Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ನೀಡಲಾಗುವ ‘ಗೌರವ ಪ್ರಶಸ್ತಿ 2025’ ಮತ್ತು ‘ಪುಸ್ತಕ ಬಹುಮಾನ 2025’ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪುಸ್ತಕ ಬಹುಮಾನ- 2025 : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2025ರ ಕ್ಯಾಲೆಂಡರ್ ವರ್ಷದಲ್ಲಿ (2025 ಜನವರಿ 1ರಿಂದ ಡಿಸೆಂಬರ್ 31) ಪ್ರಕಟಿತವಾದ (1) ಕೊಂಕಣಿ ಕವನ, (2) ಕೊಂಕಣಿ ಸಣ್ಣಕತೆ ಅಥವಾ ಕಾದಂಬರಿ, (3) ಕೊಂಕಣಿಗೆ ಭಾಷಾಂತರಿಸಿದ ಕೃತಿ (ಪ್ರಥಮ ಆದ್ಯತೆ) ಅಥವಾ ಲೇಖನ/ ಅಧ್ಯಯನ/ ವಿಮರ್ಶೆ ಬಗ್ಗೆ ಲೇಖಕರಿಂದ, ಪ್ರಕಾಶಕರಿಂದ ಪುಸ್ತಕ ಬಹುಮಾನಕ್ಕಾಗಿ ಪುಸ್ತಕದ 4 ಪ್ರತಿಗಳ ಜೊತೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪುಸ್ತಕ ಬಹುಮಾನವು ರೂ.25,000/- ಗೌರವಧನ, ಶಾಲು, ಸ್ಮರಣಿಕೆ, ಹಾರ, ಪ್ರಮಾಣಪತ್ರ, ಫಲತಾಂಬೂಲವನ್ನು ಒಳಗೊಂಡಿದೆ. ಗೌರವ ಪ್ರಶಸ್ತಿ-2025 : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನಲ್ಲಿ 1. ಕೊಂಕಣಿ ಸಾಹಿತ್ಯ, 2. ಕೊಂಕಣಿ ಕಲೆ (ಕೊಂಕಣಿ ನಾಟಕ, ಸಂಗೀತ, ಚಲನಚಿತ್ರ) 3. ಕೊಂಕಣಿ ಜಾನಪದ ಈ ಮೂರು ವಿಭಾಗಗಳಲ್ಲಿ ಜೀವಮಾನದ ಸಾಧನೆಗಾಗಿ…
ಮಂಗಳೂರು : ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಇವರು ಕಳೆದ 9 ವರ್ಷಗಳಿಂದ ಕದ್ರಿ ದೇವಸ್ಥಾನದ ಅಂಗಣದಲ್ಲಿ ಕಟೀಲು ಮೇಳದ ಸೇವೆ ಬಯಲಾಟ ನಡೆಸಿಕೊಂಡು ಬರುತ್ತಿರುವ ಕದ್ರಿ ಯಕ್ಷ ಬಳಗವು ಕೊಡಮಾಡುವ ‘ಕದ್ರಿ ವಿಷ್ಣು ಪ್ರಶಸ್ತಿ’ಯನ್ನು ದಿನಾಂಕ 17 ನವೆಂಬರ್ 2025ರಂದು ಪ್ರದಾನಿಸಿದರು. 27 ವರ್ಷಗಳ ಶ್ರೀ ಕಟೀಲು ಮೇಳದ ತಿರುಗಾಟದಲ್ಲಿ 19 ವರ್ಷ ಒಂದೇ ಒಂದು ರಜೆ ಪಡೆಯದೆ ದಾಖಲೆ ಮಾಡಿರುವ ಅಪೂರ್ವ ಕಲಾರಾಧಕ, ತೆಂಕು ತಿಟ್ಟಿನ ಪ್ರಾತಿನಿಧಿಕ ಯಕ್ಷಗಾನ ರಾಜ ಹಾಸ್ಯಗಾರ ರವಿಶಂಕರ್ ವಳಕುಂಜ ಇವರಿಗೆ ‘ಕದ್ರಿ ವಿಷ್ಣು ಪ್ರಶಸ್ತಿ-2025’ ನೀಡಿ ಗೌರವಿಸಲಾಯಿತು. ಅಭಿನಂದನಾ ಭಾಷಣ ಮಾಡಿದ ಯಕ್ಷ ಬಳಗದ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿಯವರು “ರವಿಶಂಕರ್ ಇವರು, ಹಾಸ್ಯ ರತ್ನ ನಯನ ಕುಮಾರ್, ಉಂಡೆಮನೆ ಶ್ರೀಕೃಷ್ಣ ಭಟ್ ಇವರಿಂದ ಯಕ್ಷ ಶಿಕ್ಷಣ ಪಡೆದು ಕಟೀಲು ಮೇಳಕ್ಕೆ ಸೇರಿದ ಮೂರು ವರ್ಷದಲ್ಲೇ ಪ್ರಧಾನ ಹಾಸ್ಯಗಾರರಾಗಿ ಮುನ್ನಡೆದವರು” ಎಂದು ಹೇಳಿದರು. ಕದ್ರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ…
ಮಂಗಳೂರು : ಸನಾತನ ನಾಟ್ಯಾಲಯದ ನೃತ್ಯ ಗುರು ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯೆ ನಾಟ್ಯ ವಿದುಷಿ ಕುಮಾರಿ ಅಮೃತಾ ವಿ. ಇವರ ಭರತನಾಟ್ಯ ರಂಗ ಪ್ರವೇಶವು ದಿನಾಂಕ 22 ನವೆಂಬರ್ 2025ರ ಶನಿವಾರ ಸಂಜೆ ಗಂಟೆ 5-30ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ನಾಟ್ಯಾಚಾರ್ಯ ಉಳ್ಳಾಲ್ ಮೋಹನ್ ಕುಮಾರ್ ದೀಪ ಬೆಳಗಿಸಿ ಉದ್ಗಾಟಿಸುವ ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್ ಮತ್ತು ಹಿರಿಯ ನೃತ್ಯ ಗುರು ಹಾಗೂ ವಿಮರ್ಶಕಿ ವಿದುಷಿ ಪ್ರತಿಭಾ ಎಂ.ಎಲ್. ಸಾಮಗ ಭಾಗವಹಿಸಲಿದ್ದಾರೆ. ಶ್ರೀಯುತ ವಾಸುದೇವ್ ಪಿ. ಮತ್ತು ಶ್ರೀಮತಿ ರೂಪ ವಾಸುದೇವ್ ಇವರ ಪುತ್ರಿ ಅಮೃತ ಬಿ.ಇ. ಪದವೀಧರೆಯಾಗಿದ್ದು, ಭರತನಾಟ್ಯದ ವಿದ್ವತ್ ಪರೀಕ್ಷೆಯನ್ನು ಅತ್ಯುನ್ನತ ಅಂಕ ದೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಅನೇಕ ಪ್ರಮುಖ ವೇದಿಕೆಗಳಲ್ಲಿ ಏಕಾರ್ಥ ನೃತ್ಯ ಪ್ರದರ್ಶನ ನೀಡಿರುವ ಅಮೃತ ತನ್ನ ಗುರುಗಳೊಂದಿಗೆ ರಾಜ್ಯ ಮತ್ತು ರಾಷ್ಟ್ರದಾದ್ಯಂತ ನೃತ್ಯ…
ಬೆಂಗಳೂರು : ವರ್ಷನಿಧಿ ಪ್ರಕಾಶನ ಇದರ ವತಿಯಿಂದ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 22 ನವೆಂಬರ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರು ಜಯನಗರದ 4ನೇ ಬ್ಲಾಕ್ ನಲ್ಲಿರುವ ಭಾರತ್ ಎಜುಕೇಷನ್ ಸೊಸೈಟಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಡಾ. ನಟರಾಜ್ ತಲಘಟ್ಟಪುರ ಇವರ ‘ಬಯಲರೂಪ’ ಐತಿಹಾಸಿಕ ನಾಟಕ, ‘ಬೊಗಸೆ ತುಂಬ ಮಣ್ಣು’ ನಾಟಕ, ‘ಮಿಡಿನಾಗರಗಳ ನಡುವೆ’ ಕಥಾ ಸಂಕಲನ, ‘ಬಣ್ಣ ಮೆಚ್ಚಿದವರು’ ನಾಟಕದ ಇಂಗ್ಲೀಷ್ ಅನುವಾದ, ಡಾ ರೇಖಾ ಕೌಶಿಕ್ ಪಿ.ಆರ್. ಇವರ ‘ಅಡ್ಮೈರರ್ಸ್ ಆಫ್ ಕಲರ್’ ಹಿಂದಿ ಅನುವಾದ ಹಾಗೂ ಪ್ರೊ. ಷಾಕಿರಾ ಖಾನಂ ಇವರ ‘ರಂಗೋ ಕೆ ಉಪಾಸಕ್’ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಡೋಜ ಚಂದ್ರಶೇಖರ ಕಂಬಾರ ಇವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್ತು ಇದರ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್ ಇವರು ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ.
ಮಂಗಳೂರು : ಸೋಮೇಶ್ವರ ಕೊಲ್ಯದಲ್ಲಿರುವ ನಾಟ್ಯನಿಕೇತನ (ರಿ.) ಅರ್ಪಿಸುವ ‘ಕರ್ನಾಟಕ ರಾಜ್ಯೋತ್ಸವ’, ‘ಶಾಂತಲಾ ನಾಟ್ಯ’ ಪ್ರಶಸ್ತಿ’ ಪುರಸ್ಕೃತ ನೃತ್ಯ ಗುರು ನಾಟ್ಯಾಚಾರ್ಯ ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರ 90ನೇ ವರ್ಷಾಚರಣೆಯ ಪ್ರಯುಕ್ತ ನೃತ್ಯ ಸರಣಿ-ಮಾಲಿಕೆ 23ರ ‘ನಾಟ್ಯಮೋಹನ ನವತ್ಯುತ್ಸಹ’ ಕಾರ್ಯಕ್ರಮವನ್ನು ದಿನಾಂಕ 21 ನವೆಂಬರ್ 2025ರಂದು ಸಂಜೆ 5-30 ಗಂಟೆಗೆ ಕೊಲ್ಯದ ನಾಟ್ಯನಿಕೇತನ ನೃತ್ಯಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಇವರಿಂದ ದೇವತಾ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರೊಫೆಸರ್ ಡಾ. ಕೆ.ಎಂ. ಉಷಾ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉತ್ತರ ಕನ್ನಡದ ವಿದುಷಿ ಚಿತ್ರಲೇಖಾ ಬೋಳಾರ ಮತ್ತು ವಿದುಷಿ ಅನಯ ವಸುಧಾ ಇವರು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.
ಪುತ್ತೂರು : ಬಹುವಚನಂ ವಿದ್ಯಾನಗರ ದರ್ಬೆ ಪುತ್ತೂರು ಇವರ ವತಿಯಿಂದ ನವೆಂಬರ್ ಮಾಸದ ವಿಶೇಷ ಉಪನ್ಯಾಸವನ್ನು ದಿನಾಂಕ 23 ನವೆಂಬರ್ 2025ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ದರ್ಬೆ ವಿದ್ಯಾನಗರದ ಪದ್ಮಿನೀ ಸಭಾಭವನದಲ್ಲಿ ಆಯೋಜಿಸಿಲಾಗಿದೆ. ಬಂಟ್ವಾಳ ತಾಲೂಕು ಬೆಂಜನಪದವಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ರಾಧೇಶ ತೋಳ್ಪಾಡಿಯವರು ‘ಅರ್ಧ ಶತಮಾನದ ಮಕ್ಕಳ ಕವಿತೆಗಳು’ ಈ ಬಗ್ಗೆ ಅವಲೋಕನ ಮಾಡಲಿದ್ದಾರೆ.
ತಮ್ಮ ತಾಯಿ ಹಾಡುತ್ತಿದ್ದ ಕನ್ನಡ, ತೆಲುಗು ಭಾಷೆಯ ಹಾಡುಗಳು ಮತ್ತು ತಂದೆಯ ಸಂಸ್ಕೃತ ಶ್ಲೋಕಗಳನ್ನು ಬಾಲ್ಯದಿಂದಲೇ ಮೈಮನಗಳಲ್ಲಿ ತುಂಬಿಕೊಂಡವರು ತಿರುಮಲೆ ರಾಜಮ್ಮ. ಕಲೆ ಮತ್ತು ಸಾಹಿತ್ಯದ ಬಗ್ಗೆ ಇವರಿಗೆ ಮೊದಲೇ ಇದ್ದ ಪ್ರತಿಭೆ, ಅವಕಾಶ ದೊರೆತ ಕೂಡಲೇ ಅನಾವರಣಗೊಂಡಿತು. ರಾಘವಾಚಾರ್ ಮತ್ತು ಸೀತಮ್ಮ ದಂಪತಿಗಳ ಸುಪುತ್ರಿಯಾದ ರಾಜಮ್ಮ ತುಮಕೂರಿನಲ್ಲಿ 20 ನವಂಬರ್ 1900ರಲ್ಲಿ ಜನಿಸಿದರು. ವರ್ಗಾವಣೆಗೊಂಡು ತಂದೆ ರಾಘವಾಚಾರ್ ಹಾಸನದಲ್ಲಿದ್ದ ಹೊತ್ತಿನಲ್ಲಿ ಅಲ್ಲಿಯೇ ಅಕ್ಷರಭ್ಯಾಸ ಆರಂಭಗೊಂಡು ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಮುಗಿದು ಮುಂದೆ ಲೋವರ್ ಸೆಕೆಂಡರಿಗೇ ವಿದ್ಯಾಭ್ಯಾಸ ಮೊಟಕಾಯಿತು. ಪಂಚ ಭಾಷಾ ಕೋವಿದ, ಸಾಹಿತಿ, ವಾಗ್ಮಿ, ಪತ್ರಿಕೋದ್ಯಮಿ, ಸಂಶೋಧಕ ಹೀಗೆ ಬಹುಮುಖ ಪ್ರತಿಭೆಯ ತಿ.ತಾ. ಶರ್ಮ ಎಂದೇ ಪ್ರಸಿದ್ಧರಾದ ಕನ್ನಡದ ಭೀಷ್ಮ, ತಿರುಮಲೆ ತಾತಾಚಾರ್ಯ ಶರ್ಮರೊಂದಿಗೆ ತಮ್ಮ 13ನೆಯ ವಯಸ್ಸಿನಲ್ಲಿ ರಾಜಮ್ಮನ ವಿವಾಹವಾಯಿತು. ಪದ್ಧತಿಯಂತೆ ವಿವಾಹಿತ ಹೆಣ್ಣು ಮಕ್ಕಳು ತವರಿನಲ್ಲಿಯೇ ಉಳಿಯುವ ಕ್ರಮ. ಆದ್ದರಿಂದ ಪತಿಯ ವಿದ್ಯಾಭ್ಯಾಸ ಮುಗಿಯುವವರೆಗೆ ರಾಜಮ್ಮನವರು ತವರಿನಲ್ಲಿ ಉಳಿದರು. ರಾಜಮ್ಮನವರ ಸೋದರ ಮಾವ ವಿದ್ವಾನ್ ಟಿ.…
ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ರಥಬೀದಿ ಗೆಳೆಯರು (ರಿ.) ಉಡುಪಿ ಇವರ ಸಹಯೋಗದೊಂದಿಗೆ ‘ರಂಗ ಪ್ರಯೋಗಗಳ ಸಮಕಾಲೀನತೆಯ ಸವಾಲುಗಳು’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣವನ್ನು ದಿನಾಂಕ 23 ನವೆಂಬರ್ 2025ರಂದು ಬೆಳಗ್ಗೆ 9-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9-30 ಗಂಟೆಗೆ ಈ ಕಾರ್ಯಕ್ರಮವನ್ನು ಮೈಸೂರಿನ ಡಾ. ಜನಾರ್ದನ ಇವರು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಗ್ಗೆ 11-00 ಗಂಟೆಗೆ ನಡೆಯುವ ವಿಚಾರ ಗೋಷ್ಠಿ 1ರಲ್ಲಿ ‘ರಂಗಪ್ರಯೋಗಗಳಲ್ಲಿ ವಸ್ತು, ಆಶಯ ಮತ್ತು ವಿನ್ಯಾಸಗಳಲ್ಲಿ ಸಮಕಾಲೀನತೆ’ ಎಂಬ ವಿಷಯದ ಬಗ್ಗೆ ಶರಣ್ಯಾ ರಾಮ್ ಪ್ರಕಾಶ್ ಬೆಂಗಳೂರು, ಮಹಾದೇವ ಹಡಪದ ಧಾರವಾಡ ಮತ್ತು ಪ್ರಸನ್ನ ಡಿ. ಶಿವಮೊಗ್ಗ ಇವರು ವಿಚಾರ ಮಂಡನೆ ಮಾಡಲಿದ್ದು, ಅಭಿನವ್ ಗ್ರೋವರ್, ಕ್ರಿಸ್ಟೋಫರ್ ಡಿಸೋಜ, ರೋಹಿತ್ ಎಸ್. ಬೈಕಾಡಿ, ಬಿಂದು…
Mumbai: The National Centre for the Performing Arts (NCPA) invited Dr Guru Meenakshi Shriyan of Arunodaya Kala Niketan to conduct an in-depth lecture-demonstration at Shree Saraswati Vidhyamandir, Bhandup, as part of its ongoing Nritya Parichaya series aimed at strengthening classical arts education among schoolchildren. The session introduced students to the foundational principles of Bharatanatyam, offering a rare opportunity to explore the art form through both theory and practice. Children were guided through the significance of the five elements, sensory awareness, chakras, and spatial geometry—concepts that form the structural and philosophical base of classical dance. Demonstrations of mudras and basic adavus…
ಮೈಸೂರು : ಅದಮ್ಯ ರಂಗಶಾಲೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪ್ರತಿಭಾವಂತ ಮಕ್ಕಳಿಗೆ ‘ಅದಮ್ಯ ಚಿಗುರು ಪ್ರತಿಭಾ ಚೇತನ’ ಪುರಸ್ಕಾರ ನೀಡಲು ಉದ್ದೇಶಿಸಲಾಗಿದ್ದು, ಅರ್ಹ ಪ್ರತಿಭಾವಂತ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದ್ದಾರೆ. ಜಿಲ್ಲೆಯ ವ್ಯಾಪ್ತಿಯೊಳಗಿನ ಸರಕಾರಿ, ಅನುದಾನಿತ, ಖಾಸಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಎಲ್.ಕೆ.ಜಿ.ಯಿಂದ ಪ್ರಥಮ ಪಿಯುಸಿ ವರೆಗೆ ವ್ಯಾಸಂಗ ಮಾಡುತ್ತಿರುವ ಕಲೆ, ಸಾಹಿತ್ಯ, ಶಿಕ್ಷಣ, ಸಂಗೀತ, ರಂಗಭೂಮಿ, ಕ್ರೀಡೆ, ನೃತ್ಯ, ಜನಪದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಪರಿಚಯ, ಭಾವಚಿತ್ರ, ದೂರವಾಣಿ ಸಂಖ್ಯೆ ಹಾಗೂ ಸಾಧನೆಯ ವಿವರಗಳನ್ನು ಒಳಗೊಂಡ ಅಗತ್ಯ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬಹುದಾಗಿದೆ. ಮಕ್ಕಳ ಅಥವಾ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರು ಈ ಎಲ್ಲ ಅಗತ್ಯ ಮಾಹಿತಿಗಳನ್ನು ಹೊಂದಿರುವ ಅರ್ಜಿಯನ್ನು ಸಿದ್ದಪಡಿಸಿ ದಿನಾಂಕ 24 ನವೆಂಬರ್ 2025ರೊಳಗೆ ತಲುಪುವಂತೆ ಟಿ. ಸತೀಶ್ ಜವರೇಗೌಡ, ಗೌರವ ಕಾರ್ಯದರ್ಶಿ, ಅದಮ್ಯ ರಂಗಶಾಲೆ, ವಿಸ್ಮಯ ಪ್ರಕಾಶನ, ನಂ.442/10,…