Author: roovari

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ಇದರ ವತಿಯಿಂದ ಹಿರಿಯರ ಕವಿಗೋಷ್ಠಿಯನ್ನು ದಿನಾಂಕ 09 ಡಿಸೆಂಬರ್ 2025ರ ಮಂಗಳವಾರ ಮಧ್ಯಾಹ್ನ 2-30 ಗಂಟೆಗೆ ಮಡಿಕೇರಿಯ ಕೊಡಗು ಪತ್ರಿಕೆ ಭವನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಬಿ.ಎ. ಷಂಶುದ್ದೀನ್ ಇವರು ವಹಿಸಲಿದ್ದು, ಕವಿಗೋಷ್ಠಿಯನ್ನು ಕವಿ ಸಾಹಿತಿ, ಕಾಜೂರು ಸತೀಶ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಸಾಹಿತಿ ಶ್ರೀಮತಿ ಕೃಪಾ ದೇವರಾಜ್ ಹಾಗೂ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಭಾಗವಹಿಸಲಿದ್ದಾರೆ. ಹಿರಿಯ ಕವಿಗಳಾದ ಕಿಗ್ಗಾಲು ಎಸ್. ಗಿರೀಶ್, ಶ್ರೀಮತಿ ಜಲ ಕಾಳಪ್ಪ, ಮೂಟೆರ ಕೆ. ಗೋಪಾಲಕೃಷ್ಣ, ಶ್ರೀಮತಿ ಕೆ. ಶೋಭಾ ರಕ್ಷಿತ್, ಶ್ರೀಮತಿ ಕಟ್ರತನ ಲಲಿತಾ ಅಯ್ಯಣ್ಣ, ಶ್ರೀಮತಿ ಶ.ಗ. ನಯನತಾರ, ಶ್ರೀಮತಿ ಅಂಬೆಕಲ್ಲು ಸುಶೀಲ ಕುಶಾಲಪ್ಪ, ಬಿ.ಜಿ. ಅನಂತಶಯನ, ವಿದ್ವಾನ್ ಶಂಕರಯ್ಯ…

Read More

ಮಂಗಳೂರು : ತುಳುಕೂಟದ ಕುಡ್ಲ ಸಂಘಟನೆ ನೀಡುವ ಅಪ್ರಕಟಿತ ಸ್ವತಂತ್ರ ನಾಟಕ ಕೃತಿಗಳಿಗೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ತುಳು ನಾಟಕ ಕೃತಿಗಳನ್ನು ಆಹ್ವಾನಿಸಲಾಗಿದೆ. ಕೃತಿ ಈವರೆಗೆ ಎಲ್ಲಿಯೂ ಪ್ರದರ್ಶನ ಕಂಡಿರಬಾರದು. ಸ್ವತಂತ್ರ ಕೃತಿ ಎಂದು ದೃಢೀಕರಿಸಬೇಕು. ಹಾಳೆಯ ಒಂದೇ ಮಗ್ಗುಲಲ್ಲಿರಬೇಕು. ಈ ವರೆಗೆ ಮೂರು ಬಾರಿ ಪ್ರಶಸ್ತಿ ಗೆದ್ದವರ ಕೃತಿ ಅಮಾನ್ಯವಾಗುತ್ತದೆ. ಉತ್ತಮ ಕೃತಿಗಳು ಮೂಡಿ ಬರಲು ಇದು ಸಹಾಯಕವಾಗುತ್ತದೆ. ಕೃತಿ ತುಳುಭಾಷೆಯಲ್ಲಿ ಇರಬೇಕು. ಪ್ರಶಸ್ತಿಯ ಬಹುಮಾನಗಳ ಮೊತ್ತ ಕ್ರಮವಾಗಿ ರೂ.10,000/-, ರೂ.8,000/, ರೂ.6,000/- ಆಗಿದೆ. ಅನುವಾದಿತ ಕೃತಿಯೂ ಸ್ವೀಕೃತವಲ್ಲ. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಪ್ರಶಸ್ತಿಯನ್ನು ಪ್ರಾಯೋಜಿಸುತ್ತಿದ್ದಾರೆ. ನಾಟಕದ ಪ್ರತಿಯನ್ನು ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ, ನಿಸರ್ಗ ಮನೆ, ನಿಸರ್ಗ ಕ್ರಾಸ್, ಮರೋಳಿ, ಮಂಗಳೂರು ಈ ವಿಳಾಸಕ್ಕೆ ದಿನಾಂಕ 30 ಜನವರಿ 2025ರ ಒಳಗೆ ಕಳುಹಿಸಬೇಕು ಎಂದು ತುಳುಕೂಟದ ಪ್ರದಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ (9481163531) ತಿಳಿಸಿದ್ದಾರೆ.

Read More

ಎಂಬತ್ತರ ದಶಕದಿಂದ ಮುಖ್ಯವಾಹಿನಿಗೆ ಬಂದ ಮಹಿಳಾ ಕಾವ್ಯದಲ್ಲಿ ಅಸಂಖ್ಯಾತ ಕವಯತ್ರಿಯರು ಬರವಣಿಗೆಯನ್ನು ಮಾಡುತ್ತಿದ್ದಾರೆ. ಸ. ಉಷಾ, ಚ. ಸರ್ವಮಂಗಳಾ, ವೈದೇಹಿ, ಶಶಿಕಲಾ ವಸ್ತ್ರದ, ಶೈಲಜ ಉಡಚಣ ಮುಂತಾದವರು ನವ್ಯ ಕಾವ್ಯದಿಂದ ಪ್ರೇರಿತರಾಗಿದುದರಿಂದ ಅವರ ರಚನೆಗಳಲ್ಲಿ ಸಂಯಮ, ಕಲಾತ್ಮಕತೆ, ಕವಿತೆಯನ್ನು ವಿವಿಧ ಅರ್ಥಗಳಿಂದ ಬೆಳೆಸುವ ಪ್ರಯತ್ನವನ್ನು ಕಾಣುತ್ತೇವೆ. ಈ ಮಾತು ಕನ್ನಡದ ಪ್ರಮುಖ ಲೇಖಕಿ ಮಾಲತಿ ಪಟ್ಟಣಶೆಟ್ಟಿಯವರ ಕವನಗಳಿಗೂ ಅನ್ವಯವಾಗುತ್ತದೆ. ನವೋದಯದ ಸಾತ್ವಿಕ ಮನಸ್ಸು, ನವ್ಯ ಆಕೃತಿ ಮತ್ತು ಸ್ತ್ರೀವಾದಿ ಸಂವೇದನೆಯನ್ನೊಳಗೊಂಡ ಮಾಲತಿ ಪಟ್ಟಣಶೆಟ್ಟಿಯವರ ಕಾವ್ಯ ಅದರ ಆಚೆಗೂ ಕೈಚಾಚುತ್ತದೆ. ಅವರ ಕಾವ್ಯದಲ್ಲಿ ಪುರುಷ ವಂಚಿತ ದನಿಯು ಮಿಡಿಯುತ್ತದೆ. ಪ್ರೀತಿ ಪ್ರೇಮದ ವಿಷಯದಲ್ಲಿ ಮಹಿಳೆಯರು ತೋರುವ ಸ್ಪಂದನಗಳು, ಗಂಡು ಹೆಣ್ಣಿನ ಸಂಬಂಧ, ವಿವಾಹಪೂರ್ವ, ವಿವಾಹದ ನಂತರ ಮತ್ತು ಬೇರೆ ಗಂಡಸರಿಂದ ಮೋಸ ಹೋದ ಹೆಣ್ಣಿನ ಮನಸ್ಥಿತಿಯನ್ನು ಗುರುತಿಸಬಹುದು. ಸ್ತ್ರೀಪರ ದನಿಯನ್ನು ರೊಚ್ಚಿನಿಂದ ಹೊಮ್ಮಿಸುವ ಸುಕನ್ಯಾ ಮಾರುತಿ, ಬಿ.ಟಿ. ಲಲಿತಾ ನಾಯಕ್, ವಿಜಯಶ್ರೀ ಸಬರದ, ಮಲ್ಲಿಕಾ ಘಂಟಿ, ಸ್ತ್ರೀ ಕೇಂದ್ರಿತ ಕಾಮದ ಮೂಲಕ ಬದುಕಿನ…

Read More

ಬೆಳಗಾವಿ : ರಂಗಸಂಪದ ಬೆಳಗಾವಿ ತಂಡದ ‘ಅಭಿಷೇಕ ಅಲಾಯ್ಸ್ ನಾಟಕೋತ್ಸವ’ದ ಉದ್ಘಾಟನೆ ಮತ್ತು ಆಧುನಿಕ ಕನ್ನಡ ರಂಗಭೂಮಿ ದಿನಾಚರಣೆ – 2025 ದಿನಾಂಕ 05 ಡಿಸೆಂಬರ್ 2025ರಂದು ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಯಶಸ್ವೀಯಾಗಿ ನೆರೆದ ಮುನ್ನೂರಕ್ಕಿಂತ ಹೆಚ್ಚು ಆಸಕ್ತ ಪ್ರೇಕ್ಷಕರ ಸಮ್ಮುಖದಲ್ಲಿ ಜರುಗಿತು. ಧಾರವಾಡದಿಂದ ಆಗಮಿಸಿದ ನಿವೃತ್ತ ಆಕಾಶವಾಣಿ ಅಧಿಕಾರಿಗಳಾದ ಡಾ. ಶರಭೇಂದ್ರಸ್ವಾಮಿಯವರು ಶ್ರೀ ಎಸ್.ಎಮ್. ಕುಲಕರ್ಣಿ ಸರ ಇವರ ಅನುಪಸ್ಥಿತಿಯಲ್ಲಿ (ಅನಾರೋಗ್ಯದ ಕಾರಣ) ಅಧ್ಯಕ್ಷತೆ ವಹಿಸಿ ಕನ್ನಡ ರಂಗಭೂಮಿಯನ್ನು ಬೆಳಗಾವಿಯಲ್ಲಿ ಸತತವಾಗಿ 47 ವರ್ಷಗಳಿಂದ ಜೀವಂತವಾಗಿಟ್ಟ ರಂಗಸಂಪದ ತಂಡಕ್ಕೆ ಅಭಿನಂದನೆ ಸಲ್ಲಿಸದರು. ನಾಟಕೋತ್ಸವದ ಉದ್ಘಾಟನೆ ಮಾಡಿದ ಅಭಿಷೇಕ ಅಲಾಯ್ಸ್ ಮಾಲಿಕರು ಮತ್ತು ರಂಗಸಂಪದದ ಪೋಷಕರೂ ಆದ ಶ್ರೀ ಮಧ್ವಾಚಾರ್ಯ ಆಯಿ ಇವರು ಸಾಮಾಜಿಕ ಕಾರ್ಯಗಳಿಗೆ ತಮ್ಮ ಸಂಸ್ಥೆ ಯಾವತ್ತೂ ಸಹಾಯ ಮಾಡುತ್ತಿದೆ. ಅದರಲ್ಲೂ ರಂಗಸಂಪದದಂತಹ ಕಾರ್ಯನಿರತ ರಂಗತಂಡಕ್ಕೆ ಪ್ರಾಯೋಜಕತ್ವ ಮಾಡಲು ಅಭಿಮಾನವೆನಿಸುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಆಕಾಶವಾಣಿ ಉದ್ಘೋಷಕರು, ನಟ, ನಿರ್ದೇಶಕ, ಲೇಖಕ ಡಾ. ಶಶಿಧರ ನರೇಂದ್ರ…

Read More

ಶಿರ್ವ : ಪ್ರದರ್ಶನಾ ಸಂಘಟನಾ ಸಮಿತಿ ಶಿರ್ವ, ಯಕ್ಷಗಾನ ಕಲಾರಂಗ ಉಡುಪಿ ಮತ್ತು ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಶಿರ್ವಾದ ಮಹಿಳಾ ಸೌಧದ ಆವರಣದಲ್ಲಿ ದಿನಕ್ಕೆ ಎರಡರಂತೆ ಕಾಪು ಕ್ಷೇತ್ರದ ಆರು ಶಾಲೆಗಳ ಪ್ರದರ್ಶನ ಜರಗಲಿದ್ದು, ದಿನಾಂಕ 05 ಡಿಸೆಂಬರ್ 2025ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ, ಯಕ್ಷಗಾನದ ಮಹತ್ವ ತಿಳಿಸಿ, “ಈ ಮಹಾಭಿಯಾನ ಯಶಸ್ವಿಯಾಗುವಲ್ಲಿ ಯಕ್ಷಗಾನ ಕಲಾರಂಗದ ನಾಯಕತ್ವ, ಕಾರ್ಯಕರ್ತರ ನಿಸ್ಪೃಹ ದುಡಿಮೆಯ ಕೊಡುಗೆ ಕಾರಣ” ಎಂದರು. ಅಬ್ಬೆಟ್ಟುಗುತ್ತು ಸಾಯಿನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಂ. ಗಂಗಾಧರ ರಾವ್, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ವಿಠಲ ಅಂಚನ್, ಡಾ. ಸ್ಫೂರ್ತಿ ಬಿ. ಶೆಟ್ಟಿ, ಗೋಪಾಲ ಗುರುಸ್ವಾಮಿ ಅಭ್ಯಾಗತರಾಗಿ ಭಾಗವಹಿಸಿದ್ದರು. ಟ್ರಸ್ಟಿಗಳಾದ ವಿ.ಜಿ. ಶೆಟ್ಟಿ ನಾರಾಯಣ ಎಂ. ಹೆಗಡೆ, ಕೆ. ಶ್ರೀಪತಿ ಕಾಮತ್, ನಟರಾಜ ಉಪಾಧ್ಯ ಉಪಸ್ಥಿತರಿದ್ದರು. ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಸ್ವಾಗತಿಸಿದರು. ಅನಂತ…

Read More

ಉರ್ವಸ್ಟೋರ್ : ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಆಯೋಜಿಸುವ 2025-26ರ ಸಾಲಿನ ದತ್ತಿ ಪ್ರಶಸ್ತಿ ಮತ್ತು ಸಾಹಿತ್ಯ ಬಹುಮಾನಕ್ಕೆ ಲೇಖತಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ. ಸಂಘದ ಸದಸ್ಯೆಯಾಗಿದ್ದ ವೈಚಾರಿಕ ಮನೋಧರ್ಮದ ಸಂವೇದನಾಶೀಲ ಲೇಖಕಿ ನಾಡೋಜ ಡಾ. ಸಾರಾ ಅಬೂಬಕ್ಕರ್ ಇವರ ಹೆಸರಿನಲ್ಲಿ ಪ್ರತಿ ವರ್ಷ ಕೊಡುವ ಸಾಹಿತ್ಯ ಪ್ರಶಸ್ತಿಗೆ ಈ ಬಾರಿ ಲೇಖಕಿಯರಿಂದ ‘ಸಂಶೋಧನಾತ್ಮಕ ಕೃತಿ’ಗಳನ್ನು (ಪಿಎಚ್.ಡಿ. ಪ್ರಬಂಧಗಳನ್ನು ಸ್ವೀಕರಿಸಲಾಗುವುದಿಲ್ಲ) ಆಹ್ವಾನಿಸಲಾಗಿದೆ. 2023, 2024, 2025ರ ಸಾಲಿನಲ್ಲಿ ಪ್ರಕಟವಾದ ಕೃತಿಯ ಮೂರು ಪ್ರತಿಗಳನ್ನು ದಿನಾಂಕ 15 ಡಿಸೆಂಬರ್ 2025ರ ಒಳಗೆ ತಲುಪುವಂತೆ ಸಂಘದ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ಪುಸ್ತಕದ ಜತೆಗೆ ವೈಯಕ್ತಿಕ ಮಾಹಿತಿ ಮತ್ತು ಸಂಪರ್ಕ ಸಂಖ್ಯೆಯಿರುವ ಪರಿಚಯ ಪತ್ರವನ್ನು ಪ್ರತ್ಯೇಕ ಲಗತ್ತಿಸಿರಬೇಕು. ವಿಳಾಸ : ಅಧ್ಯಕ್ಷರು, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ, ‘ಸಾಹಿತ್ಯ ಸದನ’, ಅಂಚೆ ಕಚೇರಿ ಬಳಿ, ಉರ್ವಸ್ಟೋರ್‌ ಮಂಗಳೂರು-575006 ಇಲ್ಲಿಗೆ ಕಳುಹಿಸಬಹುದು.

Read More

ಉಳ್ಳಾಲ : ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಮತ್ತು ಸರಕಾರಿ ಪ್ರೌಢಶಾಲೆ ಬಬ್ಬುಕಟ್ಟೆಯ ಜಂಟಿ ಆಶ್ರಯದಲ್ಲಿ ದಿನಾಂಕ 04 ಡಿಸೆಂಬರ್ 2025ರಂದು ಬಟ್ಟುಕಟ್ಟೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ತುಳು ಹಾಡುಗಳ ಕಲಿಕಾ ಕಾರ್ಯಾಗಾರ ಮತ್ತು ಹಾಡುಗಳ ಪ್ರಸ್ತುತಿ ‘ಡೆನ್ನ ಡೆನ್ನಾನ – ಪದ ಪನ್ಕನ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಏಕಲವ್ಯ ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ದೇಹಧಾರ್ಡ್ಯ ಪಟು ಭಾಸ್ಕರ ತೊಕ್ಕೊಟ್ಟು “ತುಳು ಭಾಷೆಯನ್ನ ಉಳಿಸಿ ಬೆಳೆಸದಿದ್ದರೆ ಮುಂದಿನ ನಲ್ವತ್ತು, ಐವತ್ತು ವರುಷಗಳಲ್ಲಿ ತುಳು ಭಾಷೆಯು ಸಂಪೂರ್ಣ ಅವಸಾನವಾದೀತು. ಶಾಲಾ ಮಕ್ಕಳಿಗೆ ತುಳು ಭಾಷಾ ಕಲಿಕೆ ಮತ್ತು ಭಾಷಾಭಿಮಾನ ಮೂಡಿಸುವ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿರುವ ‘ಡೆನ್ನ ಡೆನ್ನಾನ-ಪದ ಪನ್ಕನ’ ಕಾರ್ಯಕ್ರಮ ಅಭಿಯಾನವು ಮಹತ್ವಪೂರ್ಣವಾಗಿದೆ. ನಮ್ಮ ಯೌವನದ ದಿನಗಳಲ್ಲಿ ತುಳು ಧಾರಾವಾಹಿ ಮತ್ತು ಸಿನೆಮಾಗಳ ಸುಮಧುರ ಹಾಡುಗಳನ್ನ ಕೇಳಿ ಆನಂದಿಸುತ್ತಿದ್ದೆವು. ಎಪ್ಪತ್ತು ಎಂಭತ್ತರ ದಶಕದಲ್ಲಿ ತುಳುವರಲ್ಲಿ ಕಾಸಿಲ್ಲದಿದ್ದರೂ ಸಹ ಸುಂದರ ಕಥಾ ಹಂದರವುಳ್ಳ ತುಳು ಚಲನಚಿತ್ರಗಳನ್ನ ನಿರ್ಮಿಸುತ್ತಿದ್ದರು. ಅಂದಿನ…

Read More

ಮಂಗಳೂರು : ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ 2025-26ನೇ ಸಾಲಿಗೆ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಪುರಸ್ಕಾರ-2026 ಹಾಗೂ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪುರಸ್ಕಾರ 2026 ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ರಂಗಶ್ರೇಷ್ಠ ಪುರಸ್ಕಾರಕ್ಕಾಗಿ 60 ವರ್ಷಕ್ಕಿಂತ ಹಿರಿಯ, ಕೊಂಕಣಿ ಮಾತೃಭಾಷಿಕ, ರಂಗಭೂಮಿಯ ಏಳಿಗೆಗಾಗಿ ಸಿನೆಮಾ-ನಾಟಕಗಳಲ್ಲಿ ನಟನೆ, ನಿರ್ದೇಶನ, ನಾಟಕ ರಚನೆಯಂತಹ ಕ್ಷೇತ್ರಗಳಲ್ಲಿ ನಿರಂತರ ದುಡಿಮೆ ಹಾಗೂ ಸಮರ್ಪಣ ಭಾವದೊಂದಿಗೆ ಜೀವಮಾನದ ಸೇವೆ ನೀಡಿರುವ ರಂಗಕರ್ಮಿಗಳಿಂದ ನೇರವಾಗಿ ಅಥವಾ ಹಿತೈಷಿ ಕಲಾಸಕ್ತರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. ಅನುವಾದ ಪುರಸ್ಕಾರಕ್ಕಾಗಿ ಭಾಷಾಂತರ ಕ್ಷೇತ್ರದಲ್ಲಿ ವಿಶೇಷವಾಗಿ ಇತರ ಭಾಷೆಗಳ ಕೃತಿಗಳನ್ನು ಕೊಂಕಣಿಗೆ ಅತ್ಯುತ್ತಮವಾಗಿ ಅನುವಾದಿಸಿ ದೀರ್ಘ ಅವಧಿಗೆ ಸೇವೆ ಸಲ್ಲಿಸಿರುವವರಿಂದ ನೇರವಾಗಿ ಅಥವಾ ಹಿತೈಷಿ ಸಾಹಿತ್ಯಾಸಕ್ತರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು ಮೊದಲು www.vishwakonkani.org ತಮ್ಮ ಹೆಸರು ನೊಂದಾಯಿಸಿಕೊಂಡು, ಆನಂತರ ವಿವರವಾದ ಪ್ರಸ್ತಾವನ ಅರ್ಜಿಯನ್ನು ಅಧ್ಯಕ್ಷರು, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು-575016 ಇಲ್ಲಿಗೆ ದಿನಾಂಕ 05 ಜನವರಿ…

Read More

ಮಂಗಳೂರು : ಮಂಗಳೂರಿನ ಕಲಾಸೂರ್ಯ ನೃತ್ಯಾಲಯ ಇದರ ಎರಡನೇ ವರ್ಷದ ವಾರ್ಷಿಕ ಸಂಭ್ರಮದ ಪ್ರಯುಕ್ತ ಪ್ರಸ್ತುತ ಪಡಿಸುವ ‘ಪರಿಭ್ರಮಣ 2025’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 06 ಡಿಸೆಂಬರ್ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಜೈಲ್ ರೋಡಿನಲ್ಲಿರುವ ಸುಬ್ರಹ್ಮಣ್ಯ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಸಭಾದ ಅಧ್ಯಕ್ಷರಾದ ಡಾ. ಎ.ಪಿ. ಕೃಷ್ಣ ಇವರು ಉದ್ಘಾಟನೆ ಮಾಡಲಿದ್ದು, ಕೊಲ್ಯ ನಾಟ್ಯನಿಕೇತನದ ನೃತ್ಯ ನಿರ್ದೇಶಕರಾದ ವಿದುಷಿ ರಾಜಶ್ರೀ ಶೆಣೈ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5-30 ಗಂಟೆಗೆ ಕಲಾಸೂರ್ಯ ನೃತ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಬಳಿಕ ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ‘ತ್ರಿಶಕ್ತಿ’ ತ್ರಿಮಾತಾ ಸ್ವರೂಪಿಣಿ ದೇವಿಗೆ ನೃತ್ಯ ನಮನಕ್ಕೆ ನಟುವಾಂಗದಲ್ಲಿ ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ವಿದ್ವಾನ್ ವಿ. ಮನೋಹರ್ ರಾವ್ ಮತ್ತು ಪಿಟೀಲಿನಲ್ಲಿ ಕುಮಾರಿ…

Read More

ಉಡುಪಿ : ರಂಗಭೂಮಿ ಉಡುಪಿ ಸಂಸ್ಥೆಯು ದಿ. ಡಾ. ಟಿ.ಎಂ.ಎ. ಪೈ, ದಿ. ಎಸ್.ಎಲ್. ನಾರಾಯಣ ಭಟ್ ಮತ್ತು ದಿ. ಮಲ್ಪೆ ಮಧ್ವರಾಜ್ ಸ್ಮಾರಕ ಹಮ್ಮಿಕೊಂಡಿದ್ದ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ ಪ್ರಥಮ ಬಹುಮಾನವು ‘ಸುಮನಸಾ (ರಿ‌.) ಕೊಡವೂರು, ಉಡುಪಿ’ ತಂಡದ “ಈದಿ” ನಾಟಕಕ್ಕೆ ಲಭಿಸಿದೆ. ಈ ತಂಡವು ಪಿ.ವಿ.ಎಸ್. ಬೀಡೀಸ್ ಪ್ರಾಯೋಜಿತ ದಿ. ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ನಗದು ಬಹುಮಾನ ರೂ.35,000/- ಮತ್ತು ಸ್ಮರಣಿಕೆ ಹಾಗೂ ಡಾ. ಟಿ.ಎಮ್.ಎ. ಪೈ ಸ್ಮಾರಕ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿದೆ. ದ್ವಿತೀಯ ಬಹುಮಾನವಾದ ದಿ. ಮಲ್ಪೆ ಮಧ್ವರಾಜ್ ಸ್ಮಾರಕ ಪ್ರಮೋದ್ ಮಧ್ವರಾಜ್ ರವರ ಕೊಡುಗೆಯಾದ ರೂ.25,000/- ನಗದು ಬಹುಮಾನ ಮತ್ತು ಸ್ಮರಣಿಕೆ ಹಾಗೂ ಡಾ. ಆರ್.ಪಿ. ಕೊಪ್ಪೀಕರ್ ಸ್ಮಾರಕವು ‘ಕ್ರಾನಿಕಲ್ಸ್ ಆಫ್ ಇಂಡಿಯಾ (ರಿ.) ಬೆಂಗಳೂರು’ ತಂಡದ ‘ಶಿವೋಹಂ’ ನಾಟಕಕ್ಕೆ ಲಭಿಸಿದೆ. ‘ಸ್ಪಂದನಾ (ರಿ.) ಸಾಗರ’ ತಂಡದ ‘ಪ್ರಾಣಪದ್ಮಿನಿ’ ನಾಟಕವು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದು, ದಿ. ಪಿ.…

Read More