Author: roovari

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ‘ನೃತ್ಯೋತ್ಕ್ರಮಣ’ ರಂಗಪ್ರವೇಶ ಸ್ಮೃತಿ ಸಂಧ್ಯಾ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 11 ಜನವರಿ 2026ರಂದು ಸಂಜೆ ಗಂಟೆ 5-00ಕ್ಕೆ ಪುತ್ತೂರಿನ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ನೃತ್ಯ ಕಲಾವಿದರು, ಗುರುಗಳಾದ ಡಾ. ವೀಣಾ ಮೂರ್ತಿ ವಿಜಯ್ ಮತ್ತು ವಿದುಷಿ ರಾಜಶ್ರೀ ಉಳ್ಳಾಲ ಹಾಗೂ ದಂತ ವೈದ್ಯರಾದ ಡಾ. ಆಶಾ ಇವರುಗಳು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆಯ ಪತ್ರಕರ್ತ ಲೋಕೇಶ್ ಬನ್ನೂರು ಇವರನ್ನು ಗೌರವಿಸಲಾಗುವುದು. ವಿದ್ವಾನ್ ಬಿ. ದೀಪಕ್ ಕುಮಾರ್ ಇವರ ಭರತನಾಟ್ಯ ಪ್ರದರ್ಶನಕ್ಕೆ ನಟುವಾಂಗ ಮತ್ತು ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ಬೆಂಗಳೂರಿನ ವಿದ್ವಾನ್ ಜಿ. ಗುರುಮೂರ್ತಿ, ಕೊಳಲಿನಲ್ಲಿ ಮಂಗಳೂರಿನ ಕುಮಾರಿ ಮೇಧಾ ಉಡುಪ ಮತ್ತು ಪಿಟೀಲಿನಲ್ಲಿ ಕುಮಾರಿ ತನ್ಮಯಿ ಉಪ್ಪಂಗಳ ಸಹಕರಿಸಲಿದ್ದಾರೆ.

Read More

ಮಂಗಳೂರು : ತೆಂಕುತಿಟ್ಟು ಯಕ್ಷಗಾನದ ಬಹುಮುಖ ಪ್ರತಿಭೆಯ ಪ್ರಸಿದ್ದ ಯುವ ವೇಷಧಾರಿ, ಯಕ್ಷ ಗುರು, ಸಂಘಟಕ, ಪ್ರಯೋಗಶೀಲ ನಿರ್ದೇಶಕ ರಾಕೇಶ್ ರೈ ಅಡ್ಕ ಇವರಿಗೆ ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ ಪ್ರದಾನವು ದಿನಾಂಕ 11 ಜನವರಿ 2026ರಂದು ಕದ್ರಿ ಕಂಬಳ ಗುತ್ತಿನ ಪಾವಂಜೆ ಮೇಳದ ಸೇವೆ ಆಟದ ವೇದಿಕೆಯಲ್ಲಿ ಜರಗಲಿದೆ. ರಾಕೇಶ್ ರೈ ಅಡ್ಕ ಇವರು ಪ್ರಖರ ರಾಷ್ಟ್ರೀಯವಾದಿ ಸಂಘಟಕ, ಶಿಕ್ಷಕ ದಿ. ಜಲಂಧರ ರೈ ಇವರ ಶಿಷ್ಯರಾಗಿ ಹವ್ಯಾಸಿ ವಲಯದಲ್ಲಿ ಸಿದ್ದಿ ಪ್ರಸಿದ್ದಿ ಪಡೆದು ಪುಂಡು, ಸ್ತ್ರೀ, ರಾಜವೇಷ ನಿರ್ವಹಣೆಯಲ್ಲಿ ಅನುಪಮ ಸಾಧನೆ ಮಾಡಿ ಕಟೀಲು, ಬಪ್ಪನಾಡು ಮೇಳಗಳಲ್ಲಿ ಮೆರೆದು, ಪಟ್ಲ ಭಾಗವತರ ಪಾವಂಜೆ ಮೇಳದಲ್ಲಿ ಕಲಾ ವ್ಯವಸಾಯ ಮಾಡುತ್ತಾ ಬಪ್ಪನಾಡು ಮೇಳದಲ್ಲಿ ಅತಿಥಿ ಕಲಾವಿದರರಾಗಿ ದುಡಿಯುವ ಕಲಾವಿದರು. ಮೇಳಗಳ ತಿರುಗಾಟದ ಜೊತೆಯಲ್ಲೇ ಮೂರು ಜಿಲ್ಲೆಗಳಲ್ಲಿ 19 ಕೇಂದ್ರಗಳಲ್ಲಿ ಯಕ್ಷಗಾನ ತರಬೇತಿ ನೀಡುವ ಯಕ್ಷ ಗುರು ಇವರಾಗಿದ್ದಾರೆ. ಕದ್ರಿ ಕಂಬಳಗುತ್ತಿನ ಯಜಮಾನರಾಗಿ, ಹವ್ಯಾಸಿ ಯಕ್ಷಗಾನ ಅರ್ಥಧಾರಿಗಳಾಗಿದ್ದ ಬಾಲಕೃಷ್ಣ…

Read More

ಕೋಟ : ಕೋಟೇಶ್ವರದ ಎನ್.ಆರ್.ಎ.ಎಮ್.ಎಚ್. ಪ್ರಕಾಶನದ ವತಿಯಿಂದ ಕೋಟದ ಮಿತ್ರಮಂಡಳಿಯ ಸಹಕಾರದೊಂದಿಗೆ ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡಾ. ಕಾರಂತ ಸಭಾಂಗಣದಲ್ಲಿ ದಿನಾಂಕ 07 ಜನವರಿ 2026ರಂದು ‘ವರ್ಣತಂತು’ ಕಾದಂಬರಿಯ ಲೇಖಕಿ ರಮ್ಯ ಎಸ್. ರವರಿಗೆ ‘ಚಡಗ ಕಾದಂಬರಿ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಸಾಹಿತಿ ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಇವರು ಪ್ರಶಸ್ತಿಯ ಮಹತ್ವದ ಕುರಿತು ಮಾತನಾಡಿ, ಯಾವುದೇ ಬಣಕ್ಕೆ ಸಾಹಿತ್ಯಕ ವಲಯಕ್ಕೆ ಸೇರದಿರುವ ಮೂವರು ಸಾಮಾನ್ಯ ಓದುಗರ ಅಭಿಪ್ರಾಯದೊಂದಿಗೆ ಪ್ರಶಸ್ತಿಗೆ ಪಾತ್ರವಾಗುವ ಕೃತಿಯ ಆಯ್ಕೆಯು ಸಂಪೂರ್ಣವಾಗಿ ಪಕ್ಷಪಾತ ರಹಿತವಾಗಿರುತ್ತದೆ ಎಂಬುವುದೇ ಮುಖ್ಯ. ಅಂತೆಯೇ ಹಲವರ ಓದಿಗೆ ಪರ್ಯಾಯವಾಗಿ ಕಾರಣವಾಗುವ ಸ್ಪರ್ಧಾ ಪ್ರಾಯೋಜಕರು ಅಭಿನಂದನಾರ್ಹರು” ಎಂದರು. “ಬದುಕು ಸವಾಲು ಗಳನ್ನು ಒಡ್ಡುತ್ತಾ ಹೋದ ಹಾಗೆ ವಿಜ್ಞಾನ ಹೊಸ ಉತ್ತರಗಳನ್ನು ಹುಡುಕಿ ಕೊಡುತ್ತಾ ಹೋಗುವ ಚೋದ್ಯವನ್ನು ರಮ್ಯ ಎಸ್.ರವರ ‘ವರ್ಣತಂತು’ ಕಾದಂಬರಿ ತೆರೆದಿಡುತ್ತದೆ. ಸಾಹಿತ್ಯ ಇರುವುದು ಮನರಂಜನೆಗಾಗಿ ಮಾತ್ರವಲ್ಲ ಎನ್ನುವುದನ್ನು ಸ್ಪಷ್ಟಪಡಿಸುವ ಕೆಲಸವನ್ನು ಈ ಕಾದಂಬರಿಯು ಮಾಡಿದಂತಿದೆ” ಎಂದು…

Read More

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಯಕ್ಷ ಪ್ರತಿಭೆ (ರಿ.) ಮಂಗಳೂರು ಇವರ ಸಹಯೋಗದಲ್ಲಿ ತುಳು ಯಕ್ಷಗಾನ ಪ್ರಸಂಗಗಳ ಭೀಷ್ಮ ಎಂದು ಖ್ಯಾತರಾಗಿದ್ದ ಕೆ. ಅನಂತರಾಮ ಬಂಗಾಡಿ ಇವರ ಸಂಸ್ಮರಣಾ ಗೋಷ್ಠಿ ಹಾಗೂ ತುಳು ಯಕ್ಷಗಾನ ಪ್ರದರ್ಶನವು ದಿನಾಂಕ 11 ಜನವರಿ 2026ರಂದು ಅಪರಾಹ್ನ ಗಂಟೆ 3-00ಕ್ಕೆ ಉರ್ವಸ್ಟೋರಿನ ತುಳು ಭವನದ ಸಿರಿಚಾವಡಿಯಲ್ಲಿ ನಡೆಯಲಿದೆ. ಹಿರಿಯ ಯಕ್ಷಗಾನ ಕಲಾವಿದರಾದ ಕೊಳ್ತಿಗೆ ನಾರಾಯಣ ಗೌಡ ಇವರು ‘ತುಳು ಯಕ್ಷಗಾನ ಪ್ರಸಂಗಗಳಿಗೆ ಅನಂತರಾಮ ಬಂಗಾಡಿಯವರ ಕೊಡುಗೆ’ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಇವರು ಅಧ್ಯಕ್ಷತೆ ವಹಿಸುವರು. ಮ್ಯಾಪ್ಸ್ ಕಾಲೇಜಿನ ಉಪಪ್ರಾಂಶುಪಾಲ ಡಾ. ಪ್ರಭಾಕರ ನೀರುಮಾರ್ಗ ಮತ್ತು ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಟ್ರಸ್ಟಿ ಶ್ರೀಮತಿ ವೇಣಿ ಮರೋಳಿ ಇವರುಗಳು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿಚಾರಗೋಷ್ಠಿಯ ಬಳಿಕ ಯಕ್ಷ ಪ್ರತಿಭೆ ಸಂಸ್ಥೆಯ ಸಂಚಾಲಕ ಸಂಜಯ್ ಕುಮಾರ್ ಗೋಣಿಬೀಡು ಇವರ ಸಂಯೋಜನೆಯಲ್ಲಿ…

Read More

ಹಳೆಯಂಗಡಿ : ಜಿಲ್ಲಾ ಪ್ರಶಸ್ತಿ ಪುರಸ್ಕೃತ ಹಳೆಯಂಗಡಿಯ ಯುವತಿ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ಹಳೆಯಂಗಡಿಯ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್ ಹಾಗೂ ಮಹಿಳಾ ಮಂಡಲ ಇವುಗಳ ಸಹಯೋಗದಲ್ಲಿ ‘ಭಜನಾ ಸ್ಪರ್ಧಾ ಸಂಭ್ರಮ-2026’ ಕಾರ್ಯಕ್ರಮವನ್ನು ದಿನಾಂಕ 11 ಜನವರಿ 2026ರಂದು ಬೆಳಿಗ್ಗೆ ಗಂಟೆ 9-30ಕ್ಕೆ ಹಳೆಯಂಗಡಿಯ ಯುವಕ ಮಂಡಲದ ಬೊಳ್ಳೂರು ವಾರಿಜ ವಾಸುದೇವ ಕಲಾವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಸ್ಪರ್ಧೆಯನ್ನು ಪಡುಪಣಂಬೂರು ಹೊಯಿಗೆಗುಡ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಳ ಆಡಳಿತ ಮೊಕ್ತೇಸರ ಎಚ್. ರಂಗನಾಥ ಭಟ್ ಇವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಪೂರ್ಣಮಾ ಯತೀಶ್ ರೈ ಸುರತ್ಕಲ್ ಇವರು ವಹಿಸಲಿದ್ದಾರೆ. ಸುರತ್ಕಲ್ ಗೋವಿಂದಾಸ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಅಕ್ಷತಾ ವಿ. ಶೆಟ್ಟಿ ಸುರತ್ಕಲ್, ಯುವತಿ ಮಂಡಲದ ಸ್ಥಾಪಕ ಅಧ್ಯಕ್ಷೆ ಹಾಗೂ ಹಿರಿಯ ಮೋಹಿನಿ ಕಾಮೆರೊಟ್ಟು ಇವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ ಗಂಟೆ 10-00ರಿಂದ ಸಂಜೆ 4-00ರವರೆಗೆ ಭಜನಾ ಸ್ಪರ್ಧೆ…

Read More

ಉಡುಪಿ : ಶ್ರೀ ಕಾಳಿಕಾಂಬಾ ಭಜನಾ ಸಂಘ, ಶ್ರೀದೇವಿ ಮಹಿಳಾ ಮಂಡಳಿ ಮತ್ತು ಬಾಲ ಸಂಸ್ಕಾರ ಕೇಂದ್ರ ಇವರ ವತಿಯಿಂದ ಮಕರ ಸಂಕ್ರಾಂತಿ ವಿಶೇಷ ಕಾರ್ಯಕ್ರಮವನ್ನು ದಿನಾಂಕ 15 ಜನವರಿ 2026ರಂದು ಉಡುಪಿ ತೆಂಕನಿಡಿಯೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9-30 ಗಂಟೆಗೆ ಶ್ರೀ ಕಾಳಿಕಾಂಬಾ ಭಜನಾ ಸಂಘದ ಅಧ್ಯಕ್ಷರಾದ ಟಿ. ಕೃಷ್ಣ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ತೆಂಕನಿಡಿಯೂರು ಶ್ರೀಮತಿ ಸುಗುಣ ಮಹಾಬಲ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಸಂಜೆ 4-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಉಡುಪಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಯ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಭಕ್ತಿಗೀತೆ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ, ಉಡುಪಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ಮತ್ತು ಭಾವಗಾನ ಸ್ಪರ್ಧೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಭಾಷಣ…

Read More

ಮಂಗಳೂರು : ‘ಬ್ಯಾರಿವಾರ್ತೆ’ ಕನ್ನಡ ಲಿಪಿ, ಬ್ಯಾರಿ ಭಾಷೆಯಲ್ಲಿರುವ ಬ್ಯಾರಿ ಸಮುದಾಯದ ಏಕೈಕ ಮಾಸಿಕ. ಹತ್ತು ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ಈ ಪತ್ರಿಕೆಗೆ ಈಗ ದಶಮಾನೋತ್ಸವ ಸಂಭ್ರಮ. ಈ ಸುಸಂದರ್ಭದಲ್ಲಿ ಪತ್ರಿಕೆಯು ‘ಬ್ಯಾರಿ ಲೇಖನ ಸ್ಪರ್ಧೆ-2026’ಯನ್ನು ಹಮ್ಮಿಕೊಂಡಿದೆ. ಬ್ಯಾರಿಗಳಲ್ಲಿ ಸಾಹಿತ್ಯಿಕ ಅಭಿರುಚಿಯನ್ನು ಮೂಡಿಸುವುದು. ಬ್ಯಾರಿ ಭಾಷೆಯ ಬಗ್ಗೆ ಅಭಿಮಾನವನ್ನು ಹೆಚ್ಚಿಸುವುದು ಈ ಸ್ಪರ್ಧೆಯ ಉದ್ದೇಶ. ಈ ಸ್ಪರ್ಧೆಗೆ ಯಾರು ಬೇಕಾದರೂ ಬರೆಯಬಹುದು. ‘ಬ್ಯಾರಿವಾರ್ತೆ’ಗೆ ಹತ್ತು ವರ್ಷ ಆಗಿರುವುದರಿಂದ ತಲಾ ಹತ್ತು ಬಹುಮಾನಗಳನ್ನು ಇಡಲಾಗಿದೆ. ಪ್ರಥಮ ಬಹುಮಾನ ತಲಾ ರೂ. ಎರಡು ಸಾವಿರ ಹತ್ತು ಜನರಿಗೆ, ದ್ವಿತೀಯ ಬಹುಮಾನ ತಲಾ ರೂ. ಒಂದು ಸಾವಿರ ಹತ್ತು ಜನರಿಗೆ, ತೃತೀಯ ಬಹುಮಾನ ತಲಾ ರೂ. ಐನ್ನೂರು ಹತ್ತು ಜನರಿಗೆ, ಸ್ಪರ್ಧೆಗೆ ಬಂದು ಲೇಖನ ಬ್ಯಾರಿವಾರ್ತೆಯಲ್ಲಿ ಪ್ರಕಟವಾದರೆ ಪ್ರತಿಯೊಂದು ಲೇಖನಕ್ಕೂ ರೂ.150/- ಸಮಾಧಾನಕರ ಬಹುಮಾನ ನೀಡಲಾಗುವುದು. ಲೇಖನ 600 ಪದಗಳ ಒಳಗಿರಬೇಕು. ಕನ್ನಡ ಲಿಪಿ, ಬ್ಯಾರಿ ಭಾಷೆಯಲ್ಲಿರಬೇಕು. ಲೇಖನ ಬೇರೆ ಎಲ್ಲಿಯೂ ಪ್ರಕಟವಾಗಿರಬಾರದು. ಟೈಪ್ ಮಾಡಿ…

Read More

‘ನನ್ನ ಸೋಲೋ ಟ್ರಿಪ್’ ಇದು ಶಶಿಧರ ಹಾಲಾಡಿಯವರ ವಿನೂತನ ಬಗೆಯ ಪ್ರವಾಸ ಕಥನ. ಏಕಾಂಗಿಯಾಗಿ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಕೈಗೊಂಡ ತಿರುಗಾಟದ ಚಿತ್ರಣ ಇಲ್ಲಿ ಬಹು ಪರಿಣಾಮಕಾರಿಯಾಗಿ ಮೈಪಡೆದಿದೆ. ಸಸ್ಯಕಾಶಿ ಪಕ್ಷಿಕಾಶಿಗಳ ಒಡನಾಟ, ಸುತ್ತಲಿನ ಜನಜೀವನ ಸಂಸ್ಕೃತಿಗಳಿಗೆ ಸಂಬಂಧಿಸಿದ ಒಳನೋಟಗಳನ್ನು ನೀಡುವ ಹನ್ನೆರಡು ಪುಟ್ಟ ಪುಟ್ಟ ಸ್ವಾರಸ್ಯಕರ ಲೇಖನಗಳು ಇಲ್ಲಿವೆ. ಸೋಲೋ ಟ್ರಿಪ್ ಅಥವಾ ಏಕಾಂಗಿ ಪಯಣ ಎಂಬ ಹೆಸರಿನ ಈ ಪ್ರವಾಸಾನುಭವ ಲೇಖನಗಳ ಸಂಕಲನ ಮೂಡಿಬಂದ ರೀತಿಯನ್ನು, ಅವು ರೂಪುಗೊಂಡ ಸಂದರ್ಭವನ್ನು ಮುಮ್ಮಾತಿನಲ್ಲಿ ಲೇಖಕರು ಹೀಗೆ ಹೇಳಿಕೊಂಡಿದ್ದಾರೆ. “ಹಲವು ಪ್ರವಾಸ ಕಥನಗಳನ್ನು ನಾನು ಬರೆದಿದ್ದರೂ, ಅವುಗಳ ಅನುಭವದ ಜೀವಾಳವಾಗಿ ಗ್ರೂಪ್ ಟೂರ್ ಅಥವಾ ಗುಂಪು ಪ್ರವಾಸಾನುಭವವೇ ಮೂಡಿಬಂದಿದೆ. ಟ್ರಾವೆಲ್ ಏಜೆನ್ಸಿಯವರು ಏರ್ಪಡಿಸುವ ಪ್ರವಾಸ ಒಂದು ರೀತಿಯಾದರೆ, ಕುಟುಂಬ ಸದಸ್ಯರು ಅಥವಾ ಗೆಳೆಯರ ಗುಂಪಿನೊಂದಿಗೆ ಕೈಗೊಳ್ಳುವ ಪ್ರವಾಸವು ಇನ್ನೊಂದು ರೀತಿ. ಈ ವಿಚಾರವೇ ತಲೆಯಲ್ಲಿ ಸುಳಿದಾಡಿದಾಗ ಥಟ್ಟನೆ ನೆನಪಾದದ್ದು, ನಾನು ಕೈಗೊಂಡ ಹಲವು ಏಕಾಂಗಿ ಪ್ರವಾಸಗಳು ಅಥವಾ ‘ಸೋಲೋ ಟ್ರಿಪ್’ಗಳು.…

Read More

ಉಡುಪಿ : ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ದಿವಂಗತ ಮುಳಿಯ ತಿಮ್ಮಪ್ಪಯ್ಯನವರ ನೆನಪಿನಲ್ಲಿ ನೀಡಲಾಗುವ ‘ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ’ಗೆ ಕನ್ನಡದ ಪ್ರಸಿದ್ಧ ಬರಹಗಾರ್ತಿ ಡಾ. ಗಿರಿಜಾ ಶಾಸ್ತ್ರಿ ಇವರು ಆಯ್ಕೆಯಾಗಿದ್ದಾರೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 25,000/- ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 17 ಜನವರಿ 2026ರಂದು ನಡೆಯಲಿರುವುದು ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿಯವರು ತಿಳಿಸಿರುತ್ತಾರೆ. ಡಾ. ಗಿರಿಜಾ ಶಾಸ್ತ್ರಿ ಇವರು ಮೈಸೂರಿನ ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮದವರು. ತಂದೆ ದಿ. ಶ್ರೀಕಂಠ ಶಾಸ್ತ್ರಿ, ತಾಯಿ ದಿ. ಸೀತಮ್ಮ. ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದು, ‘ಕನ್ನಡ ಕಥಾ ಸಾಹಿತ್ಯ ಒಂದು ಸ್ತ್ರೀವಾದಿ ಅಧ್ಯಯನ’ ಮಹಾಪ್ರಬಂಧಕ್ಕೆ ಮುಂಬೈ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪಡೆದಿದ್ದಾರೆ. ಗಿರಿಜಾ ಶಾಸ್ತ್ರಿಯವರ ಬರಹಗಳು ಎಲ್ಲಾ ಪ್ರಕಾರಗಳಲ್ಲಿ ಮೂಡಿದ್ದು, ವಿಶೇಷವಾಗಿ ಕವಿತೆ, ಪ್ರಬಂಧ, ಅನುವಾದ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡಿವೆ.…

Read More

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಶ್ರಯದಲ್ಲಿ ಸಾಹಿತಿ, ಸಂಶೋಧಕಿ ರಾಜಶ್ರೀ ಟಿ. ರೈ ಪೆರ್ಲ ಇವರ ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೊ’ ಕಥಾ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮ ದಿನಾಂಕ 07 ಜನವರಿ 2026ರಂದು ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ಬಿ.ಎ. ವಿವೇಕ ರೈ ವಿಚಾರ ವೇದಿಕೆಯಲ್ಲಿ ನಡೆಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ. ನಾಗಪ್ಪ ಗೌಡ ಕೃತಿ ಅನಾವರಣಗೊಳಿಸಿ ಮಾತನಾಡುತ್ತಾ “ಸಂಪ್ರದಾಯ ಮತ್ತು ಅಧುನಿಕತೆಯ ನಡುವಿನ ಸಂಘರ್ಷದಿಂದ ಕಥೆಗಳು ಹುಟ್ಟುತ್ತವೆ. ಸಾಮಾಜಿಕ ಅಸಮಾನತೆ, ವೈಷಮ್ಯ, ಕೌಟುಂಬಿಕ ಕಲಹ, ಧಾರ್ಮಿಕ ಡಾಂಭಿಕತೆ ಮೊದಲಾದವುಗಳನ್ನು ವಸ್ತುವಾಗುಳ್ಳ ಕತೆಗಳನ್ನು ಸುಂದರವಾಗಿ ಹೆಣೆದಿರುವ ಕಥೆಗಳು ರಾಜಶ್ರೀ ಟಿ. ರೈ ಪೆರ್ಲ ಇವರ ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ಸಂಕಲನದಲ್ಲಿದೆ” ಎಂದರು. ಪ್ರಾಧ್ಯಾಪಕರಾದ ಪ್ರೊ. ಸೋಮಣ್ಣ ಹೊಂಗಳ್ಳಿ ಅವರು ಕೃತಿಯ ಕುರಿತು ಮಾತನಾಡಿ, “ಕನ್ನಡ ಕಥಾಸಾಹಿತ್ಯದ ಇತಿಹಾಸ ಬಹಳ ಶ್ರೀಮಂತವಾದುದು. ಲೇಖಕಿ ರಾಜಶ್ರೀ ರೈ ಇವರು…

Read More