Author: roovari

ಚೇಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಚೇಳೂರು ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ ರಾಜ್ಯ ಇವರು ಚೇಳೂರು ತಾಲೂಕು ಕೇಂದ್ರದಲ್ಲಿ ದಸರ ಹಬ್ಬದ ಪ್ರಯುಕ್ತ ಭಾರತೀಯ ಭಾಷೆಗಳ ಕವಿ ಮಿತ್ರರಿಗೆ “ದಸರ ಕವಿಗೋಷ್ಠಿ”ಯನ್ನು ಆಯೋಜಿಸುತಿದ್ದು, ಭಾಗವಹಿಸಲು ಇಚ್ಚಿಸುವ ಕವಿಗಳು ಈ ಕೆಳಗೆ ನೀಡಿರುವ ಜಂಗಮ ವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು. ರಾಧಾಮಣಿ ಎಂ. ಕೋಲಾರ – 9972731056, ಸತ್ಯ ನಾರಾಯಣ ವಿ. – 9945291154, ಪಿ. ಎಸ್. ಶ್ರೀಧರ್(ಶಾಸ್ತ್ರಿ) – 9606794039 ನಿಯಮಗಳು:- 1)ಕವನ ಭಾರತೀಯ ಭಾಷೆಗಳಲ್ಲಿ ಯಾವುದೇ ಭಾಷೆಯದ್ದಾಗಿರಬಹುದು, 2)ಒಬ್ಬರು ಒಂದು ಕವನ ಮಾತ್ರ ವಾಚನ ಮಾಡಲು ಅವಕಾಶ ನೀಡಲಾಗುವುದು, 3)ದೇಶ ಭಕ್ತಿ, ನಾಡು ನುಡಿಗೆ ಸಂಬಂಧಪಟ್ಟಿರಬೇಕು, 4)ಚುಟುಕು, ಹನಿಗವನ, ಟಂಕಾ, ಹಾಯ್ಕುಗಳಿಗೆ ಅವಕಾಶವಿರುವುದಿಲ್ಲ, 5)ದಸರ ಹಬ್ಬದ ಕವನಗಳಿಗೆ ಆದ್ಯತೆ ನೀಡಲಾಗುವುದು, 6)ಕವನದಲ್ಲಿ 16 ರಿಂದ 20 ಸಾಲುಗಳು ಇರಲಿ, 7)ಕವನಗಳು ಸ್ವರಚಿತವಾಗಿರಬೇಕು, 8)ಕವಿಗಳು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು, 9)ಭಾಗವಹಿಸಿದ ಎಲ್ಲಾ ಕವಿಗಳಿಗೂ ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಲಾಗುವುದು, 10)ಸಂಸ್ಥೆಯ…

Read More

ಮಂಗಳೂರು: ಭರತಾಂಜಲಿಯ ವಿದ್ವಾನ್ ಶ್ರೀಧರ ಹೊಳ್ಳ ಹಾಗೂ ವಿದ್ವಾನ್ ಪ್ರತಿಮಾ ಶ್ರೀಧರ ಹೊಳ್ಳ ಅವರ ಶಿಷ್ಯೆ ಕುಮಾರಿ ಅಪೂರ್ವ ಬಿ. ರಾವ್ ಅವರ ರಂಗಪ್ರವೇಶ ಸಮಾರಂಭ 06 ಸೆಪ್ಟೆಂಬರ್ 2025ರ ಶನಿವಾರದಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ವೀಣಾ ಬನ್ನಂಜ್ಜೆ ಮಾತನಾಡಿ “ವಿವಿಧ ಜಾತಿ, ಪ್ರಕಾರಗಳ ಸ್ವರಗಳು, ಪರಿಕರಗಳು ಏಕ ಕಾಲದಲ್ಲಿ ಕೂಡಿ ಪ್ರಸ್ತುತ ಪಡಿಸಿದಾಗ ಭಾರತೀಯ ಪರಂಪರೆ, ನಾಟ್ಯ ಪರಂಪರೆಯ ಅನಾವರಣವಾಗುತ್ತದೆ. ನಮ್ಮ ನೃತ್ಯ ಪರಂಪರೆಯು ಪವಿತ್ರ ಪರಂಪರೆಯಾಗಿದೆ. ಯಾಕೆಂದರೆ ಸ್ವತಃ ಶ್ರೀಕೃಷ್ಣ ಪರಮಾತ್ಮ ಹಾಗೂ ರುದ್ರ ದೇವರು ಕುಣಿದ ಪ್ರಕಾರ. ಇದು ದೇವರು ನಮಗೆ ನೀಡಿದ ಪರಂಪರೆಯಾಗಿದೆ. ದೇವಲೋಕದಲ್ಲಿ ಜನಿಸಿದ ಈ ಕಲೆಯ ಪರಂಪರೆಯನ್ನು ಭೂಲೋಕಕ್ಕೆ ಇಳಿಸಿ, ಮನುಷ್ಯರನ್ನು ಗಂಧರ್ವರ ಸಮಾನರನ್ನಾಗಿ ಮಾಡುವ ಶಕ್ತಿ ನೃತ್ಯಕಲೆಗೆ ಇದೆ. ಈ ನೃತ್ಯಮಾರ್ಗವು ಭಾವಲೋಕವನ್ನು ದೇವಲೋಕದೊಂದಿಗೆ ಜೋಡಿಸುವ ಸೇತುವೆಯಂತಿದೆ. ಈ ಮಾರ್ಗದಲ್ಲಿ ಅನೇಕ ಶ್ರೇಷ್ಠ ಕಲಾವಿದರು ನೃತ್ಯಸಾಧನೆಯ ಮೂಲಕ ದೇವರನ್ನೇ ಒಲಿಸಿಕೊಂಡಿದ್ದಾರೆ. ಆ ಪವಿತ್ರ ಪರಂಪರೆಯ ಮುಂದುವರಿಕೆಯಾಗಿ ಇಂದು…

Read More

1929ರ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಬೇಂದ್ರೆಯವರು ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯವನ್ನು ವಾಚಿಸಿ ನಾಡಿಗೆ ‘ಬೇಂದ್ರೆ’ ಕಾವ್ಯದ ಗುಂಗು ಹಿಡಿಸಿಬಿಟ್ಟರು. ಇವರ ಕಾವ್ಯ ವಾಚನ ಕೇಳಿದ ಮಾಸ್ತಿಯವರು ಬೆಳಗಾವಿಯಿಂದ, ಧಾರವಾಡದ ಬೇಂದ್ರೆಯವರ ಮನೆಗೆ ಬಂದು ಅವರು ಬರೆದ ಕವಿತೆಗಳನ್ನೆಲ್ಲಾ ತೆಗೆದುಕೊಂಡು ಹೋಗಿ ಆಯ್ದು ‘ಗರಿ’ ಕವನ ಸಂಕಲನವನ್ನು 1932ರಲ್ಲಿ ಬೆಂಗಳೂರಿನಿಂದ ಪ್ರಕಟಮಾಡಿದರು. ಇದು ಬೇಂದ್ರೆಯವರ ಮೊದಲ ಕವನ ಸಂಕಲನ. ಈ ಕವನ ಸಂಕಲನ ನಾಡಿನಲ್ಲೆಲ್ಲಾ ಒಂದು ರೀತಿಯ ಕಾವ್ಯದ ವಿದ್ಯುತ್ ಸಂಚಲನವನ್ನುಂಟು ಮಾಡಿತು. ಇದರಲ್ಲಿ ಒಟ್ಟು 55 ಕವಿತೆಗಳಿವೆ. ಮೊದಲನೆಯದು ‘ಬೆಳಗು’. ಕೊನೆಯದು ‘ಗರಿ’. ಈ ಸಂಕಲನದ ಕೊನೆಯ ಕವಿತೆಯೆ, ಈ ಸಂಕಲನದ ಶಿರೋನಾಮೆ. ಗರಿ ಹಕ್ಕಿಗಳಲ್ಲಿ ಮಾತ್ರ ಕಂಡು ಬರುವ ಒಂದು ವಿಶೇಷ ನಿರ್ಜೀವ ರಚನೆ. ಆದರೆ ಈ ನಿರ್ಜಿವತ್ವವು ಪಕ್ಷಿಗೆ ಹಾರಲು ಜೀವವನ್ನು ತಂದು ಕೊಡುತ್ತದೆ. ಇದು ಇದರ ವಿಶೇಷ. ಇವು ಪಕ್ಷಿ ದೇಹವನ್ನು ಮುಚ್ಚುವದಲ್ಲದೆ, ಪಕ್ಷಿ ದೇಹಕ್ಕೆ ಹೊಸ ಹೊರ ರೂಪ ರಚನೆಯನ್ನು ಕೊಡುತ್ತವೆ. ಜಗತ್ತಿನ…

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಇದರ ವತಿಯಿಂದ ಶ್ರೀ ವಿಶ್ವೇಶತೀರ್ಥ ಸಭಾಂಗಣದ ಉದ್ಘಾಟನಾ ಸಮಾರಂಭವನ್ನು ದಿನಾಂಕ 13 ಸೆಪ್ಟೆಂಬರ್ 2025ರಂದು ಸುರತ್ಕಲ್ ನಾಗಬನ ರೋಡ್ ಇಲ್ಲಿರುವ ಅನುಪಲ್ಲವಿಯಲ್ಲಿ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ವಿದ್ವಾನ್ ಡಿ. ಅನ್ನು ದೇವಾಡಿಗ, ಬಿ. ಸೀತಾರಾಮ ತೊಳ್ಪಾತ್ತಾಯ ಮತ್ತು ಕುಮಾರಿ ರೆಮೋನಾ ಎವೆಟ್ ಪಿರೇರಾ ಇವರನ್ನು ಸನ್ಮಾನಿಸಲಾಗುವುದು. ಬಳಿಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ದಿವ್ಯಾಶ್ರೀ ಇವರ ಹಾಡುಗಾರಿಕೆಗೆ ತನ್ಮಯಿ ಉಪ್ಪಂಗಳ ಇವರು ವಯೋಲಿನ್, ಪನ್ನಗ ಶರ್ಮನ್ ಮೃದಂಗ ಮತ್ತು ಸುಜಾತಾ ಎಸ್. ಭಟ್ ತಂಬೂರದಲ್ಲಿ ಸಹಕರಿಸಲಿದ್ದಾರೆ.

Read More

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ಹಾಸನ ಜಿಲ್ಲಾ ಘಟಕದ ಸಹಯೋಗದೊಂದಿಗೆ ಹಾಸನದಲ್ಲಿ ನಡೆದ ಅರಿವಿನ ಪಯಣ ಕಾರ್ಯಕ್ರಮದಲ್ಲಿ ಅಧ್ಯಯನ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಮಾದಕದ್ರವ್ಯ ವ್ಯಸನಗಳಿಂದ ಆಗುವ ಅನಾಹುತಗಳು ಕುರಿತು ಅರಿವು ಮೂಡಿಸುವ ಒಂದು ಕಿರು ನಾಟಕ ಪ್ರದರ್ಶನ ನೀಡಿದರು. ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಎಂಬ ಭೂತ ಸದ್ದಿಲ್ಲದೆ ಯುವ ಪೀಳಿಗೆಯನ್ನು ಹೇಗೆ ವ್ಯಾಪಿಸಿದೆ ? ಇದರಿಂದ ಆಗುತ್ತಿರುವ ಅನಾಹುತಗಳೇನು ? ಇದರಿಂದ ಎಷ್ಟು ಕುಟುಂಬಗಳು ಸಂಕಷ್ಟಕ್ಕೆ ದೂಡಲ್ಪಟ್ಟಿವೆ ? ಎಂಬುದನ್ನ ನಾವು ದಿನನಿತ್ಯ ಕೇಳುತ್ತಿದ್ದೇವೆ. ಆದರೆ ಈ ಯುವ ಪೀಳಿಗೆ ಯಾಕೆ ಇಂತಹ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ ? ಇದಕ್ಕೆ ಕಾರಣ ಏನು ? ಹುಡುಕುತ್ತ ಹೊರಟಾಗ ನಮಗೆ ಸಿಕ್ಕ ಅಂಕಿ ಅಂಶಗಳು ಮೂರು ತರಹದ ಗುಂಪುಗಳು ಸಿಗುತ್ತದೆ. ಅದರಲ್ಲಿ ಮೊದಲನೆಯ ಗುಂಪು ಅದು ಏನು ? ಹೇಗಿರುತ್ತದೆ ನೋಡೋಣ ಎಂಬ ಕುತೂಹಲಕ್ಕೆ ಹೋಗುವವರು. ಎರಡನೆಯ ಗುಂಪು ಅತಿಯಾದ ಶ್ರೀಮಂತಿಕೆ, ಮತ್ತೊಂದು ಅತಿಯಾದ ಬಡತನ. ಈ ಮೂರು…

Read More

ಕಾಸರಗೋಡು : ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು(ರಿ) ನೇತೃತ್ವದಲ್ಲಿ ಆಯೋಜಿಸುವ ಖ್ಯಾತ ಸಾಹಿತಿ, ನಿವೃತ್ತ ಮುಖ್ಯೋಪಾಧ್ಯಾಯ ವೈ. ಸತ್ಯನಾರಾಯಣ ಇವರ ‘ಆಕಾಶದಿಂದ ಪಾತಾಳಕ್ಕೆ’ ಕಥಾ ಸಂಕಲನದ  ಲೋಕಾರ್ಪಣಾ ಸಮಾರಂಭವು ದಿನಾಂಕ 13 ಸೆಪ್ಟೆಂಬರ್ 2025ರ ಶನಿವಾರದಂದು ಕಾಸರಗೋಡಿನ ಕರೆಂದಕ್ಕಾಡಿನಲ್ಲಿರುವ ‘ಪದ್ಮಗಿರಿ ಕಲಾ ಕುಟೀರ’ದಲ್ಲಿ ಅಪರಾಹ್ನ ಘಂಟೆ 3:00ಕ್ಕೆ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕದ ಅಧ್ಯಕ್ಷರಾದ ಡಾ.  ಕೆ. ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ಹಾಗೂ ರಂಗಕರ್ಮಿಗಳಾದ ಕಾಸರಗೋಡು ಚಿನ್ನಾ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ. ಖ್ಯಾತ ಸಾಹಿತಿಗಳಾದ ಡಾ. ಪ್ರಮೀಳಾ ಮಾಧವ್ ಪುಸ್ತಕದ ಕುರಿತು ಮಾತನಾಡಲಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲೇಖಕರಾದ ವೈ. ಸತ್ಯನಾರಾಯಣ, ಕಾಸರಗೋಡು ಕನ್ನಡ ಲೇಖಕರ ಬಳಗದ ಕಾರ್ಯಾಧ್ಯಕ್ಷರು ಹಾಗೂ ಸಾಹಿತಿಗಳಾದ ಪ್ರೊ. ಪಿ. ಎನ್. ಮೂಡಿತ್ತಾಯ, ಕನ್ನಡ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ. ಟಿ. ಎ. ಎನ್. ಖಂಡಿಗೆ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ…

Read More

ಬೆಂಗಳೂರು : ಕಪ್ಪಣ್ಣ ಅಂಗಳ ಇದರ ವತಿಯಿಂದ 97ನೇ ಶಾಸ್ತ್ರೀಯ ಮಾಸಿಕ ಸಂಗೀತ ಕಛೇರಿ ‘ಆಲಾಪ್’ ಕಾರ್ಯಕ್ರಮವನ್ನು ದಿನಾಂಕ 13 ಸೆಪ್ಟೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದ ಕಪ್ಪಣ್ಣ ಅಂಗಳದಲ್ಲಿ ಆಯೋಜಿಸಲಾಗಿದೆ. ಈ ಹಿಂದೂಸ್ಥಾನಿ ವಾದ್ಯ ಸಂಗೀತ ಕಾರ್ಯಕ್ರಮದಲ್ಲಿ ಶ್ರೀರಕ್ಷಾ ಶಾನ್ ಭೋಗ್ ಇವರ ಹಾರ್ಮೋನಿಯಂ ವಾದನಕ್ಕೆ ಶ್ರೀರಶ್ಮಿ ಶಾನ್ ಭೋಗ್ ತಬಲಾ ಸಾಥ್ ನೀಡಲಿದ್ದಾರೆ. ‘ಆಲಾಪ್’ ಸರಣಿ ಸ್ವರ ಮಾಲಿಕೆಯ 97ನೇ ಕಾರ್ಯಕ್ರಮ ಇದಾಗಿದ್ದು, ಕಳೆದ 10 ವರ್ಷಗಳಿಂದ ಈ ಕಾರ್ಯಕ್ರಮ ನಡೆದುಕೊಂಡು ಬಂದಿದೆ. ಉದಯೋನ್ಮುಖ ಕಲಾವಿದರಿಗಾಗಿಯೇ ಆಯೋಜಿಸುವ ಈ ಸರಣಿಯಲ್ಲಿ ಒಂದು ತಿಂಗಳು ಹಿಂದೂಸ್ಥಾನಿ ಹಾಗೂ ಒಂದು ತಿಂಗಳು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳು ನಡೆಯುತ್ತಿದೆ. ಶ್ರೀ ನಿವಾಸ್ ಜಿ. ಕಪ್ಪಣ್ಣ ಹಾಗೂ ಲಲಿತ ಕಪ್ಪಣ್ಣ ದಂಪತಿಗಳು ತಮ್ಮ ಮನೆಯ ಅಂಗಳದಲ್ಲಿಯೇ ಸುಸಜ್ಜಿತವಾದ ಸಭಾಂಗಣವನ್ನು ನಿರ್ಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿಯೇ ಮುಡಿಪಾಗಿಟ್ಟಿದ್ದಾರೆ. ಕಪ್ಪಣ್ಣ ಅವರ ಪುತ್ರಿ ಹಾಗೂ ಕಪ್ಪಣ್ಣ ಅಂಗಳದ ನಿರ್ದೇಶಕಿಯಾದ ಸ್ನೇಹ ಕಪ್ಪಣ್ಣರವರು ಈ…

Read More

ಪುತ್ತೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ) ಇವರು ಜಿ. ಎಸ್. ಟಿ. ಮಹಿಳಾ ಮಂಡಳಿ, ಪುತ್ತೂರು ಇವರ ಸಹಯೋಗದೊಂದಿಗೆ ಆಯೋಜಿಸುವ ಕೊಂಕಣಿ ರಂಗ ತರಂಗ ಮತ್ತು ಸಾಹಿತ್ಯ ಸಂಭ್ರಮ-3 ಕಾರ್ಯಕ್ರಮವು ದಿನಾಂಕ 14 ಸೆಪ್ಟೆಂಬರ್ 2025ರ ಭಾನುವಾರದಂದು ಅಪರಾಹ್ನ ಘಂಟೆ 3.00ಕ್ಕೆ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸುಕ್ರತೀಂದ್ರ ಕಲಾಮಂದಿರದಲ್ಲಿ ನಡೆಯಲಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಧರ್ಮದರ್ಶಿ ವ್ಯವಸ್ಥಾಪಕರಾದ ಡಾ. ಅಶೋಕ್ ಪ್ರಭು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಡಾಲ ದೇಶಸ್ಥ ಗೌಡ ಬ್ರಾಹ್ಮಣ ಸಮಾಜದ ಮುಖಂಡರಾದ ಡಾ. ವೈ. ಉಮಾನಾಥ ಶೆಣೈ, ಗೌರವ ಅತಿಥಿಗಳಾಗಿ ಜಿ. ಎಸ್. ಬಿ. ಮಹಿಳಾ ಮಂಡಳಿಯ ಅಧ್ಯಕ್ಷ್ಯೆಯಾದ ಶ್ರೀಮತಿ ಎಮ್. ವಿದ್ಯಾ ಭಟ್ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಪುತ್ತೂರಿನ ಹಿರಿಯ ಸಾಹಿತಿಯಾದ ಶ್ರೀ ಉಲ್ಲಾಸ್ ಕೆ. ಪೈ…

Read More

ಸಾಣೇಹಳ್ಳಿ : ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ 2025-26ನೆಯ ಸಾಲಿನ ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ಅಭ್ಯಾಸ ಮಾಲಿಕೆಯ ಯಕ್ಷಗಾನ ಪ್ರಯೋಗ ದಿನಾಂಕ 12 ಸೆಪ್ಟೆಂಬರ್ 2025ರಂದು ಸಂಜೆ 7-00 ಗಂಟೆಗೆ ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಹಟ್ಟಿಯಂಗಡಿ ರಾಮ ಭಟ್ಟ ರಚಿತ ‘ಅತಿಕಾಯ ಮತ್ತು ಇಂದ್ರಜಿತು ಕಾಳಗ’ ಪ್ರಸಂಗವನ್ನು ಭಾರ್ಗವ ಕೆ.ಎನ್. ಇವರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಲಿದ್ದು, ಕುಶ ಎಂ.ಆರ್. ಇವರು ಮದ್ದಲೆ, ನಾಗಭೂಷಣ ಕೆ.ಎಸ್. ಇವರು ಚಂಡೆಯಲ್ಲಿ, ಶೈಲೇಶ್ ತೀರ್ಥಹಳ್ಳಿ ಯಕ್ಷಗಾನ ಹೆಜ್ಜೆಗಾರಿಕೆಯಲ್ಲಿ ಹಾಗೂ ಶ್ರೀ ಮಹಾ ಗಣಪತಿ ಶ್ರೀ ವೀರಾಂಜನೇಯ ಯಕ್ಷಗಾನ ಮಂಡಲಿ ಕೇಡಲಸರ ಪ್ರಸಾಧನದಲ್ಲಿ ಸಹಕರಿಸಲಿದ್ದಾರೆ.

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಇವರು ಕಥೊಲಿಕ್ ಸಭಾ ಮಂಗಳೂರು (ರಿ.) ಸುರತ್ಕಲ್ ಘಟಕದ ಸಹಯೋಗದೊಂದಿಗೆ ಆಯೋಜಿಸುವ ವೊವಿಯೊ ವೇರ್ಸ್ ಬಾಳ್ ಗಿತಾಂ ಕಾರ್ಯಾಗಾರವು (ಮದುವೆ ಸೋಭಾಣೆ ಮತ್ತು ಶಿಶು ಗೀತೆಗಳು) ದಿನಾಂಕ 14 ಸೆಪ್ಟೆಂಬರ್ 2025ರ ಭಾನುವಾರದಂದು ಬೆಳಗ್ಗೆ ಘಂಟೆ 9.30ಕ್ಕೆ ಸುರತ್ಕಲ್ಲಿನ ಸೆಕ್ರೆಡ್ ಹಾರ್ಟ್ ಸಭಾಭವನದಲ್ಲಿ ನಡೆಯಲಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸೆಕ್ರೆಡ್ ಹಾರ್ಟ್ ಚರ್ಚ್ ಸುರತ್ಕಲ್ ಇಲ್ಲಿನ ಧರ್ಮಗುರುಗಳಾದ ಆ. ವಂ. ಅಸ್ಟಿನ್ ಪೀಟರ್ ಪೆರಿಸ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ. ಆರ್. ಪಿ. ಎಲ್. ಇದರ ಗ್ರೂಪ್ ಜನರಲ್ ಮೆನೇಜರ್ ಆದ ಶ್ರೀ ಕೃಷ್ಣಾ ಹೆಗ್ಡೆ, ಕೆಥೋಲಿಕ್ ಸಭಾ ಸುರತ್ಕಲ್ ಘಟಕದ ಅಧ್ಯಕ್ಷರಾದ ಶ್ರೀ ಒಲ್ವಿನ ಡಿ’ಸೋಜ, ಕೆಥೋಲಿಕ್ ಸಭಾ ಸುರತ್ಕಲ್ ವಲಯದ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿ’ಸೋಜ ಹಾಗೂ ಸುರತ್ಕಲ್ ಚರ್ಚ್ ಇದರ ಉಪಾಧ್ಯಕ್ಷರಾದ ಶ್ರೀ ರಸ್ಸೆಲ್…

Read More