Subscribe to Updates
Get the latest creative news from FooBar about art, design and business.
Author: roovari
ಬಂಟ್ವಾಳ : ವಿದುಷಿ ವಿದ್ಯಾ ಮನೋಜ್ ನಿರ್ದೇಶನದ ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಭರತನಾಟ್ಯ ಸಂಸ್ಥೆಯ 25ನೇ ವರ್ಷದ ಅಂಗವಾಗಿ ರಜತ ಕಲಾಯಾನ ಸರಣಿ ಕಾರ್ಯಕ್ರಮದ ಪ್ರಯುಕ್ತ ‘ಭಾವಾಭಿವ್ಯಕ್ತಿ’ ಭರತನಾಟ್ಯ ಕಾರ್ಯಕ್ರಮ ಕಲ್ಲಡ್ಕದ ಕಲಾನಿಕೇತನದಲ್ಲಿ ದಿನಾಂಕ 28 ನವೆಂಬರ್ 2025ರಂದು ಆರಂಭಗೊಂಡಿದ್ದು, ಖ್ಯಾತ ನೃತ್ಯ ಗುರುಗಳಾದ ವಿದುಷಿ ಶೀಲ ಚಂದ್ರಶೇಖರ್ ಹಾಗೂ ದೀಪ್ತಿ ರಾಧಾಕೃಷ್ಣ ಇವರ ಭರತನಾಟ್ಯ ಕಾರ್ಯಕ್ರಮ ಸಂಸ್ಥೆಯ ವಿದ್ಯಾರ್ಥಿಗಳನ್ನು ಹಾಗೂ ನೆರೆದ ಪ್ರೇಕ್ಷಕ ವರ್ಗವನ್ನು ಮಂತ್ರಮುಗ್ಧಗೊಳಿಸಿತು. ಭಾನುಮತಿ ನೃತ್ಯ ಕಲಾಮಂದಿರಂ ಇದರ ನಿರ್ದೇಶಕಿ ಮತ್ತು ಜೈನ್ (ಡಿಮ್ಸ್ ಟು ಬಿ) ಯೂನಿವರ್ಸಿಟಿ ಬೆಂಗಳೂರು ಇದರ ಅತಿಥಿ ಉಪನ್ಯಾಸಕಿ ಗುರು ವಿದುಷಿ ಶೀಲಾ ಚಂದ್ರಶೇಖರ್ ಹಾಗೂ ಭಾನುಮತಿ ನೃತ್ಯ ಕಲಾಮಂದಿರಂ ಶಿಷ್ಯ ಹಾಗೂ ಜೈನ್ (ಡಿಮ್ಸ್ ಟು ಬಿ) ಯೂನಿವರ್ಸಿಟಿ ಬೆಂಗಳೂರು ಇಲ್ಲಿನ ಸಂಶೋಧಕಿ ಮತ್ತು ಉಪನ್ಯಾಸಕಿ ದೀಪ್ತಿ ರಾಧಾಕೃಷ್ಣ ಇವರಿಂದ ಭರತನಾಟ್ಯ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಮೊದಲ ದಿನ ಇಬ್ಬರ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಖ್ಯಾತ ನೃತ್ಯ ಪಟುಗಳ ನಾಟ್ಯ,…
ಕಾಸರಗೋಡು : ಖ್ಯಾತ ಸಾಹಿತಿ ಡಾ. ಪ್ರಭಾಕರ ಶಿಶಿಲ ಇವರ ಎರಡು ಕೃತಿಗಳನ್ನು ಕೇಂದ್ರ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ.ವಿ. ಕುಮಾರನ್ ಮಾಸ್ತರ್ ಮಲೆಯಾಳಕ್ಕೆ ಅನುವಾದಿಸಿದ್ದು, ಅದರ ಬಿಡುಗಡೆ ಸಮಾರಂಭವು ದಿನಾಂಕ 27 ಡಿಸೆಂಬರ್ 2025ರಂದು ಪಿಲಿಕುಂಜೆ ಜಿಲ್ಲಾ ಲೈಬ್ರರಿ ಸಭಾಂಗಣದಲ್ಲಿ ಜರಗಿತು. ಸಮಾರಂಭವನ್ನು ಉದ್ಘಾಟಿಸಿದ ಲೈಬ್ರರಿ ಕೌನ್ಸಿಲ್ ಮುಖಂಡ ಪಿ.ವಿ.ಕೆ. ಪನಯಾಲ್ ಮಾತನಾಡಿ, “ಸಾಹಿತ್ಯ ಕೃತಿಗಳ ಭಾಷಾಂತರ ಕೇವಲ ರಸಾಸ್ವಾದನೆಯ ಉದ್ದೇಶವಷ್ಟೇ ಅಲ್ಲದೆ ಸಾಂಸ್ಕೃತಿಕ, ಸಾಮಾಜಿಕ ಸಹಿತ ವಿವಿಧ ಆಯಾಮಗಳ ವಿನಿಮಯವಾಗಿ ಮಹತ್ವಿಕೆಯನ್ನು ಹೊಂದಿದೆ. ಡಾ. ಶಿಶಿಲರ ವಿಶಿಷ್ಟ ಓದಿನ ಕೃತಿಗಳೆಲ್ಲ ವಿವಿಧ ಭಾಷೆಗೆ ಇನ್ನಷ್ಟು ಭಾಷಾಂತರಗೊಳ್ಳಬೇಕು” ಎಂದರು. ಪಿ.ದಾಮೋದರನ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕದಲ್ಲಿ ಕೃಷಿಕರ ಹೋರಾಟ ಪುಸ್ತಕವನ್ನು ಡಾ. ಸಿ. ಬಾಲನ್ ಹಾಗೂ ‘ಚಿತಾಗ್ನಿ’ ಕೃತಿಯನ್ನು ಡಾ. ರಾಧಾಕೃಷ್ಣ ಬೆಳ್ಳೂರು ಬಿಡುಗಡೆಗೊಳಿಸಿದರು. ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮತ್ತು ಸಾಹಿತಿ ರವೀಂದ್ರನ್ ಪಾಡಿ ಮೊದಲ ಪ್ರತಿಗಳನ್ನು ಸ್ವೀಕರಿಸಿದರು. ಕೃತಿಕರ್ತ ಡಾ. ಪ್ರಭಾಕರ ಶಿಶಿಲ, ಅನುವಾದಕ…
ಶಿವಮೊಗ್ಗ : ಛಾಯಾಗ್ರಹಣ ತರಬೇತಿ ಕ್ಷೇತ್ರದಲ್ಲಿ 25 ವರ್ಷಗಳಿಂದ ಕಾರ್ಯನಿರತವಾಗಿರುವ ಸಾಗರ ಪಟ್ಟಣದ ಸಾಗರ ಫೋಟೋಗ್ರಫಿಕ್ ಸೊಸೈಟಿಯು ಹೆಗ್ಗೋಡಿನ ನೀನಾಸಂ ಸಂಸ್ಥೆಯ ಸಹಯೋಗದಲ್ಲಿ ಹೆಗ್ಗೋಡಿನಲ್ಲಿ ದಿನಾಂಕ 25ರಿಂದ 28 ಡಿಸೆಂಬರ್ 2025ರವರೆಗೆ ರಾಜ್ಯ ಮಟ್ಟದ ಛಾಯಾಗ್ರಹಣ ಕಾರ್ಯಾಗಾರ ಆಯೋಜಿಸಿದೆ. ಹಿರಿಯ ಛಾಯಾಗ್ರಹಣ ಪರಿಣತರು ಈ ಶಿಬಿರದಲ್ಲಿ ಉಪನ್ಯಾಸ ನೀಡಲಿದ್ದು, ಛಾಯಾಗ್ರಹಣ ಕಲೆಯ ಕುರಿತು ವ್ಯಾಪಕವಾದ ತರಬೇತಿ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಶುಲ್ಕ ರಿಯಾಯಿತಿ ಇದೆ. ಸೀಮಿತ ವಸತಿಯ ಅವಕಾಶದ ಕಾರಣದಿಂದಾಗಿ ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು ಎಂದು ಸೊಸೈಟಿಯ ಸಹ ಕಾರ್ಯದರ್ಶಿ ಜಿ.ಆರ್ . ಪಂಡಿತ್ ತಿಳಿಸಿದ್ದಾರೆ. ಫೋಟೋಗ್ರಫಿಯಲ್ಲಿ ಆಸಕ್ತಿಯುಳ್ಳವರು ಮೊಬೈಲ್ ನಂ. 94486 27878ಗೆ ಸಂಪರ್ಕಿಸಬಹುದು.
ವಿಜಯಪುರ : ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ ನೀಡುವ ಹಸ್ತಪ್ರತಿ ಪ್ರಶಸ್ತಿ, ಸೃಜನಶೀಲ ಸಾಹಿತ್ಯ ಪ್ರಶಸ್ತಿ, ಸೃಜನೇತರ ವಿಭಾಗದ ಪ್ರಶಸ್ತಿಗಳನ್ನು ಪ್ರಕಟಿಸಿದೆ. ರಾಜ್ಯಮಟ್ಟದ 2025ನೇ ಸಾಲಿನ ‘ಪ್ರೊ. ಎಚ್.ಟಿ. ಪೋತೆ ಹಸ್ತಪ್ರತಿ ಪ್ರಶಸ್ತಿ’ಗೆ ಸಿಂದಗಿಯ ದೇವೂ ಮಾಕೊಂಡ ಇವರ ‘ಯುದ್ಧ ಮೃದಂಗ’ ಅನುವಾದಿತ ಸಂಕಲನ ಆಯ್ಕೆಯಾಗಿದೆ. ‘ಪ್ರೊ. ಎಚ್.ಟಿ. ಪೋತೆ ಸೃಜನಶೀಲ ಸಾಹಿತ್ಯ ಪ್ರಶಸ್ತಿ’ಗೆ ಬೆಂಗಳೂರಿನ ಡಾ. ಪದ್ಮನಿ ನಾಗರಾಜು ಇವರ ‘ಸಮುದ್ರದ ತೆರೆಯ ಸರಿಸಿ’ ಕಥಾ ಸಂಕಲನ ಮತ್ತು ವಿಜಯಪುರದ ಡಾ. ಸುಜಾತ ಚಲವಾದಿ ಇವರ ‘ಲಚಮವ್ವ ಮತ್ತು ಇತರ ಕತೆಗಳು’ ಆಯ್ಕೆಯಾಗಿವೆ. ದಿ. ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ 2024ರ ಸಾಲಿನ ಸೃಜನೇತರ ವಿಭಾಗದ ಪುಸ್ತಕ ಪ್ರಶಸ್ತಿಗೆ ಬಾಗಲಕೋಟೆಯ ಮಹಾದೇವ ಬಸರಕೋಡ ಇವರ ‘ಸುರಧೇನು’ ಮತ್ತು ತುಮಕೂರಿನ ಅನಂತ ಕುಣಿಗಲ್ ಇವರ ‘ಅಪ್ಪನ ಆಟೋಗ್ರಾಫ್’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬೆರಗು ಪ್ರಕಾಶನ ಸಂಸ್ಥೆ ಅಧ್ಯಕ್ಷೆ ವಿಜಯಲಕ್ಷ್ಮಿ ಆರ್. ಕತ್ತಿ ಹೇಳಿದ್ದಾರೆ. ಹಸ್ತಪ್ರತಿ ಪ್ರಶಸ್ತಿ ರೂ.ಹತ್ತು ಸಾವಿರ…
ಶಿವಮೊಗ್ಗ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಂಗಾಯಣ ಶಿವಮೊಗ್ಗ ಇವರ ಜಂಟಿ ಆಶ್ರಯದಲ್ಲಿ ರಂಗಾಯಣ ಶಿವಮೊಗ್ಗದ ರೆಪರ್ಟರಿ ಕಲಾವಿದರು ಅಭಿನಯಿಸುವ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನವನ್ನು ದಿನಾಂಕ 05 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ಶಿವಮೊಗ್ಗದ ರಂಗಾಯಣ ಸುವರ್ಣ ಸಂಸ್ಕೃತಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಡಿ.ಎಸ್. ಚೌಗಲೆ ಇವರು ರಚಿಸಿರುವ ಈ ನಾಟಕವನ್ನು ಚಿದಂಬರ ರಾವ್ ಜಂಬೆ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.
ಮಂಗಳೂರು : ಯಕ್ಷ ಪ್ರತಿಭೆ (ರಿ.) ಮತ್ತು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿ ವತಿಯಿಂದ ಸಾಧಕರ ಅಭಿನಂದನಾ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 29 ನವೆಂಬರ್ 2025ರಂದು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಪಾವಂಜೆ ಮೇಳದ ಬಯಲಾಟದ ವೇದಿಕೆಯಲ್ಲಿ ನಡೆಯಿತು. ಪ್ರಶಸ್ತಿ ಪ್ರಧಾನ ನೆರವೇರಿಸಿ ಆಶೀರ್ವಚನ ನೀಡಿದ ಕಟೀಲಿನ ಪ್ರಧಾನ ಅರ್ಚಕ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ “ಕಳೆದ ಅನೇಕ ವರ್ಷಗಳಿಂದ ಕೀರ್ತಿಶೇಷ ಗೋಪಾಲಕೃಷ್ಣ ಅಸ್ರಣ್ಣರವರ ಸಂಸ್ಮರಣೆಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಿರುವ ಸಂಸ್ಥೆ ಯಕ್ಷ ಪ್ರತಿಭೆ. ಇದರ ಹಿಂದಿರುವ ಅಪ್ರತಿಮ ಪ್ರತಿಭೆ ಗೋಣಿಬೀಡು ಸಂಜಯ್ ಕುಮಾರ್ ಶೆಟ್ಟಿಯವರು. ನಮ್ಮ ತಂದೆಯವರ ಸಂಸ್ಮರಣೆ ಬೇರೆ ಬೇರೆ ಕಡೆಯಲ್ಲಿ ನಡೆದರೂ ಸಂಜಯರು ನಡೆಸುತ್ತಿರುವ ಈ ಕಾರ್ಯಕ್ರಮಕ್ಕೆ ವಿಶೇಷ ಅರ್ಥವಿದೆ. ಅವರೊಬ್ಬ ಯಕ್ಷಗಾನ ರಂಗದ ಉತ್ತಮ ಕಲಾವಿದನಾಗಿಯೂ, ಸಂಘಟಕನಾಗಿಯೂ ಕಾರ್ಯ ನಿರ್ವಹಿಸುತ್ತಾ ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿದ ಪ್ರಮುಖರನ್ನು, ಸಾಧಕರನ್ನು ಹಾಗೂ ಯಕ್ಷಗಾನ ಕಲಾವಿದರನ್ನು ಸನ್ಮಾನಿಸುತ್ತಾ ಗೌರವಿಸುತ್ತಾ ಬಂದಿದ್ದಾರೆ. ತನ್ನ ಜೊತೆಯಲ್ಲಿ…
ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸಿದ್ಧಗೊಂಡ ‘ಅಪ್ಪ’ ಅರೆಭಾಷೆ ನಾಟಕದ ರಂಗ ಪ್ರದರ್ಶನವು ದಿನಾಂಕ 27 ನವೆಂಬರ್ 2025ರಂದು ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಇದರ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಇವರು ರಂಗಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, “ಭಾಷೆಯ ಬೆಳವಣಿಗೆಗೆ ಕಲೆಯೂ ಒಂದು ಮಾಧ್ಯಮ. ರಂಗಭೂಮಿಯ ಮೂಲಕ ಭಾಷೆಯು ಬೆಳವಣಿಗೆ ಸಾಧ್ಯ” ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, “ಅರೆಭಾಷೆಯ ಬೆಳವಣಿಗೆಗೆ ಅಕಾಡೆಮಿಯ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೀಗ ಹಲವು ಸಮಯದ ಪ್ರಯತ್ನದಿಂದ ಅರೆಭಾಷೆ ನಾಟಕ ಸಿದ್ದಗೊಂಡಿದೆ. ಸ್ಥಳೀಯ ಕಲಾವಿದರನ್ನೇ ಒಳಗೊಂಡ ನಾಟಕ ಸಿದ್ಧಪಡಿಸಲಾಗಿದೆ. ಒಂದು ವರ್ಷದಲ್ಲಿ 25ಕ್ಕೂ ಹೆಚ್ಚು ಪ್ರದರ್ಶನ ಮಾಡುವ ಉದ್ದೇಶ ಇದೆ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕಾರಾಮ ಏನೆಕಲ್, ರಂಗನಿರ್ದೇಶಕ ಬಾಸುಮಾ ಕೊಡಗು, ನೆಹರೂ ಸ್ಮಾರಕ…
ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಸಹಯೋಗದಲ್ಲಿ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ದಿನಾಂಕ 29 ನವೆಂಬರ್ 2025ರಂದು ಹಮ್ಮಿಕೊಂಡಿದ್ದ ಡಾ. ಯು.ಪಿ. ಉಪಾಧ್ಯಾಯ ಹಾಗೂ ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಮಕ ವ್ಯಾಖ್ಯಾನಕಾರ ಕಬ್ಬಿನಾಲೆ ಡಾ. ವಸಂತ ಭಾರದ್ವಾಜ್ “ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಸರಿಯಾದ ದಾರಿಯಲ್ಲಿ ಭಾಷಾ ಸಂವಹನ ಕಲಿಸಬೇಕು, ಇಲ್ಲದಿದ್ದರೆ ಮುಂದೆ ಕಷ್ಟವಿದೆ. ಸಂಶೋಧಕರಿಗೆ ಎಲ್ಲಾ ಕಡೆ ವಿಪುಲ ಸಾಮಗ್ರಿಗಳು ದೊರಕುತ್ತವೆ. ಆದರೆ, ಯುವ ಮನಸ್ಸುಗಳು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಹಳೆಯ ಶಬ್ದಗಳನ್ನು ಕಲಿಯುವುದರ ಜೊತೆಗೆ ಹೊಸ ಶಬ್ದ ಸೃಷ್ಟಿಗೂ ಸಾಧ್ಯತೆಗಳಿವೆ. ಆದರೆ, ಇಂದು ಭಾಷಾತಜ್ಞರ ನಾಡಿನಲ್ಲಿ ಭಾಷಾಗತಿ, ಸರಸ್ವತಿಯ ಚರಣ ಚಿಹ್ನೆ ಹೆಜ್ಜೆ ತಪ್ಪುತ್ತಿದೆ. ಸಾಹಿತ್ಯದಲ್ಲಿ ಹೊಳವು ಮುಖ್ಯ. ಕಲೆ ಮತ್ತು ಸಂಸ್ಕೃತಿಯ ಸಂಶೋಧನೆ ತಪಸ್ಸಿನ ರೀತಿಯಲ್ಲಿ ನಡೆಯುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.…
ಬೆಂಗಳೂರು : ಪ್ರಯೋಗರಂಗ ಬೆಂಗಳೂರು ಇವರು ಪ್ರಸ್ತುತ ಪಡಿಸುವ ‘ಕಾಲಜ್ಞಾನಿ ಕನಕ’ ನಾಟಕ ಪ್ರದರ್ಶನವನ್ನು ದಿನಾಂಕ 04 ಡಿಸೆಂಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕದ ರಚನೆ ಕಿ.ರಂ. ನಾಗರಾಜ ಇವರು ಮಾಡಿದ್ದು, ಸಂಗೀತ ಹೆಚ್.ಕೆ. ಯೋಗಾನರಸಿಂಹ ಮತ್ತು ಸುರೇಶ್ ಆನಗಳ್ಳಿ ಇವರು ನೀಡಿದ್ದು, ಸಿಜಿಕೆ ನಿರ್ದೇಶನ ಮಾಡಿರುತ್ತಾರೆ. ಪ್ರಸ್ತುತ ಟಿ. ರಘು ಇವರು ಮರು ನಿರ್ದೇಶನ ಮಾಡಿದ್ದು, ಡಾ. ಕೆ.ವಿ. ನಾಗರಾಜಮೂರ್ತಿ ಇವರು ನಿರ್ಮಾಣ ಮತ್ತು ನಿರ್ವಹಣೆ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 98451 72822 ಸಂಖ್ಯೆಯನ್ನು ಸಂಪರ್ಕಿಸಿರಿ. ಪ್ರಯೋಗರಂಗದ ಬಗ್ಗೆ : ಪ್ರಯೋಗರಂಗ ನಾಟಕ ತಂಡ ಕಳೆದ 25 ವರ್ಷಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ನಾಟಕ ಪ್ರರ್ದಶಿಸುತ್ತಾ ಬಂದಿದೆ. ‘ಮಂಟೆಸ್ವಾಮಿ ಕಥಾಪ್ರಸಂಗ’, ‘ಮೌನಿ’, ‘ಪ್ರೇತದ್ವೀಪ’, ‘ಮಲ್ಲಮ್ಮನ ಮನೆ ಹೋಟು’, ‘ಬ್ರಹ್ಮಚಾರಿ ಶರಣಾದ’, ‘ಮಹಿಪತ ಕ್ವಾಣನ ತಂಬಿಗಿ ಎಂ.ಎ’, ‘ಜುಮ್ನಾಳ ದೂಳ್ಯನ ಪ್ರಸಂಗ’, ‘ರಾಜಬೇಟೆ’, ‘ಸಂತೆಯಲ್ಲಿ ನಿಂತ ಕಬೀರ’, ‘ಪರಿಹಾರ’, ‘ಜುಗಾರಿ ಕೂಟ’,…
ಕಾಸರಗೋಡು : ಮಂಗಳೂರಿನ ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಮತ್ತು ಲಕ್ಷ್ಮೀ ಟೀಚರ್ ಕಣ್ಣಪ್ಪ ಮಾಸ್ಟರ್ ಮೆಮೋರಿಯಲ್ ಟ್ರಸ್ಟಿನ ಸಹಯೋಗದಲ್ಲಿ ಲಕ್ಷ್ಮೀ ರಾವ್ ಆರೂರು, ಶಾರದಾ ಭಟ್, ರಾಧಾಬಾಯಿ ನಾರಾಯಣ ಬಾಬು ಮತ್ತು ಶ್ರೀಕಲಾ ಉಡುಪ ದತ್ತಿನಿಧಿಯ ‘ಅಮ್ಮನೆಂಬ ವಿಸ್ಮಯ’ ಪರಿಕಲ್ಪನೆಯ ಕಾರ್ಯಕ್ರಮವು ದಿನಾಂಕ 29 ನವೆಂಬರ್ 2025ರಂದು ಕುಂಜತ್ತೂರಿನಲ್ಲಿ ನಡೆಯಿತು. ಸಂಘದ ಅಧ್ಯಕ್ಷೆ ಶಕುಂತಳಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೀಪಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮುಖ್ಯ ಅತಿಥಿ, ಲೇಖಕಿ ಕುಶಲಾಕ್ಷಿ ಕಣ್ವತೀರ್ಥ ಮಾತನಾಡಿ “ಬದಲಾದ ಕಾಲಘಟ್ಟದಲ್ಲಿ ಹೆತ್ತವರ ಅತಿಯಾದ ಕಾಳಜಿಯಿಂದ ಮತ್ತು ಆಧುನಿಕ ಸೌಕರ್ಯಗಳಿಂದ ಮಕ್ಕಳಲ್ಲಿ ಕಷ್ಟ ಸಹಿಸುವ ಶಕ್ತಿ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಅದೇ ಅಮ್ಮಂದಿರು ತಮ್ಮ ವೃದ್ಧಾಪ್ಯದಲ್ಲಿ ಆಶ್ರಮವಾಸಿಗಳಾಗುತ್ತಿದ್ದಾರೆ” ಎಂದರು. ದತ್ತಿನಿಧಿಯ ಅಂಗವಾಗಿ ಸಂಘದ ಸದಸ್ಯೆಯರಿಗೆ ‘ಅಮ್ಮ’ ಎನ್ನುವ ಶೀರ್ಷಿಕೆಯಡಿ ಏರ್ಪಡಿಸಿದ್ದ ಕವನ ಸ್ಪರ್ಧೆಯ ಬಹುಮಾನವನ್ನು ವಿತರಿಸಲಾಯಿತು. ದೇವಿಕಾ ನಾಗೇಶ್ ಪ್ರಥಮ, ಶರ್ಮಿಳಾ ಉಡುಪ ದ್ವಿತೀಯ, ವಿಜಯಲಕ್ಷ್ಮೀ ಶಾನುಭಾಗ್ ಮತ್ತು ಡಾ. ಜ್ಯೋತಿ ಚೇಳ್ಯಾರು ತೃತೀಯ ಬಹುಮಾನವನ್ನು ಪಡೆದರು.…