Author: roovari

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ನಡೆಯುವ ಪಾಕ್ಷಿಕ ತಾಳಮದ್ದಳೆ ‘ಸುದರ್ಶನ ವಿಜಯ’ ಪ್ರಸಂಗದೊಂದಿಗೆ ದಿನಾಂಕ 10 ಜನವರಿ 2026ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಸತೀಶ್ ಇರ್ದೆ, ಆನಂದ ಸವಣೂರು, ಮುರಳೀಧರ ಕಲ್ಲೂರಾಯ, ಶರಣ್ಯ ನೆತ್ತರಕೆರೆ, ಸಮರ್ಥ ವಿಷ್ಣು ಕಡಂಬಳಿಕೆ ಮೊದಲಾದವರು ಸಹಕರಿಸಿದರು. ಮುಮ್ಮೇಳದಲ್ಲಿ ವಿ.ಕೆ. ಶರ್ಮ ಅಳಿಕೆ (ವಿಷ್ಣು), ಭಾರತಿ ರೈ ಅರಿಯಡ್ಕ (ಲಕ್ಷ್ಮಿ), ಶುಭ ಅಡಿಗ (ಸುದರ್ಶನ), ಹರಿಣಾಕ್ಷಿ ಜೆ. ಶೆಟ್ಟಿ (ಶತ್ರು ಪ್ರಸೂದನ), ಲಕ್ಷ್ಮೀಕಾಂತ ಹೆಗ್ಡೆ ಪರ್ಲಡ್ಕ (ದೇವೇಂದ್ರ) ಸಹಕರಿಸಿದರು. ಸಂಘದ ಅಧ್ಯಕ್ಷರಾದ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು.

Read More

ಬೆಂಗಳೂರಿನ ಸೇವಾಸದನದ ವೇದಿಕೆಯ ಮೇಲೆ ಉದಯೋನ್ಮುಖ ನೃತ್ಯಕಲಾವಿದೆ ಕೀರ್ತನಾ ಶಶಾಂಕ್ ತನ್ನ ಮೊದಲ ಹೆಜ್ಜೆಯ ಪ್ರಸ್ತುತಿಯನ್ನು ಆತ್ಮವಿಶ್ವಾಸದಿಂದ ಪ್ರಸ್ತುತಿಪಡಿಸಿ ಕಲಾರಸಿಕರ ಮೆಚ್ಚುಗೆ ಪಡೆದಳು. ಹೆಬ್ಬಾಳದಲ್ಲಿರುವ ‘ನಾಟ್ಯ ಕಲಾಕ್ಷೇತ್ರ’- ನೃತ್ಯಶಾಲೆಯ ಸಮರ್ಥ ಗುರು, ನಾಡಿನ ಪುರುಷ ನರ್ತಕರಲ್ಲಿ ಗಮನಾರ್ಹರಾದ ಪ್ರಶಾಂತ್ ಜಿ. ಶಾಸ್ತ್ರೀ ಇವರ ಮಾರ್ಗದರ್ಶನದಲ್ಲಿ ಕೀರ್ತನಾ ಯಶಸ್ವಿಯಾಗಿ ರಂಗಪ್ರವೇಶ ಮಾಡಿದಳು. ‘ಮಾರ್ಗಂ’- ಸಂಪ್ರದಾಯದ ಕೃತಿಗಳನ್ನು ಕಲಾವಿದೆ ಹಸನ್ಮುಖದಿಂದ ಅಚ್ಚುಕಟ್ಟಾಗಿ ಪ್ರದರ್ಶಿಸಿದಳು. ಗುರು ಪರಂಪರೆಯಿಂದ ಬಂದ ಅಲರಿಪು- ಪುಷ್ಪಾಂಜಲಿ (ನಾಟರಾಗ- ಆದಿತಾಳ) ಮತ್ತು ಜತಿಸ್ವರ (ಸರಸ್ವತಿ- ರೂಪಕ ತಾಳ) ಕೃತಿಗಳನ್ನು ಸುಂದರ ನೃತ್ತಗಳಿಂದ ನಿರೂಪಿಸಿದಳು. ಮೊದಲಿನಿಂದ ಕಡೆಯ ಕೃತಿಯವರೆಗೆ ಕೀರ್ತನಾ, ಯಾವುದೇ ಗೊಂದಲವಿಲ್ಲದೆ ಸೌಮ ನೃತ್ತಗಳ ಆಂಗಿಕಾಭಿನಯದಿಂದ ನಿರಾಯಾಸವಾಗಿ ನರ್ತಿಸಿದಳು. ಪ್ರಸ್ತುತಿಯ ಹೃದಯ ಭಾಗ, ಅಷ್ಟೇ ಹೃದ್ಯ ಭಾಗವಾದ ‘ವರ್ಣ’ವನ್ನು ಪ್ರಸ್ತುತಿಪಡಿಸಲು ನರ್ತಕರಾದವರಿಗೆ ನೃತ್ತ ಮತ್ತು ಅಭಿನಯ ಎರಡರಲ್ಲೂ ಸಮಾನ ಪರಿಣತಿ ಅವಶ್ಯ. ಇದು ಸಂಕೀರ್ಣ ಜತಿಗಳಿಂದ ಕೂಡಿದ ದೀರ್ಘಬಂಧವಾಗಿದ್ದು, ಕಲಾವಿದರಿಗೆ ತಾಳ- ಲಯದ ಮೇಲೆ ಹಿಡಿತ ಹಾಗೂ ನೆನಪಿನ ಶಕ್ತಿ ಇರುವುದು…

Read More

ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಆಯೋಜಿಸಿದ್ದ ಕಲಾ ಪ್ರತಿಭೋತ್ಸವದ ವಾದ್ಯ ಸಂಗೀತ ವಿಭಾಗದಲ್ಲಿ ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಹಿಮಾಂಗಿ ಡಿ. ಉಳ್ಳಾಲ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಮೈಸೂರು ರಂಗಾಯಣ ಕಲಾ ಮಂದಿರದಲ್ಲಿ ನಡೆದ ವಿಭಾಗ ಮಟ್ಟದ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಸುರತ್ಕಲ್‌ನ ಗೋವಿಂದ ದಾಸ್ ಕಾಲೇಜಿನ ಅಂತಿಮ ವರ್ಷದ ಡಿಗ್ರಿ ವಿದ್ಯಾರ್ಥಿನಿಯಾಗಿರುವ ಇವರು, ವಿದ್ವಾನ್ ಮಾಧವ ಆಚಾರ್ಯ ಉಡುಪಿ ಇವರ ಶಿಷ್ಯೆ. ಪ್ರಸಿದ್ದ ತಬಲಾ ವಾದಕ ದೀಪಕ್ ರಾಜ್ ಉಳ್ಳಾಲ ಹಾಗೂ ಧನಲಕ್ಷ್ಮಿ ದಂಪತಿಗಳ ಸುಪುತ್ರಿಯಾದ ಇವರು ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Read More

ಮಂಗಳೂರು : ಕರ್ನಾಟಕ ಪ್ರಾಂತೀಯ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ (ರಿ.) ಇದರ ವತಿಯಿಂದ ನೀಡುವ 2026ನೇ ಸಾಲಿನ ‘ಸಂದೇಶ ಪ್ರಶಸ್ತಿ’ಗೆ ಏಳು ಮಂದಿ ಸಾಧಕರು ಹಾಗೂ ಒಂದು ಸಂಸ್ಥೆ ಆಯ್ಕೆಯಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯೆ ಕನ್ನಪ್ಪ ಫರ್ನಾಂಡಿಸ್‌ ತಿಳಿಸಿದ್ದಾರೆ. ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ (ಕನ್ನಡ ಸಾಹಿತ್ಯ), ಪ್ಯಾಟ್ರಿಕ್ ಕಾಮಿಲ್ ಮೋರಾಸ್ (ಕೊಂಕಣಿ ಸಾಹಿತ್ಯ), ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ (ತುಳು ಸಾಹಿತ್ಯ), ಪತ್ರಕರ್ತೆ ತುಂಗ ರೇಣುಕ (ಮಾಧ್ಯಮ), ಸೈಮನ್ ಪಾಯ್ಸ್ (ಕೊಂಕಣಿ ಸಂಗೀತ), ಶ್ರೀನಿವಾಸ ಜಿ. ಕಪ್ಪಣ್ಣ (ಕಲೆ), ಡಾ. ದತ್ತಾತ್ರೇಯ ಅರಳಿಕಟ್ಟೆ (ಶಿಕ್ಷಣ) ಹಾಗೂ ವಿಶೇಷ ಪ್ರಶಸ್ತಿಗೆ ಬಳ್ಳಾರಿಯ ನವಜೀವನ ರಿಹ್ಯಾಬಿಲಿಟೇಶನ್ ಸೆಂಟರ್‌ ಫಾರ್‌ ಡಿಸೇಬಲ್ಡ್ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಸಂದೇಶ ಪ್ರತಿಷ್ಠಾನ ಟ್ರಸ್ಟಿ ರಾಯ್ ಕ್ಯಾಸ್ಟಲಿನೊ ಮಾತನಾಡಿ “ದಿನಾಂಕ 21 ಜನವರಿ 2026ರಂದು ಸಂಜೆ ಗಂಟೆ 5-30ಕ್ಕೆ ಪ್ರತಿಷ್ಠಾನದ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ…

Read More

ಮಂಜೇಶ್ವರ : ಕಲಾಕುಂಚ ಕಾಸರಗೋಡು ಶಾಖೆಯ ವಾರ್ಷಿಕೋತ್ಸವವು ಕುಂಜತ್ತೂರಿನ ವೈಶಾಲಿ ಮನೆಯ ಶ್ರೀ ಮಾತಾ ಕಲಾಲಯ ಸಭಾಂಗಣದಲ್ಲಿ ದಿನಾಂಕ 04 ಜನವರಿ 2026ರಂದು ಶ್ರೀ ಲಕ್ಷ್ಮೀ ಟೀಚರ್ ಕಣ್ಣಪ್ಪ ಮಾಸ್ಟರ್ ಮೆಮೋರಿಯಲ್ ಟ್ರಸ್ಟಿನ ಸಹಯೋಗದೊಂದಿಗೆ ಸಂಭ್ರಮ ಸಡಗರದಿಂದ ಜರಗಿತು. ಕಾರ್ಯಕ್ರಮವನ್ನು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಶಿವಶಂಕರ ಉದ್ಘಾಟಿಸಿ, “ಆಧುನಿಕ ಮಾಧ್ಯಮಗಳು ನೀಡುವ ಮನರಂಜನೆಗಳು ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಸ್ಥಿತಿಯಲ್ಲಿ ಕಲಾಕುಂಚ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳಿಂದ ಯುವ ಪೀಳಿಗೆ ಮೌಲ್ಯಯುತ ಬದುಕನ್ನು ಹಾಗೂ ಸಾಹಿತ್ಯ ಆಸಕ್ತಿಯನ್ನು ಮೂಡಿಸಿಕೊಳ್ಳಲು ಸಾಧ್ಯವಾಗುತ್ತಿರುವುದು ಶ್ಲಾಘನೀಯ” ಎಂದರು. ಅತಿಥಿಯಾಗಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀರ ಅಡಪ ಸಂಕಬೈಲು ಮಾತನಾಡಿ ಕಲಾಕುಂಚದ ಕಾರ್ಯ ಚಟುವಟಿಕೆಗಳನ್ನು ಮೆಚ್ಚಿ ಅಕಾಡೆಮಿ ಮೂಲಕ ಯಥಾಸಾಧ್ಯ ಸಹಕಾರ ನೀಡುವುದಾಗಿ ನುಡಿದರು. ಅಧ್ಯಕ್ಷತೆಯನ್ನು ಕಲಾಕುಂಚ ಕೇರಳ ಶಾಖೆಯ ಅಧ್ಯಕ್ಷೆ ಜಯಲಕ್ಷ್ಮಿ ಕಾರಂತ ಮಂಗಲ್ಪಾಡಿ ವಹಿಸಿದ್ದರು. ಕಲಾಕುಂಚದ ಗೌರವಾಧ್ಯಕ್ಷ, ನಿವೃತ್ತ ಅಧ್ಯಾಪಕ ಸಾಹಿತಿ ವಿ.ಬಿ. ಕುಳಮರ್ವ, ಸಾಹಿತಿ ಕವಿ ರಾಧಾಕೃಷ್ಣ ಕೆ.…

Read More

ಕೋಟ : ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ನೆನಪು ಮೂವೀಸ್ ಕೋಟ, ಉಸಿರು ಕೋಟ, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮಾಹಿತಿ ಕೇಂದ್ರ ಕೋಟತಟ್ಟು ಇವರ ಆಸರೆಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದೆ. ಸ್ಪರ್ಧೆಯು ಜೂನಿಯರ್ ವಿಭಾಗದಲ್ಲಿ (5ರಿಂದ 7ನೇ ತರಗತಿ) ಮತ್ತು ಸೀನಿಯರ್ ವಿಭಾಗದಲ್ಲಿ (8ರಿಂದ 10ನೇ ತರಗತಿ) ನಡೆಯಲಿದೆ. ಜೂನಿಯರ್ ಮತ್ತು ಸೀನಿಯರ್ ಎರಡು ವಿಭಾಗಕ್ಕೂ ಒಂದೊಂದು ವಿಷಯ ಕೊಡಲಾಗುವುದು. ಸ್ಪರ್ಧೆಯ ನಿಯಮಗಳು : ಜೂನಿಯರ್ ವಿಭಾಗಕ್ಕೆ ಐಚ್ಚಿಕ (ಅವರ ಆಯ್ಕೆ), ಸೀನಿಯರ್ ವಿಭಾಗಕ್ಕೆ ಕರಾವಳಿ ವೈಭವ, ಪೆನ್ಸಿಲ್ ಶೇಡಿಂಗ್ ಒಂದನ್ನು ಹೊರತು ಪಡಿಸಿ ಬೇರೆ ಯಾವ ಬಣ್ಣವನ್ನು, ಬಳಸಿಕೊಂಡು ಚಿತ್ರ ರಚಿಸಬಹುದು (ಪೆನ್ಸಿಲ್ ಆರ್ಟ್ ಗೆ ಯಾವುದೇ ಮಾನ್ಯತೆ ನೀಡಲಾಗುವುದಿಲ್ಲ) ಜೂನಿಯರ್ ವಿಭಾಗದ ನೊಂದಾವಣೆಗಾಗಿ ಶೈಲಜಾ ಕೆ.ಎನ್. (9663750499) ಹಾಗೂ ಸೀನಿಯರ್ ವಿಭಾಗದ ನೊಂದಾವಣೆಗಾಗಿ ಚಿತ್ರಕಲಾ…

Read More

ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಗಮಕ ಪರಿಷತ್ತು ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಜೀವನದೀಪ ಪಬ್ಲಿಕ್ ಶಾಲೆಯಲ್ಲಿ ದಿನಾಂಕ 07 ಜನವರಿ 2026ರಂದು ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ ಜರುಗಿತು. ವಿಜಯಪುರ ಜಿಲ್ಲಾ ಗಮಕ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಿ.ಎಂ. ಪಾಟೀಲ್ ಹಾಗೂ ಜೀವನದೀಪ ಶಾಲೆಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಮೊಗೇರಾ ಇವರುಗಳು ಕಾರ್ಯಕ್ರಮದ ಸಂಘಟನೆಯನ್ನು ಮಾಡಿದ್ದರು. ಕಾರ್ಯಕ್ರಮವನ್ನು ನಿವೃತ್ತ ಮುಖ್ಯಾಧ್ಯಾಪಕರಾದ ಶ್ರೀ ಬಿ.ಕೆ. ಗೋಟ್ಯಾಳ್ ಇವರುಗಳು ಸಸಿಗೆ ನೀರು ಹಾಕಿ ಉದ್ಘಾಟಿಸಿದರು. ಗಮಕ ಕಾರ್ಯಕ್ರಮದಲ್ಲಿ ಮಹಾಕವಿ ರಾಘವಾಂಕಕೃತ ಸಿದ್ಧರಾಮ ಚರಿತೆ ಮಹಾಕಾವ್ಯದಲ್ಲಿ ‘ಸೊನ್ನಲಿಗೆ ಕೆರೆ ನಿರ್ಮಾಣ’ ಭಾಗದ ವಾಚನ ವ್ಯಾಖ್ಯಾನ ಜರುಗಿತು. ಉದ್ಘಾಟನಾ ಪರ ಭಾಷಣದಲ್ಲಿ ಶ್ರೀ ಬಿ.ಕೆ. ಗೋಟ್ಯಾಳ್ “ಮಹಾಕಾವ್ಯಗಳು ಜನತೆಗೆ ಸಮಾಜಮುಖಿ ಕಾರ್ಯಕ್ರಮ ಮಾಡಲು ಮಾರ್ಗದರ್ಶನ ನೀಡಿದವು. ಕನ್ನಡದಲ್ಲಿ ಇರುವಷ್ಟು ಶ್ರೇಷ್ಠ ಮಹಾಕಾವ್ಯಗಳು ಬೇರೆ ಭಾಷೆಯಲ್ಲಿಲ್ಲ. ನಾವು ನಮ್ಮ ಸಾಂಸ್ಕೃತಿಕ ಹಿನ್ನೆಲೆಯನ್ನು ಈ ಕಾವ್ಯಗಳ…

Read More

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ‘ನೃತ್ಯೋತ್ಕ್ರಮಣ’ ರಂಗಪ್ರವೇಶ ಸ್ಮೃತಿ ಸಂಧ್ಯಾ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 11 ಜನವರಿ 2026ರಂದು ಸಂಜೆ ಗಂಟೆ 5-00ಕ್ಕೆ ಪುತ್ತೂರಿನ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ನೃತ್ಯ ಕಲಾವಿದರು, ಗುರುಗಳಾದ ಡಾ. ವೀಣಾ ಮೂರ್ತಿ ವಿಜಯ್ ಮತ್ತು ವಿದುಷಿ ರಾಜಶ್ರೀ ಉಳ್ಳಾಲ ಹಾಗೂ ದಂತ ವೈದ್ಯರಾದ ಡಾ. ಆಶಾ ಇವರುಗಳು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆಯ ಪತ್ರಕರ್ತ ಲೋಕೇಶ್ ಬನ್ನೂರು ಇವರನ್ನು ಗೌರವಿಸಲಾಗುವುದು. ವಿದ್ವಾನ್ ಬಿ. ದೀಪಕ್ ಕುಮಾರ್ ಇವರ ಭರತನಾಟ್ಯ ಪ್ರದರ್ಶನಕ್ಕೆ ನಟುವಾಂಗ ಮತ್ತು ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ಬೆಂಗಳೂರಿನ ವಿದ್ವಾನ್ ಜಿ. ಗುರುಮೂರ್ತಿ, ಕೊಳಲಿನಲ್ಲಿ ಮಂಗಳೂರಿನ ಕುಮಾರಿ ಮೇಧಾ ಉಡುಪ ಮತ್ತು ಪಿಟೀಲಿನಲ್ಲಿ ಕುಮಾರಿ ತನ್ಮಯಿ ಉಪ್ಪಂಗಳ ಸಹಕರಿಸಲಿದ್ದಾರೆ.

Read More

ಮಂಗಳೂರು : ತೆಂಕುತಿಟ್ಟು ಯಕ್ಷಗಾನದ ಬಹುಮುಖ ಪ್ರತಿಭೆಯ ಪ್ರಸಿದ್ದ ಯುವ ವೇಷಧಾರಿ, ಯಕ್ಷ ಗುರು, ಸಂಘಟಕ, ಪ್ರಯೋಗಶೀಲ ನಿರ್ದೇಶಕ ರಾಕೇಶ್ ರೈ ಅಡ್ಕ ಇವರಿಗೆ ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ ಪ್ರದಾನವು ದಿನಾಂಕ 11 ಜನವರಿ 2026ರಂದು ಕದ್ರಿ ಕಂಬಳ ಗುತ್ತಿನ ಪಾವಂಜೆ ಮೇಳದ ಸೇವೆ ಆಟದ ವೇದಿಕೆಯಲ್ಲಿ ಜರಗಲಿದೆ. ರಾಕೇಶ್ ರೈ ಅಡ್ಕ ಇವರು ಪ್ರಖರ ರಾಷ್ಟ್ರೀಯವಾದಿ ಸಂಘಟಕ, ಶಿಕ್ಷಕ ದಿ. ಜಲಂಧರ ರೈ ಇವರ ಶಿಷ್ಯರಾಗಿ ಹವ್ಯಾಸಿ ವಲಯದಲ್ಲಿ ಸಿದ್ದಿ ಪ್ರಸಿದ್ದಿ ಪಡೆದು ಪುಂಡು, ಸ್ತ್ರೀ, ರಾಜವೇಷ ನಿರ್ವಹಣೆಯಲ್ಲಿ ಅನುಪಮ ಸಾಧನೆ ಮಾಡಿ ಕಟೀಲು, ಬಪ್ಪನಾಡು ಮೇಳಗಳಲ್ಲಿ ಮೆರೆದು, ಪಟ್ಲ ಭಾಗವತರ ಪಾವಂಜೆ ಮೇಳದಲ್ಲಿ ಕಲಾ ವ್ಯವಸಾಯ ಮಾಡುತ್ತಾ ಬಪ್ಪನಾಡು ಮೇಳದಲ್ಲಿ ಅತಿಥಿ ಕಲಾವಿದರರಾಗಿ ದುಡಿಯುವ ಕಲಾವಿದರು. ಮೇಳಗಳ ತಿರುಗಾಟದ ಜೊತೆಯಲ್ಲೇ ಮೂರು ಜಿಲ್ಲೆಗಳಲ್ಲಿ 19 ಕೇಂದ್ರಗಳಲ್ಲಿ ಯಕ್ಷಗಾನ ತರಬೇತಿ ನೀಡುವ ಯಕ್ಷ ಗುರು ಇವರಾಗಿದ್ದಾರೆ. ಕದ್ರಿ ಕಂಬಳಗುತ್ತಿನ ಯಜಮಾನರಾಗಿ, ಹವ್ಯಾಸಿ ಯಕ್ಷಗಾನ ಅರ್ಥಧಾರಿಗಳಾಗಿದ್ದ ಬಾಲಕೃಷ್ಣ…

Read More

ಕೋಟ : ಕೋಟೇಶ್ವರದ ಎನ್.ಆರ್.ಎ.ಎಮ್.ಎಚ್. ಪ್ರಕಾಶನದ ವತಿಯಿಂದ ಕೋಟದ ಮಿತ್ರಮಂಡಳಿಯ ಸಹಕಾರದೊಂದಿಗೆ ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡಾ. ಕಾರಂತ ಸಭಾಂಗಣದಲ್ಲಿ ದಿನಾಂಕ 07 ಜನವರಿ 2026ರಂದು ‘ವರ್ಣತಂತು’ ಕಾದಂಬರಿಯ ಲೇಖಕಿ ರಮ್ಯ ಎಸ್. ರವರಿಗೆ ‘ಚಡಗ ಕಾದಂಬರಿ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಸಾಹಿತಿ ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಇವರು ಪ್ರಶಸ್ತಿಯ ಮಹತ್ವದ ಕುರಿತು ಮಾತನಾಡಿ, ಯಾವುದೇ ಬಣಕ್ಕೆ ಸಾಹಿತ್ಯಕ ವಲಯಕ್ಕೆ ಸೇರದಿರುವ ಮೂವರು ಸಾಮಾನ್ಯ ಓದುಗರ ಅಭಿಪ್ರಾಯದೊಂದಿಗೆ ಪ್ರಶಸ್ತಿಗೆ ಪಾತ್ರವಾಗುವ ಕೃತಿಯ ಆಯ್ಕೆಯು ಸಂಪೂರ್ಣವಾಗಿ ಪಕ್ಷಪಾತ ರಹಿತವಾಗಿರುತ್ತದೆ ಎಂಬುವುದೇ ಮುಖ್ಯ. ಅಂತೆಯೇ ಹಲವರ ಓದಿಗೆ ಪರ್ಯಾಯವಾಗಿ ಕಾರಣವಾಗುವ ಸ್ಪರ್ಧಾ ಪ್ರಾಯೋಜಕರು ಅಭಿನಂದನಾರ್ಹರು” ಎಂದರು. “ಬದುಕು ಸವಾಲು ಗಳನ್ನು ಒಡ್ಡುತ್ತಾ ಹೋದ ಹಾಗೆ ವಿಜ್ಞಾನ ಹೊಸ ಉತ್ತರಗಳನ್ನು ಹುಡುಕಿ ಕೊಡುತ್ತಾ ಹೋಗುವ ಚೋದ್ಯವನ್ನು ರಮ್ಯ ಎಸ್.ರವರ ‘ವರ್ಣತಂತು’ ಕಾದಂಬರಿ ತೆರೆದಿಡುತ್ತದೆ. ಸಾಹಿತ್ಯ ಇರುವುದು ಮನರಂಜನೆಗಾಗಿ ಮಾತ್ರವಲ್ಲ ಎನ್ನುವುದನ್ನು ಸ್ಪಷ್ಟಪಡಿಸುವ ಕೆಲಸವನ್ನು ಈ ಕಾದಂಬರಿಯು ಮಾಡಿದಂತಿದೆ” ಎಂದು…

Read More