Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಜಾತ್ರಾ ಮಹೋತ್ಸವದ ರಥೋತ್ಸವದ ದಿನದಂದು ದಿನಾಂಕ 21 ಜನವರಿ 2026ರಂದು ಹರಿದಾಸ, ಭಜನಾ ಕೀರ್ತನಕಾರ ಶರತ್ ಶೆಟ್ಟಿ ಪಡುಪಳ್ಳಿ ಇವರ ತುಳು ಬರಹಗಳ ಗುಚ್ಚ ‘ಕಡ್ಲೆ ಬಜಿಲ್’ ಎಂಬ ಪುಸ್ತಕ ಕದ್ರಿ ದೇವಳದ ರಾಜಾಂಗಣದಲ್ಲಿ ಬಿಡುಗಡೆಗೊಂಡಿತು. ಪುಸ್ತಕಕ್ಕೆ ಮುನ್ನುಡಿ ಬರೆದ ಹಿರಿಯ ಲೇಖಕಿ ರೂಪಕಲಾ ಆಳ್ವ ಮಾತನಾಡಿ “ಕಡ್ಲೆ ಬಜಿಲ್ ಪುಸ್ತಕ ತುಳುವರ ದಿನನಿತ್ಯದ ಕಷ್ಟ ಸುಖ, ಹಬ್ಬ ಹರಿದಿನ, ಊರಿನ ಜಾತ್ರೆ ಸಡಗರ ಮತ್ತು ಹಿಂದೆ ಕಳೆದ ಬಾಲ್ಯದ ಬಗೆಗಿನ ನೆನಪು ಹುಟ್ಟಿಸುವ ಉತ್ತಮ ವಿಚಾರಗಳನ್ನು ಹೊಂದಿದ ಒಂದು ಸಮಗ್ರ ಲೇಖನ ಮಾಲೆ. ಆಸಕ್ತರು ಖರೀದಿಸಿ ಓದಿದರೆ ಹಿಂದಿನ ‘ಕಡ್ಲೆಬಜಿಲ್’ ಸವಿದ ರುಚಿ ನೀಡುವುದು ಗ್ಯಾರಂಟಿ” ಎಂದರು. ಮಲ್ಲಿಕಾ ಕಲಾವೃಂದ ಕಾರ್ಯಾಧ್ಯಕ್ಷ ಸುಧಾಕರ ರಾವ್ ಪೇಜಾವರ ಮಾತನಾಡಿ, “ಈ ಪುಸ್ತಕ ಲೋಕನೀತಿಯ ವಿಚಾರಗಳ ಒಂದು ಗುಚ್ಚ ಎಂದು ಶುಭ ಹಾರೈಸಿದರು. ತುಳು ಸಾಹಿತಿ ಕುಶಾಲಾಕ್ಷಿ ವಿ. ಕುಲಾಲ್ ಕಣ್ವತೀರ್ಥ ಮತ್ತಿತರರು ಉಪಸ್ಥಿತರಿದ್ದರು.…
ಮಂಗಳೂರು : ಕರಾವಳಿ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ಚಿತ್ರಕಲಾವಿದರಾದ ಉದಯ ಕೃಷ್ಣ ಜಿ. ಮತ್ತು ಅವರ ಪುತ್ರಿ ನಿಯತಿ ಯು. ಭಟ್ ಇವರ ಕಲಾ ಪ್ರದರ್ಶನ ‘ದ ದಾಪರ್ ಎಕ್ಸ್ಪೋ’ ದಿನಾಂಕ 17 ಜನವರಿ 2025ರಂದು ಮಂಗಳೂರಿನ ಬಲ್ಲಾಳ್ಬಾಗ್ನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿತು. ತಂದೆ, ಮಗಳ ಕುಂಚದಿಂದ ಮೂಡಿ ಬಂದ 80ಕ್ಕೂ ಅಧಿಕ ಚಿತ್ರಗಳು ಪ್ರದರ್ಶನದಲ್ಲಿವೆ. ಸಾಮಾನ್ಯ ಪೈಂಟಿಂಗ್, ಡ್ರಾಯಿಂಗ್ ಗಳ ಜತೆಗೆ ಹೆಚ್ಚಿನ ಕೈ ಚಳಕದ ಅಗತ್ಯವಿರುವ ಮಂಡಲ ಆರ್ಟ್, ಅತೀ ಕಷ್ಟದ ಮತ್ತು ಬಹಳಷ್ಟು ಏಕಾಗ್ರತೆಯ ಅಗತ್ಯವಿರುವ ಸ್ಪ್ರಿಂಗ್ ಆರ್ಟ್ ಚಿತ್ರಗಳು ಪ್ರದರ್ಶನದಲ್ಲಿ ಆಕರ್ಷಿಸುತ್ತಿದ್ದು, ಛಾಯಾಚಿತ್ರಗಳಲ್ಲಿ ಅಂಡರ್ ವಾಟರ್ ಫೋಟೋಗ್ರಫಿ, ಹಾರುತ್ತಿರುವ ಹಕ್ಕಿಗಳ ಫೋಟೋಗಳು, ವಿಮಾನಗಳ ಕಸರತ್ತಿನ ಚಿತ್ರಗಳು ನೋಡುಗರನ್ನು ಸೆಳೆಯುತ್ತಿತ್ತು. ಕಲಾಪ್ರದರ್ಶನವನ್ನು ಉದ್ಘಾಟಿಸಿದ ವಿಶ್ರಾಂತ ಪ್ರಾಂಶುವಾಲ ಪ್ರೊ. ಜಿ.ಎನ್. ಭಟ್ ಮಾತನಾಡಿ, “ಚಿತ್ರಕಲಾವಿದರಾಗಿ ತಂದೆ, ಮಗಳ ಜೋಡಿ ಈಗಾಗಲೇ ಯಶಸ್ವಿಯಾಗಿದ್ದು ಭವಿಷ್ಯದಲ್ಲೂ ಇದು ಮುಂದುವರಿಯಲಿ” ಎಂದರು. ಖ್ಯಾತ ಜಾದೂ ಕಲಾವಿದ ಪ್ರೊ. ಶಂಕರ್ ಮಾತನಾಡಿ, “ಮಕ್ಕಳಲ್ಲಿರುವ…
ಬಂಟ್ವಾಳ : ಕಥಾಬಿಂದು ಪ್ರಕಾಶನ ಮಂಗಳೂರು, ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ನೇತ್ರಾವತಿ ಸಂಗಮ ಜೋಡುಮಾರ್ಗ ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಸಮಿತಿ ಅಶ್ರಯದಲ್ಲಿ ‘ಕಥಾಬಿಂದು ಸಾಹಿತ್ಯ ಸಂಭ್ರಮ -2026’ ದಿನಾಂಕ 04 ಜನವರಿ 2025ರಂದು ಪಾಣೆಮಂಗಳೂರಿನ ಶ್ರೀ ಭಯಂಕೇಶ್ವರ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು “ಸಾಹಿತ್ಯ ಜನಮನವನ್ನು ತಲುಪಬೇಕು. ಪುಸ್ತಕ ಓದುವ ಪ್ರವೃತ್ತಿ ಬೆಳೆಯಬೇಕು. ಪುಸ್ತಕಗಳನ್ನು ಪ್ರಕಟಣೆಗೆ ಸಹಕಾರ ನೀಡುವ ಮೂಲಕ ಬರೆಯುವವರಿಗೆ ಪ್ರೋತ್ಸಾಹ ನೀಡಬೇಕು” ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಸೀನಿಯರ್ ಛೇಂಬರ್ ಅಧ್ಯಕ್ಷ ತೇವು ತಾರನಾಥ ಕೊಟ್ಟಾರಿ ಭಾಗವಹಿಸಿ “ಸಾಹಿತ್ಯದಿಂದ ಸಂಘಟನೆ ಸಾಧ್ಯ. ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಸಾಹಿತ್ಯ ಹೆಚ್ಚು ಹೆಚ್ಚು ಪ್ರಕಟವಾಗಬೇಕು” ಎಂದರು. ಹಿರಿಯ ಸಾಹಿತಿ ಡಾ. ಕೊಳ್ಚಪ್ಪೆ ಗೋವಿಂದ ಭಟ್, ಕ.ಚು.ಸಾ.ಪ. ಬಂಟ್ವಾಳ ತಾಲೂಕು ಅಧ್ಯಕ್ಷ ರವೀಂದ್ರ ಕುಕ್ಕಾಜೆ, ಕವಯಿತ್ರಿ ಡಾ. ಶಾಂತ ಪುತ್ತೂರು ಸಮ್ಮೇಳನಕ್ಕೆ ಶುಭ ಹಾರೈಸಿ…
ಬೆಂಗಳೂರು : 2026ನೇ ಸಾಲಿನ ಕೆ.ಪಿ. ಪೂರ್ಣಚಂದ್ರ ತೇಜಸ್ವಿ (ಪೂಚಂತೆ) ಇವರ ಹೆಸರಿನಲ್ಲಿ ನೀಡಲಾಗುವ ‘ಪೂಚಂತೆ ಸಾಹಿತ್ಯ ಪುರಸ್ಕಾರ’ಕ್ಕೆ ಲೇಖಕರಿಂದ ಕನ್ನಡದ ಕೃತಿಗಳನ್ನು ಆಹ್ವಾನಿಸಲಾಗಿದೆ. ಪರಿಗಣನೆಯ ಅವಧಿ : 2025ರಿಂದ 2026ರ ಜನವರಿವರೆಗೆ ಪ್ರಕಟವಾದ ಕೃತಿಗಳು ಪರಿಗಣನೆಯಲ್ಲಿರುವ ಕೃತಿ ಪ್ರಕಾರಗಳು : 1. ಕವನ ಸಂಕಲನ 2. ಕಾದಂಬರಿ 3. ನಾಟಕ 4. ಲೇಖನ ಸಂಗ್ರಹ 5. ಕಥಾ ಸಂಕಲನ 6. ಮಕ್ಕಳ ಸಾಹಿತ್ಯ ಪ್ರತಿ ಶೀರ್ಷಿಕೆಯ ಮೂರು ಪ್ರತಿಗಳನ್ನು ಏಪ್ರಿಲ್ ಅಂತ್ಯದೊಳಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಕಳುಹಿಸುವ ವಿಳಾಸ : ಲಿಖಿತ್ ಹೊನ್ನಾಪುರ, ಸುಗ್ಗನಹಳ್ಳಿ ಅಂಚೆ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲೂಕು, ಬೆಂಗಳೂರು ದಕ್ಷಿಣ ಜಿಲ್ಲೆ – 561101. ಸಂಪರ್ಕ ಸಂಖ್ಯೆ : 9353062539 ಲಿಖಿತ್ ಹೊನ್ನಾಪುರ, ಯುವ ಕವಿ, ಸ್ಥಾಪಕರು – ಪೂಚಂತೆ ಸಾಹಿತ್ಯ ಪುರಸ್ಕಾರ ಉಪಾಧ್ಯಕ್ಷರು – ಯಶೋಮಾರ್ಗ ಸೇವಾ ಫೌಂಡೇಶನ್ (ರಿ.), ಕರ್ನಾಟಕ 2025ನೇ ಸಾಲಿನ ‘ಪೂಚಂತೆ ಸಾಹಿತ್ಯ ಪುರಸ್ಕಾರ’ ಪಡೆದ 5 ಕೃತಿಗಳು -…
ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ, ಯಕ್ಷಗುರುಕುಲ ಶಿಕ್ಷಣ ಟ್ರಸ್ಟ್ (ರಿ.), ಇದರ 53ನೇ ವಾರ್ಷಿಕೋತ್ಸವ ಸಮಾರಂಭವನ್ನು ಶಿವಪ್ರಭಾ ಶ್ರೀ ವಾದಿರಾಜವನಂ ಹಯಗ್ರೀವ ನಗರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ 25 ಜನವರಿ 2026ರಂದು ಮಧ್ಯಾಹ್ನ 3-00 ಗಂಟೆಗೆ ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಇವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಹೆ ಸಹಕುಲಪತಿ ಡಾ. ನಾರಾಯಣ ಸಭಾಹಿತ್ ಮತ್ತು ಟೆಲಿಕಮ್ಯುನಿಕೇಶನ್ಸ್ ನಿವೃತ್ತ ಇಂಜಿನಿಯರ್ ವೈ ಸೀತಾರಾಮ ಶೆಟ್ಟಿ ಇವರು ಉಪಸ್ಥಿತರಿರುವರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಪಳ್ಳಿ ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ಇದೇ ಸಂದರ್ಭದಲ್ಲಿ ಯಕ್ಷಗಾನ ಪ್ರಸಿದ್ಧ ವೇಷಧಾರಿ ಶ್ರೀ ಚಂದ್ರಗೌಡ ಗೋಳಿಕೆರೆ ಇವರಿಗೆ ‘ಯಕ್ಷರಂಗದ ಭೀಷ್ಮ ಎಂ.ಎಂ. ಹೆಗ್ಡೆ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಯಕ್ಷಗಾನ ಕಲಿಕಾ…
ಹಾಸನ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಸನ ಹಾಗೂ ನಾಟ್ಯಮಯೂರಿ ನೃತ್ಯ ಟ್ರಸ್ಟ್ ರಿಜಿಸ್ಟ್ರಾರ್ ವಿರಾಜಪೇಟೆ ಕೊಡಗು ಇವರ ಜಂಟಿ ಆಶ್ರಯದಲ್ಲಿ ದಿನಾಂಕ 18 ಜನವರಿ 2025ರಂದು ಯುವಶಕ್ತಿಯ ಸಕಾರ ಮೂರ್ತಿ ಸ್ವಾಮಿ ವಿವೇಕಾನಂದ ಜಯಂತಿ ಉತ್ಸವ ಪ್ರಯುಕ್ತ ನಡೆದ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿಯನ್ನು ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಇವರಿಗೆ ಹಾಸನದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು. ಚೆನ್ನಬಸವೇಶ್ವರ ಕ್ಷೇತ್ರದ ಮಲ್ಲಿಕಾರ್ಜುನ ಸ್ವಾಮೀಜಿ, ಅರಕಲಗೂಡು ವಿಧಾನಸಭಾ ಮಾಜಿ ಶಾಸಕ ಎ. ಮಂಜು, ಕನ್ನಡ ಸಾಹಿತ್ಯ ಪರಿಷತ್ ಹಾಸನ ಗೌರವ ಕಾರ್ಯದರ್ಶಿ ಬೊಮ್ಮೇ ಗೌಡ, ಉದ್ಯಮಿ ಸಮಾಜಸೇವಕ ಸಾಧಿಕ್ ಅಹಮದ್ ಉಡುಪಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್., ಕಾರ್ಕಳದ ಉದ್ಯಮಿ ಶಕೀರ್ ಅಹಮದ್, ಕರ್ನಾಟಕ ರಾಜ್ಯ…
ಬೆಂಗಳೂರು : ದೃಶ್ಯ (ರಿ.) ರಂಗತಂಡ ಪ್ರಯೋಗಿಸುತ್ತಿರುವ ದಾಕ್ಷಾಯಿಣಿ ಭಟ್ ಎ. ಇವರ ರಂಗರೂಪ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ರಕ್ತ ಧ್ವಜ’ ನಾಟಕ ಪ್ರದರ್ಶನವನ್ನು ದಿನಾಂಕ 22 ಜನವರಿ 2026ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವು ಬಸವರಾಜ್ ಕಟ್ಟೀಮನಿಯವರ ‘ರಕ್ತ ಧ್ವಜ’ ಕತೆ ಹಾಗೂ ಆರ್. ಬಸವರಾಜ್ ರವರ ‘ಈಸೂರಿನ ಚಿರಂಜೀವಿಗಳು’ ಕಾದಂಬರಿ ಆಧಾರಿತ ಕಥೆಯಾಗಿದೆ. ಇದೇ ಸಂದರ್ಭದಲ್ಲಿ ಪಿಚ್ಚಳ್ಳಿ ಶ್ರೀನಿವಾಸ್ ಇವರು ಸಿಜಿಕೆ ಕುರಿತು ಮಾತನಾಡಲಿದ್ದಾರೆ.
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರಿಂದ ಬನ್ನೂರಿನ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ದಿನಾಂಕ 20 ಜನವರಿ 2026ರಂದು ಮಾಸಿಕ ತಾಳಮದ್ದಲೆ ಕಾಸರಗೋಡು ಸುಬ್ರಾಯ ಪಂಡಿತ ವಿರಚಿತ ‘ರಾವಣ ವಧೆ’ ಎಂಬ ಆಖ್ಯಾನದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಕುಸುಮಾಕರ ಆಚಾರ್ಯ ಹಳೆನೇರಂಕಿ ಹಾಗೂ ಚೆಂಡೆ ಮದ್ದಲೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮುರಲೀಧರ ಕಲ್ಲೂರಾಯ, ಅನೀಶ ಕೃಷ್ಣ ಪುಣಚ ಭಾಗವಹಿಸಿದರು. ಶ್ರೀರಾಮನಾಗಿ ಗುಡ್ಡಪ್ಪ ಬಲ್ಯ, ರಾವಣನಾಗಿ ಗುಂಡ್ಯಡ್ಕ ಈಶ್ವರ ಭಟ್, ಮಂಡೋದರಿಯಾಗಿ ವಿ.ಕೆ. ಶರ್ಮ ಅಳಿಕೆ, ವಿಭೀಷಣನಾಗಿ ದುಗ್ಗಪ್ಪ ಯನ್, ಮಾತಲಿಯಾಗಿ ಬಡೆಕ್ಕಿಲ ಚಂದ್ರಶೇಖರ ಭಟ್ ಪಾತ್ರಪೋಷಣೆ ಮಾಡಿದರು. ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ದೇವಳದ ಸಂಚಾಲಕ ಮೖರ್ಕಳ ವೆಂಕಟಕೃಷ್ಣ ಭಟ್ ಪ್ರಾಯೋಜಿಸಿದರು. ದುಗ್ಗಪ್ಪ ಯನ್. ಸ್ವಾಗತಿಸಿ, ಭಾಸ್ಕರ ಬಾರ್ಯ ವಂದಿಸಿದರು.
ಕಾಸರಗೋಡು : ಕಾಸರಗೋಡಿನ ನುಳ್ಳಿಪ್ಪಾಡಿ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮ, ನಾಡು-ನುಡಿಹಬ್ಬ ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ ಸಮಾರಂಭವನ್ನು ದಿನಾಂಕ 18 ಜನವರಿ 2026ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಸ್ಥಾಪಕ ಸಂಚಾಲಕ ಡಾ. ಎಂ.ಜಿ.ಆರ್. ಅರಸ್ “ಗಡಿನಾಡಿನಲ್ಲಿ ಕನ್ನಡ ಕಟ್ಟುವ ಕಾಯಕದಲ್ಲಿ ನಿರತರಾದವರನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಇಲ್ಲಿನ ಕನ್ನಡಿಗರ ನೊಂದ ಮನಸ್ಸಿಗೆ ಸಾಂತ್ವನ ಲಭಿಸಲು ಸಾಧ್ಯ. ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಧಕ್ಕೆಯಾಗುವುದನ್ನು ಸಹಿಸಲಾಗದು. ಕನ್ನಡ ಭಾಷೆಯ ಮೇಲಿನ ದಬ್ಬಾಳಿಕೆ ವಿರುದ್ಧ ಹೋರಾಡುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಬೇಕು. ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಇವರನ್ನು ಈ ಬಾರಿಯ ಡಿ. ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆ ಮಾಡಲಾಗಿರುವುದು ಸಂತಸದ ವಿಚಾರ” ಎಂದು ಹೇಳಿದರು. ಕನ್ನಡ…
ಮಂಗಳೂರು : ದಶಮಾನದ ಹೊತ್ತಿನಲ್ಲಿರುವ ಕೋಡಿಕಲ್ ನ ವಿಪ್ರ ವೇದಿಕೆಯ ಅಷ್ಟಮ ಕಾರ್ಯಕ್ರಮವು ದಿನಾಂಕ 18 ಜನವರಿ 2026ರಂದು ನಡೆಯಿತು. ದೀಪ ಬೆಳಗಿಸಿ ಉದ್ವಾಟನಾ ಮಾತುಗಳನ್ನಾಡಿ ಸಂಘಟನೆಯ ಅಗತ್ಯವನ್ನು ವಿವರಿಸಿದ ಖ್ಯಾತ ಉದ್ಯಮಿ ಶಿಕ್ಷಣ ತಜ್ಞ ಶ್ರೀ ಅನೂಪ್ ರಾವ್ ಬಾಗ್ಲೋಡಿಯವರು “ಸಮಾಜ ಒಗ್ಗೂಡಿ ಬರುವ ಎಲ್ಲರನ್ನೂ ಸ್ವೀಕರಿಸುತ್ತದೆ. ಸಮಾಜವು ಅದನ್ನೇ ಬಯಸಿ ಸಜ್ಜನರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಲಿಷ್ಠವಾಗುತ್ತದೆ. ನಾವೂ ಸಮಾಜಕ್ಕಾಗಿ ದುಡಿಯುವ ಹುಮ್ಮಸ್ಸು ಬರುತ್ತದೆ. ಬಹಳವನ್ನು ಸಮಾಜದಿಂದ ಪಡೆದು ಒಂದಂಶವನ್ನು ಸಮಾಜದ ಏಳ್ಗೆಗಾಗಿ ನೀಡುವ ಸದ್ಭುದ್ದಿ ಎಲ್ಲರಲ್ಲೂ ಮೂಡಲಿ” ಎಂದು ಹೇಳಿದರು. ದುರ್ಗಾದಾಸ್ ಕಟೀಲ್, ವಿಶ್ವೇಶ್ವರ ಭಟ್, ವಿ.ಎಸ್. ಹೆಬ್ಬಾರ್, ಗೋಪಾಲಕೃಷ್ಣ ರಾವ್, ವಿದ್ಯಾ ಗಣೇಶ ರಾವ್, ಪ್ರಭಾವತಿ ಮಡಿ, ಉಷಾ ಎ. ಬಾಗ್ಲೋಡಿ, ಅನಂತ ಪದ್ಮನಾಭ ಉಪಾಧ್ಯಾಯ, ಉದ್ಯಮಿ ಗಿರೀಶ್ ರಾವ್ ಕೆ. ಹಾಗೂ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ರೂಪಕಲಾ ರಾಮಚಂದ್ರ ಭಟ್ ನಿರ್ವಹಿಸಿದರೆ, ಕಿಶೋರ್ ಕೃಷ್ಣ ವಂದಿಸಿದರು. ಬಳಿಕ ಕೆ. ಗೌರವ್ ರಾವ್ ನೇತೃತ್ವದಲ್ಲಿ…