Author: roovari

ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಇದರ ವತಿಯಿಂದ ದಿನಾಂಕ 27 ಮತ್ತು 28 ಮಾರ್ಚ್ 2026ರಂದು ಬಂಟ್ವಾಳ ಬಿ.ಸಿ. ರೋಡ್‌ನಲ್ಲಿ ಆಯೋಜಿಸುವ ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃತಿ ಬಿಡುಗಡೆಗೆ ಅವಕಾಶ ಕಲ್ಪಿಸಿದ್ದು ಆಸಕ್ತ ಲೇಖಕರು, ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಪ್ರಕಾರದ ಕನ್ನಡ ಪುಸ್ತಕಗಳ ಬಿಡುಗಡೆಗೆ ಅವಕಾಶವಿದೆ. ಆಸಕ್ತರು ಗೀತಾ ಎಸ್. ಕೊಂಕೋಡಿ – 9480367856, ರಜನಿ ಚಿಕ್ಕಯ್ಯ – 7022183946 ಇವರನ್ನು ದಿನಾಂಕ 25 ಫೆಬ್ರವರಿ 2026ರ ಒಳಗೆ ಸಂಪರ್ಕಿಸಿ, ಮಾಹಿತಿ ಪಡೆಯಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ. ಶ್ರೀನಾಥ ತಿಳಿಸಿದ್ದಾರೆ.

Read More

ಮುಂಬೈ : ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗವು ಆಯೋಜಿಸಿದ್ದ ಅಭಿಜಿತ್ ಪ್ರಕಾಶನ ಪ್ರಕಟಿಸಿದ ಡಾ. ಮರಿಯಪ್ಪ ನಾಟೇಕರ್ ಇವರ ‘ಕಾಗೆ ಬಣ್ಣದ ಕವಿತೆ’ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮವು ದಿನಾಂಕ 13 ಫೆಬ್ರವರಿ 2026ರಂದು ಸಾಂತಾಕ್ರೂಜ್ (ಪೂ) ವಿದ್ಯಾನಗರಿ ಕಲೀನಾದ ಇಂಗ್ಲೀಷ್ ವಿಭಾಗದ ನೆಲಮಹಡಿಯಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್. ಉಪಾಧ್ಯ ಇವರು ಮಾತನಾಡಿ “ಶೋಷಣೆಗೆ ಒಳಗಾದ ದನಿ ಇಲ್ಲದ ದಲಿತ ಸಮುದಾಯದ ಅಂತರಂಗದ ಪ್ರತಿಧ್ವನಿಯಾಗಿ ‘ಕಾಗೆ ಬಣ್ಣದ ಕವಿತೆ’ ಮೂಡಿಬಂದಿದೆ. ಡಾ. ಮರಿಯಪ್ಪ ನಾಟೇಕರ್ ಅವರು ಸೂಕ್ಷ್ಮ ಸಂವೇದನೆಯ ಕವಿ. ಅವರ ಈ ಸಂಕಲನ ವಿಶಿಷ್ಟ ರೂಪಕ ಪ್ರತಿಮೆಗಳ ಮೂಲಕ ಅಲಕ್ಷಿತ ಸಮುದಾಯದ ಬದುಕನ್ನು ಲೋಕಮುಖಕ್ಕೆ ಪರಿಚಯಿಸುವ ಪರಿ ಅನನ್ಯವಾದದ್ದು. ಓದುಗರ ಅಂತರಂಗ ಪ್ರವೇಶಿಸಿ ಚಿಂತನ ಮಂಥನ ನಡೆಸುವಂತೆ ಈ ಕೃತಿ ನಮ್ಮನ್ನು ಕಾಡುತ್ತದೆ, ಕನ್ನಡ ದಲಿತ ಸಾಹಿತ್ಯಕ್ಕೆ ಇದೊಂದು ಮೌಲಿಕ ಕೊಡುಗೆ” ಎಂದು ಹೇಳಿದರು. ಸಂಘಟಕ, ಉದ್ಯಮಿ…

Read More

12ನೇ ಶತಮಾನದಲ್ಲಿ ಅಸ್ಪೃಶ್ಯತೆ, ಮೂಡನಂಬಿಕೆ, ಅನಕ್ಷರತೆ ಮತ್ತು ಸಾಮಾಜಿಕ ಅಸಮಾನತೆಗೆ ಸಮಾಜ ಒಳಗಾಗಿದ್ದ ಸಂದರ್ಭದಲ್ಲಿ ಸರ್ವರಿಗೂ ಸಮಪಾಲು ಸಮಬಾಳು ಒದಗಿಸಲು ಶರಣರು ಕ್ರಾಂತಿಯನ್ನೇ ಕೈಗೊಂಡರು. ಅಂಥಹ ಶರಣರಲ್ಲಿ ಶರಣ ಶ್ರೇಷ್ಠರಾದ ಮಡಿವಾಳ ಮಾಚಿದೇವ ಒಬ್ಬರು. ಇವರು ಬಿಜಾಪುರ ಜಿಲ್ಲೆಯ ದೇವರಹಿಪ್ಪರಗಿ ಗ್ರಾಮದಲ್ಲಿ ಹುಟ್ಟಿ ನಂತರ ಬಸವಣ್ಣನವರ ಸಮುದಾಯಕ್ಕೆ ಸೇರುವುದಕ್ಕಾಗಿ ಕಲ್ಯಾಣದಲ್ಲಿ ನೆಲೆಸಿದವರು. ದಕ್ಷನನ್ನು ಸಂಹರಿಸಿದ ವೀರಭದ್ರ ಶಿವನನ್ನು ಕಾಣುವ ಉತ್ಸಾಹದಿಂದ ಸಭೆಯೊಳಗೆ ನಡೆದು ಬರುವಾಗ ಉತ್ತರೀಯದ ಸೆರಗು ಸಭೆಯಲ್ಲಿದ್ದ ಶಿವಭಕ್ತನಿಗೆ ತಗಲುತ್ತದೆ. ವಿಜಯೋತ್ಸಾಹದಿಂದ ಮೈಮರೆತು ಆದ ಈ ತಪ್ಪಿಗೆ ಭೂಲೋಕದಲ್ಲಿ ಮಡಿವಾಳನಾಗಿ ಜನಿಸಿ, ಶಿವಶರಣರ ವಸ್ತ್ರಗಳನ್ನು ಮಡಿ ಮಾಡುವ ಕಾಯಕ ಪೂರೈಸಿ ದೋಷ ಮುಕ್ತನಾಗುವಂತೆ ವೀರಭದ್ರನಿಗೆ ಶಿವನ ಆದೇಶವಾಗುತ್ತದೆ. ಆದ್ದರಿಂದ ಮಾಚಿದೇವನನ್ನು ವೀರಭದ್ರನ ಅವತಾರ ಪುರುಷ ಎಂದು ಹೇಳಲಾಗುತ್ತದೆ. ಮಾಚಿದೇವ ಕಲ್ಯಾಣದ ಅನುಭವ ಮಂಟಪದಲ್ಲಿ ಶರಣರ ವಸ್ತ್ರ ಮಡಿ ಮಾಡುವ ಕಾಯಕದಲ್ಲಿ ನಿರತರಾಗಿದ್ದರು. ಮಡಿ ಮಾಡಿದ ಬಟ್ಟೆಯನ್ನು ಸಂಬಂಧಪಟ್ಟವರಿಗೆ ಮುಟ್ಟಿಸುವ ಕಾರ್ಯದಲ್ಲಿ ನಿರತರಾದ ಮಾಚಿದೇವರು ವೀರಗಂಟೆ ಬಾರಿಸುತ್ತಾ ಮುಂದೆ ಸಾಗುವಾಗ ಭಕ್ತರಲ್ಲದವರು…

Read More

ಉಡುಪಿ : ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಶಿವಪಾಡಿ ವೈಭವದ ಪ್ರಯುಕ್ತ ದಿನಾಂಕ 14 ಫೆಬ್ರವರಿ 2026ರಂದು ‘ನರ್ತನ 2026’ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಸಿ.ಐ.ಐ. ನಿಕಟಪೂರ್ವ ಅಧ್ಯಕ್ಷ ದೇವಿಚರಣ್ ಕಾವಾ “ಇಡೀ ಗ್ರಾಮವೇ ಸಂಭ್ರಮಪಡುವ ಶಿವಪಾಡಿ ವೈಭವ ಕಾರ್ಯಕ್ರಮದ ಜತೆಗೆ ವಿವಿಧ ಸ್ಪರ್ಧೆಗಳು, ವಸ್ತುಪ್ರದರ್ಶನ ಆಯೋಜಿಸಿರುವುದು ಹಬ್ಬದ ವಾತಾವರಣವನ್ನು ಉಂಟು ಮಾಡಿದೆ” ಎಂದು ಹೇಳಿದರು. ಮಾಹೆ ಎಸ್ಟೇಟ್ ಆಫೀಸರ್ ಬಾಲಕೃಷ್ಣ ಪ್ರಭು ಅಧ್ಯಕ್ಷತೆ ವಹಿಸಿ, “ನಟರಾಜನ ನಾಟ್ಯವನ್ನು ಪ್ರದರ್ಶಿಸುವ ಕಲೆ ಇಲ್ಲಿ ಅನಾವರಣವಾಗಲಿದ್ದು, ಇದು ಶಿವನಿಗೆ ಸಮರ್ಪಿಸುವ ನಟರಾಜನ ಸೇವೆಯಾಗಿದೆ. ನಟರಾಜನ ಸಾನಿಧ್ಯದಲ್ಲಿ ನೃತ್ಯ ಮಾಡಿದರೆ ಮತ್ತಷ್ಟು ಅವಕಾಶ ಒದಗಿಬರಲು ಸಾಧ್ಯವಿದೆ. ಶಿವಪಾಡಿ ವೈಭವ ವರ್ಷಂಪ್ರತಿ ಹೊಸತನದೊಂದಿಗೆ ಬರುತ್ತಿದೆ. ಹೊಸತನದ ಮೂಲಕ ಧಾರ್ಮಿಕ ಆಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತಿರುವುದು ನಿಜಕ್ಕೂ ಶ್ಲಾಘನಾರ್ಹ” ಎಂದರು. ಅಭಿನಂದನ್ ಉಡುಪಿಯ ರಂಜಿತ್ ಶೆಟ್ಟಿ, ಶಿವಪಾಡಿ ವೈಭವ ಆಚರಣ…

Read More

ವ್ಯಾಸರ ಮಹಾಭಾರತ ಮಹಾಕಾವ್ಯಕ್ಕೆ ವಿಭಿನ್ನ ರಂಗ ಆಯಾಮವನ್ನು ಕೊಡುವ ವಿಶಿಷ್ಟ ನಾಟಕ ‘ಮಹಾಯುಗ’. ಜೋಸೆಫ್ ಜಾನ್ ಇವರು ಈ ರಂಗ ಪ್ರಯೋಗವನ್ನು ನಿರ್ದೇಶಿಸಿದ್ದು, ಏಳು ಕಲಾವಿದರ ದೇಹಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು ಮಹಾಭಾರತದ ಪ್ರಮುಖ ಸನ್ನಿವೇಶಗಳನ್ನು ಕಟ್ಟಿಕೊಟ್ಟು ರಂಗದಂಗಳದಲ್ಲಿ ಸಂಚಲನವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾಭಾರತದ ಪಠ್ಯವನ್ನು ಕೆ.ಎಸ್. ರಂಗೇಗೌಡ ಹಾಗೂ ಕೆ.ಎನ್. ತ್ಯಾಗರಾಜರವರು ರಂಗಪಠ್ಯವಾಗಿ ವಿಸ್ತರಿಸಿದ್ದು ಬೆಂಗಳೂರಿನ ‘ಸುಸ್ಥಿರ ಪ್ರತಿಷ್ಠಾನ’ವು ನಿರ್ಮಿಸಿ ಪ್ರಾಯೋಜಿಸಿದ ‘ಮಹಾಯುಗ’ವು 15 ಫೆಬ್ರುವರಿ 2026ರಂದು ಕಲಾಗ್ರಾಮದ ರಂಗಮಂದಿರದಲ್ಲಿ ಆಯೋಜಿಸಿದ್ದ ‘ಶಿವರಾತ್ರಿ ರಂಗ ಸಂಗಮ’ದಲ್ಲಿ ಪ್ರದರ್ಶನಗೊಂಡಿತು. ಪಗಡೆಯಾಟದಲ್ಲಿ ಪಾಂಡವರು ದ್ರೌಪತಿಯನ್ನು ಪಣಕ್ಕಿಟ್ಟು ಸೋತಿದ್ದು, ಕೃಷ್ಣ ಸಂಧಾನ ವಿಫಲವಾಗಿದ್ದು, ಕುರುಕ್ಷೇತ್ರ ಮಹಾಯುದ್ಧ ಘೋಷಣೆಯಾಗಿದ್ದು, ಕರ್ಣನ ವಿರೋಧದ ನಡುವೆಯೂ ಭೀಷ್ಮರನ್ನು ಸೈನ್ಯಾಧಿಪತಿ ಮಾಡಿದ್ದು, ಭೀಷ್ಮರ ನಂತರ ಯುದ್ದಕ್ಕಿಳಿದ ಕರ್ಣ ಮೋಸದಿಂದ ಹತನಾಗಿದ್ದು, ಕೊನೆಗೆ ವೈಶಂಪಾಯಣ ಸರೋವರದಲ್ಲಿ ಅಡಗಿದ ದುರ್ಯೋಧನನ್ನು ಭೀಮ ತೊಡೆ ಮುರಿದು ಹತ್ಯೆ ಮಾಡಿದ್ದು, ಈ ಎಲ್ಲಾ ಘಟನೆಗಳು ಮಹಾಭಾರತದ ಅರಿವು ಇರುವವರಿಗೆ ಗೊತ್ತಿರುವಂತಹುದೇ. ಆದರೆ ಈ ಗೊತ್ತಿರುವ ಘಟನೆಗಳನ್ನು ದೃಶ್ಯಕಾವ್ಯದಂತೆ…

Read More

ಮಂಗಳೂರು : ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರ, ಅತ್ತಾವರ ಮಂಗಳೂರು ಇದರ 5ನೇ ವಾರ್ಷಿಕೋತ್ಸವವು ದಿನಾಂಕ 14 ಫೆಬ್ರವರಿ 2026ರಂದು ಅತ್ತಾವರದ ಶ್ರೀ ಉಮಮಹೇಶ್ವರ ಕ್ಷೇತ್ರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಕ್ಷಗಾನ ಕಲಾವಿದರು ಹಾಗೂ ರಂಗ ಕಲಾವಿದರಾದ ಶ್ರೀ ಸುಧಾಕರ್ ಸಾಲಿಯನ್ “ಯಕ್ಷಗಾನದ ಭಾಷಾ ಶೈಲಿಯನ್ನು ಬಹಳ ಸುಲಭವಾಗಿ ಗ್ರಹಿಸಲು ಯಕ್ಷಗಾನ ನೋಡುವುದರಿ೦ದ ಹಾಗೂ ವಿದ್ಯಾರ್ಥಿಗಳು ಶ್ರದ್ದೆ, ನಿಯತ್ತು, ಭಕ್ತಿ, ತಪಸ್ಸು ಪ್ರಯತ್ನಗಳಿಂದ ಯಕ್ಷಗಾನ ರಂಗದಲ್ಲಿ ಒಬ್ಬ ಶ್ರೇಷ್ಟ ಕಲಾವಿದನಾಗಬಲ್ಲ” ಎಂದು ಹೇಳಿದರು. “ಶತಮಾನಗಳ ಇತಿಹಾಸ ಇರುವಂತಹ ಯಕ್ಷಗಾನವು ಹಲವು ಮಜಲುಗಳನ್ನು ದಾಟಿ ರಂಗಪ್ರಯೋಗಗಳನ್ನು ಕಂಡು ಮುಂದಿನ ಪೀಳಿಗೆಗೆ ಸಹಕಾರಿಯಾಗಬಲ್ಲ ಇಂತಹ ಯಕ್ಷಗಾನ ಅಧ್ಯಯನ ಕೇಂದ್ರಗಳು ಅತ್ಯಗತ್ಯ ಎಂದು ರೋಟರಿ ಕ್ಲಬ್ ಮಂಗಳೂರು ಪೂರ್ವದ ಅಧ್ಯಕ್ಷರಾದ ರೊ. ರಾಘವೇಂದ್ರ ನೆಲ್ಲಿಕಟ್ಟೆ ಮಾತನಾಡಿರು. ಅತ್ತಾವರ ಉಮಾಮಹೇಶ್ವರ ಕ್ಷೇತ್ರದ ಮೊಕ್ತೇಸರಾದ ಶ್ರೀ ಕೇಶವ ಮಳಲಿಯವರು “ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಉತ್ತಮ ಕಲಾವಿದರನ್ನಾಗಿ ಮಾಡಿದ ಯಕ್ಷಗುರು ರಾಕೇಶ್…

Read More

ಮಂಗಳೂರು : ಕಥಾಬಿಂದು ಪ್ರಕಾಶನದ ವತಿಯಿಂದ ಯುಗಪುರುಷ ಸಭಾಭವನ ಕಿನ್ನಿಗೋಳಿಯಲ್ಲಿ ದಿನಾಂಕ 27 ಫೆಬ್ರವರಿ 2026ರಂದು ನಡೆಯಲಿರುವ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ. ಪ್ರಕೃತಿ, ದೇಶಭಕ್ತಿ, ನಾಡುನುಡಿ, ಶಿಕ್ಷಣ, ಮಹಾಪುರುಷರು ಎಂಬ ವಿಷಯಗಳಲ್ಲಿ ಸ್ವರಚಿತ ಕವನ ರಚಿಸಿ ದಿನಾಂಕ 22 ಫೆಬ್ರವರಿ 2026ರ ಒಳಗೆ ಕಳುಹಿಸಬೇಕು. ಕವನಗಳು 20 ಸಾಲುಗಳಿಗೆ ಮೀರದಿರಲಿ. ಆಯ್ಕೆಯಾದ ಕವಿಗಳು 27 ಫೆಬ್ರವರಿ 2026ರಂದು ಕಿನ್ನಿಗೋಳಿಯಲ್ಲಿ ಅಪರಾಹ್ನ 2-00 ಗಂಟೆ ಮುಂಚಿತವಾಗಿ ಹಾಜರಿರಬೇಕು. ಭಾಗವಹಿಸಿದ ಕವಿಗಳ ಕವನಗಳನ್ನು ಪರಿಚಯದೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಆಸಕ್ತರು ಸಂಯೋಜಕ ಜಯಾನಂದ ಪೆರಾಜೆ 9448348234 ಇವರನ್ನು ಸಂಪರ್ಕಿಸಬಹುದು ಎಂದು ಕಥಾಬಿಂದು ಪ್ರಕಾಶನದ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

Read More

ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯು 40 ವರ್ಷದೊಳಗಿನ ಹೊಸ ಪೀಳಿಗೆಯ ಲೇಖಕ/ಕಿಯರ ಆಯ್ದ ಕಥೆ, ಪ್ರಬಂಧ ಮತ್ತು ಲೇಖನಗಳ ಸಂಯುಕ್ತ ಸಂಪುಟವೊಂದನ್ನು ಯುವ ಸಂಘಟಕ ಶ್ರೀ ಸೋಮನಾಥ ಶೇಷಗಿರಿ ಮತ್ತು ಯುವ ಲೇಖಕಿ ಕುಮಾರಿ ಮಧು ಕಾರಗಿಯವರ ಸಂಪಾದಕತ್ವದಲ್ಲಿ ಹೊರ ತರಲಿದೆ. ಆಸಕ್ತ ಲೇಖಕ/ಕಿಯರು ನಿಯಮಾನುಸಾರವಾಗಿ ಕಥೆ, ಪ್ರಬಂಧ, ಲೇಖನ ಕಳುಹಿಸಬಹುದು. ನಿಯಮಗಳು : 40 ವರ್ಷದೊಳಗಿನ ಲೇಖಕ/ಕಿಯರು ಮಾತ್ರ ಬರಹಗಳನ್ನು ಕಳುಹಿಸಬಹುದು. ಕಥೆ, ಲಲಿತ ಪ್ರಬಂಧ, ಪ್ರವಾಸ ಪ್ರಬಂಧ, ಐತಿಹಾಸಿಕ ಲೇಖನ, ವೈಜ್ಞಾನಿಕ ಲೇಖನ ಮತ್ತು ಸಿನಿಮಾ ಕುರಿತ ಲೇಖನಗಳಿಗೆ ಮಾತ್ರ ಅವಕಾಶವಿದೆ. ಬರಹಗಳು ಸ್ವತಂತ್ರವಾಗಿದ್ದು ಈ ಮೊದಲು ಎಲ್ಲೂ ಪ್ರಕಟವಾಗಿರಬಾರದು. ಅನುವಾದ, ಅನುಸೃಷ್ಟಿ, ಪ್ರೇರಣೆ, ಸ್ಫೂರ್ತಿ ಪಡೆದ ಲೇಖನಗಳಿಗೆ ಅವಕಾಶವಿಲ್ಲ. ಎಲ್ಲ ಬರಹಗಳೂ 1500 ಪದಗಳ ಮಿತಿಯನ್ನು ದಾಟುವಂತಿಲ್ಲ. ಇಲ್ಲಿ ಲಿಂಗ, ಜಾತಿ, ಪ್ರದೇಶ, ಎಡ-ಬಲ ಸೇರಿದಂತೆ ಯಾವುದೇ ಬಗೆಯ ಮೀಸಲಾತಿಯಿರುವುದಿಲ್ಲ. ಬರಹಗಳ ಗುಣಮಟ್ಟವೊಂದೇ ಆಯ್ಕೆಯ ಏಕೈಕ ಮಾನದಂಡ. ಬರಹಗಳ ಸಾಫ್ಟ್ ಕಾಪಿಯನ್ನು ಸಂಪಾದಕರ ವಾಟ್ಸಪ್…

Read More

ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 22 ಫೆಬ್ರವರಿ 2026ರಂದು ನಡೆಯಲಿರುವ ಕಾಸರಗೋಡು-ಕರ್ನಾಟಕ ‘ಚುಟುಕು ಸಾಹಿತ್ಯ ಸಮ್ಮೇಳನ’ದ ಆಮಂತ್ರಣ ಪತ್ರಿಕೆಯನ್ನು ದಿನಾಂಕ 16 ಫೆಬ್ರವರಿ 2026ರಂದು ಎಡನೀರು ಶ್ರೀ ಮಠದಲ್ಲಿ ಎಡನೀರು ಮಠಾಧಿಪತಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಬಿಡುಗಡೆಗೊಳಿಸಿ ಶುಭಾಶೀರ್ವಾದ ನೀಡಿದರು. ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಇವರ ಸರ್ವಾಧ್ಯಕ್ಷತೆಯಲ್ಲಿ, ಡಾ. ವಾಮನ್ ರಾವ್ ಬೇಕಲ್ ಸಾರಥ್ಯದ ಕನ್ನಡ ಭವನದ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕನ್ನಡ ಭವನದ ಅಂಗ ಸಂಸ್ಥೆಯಾದ ‘ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವರ್ಷಾಚರಣೆ ಪ್ರಯುಕ್ತ ಪರಿಷತ್ತಿನ ಜಿಲ್ಲಾ ಘಟಕಗಳ ಸಹಕಾರದಲ್ಲಿ ಸಮ್ಮೇಳನ ಆಯೋಜಿಸಲಾಗಿದ್ದು, ಬೆಳಿಗ್ಗೆ 7-00ರಿಂದ ಭಜನೆ, 8-30ಗೆ ಸರ್ವಾಧ್ಯಕ್ಷರ ಮೆರವಣಿಗೆ, ಗಂಟೆ 9-00ಕ್ಕೆ ಉದ್ಘಾಟನೆ, ಶ್ರೀ ಶ್ರೀ ರಮೇಶ ಗುರೂಜಿ, ಗೋವಿನಾಳ ಗದಗ ಹಾಗೂ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಜಿಗಳಿಂದ ಆಶೀರ್ವಚನ, ಸ್ವಾಮೀಜಿಗಳಿಗೆ ವಿಶೇಷ ಸಮ್ಮೇಳನ ಗೌರವ ಪ್ರದಾನ.…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರಿಂದ ಶ್ರೀ ರಾಮಕೃಷ್ಣಯ್ಯ ವಿರಚಿತ ‘ಸುಧನ್ವಾರ್ಜುನ’ ಪ್ರಸಂಗದೊಂದಿಗೆ ಮಾಸಿಕ ತಾಳಮದ್ದಲೆಯು ದಿನಾಂಕ 17 ಫೆಬ್ರವರಿ 2026ರ ಮಂಗಳವಾರ ಬನ್ನೂರಿನ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್ ಹಾಗೂ ಚೆಂಡೆ ಮದ್ದಲೆಗಳಲ್ಲಿ ಅನೀಶ ಕೃಷ್ಣ ಪುಣಚ, ಸಮರ್ಥ ವಿಷ್ಣು ಕಡಂಬಳಿಕೆ ಭಾಗವಹಿಸಿದರು. ಮುಮ್ಮೇಳದಲ್ಲಿ ಗುಡ್ಡಪ್ಪ ಬಲ್ಯ (ಸುಧನ್ವ), ಮಾಂಬಾಡಿ ವೇಣುಗೋಪಾಲ ಭಟ್ (ಅರ್ಜುನ), ಭಾಸ್ಕರ ಬಾರ್ಯ (ಪ್ರಭಾವತಿ), ಬಡೆಕ್ಕಿಲ ಚಂದ್ರಶೇಖರ ಭಟ್ (ಶ್ರೀ ಕೃಷ್ಣ), ದುಗ್ಗಪ್ಪ ನಡುಗಲ್ಲು (ಹಂಸಧ್ವಜ), ಪ್ರೇಮಲತಾ ರಾವ್ (ಶಂಖ, ಲಿಖಿತ), ಕಿಶೋರಿ ದುಗ್ಗಪ್ಪ ನಡುಗಲ್ಲು (ಸುಗರ್ಭೆ) ಪಾತ್ರಪೋಷಣೆ ಮಾಡಿದರು. ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ದೇವಳದ ಸಂಚಾಲನಾ ಸಮಿತಿಯ ಸದಸ್ಯರಾದ ಶಂಕರ ಭಟ್ ಪ್ರಾಯೋಜಿಸಿದರು. ಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್ಯ ಸ್ವಾಗತಿಸಿ, ದೇವಳದ ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್ ವಂದಿಸಿದರು.

Read More