Subscribe to Updates
Get the latest creative news from FooBar about art, design and business.
Author: roovari
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ಮಕ್ಕಳ ಕಲಾ ಲೋಕ ಇದರ 2026-27ನೇ ಸಾಲಿನ ಅಧ್ಯಕ್ಷರಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕ ರಮೇಶ ಎಂ. ಬಾಯಾರು ಪುನರಾಯ್ಕೆಯಾಗಿದ್ದಾರೆ. ವಿಟ್ಲ ಮಾದರಿ ಶಾಲೆಯಲ್ಲಿ ನಡೆದ ಮಕ್ಕಳ ಕಲಾ ಲೋಕದ ಮಹಾಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು. ಬಾಯಾರು ಅವರು ಲೇಖಕರು, ಭಾಷಣಕಾರರು, ಸಂಪನ್ಮೂಲ ವ್ಯಕ್ತಿಯೂ ಆಗಿದ್ದಾರಲ್ಲದೆ ಅಡ್ಯನಡ್ಕ ಜನತಾ ವಿದ್ಯಾ ಸಂಸ್ಥೆಗಳ ಗೌರವ ಆಡಳಿತಾಧಿಕಾರಿಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಎಂ.ಕೆ. ನಾಯ್ಕ್ ಅಡ್ಯನಡ್ಕ, ಕಾರ್ಯದರ್ಶಿ ಪುಷ್ಪಾ ಎಚ್. ಖಜಾಂಚಿಯಾಗಿ ಶ್ರೀಪತಿ ನಾಯಕ್ ನಾಟೆಕಲ್ಲು ಜೊತೆ ಕಾರ್ಯದರ್ಶಿಯಾಗಿ ವಿಲ್ಮಾ ಸಿಕ್ವೇರಾ, ಸಂಘಟನಾ ಕಾರ್ಯದರ್ಶಿಯಾಗಿ ಭವಾನಿ ಮಾಣಿ, ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ಶಿವರಾಮ ಭಟ್ ನೆಡ್ಲೆ, ವಿಶ್ವನಾಥ ಗೌಡ ಕುಳಾಲು, ಸಂಜೀವ ಮಿತ್ತಳಿಕೆ, ಇಸ್ಮಾಯಿಲ್ ಅಳಕೆಮಜಲು ವಿಟ್ಲ, ರಾಜೇಶ ವಿಟ್ಲ ಗೌರವ ಸಲಹೆಗಾರರಾಗಿ ಮಕ್ಕಳ ಕಲಾ ಲೋಕದ ಮಾಜಿ ಅಧ್ಯಕ್ಷರುಗಳಾದ ಅನಂತ ಕೃಷ್ಣ ಹೆಬ್ಬಾರ್, ಭಾಸ್ಕರ ಅದ್ವಳ ಮತ್ತು ಮಹಾಬಲ…
ರಂಗಕಲೆಯ ಜೀವಂತಿಕೆಯನ್ನು ಕಾಪಾಡುವ ಹೊಣೆ ವಿಶಾಲ ಸಮಾಜದ ಮೇಲಿದೆ. ಇಂದಿನ ಯುವ ಜನತೆಯಲ್ಲಿ ಅಧ್ಯಯನದ ಆಸಕ್ತಿ ಇಲ್ಲ, ಕೂತು ಸಂವಾದ ನಡೆಸುವ ತಾಳ್ಮೆ ಇಲ್ಲ, ಸೃಜನಶೀಲ ಅಭಿವ್ಯಕ್ತಿಯ ಹಂಬಲವಿಲ್ಲ, ಮೊಬೈಲ್ ಇತ್ಯಾದಿ ಡಿಜಿಟಲ್ ಸಾಧನಗಳಿಂದಾಚೆಗಿನ ಜಗತ್ತಿನ ಕುತೂಹಲ ಇಲ್ಲ ಇತ್ಯಾದಿ,,,,ಇತ್ಯಾದಿ. ಸಾಮಾನ್ಯವಾಗಿ ಹಿರಿಯ ತಲೆಮಾರಿನ ಹರಟೆಗಳ ನಡುವೆ ಕೇಳಿಬರುವ ಮಾತುಗಳಿವು. ಇದನ್ನು ಅಲ್ಲಗಳೆಯುವುದೂ ಸಾಧ್ಯವಾಗದ ಹಾಗೆ ಯುವ ಸಮೂಹ ಸ್ಮಾರ್ಟ್ ಫೋನ್ ಮತ್ತು ಮೋಜಿನ ಬದುಕಿಗೆ ಅಂಟಿಕೊಂಡಿದೆ. ಈ ಅನಿಸಿಕೆಗಳು ಸಾರ್ವತ್ರಿಕವಾಗಿರುವುದರಿಂದಲೇ ಪತ್ರಿಕಾ ಮಾಧ್ಯಮಗಳಲ್ಲೂ ಸಹ ಉದ್ದುದ್ದ ಲೇಖನಗಳನ್ನು ಯುವ ಜನತೆ ಓದುವುದಿಲ್ಲ ಎಂಬ ಅಭಿಪ್ರಾಯ ಸೃಷ್ಟಿಯಾಗಿದೆ. ಆದರೆ ಈ ಅರ್ಧಸತ್ಯಗಳಿಂದಾಚೆ, ಯುವ ಸಮಾಜದ ಒಳಹೊಕ್ಕು ನೋಡಿದಾಗ ಅಚ್ಚರಿಗೊಳಿಸುವ ವಾಸ್ತವಗಳು ಕಾಣುತ್ತವೆ. ಹೊರ ಸಮಾಜಕ್ಕೆ ಅಸಾಧ್ಯ ಎನಿಸುವುದನ್ನು ಸಾಕ್ಷೀಕರಿಸುವ ಒಂದು ಸೇತುವೆ ಯಾವುದಾದರೂ ಇದ್ದರೆ ಅದು ರಂಗಕಲೆ ಮತ್ತು ಅದರ ಭದ್ರಕೋಟೆಯಾದ ರಂಗಭೂಮಿ. ಬಾಹ್ಯ ಜಗತ್ತಿನ ಅನಿಷ್ಠ, ಅಪಸವ್ಯಗಳ ಸೋಂಕಿಲ್ಲದೆ ತನ್ನ ಸ್ವಾಯತ್ತತೆ ಮತ್ತು ಸೃಜನಶೀಲತೆಯನ್ನು ಉಳಿಸಿಕೊಂಡು ಬಂದಿರುವ ಕನ್ನಡ ರಂಗಭೂಮಿಗೆ…
ಮಂಗಳೂರು : ಬಿ.ಎಂ. ರೋಹಿಣಿ ಅಭಿನಂದನಾ ಸಮಿತಿ, ಮಂಗಳ ಗಂಗೋತ್ರಿ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಿವೃತ್ತ ಶಿಕ್ಷಕಿ ಹಿರಿಯ ಲೇಖಕಿ ಬಿ.ಎಂ. ರೋಹಿಣಿ ಇವರಿಗೆ ಅಭಿನಂದನೆ ಮತ್ತು ‘ಆರೋಹಿಣಿ’ ಗ್ರಂಥ ಗೌರವ ಸಮಾರಂಭವು ದಿನಾಂಕ 21 ಫೆಬ್ರವರಿ 2026ರಂದು ಹಂಪನಕಟ್ಟೆಯ ಮಂಗಳೂರು ವಿ.ವಿ. ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆಯಿತು. ಈ ವೇಳೆ ಬಿ.ಎಂ. ರೋಹಿಣಿಯವರನ್ನು ಅಭಿನಂದಿಸಿ, ‘ಆರೋಹಿಣಿ ಗ್ರಂಥ’ ಸಮರ್ಪಣೆ ಮಾಡಲಾಯಿತು. ಗ್ರಂಥಾವಲೋಕನ ಮಾಡಿದ ಹಿರಿಯ ಲೇಖಕಿ, ಸಂಘಟಕಿ ಡಾ. ಎಚ್.ಎಸ್. ಅನುಪಮಾ, “ಇರುವೆ ಗೋಡೆಯ ಮೇಲೆ ಒಬ್ಬಂಟಿಯಾಗಿದ್ದರೂ ಮುಂದೆ ತನ್ನವರ ಜತೆ ಸೇರುವೆನೆಂದು ನಿರ್ಭೀತಿಯಿಂದ ನಿರಂತರ ಚಲನೆಯನ್ನು ಮುಂದುವರಿಸುತ್ತದೆ. ಅಂತಹ ಇರುವೆಯ ರೀತಿಯ ಬದುಕು-ಸಾಧನೆ ಬಿ.ಎಂ. ರೋಹಿಣಿ ಅವರದ್ದು. ಕೌಟುಂಬಿಕ ಮಹಿಳೆ ಸಾಮಾಜಿಕ ಮಹಿಳೆಯಾಗಿ ಮಹಾ ಜಿಗಿತವನ್ನು ಕಂಡುಕೊಂಡ ಬದುಕು ರೋಹಿಣಿಯವರದ್ದು. ಬಾಲ್ಯದಿಂದಲೇ ಹೆತ್ತವರ ಪಾಲಿನ ‘ಒಳ್ಳೆಯ ಹುಡುಗಿ’ ಗುಡ್ ಗರ್ಲ್ ಎಂಬ ಹಣೆಪಟ್ಟಿಯಿಂದಾಚೆಗೆ ಸರಿದು, ನಿರ್ಭೀತಿ, ನಿರಂತರ ಚಲನೆಯ ಬದುಕನ್ನು…
ಮೈಸೂರು : ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜು, ಜಯಲಕ್ಷ್ಮಿ ಪುರಂ (ಸ್ವಾಯತ್ತ) ಸಾಂಸ್ಕೃತಿಕ ರಂಗ ತಂಡ (ಸಾರಂತ) ಅಭಿನಯಿಸುವ ‘ಊರ ಸುಟ್ಟರೂ ಹನುಮಪ್ಪ ಹೊರಗ’ ನಾಟಕ ಪ್ರದರ್ಶನವನ್ನು ದಿನಾಂಕ 23 ಫೆಬ್ರವರಿ 2026ರಂದು ಸಂಜೆ 6-30 ಗಂಟೆಗೆ ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕದ ರಚನೆ ಹನುಮಂತ ಹಾಲಿಗೇರಿ, ಸಂಗೀತ ಚಿಂತನ್ ವಿಕಾಸ್ ಜೆ. ಮತ್ತು ಜನಾರ್ದನ್ ಹೆಚ್. ಇವರದ್ದು, ಬೆಳಕು ಮಧು ಮಳವಳ್ಳಿ ಹಾಗೂ ಕೆ.ಆರ್. ಸುಮತಿ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.
ಧಾರವಾಡ : ಭಾರತದ ಮಹತ್ವದ ಸಾಹಿತಿಗಳಲ್ಲೊಬ್ಬರಾದ ದಿ. ಮಹಾಶ್ವೇತಾದೇವಿ (1926-2016) ಬಂಗಾಳಿ ಲೇಖಕಿಯಾದರೂ ಸಹ ತಮ್ಮ ಬರವಣಿಗೆ ಮತ್ತು ಹೋರಾಟದ ಮೂಲಕ ಅಖಿಲ ಭಾರತೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಸಾಹಿತ್ಯ ಗಂಗಾ ಸಂಸ್ಥೆಯು ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಅವರ ಸಾಹಿತ್ಯದ ಕುರಿತು ಒಂದು ವಿಚಾರಗೋಷ್ಠಿ ಮತ್ತು ಅಪ್ರಕಟಿತ ಕಥಾಸಂಕಲನವೊಂದಕ್ಕೆ ಪ್ರಶಸ್ತಿಯನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಪ್ರಶಸ್ತಿ ಒಂದು ಸಾಂಕೇತಿಕ ಮೊತ್ತದ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಒಳಗೊಂಡಿರುತ್ತದೆ. ಪ್ರಶಸ್ತಿ ಆಯ್ಕೆಯ ನಿಯಮಗಳು : * ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. * ಲಿಂಗ, ವಯೋಮಿತಿ, ಜಾತಿ, ಪ್ರದೇಶ, ಸ್ವಹಿತಾಸಕ್ತಿ ಪೋಷಣೆ ಸೇರಿದಂತೆ ಯಾವುದೇ ಕೃತಕ ಮಾನದಂಡಗಳಿರುವುದಿಲ್ಲ. * ಕಥೆಗಳ ಗುಣಮಟ್ಟವೊಂದೇ ಆಯ್ಕೆಯ ಏಕೈಕ ಮಾನದಂಡ. * ಸ್ಪರ್ಧಿಗಳು 8ರಿಂದ 12 ಸಣ್ಣ ಕಥೆಗಳಿರುವ ಅಪ್ರಕಟಿತ ಕಥಾಸಂಕಲನದ ಎರಡು ಪ್ರತಿಗಳನ್ನು ಕಳುಹಿಸಬೇಕು. * ಸ್ವತಂತ್ರ ಕಥೆಗಳನ್ನು ಮಾತ್ರ ಕಳುಹಿಸಬೇಕು. * ಅನುವಾದ, ಅನುಸೃಷ್ಟಿ, ರೂಪಾಂತರ, ಪ್ರೇರಣೆ…
ಕಾಸರಗೋಡು : ತುಲುವೆರೆ ಜಾಲ್ ಕಣ್ವತೀರ್ಥ, ಜೋಕ್ಲೆನ ಸಾಂಸ್ಕೃತಿಕ ಬೊಕ ಸಾಹಿತ್ಯ ಸೇವಾ ಕೂಟ ಬೊಕ್ಕ ಶ್ರೀ ಮಾತಾ ಕಲಾ ಮಂದಿರ ವೈಶಾಲಿ ಕುಂಜತ್ತೂರು ಮುಕ್ಲೆನ ಒತ್ತು ಸೇರಿಗೆಡ್ ತಾರೀಖ್ 22 ಫೆಬ್ರವರಿ 2026 ತಾನಿ ಶ್ರೀ ಮಾತಾ ಕಲಾ ಮಂದಿರಡ್ 16 ವರ್ಷದ ಉಲಯಿದ ಜೋಕ್ಲೆನ ಬಹುಭಾಷಾ ಕವಿಗೋಷ್ಠಿ ಬೊಕ ಕಬಿತೆ ಪುಟ್ಟುನ ಗುಟ್ಟೆಂಚಾ ಕಜ್ಜಕೊಟ್ಯ ನಡತ್ಂಡ್. ಈ ಲೇಸ್ ನ್ ರಡ್ಡ್ ವರ್ಷದ ಪುಟ್ಟು ಪರ್ಬ ಆಚರಿತೊಂದುಪ್ಪುನ ಕಣ್ವತೀರ್ಥ ದೀರಜ್ ಬೊಕ ನಿಶಿತಾ ಮುಕ್ಲೆನ ಬಾಲೆ ಮೈನವಿ ತುಡರ್ ಅರ್ಲಾದ್ ಉದಿಪನ ಮಂತೆರ್. ಲೇಸ್ ದ ಗುರ್ಕರ್ಮೆಡ್ ಜಿಲ್ಲಾ ಮಟ್ಟೊಡು ಗೊಬ್ಬು ಬೊಕ ಕಲೆಟ್ ಚಾತುರ್ಪು ತೋಜಾಯಿನ ಕುಮಾರಿ ರಶ್ಮಿತಾ ಕುಲಾಲ್ ತೂಮಿನಾಡ್ ವಹಿಸೊಂಡೆರ್. ಪೆರಿಯ ಸಾಹಿತಿ, ಪತ್ರಕರ್ತೆರಾಯಿನ ಶ್ರೀಯುತ ರಾಧಾಕೃಷ್ಣ ಉಳಿಯತಡ್ಕ ಕಬಿತೆ ಪುಟ್ಟುನ ಗುಟ್ಟೆಂಚಾ ಕಜ್ಜಕೊಟ್ಯ ನಡಪಾದ್, ಜೋಕುಲೆ ಮನಸ್ ಡ್ ಕಬಿತೆ ಪುಟ್ಟುನ ಸಾದಿ, ವಿಷಯ, ಆ ವಿಷಯೊಡು ತನನ್ ತಾನ್ ಒಡ್ಡೊಂದು ಪದ…
ಮಂಜೇಶ್ವರ : ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಸಹಯೋಗದೊಂದಿಗೆ ‘ಕಾಸರಗೋಡಿನಲ್ಲಿ ಕನ್ನಡ ಅಸ್ಮಿತೆ ಯುವಶಕ್ತಿ ಮತ್ತು ಭವಿಷ್ಯ’ ವಿಚಾರ ಸಂಕಿರಣವನ್ನು ದಿನಾಂಕ 26 ಫೆಬ್ರವರಿ 2026ರಂದು ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಪೂರ್ವಾಹ್ನ 10-00 ಗಂಟೆಗೆ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷರಾದ ಡಾ. ರಮಾನಂದ ಬನಾರಿ ಇವರ ಅಧ್ಯಕ್ಷತೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ‘ಕನ್ನಡಿಯಲ್ಲಿ ಕನ್ನಡಿಗ ಸಂಚಿಕೆ -6’ ಕೃತಿಯನ್ನು ನಿವೃತ್ತ ಪ್ರಾಧ್ಯಾಪಕರಾದ ಡಾ. ಪ್ರಮೀಳಾ ಮಾಧವ್ ಇವರು ಬಿಡುಗಡೆ ಮಾಡಲಿದ್ದಾರೆ. 11-30 ಗಂಟೆಗೆ ‘ಕಾಸರಗೋಡಿನಲ್ಲಿ ಕನ್ನಡದ ಇತಿಹಾಸ ಮತ್ತು ಸವಾಲುಗಳು’ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ, ಮಧ್ಯಾಹ್ನ 1-30 ಗಂಟೆಗೆ ಕನ್ನಡ ಭಾವಲಹರಿ, 2-00 ಗಂಟೆಗೆ ‘ಸಾಂಸ್ಕೃತಿಕ ವಲಯ ಕನ್ನಡದ ಅಸ್ಮಿತೆ’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂಜೆ…
ಮಂತ್ರಾಲಯ : ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ರಾಘವೇಂದ್ರ ಗುರು ವೈಭವೋತ್ಸವದ ಪ್ರಯುಕ್ತ ‘ಯಕ್ಷಗಾನ ತಾಳಮದ್ದಳೆ’ಯನ್ನು ದಿನಾಂಕ 24 ಫೆಬ್ರವರಿ 2026ರಂದು ಸಂಜೆ 6-00 ಗಂಟೆಗೆ ಯೋಗೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಮಂಗಳೂರು ಕದ್ರಿ ಇಲ್ಲಿಯ ಯಕ್ಷ ಮಂಜುಳಾ ಮಹಿಳಾ ಬಳಗದವರಿಂದ ಪ್ರಸ್ತುತಗೊಳ್ಳುವ ‘ಗದಾ ಯುದ್ಧ’ ಪ್ರಸಂಗದ ಯಕ್ಷಗಾನ ತಾಳಮದ್ದಳೆಯ ನಿರ್ದೇಶನ ರವಿ ಅಲೆವೂರಾಯ ವರ್ಕಾಡಿ, ಭಾಗವತರು ಮಹೇಶ್ ಕನ್ಯಾಡಿ, ಚೆಂಡೆಯಲ್ಲಿ ಶಿತಿಕಂಠ ಭಟ್ ಮತ್ತು ಮದ್ದಲೆಯಲ್ಲಿ ನವೀನ್ ಚಂದ್ರ ಸಹಕರಿಸಲಿದ್ದಾರೆ. ಅರ್ಥಧಾರಿಗಳಾಗಿ ಪೂರ್ಣಿಮಾ ಪೇಜಾವರ, ಪೂರ್ಣಿಮಾ ಪ್ರಶಾಂತ್ ಶಾಸ್ತ್ರಿ, ಅರುಣಾ ಸೋಮಶೇಖರ್, ರೂಪಾ ರಾಧಾಕೃಷ್ಣ, ಶೈಲಜಾ ಶ್ರೀಕಾಂತ್ ರಾವ್, ಅನುಪಮಾ ಪ್ರಭಾಕರ ಅಡಿಗ ಮತ್ತು ವಿಜಯಲಕ್ಷ್ಮಿ ನಿಡ್ವಣ್ಣಾಯ ಭಾಗವಹಿಸಲಿದ್ದಾರೆ.
ಕೋಟ : ಕೋಟ ‘ಅಹರ್ನಿಶ’ದಲ್ಲಿ ದಿನಾಂಕ 19 ಫೆಬ್ರವರಿ 2026ರಂದು ‘ಯಕ್ಷ ಗಾನ ವೈಭವ’ ಏರ್ಪಡಿಸಿದ ಪ್ರಸಿದ್ಧ ಪ್ರಸಂಗಕರ್ತ, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು “ಯಕ್ಷಗಾನಾಭಿಮಾನಿಯಾಗಿ ನಿರಂತರ ಕಲೆಯನ್ನು ಆಸ್ವಾದಿಸುತ್ತಾ ಬಂದು ಮಕ್ಕಳಲ್ಲಿ ಪ್ರತಿಭೆಯನ್ನು ಹುರಿದುಂಬಿಸಿ, ರಂಗದಲ್ಲಿನ ಮಕ್ಕಳ ಬೆಳವಣಿಗೆಯನ್ನು ಕಂಡು ಸಂತೋಷ ಪಟ್ಟವರು ಹರೀಶ್ ಉರಾಳರು. ಕಲೆಯಿಂದ ಬೆಳೆಸಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವಲ್ಲಿ ಯಶಸ್ಸನ್ನು ಕಂಡವರು. ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕವಾಗಿ ಬೆಳಕು ಚೆಲ್ಲುವಲ್ಲಿ ಮನೆ ಮನಗಳನ್ನು ಬೆಳಗಿದ್ದೀರಿ” ಎಂದು ಶುಭ ಹಾರೈಸಿ ಪ್ರಸ್ತಾಪಿಸಿದರು. ಪ್ರಸಿದ್ಧ ಹಿರಿಯ ಭಾಗವತ ರಾಘವೇಂದ್ರ ಮೈಯ್ಯ ಹಾಲಾಡಿ, ಕೋಟ ಶಿವಾನಂದ, ರಾಘವೇಂದ್ರ ಹೆಗಡೆ ಯಲ್ಲಾಪುರ, ಪಂಚಮಿ ವೈದ್ಯ, ಅನೂಪ ಉರಾಳ, ಅನುಷ ಉರಾಳ, ಹರೀಶ್ ಉರಾಳ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಪ್ರದಾನ ಮಾಡುತ್ತಿರುವ ಶಂಕರ್ ರೂಫಿಂಗ್ ಸಿಸ್ಟಮ್ ದತ್ತಿ ನಿಧಿ ಪ್ರಯೋಜಿತ ‘ಮಲಬಾರ್ ವಿಶ್ವರಂಗ ಪುರಸ್ಕಾರ 2026’ಕ್ಕೆ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳು ಆಯ್ಕೆಯಾಗಿದ್ದಾರೆ. ಗೀತಾ ಸುರತ್ಕಲ್ (ರಂಗ ನಟಿ), ಶ್ರೀಪತಿ ಮಂಜನಬೈಲು ಬೆಂಗಳೂರು (ರಂಗ ನಟ), ಎಸ್. ನಿತ್ಯಾನಂದ ಪೈ, ಕಾರ್ಕಳ (ರಂಗ ಸಂಘಟನೆ), ಅವಿನಾಶ್ ಕಾಮತ್ ಮುಂಬೈ (ರಂಗ ನಟ), ಬಿ.ಎಸ್. ರಾಮ್ ಶೆಟ್ಟಿ ಹಾರಾಡಿ (ರಂಗ ನಿರ್ದೇಶನ) ಇವರಿಗೆ ದಿನಾಂಕ 26 ಮಾರ್ಚ್ 2026ರಂದು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನಡೆಯುವ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ನಗದು, ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ‘ಮಲಬಾರ್ ವಿಶ್ವರಂಗ ಪುರಸ್ಕಾರ-2026’ ಪ್ರದಾನ ಮಾಡಲಾಗುವುದು.