Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಶಾರದಾ ನೃತ್ಯಾಲಯ (ರಿ.) ಮಾರ್ಪಳ್ಳಿ ಇದರ ರಜತ ಮಹೋತ್ಸವದ ಪ್ರಯುಕ್ತ ಪ್ರಸ್ತುತ ಪಡಿಸುವ ‘ನೃತ್ಯೋಲ್ಲಾಸ’ ನೃತ್ಯ ಕಾರ್ಯಕ್ರಮವು ದಿನಾಂಕ 06 ಮತ್ತು 07 ಡಿಸೆಂಬರ್ 2025ರಂದು ಉಡುಪಿಯ ಐ.ವೈ.ಸಿ. ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ನಡೆಯಲಿದೆ. ದಿನಾಂಕ 06 ಡಿಸೆಂಬರ್ 2025ರಂದು ಸಂಜೆ 4-45 ಗಂಟೆಗೆ ಸಭಾ ಕಾರ್ಯಕ್ರಮವನ್ನು ಮೈಸೂರಿನ ವಸುಂಧರಾ ಪ್ರದರ್ಶನ ಕಲೆಗಳ ಕೇಂದ್ರದ ನಿರ್ದೇಶಕರಾದ ಡಾ. ವಸುಂಧರಾ ದೊರೆಸ್ವಾಮಿ ಇವರು ಉದ್ಘಾಟನೆ ಮಾಡಲಿದ್ದಾರೆ. ಸಂಜೆ 6-00 ಗಂಟೆಗೆ ಸಂಸ್ಥೆಯ ವಿದ್ಯಾರ್ಥಿಗಳಿಂದ ಮತ್ತು ಹಳೆ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ದಿನಾಂಕ 07 ಡಿಸೆಂಬರ್ 2025ರಂದು ಸಂಜೆ 4-30 ಗಂಟೆಗೆ ಸಭಾ ಕಾರ್ಯಕ್ರಮವನ್ನು ಹಿರಿಯ ನೃತ್ಯ ಗುರುಗಳಾದ ಶ್ರೀಮತಿ ಪ್ರತಿಭಾ ಎಲ್. ಸಾಮಗ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಸಮಾರೋಪ ಸಮಾರಂಭದ ಬಳಿಕ ಡಾ. ವಸುಂಧರಾ ದೊರೆಸ್ವಾಮಿ ಇವರಿಂದ ‘ಅಮ್ಮ’ (ಉಲಿಯದ ಕತೆ) ಏಕವ್ಯಕ್ತಿ ಪ್ರದರ್ಶನ ನಡೆಯಲಿದೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಸ್ವಸ್ತಿಕ್ ಕಲಾ ಕೇಂದ್ರ (ರಿ.) ಜಲ್ಲಿಗುಡ್ಡೆ ಮಂಗಳೂರು ಇವರ ವತಿಯಿಂದ ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ.) ಪಡೀಲ್ ಇವರ ಸಹಭಾಗಿತ್ವದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ರಾಮಕೃಷ್ಣ ಮಿಷನ್ ಮಂಗಳೂರು ಇವರ ಸಹಯೋಗದೊಂದಿಗೆ ಯಕ್ಷರಂಗದ ಧೀಮಂತ ಪ್ರತಿಭೆ ‘ದಿ. ಬಾಬು ಕುಡ್ತಡ್ಕ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 07 ಡಿಸೆಂಬರ್ 2025ರಂದು ಸಂಜೆ 3-30 ಗಂಟೆಗೆ ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಲ್ಲಿಗುಡ್ಡೆ ಸ್ವಸ್ತಿಕ್ ಕಲಾ ಕೇಂದ್ರ ವತಿಯಿಂದ ನೀಡಲಾಗುವ 2025-26ನೇ ಸಾಲಿನ ಪ್ರತಿಷ್ಠಿತ ಬಾಬು ಕುಡ್ತಡ್ಕ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರ ಗೌಡ ಇವರನ್ನು ಆಯ್ಕೆ ಮಾಡಲಾಗಿದೆ. ಯಕ್ಷರಂಗದ ಶ್ರೀಮಂತ ಪ್ರತಿಭೆ ಬಾಬು ಕುಡ್ತಡ್ಕ ಇವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ ಶಾಶ್ವತ ಫಲಕ, ಸ್ಮರಣಿಕೆ, ಪದಕ ಹಾಗೂ ರೂ.10 ಸಾವಿರ ನಗದು…
ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು, ಜಿಲ್ಲಾ ಘಟಕ ಹಾಸನ ಸಹಯೋಗದಲ್ಲಿ 2025 ಡಿಸೆಂಬರ್ 14 ಭಾನುವಾರ ಹಮ್ಮಿಕೊಳ್ಳುವ ಹಾಸನ ಜಿಲ್ಲಾ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಕವಿ, ಗಾಯಕ, ರಂಗಭೂಮಿ ಕಲಾವಿದರಾದ ಗ್ಯಾರಂಟಿ ರಾಮಣ್ಣನವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ. ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ವೇದಿಕೆಯ ಗೌರವ ಸಲಹೆಗಾರ ನಾಗರಾಜ್ ಹೆತ್ತೂರು, ರಾಜ್ಯ ಕಾರ್ಯದರ್ಶಿ ಡಾ. ಪಿ. ದಿವಾಕರ ನಾರಾಯಣ, ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ ದೊಡ್ಡಮನಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ, ರಾಜ್ಯ ಸಹ ಕಾರ್ಯದರ್ಶಿ ದೇಸು ಆಲೂರು, ಸಾಮಾಜಿಕ ಹೋರಾಟಗಾರ ಮಲ್ನಾಡ್ ಮೆಹಬೂಬ್, ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ವೈ.ಎಸ್. ರಮೇಶ್, ಹಾಸನ ತಾಲೂಕು ಅಧ್ಯಕ್ಷೆ ಕೆ.ಸಿ. ಗೀತಾರವರುಗಳನ್ನೊಳಗೊಂಡ ಸಮಿತಿ ಕಳೆದ ಐದು ದಶಕಗಳಿಂದ ಬೀದಿ ನಾಟಕ, ಹೋರಾಟಗೀತೆಗಳು, ರೈತ ಚಳವಳಿ,…
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬೆಳ್ತಂಗಡಿ ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿ ಆಡಳಿತ ಸಮಿತಿ ಸಹಯೋಗದೊಂದಿಗೆ ದಿನಾಂಕ 20 ಡಿಸೆಂಬರ್ 2025ರಂದು ಜಿಲ್ಲಾ ಮಟ್ಟದ ದಫ್ ಸ್ಪರ್ಧೆ ಆಯೋಜಿಸಿದೆ. ತಾಲೂಕು ಮಟ್ಟದ ಸ್ಪರ್ಧೆ ದಿನಾಂಕ 11 ಡಿಸೆಂಬರ್ 2025ರಂದು ನಡೆಯಲಿದ್ದು, ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದ ತಂಡಗಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ಜಿಲ್ಲಾಮಟ್ಟದ ಸ್ಪರ್ಧೆ ವಿಜೇತ ತಂಡಗಳಿಗೆ ರೂ.10,000/-, ರೂ.7,000/- ಮತ್ತು ರೂ.5,000/- ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನ ಹಾಗೂ ತಾಲೂಕು ಮಟ್ಟದ ವಿಜೇತ ತಂಡಗಳಿಗೆ ರೂ.3,000/- ಮತ್ತು ರೂ.2000/- ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ನಗದು ಬಹುಮಾನ ನಿಗದಿಪಡಿಸಲಾಗಿದೆ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ತಂಡಗಳಿಗೆ ರೂ.2,000/- ಮತ್ತು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ರೂ.1,000/- ಪ್ರಯಾಣ ಭತ್ಯೆ ಹಾಗೂ ಎಲ್ಲ ಕಲಾವಿದರಿಗೆ ಆಕಾಡೆಮಿ ವತಿಯಿಂದ ಪ್ರಮಾಣಪತ್ರ ನೀಡಲಾಗುವುದು. ಆಸಕ್ತರು ದಿನಾಂಕ 08 ಡಿಸೆಂಬರ್ 2025ರ ಒಳಗಾಗಿ…
ಮೈಸೂರು : ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ (ರಿ.) ಆಯೋಜಿಸುವ ‘ನೆನಪಿನಂಗಳ’ ರಂಗಭೂಮಿಯ ನೆನ್ನೆ ನಾಳೆಗಳ ನಡುವೆ ಸಂವಾದ ಕಾರ್ಯಕ್ರಮವನ್ನು ದಿನಾಂಕ 06 ಡಿಸೆಂಬರ್ 2025ರಂದು ಸಂಜೆ 5-00 ಗಂಟೆಗೆ ಮೈಸೂರಿನ ಶ್ರೀರಂಗ ರಂಗಾಯಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂಗಳದಲ್ಲಿ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಇವರು ಭಾಗವಹಿಸಲಿದ್ದಾರೆ.
ಬೆಳಗಾವಿ : ರಂಗಸಂಪದ ಬೆಳಗಾವಿ ಪ್ರಸ್ತುತ ಪಡಿಸುವ ‘ಅಭಿಷೇಕ ಅಲಾಯನ್ಸ ನಾಟಕೋತ್ಸವ’ವನ್ನು ದಿನಾಂಕ 05ರಿಂದ 07 ಡಿಸೆಂಬರ್ 2025ರಂದು ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 05 ಡಿಸೆಂಬರ್ 2025ರಂದು ಸಂಜೆ 6-00 ಗಂಟೆಗೆ ನಾಟಕೋತ್ಸವ ಉದ್ಘಾಟನೆಗೊಳ್ಳಲಿದ್ದು, ನೀನಾಸಮ್ ತಿರುಗಾಟ – 2025ರ ಹೊಸ ನಾಟಕ ಬಾನು ಮುಷ್ತಾಕ ಕಥೆ ಆಧಾರಿತ ‘ಹೃದಯದ ತೀರ್ಪು’ ನಾಟಕ ಪ್ರದರ್ಶನ ಡಾ. ಎಮ್. ಗಣೇಶ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ, ದಿನಾಂಕ 06 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ‘ಅವತಾರಣಮ್ ಭ್ರಾಂತಾಲಯಂ’ ನಾಟಕ ಪ್ರದರ್ಶನ ಜಿ. ಶಂಕರ್ ಪಿಳ್ಳೆ (ಮಲಯಾಳಂ) ಇವರ ಮೂಲ ಕೃತಿಯನ್ನು ನಾ. ದಾಮೋದರ ಶೆಟ್ಟಿ ಇವರು ಕನ್ನಡಕ್ಕೆ ಅನುವಾಡಿಸಿದ್ದು, ಶಂಕರ ವೆಂಕಟೇಶ್ವರ್ ಇವರ ನಿರ್ದೇಶನದಲ್ಲಿ ಪ್ರಸ್ತುತಗೊಳ್ಳಲಿದೆ. ದಿನಾಂಕ 07 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಳಗಾವಿಯ ರಂಗಸಂಪದ ತಂಡ ಪ್ರಸ್ತುತ ಪಡಿಸುವ ‘ಸ್ಮರಿಸಿ ಬದುಕಿರೋ’ ಭಕ್ತಿಪೂರ್ಣ ನಾಟಕ ಡಾ. ಅರವಿಂದ ಕುಲಕರ್ಣಿ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ಶಿಕ್ಷಕರಾದ ಉಡುಪಿಯ ಶ್ರೀ ಶ್ರೀನಿವಾಸ ಹೆಬ್ಬಾರ್ ಇವರಿಗೆ 5 ಡಿಸೆಂಬರ್ 1924ರಲ್ಲಿ ಜನಿಸಿದ ಸುಪುತ್ರ ಕೆ.ಎಸ್. ರಾಜಗೋಪಾಲ್. ಮೆಟ್ರಿಕ್ ಓದುವ ಸಮಯದಲ್ಲಿ ಲಲಿತ ಕಲೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡ ರಾಜಗೋಪಾಲರಿಗೆ ನೃತ್ಯದ ಬಗ್ಗೆ ವಿಶೇಷವಾದ ಆಸಕ್ತಿ ಬೆಳೆದದ್ದು ಮಾತ್ರವಲ್ಲ, ಖ್ಯಾತ ನಾಟ್ಯಾಚಾರ್ಯರಾದ ನಾಗಭೂಷಣರ ಶಿಷ್ಯರಾಗಬೇಕೆಂಬ ಆಸೆಯೂ ಇತ್ತು. ಆದರೆ ಅವರ ಪರಿಚಯವಿರಲಿಲ್ಲ. ನಂತರದಲ್ಲಿ ತಮ್ಮ ಹದಿನಾರನೆಯ ವಯಸ್ಸಿನಲ್ಲಿ ನೃತ್ಯಗುರು ಶ್ರೀ ಎಂ.ಆರ್. ನಾಗಭೂಷಣ ಇವರ ಮಾರ್ಗದರ್ಶನದಲ್ಲಿ ಪ್ರಾಥಮಿಕ ಭರತನಾಟ್ಯ ಶಿಕ್ಷಣವನ್ನು ಪಡೆದರು. ಮುಂದೆ ‘ನಾಟ್ಯ ಸರಸ್ವತಿ’ ಎಂದೇ ಪ್ರಸಿದ್ಧರಾದ ಜಟ್ಟಿ ತಾಯಮ್ಮ ಮತ್ತು ನಾಟ್ಯ ಪ್ರವೀಣೆ ಸುಂದರಮ್ಮನವರ ಬಳಿ ಉನ್ನತ ಶಿಕ್ಷಣವನ್ನು ಪಡೆದು ‘ನಾಟ್ಯಾಚಾರ್ಯ’ ಎಂದು ಪ್ರಸಿದ್ಧರಾದರು. ಆ ಕಾಲದಲ್ಲಿ ಪ್ರಸಿದ್ಧ ನಾಟಕ ಕಂಪನಿಯ ಮಾಲೀಕರಾಗಿದ್ದ ಗುಬ್ಬಿ ವೀರಣ್ಣ, ಹಿರಣ್ಣಯ್ಯ, ಜಟ್ಟಪ್ಪ ಹೀಗೆ ಅವರ ಕಂಪನಿ ನಾಟಕಗಳಲ್ಲಿ ಸ್ತ್ರೀ ಪಾತ್ರವನ್ನು ನಿರ್ವಹಿಸುತ್ತಿದ್ದರು. 1938ರಲ್ಲಿ ರಾಜಗೋಪಾಲ್ ಮೈಸೂರಿಗೆ ಬಂದು ನೃತ್ಯ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಉಡುಪಿಯ ಶ್ರೀ ಬಿ.ಎಸ್. ವ್ಯಾಸವಿಠಲ್ ಇವರ ಪುತ್ರಿ…
ಬೆಂಗಳೂರಿನಲ್ಲಿ ಹುಟ್ಟಿದ ಸುಪ್ರಸಿದ್ಧ ಪಿಟೀಲು ವಾದಕರಾದ ವೀರಭದ್ರಯ್ಯನವರು ಸಂಗೀತದ ವಾತಾವರಣದಲ್ಲಿಯೇ ಬೆಳೆದರು. ತಂದೆ ಹಾರ್ಮೋನಿಯಂ ವಿದ್ವಾನ್ ಎಂ. ಅರುಣಾಚಲಪ್ಪ, ತಾಯಿ ಅನ್ನಪೂರ್ಣಮ್ಮ. 4 ಡಿಸೆಂಬರ್ 1923ರಲ್ಲಿ ಜನಿಸಿದ ಇವರು ಎಳವೆಯಲ್ಲಿ ತಂದೆಯಿಂದಲೇ ಪಿಟೀಲು ಶಿಕ್ಷಣವನ್ನು ಪಡೆದರು. ಪ್ರೌಢ ಶಿಕ್ಷಣವನ್ನು ನೀಡಿದವರು ಎಲ್.ಎಸ್ ನಾರಾಯಣಸ್ವಾಮಿ ಭಾಗವತರು. ‘ಗಾನ ಸುಧಾಕರ ಖ್ಯಾತಿಯ’ ಎ. ಸುಬ್ಬರಾಯರ ಕಛೇರಿಗಳಿಗೆ 40 ವರ್ಷಗಳ ಕಾಲ ನಿರಂತರವಾಗಿ ಪಕ್ಕ ವಾದ್ಯ ನುಡಿಸಿದ ದಾಖಲೆ ಇವರದು. ಏಕವ್ಯಕ್ತಿ ಪಿಟೀಲು ವಾದನ ಕಚೇರಿ ಮಾತ್ರವಲ್ಲದೆ, ಪ್ರತಿಷ್ಠಿತ ವೇದಿಕೆಗಳಲ್ಲಿ ಘನವೆತ್ತ ವಿದ್ವಾಂಸರಿಗೆ ಹಿನ್ನೆಲೆ ನೀಡಿದ ಖ್ಯಾತರು. ‘ಅರುಣಾ ಮ್ಯೂಸಿಕಲ್’ ಸ್ಥಾಪಿಸುವ ಮೂಲಕ ವೀಣೆ ಮತ್ತು ತಂಬೂರಿ ತಯಾರಿಕಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು. ‘ಕರ್ನಾಟಕ ಗಾನ ಕಲಾ ಪರಿಷತ್ತು’ ಇದರ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ ಸಮರ್ಥವಾಗಿ ನಡೆಸಿಕೊಂಡು ಬಂದವರು. ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ವಿಜಯ ಸಂಗೀತ ಮಹಾವಿದ್ಯಾಲಯದ ಸ್ಥಾಪಕ ಸದಸ್ಯರಾಗಿ, ‘ವಾಣಿ ಸಂಗೀತ ವಿದ್ಯಾಲಯ’ ಮತ್ತು ‘ಕೃಷ್ಣ ಸಂಗೀತ ಸಭೆ’ಯ ಅಧ್ಯಕ್ಷರಾಗಿ…
ಉಡುಪಿ : ಕನ್ನಡದ ಡಿಜಿಟಲ್ ಯುಗಕ್ಕೆ ಕೀಲಿಮಣೆ ಮೂಲಕ ಹೊಸ ದಾರಿ ತೋರಿದ ಕಂಪ್ಯೂಟರ್ ಕೀಲಿಮಣೆ ವಿನ್ಯಾಸಗಾರ ಪ್ರೊ. ಕೆ.ಪಿ. ರಾವ್ ಇವರನ್ನು ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಆಯ್ಕೆ ಸಮಿತಿ ವಿದ್ವಾಂಸರಾದ ಎಚ್.ವಿ. ನಾಗರಾಜ ರಾವ್, ಉಮಾಕಾಂತ ಭಟ್, ಮಲ್ಲೇಪುರಂ ಜಿ. ವೆಂಕಟೇಶ್ ಸರ್ವಾನುಮತದ ಆಯ್ಕೆಯನ್ನು ಸೂಚಿಸಿದ್ದಾರೆ ಎಂದು ಟ್ರಸ್ಟ್ ವಿಶ್ವಸ್ಥೆ ವೀಣಾ ಬನ್ನಂಜೆ ತಿಳಿಸಿದ್ದಾರೆ. ಬನ್ನಂಜೆ ಗೋವಿಂದಾಚಾರ್ಯರ ಪುಣ್ಯ ಸ್ಮರಣೆಯ ಪ್ರಯುಕ್ತ ದಿನಾಂಕ 13 ಡಿಸೆಂಬರ್ 2025ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಪುರಸ್ಕಾರ ಗೌರವ ಫಲಕ, ಪ್ರಶಸ್ತಿ ಪತ್ರ ಮತ್ತು 25,000 ಗೌರವ ಧನ ಸಹಿತವಾಗಿ ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದರು ಪ್ರದಾನ ಮಾಡುವರು. ಯುವ ವಿದ್ವಾಂಸ ವಿನಯ ವಾರಣಾಸಿ ಇವರು ‘ಗೋವಿಂದ ನಾಮ ಜಿಜ್ಞಾಸೆ’ ವಿಷಯವಾಗಿ ಉಪನ್ಯಾಸ ನೀಡುವರು.
ಬಂಟ್ವಾಳ : ವಿದುಷಿ ವಿದ್ಯಾ ಮನೋಜ್ ನಿರ್ದೇಶನದ ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಭರತನಾಟ್ಯ ಸಂಸ್ಥೆಯ 25ನೇ ವರ್ಷದ ಅಂಗವಾಗಿ ರಜತ ಕಲಾಯಾನ ಸರಣಿ ಕಾರ್ಯಕ್ರಮದ ಪ್ರಯುಕ್ತ ‘ಭಾವಾಭಿವ್ಯಕ್ತಿ’ ಭರತನಾಟ್ಯ ಕಾರ್ಯಕ್ರಮ ಕಲ್ಲಡ್ಕದ ಕಲಾನಿಕೇತನದಲ್ಲಿ ದಿನಾಂಕ 28 ನವೆಂಬರ್ 2025ರಂದು ಆರಂಭಗೊಂಡಿದ್ದು, ಖ್ಯಾತ ನೃತ್ಯ ಗುರುಗಳಾದ ವಿದುಷಿ ಶೀಲ ಚಂದ್ರಶೇಖರ್ ಹಾಗೂ ದೀಪ್ತಿ ರಾಧಾಕೃಷ್ಣ ಇವರ ಭರತನಾಟ್ಯ ಕಾರ್ಯಕ್ರಮ ಸಂಸ್ಥೆಯ ವಿದ್ಯಾರ್ಥಿಗಳನ್ನು ಹಾಗೂ ನೆರೆದ ಪ್ರೇಕ್ಷಕ ವರ್ಗವನ್ನು ಮಂತ್ರಮುಗ್ಧಗೊಳಿಸಿತು. ಭಾನುಮತಿ ನೃತ್ಯ ಕಲಾಮಂದಿರಂ ಇದರ ನಿರ್ದೇಶಕಿ ಮತ್ತು ಜೈನ್ (ಡಿಮ್ಸ್ ಟು ಬಿ) ಯೂನಿವರ್ಸಿಟಿ ಬೆಂಗಳೂರು ಇದರ ಅತಿಥಿ ಉಪನ್ಯಾಸಕಿ ಗುರು ವಿದುಷಿ ಶೀಲಾ ಚಂದ್ರಶೇಖರ್ ಹಾಗೂ ಭಾನುಮತಿ ನೃತ್ಯ ಕಲಾಮಂದಿರಂ ಶಿಷ್ಯ ಹಾಗೂ ಜೈನ್ (ಡಿಮ್ಸ್ ಟು ಬಿ) ಯೂನಿವರ್ಸಿಟಿ ಬೆಂಗಳೂರು ಇಲ್ಲಿನ ಸಂಶೋಧಕಿ ಮತ್ತು ಉಪನ್ಯಾಸಕಿ ದೀಪ್ತಿ ರಾಧಾಕೃಷ್ಣ ಇವರಿಂದ ಭರತನಾಟ್ಯ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಮೊದಲ ದಿನ ಇಬ್ಬರ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಖ್ಯಾತ ನೃತ್ಯ ಪಟುಗಳ ನಾಟ್ಯ,…