Subscribe to Updates
Get the latest creative news from FooBar about art, design and business.
Author: roovari
ಹುಬ್ಬಳ್ಳಿ : ಟಿಯೆಸ್ಸಾರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಶ್ರೀ ಸುರೇಂದ್ರ ದಾನಿ ಇವರ ಜನ್ಮ ಶತಮನೋತ್ಸವ ಕಾರ್ಯಕ್ರಮವನ್ನು ದಿನಾಂಕ 27 ಡಿಸೆಂಬರ್ 2025ರಂದು ಮುಂಜಾನೆ 9-30 ಗಂಟೆಗೆ ಹುಬ್ಬಳ್ಳಿ ದೇಶಪಾಂಡೆ ನಗರ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9-30 ಗಂಟೆಗೆ ಧಾರವಾಡದ ಶ್ರೀಮತಿ ಗೀತಾ ಆಲೂರ ಮತ್ತು ಬೆಂಗಳೂರಿನ ಸುಜ್ಞಾನ ದಾನಿ ಹಾಗೂ ಸಂಗಡಿಗರಿಂದ ‘ಲಘು ಸಂಗೀತ’ ಪ್ರಸ್ತುತಿ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮಶ್ರೀ ಡಾ. ಎಂ.ಎಂ. ಜೋಶಿ ಇವರ ವಹಿಸಲಿದ್ದು, ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. 12-30 ಗಂಟೆಗೆ ಗೋಷ್ಠಿ 1ರಲ್ಲಿ ‘ದಾನಿಯವರ ಪ್ರವೃತ್ತಿ’, 2-30 ಗಂಟೆಗೆ ಗೋಷ್ಠಿ 2ರಲ್ಲಿ ‘ದಾನಿಯವರ ಗಮಕ ಪ್ರೀತಿ’ ವಿಷಯ ಮಂಡನೆ ಮತ್ತು 3-30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಉಡುಪಿ : ವಾತ್ಸಲ್ಯ ಕ್ಲಿನಿಕ್ ವಿಂಶತಿ ಸಂಭ್ರಮದ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಆಯೋಜನೆಯಲ್ಲಿ ಪ್ರಸಿದ್ಧ ಸ್ತ್ರೀ ಆರೋಗ್ಯ ತಜ್ಞೆ ಡಾ. ರಾಜಲಕ್ಷ್ಮಿ ಇವರ ‘ವಾತ್ಸಲ್ಯದ ಒಸಗೆ’ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 26 ಡಿಸೆಂಬರ್ 2025ರಂದು ಸಂಜೆ 5-00 ಗಂಟೆಗೆ ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಎಚ್.ಪಿ. ಇವರು ಸಭಾಧ್ಯಕ್ಷತೆ ವಹಿಸಲಿದ್ದು, ಡಾ. ಎ.ವಿ. ಬಾಳಿಗ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ವಿ.ಪಿ. ಭಂಡಾರಿ ಇವರು ಕೃತಿ ಬಿಡುಗಡೆ ಮಾಡಲಿದ್ದಾರೆ. ಸ್ತ್ರೀ ಆರೋಗ್ಯ ತಜ್ಞೆ ಡಾ. ವೀಣಾ ಭಟ್ ಇವರು ಪುಸ್ತಕ ಪರಿಚಯ ಮಾಡಲಿದ್ದು, ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಬಿ. ಮಹಾಲಕ್ಷ್ಮಿ ಆಶಯ ನುಡಿಗಳನ್ನಾಡಲಿದ್ದಾರೆ. ಡಾ. ಸ್ನೇಹಾ ಆಚಾರ್ಯ ಇವರಿಂದ ‘ನೃತ್ಯ ಸಿಂಚನ’ ಭರತನಾಟ್ಯ ಪ್ರಸ್ತುತಗೊಳ್ಳಲಿದೆ.
ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎಂ. ರಾಮರೆಡ್ಡಿ ಮತ್ತು ಮಂಗಳಮ್ಮ ಇವರ ಸುಪುತ್ರಿಯೇ ಸುಪ್ರಸಿದ್ಧ ಕಾದಂಬರಿಗಾಗಿ ಅನಸೂಯ ರಾಮರೆಡ್ಡಿ. ಇವರ ಹುಟ್ಟೂರು ಚಿತ್ರದುರ್ಗದ ಬಳಿಯ ತುರುವನೂರು. ಇವರ ಕುಟುಂಬ ಸ್ವಾತಂತ್ರ್ಯ ಹೋರಾಟಗಾರರ ಮನೆತನಕ್ಕೆ ಸಂಬಂಧಪಟ್ಟ ಕಾರಣ ಮನೆಯಲ್ಲಿ ಕಾಂಗ್ರೆಸ್ ನೇತಾರೊಂದಿಗೆ ನಡೆಯುತ್ತಿದ್ದ ಚರ್ಚೆ, ಅನಸೂಯ ಅವರ ಮೇಲೆ ಪ್ರಭಾವ ಬೀರಿ, ಗಾಂಧೀಜಿಯವರ ಆದರ್ಶಗಳಿಗೆ ಮಾರುಹೋಗಿ ಜೀವನದಲ್ಲಿ ಅದನ್ನು ರೂಢಿಸಿಕೊಂಡರು. ಪುಟ್ಟ ಊರಾದ ತುರುವ ನೂರಿನ ಶಾಂತ ವಾತಾವರಣ, ಅಲ್ಲಿಯ ಜನರ ಸರಳ ಜೀವನ, ಸರಳ ವಿವಾಹ, ಚರಕದಲ್ಲಿ ನೂಲು ತೆಗೆಯುವುದು, ರಾಷ್ಟಾಭಿಮಾನ ಇವುಗಳ ಮಧ್ಯೆ ಬೆಳೆದ ಅನಸೂಯರಿಗೆ ಸಮರ್ಪಣಾ ಭಾವ ಮೈಗೂಡಿಕೊಂಡಿತ್ತು. ಒಂದು ಕಡೆ ಸ್ವಾತಂತ್ರ್ಯ ಹೋರಾಟದ ಚರ್ಚೆ, ಮನೆಯಲ್ಲಿದ್ದ ಹಿರಿಯ ಹೆಣ್ಣು ಜೀವಿಗಳಾದ ತಾಯಿ ಅಜ್ಜಿ ಮುತ್ತಜ್ಜಿಯರು ಆಧ್ಯಾತ್ಮವನ್ನೇ ಗುರಿಯಾಗಿಸಿಕೊಂಡು ನಡೆಸುತ್ತಿದ್ದ ಜೀವನ, ಕವಿ ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳು ಗುರುಗಳಾಗಿ ದೊರೆತದ್ದು, ಬೆಳಗೆರೆ ಜಾನಕಮ್ಮನ ಸ್ನೇಹ ಇಂಥ ಪರಿಸರದಲ್ಲಿ ಓದುವ ಹವ್ಯಾಸ ಅನಸೂಯರಿಗೆ ತನ್ನಿಂದ ತಾನೇ ಒಗ್ಗಿಹೋಯಿತು. ವ್ಯಾಯಾಮ, ಯೋಗ, ಈಜು, ಸೈಕಲ್…
ಧಾರವಾಡ : ಚಿತ್ರಕಲಾ ಶಿಲ್ಪಿ ಶ್ರೀ ಡಿ. ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ.) ಟ್ರಸ್ಟ್ ಧಾರವಾಡ ಇವರ ವತಿಯಿಂದ ಶ್ರೀ ಡಿ. ವ್ಹಿ. ಹಾಲಭಾವಿ ಪುಣ್ಯ ಸ್ಮರಣೆ ಪ್ರಯುಕ್ತ ರಾಜ್ಯ ಮಟ್ಟದ ಚಿತ್ರಕಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 2025 ಕಾರ್ಯಕ್ರಮವನ್ನು ದಿನಾಂಕ 26 ಡಿಸೆಂಬರ್ 2025ರಂದು ಬೆಳಗ್ಗೆ 11-30 ಗಂಟೆಗೆ ಧಾರವಾಡ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ರಕಲಾ ಶಿಲ್ಪಿ ಶ್ರೀ ಡಿ. ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ.) ಟ್ರಸ್ಟ್ ಇದರ ಅಧ್ಯಕ್ಷರಾದ ಬಿ. ಮಾರುತಿ ಇವರು ವಹಿಸಲಿದ್ದು, ಚಿತ್ರಕಲಾ ಶಿಲ್ಪಿ ಶ್ರೀ ಡಿ. ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ.) ಟ್ರಸ್ಟ್ ಸದಸ್ಯರಾದ ಸುರೇಶ ಹಾಲಭಾವಿ ಇವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಚಿತ್ರಕಲಾ ಸ್ನಾತಕ ಪದವಿಯ ವಿದ್ಯಾರ್ಥಿಗಳಿಗೆ 2025ನೇ ಸಾಲಿನ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಇವರ ಕಲಾಕೃತಿಗಳ ಪ್ರದರ್ಶನ ಬೆಳಗ್ಗೆ 11-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಏರ್ಪಡಿಸಲಾಗಿದೆ.
ಕೋಣಾಜೆ : ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ದೇರಳಕಟ್ಟೆ ಗ್ರೀನ್ ಗೌಂಡ್ ನ ಡಾ. ವಾಮನ ನಂದಾವರ ಸಭಾಂಗಣದ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ವೇದಿಕೆಯಲ್ಲಿ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಕರಾವಳಿ ಕರ್ನಾಟಕದ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನ ನಾಡು ನುಡಿ ವೈಭವದ ‘ರತ್ನೋತ್ಸವ 2025’ ದಿನಾಂಕ 20 ಡಿಸೆಂಬರ್ 2025ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜನಪದ ವಿದ್ವಾಂಸ, ಜನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ “ಸಾಂಸ್ಕೃತಿಕ ನೀತಿ ಶಾಲೆಗಳಿಗೆ ಬೇಕು. ಶಾಲೆಗಳು ವಿದ್ಯಾರ್ಥಿಗಳಲ್ಲಿ ಸಂವೇದನೆಯನ್ನುಂಟು ಮಾಡಬೇಕು. ಮಕ್ಕಳು ಮಾತನಾಡುವ ಪ್ರತಿಯೊಂದು ಮಾತೂ ಕೇವಲ ಪದಗಳಲ್ಲ, ಆ ಮಾತಿನ ಹಿಂದೆ ಅವರ ಆಂತರಿಕ ಸಂವೇದನೆ, ಅನುಭವ ಮತ್ತು ಮನಸ್ಥಿತಿ ಅಡಗಿರುತ್ತದೆ. ಮಕ್ಕಳಲ್ಲಿ ಸೂಕ್ಷ್ಮ ಪ್ರವೃತ್ತಿಯನ್ನು ಬೆಳೆಸುವ ಮಹತ್ವದ ಕಾರ್ಯಕ್ರಮವೇ ಸಾಹಿತ್ಯೋತ್ಸವ” ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷರು ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ “ರತ್ನೋತ್ಸವದಂತಹ ನಿರಂತರವಾಗಿ ಸಾಹಿತ್ಯಕ ಕೊಡುಗೆಯನ್ನು…
ಬೆಂಗಳೂರು : ಎನ್.ಎಸ್. ಕುಂಬಾರ್ ಅಕಾಡೆಮಿ ವತಿಯಿಂದ ಆಯೋಜಿಸಲಾಗಿರುವ ‘ಚಿತ್ರಕಾರ್’ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಪ್ರವೇಶಗಳನ್ನು ಆಹ್ವಾನಿಸಲಾಗಿದೆ. ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲಾ ವಯೋಮಾನದವರಿಗೆ, ಹವ್ಯಾಸಿ ಹಾಗೂ ವೃತ್ತಿಪರರಿಗೆ ಪ್ರತ್ಯೇಕ ವಿಭಾಗಗಳಿವೆ. ಪ್ರತಿ ವಿಭಾಗಕ್ಕೂ ಪ್ರಶಸ್ತಿ ಹಾಗೂ ಪ್ರದರ್ಶನಗಳ ಅವಕಾಶವಿದ್ದು, ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಅತ್ಯುತ್ತಮ ನೂರು ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಅವುಗಳಲ್ಲಿ 30 ಉತ್ತಮ ಚಿತ್ರಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ನೋಂದಣಿಗೆ https://nskumbar.art/category-chitrakar ಅಥವಾ 9663571101 ಸಂಪರ್ಕಿಸಬಹುದು. ನೋಂದಣಿಗೆ ಕಡೆಯ ದಿನಾಂಕ 31 ಡಿಸೆಂಬರ್ 2025.
ಮಂಗಳೂರು : ಹರಿಕಥಾ ಪರಿಷತ್ (ರಿ.) ಮಂಗಳೂರು ಹಾಗೂ ರಾಮಕೃಷ್ಣ ಮಿಷನ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಕರಾವಳಿಯಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಹಾಗೂ ಕಾಸರಗೋಡು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ದಿನಾಂಕ 27 ಡಿಸೆಂಬರ್ 2025ರಂದು ‘ಹರಿಕಥಾ ಸ್ಪರ್ಧೆ-2025’ ಮಂಗಳೂರಿನ ರಾಮಕೃಷ್ಣ ಮಠದ ಅಮೃತ ಭವನ ಸಭಾಂಗಣದಲ್ಲಿ ಬೆಳಗ್ಗೆ 8-30ರಿಂದ ಸಂಜೆ 7-00ರವರೆಗೆ ನಡೆಯಲಿದೆ. ದಕ್ಷಿಣ ಕನ್ನಡ, ಕಾಸರಗೋಡು, ಬೆಂಗಳೂರು, ಶಿವಮೊಗ್ಗ, ಬಾಗಲಕೋಟೆ ಸೇರಿದಂತೆ ನಾನಾ ಜಿಲ್ಲೆಗಳಿಂದ ಆಯ್ದ 23 ಯುವ ಕಥಾಕೀರ್ತನ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, 5ರಿಂದ 10ನೇ ತರಗತಿ ವರೆಗಿನವರನ್ನು ಕಿರಿಯ ವಿಭಾಗವಾಗಿ ಹಾಗೂ 10ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳನ್ನು ಹಿರಿಯ ವಿಭಾಗ ಎಂದು ಗುರುತಿಸಲಾಗಿದೆ. ಕಿರಿಯ ವಿಭಾಗದಲ್ಲಿ ಮೊದಲನೇ ಬಹುಮಾನ ರೂ.5,000/-, ದ್ವಿತೀಯ ಬಹುಮಾನ ರೂ.3,000/- ಹಾಗೂ ತೃತೀಯ ಬಹುಮಾನ ರೂ.2,000/- ನೀಡಲಾಗುವುದು. ಹಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನ ರೂ.7,000/-, ದ್ವಿತೀಯ ಬಹುಮಾನ ರೂ.5,000/- ಹಾಗೂ ತೃತೀಯ ಬಹುಮಾನ ರೂ.3,000/- ಮತ್ತು…
ಪುತ್ತೂರು : ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು ಇದರ ‘ನೃತ್ಯ ತರಂಗಿಣಿ’ ಸರಣಿ ಕಾರ್ಯಕ್ರಮದ ಅಂಗವಾಗಿ ಮಾಸ್ಟರ್ ಶಮಂತಕ ಜೊತೆಗಿನ ಮುಕ್ತ ಸಂವಾದ ಕಾರ್ಯಕ್ರಮವು ದಿನಾಂಕ 21 ಡಿಸೆಂಬರ್ 2025ರಂದು ಬರೆಕೆರೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು. ಡ್ಯಾನ್ಸ್ ಫೆಡರೇಶನ್ ಆಫ್ ಇಂಡಿಯಾದ ಯುವಕಲಾ ಪ್ರಶಸ್ತಿ ಪುರಸ್ಕೃತ ಭರತನಾಟ್ಯ ಬಾಲ ಕಲಾವಿದ ಮಾಸ್ಟರ್ ಶಮಂತಕ ಹಾಗೂ ಅವರ ತಾಯಿ ವಿದುಷಿ ಸವಿತಾ ಹೆಗಡೆ ಇವರೊಂದಿಗೆ ಸಂವಾದ ಏರ್ಪಟ್ಟಿತು. ವಿದುಷಿ ಸವಿತಾ ಹೆಗಡೆಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ನೃತ್ಯೋಪಾಸನಾ ಕಲಾ ಅಕಾಡೆಮಿ ಅಧ್ಯಕ್ಷ ಮಂಜುನಾಥ ಪಿ.ಎಸ್. ಹಾಗೂ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಉಪಸ್ಥಿತರಿದ್ದರು. ಮಾಸ್ಟರ್ ಶಮಂತಕನ ನೃತ್ಯಾಭ್ಯಾಸ ಆರಂಭದ ಕುರಿತು ವಿದುಷಿ ಸವಿತಾ ಹೆಗಡೆ ತಿಳಿಸಿದರು. ಅದರಂತೆಯೇ ವಿದ್ಯಾರ್ಥಿಗಳಲ್ಲಿ ಇರಬೇಕಾದ ಆಸಕ್ತಿ, ಪ್ರತಿನಿತ್ಯದ ಅಭ್ಯಾಸ, ಹಾಗೆಯೇ ನೃತ್ಯದಲ್ಲಿ ಅಡವುಗಳ ಹಾಗೂ ವ್ಯಾಯಾಮ ಕ್ರಿಯೆಗಳ ಪ್ರಾಮುಖ್ಯತೆಯ ಕುರಿತು ವಿವರಿಸಿದರು. ಮಕ್ಕಳ ಆಸಕ್ತಿಯ ವಿಷಯದಲ್ಲಿ ಪೋಷಕರು ನೀಡಬೇಕಾದ ಪೋತ್ಸಾಹದ ಬಗೆಗೆ ವಿವರಣೆ ನೀಡಿದರು.…
ಮಂಗಳೂರು : ಮಂಗಳೂರಿನ ಜರ್ನಿ ಥಿಯೇಟರ್ ಗ್ರೂಪ್ನ ಸದಸ್ಯರು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ದಿನಾಂಕ 19 ಡಿಸೆಂಬರ್ 2025ರಂದು ‘ಸಾಹೇಬರು ಬರುತ್ತಾರೆ’ ನಾಟಕವನ್ನು ಪ್ರದರ್ಶಿಸಿದರು. ನಾಟಕದ ಉದ್ಘಾಟನೆಯನ್ನು ಡಾ. ಆರ್. ನರಸಿಂಹ ಮೂರ್ತಿ ನೆರವೇರಿಸಿದರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿನ್ ಎಸ್.ಜೆ. ನಾಟಕಕ್ಕೆ ಶುಭಹಾರೈಸಿದರು. ತ್ರಿಪುರಾದ ಇಂಟರ್ ಕಲ್ಚರ್ ಥಿಯೇಟರ್ ಇನ್ಸ್ಟಿಟ್ಯೂಟ್ (ಐ.ಸಿ.ಟಿ.ಐ.)ನ ಪ್ರೊಫೆಷನಲ್ ಡಿಪ್ಲೊಮಾ ತರಬೇತಿಗೆ ಆಯ್ಕೆಯಾಗಿರುವ ಅವಿನಾಶ್ ರೈ ಕುಂಬ್ಳೆ ಇವರನ್ನು ಗೌರವಿಸಲಾಯಿತು. ತ್ರಿಪುರಾದ ಐ.ಸಿ.ಟಿ.ಐ.ನ ದ್ವಿತೀಯ ವರ್ಷದ ವಿದ್ಯಾರ್ಥಿ ಜರ್ನಿಯ ಸದಸ್ಯ ಮನೀಷ್ ಜೆ. ಪಿಂಟೋ, ನಾಟಕ ನಿರ್ದೇಶಕ ಚೇತನ್ ಗಣೇಶಪುರ, ಜರ್ನಿಯ ಶಶಾಂಕ್ ಐತಾಳ್ ಮತ್ತು ಮೇಘನಾ ಕುಂದಾಪುರ ಉಪಸ್ಥಿತರಿದ್ದರು. ಬಳಿಕ ನಿಕೋಲಾಯ್ ಗೊಗೋಲ್ ನ ‘ದಿ ಗವರ್ನಮೆಂಟ್ ಇನ್ಸ್ಪೆರ್ಕ್ಷ’ನ್ನು ಕೆ.ವಿ. ಅಕ್ಷರ ಮತ್ತು ಕೆ.ವಿ. ಸುಬ್ಬಣ್ಣ ಕನ್ನಡ ಅನುವಾದಿಸಿದ ‘ಸಾಹೇಬರು ಬರುತ್ತಾರೆ’ ನಾಟಕ ಪ್ರದರ್ಶನಗೊಂಡಿತು. ಈ ನಾಟಕವನ್ನು ಯುವ ನಿರ್ದೇಶಕ ಚೇತನ್ ಗಣೇಶಪುರ…
ಉಡುಪಿ : ಅನಿಶ ಗಾನಕೂಟ ಉಡುಪಿ ಪ್ರಸ್ತುತ ಪಡಿಸುವ ‘ಶ್ರೀಕಾಂತ ಸೋಮಯಾಜಿ ಸಂಗೀತ ಮಾಲಿಕೆ’ ಕಾರ್ಯಕ್ರಮವನ್ನು ದಿನಾಂಕ 27 ಡಿಸೆಂಬರ್ 2025ರಂದು ಸೋಮಯಾಜಿಯವರ ಮನೆಯಲ್ಲಿ ಆಯೋಜಿಸಲಾಗಿದೆ. ಸಂಜೆ 4-00 ಗಂಟೆಗೆ ಬೆಂಗಳೂರಿನ ಶ್ರೀಮತಿ ಸಿಂಚನಾ ಮೂರ್ತಿ ಮತ್ತು ತಂಡ ದವರಿಂದ ಭಕ್ತಿ ಭಾವ ಗಾನ ಸಿಂಚನ ಹಾಗೂ 6-00 ಗಂಟೆಗೆ ಸುವಿಕಾ ಕೋಟ ಇವರಿಂದ ಡಾ. ಶ್ರೀಪಾದ ಭಟ್ ಇವರ ನಿರ್ದೇಶನದಲ್ಲಿ ಕಾವ್ಯ ಹಂದೆ ಅಭಿನಯದ ‘ಹಕ್ಕಿ ಮತ್ತು ಅವಳು’ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಲಿದೆ.