Author: roovari

ಮೈಸೂರು : ಅಂತರಂಗ ಅಭಿನಯಿಸುವ ಕೈಲಾಸಂರ ‘ಹುತ್ತದಲ್ಲಿ ಹುತ್ತ’ ಅಪೂರ್ವ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 22 ಫೆಬ್ರವರಿ 2026ರಂದು ಸಂಜೆ ಗಂಟೆ 7-15ಕ್ಕೆ ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. 64ನೇ ಪ್ರದರ್ಶನದ ಈ ನಾಟಕವನ್ನು ಮೂಲ ನಿರ್ದೇಶನ ಡಾ. ಬಿ.ವಿ. ರಾಜಾರಾಂ ಹಾಗೂ ಪರಿಷ್ಕೃತ ನಿರ್ದೇಶನ ಅರ್ಚನಾ ಶ್ಯಾಮ್ ಇವರು ಮಾಡಿರುತ್ತಾರೆ. ಅಂಕಲ್ ಶ್ಯಾಂ ಇವರು ನಿರ್ವಹಣೆ ಮಾಡಿರುವ ಈ ನಾಟಕ ನಿರಂತರ ಫೌಂಡೇಷನ್ ಮೈಸೂರು ಇವರ ಸಹಕಾರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಅಂತರಂಗ ತಂಡ 46 ವರ್ಷಗಳಿಂದ ರಂಗ ಕ್ರಿಯಯನ್ನು ನಡೆಸಿಕೊಂಡು ಬರುತ್ತಿದ್ದು, ಕೈಲಾಸಂರ ‘ಹುತ್ತದಲ್ಲಿ ಹುತ್ತ’ ನಾಟಕವನ್ನು ಈಗಾಗಲೇ ಯಶಸ್ವಿಯಾಗಿ ಪ್ರದರ್ಶಿಸಿದೆ. ಕೈಲಾಸಂ ಒಬ್ಬ ಅಪ್ರತಿಮ ನಾಟಕಕಾರ. ಇಂದಿಗೂ ಅವರ ನಾಟಕಗಳು ಪ್ರಸ್ತುತವಾಗಿದ್ದು, ರಂಗಭೂಮಿಯಲ್ಲಿ ಚಿರಸ್ಥಾಯಿಯಾಗಿದೆ.

Read More

ಬೆಂಗಳೂರು : ನಾಟಕ ತಂಡಗಳು 50 ವರ್ಷ ಪೂರೈಸಿದ ಹಿನ್ನೆಲೆ ರಂಗಭೂಮಿ ದಿಗ್ಗಜರಿಗೆ ನಮನ ಸಲ್ಲಿಸುವುದಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ದಿನಾಂಕ 21ರಿಂದ 26 ಫೆಬ್ರವರಿ 2026ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಹೊನ್ನಾರು ನಾಟಕೋತ್ಸವ’ದಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ದಿನಾಂಕ 21 ಫೆಬ್ರವರಿ 2026ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಇವರು ಉದ್ಘನಟನೆ ಮಾಡಲಿದ್ದು, ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಇವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ನಟ ಪ್ರಕಾಶ್ ರಾಜ್, ದತ್ತಣ್ಣ, ಶ್ರೀನಿವಾಸ್ ಕಪ್ಪಣ್ಣ, ಮೇರು ನಟಿಯರಾದ ಜಯಶ್ರೀ, ಡಾ. ಉಮಾಶ್ರೀ, ಗಿರೀಜಾ ಲೋಕೇಶ್, ನಿರ್ದೇಶಕ ಟಿ.ಎಸ್. ನಾಗಾಭರಣ, ವಿ.ಎಂ. ನಾಗೇಶ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ರಂಗೋತ್ಸವದಲ್ಲಿ ರಂಗಸಂಪದ, ಸಮುದಾಯ, ನಟರಂಗ, ಕಲಾ ಗಂಗೋತಿ, ಸ್ಪಂದನ ಹಾಗೂ ಬೆನಕ ತಂಡಗಳು ಪಾಲ್ಗೊಳ್ಳಲಿವೆ. ದಿನಾಂಕ 21 ಫೆಬ್ರವರಿ 2026ರಂದು ರಂಗಸಂಪದ ತಂಡದಿಂದ ಸಂಜೆ ಗಂಟೆ 7-00ಕ್ಕೆ ‘ಶರ್ಮಿಷ್ಠೆ’, ದಿನಾಂಕ 22 ಫೆಬ್ರವರಿ 2026ರಂದು ಸಮುದಾಯ ತಂಡದಿಂದ ಸಂಜೆ ಗಂಟೆ 6-30ಕ್ಕೆ ‘ಭಗವಂತನ…

Read More

ಮಂಗಳೂರು : ಅಸ್ತಿತ್ವ (ರಿ.) ಮಂಗಳೂರು ಪ್ರಸ್ತುತಪಡಿಸುವ ಜೇಸನ್ ಲೋಬೊ ಇವರ ‘ಮಿಸ್ತೇರಿಯುಮ್’ ಕೊಂಕಣಿ ಸಂಗೀತ ಕಾರ್ಯಕ್ರಮವು ದಿನಾಂಕ 20 ಫೆಬ್ರವರಿ 2026ರಂದು ಸಂಜೆ 6-30 ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ದಲ್ಲಿ ನಡೆಯಲಿದೆ.

Read More

ದುಬೈ : ಕಥಾ ಬಿಂದು ಪ್ರಕಾಶನದ ವತಿಯಿಂದ ದುಬೈ ರೀಜೆಂಟ್ ಪ್ಯಾಲೇಸ್ ಹೋಟೆಲ್ ಬುರ್ಜುಮನ್ ಶಾಪಿಂಗ್ ಮಾಲ್ ಬಳಿ, ಬರ್ ದುಬೈ ಇಲ್ಲಿನ ರೆಸ್ಟೋರೆಂಟ್ ನಲ್ಲಿ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ದಿನಾಂಕ 18 ಫೆಬ್ರವರಿ 2026ರಂದು ‘ಕನ್ನಡ ಕಂಪು ಸರಣಿ -9’ ಕಾರ್ಯಕ್ರಮವು ಅಧ್ಯಾಪಕಿ ಶ್ರೀಮತಿ ಶೋಭಾ ಲೋಕೇಶ್ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಶ್ರೀ ಜಗದೀಶ್ ಪೈ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಶ್ರೀ ಹರಿಶ್ಚಂದ್ರ ಪಿ. ಸಾಲಿಯಾನ್ ಇವರು ಕಾರ್ಯಕ್ರಮದ ಉದ್ಘಾಟನೆಗೈದರು. ಶ್ರೀಮತಿ ಮಂಜುಳ ಅನಿಲ್ ರಾವ್ ಹಾಗೂ ಶ್ರೀ ಮಂಜುನಾಥ್ ಕಾಸರಗೋಡು, ಶ್ರೀ ಗಂಗಾಧರ ಅಮೀನ್ ಮುಖ್ಯ ಅತಿಥಿಯಾಗಿದ್ದರು. ಶ್ರೀಮತಿ ಗೀತಾ ಭಟ್ ಉಪಸ್ಥಿತಿ ವಹಿಸಿದ್ದರು. ಲೇಖಕ ಹರಿಶ್ಚಂದ್ರ ಪಿ. ಸಾಲಿಯನ್ ಇವರ ‘ತುಳುನಾಡ ತುಳು ಗಾದೆಲು’, ಲೇಖಕಿ ಶ್ರೀಮತಿ ಆಶಾ ದಿಲೀಪ್ ಸುಳ್ಯಮೆ ಇವರ ‘ಆಪ್ತ ಸಂಗಾತಿ’ ವ್ಯಕ್ತಿತ್ವ ವಿಕಸನ ಲೇಖನ ಹಾಗೂ ಲೇಖಕಿ, ಶಿಕ್ಷಕಿ ರೇಖಾ ಸುರೇಶ್ ರಾವ್ ಇವರ ‘ಸುಷುಮ್ನ’ ಕವನ ಸಂಕಲನ…

Read More

ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ನಡೆಯುವ ‘ತಿಂಗಳ ನಾಟಕ ಸಂಭ್ರಮ’ದ ಕಾರ್ಯಕ್ರಮವನ್ನು ದಿನಾಂಕ 21 ಫೆಬ್ರವರಿ 2026ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತ ರಾವ್ ಪಾಟೀಲ್ ಇವರು ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಸನ ಜಂಜೂರು ಇಲ್ಲಿನ ಶ್ರೀ ಕೋಟೆಮಾರಮ್ಮ ಮಹಿಳಾ ಕಲಾತಂಡ (ರಿ.) ಇವರಿಂದ ಮಹಿಳೆಯರು ಅಭಿನಯಿಸುವ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.

Read More

ಉಜಿರೆ : ನಾಟ್ಯಾರಾಧನಾ ಕಲಾ ಕೇಂದ್ರ ಪ್ರಸ್ತುತ ಪಡಿಸುವ ನೃತ್ಯ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಇವರ ಶಿಷ್ಯೆಯರಾದ ಕುಮಾರಿ ಧರಿತ್ರಿ ಭಿಡೆ ಮತ್ತು ಕುಮಾರಿ ಹಂಸಿನೀ ಭಿಡೆ ಸಹೋದರಿಯರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ದಿನಾಂಕ 21 ಫೆಬ್ರವರಿ 2026ರಂದು ಸಂಜೆ ಗಂಟೆ 4-30ಕ್ಕೆ ಉಜಿರೆಯ ಎಸ್.ಡಿ.ಎಂ. ಕಾಲೇಜ್ ಕ್ಯಾಂಪಸ್ ನ ಇಂದ್ರಪ್ರಸ್ಥ ಅಡಿಟೋರಿಯಂ‌ನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಶ್ರೀಮತಿ ನಿರುಪಮಾ ರಾಜೇಂದ್ರ ಮತ್ತು ಟಿ.ಡಿ. ರಾಜೇಂದ್ರ, ಗುರು ಚಂದ್ರಶೇಖರ್ ನಾವಡ, ಡಾ. ಸತೀಶ್ಚಂದ್ರ ಎಸ್. ಮತ್ತು ಶರತ್ ಕೃಷ್ಣ ಪಾದ್ವೆಟ್ನಾಯ ಇವರುಗಳು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನೃತ್ಯ ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿದುಷಿ ಸುಮಂಗಲಾ ರತ್ನಾಕರ್ ರಾವ್, ಹಾಡುಗಾರಿಕೆಯಲ್ಲಿ ವಿದ್ವಾನ್ ರೋಹಿತ್ ಭಟ್ ಉಪ್ಪೂರು ಬೆಂಗಳೂರು, ಮೃದಂಗ ವಾದನ ವಿದ್ವಾನ್ ವಿನಯ್ ನಾಗರಾಜನ್ ಬೆಂಗಳೂರು, ಕೊಳಲು ವಾದನ ವಿದ್ವಾನ್ ನಿತೀಶ್ ಅಮ್ಮಣ್ಣಾಯ ಬೆಂಗಳೂರು ಮತ್ತು ವೀಣೆ ವಿದುಷಿ ಶ್ರೀಲತಾ ನಿಕ್ಷಿತ್ ಬೆಂಗಳೂರು ಸಹಕರಿಸಲಿದ್ದಾರೆ. ಕಲಾಭಿಮಾನಿಗಳಿಗೆ ಹಾರ್ದಿಕ ಸ್ವಾಗತ ಕೋರಲಾಗಿದೆ.

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿನಾಂಕ 27 ಮತ್ತು 28 ಮಾರ್ಚ್ 2026ರಂದು ಬಿ.ಸಿ. ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿರುವ 28ನೇ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆಯಾಗಿದ್ದಾರೆ. ಕನ್ನಡದ ಮಹತ್ವದ ಕವಿಯಾಗಿ ಗುರುತಿಸಿಕೊಂಡಿರುವ ಚಿದಂಬರ ಬೈಕಂಪಾಡಿ ‘ಬೇಗುದಿ’, ‘ವಾಸ್ತವದ ಲೆಕ್ಕಾಚಾರ’, ‘ಕಪ್ಪು ಹುಡುಗ’ ಕವನ ಸಂಕಲನ ಪ್ರಕಟಿಸಿದ್ದು, ‘ತುಳು ಪ್ರೇಮ ಗೀತೆಗಳು’ ಅವರ ಧ್ವನಿ ಸುರುಳಿಯಾಗಿ ಹೊರಬಂದಿದೆ. ಪತ್ರಕರ್ತ ಹಾಗೂ ಲೇಖಕರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದು, ಮುಂಗಾರು ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ‘ಇದು ಮುಂಗಾರು’ ‘ಪ.ಗೋ. ಪ್ರಪಂಚ’ ಪತ್ರಿಕೋದ್ಯಮ ಕುರಿತ ಪುಸ್ತಕ, ‘ರಾಜಕೀಯ ಒಳಸುಳಿಗಳು’, ಲೇಖನಗಳು ಸೇರಿದಂತೆ ಹಲವು ಕೃತಿ ಹೊರತಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ…

Read More

ಮಂಗಳೂರು : ಸಂತ ಆಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ರಂಗ ಅಧ್ಯಯನ ಕೇಂದ್ರ ಆಯೋಜಿಸುವ ‘ಸುರೋನ್ ಕಿ ಮೆಹ್ಪಿಲ್’ ಭಾರತೀಯ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ದಿನಾಂಕ 19 ಫೆಬ್ರವರಿ 2026ರಂದು ಸಂಜೆ ಗಂಟೆ 6-30ಕ್ಕೆ ಮಂಗಳೂರಿನ ಸಂತ ಆಲೋಶಿಯಸ್ ನ ಮದರ್ ತೆರೆಜಾ ಪೀಸ್ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾಗಿದೆ. ಕೀರ್ತನ್ ನೈಗಾ ಇವರೊಂದಿಗೆ ರಾಜೇಶ್ ಭಾಗವತ್, ಸ್ವಯಂ ಪ್ರಕಾಶ್ ಪ್ರಭು, ಹೇಮಂತ್ ಭಾಗವತ್ ಮತ್ತು ಪಾಂಡು ಭಾಗವತ್ ಇವರುಗಳು ಸಹಕರಿಸಲಿದ್ದಾರೆ.

Read More

ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಇದರ ವತಿಯಿಂದ ದಿನಾಂಕ 27 ಮತ್ತು 28 ಮಾರ್ಚ್ 2026ರಂದು ಬಂಟ್ವಾಳ ಬಿ.ಸಿ. ರೋಡ್‌ನಲ್ಲಿ ಆಯೋಜಿಸುವ ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃತಿ ಬಿಡುಗಡೆಗೆ ಅವಕಾಶ ಕಲ್ಪಿಸಿದ್ದು ಆಸಕ್ತ ಲೇಖಕರು, ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಪ್ರಕಾರದ ಕನ್ನಡ ಪುಸ್ತಕಗಳ ಬಿಡುಗಡೆಗೆ ಅವಕಾಶವಿದೆ. ಆಸಕ್ತರು ಗೀತಾ ಎಸ್. ಕೊಂಕೋಡಿ – 9480367856, ರಜನಿ ಚಿಕ್ಕಯ್ಯ – 7022183946 ಇವರನ್ನು ದಿನಾಂಕ 25 ಫೆಬ್ರವರಿ 2026ರ ಒಳಗೆ ಸಂಪರ್ಕಿಸಿ, ಮಾಹಿತಿ ಪಡೆಯಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ. ಶ್ರೀನಾಥ ತಿಳಿಸಿದ್ದಾರೆ.

Read More

ಮುಂಬೈ : ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗವು ಆಯೋಜಿಸಿದ್ದ ಅಭಿಜಿತ್ ಪ್ರಕಾಶನ ಪ್ರಕಟಿಸಿದ ಡಾ. ಮರಿಯಪ್ಪ ನಾಟೇಕರ್ ಇವರ ‘ಕಾಗೆ ಬಣ್ಣದ ಕವಿತೆ’ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮವು ದಿನಾಂಕ 13 ಫೆಬ್ರವರಿ 2026ರಂದು ಸಾಂತಾಕ್ರೂಜ್ (ಪೂ) ವಿದ್ಯಾನಗರಿ ಕಲೀನಾದ ಇಂಗ್ಲೀಷ್ ವಿಭಾಗದ ನೆಲಮಹಡಿಯಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್. ಉಪಾಧ್ಯ ಇವರು ಮಾತನಾಡಿ “ಶೋಷಣೆಗೆ ಒಳಗಾದ ದನಿ ಇಲ್ಲದ ದಲಿತ ಸಮುದಾಯದ ಅಂತರಂಗದ ಪ್ರತಿಧ್ವನಿಯಾಗಿ ‘ಕಾಗೆ ಬಣ್ಣದ ಕವಿತೆ’ ಮೂಡಿಬಂದಿದೆ. ಡಾ. ಮರಿಯಪ್ಪ ನಾಟೇಕರ್ ಅವರು ಸೂಕ್ಷ್ಮ ಸಂವೇದನೆಯ ಕವಿ. ಅವರ ಈ ಸಂಕಲನ ವಿಶಿಷ್ಟ ರೂಪಕ ಪ್ರತಿಮೆಗಳ ಮೂಲಕ ಅಲಕ್ಷಿತ ಸಮುದಾಯದ ಬದುಕನ್ನು ಲೋಕಮುಖಕ್ಕೆ ಪರಿಚಯಿಸುವ ಪರಿ ಅನನ್ಯವಾದದ್ದು. ಓದುಗರ ಅಂತರಂಗ ಪ್ರವೇಶಿಸಿ ಚಿಂತನ ಮಂಥನ ನಡೆಸುವಂತೆ ಈ ಕೃತಿ ನಮ್ಮನ್ನು ಕಾಡುತ್ತದೆ, ಕನ್ನಡ ದಲಿತ ಸಾಹಿತ್ಯಕ್ಕೆ ಇದೊಂದು ಮೌಲಿಕ ಕೊಡುಗೆ” ಎಂದು ಹೇಳಿದರು. ಸಂಘಟಕ, ಉದ್ಯಮಿ…

Read More