Author: roovari

ಮಂಗಳೂರು : ಡಾ. ವಾಮನ್ ರಾವ್ ಸಾರತ್ಯದ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯದ ದಕ್ಷಿಣ ಕನ್ನಡ ಜಿಲ್ಲಾ ಘಟಕವನ್ನು ದಿನಾಂಕ 25 ಮೇ 2025ರಂದು ಮಂಗಳೂರು ತಾಲೂಕು ಮಹಿಳಾ ಒಕ್ಕೂಟ ಸಭಾ ಭವನದಲ್ಲಿ ಕನ್ನಡ ಧ್ವಜವನ್ನು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರಿಮತಿ ರೇಖಾ ಸುದೇಶ್ ರಾವ್ ಇವರಿಗೆ ನೀಡಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರು ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರೂ ಆದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ “ಕನ್ನಡ ಭವನದ ಕನ್ನಡಪರ ಚಟುವಟಿಕೆಗಳು ಅನುಕರಣೀಯ ಹಾಗೂ ಶ್ಲಾಘನೀಯ. ಹಿರಿಯರನ್ನು ಗೌರವಿಸಿ, ಪ್ರತಿಭಾವಂತರನ್ನು ಪುರಸ್ಕರಿಸಿ, ಯುವ ಪ್ರತಿಭೆಗಳನ್ನು ಹುಡುಕಿ ತೆಗೆದು ‘ಭರವಸೆಯ ಬೆಳಕು’ ಎಂಬ ಅರ್ಹ ನಾಮದ ಪ್ರಶಸ್ತಿ ನೀಡಿ, ವಿವಿಧ ಸಮಾನ ಮನಸ್ಕ ಸಂಘಟನೆಗಳನ್ನು, ಸಂಘಟಕರನ್ನು ಒಂದೇ ವೇದಿಕೆಯಡಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡುವ ವಾಮನ್ ರಾವ್ ಬೇಕಲರ ಮುಂದಿನ ಎಲ್ಲ ಕನ್ನಡಪರ ಚಟುವಟಿಕೆಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ.…

Read More

ಕಿನ್ನಿಗೋಳಿ : ಕಲಾಬ್ದಿ ಗೋವಿಂದದಾಸ ಕಾಲೇಜು ಸುರತ್ಕಲ್ ಇವರ ಸಹಕಾರದಲ್ಲಿ ಕಲಾಯುಗ ಹಾಗೂ ಯುಗಪುರುಷ ಕಿನ್ನಿಗೋಳಿಯ ಸಹಯೋಗದಲ್ಲಿ ಕಲಾಯುಗ ಪ್ರಸ್ತುತ ಪಡಿಸಿದ ಚರಿತ್ ಸುವರ್ಣ ನಿರ್ದೇಶನದ ಅಕ್ಷರ ಕೆ.ವಿ. ಇವರ ಸ್ವಯಂವರಲೋಕ ಆಧಾರಿತ ನಾಟಕ ‘ಹುಡುಕಾಟದಲ್ಲಿ’ ಇದರ ಪ್ರಥಮ ಪ್ರದರ್ಶನವು ದಿನಾಂಕ 24 ಮೇ 2025ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯುಗಪುರುಷದ ಭುವನಾಭಿರಾಮ ಉಡುಪರು “ಉತ್ತಮ ತರಬೇತಿ ನೀಡಿ ಯುವ ಕಲಾವಿದರನ್ನು ಸೃಷ್ಟಿ ಮಾಡಿ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಉತ್ತಮ ಪ್ರದರ್ಶನ ನೀಡುವಲ್ಲಿ ಸುರತ್ಕಲ್ ಕಲಾಯುಗ ತಂಡ ಯಶಸ್ವಿಯಾಗಿದೆ” ಎಂದು ಹೇಳಿದರು. ಕಿನ್ನಿಗೋಳಿ ವಿಜಯಾ ಕಲಾವಿದರು ಸಂಘಟನೆಯ ಅಧ್ಯಕ್ಷ ಶರತ್ ಶೆಟ್ಟಿ, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಹರೀಶ್ ಆಚಾರ್ಯ, ವಿನೋದ್ ಶೆಟ್ಟಿ ಕೃಷ್ಣಾಪುರ, ನರೇಂದ್ರ ಕೆರೆಕಾಡು, ರಾಘು ಗುಜರನ್, ರೇಖಾ ಸುವರ್ಣ ಶುಭ ಹಾರೈಸಿದರು. ನಿರ್ದೇಶಕ ಚರಿತ್ ಸುವರ್ಣ, ಕಲಾವಿದರಾದ ವೈಭವಿ, ಪ್ರೀತೇಶ್ ಕೊಡೆತ್ತೂರು, ಹಿತ ಉಮೇಶ್, ಪ್ರೀತಿ ಭಗತ್, ಚರಣ್ ಎಸ್. ನಾಯ್ಕ್, ಭರತ್,…

Read More

‘ಪುರಾಣ ಕಥಾಕೋಶ’ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಮೋಹನ ಕುಂಟಾರ್ ಸಂಪಾದಿಸಿದ ಕೃತಿ. ಬಹುಮುಖ ಪ್ರತಿಭಾವಂತರಾಗಿದ್ದ ತಮ್ಮ ಅಜ್ಜ ಅಡೂರು ಅಪ್ಪೋಜಿರಾವ್ ಜಾದವ್ ಅವರು ಬಿಟ್ಟು ಹೋದ ಅಳಿದುಳಿದ ಆಸ್ತಿ. ಯಕ್ಷಗಾನ ತಾಳಮದ್ದಳೆಯಲ್ಲಿ ಊರು-ಪರವೂರುಗಳಲ್ಲಿ ಬಹಳ ಒಳ್ಳೆಯ ಹೆಸರು ಗಳಿಸಿದ್ದ ಅವರು ಬರೇ ನಾಲ್ಕನೆಯ ತರಗತಿಯವರೆಗಷ್ಟೆ ಓದಿಕೊಂಡಿದ್ದರೂ ನೂರಾರು ಯಕ್ಷಗಾನ ಪ್ರಸಂಗಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದರು. ಹಿಮ್ಮೇಳಕ್ಕೆ ಬಳಸುವ ಮದ್ದಳೆ, ಜಾಗಟೆಯಂಥ ಸಂಗೀತೋಪಕರಣಗಳೂ ಅವರ ಸಂಗ್ರಹದಲ್ಲಿದ್ದವು. ಅಜ್ಜ ತೀರಿಕೊಂಡಾಗ ಮೋಹನ ಕುಂಟಾರ್ ಅವರು ಆರು ತಿಂಗಳ ಕೂಸು. ಅಜ್ಜನ ಆಸ್ತಿಯನ್ನು ಸುರಕ್ಷಿತವಾಗಿ ಇಡುವ ಆಸಕ್ತಿ ಮುಂದಿನ ತಲೆಮಾರಿನವರಿಗೆ ಇರಲಿಲ್ಲವಾಗಿ ಪುಸ್ತಕಗಳೆಲ್ಲ ಹರಿದು ಹಾಳಾದವು. ಮೋಹನರು ದೊಡ್ಡವರಾದ ನಂತರ ಅಜ್ಜನ ಆಸ್ತಿಯನ್ನು ಕಳೆದುಕೊಂಡದ್ದರ ಬಗ್ಗೆ ದುಃಖಿತರಾದರು. ಹುಡುಕಿ ಹುಡುಕಿ ಕೊನೆಗೆ ಸಿಕ್ಕಿದ ಕೆಲವು ಕದಲಿದ ಹಾಳೆಗಳನ್ನು ಜೋಡಿಸಿದಾಗ ಅಜ್ಜ ಬರೆದಿಟ್ಟಿದ್ದ ಕೆಲವು ಪುರಾಣ ಕಥೆಗಳು ಸಿಕ್ಕಿದವು. ಅವನ್ನೇ ಇಲ್ಲಿ ‘ಪುರಾಣ ಕಥಾಕೋಶ’ವಾಗಿ ಹೊರ ತಂದಿದ್ದಾರೆ. ಇದು ಅಜ್ಜನೊಂದಿಗಿನ ಅವರ ಭಾವುಕ ನಂಟಿನ…

Read More

ಬೆಂಗಳೂರು : ‘ಸಹಚಾರಿ’ ಮತ್ತು ಹಲ್ಗಿ ಕಲ್ಚರ್ ಇದರ ವತಿಯಿಂದ ಎರಡನೇ ವರ್ಷದ ‘ಸಂವಿಧಾನ ಸಾಥಿ’ ನೃತ್ಯ ಕಾರ್ಯಕ್ರಮಗಳ ಉದ್ಘಾಟನೆಯನ್ನು ದಿನಾಂಕ 01 ಜೂನ್ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 8762002411.

Read More

ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು, ಇದರ ವತಿಯಿಂದ ಶ್ರೀಮತಿ ವಜ್ರ ರಾವ್ ಇವರ ಲೇಖನ ಸಂಕಲನ ‘ಮರೆಯದ ಮಾತುಗಳು’ ಅಮೃತ ಪ್ರಕಾಶ 44ನೇ ಸರಣಿ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ಮಂಗಳೂರಿನ ಪತ್ರಿಕಾ ಭವನದಲ್ಲಿ ದಿನಾಂಕ 27 ಮೇ 2025ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರು ಹಾಗೂ ಲೇಖಕರು ಮಂಗಳೂರಿನ ಹರಿಕಥಾ ಪರಿಷತ್ (ರಿ.) ಇದರ ಅಧ್ಯಕ್ಷರಾದ ಮಹಾಬಲ ಶೆಟ್ಟಿ ವಹಿಸಿದ್ದರು. ಲೇಖಕರು ಹಾಗೂ ಐ.ಸಿ.ಎ.ಐ. ಮಂಗಳೂರು ಇದರ ಮಾಜಿ ಚೇಯರ್‌ಮಾನ್ ಎಸ್.ಎಸ್. ನಾಯಕ್ ಇವರು ‘ಮರೆಯದ ಮಾತುಗಳು’ ಕೃತಿ ಬಿಡುಗಡೆಗೊಳಿಸಿದರು. ಕೃತಿಯ ಲೇಖಕಿ ಶ್ರೀಮತಿ ವಜ್ರಾ ರಾವ್, ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು, ಕವಿಯತ್ರಿ ಶಿಕ್ಷಕಿ ಸುರೇಖಾ ಯಾಳವಾರ ಉಪಸ್ಥಿತರಿದ್ದರು. ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿ, ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿದರು.

Read More

ಮಂಗಳೂರು : ಡಾ. ದಿನಕರ ಎಸ್ ಪಚ್ಚನಾಡಿ ದಂಪತಿಗಳು ಸಂತಾನ ಪ್ರಾಪ್ತಿಗಾಗಿ ಹೊತ್ತ ಹರಕೆಯ ಫಲಶ್ರುತಿಗೆ ಹಮ್ಮಿಕೊಂಡ ಪುತ್ರಕಾಮೇಷ್ಠಿ ತಾಳಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭ ದಿನಾಂಕ 17 ಮೇ 2025ರಂದು ಕುಲಶೇಖರ ಜ್ಯೋತಿನಗರ ಧರ್ಮಶಾಸ್ತ್ರ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕುಲಶೇಖರ ಧರ್ಮಶಾಸ್ತ ಮಂದಿರ ಟ್ರಸ್ಟ್ ಇದರ ಅಧ್ಯಕ್ಷರಾದ ಅಡ್ವಕೇಟ್ ರಾಮ್ ಪ್ರಸಾದ್ ಮಾತನಾಡಿ “ಬಹಳ ಪರಂಪರೆ ಇರುವ ಯಕ್ಷಗಾನವು ಮಾಡಿಸುವವರ ಜೊತೆಗೆ ಭಾಗವಹಿಸುವ ಕಲಾವಿದರ ಭಕ್ತಿ ನಿಷ್ಠೆ ಹಾಗೂ ಹರಕೆ ನಂಬಿಕೆಯ ಆರಾಧನಾ ಕಲೆಯಾಗಿದೆ” ಎಂದರು. ಮೇ 11ರಂದು ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆರಂಭಗೊಂಡ ಈ ತಾಳಮದ್ದಳೆ ಮುಂದುವರಿದು ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಬೋಳಾರ ಶ್ರೀ ಮಾರಿಯಮ್ಮ ದೇವಸ್ಥಾನ, ಬಜಾಲ್ ಶ್ರೀ ಸತ್ಯನಾರಾಯಣ ಭಜನಾ ಮಂದಿರ, ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರ, ಕಾವೂರು ವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನಗಳಲ್ಲಿ ಜರಗಿ ಕುಲಶೇಖರ ಜ್ಯೋತಿನಗರ ಧರ್ಮಶಾಸ್ತ್ರ ಮಂದಿರದ ವೇದಿಕೆಯಲ್ಲಿ ಸಮಾಪನಗೊಂಡಿತು. ಧರ್ಮಶಾಸ್ತ್ರ ಮಂದಿರದ ಗೌರವ ಅಧ್ಯಕ್ಷರಾದ ಕೂಸಪ್ಪ…

Read More

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಆಶ್ರಯದಲ್ಲಿ ‘ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025’ ರಾಷ್ಟ್ರೀಯ ಕಲಾ ಸಮ್ಮೇಳನವನ್ನು ದಿನಾಂಕ 01 ಜೂನ್ 2025ರಂದು ಬೆಳಗ್ಗೆ 9-30ರಿಂದ ರಾತ್ರಿ 11-00ರವರೆಗೆ ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ಗಂಟೆ 9-30ಕ್ಕೆ ಉದ್ಘಾಟನ ಸಮಾರಂಭದಲ್ಲಿ ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಕರ್ನಾಟಕ ಸರ್ಕಾರದ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಉದ್ಘಾಟಿಸುವರು. ಉದ್ಯಮಿ ಶಶಿಧರ ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಉದ್ಯಮಿ ಡಾ. ಕನ್ಯಾನ ಸದಾಶಿವ ಶೆಟ್ಟಿಯವರು ಉಪಸ್ಥಿತಲಿರುವರು. ಬೆಳಗ್ಗೆ 11-00ಕ್ಕೆ ಡಾ. ಎಂ. ಮೋಹನ ಆಳ್ವ ಇವರ ಉಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ರಾಷ್ಟ್ರೀಯ ಕಲಾ ಸಮ್ಮೇಳನವನ್ನು ಉದ್ಘಾಟಿಸುವರು. ಡಾ. ಆಳ್ವರ ನಿರ್ದೇಶನ ಮತ್ತು ಸಂಯೋಜನೆಯಲ್ಲಿ ಭಾರತದ 8 ಶಾಸ್ತ್ರೀಯ ಕಲೆಗಳ ಪ್ರದರ್ಶನ, ಯಕ್ಷಗಾನ ಹಾಗೂ ಭಾರತೀಯ ಕಲೆಗಳ ಛಾಯಾಚಿತ್ರ ಪ್ರದರ್ಶನ, ಯಕ್ಷಧ್ರುವ ಮಹಿಳಾ ಸದಸ್ಯೆಯರಿಂದ ಯಕ್ಷಗಾನ ಮತ್ತು…

Read More

ಆರ್. ಆರ್. ಕೇಶವ ಮೂರ್ತಿಯವರು ಪಿಟೀಲು ವಿದ್ವಾಂಸರಲ್ಲಿ ಅಗ್ರಗಣ್ಯರು. ಸಂಗೀತ ಮನೆತನದಲ್ಲಿ ಮೊಳಕೆಯೊಡೆದ ಕುಡಿ ಇದು. ಇವರ ತಾತ ವೆಂಕಟರಾಮಯ್ಯನವರು ಸುಪ್ರಸಿದ್ಧ ವಾಗ್ಗೇಯಕಾರರು ಮತ್ತು ಸಂಗೀತಗಾರರು. ಸಂಗೀತ ಕಾಶಿ ಎನಿಸಿರುವ ಹಾಸನ ಜಿಲ್ಲೆಯ ರುದ್ರಪಟ್ಟಣದಲ್ಲಿ 27 ಮೇ 1914ರಲ್ಲಿ ಇವರ ಜನನವಾಯಿತು. ತಂದೆ ರಾಮಸ್ವಾಮಯ್ಯ ತಾಯಿ ಸುಬ್ಬಮ್ಮ. ಇವರ ಸಂಗೀತದ ಆರಂಭದ ಗುರು ಇವರ ತಂದೆಯೇ ಆಗಿದ್ದಾರೆ. 1923ನೇ ಸವಿಯಲ್ಲಿ ಮೈಸೂರಿಗೆ ಬಂದ ಕೇಶವ ಮೂರ್ತಿಯವರು ಬಿಡಾರಂ ಕೃಷ್ಣಪ್ಪನವರಲ್ಲಿ ಪಿಟೀಲು ಮತ್ತು ಚಿಕ್ಕ ರಾಮರಾಯರಲ್ಲಿ ಗಾಯನ ಅಭ್ಯಾಸ ನಡೆಸಿದರು. ಅಂದಿನ ಗುರುಗಳು ಕಲಿಸುತ್ತಿದ್ದ ಪಾಠ ಬಹಳ ಕಟ್ಟುನಿಟ್ಟು ಆಗಿದ್ದು ದಿನಕ್ಕೆ ಎಂಟು ಗಂಟೆಗಳ ನಿರಂತರ ಅಭ್ಯಾಸವನ್ನು ಮಾಡಲೇಬೇಕಾಗಿತ್ತು. ಮನಸ್ಸಿನ ನಿಗ್ರಹದೊಂದಿಗೆ ಸಾಧನೆ ಮಾಡಿ ಈ ವಿದ್ಯೆಯನ್ನು ಕರಗತಗೊಳಿಸಬೇಕಾಗಿತ್ತು. ಪಿಟೀಲಿನಲ್ಲಿ ಪರಿಣತಿ ಹೊಂದಿದ ಇವರು ಟಿ. ಚೌಡಯ್ಯನವರಂತೆ ಏಳು ತಂತಿಗಳಲ್ಲಿ ಪಿಟೀಲನ್ನುಅಭ್ಯಾಸ ಮಾಡಿದ್ದರೂ, ವಿದ್ವಾಂಸರ ಕಚೇರಿಗಳಲ್ಲಿ ಹಾಡುಗಾರರ ಮಧ್ಯೆ ನಾಲ್ಕು ತಂತಿ ಇಲ್ಲವೇ ಏಳು ತಂತಿಯ ಪಿಟೀಲನ್ನು ನುಡಿಸುತ್ತಿದ್ದರು. ಆರ್. ಆರ್. ಕೇಶವಮೂರ್ತಿಯವರು…

Read More

ಹೊನ್ನಾವರ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಹಮ್ಮಿಕೊಂಡ ಎರಡು ದಿನಗಳ ಯಕ್ಷಗಾನ ವಿಚಾರ ಸಂಕಿರಣ, ಗೋಷ್ಠಿ, ತಾಳಮದ್ದಲೆ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 25 ಮೇ 2025ರ ಭಾನುವಾರದಂದು ಹೊನ್ನಾವರ ತಾಲೂಕಿನ ಕವಲಕ್ಕಿ ಶ್ರೀ ಮಹಾಸತಿ ದೇವಳದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಒಂದು ಕಾಲದಲ್ಲಿ ರಾಜಾಶ್ರಯ ಪಡೆದು ಮೆರೆದಿದ್ದ ಕನ್ನಡ ಕರಾವಳಿಯ ಶ್ರೀಮಂತ ಯಕ್ಷಗಾನ ಕಲೆಯನ್ನು ಪ್ರತೀ ಮನೆಮನಕ್ಕೆ ತಲುಪಿಸಿ ಗತಿಸಿದ ವೈಭವವನ್ನು ಪುನರ್ ಪಡೆಯಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಯತ್ನಿಸಲಿದೆ. ಯಕ್ಷಗಾನ ಇಂದು ಸಮಷ್ಠಿಯನ್ನು ಒಳಗೊಂಡ ಪರಿಪೂರ್ಣ ಕಲೆಯಾಗಿದೆ. ಇಲ್ಲಿ ವೃತ್ತಪರ ಕಲಾವಿದರದಲ್ಲದೆ, ಹವ್ಯಾಸಿಯಾಗಿ ವೈದ್ಯರು, ಇಂಜೀನಿಯರ್‌ಗಳು, ಸಾಹಿತಿಗಳು, ಅಧ್ಯಾಪಕರು ಹೀಗೆ ಎಲ್ಲಾ ಕ್ಷೇತ್ರದ ವ್ಯಕ್ತಿಗಳು ತಮ್ಮನ್ನು ಈ ಕಲೆಗೆ ಮುಡಿಪಾಗಿಟ್ಟಿದ್ದಾರೆ. ಇದು ಯಕ್ಷಗಾನ ಕಲೆಯ ವೈಶಿಷ್ಟ್ಯ ಇದನ್ನು ಅನ್ಯ ಕಲೆಗಳಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ತೆಂಕುತಿಟ್ಟು, ಬಡಗುತಿಟ್ಟು, ಉತ್ತರ…

Read More

ಉಡುಪಿ : ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಇವರು ಯಕ್ಷ ಸಂಜೀವ ಪ್ರತಿಷ್ಠಾನದ ಸಹಕಾರದೊಂದಿಗೆ ರಾಷ್ಟ್ರೀಯ ನಾಟ್ಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಯಕ್ಷಗಾನ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 21 ಮೇ 2025ರಂದು ತಿಂಗಳೆ ಎನ್. ಎಸ್. ಡಿ. ಪ್ರತಿಷ್ಠಾನದಲ್ಲಿ ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಮಾತನಾಡಿ “ಯಕ್ಷಗಾನವನ್ನು ಯೋಗ್ಯ ಗುರುಗಳಿಂದ ಕಲಿತರೆ ಮುಂದಿನ ಪೀಳಿಗೆಗೆ ಕಲೆಯನ್ನು ಸಮರ್ಪಕವಾಗಿ ದಾಟಿಸಬಹುದಾಗಿದೆ. ಯಕ್ಷಗಾನ ಕಲಿತವರೆಲ್ಲ ಗುರುವಾಗಲು ಸಾಧ್ಯವಿಲ್ಲ. ಸಂಜೀವರಲ್ಲಿ ಯಕ್ಷಗಾನ ತರಬೇತಿ ಪಡೆಯುವುದೇ ಪೂರ್ವ ಜನ್ಮದ ಸುಕೃತ ಫಲ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರು ಬನ್ನಂಜೆ ಸಂಜೀವ ಸುವರ್ಣ ಮಾತನಾಡಿ “ಕಲಿಯುವ ತುಡಿತ ಸಾಧನೆಯ ಛಲ ಇವೆರಡೂ ಇದ್ದರೆ ಯಾವುದೂ ಅಸಾಧ್ಯವಲ್ಲ” ಎಂದರು. ತಿಂಗಳೆ ಪ್ರತಿಷ್ಠಾನದ ಪ್ರೊಫೆಸರ್ ವಿವೇಕ್, ಭಾಗವತರಾದ ಲಂಬೋದರ ಹೆಗಡೆ ನಿಟ್ಟೂರು, ಶ್ರೀಧರ ಹೆಗಡೆ ಉಪಸ್ಥಿತರಿದ್ದರು. ಸುಮಾರು 30 ವಿದ್ಯಾರ್ಥಿಗಳು 10 ದಿನಗಳ ಕಾಲ ಈ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಶಿಷ್ಯರಾದ ಶ್ರುತಿ ಬಂಗೇರ,…

Read More