಾಹಿತಿಗಳ ಕವಿಗೋಷ್ಠಿ ಮೂಲಕ ಆಗಬೇಕು. ಹಿರಿಯರ ಕವಿಗೋಷ್ಠಿ ಕಾರ್ಯಕ್ರಮಕ್ಕೆ ನನ್ನಂತಹ ಯುವ ಬರಹಗಾರರನ್ನು ಉದ್ಘಾಟನೆಗೆ ಅವಕಾಶ ನೀಡಿ ಹಿರಿಯ ಮತ್ತು ಯುವಕರ ಸಾಹಿತ್ಯದ ಕುಂಡಿಯನ್ನು ಸಾಹಿತ್ಯ ಪರಿಷತ್ತು ನಿರ್ಮಿಸಿಕೊಟ್ಟಿದೆ. ಮೊಬೈಲ್, ಇಂಟರ್ನೆಟ್, ಫೇಸ್ಬುಕ್ ಇವುಗಳ ಕಲ್ಪನೆಯೇ ಇಲ್ಲದ ದಿನಗಳಲ್ಲಿ ಕುಟುಂಬದ ಸದಸ್ಯರೊಡನೆ ಬೆರೆತು ಯಾವುದೇ ಅಡೆತಡೆಗಳಿಲ್ಲದೆ ನಮ್ಮ ಹಿರಿಯರು ತಮ್ಮ ಅನುಭವವನ್ನು ಬರಹ ತಿಳಿಸುತ್ತಿದ್ದರು. ಆದರೆ ಅಂತಹ ಪರಿಸ್ಥಿತಿಗಳಿಗೆ ತದ್ವಿರುದ್ಧವಾಗಿರುವ ಪರಿಸ್ಥಿತಿಯನ್ನು ನಾವಿಂದು ಕಾಣುತ್ತಿದ್ದೇವೆ” ಎಂದರು.…
ಮೂಡುಬಿದಿರೆ : ಮೂಡುಬಿದಿರೆ ಆಲಂಗಾರು ಶ್ರೀ ಬಡಗು ಮಹಾಗಣಪತಿ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಡಿಜಿ ಯಕ್ಷ ಫೌಂಡೇಶನ್ ವತಿಯಿಂದ ದಿನಾಂಕ 09 ಡಿಸೆಂಬರ್ 2025ರಂದು ಶ್ರೀ ಹರಿಲೀಲಾ ಯಕ್ಷನಾದದ 5ನೇ ವರ್ಷದ ಪ್ರಶಸ್ತಿ ಪ್ರದಾನ ಮತ್ತು ಯಕ್ಷ ನಾದೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅರ್ಥಧಾರಿ, ಯಕ್ಷಗಾನ ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿ “ಯಕ್ಷಗಾನದ ಹಿಮ್ಮೇಳದಲ್ಲಿ ಚೆಂಡೆಯ ಅಬ್ಬರದಿಂದ ಮದ್ದಲೆ ನೇಪಥ್ಯಕ್ಕೆ ಸರಿಯುತ್ತಿದೆ. ಪಂಚವಾದ್ಯಗಳೂ ಮೂಲೆ ಗುಂಪಾಗಲು ಚೆಂಡೆಯೇ ಕಾರಣವಾಗಿದೆ. ಚೆಂಡೆಯ ಬಳಕೆಯನ್ನು ಮಿತಗೊಳಿಸದಿದ್ದರೆ ಭವಿಷ್ಯದಲ್ಲಿ ಮದ್ದಳೆಯು ಯಕ್ಷಗಾನದಿಂದ ಕಣ್ಮರೆಯಾಗಬಹುದು” ಎಂದು ಆತಂಕ ವ್ಯಕ್ತಪಡಿಸಿದರು. ಯಕ್ಷಗಾನದ ಹಿರಿಯ ಮದ್ದಲೆಗಾರ ಪದ್ಯಾಣ ಶಂಕರನಾರಾಯಣ ಭಟ್ ಇವರಿಗೆ 2015ನೇ ಸಾಲಿನ ‘ಶ್ರೀ ಹರಿಲೀಲಾ ಯಕ್ಷನಾದ ಪುರಸ್ಕಾರ’ವನ್ನು ಪ್ರದಾನ ಮಾಡಲಾಯಿತು. ಪತ್ನಿ ವನಜಾಕ್ಷಿ ಭಟ್ ಇವರನ್ನು ಗೌರವಿಸಲಾಯಿತು. ಎಂ.ಎಲ್. ಸಾಮಗ ಸಂಸ್ಮರಣಾ ಭಾಷಣ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪದ್ಯಾಣ ಶಂಕರನಾರಾಯಣ ಭಟ್ “ನಾಲ್ಕು ದಶಕಗಳ ಕಾಲ ಯಕ್ಷಗಾನ ತಿರುಗಾಟ ನಡೆಸಿದ್ದು…
ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ಪ್ರೊ. ಕ.ವೆಂ. ರಾಜಗೋಪಾಲ್ ಜನ್ಮ ಶತಮಾನೋತ್ಸವ ಸಮಿತಿ ಇವರ ಜಂಟಿ ಆಶ್ರಯದಲ್ಲಿ ರಂಗಚಿಂತಕ ಪ್ರೊ. ಕ.ವೆಂ. ರಾಜಗೋಪಾಲ್ ‘ಜನ್ಮ ಶತಮಾನೋತ್ಸವ’ ಕಾರ್ಯಕ್ರಮವನ್ನು ದಿನಾಂಕ 13 ಡಿಸೆಂಬರ್ 2025ರಂದು ಮಧ್ಯಾಹ್ನ 3-30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ರಂಗ ಚಿಂತಕ ಡಾ. ಕೆ. ಮರುಳಸಿದ್ಧಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಬಿ.ಕೆ. ಹರಿಪ್ರಸಾದ್ ಇವರು ಉದ್ಘಾಟನೆ ಮಾಡಲಿದ್ದಾರೆ. ಹಿರಿಯ ಸಾಹಿತಿ ಡಾ. ಹಂ. ಪ. ನಾಗರಾಜಯ್ಯ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಇವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸಂಜೆ 7-30 ಗಂಟೆಗೆ ಪ್ರದರ್ಶನ ಕಲಾ ವಿಭಾಗ ತಂಡದವರಿಂದ ‘ಅನುಗ್ರಹ’ ನಾಟಕ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ 3-30 ಗಂಟೆಗೆ ಪ್ರೊ. ಕ. ವೆಂ. ರಾಜಗೋಪಾಲ್ ವ್ಯಕ್ತಿತ್ವ – ಒಡನಾಟ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಪ್ರಸಿದ್ಧ…
ಬೆಂಗಳೂರು : ನಾಟಕ ಬೆಂಗ್ಳೂರ್ -18ರ ರಂಗಸಂಭ್ರಮದಲ್ಲಿ ದಿನಾಂಕ 09 ಡಿಸೆಂಬರ್ 2025ರಂದು ಕಲಾಗ್ರಾಮ ಸಮುಚ್ಚಯ ಭವನ ಮಲ್ಲತಹಳ್ಳಿಯಲ್ಲಿ ವಿಜಯನಗರ ಬಿಂಬ ತಂಡದವರು ‘ಅನೂಹ್ಯ’ ನಾಟಕವನ್ನು ಪ್ರದರ್ಶಿಸಿದರು. ‘ಅನೂಹ್ಯ’ ಇದೊಂದು ಊಹೆಗೂ ನಿಲುಕದ್ದು. ಕನ್ನಡದ ಭಾಷೆಯಲ್ಲಿ ಈ ಪದವು ಬಳಕೆಯಲ್ಲಿರುವುದು ಅಪರೂಪ. ಬರಹದಲ್ಲಿಯೂ ಕೂಡ ಬಳಸುವುದು ವಿರಳ. ಬದುಕಿನ ಬಣ್ಣಗಳ ಮನಸ್ಸು, ಅರಿವುಗಳ ಡೋಲಾಯಮಾನ, ಎಲ್ಲರೂ ನಿರಂತರವಾಗಿ ಅನಂತ ಕತ್ತಲೆಯಲ್ಲಿ ಲೀನವಾಗುವ ಮುನ್ನ ಬಂದು ಹೋಗುವ ತಾಣದಲ್ಲಿ ಎಲ್ಲರೂ ಸತ್ತಿರುವೆವೆಂಬ ಭ್ರಮೆಯಲ್ಲಿ, ತಾವಿರುವ ಜಾಗವು ಸ್ವರ್ಗವೋ ನರಕವೋ ಎಂದು ತಿಳಿಯದೆ, ಸತ್ತ ಮೇಲೂ ಬದುಕುವುದು ಸತ್ತ ಹಾಗೆ ಬದುಕುವುದು ಸಾಯೋತನಕ ಬದುಕುವುದು ಬತ್ತಿದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡು, ಸಮಾಜದ ವಾಸ್ತವವನ್ನು ಕಠೋರ ಸತ್ಯವನ್ನು ತಿಳಿಹಾಸ್ಯದ ಮೂಲಕ ಬಿಂಬಿಸುವ ನಾಟಕವೇ ಈ ‘ಅನೂಹ್ಯ’. ಅಲ್ಲಲ್ಲಿ ತಮಾಷೆಯ ಸಂಭಾಷಣೆಗಳು ಪ್ರೇಕ್ಷಕರಿಗೆ ಮುದ ನೀಡುತ್ತವೆ – ಗರುಡ ಪುರಾಣದ ಯಮ ಆಗಿರಬಹುದೇ ಆ ಯಮ್ಮ, ಬಸ್ಸನ್ನೇನೋ ಉಚಿತವಾಗಿ ಬಿಟ್ರು, ಆದರೆ ಬಸ್ ಸ್ಟಾಪ್ ನಲ್ಲಿ ಬಸ್ಸೇ…
ಬೆಂಗಳೂರು : ಗಜಲ್ ಬರೆಯುತ್ತಿರುವ ಬರಹಗಾರರಿಗಾಗಿ ದಿನಾಂಕ 28 ಡಿಸೆಂಬರ್ 2025ರ ಭಾನುವಾರ ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 4-30ರವರೆಗೆ ಒಂದು ದಿನದ ಕಮ್ಮಟ ಮತ್ತು ಗಜಲ್ ಗೋಷ್ಠಿಯನ್ನು ಕರ್ನಾಟಕ ಗಜಲ್ ಅಕಾಡೆಮಿಯು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುತ್ತದೆ. ‘ಕಮ್ಮಟ’ಕ್ಕೆ ಎಂದು ನಮೂದಿಸಿ ನಿಮ್ಮಗಳ ಹೆಸರನ್ನು ದಿನಾಂಕ 15 ಡಿಸೆಂಬರ್ 25ರೊಳಗೆ ವಾಟ್ಸಾಪ್ ಗೆ ಕಳುಹಿಸಬೇಕು. ಕಮ್ಮಟದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು. ಇದಕ್ಕೆ 15ರಿಂದ 20 ಜನರಿಗೆ ಮಾತ್ರ ಅವಕಾಶವಿರುತ್ತದೆ. 10 ಜನ ‘ಗಜಲ್ ಗೋಷ್ಠಿ’ ಎಂದು ನಮೂದಿಸಿ ಕಳುಹಿಸಬೇಕು. ಮೊದಲು ನೋಂದಾಯಿಸಿಕೊಂಡವರಿಗೆ ಆಧ್ಯತೆ ನೀಡಲಾಗುವುದು. ಕಾರ್ಯಕ್ರಮ ನಡೆಯುವ ಸ್ಥಳ : ಶಾಸಕರ ಬಿ.ಬಿ.ಎಂ.ಪಿ. ಕಛೇರಿ, ವಿಜಯನಗರ, 3ನೇ ಮುಖ್ಯ ರಸ್ತೆ ಹೊಸಹಳ್ಳಿ ಮೆಟ್ರೋ ಸ್ಟೇಷನ್ ಹತ್ತಿರ. ಆದಿಚುಂಚನಗಿರಿ ಮಠದ ಹಿಂಭಾಗ, ಸಿದ್ದಗಂಗಾ ಪಬ್ಲಿಕ್ ಸ್ಕೂಲ್ ಪಕ್ಕ, ಬೆಂಗಳೂರು 40. ಗಜಲ್ ಕಮ್ಮಟದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಕೋರಿಕೆ : 77601 82299.
ಕಡಬ : ಕುಟ್ರುಪ್ಪಾಡಿ ಗ್ರಾಮದ ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀ ಜನಾರ್ದನ ಆಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ದಿನಾಂಕ 20 ಮತ್ತು 21 ಡಿಸೆಂಬರ್ 2025ರಂದು ನಡೆಯಲಿರುವ ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನಾಧ್ಯಕ್ಷರಾಗಿ ನೇತ್ರಾವತಿ ತುಳುಕೂಟ ರಾಮಕುಂಜ ಇದರ ಅಧ್ಯಕ್ಷರಾದ ಕೆ. ಸೇಸಪ್ಪ ರೈ ರಾಮಕುಂಜ ಇವರು ಆಯ್ಕೆಯಾಗಿದ್ದಾರೆ. ರಾಮಕುಂಜ ಗ್ರಾಮದ ಬಾಂತೊಟ್ಟು ಎಂಬಲ್ಲಿ ಕೃಷಿ ಕುಟುಂಬದ ದಿ. ದೂಮಣ್ಣ ರೈ ಹಾಗೂ ದಿ. ಅಪ್ಪಿ ಹೆಂಗ್ಸು ಇವರ ಪುತ್ರರಾಗಿ 10 ಜೂನ್ 1947ರಲ್ಲಿ ಜನಿಸಿದ ಕೆ. ಸೇಸಪ್ಪ ರೈಯವರಿಗೆ ಈಗ 78ರ ಹರೆಯ. ಈ ಹರೆಯದಲ್ಲೂ ಸೇಸಪ್ಪ ರೈ ಇವರು ತುಳು ಸಂಸ್ಕೃತಿ, ಆಚಾರ-ವಿಚಾರವನ್ನು ನಾಡಿನಾದ್ಯಂತ ಪಸರಿಸುವಲ್ಲಿ ಶ್ರಮ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇವರನ್ನು ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ರಾಮಕುಂಜದಲ್ಲೇ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಕೆ. ಸೇಸಪ್ಪ ರೈ ಅವರು 1968ರಿಂದ 2005ರ ತನಕ ಸುಮಾರು 37 ವರ್ಷ ರಾಮಕುಂಜದ ಶ್ರೀ ರಾಮ ಕುಂಜೇಶ್ವರ ಪ್ರೌಢ…
ಮಂಗಳೂರು : ಶಿಶಿರ – ಶಿಕ್ಷಕ ಶಿಕ್ಷಣ ರಂಗ, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗ ಹಾಗೂ ತುಳು ಸ್ನಾತಕೋತ್ತರ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ ತುಳು ಪರ್ಬ ಸಂಭ್ರಮ, ವಿಚಾರ ಗೋಷ್ಠಿ ಮತ್ತು ಕವಿಗೋಷ್ಠಿ ಕಾರ್ಯಕ್ರಮವು ದಿನಾಂಕ 05 ಡಿಸೆಂಬರ್ 2025ರಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ “ಒಂದು ಭಾಷೆ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ತೋರಿಸುತ್ತದೆ. ಅಲ್ಲಿನ ಆಹಾರ ಶೈಲಿ, ರೀತಿ-ನೀತಿ ಎಲ್ಲವೂ ಭಾಷೆಯ ಮೇಲೆ ಅವಲಂಬಿತವಾಗಿರುತ್ತದೆ. ಇಡೀ ದೇಶದಲ್ಲೇ ತುಳುನಾಡಿನ ಸಂಸ್ಕೃತಿ, ಆಹಾರ ಶೈಲಿ, ಸಂಪ್ರದಾಯ, ಆಚರಣೆ ಎಲ್ಲವೂ ವಿಭಿನ್ನವಾಗಿದೆ. ಹಾಗಾಗಿಯೇ ಇದನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ. ಯಾವುದೇ ಭಾಷೆ ಉಳಿಯಬೇಕಾದರೆ ಜನರ ಸಹಕಾರ ಅಗತ್ಯವಾಗಿ ಬೇಕಾಗುತ್ತದೆ. ಭಾಷೆ ಮೇಲೆ ಅಭಿಮಾನ ಇದ್ದಾಗ ಮಾತ್ರ ಭಾಷೆ ಉಳಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ…
ಮಂಗಳೂರು : ತುಳುಕೂಟ ಕುಡ್ಲ ಮತ್ತು ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇವರ ವತಿಯಿಂದ ನಡೆಯುತ್ತಿರುವ ಮರೋಳಿ ಬಿ. ದಾಮೋದರ ನಿಸರ್ಗ ಸಂಸ್ಮರಣೆ-ತುಳು ತಾಳಮದ್ದಳೆ ಸಪ್ತಾಹದ ನಾಲ್ಕನೇ ದಿನದ ಕಾರ್ಯಕ್ರಮ ದಿನಾಂಕ 10 ಡಿಸೆಂಬರ್ 2025ರಂದು ಮಂಗಳೂರಿನ ಕಂಕನಾಡಿ ಗರೋಡಿಯ ದೇವಿ ಬೈದೆತಿ ಬಾವಡಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿ.ಸಿ. ರೋಡಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕ, ನಿರ್ದೇಶಕ ಡಾ. ತುಕಾರಾಂ ಪೂಜಾರಿ “ತುಳುವಿಗೂ ಯಕ್ಷಗಾನಕ್ಕೂ ಅವಿನಾಭಾವ ಸಂಬಂಧ ಇದೆ. ಯಾಕೆಂದರೆ ಹಿಂದಿನ ಕಲಾವಿದರ್ಯಾರೂ ವಿದ್ಯಾಸಂಪನ್ನರಾಗಿರದಿದ್ದರೂ ಕಲೆಯನ್ನು, ಧರ್ಮವನ್ನು ಪಸರಿಸಿದರು. ಬಣ್ಣದ ಮನೆಯಲ್ಲಿ ತುಳುವಿನಲ್ಲೇ ಮಾತನಾಡಿದರೂ ನಾಲ್ಕು ಹೆಜ್ಜೆ ನಡೆದು ರಂಗ ಪ್ರವೇಶ ಮಾಡುತ್ತಾ ಶುದ್ಧ ಕನ್ನಡದಲ್ಲೇ ಸಂಭಾಷಿಸುತ್ತಾ ಕಲೆಯನ್ನು ಶ್ರೀಮಂತಗೊಳಿಸಿದರು. ಹಾಗಾಗಿ ತುಳುವಿನ ಪಂಚಾಂಗದಲ್ಲಿ ಯಕ್ಷ ವೈಭವ ಮೆರೆದು ಪ್ರೇಕ್ಷಕರಿಗೂ ದಿವ್ಯ ಸಂದೇಶವನ್ನು ಪಸರಿಸುತ್ತಾರೆ. ಈಗಲೂ ಈ ಕಾರ್ಯವನ್ನು ತುಳುಕೂಟ ನಡೆಸಿಕೊಂಡು ಬರುತ್ತಿದೆ. ದಾಮೋದರ ನಿಸರ್ಗರ ಪಥದರ್ಶನದ ಈ ಹೊತ್ತು ಈ ತಾಳಮದ್ದಳೆ ಸಪ್ತಾಹ ತುಳುವಿನಲ್ಲೇ…
ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಉಡುಪಿ ಆಶ್ರಯದಲ್ಲಿ ಉಡುಪಿಯ ರಾಧಾಕೃಷ್ಣ ನೃತ್ಯನಿಕೇತನದವರಿಂದ 23ನೇ ವರ್ಷದ ‘ಭರತಮುನಿ ಜಯಂತ್ಯುತ್ಸವ’ದ ಪ್ರಯುಕ್ತ ನೃತ್ಯ ಪ್ರದರ್ಶನವು ದಿನಾಂಕ 26 ಅಕ್ಟೋಬರ್ 2025ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು. ಬೆಳಗ್ಗೆ ರಾಧಾಕೃಷ್ಣ ನೃತ್ಯ ನಿಕೇತನದ ಶಿಷ್ಯ-ಪ್ರಶಿಷ್ಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ವಿದುಷಿ ಸುಶ್ಮಿತಾ ಗಿರಿರಾಜ್, ವಿದುಷಿ ಶ್ರೀವಿದ್ಯಾ ಸಂದೇಶ್ ಹಾಗೂ ವಿದುಷಿ ಶ್ರೀಕಲ್ಯಾಣಿ ಜೆ. ಪೂಜಾರಿ ಇವರು ತಮ್ಮ ಶಿಷ್ಯರೊಡಗೂಡಿ ಅತ್ಯದ್ಭುತವಾದ ನೃತ್ಯ ಕಾರ್ಯಕ್ರಮವನ್ನು ರಮಣೀಯವಾಗಿ ಪ್ರದರ್ಶಿಸಿದರು. ಮಧ್ಯಾಹ್ನ ಇದೇ ಸಂಸ್ಥೆಯ ವಿದ್ಯಾರ್ಥಿನಿಯರಿಂದ ‘ನೃತ್ಯ ಸಿಂಚನಾ’ ಕಾರ್ಯಕ್ರಮವು ಬಹಳ ಸುಂದರವಾಗಿ ಮೂಡಿಬಂದಿತು. ಸಂಜೆ ‘ನೃತ್ಯಾಭಿಷೇಕಂ’ ಕಾರ್ಯಕ್ರಮವು ಸಂಸ್ಥೆಯ ಶಿಷ್ಠೆಯರಿಂದ ಕೂಚುಪುಡಿಯ ಲಾಲಿತ್ಯಮಯವಾದ ಮೆರುಗನ್ನು ಹೊರಹೊಮ್ಮಿಸಿತು. ಶ್ರೀರಂಗನನ್ನು ವಿಧವಿಧವಾಗಿ ಬಣ್ಣಿಸುವ ನೃತ್ಯದೊಂದಿಗೆ ಕಾರ್ಯಕ್ರಮವನ್ನು ಆರಂಭಗೊಳಿಸಿ, ಅನಂತರ ರಾಮಾಯಣವನ್ನು ಬಣ್ಣಬಣ್ಣವಾಗಿ ವರ್ಣಿಸುವ ‘ರಾಮಾಯಣ ಶಬ್ದಂ’ ಅನ್ನು ಪ್ರದರ್ಶಿಸಲಾಯಿತು. ಶಿವ-ಪಾರ್ವತಿಯರ ‘ಆನಂದ ತಾಂಡವ’ವು ಕಲಾಭಿಮಾನಿಗಳ ಗಮನ ಸೆಳೆದರೆ, ಇಲ್ಲಿಂದ ಮುಂದುವರಿದ ಅರ್ಧನಾರೀಶ್ವರ…
ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಕಂಚಮಾರನಹಳ್ಳಿ ಗ್ಯಾರಂಟಿ ರಾಮಣ್ಣನವರ ಸ್ವಗೃಹದಲ್ಲಿ ದಿನಾಂಕ 10 ಡಿಸೆಂಬರ್ 2025ರಂದು ಅಧಿಕೃತ ಆಹ್ವಾನ ನೀಡಿದ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಇವರು ಮಾತನಾಡಿ “ಗ್ಯಾರಂಟಿ ರಾಮಣ್ಣನವರು ಜಿಲ್ಲೆ ಕಂಡಂತಹ ಸಾತ್ವಿಕ ಸ್ವಭಾವದ ಪ್ರಬುದ್ಧ ಬರಹಗಾರ, ಗಾಯಕ, ರಂಗಕರ್ಮಿ. ನೂರಾರು ಹೋರಾಟಗೀತೆಗಳನ್ನು ಬರೆದು ಸ್ವತಃ ಹಾಡಿ ರೈತ ಹಾಗೂ ಬಂಡಾಯ ಚಳವಳಿಗಳಲ್ಲಿ ರಾಜ್ಯಾದ್ಯಂತ ಭಾಗವಹಿಸಿ ನೂರಾರು ಶಿಷ್ಯರನ್ನು ಹೊಂದಿದ್ದಾರೆ. ಹಾಸನದಲ್ಲಿ ಯಾವುದೇ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳು ನಡೆಯಲಿ ಅಲ್ಲಿ ಗ್ಯಾರಂಟಿ ರಾಮಣ್ಣನವರು ಹಾಜರಿರುತ್ತಾರೆ. ನಮ್ಮಂತಹ ಅನೇಕ ವ್ಯಕ್ತಿ ಹಾಗೂ ಸಂಘಟನೆಗಳಿಗೆ ಮಾರ್ಗದರ್ಶಿಯಾಗಿ ರಾಮಣ್ಣವರು ನಿರಂತರವಾಗಿ ಶಕ್ತಿಯಾಗಿ ನಿಲ್ಲುತ್ತಾರೆ” ಎಂದು ಅಭಿಪ್ರಾಯಪಟ್ಟರು. ನಿಯೋಜಿತ ಸಮ್ಮೇಳನಾಧ್ಯಕ್ಷ ಗ್ಯಾರಂಟಿ ರಾಮಣ್ಣ ಆಹ್ವಾನ ಸ್ವೀಕರಿಸಿ ಮಾತನಾಡಿ “ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪ್ರಾರಂಭದಿಂದಲೂ ಎಲೆಮರೆ ಸಾಧಕರನ್ನು ಗುರುತಿಸಿ ಮುಖ್ಯ ವೇದಿಕೆಗೆ ತರುವ ಕೆಲಸವನ್ನು ಮಾಡುತ್ತಾ ಬಂದಿದೆ. ಕಳೆದ ಏಳೆಂಟು ವರ್ಷಗಳಿಂದಲೂ ನಾನು ವೇದಿಕೆಯೊಂದಿಗೆ ಇದ್ದೇನೆ. ಐದಾರು…