Author: roovari

ಶಿವಮೊಗ್ಗ : ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಿಂದ ಕೊಡಮಾಡುವ 2025ನೇ ಸಾಲಿನ ‘ಕುವೆಂಪು ರಾಷ್ಟ್ರೀಯ ಪ್ರಶಸ್ತಿ’ಗೆ ಕೊಂಕಣಿ ಮತ್ತು ಮರಾಠಿ ಬರಹಗಾರ ಮಹಾಬಲೇಶ್ವರ ಸೈಲ್ ಆಯ್ಕೆಯಾಗಿದ್ದಾರೆ. ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿರುವ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ರೂ.5 ಲಕ್ಷ ನಗದು ಹಾಗೂ ಬೆಳ್ಳಿಯ ಪದಕವನ್ನು ಪ್ರಶಸ್ತಿಯು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಕುವೆಂಪು ಅವರ ಜನ್ಮದಿನವಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ದಿನಾಂಕ 29 ಡಿಸೆಂಬರ್ 2025ರಂದು ನಡೆಯಲಿದೆ. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಇವರ ಅಧ್ಯಕ್ಷತೆಯಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಆಯ್ಕೆ ಸಮಿತಿಯಲ್ಲಿ ಕೊಂಕಣಿ ಭಾಷಾ ಸಾಹಿತಿಗಳೂ ಅನುವಾದಕ ಶಾ.ಮಂ. ಕೃಷ್ಣರಾಯ, ಸಾಹಿತ್ಯ ಅಕಾಡೆಮಿಯ ನಿವೃತ್ತ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರು ಮತ್ತು ಪ್ರತಿಷ್ಠಾನದ ಕಾರ್ಯದ ಕಡಿದಾಳ್ ಪ್ರಕಾಶ್ ಸಮಿತಿಯ ಸಂಚಾಲಕರಾಗಿದ್ದರು. ಕೊಂಕಣಿ ಭಾಷಾ ಸಾಹಿತ್ಯದ ಶ್ರೀಮಂತಿಕೆ ಹಾಗೂ ಸತ್ವವನ್ನು ತಮ್ಮ…

Read More

ಮಂಗಳೂರು : ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ಯಕ್ಷಭಾರತಿ (ರಿ.) ಪುತ್ತೂರು ಇವರ ಸಹಯೋಗದೊಂದಿಗೆ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ 13ನೇ ವರ್ಷದ ಯಕ್ಷಗಾನ ತಾಳಮದ್ದಳೆ ಸಪ್ತಾಹದ ನಾಲ್ಕನೇ ದಿನ ಹಿರಿಯ ವಿದ್ವಾಂಸ ಮತ್ತು ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ದಿ. ವಿದ್ವಾನ್ ಕೆ. ಕಾಂತ ರೈ ಮೂಡುಬಿದಿರೆ ಇವರ ಸಂಸ್ಮರಣಾ ಕಾರ್ಯಕ್ರಮ ದಿನಾಂಕ 26 ನವೆಂಬರ್ 2025ರಂದು ನಡೆಯಿತು. ಮಂಗಳೂರು ಎಸ್.ಕೆ. ಗೋಲ್ಡ್ ಸ್ಮಿತ್ ಕೋ-ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷರಾದ ಉಪೇಂದ್ರ ಆಚಾರ್ಯ ಪೆರ್ಡೂರು ಸಂಸ್ಮರಣಾ ಜ್ಯೋತಿ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ‘ಯಕ್ಷಗಾನವನ್ನು ಪ್ರೀತಿಸುವವರು ತಮ್ಮ ಹಿರಿಯರನ್ನು ಯಾವತ್ತೂ ಗೌರವಿಸುತ್ತಾರೆ. ಯಕ್ಷಗಾನ ವಾಙ್ಮಯಕ್ಕೆ ಅಪೂರ್ವ ಕೊಡುಗೆ ನೀಡಿದ ಹಿರಿಯ ಅರ್ಥಧಾರಿ ವಿದ್ವಾನ್ ಕಾಂತ ರೈಯವರ ಬಂಧುಗಳು ಪ್ರತಿವರ್ಷ ಅದ್ದೂರಿ ಕಾರ್ಯಕ್ರಮದ ಮೂಲಕ ಅವರನ್ನು…

Read More

ಆಲೂರು : ತಾಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಯೋಜಕತ್ವದಲ್ಲಿ ಹನುಮಂತರಾಯ ಸಮುದಾಯ ಭವನದಲ್ಲಿ ದಿನಾಂಕ 21 ನವೆಂಬರ್ 2025ರಂದು ತಾಳೂರು ಪಂಚಾಯಿತಿ ವ್ಯಾಪ್ತಿಯ ಕಾಮತಿಕೂಡಿಗೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಳೂರು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಟಿ.ಕೆ. ಇವರು ಮಾತನಾಡಿ “ವಿದ್ಯಾರ್ಥಿಗಳ ಕಲಿಕೆಯಲ್ಲಿ ಕೇವಲ ಪಠ್ಯವಲ್ಲದೇ ಪಠ್ಯೇತರ ಚಟವಟಿಕೆಗಳು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿಗಳು ಮಕ್ಕಳಲ್ಲಿ ಸರ್ವತೋಮುಖ ಬೆಳವಣಿಗೆಯನ್ನುಂಟು ಮಾಡುತ್ತವೆ. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ತೀರ್ಪುಗಾರರು ಪಕ್ಷಪಾತ ಮಾಡದೇ ನಿಜವಾದ ಅರ್ಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು” ಎಂದು ಅಭಿಪ್ರಾಯಪಟ್ಟರು. ಪಾಳ್ಯ ಹೋಬಳಿ ಶಿಕ್ಷಣ ಸಂಯೋಜಕರಾದ ಎಂ.ಡಿ. ದಿವಾಕರ್ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ “ಪ್ರತಿಭಾ ಕಾರಂಜಿಯಲ್ಲಿ ಬರುವ ವಿವಿಧ ಸ್ಪರ್ಧೆಗಳಾದ ಅಭಿನಯಗೀತೆ, ಪದ್ಯ ಕಂಠಪಾಠ, ದೇಶಭಕ್ತಿಗೀತೆ, ಧ್ವನಿ ಅನುಕರಣೆ,…

Read More

ಮಂಗಳೂರು : ಅಸ್ತಿತ್ವ (ರಿ.) ಮಂಗಳೂರು ಪ್ರಸ್ತುತಪಡಿಸುವ ನಾಟಕೋತ್ಸವದ ಎರಡನೇ ದಿನ ದಿನಾಂಕ 28 ನವೆಂಬರ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ನಿರ್ದಿಗಂತ ತಂಡದವರು ಅಭಿನಯಿಸುವ ‘ಪೊಲಿಟಿಕಲ್ ಪ್ರಿಸನರ್ಸ್’ ಸಂಗೀತ ನಾಟಕವು ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯದ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಲಿದೆ. ಅನುಷ್ ಶೆಟ್ಟಿಯವರು ಸಂಗೀತ ಮತ್ತು ನಿರ್ದೇಶನ ಮಾಡಲಿದ್ದು, ಯಾವುದೇ ಸಭಾ ಕಾರ್ಯಕ್ರಮವಿರುವುದಿಲ್ಲ, ನಾಟಕ ಸರಿಯಾದ ಸಮಯಕ್ಕೆ ಆರಂಭವಾಗುತ್ತದೆ.

Read More

ಮಂಗಳೂರು : ಸನಾತನ ನಾಟ್ಯಾಲಯ ಇವರು ಪ್ರಸ್ತುತ ಪಡಿಸುವ ‘ವಂದೇ ಗುರುಪರಂಪರಾಮ್’ ಕಾರ್ಯಕ್ರಮವನ್ನು ದಿನಾಂಕ 29 ನವೆಂಬರ್ 2025ರಂದು ಸಂಜೆ 6-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಗುರು ಪರಂಪರೆ ಮುಂದುವರಿಸುತ್ತಿರುವ ಶಿಷ್ಯ ಬಳಗದವರಿಂದ ಗುರು ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಇವರಿಗೆ ಗುರು ನಮನ – ನೃತ್ಯ ನಮನ ಪ್ರಸ್ತುತಗೊಳ್ಳಲಿದೆ. ಶಾಂತಲಾ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಮೋಹನ್ ಕುಮಾರ್ ಇವರ ಗೌರವ್ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದ ಹಿಮ್ಮೇಳದಲ್ಲಿ ವಿದ್ವಾನ್ ಮಂಜುನಾಥ್ ಪುತ್ತೂರು ನಟುವಾಂಗ, ವಿನೀತ್ ಪುರುವಾಂಕರ ಹಾಡುಗಾರಿಕೆ, ಗೀತೇಶ್ ನೀಲೇಶ್ವರ ಮೃದಂಗ, ಉಡುಪಿಯ ಮುರಳೀಧರ್ ಕೆ. ಕೊಳಲಿನಲ್ಲಿ ಸಹಕರಿಸಲಿದ್ದು, ಡಾ. ಶೋಭಿತಾ ಸತೀಶ್ ನಿರೂಪಣೆ ಮಾಡಲಿದ್ದಾರೆ.

Read More

ಸಾಲಿಗ್ರಾಮ : ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸಂಸ್ಥಾಪಕದ್ವಯರಾದ ‘ದಿವಂಗತ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ ಪ್ರಶಸ್ತಿ’ಗೆ ಹಿರಿಯ ಯಕ್ಷಗಾನ ಸ್ತ್ರೀ ವೇಷಧಾರಿ ಮೊಳಹಳ್ಳಿ ಕೃಷ್ಣ ಮೊಗವೀರ ಹಾಗೂ ‘ಎಚ್. ಶ್ರೀಧರ ಹಂದೆ ಗೌರವ ಪ್ರಶಸ್ತಿ’ಗೆ ನಿವೃತ್ತ ಮುಖ್ಯೋಪಾಧ್ಯಾಯ, ಸಾಂಸ್ಕೃತಿಕ ಸಾಮಾಜಿಕ ಪರಿಚಾರಕ, ಹವ್ಯಾಸಿ ಯಕ್ಷಗಾನ ಕಲಾವಿದ ಉಡುಪಿಯ ಮುರಳಿ ಕಡೆಕಾರ್ ಭಾಜನರಾಗಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ ದಿವಂಗತ ಮೊಳಹಳ್ಳಿ ಹಿರಿಯ ನಾಯಕ್ ಇವರಿಂದ ಪ್ರೇರಣೆಗೊಂಡು, ಗುರು ವೀರಭದ್ರ ನಾಯಕ್, ಹಳ್ಳಾಡಿ ಮಂಜಯ್ಯ ಶೆಟ್ಟಿ, ಕೋಟ ವೈಕುಂಠ ಮೊದಲಾದ ಕಲಾ ದಿಗ್ಗಜರ ಶಿಷ್ಯರಾಗಿ, ನಾರಣಪ್ಪ ಉಪ್ಪೂರರ ಗರಡಿಯಲ್ಲಿ ಪಳಗಿ, ಸತ್ಯವತಿ, ಚಿತ್ರಾಂಗದೆ, ದಮಯಂತಿ, ದ್ರೌಪದಿ, ಶಶಿಪ್ರಭೆ, ಮೀನಾಕ್ಷಿ, ಅಂಬೆ, ಸುಭದ್ರೆ, ಪಾರ್ವತಿ ಮೊದಲಾದ ಸ್ತ್ರೀ ಭೂಮಿಕೆಯಲ್ಲಿ ಸೈ ಎನಿಸಿ, ಮಂದಾರ್ತಿ, ಮಾರಣಕಟ್ಟೆ, ಅಮೃತೇಶ್ವರಿ, ಇಡುಗುಂಜಿ, ಸಾಲಿಗ್ರಾಮ ಮೇಳಗಳಲ್ಲಿ ಸುಮಾರು 50 ವರ್ಷಗಳ ಕಾಲ ಯಕ್ಷ ಸೇವೆಗೈದವರು ಮೊಳಹಳ್ಳಿ ಕೃಷ್ಣ ಮೊಗವೀರರು. ಹಿರಿಯ ಕಲಾವಿದರ ಸಾಂಗತ್ಯ ಹೊಂದಿ, ಅನುಭವಿ ಕಲಾವಿದರಾಗಿ ಬೆಹರಿನ್, ಇಂಗ್ಲೆಂಡ್,…

Read More

ಕುಡುಪು : ಸ್ಕಂದ ಷಷ್ಠಿಯ ಸಂದರ್ಭದಲ್ಲಿ ‘ಯಕ್ಷಮಿತ್ರರು’ ಕುಡುಪು ಇವರು ಆಯೋಜಿಸಿದ್ದ ವಿಂಶತಿ ಕಾರ್ಯಕ್ರಮವು ದಿನಾಂಕ 26 ನವೆಂಬರ್ 2025ರಂದು ಕುಡುಪು ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ತಂತ್ರ ಮಾಣಿಕ್ಯ ಶ್ರೀ ಕೆ. ನರಸಿಂಹ ತಂತ್ರಿಗಳು ಆಶೀರ್ವಚನ ನೀಡುತ್ತಾ, “ಕಲೆ, ಕಲಾ ಪ್ರಸಾರ ಯಕ್ಷಗಾನ ರಂಗದಲ್ಲಿ ವೇಗವಾಗಿ ಸಾಗುತ್ತದೆ. ಅದು ವೃದ್ಧಿಯಾದಂತೆ ಅದನ್ನು ಆಶ್ರಯಿಸಿದ ಕಲಾವಿದನೂ ಬೆಳೆಯುತ್ತಾನೆ. ತನ್ನಲ್ಲಿನ ಕಲಾಪ್ರೌಢಿಮೆಯನ್ನೂ ಒರೆಗೆ ಹಚ್ಚಿ ಪ್ರಬುದ್ಧವಾಗಿ ಹೊರಬಂದು ಒರೆಗಿಟ್ಟ ಚಿನ್ನದಂತಾಗುತ್ತಾನೆ. ಮೂವತ್ತೈದು ವರ್ಷಗಳ ನಿರಂತರ ಕಲಾಸೇವೆ ವಾಟೆಪಡ್ಪು ವಿಷ್ಣುಶರ್ಮರನ್ನು ಆ ಎತ್ತರಕ್ಕೆ ಯಕ್ಷಗಾನ ಬೆಳೆಸಿದೆ. ಅಗಾಧ ಪುರಾಣ ಜ್ಞಾನ, ಭಾಷಾ ಪ್ರೌಢಿಮೆ, ಪ್ರಸಂಗಾವಧಾನತೆ ಶರ್ಮರನ್ನು ಉತ್ತಮ ಕಲಾವಿದರ ಸಾಲಲ್ಲಿ ನಿಲ್ಲಿಸುತ್ತದೆ. ಕಟೀಲು ತಾಯಿಯ ಸೇವೆ ಇನ್ನೂ ಅನೇಕ ಕಾಲ ಸಾಗಲಿ” ಎಂದು ಶುಭಾಶೀರ್ವಾದ ನೀಡಿದರು. ಮಾಜಿ ಸಚೇತಕ ಅಭಯಚಂದ್ರ ಜೈನ್ ರವರು “ಯಕ್ಷಗಾನ ಮೇಳಗಳು ದೇವಸ್ಥಾನದ ಹೆಸರಿನಲ್ಲಿಯೇ ತಿರುಗಾಟ ಮಾಡುತ್ತವೆ. ಹಾಗಾಗಿ ಕಲಾವಿದರಿಗೆ ದೇವರ ಅನುಗ್ರಹವಿದೆ. ಕುಡುಪು ಕ್ಷೇತ್ರವೂ…

Read More

ಮಂಗಳೂರು : ಮಂಗಳೂರು ವಿ.ವಿ. ಕಾಲೇಜಿನಲ್ಲಿ ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ, ಮಂಗಳೂರು ವಿ.ವಿ.ಯ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷಭಾರತಿ (ರಿ.) ಪುತ್ತೂರು ಇವರ ಸಹಯೋಗದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2025’ ಹದಿಮೂರನೇ ವರ್ಷದ ನುಡಿಹಬ್ಬ ತ್ರಯೋದಶ ಸರಣಿಯ ಮೂರನೇ ದಿನ ಕೀರ್ತಿಶೇಷ ಅರ್ಥಧಾರಿಗಳಾದ ದಿ. ಎ.ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ ಫರಂಗಿಪೇಟೆ ಇವರ ನೆನಪಿನ ಕಾರ್ಯಕ್ರಮ ದಿನಾಂಕ 25 ನವೆಂಬರ್ 2025ರಂದು ನಡೆಯಿತು. ಸಂಸ್ಮರಣಾ ಜ್ಯೋತಿ ಬೆಳಗಿ ಮಾತನಾಡಿದ ಪ್ರಸಿದ್ಧ ಲೆಕ್ಕ ಪರಿಶೋಧಕರಾದ ಎಸ್.ಎಸ್. ನಾಯಕ್ ‘ಯಕ್ಷಗಾನದಲ್ಲಿ ಹಾಡು, ಕುಣಿತ, ಮಾತು, ಬಣ್ಣಗಾರಿಕೆ ಮತ್ತು ವೇಷಭೂಷಣಗಳಂತಹ ರಂಜನೀಯ ಅಂಶಗಳಿವೆ. ಆದರೆ ಕೇವಲ ಮಾತಿನಲ್ಲೇ ವಿವಿಧ ಪಾತ್ರಗಳಿಗೆ ಜೀವ ತುಂಬುವ ಒಂದು ಕಲೆಯಿದ್ದರೆ ಅದು ಯಕ್ಷಗಾನದ…

Read More

ಉಡುಪಿ : ಹವ್ಯಾಸಿ ಯಕ್ಷಗಾನ ಕ್ಷೇತ್ರದ ಪ್ರಸಿದ್ಧ ಭಾಗವತ ನಿಟ್ಟೂರು ಶೀನಪ್ಪ ಸುವರ್ಣ (79) ದಿನಾಂಕ 26 ನವೆಂಬರ್ 2025ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಪುತ್ರ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನೀಲಾವರ ರಾಮಕೃಷ್ಣಯ್ಯನವರಲ್ಲಿ ಯಕ್ಷಗಾನ ಭಾಗವತಿಕೆ ಅಭ್ಯಾಸ ಮಾಡಿ ಸುದೀರ್ಘ ಐದು ದಶಕಗಳ ಕಾಲ ಯಕ್ಷಗಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಉಡುಪಿಯ ಅತ್ಯಂತ ಹಿರಿಯ ಯಕ್ಷಗಾನ ಮಂಡಳಿ, ಯಕ್ಷಗಾನ ಕಲಾರಂಗದಿಂದ ‘ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ’ಯನ್ನು ಪಡೆದ, ಯಕ್ಷಗಾನ ಕಲಾಕ್ಷೇತ್ರ (ರಿ.), ಗುಂಡಿಬೈಲು ಸಂಸ್ಥೆಯಲ್ಲಿ ಆರು ದಶಕಗಳ ಕಾಲ ಪದಾಧಿಕಾರಿಗಳಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಆ ಸಂಸ್ಥೆಯ ಅವಿಭಾಜ್ಯ ಭಾಗವೇ ಆಗಿದ್ದರು. ಕಲಾಕ್ಷೇತ್ರ ನಡೆಸಿಕೊಂಡು ಬಂದ ತಿಂಗಳ ಕೂಟ, ವಾರ್ಷಿಕೋತ್ಸವ ಇನ್ನಿತರ ಕಾರ್ಯಕ್ರಮಗಳಲ್ಲಿ ಶ್ರದ್ಧೆಯ ಕಾರ್ಯಕರ್ತರಾಗಿ ದೊಡ್ಡ ಕೊಡುಗೆ ನೀಡಿದ್ದರು. ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದ ಸುವರ್ಣರು ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳಿಗೆ ತಪ್ಪದೆ ಭಾಗವಹಿಸುತ್ತಿದ್ದರು. ಆಟ ಕೂಟಗಳ ಸಹೃದಯ ಪ್ರೇಕ್ಷಕರಾಗಿ ಕಲಾ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತಿದ್ದರು.

Read More

ಬ್ರಹ್ಮಾವರ : ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಹದಿನೆಂಟು ವರ್ಷಗಳಿಂದ ಕಿಶೋರ ಯಕ್ಷಗಾನ ಸಂಭ್ರಮ ನಡೆಸಿಕೊಂಡು ಬಂದಿದ್ದು, ಈ ವರ್ಷ 94 ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನಡೆಸುತ್ತಿದ್ದು, ಪ್ರದರ್ಶನಗಳ ಉದ್ಘಾಟನೆಯು ದಿನಾಂಕ 25 ನವೆಂಬರ್ 2025ರಂದು ಬ್ರಹ್ಮಾವರದ ಬಂಟರ ಸಂಘದ ಆವರಣದಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಜರಗಿತು. ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ಜ್ಯೋತಿ ಬೆಳಗಿಸಿ “ಯಕ್ಷಗಾನ ಶ್ರೀಮಂತ ಕಲಾಪ್ರಕಾರ. ಮಕ್ಕಳಲ್ಲಿ ಭಾಷಾ ಪ್ರೌಢಿಮೆ, ಪುರಾಣ ಜ್ಞಾನ, ಆತ್ಮವಿಶ್ವಾಸ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇಂತಹ ಕಾರ್ಯಕ್ರಮವನ್ನು ನಿರಂತರ ನಡೆಸಿಕೊಂಡು ಬಂದ ಟ್ರಸ್ಟ್ ಮತ್ತು ಉಡುಪಿಯ ಯಕ್ಷಗಾನ ಕಲಾರಂಗ ಅಭಿನಂದನಾರ್ಹ ಸಂಘಟನೆ” ಎಂದರು. ಆರೂರು ತಿಮ್ಮಪ್ಪ ಶೆಟ್ಟರು “ಯಕ್ಷಗಾನ ಕಲೆ ಬದುಕಿಗೆ ಸಂಸ್ಕಾರ ನೀಡುತ್ತದೆ” ಎಂದು ಅಭಿಪ್ರಾಯಪಟ್ಟರು. ಉಡುಪಿ ಶಾಸಕರೂ, ಟ್ರಸ್ಟ್ ಅಧ್ಯಕ್ಷರೂ ಆದ ಯಶಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಿ. ಭುಜಂಗ ಶೆಟ್ಟಿ, ಆರೂರು ತಿಮ್ಮಪ್ಪ ಹೆಗ್ಡೆ, ದಿನಕರ ಹೇರೂರು, ಟಿ. ಭಾಸ್ಕರ್ ರೈ, ಮೖರ್ಮಾಡಿ ಅಶೋಕ್…

Read More