Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಇದರ ವತಿಯಿಂದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಶ್ರೀ ಮಂಗಳಾ ಕಲಾ ವೇದಿಕೆಯಲ್ಲಿ ದಿನಾಂಕ 31 ಜನವರಿ 2026ರಂದು 16ನೇ ವಾರ್ಷಿಕೋತ್ಸವ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಮಂಗಳಾದೇವಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಎಂ. ಅರುಣ್ ಐತಾಳ್ “ಸಾಂಸ್ಕೃತಿಕವಾಗಿ ನಮ್ಮಲ್ಲಿರುವ ಅನೇಕ ಕಲಾಪ್ರಕಾರಗಳ ಮಧ್ಯೆ ಅಧ್ಯಾತ್ಮ ಚಿಂತನೆಯ ಹರಿಕಥಾ ಕಲೆಯ ಶ್ರವಣಕ್ಕೆ ಕೇಳುಗರಲ್ಲಿ ಆಸಕ್ತಿ ಹಾಗೂ ಶ್ರದ್ಧೆ ಹೆಚ್ಚಾಗಬೇಕಿದೆ. ಮನೋರಂಜನೆ ಬೇರೆ ಮನೋವಿಕಾಸದ ವಿಚಾರಗಳು ಬೇರೆ. ಆದರೆ ಹರಿಕಥಾ ಕಲೆ ಆನಂದದೊಂದಿಗೆ ಅರಿವನ್ನು ನೀಡುವ ವಿಶಿಷ್ಟ ಕಲೆ. ಹಾಗಾಗಿ ಈ ಕಲೆಗೆ ಪ್ರೋತ್ಸಾಹ ಅಗತ್ಯ” ಎಂದರು. ಶ್ರೀ ರಾಮಕೃಷ್ಣ ಮಠದ ಸ್ವಾಮಿ ಯುಗೇಶಾನಂದಜೀ ಆಶೀರ್ವಚನ ನೀಡಿ, “ಕಣ್ಣಿಗೆ ಕಾಣದಂತಹ ಭಗವಂತನನ್ನು ನಮ್ಮೊಳಗೆ ಅರಸುವ ಆನಂದದಾಯಕ ಮಾಧ್ಯಮ ಹರಿಕಥೆ, ಹಾಗಾಗಿ ಈ ಕಲೆಯ ಬೆಳವಣಿಗೆಗೆ ಶ್ರಮಿಸುತ್ತಿರುವ ಹರಿಕಥಾ ಪರಿಷತ್ತಿಗೆ ಪ್ರೋತ್ಸಾಹ ನೀಡುವ ಜವಾಬ್ದಾರಿ ನಮ್ಮದು” ಎಂದರು. ಹರಿಕಥಾ ಪರಿಷತ್ ಅಧ್ಯಕ್ಷ ಕೆ. ಮಹಾಬಲ…
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪುರುಷ ಸಾಹಿತಿಗಳಿಗೆ ಮೀಸಲಾಗಿರುವ ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಸಾಹಿತಿ ಮತ್ತು ವೈದ್ಯ ಡಾ. ಕೆ.ಬಿ. ಸೂರ್ಯಕುಮಾರ್ ಅವರ ‘ವೈದ್ಯ ಕಂಡ ವಿಸ್ಮಯ’ ವಿಭಿನ್ನ ವಿಶ್ವದ ಇಣುಕು ನೋಟ ಕೃತಿ ಆಯ್ಕೆಯಾಗಿದೆ. ಜಿಲ್ಲೆಯ ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕ ಬಿ.ಎಸ್. ಗೋಪಾಲಕೃಷ್ಣರ ಹೆಸರಿನಲ್ಲಿ ಅವರ ಪುತ್ರರು ಸ್ಥಾಪಿಸಿರುವ ಈ ದತ್ತಿಯ ದ್ವಿತೀಯ ಪ್ರಶಸ್ತಿ ಇದಾಗಿದ್ದು, ಈ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಪುರುಷ ಬರಹಗಾರರು ಸಲ್ಲಿಸಿದ್ದ ಕೃತಿಗಳನ್ನು ಜಿಲ್ಲೆಯ ಹಿರಿಯ ಮೂರು ಸಾಹಿತಿಗಳು ಪ್ರತ್ಯೇಕವಾಗಿ ಪರಿಶೀಲಿಸಿ ನೀಡಿದ ಅಂಕಗಳನ್ನು ಜಿಲ್ಲಾ ಸಮಿತಿ ಒಟ್ಟು ಗೂಡಿಸಿ ಅತಿ ಹೆಚ್ಚು ಅಂಕ ಪಡೆದ ‘ವೈದ್ಯ ಕಂಡ ವಿಸ್ಮಯ’ ವಿಭಿನ್ನ ವಿಶ್ವದ ಇಣುಕು ನೋಟ ಕೃತಿಯನ್ನು ಆಯ್ಕೆ ಮಾಡಿದೆ. ಡಾ. ಕೆ.ಬಿ. ಸೂರ್ಯಕುಮಾರ್ ಅವರು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ 18 ವರ್ಷಗಳ ಕಾಲ ವೈದ್ಯಕೀಯ ವಿಭಾಗ ಮತ್ತು ವಿಧಿವಿಜ್ಞಾನ ಪರಿಣಿತರಾಗಿ ಕೆಲಸ…
ಮಂಗಳೂರು : ಸೌರಭ ಸಂಗೀತ ನೃತ್ಯ ಕಲಾ ಪರಿಷತ್ (ರಿ.) ಮಂಗಳೂರು ಪ್ರಸ್ತುತ ಪಡಿಸುವ ‘ಮಾರ್ಗಂ ಮಾಧುರ್ಯಂ’ ಭರತನೃತ್ಯ ಸಮೂಹ ಪ್ರಸ್ತುತಿಯನ್ನು ದಿನಾಂಕ 08 ಫೆಬ್ರವರಿ 2026ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ನೃತ್ಯ ಭಾರತಿ (ರಿ.) ನಿರ್ದೇಶಕರಾದ ವಿದುಷಿ ಗೀತಾ ಸರಳಾಯ, ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ನಿರ್ದೇಶಕರಾದ ನಿತ್ಯಾನಂದ ರಾವ್ ಮತ್ತು ರೂವಾರಿ ಡಿಜಿಟಲ್ ಪತ್ರಿಕೆಯ ಪ್ರಧಾನ ಸಂಪಾದಕಿ ಶ್ರೀಮತಿ ರತ್ನಾವತಿ ಜೆ. ಬೈಕಾಡಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಿಂದ ಸಮೂಹ ಭರತನೃತ್ಯ ಪ್ರದರ್ಶನ ಹಾಗೂ ದಶಾವತಾರ ನೃತ್ಯರೂಪಕದ ನಟುವಾಂಗ ಮತ್ತು ನಿರ್ದೇಶನ ಗುರು ಡಾ. ಶ್ರೀವಿದ್ಯಾ, ಹಾಡುಗಾರಿಕೆ ವಿದ್ವಾನ್ ವಿನೀತ್ ಪುರವಂಕರ, ಮೃದಂಗದಲ್ಲಿ ವಿದ್ವಾನ್ ರಾಜೀವ್ ಗೋಪಾಲ್, ವೇಣು ವಾದನದಲ್ಲಿ ವಿದ್ವಾನ್ ಮುರಳೀಧರ್ ಸಹಕರಿಸಲಿದ್ದಾರೆ.
ಮುಲ್ಕಿ : ಕಿಲ್ಪಾಡಿಯ ಆದಿ ಕಿಲ್ಪಾಡಿ ಬಬ್ಬಸ್ವಾಮಿ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಮತ್ತು ದ.ಕ. ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಕವಿ ಹಾಗೂ ಲೇಖಕ ಶಂಕರ್ ಪಡಂಗ ಕಿಲ್ಪಾಡಿ ಇವರ ‘ಕಾಣೆಯಾದಳು ಹುಡುಗಿ ಹಗಲುಗನಸಿನಲ್ಲಿ’ ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿಯು ದಿನಾಂಕ 08 ಫೆಬ್ರವರಿ 2026ರಂದು ಮಧ್ಯಾಹ್ನ 2-00 ಗಂಟೆಗೆ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಬಿಲ್ಲವ ಸಮಾಜ ಸಂಘದ ಅಧ್ಯಕ್ಷರಾದ ವಾಮನ ನಡಿಕುದ್ರು ವಹಿಸಲಿದ್ದು, ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಉದ್ಘಾಟಿಸಲಿದ್ದಾರೆ. ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಶ್ರೀಕಾಂತ ಭಟ್ ಪರೆಂಕಿಲ ಆಶೀರ್ವಚನ ನೀಡಲಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಆ ಸೊಸೈಟಿ ಅಧ್ಯಕ್ಷ ವಸಂತ ಬೆರ್ನಾಡ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಗಿರೀಶ್, ಉದ್ಯಮಿ…
ಬೆಂಗಳೂರು : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇವರು ಕೊಡಮಾಡುವ 2026ನೇ ಸಾಲಿನ ‘ಡಾ. ಜಿ.ಶಂ. ಪರಮಶಿವಯ್ಯ ಪ್ರಶಸ್ತಿ’ಗೆ ಜಾನಪದ ವಿದ್ವಾಂಸರಾದ ಡಾ. ಕೆ. ಚಿನ್ನಪ್ಪ ಗೌಡ ಇವರು ಆಯ್ಕೆಯಾಗಿದ್ದಾರೆ. ರಾಮ ನಗರದ ಜಾನಪದ ಲೋಕದಲ್ಲಿ ದಿನಾಂಕ 7 ಮತ್ತು 8 ಫೆಬ್ರವರಿ 2026ರಂದು ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯಲಿರುವ ‘ವಿದ್ಯಾರ್ಥಿ ಲೋಕೋತ್ಸವ’ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ. ಕರ್ನಾಟಕ ಜಾನಪದ ಪರಿಷತ್ತು ಡಾ. ಕೆ. ಚಿನ್ನಪ್ಪ ಗೌಡರು ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿರುವ ಸಾಧನೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ. ಈ ಪ್ರಶಸ್ತಿಯು ರೂ.25,000/- ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಜಾನಪದ ಪರಿಷತ್ತುವಿನ ಇತರ ಪ್ರಶಸ್ತಿಗಳಾದ ‘ನಾಡೋಜ ಎಚ್.ಎಲ್. ನಾಗೇಗೌಡ ಜಾನಪದ ಲೋಕಶ್ರೀ ಪ್ರಶಸ್ತಿ’ಗೆ ಜಾನಪದ ವಿದ್ವಾಂಸ ಹಿ.ಶಿ. ರಾಮೇಚಂದ್ರೇ ಗೌಡ, ‘ನಾಡೋಜ ಡಾ. ಜಿ. ನಾರಾಯಣ ಜಾನಪದ ಲೋಕ ಪ್ರಶಸ್ತಿ’ಗೆ ವಾದನ ಕಲಾವಿದರಾದ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೋಳುವಾರು ಪುತ್ತೂರು ಇದರ ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಿಂಗಳ ಸರಣಿ ತಾಳಮದ್ದಲೆಯು ದಿನಾಂಕ 2 ಫೆಬ್ರವರಿ 2026ರಂದು ‘ಪಾರ್ಥ ಸಾರಥ್ಯ’ ಪ್ರಸಂಗದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಆನಂದ ಸವಣೂರು, ನಿತೀಶ್ ಎಂಕಣ್ಣ ಮೂಲೆ, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ, ಶರಣ್ಯ ನೆತ್ತರಕೆರೆ, ಅನಿಷ್ ಕೃಷ್ಣ ಪುಣಚ, ಶಿವಪ್ರಸಾದ್ ನಾಕೂರು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ (ದಿವಾಕರ್ ಗೇರುಕಟ್ಟೆ), ಅರ್ಜುನ (ಭಾಸ್ಕರ್ ಬಾರ್ಯ), ಕೌರವ (ಗುಡ್ಡಪ್ಪ ಬಲ್ಯ), ಬಲರಾಮ (ಮಾಂಬಾಡಿ ವೇಣುಗೋಪಾಲ್ ಭಟ್) ಸಹಕರಿಸಿದರು.
ಉದ್ಯಾವರ : ನಿರಂತರ್ ಉದ್ಯಾವರ್ (ರಿ.) ಇವರ ವತಿಯಿಂದ 8ನೇ ವರ್ಷದ ಬಹುಭಾಷಾ ನಿರಂತರ್ ನಾಟಕೋತ್ಸವವನ್ನು ದಿನಾಂಕ 05ರಿಂದ 08 ಫೆಬ್ರವರಿ 2026ರವರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಉದ್ಯಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ. ದಿನಾಂಕ 05 ಫೆಬ್ರವರಿ 2026ರಂದು ಸಂತೋಷ್ ನಾಯಕ್ ಪಟ್ಲ ಇವರ ರಂಗ ಪಠ್ಯ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ಇವರಿಂದ ‘ನೆಲ ನೀರ್ ದ ದುನಿಪು’, ದಿನಾಂಕ 06 ಫೆಬ್ರವರಿ 2026ರಂದು ಚಿದಂಬರ ರಾವ್ ಜಂಬೆ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಶಿವಮೊಗ್ಗದ ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸುವ ‘ನಮ್ಮೊಳಗೊಬ್ಬ ಗಾಂಧಿ’, ದಿನಾಂಕ 07 ಫೆಬ್ರವರಿ 2026ರಂದು ಡೆನಿಸ್ ಮೊಂತೇರ್ ನಿರ್ದೇಶನದಲ್ಲಿ ಮಂಗಳೂರಿನ ಅಸ್ತಿತ್ವ (ರಿ.) ತಂಡದಿಂದ ‘ಭಾಂಗಾರ್ ಮನಿಸ್’, ದಿನಾಂಕ 08 ಫೆಬ್ರವರಿ 2026ರಂದು ಅರುಣ್ ಲಾಲ್ ರಚನೆ, ರಂಗರೂಪ ಮತ್ತು ನಿರ್ದೇಶನದಲ್ಲಿ ಕೇರಳದ ಲಿಟಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್ ತಂಡದವರಿಂದ ‘ಕೂಹೂ’ ನಾಟಕಗಳು…
ಧಾರವಾಡ : ರಾಷ್ಟ್ರೀಯ ಸಾಹಿತ್ಯ ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆಯಾದ ಧಾರವಾಡ ಕಟ್ಟೆ (ರಿ.) ಇದರ ವತಿಯಿಂದ 359ನೇ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಂಪರೆ ಮತ್ತು ಸಮಕಾಲೀನತೆ ಉಪನ್ಯಾಸ ಮಾಲಿಕೆಯನ್ನು ದಿನಾಂಕ 05 ಫೆಬ್ರವರಿ 2026ರಂದು ಸಂಜೆ 6-00 ಗಂಟೆಗೆ ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದೆ. ಉಡುಪಿ ಹಿರೆಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಪ್ರಕಾಶ್ ಶೆಟ್ಟಿ ಎಚ್. ಮತ್ತು ಕಲಬುರುಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೊ. ಬಸವರಾಜ ಡೋಣೂರ ಇವರು ‘ಯಶೋಧರ ಚರಿತೆ ಎಂಬ ಮತಿ ಮತ್ತು ಮತಲೋಕ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಗುರುವಿನ ಜ್ಞಾನ ಸಾಗರದಲ್ಲಿ ಬೆರೆತು, ಕಲಾ ಪ್ರವಾಹದಲ್ಲಿ ಈಜುತ್ತಾ, ಕಲೆಯ ಆಳವನ್ನು ಅರಿಯುವ ಪ್ರಯತ್ನ ಮಾಡುತ್ತಾ ಸಾಗುವುದೇ ಕಲಾವಿದ/ಕಲಾವಿದೆಗೆ ಇರುವ ಸವಾಲು. ಕಲೆಯ ಕೈಂಕರ್ಯವೇ ಹಾಗೇ! ಸತತ ಪ್ರಯತ್ನ, ಪರಿಶ್ರಮದ ಅನಾವರಣ ಮತ್ತು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ಪ್ರಬುದ್ಧತೆಯತ್ತ ಸಾಗುವ ಪ್ರಯತ್ನ ಮಾಡುವ ಮೂಲಕ ಸಾಗುವ ಪ್ರಕ್ರಿಯೆ. ಇದು ನಿರಂತರವಾಗಿರಬೇಕು. ಇದು ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಕೆಲವರಿಗೆ ಅಲ್ಪಜ್ಞಾನವೇ ಅದ್ಭುತಜ್ಞಾನವೆಂದು ಅನ್ನಿಸಿಬಿಡಬಹುದು, ಅದರ ಪರಿಧಿ ಅಲ್ಪವೇ. ಪರಿಪೂರ್ಣತೆ ಎನ್ನುವುದು ದೀರ್ಘಾವಧಿಯ ಪರಿಕಲ್ಪನೆ ಎನ್ನುವುದನ್ನು ಅರಿತ ಅನೇಕ ಕಲಾವಿದರು ಇದ್ದಾರೆ. ಭರತನಾಟ್ಯದ ಮೂಲ ನೆಲೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದ ನೃತ್ಯ ಕಾರ್ಯಕ್ರಮವನ್ನು ನೋಡುವ ಮತ್ತು ಹಲವಾರು ಅಂಶಗಳನ್ನು ಗಳಿಸಿಕೊಳ್ಳುವ ಅವಕಾಶ ನನಗೆ ಫೆಬ್ರವರಿ 1ರಂದು ದೊರಕಿತು. ನಟ್ಟುವಾಂಗದಲ್ಲಿ ನನ್ನದೇ ವಿದ್ಯಾರ್ಥಿ ಆಗಿರುವ ಉತ್ತಮ ಭರತನಾಟ್ಯ ಕಲಾವಿದ ಎನ್. ದೇಬಾಶಿಷ್ ಇವನ ಪೂರ್ಣ ಪ್ರಮಾಣದ ಮಾರ್ಗ ನೃತ್ಯವು ಪಾರ್ಥಸಾರಥಿ ಸ್ವಾಮಿ ಸಭಾ ಚೆನ್ನೈ ಇಲ್ಲಿ ನಡೆಯಿತು. ಚೆನ್ನೈನಲ್ಲಿರುವ ಸಾಧಕ ಗುರುಗಳಾದ ಕಲೈಮಾಮಣಿ…
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ‘ಕಾವ್ಯಾಂ ವ್ಹಾಳೊ-11’ ಶೀರ್ಷಿಕೆಯಡಿ ಕವಿಗೋಷ್ಠಿಯನ್ನು ಮಂಗಳೂರಿನ ಲಾಲ್ ಬಾಗ್ ನಲ್ಲಿರುವ ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 07 ಫೆಬ್ರವರಿ 2026ರಂದು ಸಂಜೆ 4-00 ಗಂಟೆಗೆ ಹಮ್ಮಿಕೊಂಡಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ವಹಿಸಿಕೊಳ್ಳಲಿದ್ದಾರೆ. ಕೊಂಕಣಿಯ ಜನಪ್ರಿಯ ಗಾಯಕರಾದ ಶ್ರೀಮತಿ ಝೀನಾ ಪಿರೇರಾರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೊಂಕಣಿಯ ಹಿರಿಯ ಕಾರ್ಯಕರ್ತೆ ಹಾಗೂ ಹೆಸರಾಂತ ಕವಯತ್ರಿಗಳಾದ ಶ್ರೀಮತಿ ಜ್ಯೂಲಿಯೆಟ್ ಮೊರಾಸ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಖ್ಯಾತ ಕವಿಗಳಾದ ಶ್ರೀ ವಿನ್ಸೆಂಟ್ ಆಳ್ವರವರು ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ಮ್ಯಾಕ್ಸಿಂ ಲುದ್ರಿಗ್ ಬೊಂದೆಲ್, ಸೀಮಾ ಕಾಮತ್, ಜಗದೀಶ್ ಭಂಡಾರಿ, ಮಾರ್ಟಿನ್ ಆರ್. ಡಿಸೋಜಾ, ಸಿ. ಸಿಲ್ವಿಯಾ ಸುವಾರಿಸ್, ವನಿತಾ ನಾಯಕ್, ರೋಶನ್ ಕ್ರಾಸ್ತಾ, ಜೊಯ್ಸ್ ಪಿಂಟೊ ಮತ್ತು ಫೆಲ್ಸಿ ಲೋಬೊ ಇವರು ತಮ್ಮ ಕವಿತೆಗಳನ್ನು ವಾಚಿಸುವರು. ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.