Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇವರ ವತಿಯಿಂದ ಬೆಂಗಳೂರು ಮಹಾನಗರದಲ್ಲಿ ಕಲಾಪೋಷಕರ ಸಹಯೋಗದಲ್ಲಿ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ವನ್ನು ದಿನಾಂಕ 08ರಿಂದ 14 ಅಕ್ಟೋಬರ್ 2025ರವೆರೆಗೆ ಹಮ್ಮಿಕೊಳ್ಳಲಾಗಿದೆ. ದಿನಾಂಕ 08 ಅಕ್ಟೋಬರ್ 2025ರಂದು ಸಂಜೆ 3-30 ಗಂಟೆಗೆ ವಿಜಯನಗರದ ಗಾನಸೌರಭ ಯಕ್ಷಗಾನ ಶಾಲೆಯಲ್ಲಿ ‘ಕೃಷ್ಣ ಸಂಧಾನ’, ದಿನಾಂಕ 09 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ಸಂಜಯ ನಗರದಲ್ಲಿರುವ ಲಾಸ್ಯ ಅಕಾಡೆಮಿ ಆಫ್ ಡಾನ್ಸ್ ಅನುಗ್ರಹ ಕೇಂದ್ರದಲ್ಲಿ ‘ಕರ್ಣ ಬೇಧನ’, ದಿನಾಂಕ 10 ಅಕ್ಟೋಬರ್ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರು ಕೆ.ಆರ್. ಪುರಂನ ಎಸ್.ಜೆ.ಇ.ಎಸ್. ಕಾಲೇಜಿನಲ್ಲಿ ‘ವಾಲಿ ವಧೆ’ ಹಾಗೂ ಸಂಜೆ 5-00 ಗಂಟೆಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಕ್ಷಯ ನಗರದಲ್ಲಿ ‘ಸುಧನ್ವ ಮೋಕ್ಷ’, ದಿನಾಂಕ 11 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ರಾಜಾಜಿನಗರದ ಚಿತ್ಪಾವನ ಸುವರ್ಣ ಭವನದಲ್ಲಿ ‘ಬಲರಾಮ ಭಕ್ತಿ’, ದಿನಾಂಕ 12 ಅಕ್ಟೋಬರ್ 2025ರಂದು ಸಂಜೆ 6-00 ಗಂಟೆಗೆ ನಾಗ ಸಂದ್ರದ…
ಕಾಸರಗೋಡು : ಚತುರ್ಭಾಷಾ ವಿದ್ವಾಂಸ, ತುಳು ಲಿಪಿ ಬ್ರಹ್ಮ ದಿ. ಪುಂಡೂರು ವೆಂಕಟರಾಜ ಪುಣಿಂಚತ್ತಾಯ (ಪುವೆಂಪು) ಇವರ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ‘ಪುವೆಂಪು ನೆನಪು 2025’ ಇದರ ಆಮಂತ್ರಣ ಪತ್ರಿಕೆಯನ್ನು ದಿನಾಂಕ 02 ಅಕ್ಟೋಬರ್ 2025ರಂದು ಎಡನೀರು ಶ್ರೀ ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಬಿಡುಗಡೆಗೊಳಿಸಿ ಶುಭಹಾರೈಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪುವೆಂಪು ಪ್ರತಿಷ್ಠಾನ ಕಾಸರಗೋಡು, ಕೇರಳ ತುಳು ಅಕಾಡೆಮಿ ಮಂಜೇಶ್ವರ ಇವುಗಳು ಸಂಯುಕ್ತವಾಗಿ ದಿನಾಂಕ 15 ಅಕ್ಟೋಬರ್ 2025ರಂದು ಹೊಸಂಗಡಿ ದುರ್ಗಿಪಳ್ಳದಲ್ಲಿರುವ ಕೇರಳ ತುಳು ಅಕಾಡೆಮಿ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಎಡನೀರು ಮಠಾಧೀಶರು ಆಶೀರ್ವಚನ ನೀಡುವರು. ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಉದ್ಘಾಟಿಸುವರು. ಈ ಸಂದರ್ಭ ಹಿರಿಯ ಸಾಹಿತಿ, ಚಿಂತಕ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಇವರಿಗೆ ‘ಪುವೆಂಪು ಪ್ರಶಸ್ತಿ…
ಉಪ್ಪಳ : ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ‘ಸಾಹಿತ್ಯ ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ’ ಎಂಬ ಕಾರ್ಯಕ್ರಮದ ಅಂಗವಾಗಿ ಹಿರಿಯ ಸಾಹಿತಿ ಬಿ. ಸತ್ಯವತಿ ಭಟ್ ಕೊಳಚಪ್ಪು ಇವರನ್ನು ದಿನಾಂಕ 31 ಸೆಪ್ಟೆಂಬರ್ 2025ರಂದು ಪೈವಳಿಕೆಯ ಸಮೀಪದ ಕೊಳಚಪ್ಪುವಿನಲ್ಲಿರುವ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಚೆತ್ತೋಡಿಯವರು ಸತ್ಯವತಿಯವರನ್ನು ಶಾಲು ಹೊದೆಸಿ ಅಭಿನಂದಿಸಿದರು. ಅಭಿನಂದನಾ ಭಾಷಣ ಮಾಡಿದ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ, ಸಾಹಿತಿ ಪ್ರೊ. ಪಿ.ಎನ್. ಮೂಡಿತ್ತಾಯ ಇವರು ಮಾತನಾಡಿ “ಸತ್ಯವತಿ ಭಟ್ ಕೊಳಚಪ್ಪು ಇವರು ಅಂಬಾ ಅಂಬಾ, ಗೊಂಚಲು ಕವನ ಸಂಕಲನಗಳ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿ ಕಾಮನಬಿಲ್ಲು, ನವಿಲಗರಿ, ಮುತ್ತು- ಅಮ್ಮನ ಕೈ ತುತ್ತು, ಸ್ವಾತಿಮುತ್ತು, ದಿಗಂತದಾಚೆಗಿನ…
ಕಂದಾವರ : ಕೀರ್ತಿಶೇಷ ಭಾಗವತ ನೀಲಾವರ ಲಕ್ಷ್ಮೀನಾರಾಯಣ ರಾಯರ ಜನ್ಮ ಶತಮಾನೋತ್ಸವ 2025ರ ಪ್ರಯುಕ್ತ ‘ಗಾನಾರ್ಪಣಂ’ ಸಂಗೀತ ಕಾರ್ಯಕ್ರಮವನ್ನು ದಿನಾಂಕ 06 ಅಕ್ಟೋಬರ್ 2025ರಂದು ಕಂದಾವರ ಶ್ರೀ ಉಳ್ಳೂರು ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ವಿದ್ವಾನ್ ಶ್ರೀ ಗಜಾನನ ಹೆಬ್ಬಾರ್ ಮತ್ತು ಶ್ರೀಮತಿ ಅಪೂರ್ವ ಅವಭೃತ ಇವರ ಹಾಡುಗಾರಿಕೆಗೆ ಶೇಷಾದ್ರಿ ಅಯ್ಯಂಗಾರ್ ಇವರು ತಬಲಾ ಮತ್ತು ಅಜಯ ಹೆಗಡೆ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.
ಕಳಸ : ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ಮತ್ತು ಕರ್ಣಾಟಕ ಲೇಖಕಿಯರ ಸಂಘ ಕಳಸ ಇದರ ವತಿಯಿಂದ ನಾಗಮಣಿ ಪೂರ್ಣಚಂದ್ರ ಇವರ ಆಶ್ರಯದಲ್ಲಿ ‘ಮನೆಯಂಗಳದಲ್ಲಿ ಮಹಿಳೆಯರ ದಸರಾ ಸಂಭ್ರಮ’ವನ್ನು ದಿನಾಂಕ 02 ಅಕ್ಟೋಬರ್ 2025ರಂದು ಕಳಸದ ಹಂದಿಗೋಡು ಮನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಇತ್ತೀಚೆಗೆ ನಮ್ಮನ್ನು ಅಗಲಿದ ಹಿರಿಯ ಸಾಹಿತಿ ಶ್ರೀ ಎಸ್.ಎಲ್. ಭೈರಪ್ಪ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಶ್ರೀಮತಿ ಮಮ್ತಾಜ್ ಬೇಗಂ ಇವರು ಶ್ರೀಯುತರ ಸಾಧನೆಗಳ ಕುರಿತು ಮಾತನಾಡಿದರು ಹಾಗೂ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನದ ಪ್ರಯುಕ್ತ ಈ ಹಿರಿಯ ಚೇತನಗಳಿಗೆ ಗೌರವ ಪೂರ್ವಕ ಪ್ರಣಾಮಗಳನ್ನು ಸಲ್ಲಿಸಲಾಯಿತು. ನಂತರ ಲೇಖಕಿಯರ ಸಂಘದ ವತಿಯಿಂದ ಚುಟುಕು ಕವಿಗೋಷ್ಠಿ ಮತ್ತು ಮಹಿಳಾ ಘಟಕದ ವತಿಯಿಂದ ‘ಕನ್ನಡ ಪದ ಥಟ್ಟಂತ ಹೇಳಿ’ ಸ್ಫರ್ಧೆ ನಡೆಸಲಾಯಿತು. ಚಿ. ವಿಜೇತ್ ಚಂದ್ರ ಇವರಿಂದ ದಸರಾ ಮತ್ತು ಕನ್ನಡ ನಾಡು ನುಡಿ ಕುರಿತ ರಸಪ್ರಶ್ನೆ ನಡೆಯಿತು. ಅಂತ್ಯದಲ್ಲಿ ದಸರಾ ಸಂಭ್ರಮ ನೃತ್ಯ…
ಬೆಂಗಳೂರು : ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ (ರಿ.) ಹಾಗೂ ಮೋಹನ ತರಂಗಿಣಿ ಸಂಗೀತ ಸಭಾ ಇದರ ವತಿಯಿಂದ ರಾಜ್ಯಾದ್ಯಂತ ಹಾಗೂ ಬೆಂಗಳೂರಿನ ನಾನಾ ಬಡಾವಣೆಗಳಲ್ಲಿ ಆಫ್ ಲೈನ್ ಮತ್ತು ಆನ್ ಲೈನ್ ಸಂಗೀತ ನೃತ್ಯ ತರಗತಿಗಳು ನಡೆಯಲಿದೆ. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ದೇವರನಾಮ, ವಚನ ಗಾಯನ, ಭರತನಾಟ್ಯ, ಕೀಬೋರ್ಡ್, ವಯೋಲಿನ್, ಕೊಳಲು, ವೀಣೆ, ಮೃದಂಗ ಹಾಗೂ ವಾದ್ಯ ಸಂಗೀತದಲ್ಲಿ ಜೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆಗಳಿಗೆ ತರಬೇತಿ ಹಾಗೂ ಅಂಗವಿಕಲ, ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 94481 93836 ಮತ್ತು 82170 19013 ಸಂಖ್ಯೆಯನ್ನು ಸಂಪರ್ಕಿಸಿರಿ.
ಬಸರೀಕಟ್ಟೆ : ಶ್ರೀ ಲಕ್ಷ್ಮೀಜನಾರ್ದನ ಸ್ವಾಮಿ ದೇವಸ್ಥಾನದ ಸಂಪೂರ್ಣ ಸಹಕಾರದೊಂದಿಗೆ ಕಲಾಭಿಮಾನಿ ಬಳಗ ಬಸರೀಕಟ್ಟೆ ಅರ್ಪಿಸುವ ‘ಯಕ್ಷಗಾನ ತಾಳಮದ್ದಲೆ’ ಕಾರ್ಯಕ್ರಮವನ್ನು ದಿನಾಂಕ 07 ಅಕ್ಟೋಬರ್ 2025ರಂದು ಅಪರಾಹ್ನ 2-30 ಗಂಟೆಗೆ ಬಸರೀಕಟ್ಟೆ ಶ್ರೀ ಲಕ್ಷ್ಮೀಜನಾರ್ದನ ಸ್ವಾಮಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ರಾಜಾ ಯಯಾತಿ’ ಪ್ರಸಂಗದ ಹಿಮ್ಮೇಳದಲ್ಲಿ ಭಾಗವತರಾಗಿ ಸುರೇಶ ಶೆಟ್ರು ಶಂಕರ ನಾರಾಯಣ ಮತ್ತು ದರ್ಶನ್ ಮುಜೆಖಾನ್, ಮೃದಂಗದಲ್ಲಿ ಗಣೇಶಮೂರ್ತಿ ಹುಲುಗಾರು, ವೆಂಕಟೇಶ ಭಾಗವತರಮನೆ ಮತ್ತು ಚೆಂಡೆಯಲ್ಲಿ ರಾಧಾಕೃಷ್ಣ ಕುಂಜತ್ತಾಯ ಹಾಗೂ ಮುಮ್ಮೇಳದಲ್ಲಿ ವಿದ್ವಾನ್ ಹಿರಣ್ಯ ವೆಂಕಟೇಶ ಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಹರೀಶ ಬಳಂತಿಮೊಗರು, ಜನಾರ್ದನ ಮಂಡಗಾರು, ಅರವಿಂದ ಹಳ್ಳದಾಚೆ, ಸುನಿಲ್ ಹೊಲಾಡು ಸಹಕರಿಸಲಿದ್ದಾರೆ.
ಮಂಗಳೂರು: ಪದ್ಮಭೂಷಣ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿದ ಕನ್ನಡ ಗೀತೆಗಳನ್ನು ನಿರರ್ಗಳ 24 ಗಂಟೆಗಳ ಹಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ವಿಶ್ವ ದಾಖಲೆ ಮಾಡಿದ ವಿದ್ವಾನ್ ಯಶವಂತ್ ಎಂ. ಜಿ. ಇವರಿಗೆ ‘ಜನಮಾನಸ ಗೌರವ’ ಸಮಿತಿ ವತಿಯಿಂದ ‘ಜನಮಾನಸ ಗೌರವ- ಅಭಿನಂದನಾ ಸಮಾರಂಭವು ದಿನಾಂಕ 04 ಅಕ್ಟೋಬರ್ 2025ರಂದು ಸಂಜೆ ಘಂಟೆ 7-00ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಸ್ಪೀಕರ್ ಯು. ಟಿ. ಖಾದರ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಉದ್ಯಮಿ ಬಂಜಾರ ಪ್ರಕಾಶ ಶೆಟ್ಟಿ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮಕ್ಕೂ ಮುನ್ನ ಹಾಗೂ ಬಳಿಕ ಸಂಗೀತ ರಸಮಂಜರಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಸುಶಾಂತ್ ಭಂಡಾರಿ ತಿಳಿಸಿದ್ದಾರೆ.
ಮೈಸೂರು : ಕಲಾಸುರುಚಿ ಮೈಸೂರು ಇದರ ವತಿಯಿಂದ ‘ಕಥೆ ಕೇಳೋಣ ಬನ್ನಿ’ ಕಾರ್ಯಕ್ರಮದ 900ನೇ ವಿಶೇಷ ಸಂಚಿಕೆಯ ಸಂಭ್ರಮದ ಆಚರಣೆಯನ್ನು ದಿನಾಂಕ 04 ಅಕ್ಟೋಬರ್ 2025ರಂದು ಸಂಜೆ 4-00 ಗಂಟೆಗೆ ಮೈಸೂರು ಕುವೆಂಪು ನಗರ ಚಿತ್ರಭಾನು ರಸ್ತೆ, ನಂ 476, ಸುರುಚಿ ರಂಗಮನೆಯಲ್ಲಿ ಮಾಡುತ್ತಿದ್ದೇವೆ. ಮೈಸೂರಿನ ಪ್ರಪ್ರಥಮ ಮಹಿಳಾ ಜಾದೂಗಾರ್ತಿ ಹಾಗೂ ಮಾತನಾಡುವ ಗೊಂಬೆ ಕಲಾವಿದೆ ಶ್ರೀಮತಿ ಸುಮಾ ರಾಜಕುಮಾರ್ ಇವರು ಈ ವಾರದ ವಿಶೇಷ ಸಂಚಿಕೆಯ ಕಥೆಗಾರರು. ತಾವು ಮಕ್ಕಳನ್ನು ಕರೆದುಕೊಂಡು ಬಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಪ್ರೋತ್ಸಾಹಿಸಬೇಕೆಂದು ಕೋರುತ್ತೇವೆ. https://wwwyoutube.com/kalasuruchimysore ಇದು ಕಲಾಸುರುಚಿಯ ಯುಟ್ಯೂಬ್ ಚಾನೆಲ್ ನ ಲಿಂಕ್. ನೀವೂ ನೋಡಿ – ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ದಯವಿಟ್ಟು ಚಾನೆಲ್ ನ್ನು ಸಬ್ಸ್ ಕ್ರೈಬ್ ಮಾಡಿ. ಹೆಚ್ಚಿನ ಮಾಹಿತಿಗಾಗಿ 9243581097 ಮತ್ತು 9945943115 ಸಂಖ್ಯೆಯನ್ನು ಸಂಪರ್ಕಿಸಿರಿ. ಕಥೆ ಕೇಳೋಣ ಬನ್ನಿ ಕಾರ್ಯಕ್ರಮದ ಕೊನೆಯಲ್ಲಿ ಪದಕೋಶ ಕಾರ್ಯಕ್ರಮವಿರುತ್ತದೆ.
ಉಡುಪಿ : ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ ಇದರ 60ನೇ ವಾರ್ಷಿಕ ಮಹಾಸಭೆಯು ದಿನಾಂಕ 20 ಸೆಪ್ಟೆಂಬರ್ 2025ರಂದು ಉಡುಪಿ ಹೊಟೇಲ್ ಡಯಾನಾದಲ್ಲಿ ಜರುಗಿತು. ರಂಗಭೂಮಿ (ರಿ.) ಉಡುಪಿ ಇದರ 2025-26ನೇ ಸಾಲಿನ ಮಾರ್ಗದರ್ಶಕರಾಗಿ ಡಾ. ಹೆಚ್. ಶಾಂತರಾಮ್, ಗೌರವಾಧ್ಯಕ್ಷರಾಗಿ ಡಾ. ಹೆಚ್.ಎಸ್. ಬಲ್ಲಾಳ್, ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷರಾಗಿ ಭಾಸ್ಕರ ರಾವ್ ಕಿದಿಯೂರು ಹಾಗೂ ಎನ್. ರಾಜಗೋಪಾಲ ಬಲ್ಲಾಳ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಚಂದ್ರ ಕುತ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಶ್ರೀಪಾದ ಹೆಗಡೆ ಹಾಗೂ ವಿವೇಕಾನಂದ ಎನ್., ಕೋಶಾಧಿಕಾರಿಯಾಗಿ ಭೋಜ ಯು. ಆಯ್ಕೆಯಾದರು. ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಪೂರ್ಣಿಮಾ ಸುರೇಶ್, ವಿದ್ಯಾವಂತ ಆಚಾರ್ಯ, ಹೆಚ್. ಜಯಪ್ರಕಾಶ್ ಕೆದ್ಲಾಯ, ಗಿರೀಶ್ ತಂತ್ರಿ, ಡಾ. ವಿಷ್ಣುಮೂರ್ತಿ ಪ್ರಭು, ಆನಂದ ಮೇಲಂಟ, ಅಮಿತಾಂಜಲಿ ಕಿರಣ್, ಕೆ. ರವೀಂದ್ರ ಆಚಾರ್ಯ, ರವೀಂದ್ರ ಶೆಟ್ಟಿ ಕಡೆಕಾರು, ಹರೀಶ್ ಜೆ. ಕಲ್ಮಾಡಿ, ತಲ್ಲೂರು ಶಿವಪ್ರಸಾದ್ ಶೆಟ್ಟಿ ಹಾಗೂ ಕಾರ್ತಿಕ್…