Author: roovari

ಬೆಂಗಳೂರು : ಬೆಂಗಳೂರಿನಲ್ಲಿ ನೃತ್ಯ ಚಟುವಟಿಕೆಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ. ಪ್ರತಿನಿತ್ಯ ಹಲವಾರು ನೃತ್ಯಶಾಲೆಗಳು- ಕಲಾವಿದರು ಒಂದಲ್ಲ ಒಂದುಕಡೆ ನೃತ್ಯ ಪ್ರದರ್ಶನ ನೀಡುತ್ತಲೇ ಇರುತ್ತಾರೆ. ಕೇವಲ ವೇದಿಕೆಯ ಮೇಲೆ ನೃತ್ಯ ಪ್ರದರ್ಶನವೊಂದೇ ನೃತ್ಯಕಲಾವಿದರ ಗುರಿಯಾಗಬಾರದು. ಪ್ರದರ್ಶನಕ್ಕೆ ಅಗತ್ಯವಾದ ಉತ್ತಮ ಶಿಕ್ಷಣ -ಅಭ್ಯಾಸವಷ್ಟೇ ಆಗದೇ, ಜ್ಞಾನಾರ್ಜನೆಯ ಸಮಗ್ರ ಬೆಳವಣಿಗೆಯ ಕಡೆ ಆದ್ಯ ಗಮನ ನೀಡಬೇಕಾದ್ದು ಅವಶ್ಯ ಎಂಬುದನ್ನು ಮನಗಾಣಿಸುವುದು ‘ಸಾಧನ ಸಂಗಮ’ದ ಹಲವಾರು ನೃತ್ಯೋತ್ಸವಗಳು. ಈ ನಿಟ್ಟಿನಲ್ಲಿ ಕಳೆದ ಎರಡೂವರೆ ದಶಕಗಳಿಂದ ಸಾಧನ ಸಂಗಮ, ಕಾಲ ಕಾಲಕ್ಕೆ ಹೊಸ ಚಿಂತನೆಗಳು, ಪ್ರಯೋಗ-ಪ್ರಯತ್ನಗಳಿಂದ ನೂತನ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ. ಬಸವೇಶ್ವರ ನಗರದಲ್ಲಿರುವ ಈ ಖ್ಯಾತ ನೃತ್ಯ ಸಂಸ್ಥೆ ‘ಸಾಧನ ಸಂಗಮ’ದ ಹಿಂದಿನ ಧೀ ಶಕ್ತಿ, ಅನುಭವ ಭಂಡಾರ ಖ್ಯಾತ ನೃತ್ಯಜ್ಞೆ ವಿದುಷಿ ಜ್ಯೋತಿ ಪಟ್ಟಾಭಿ ರಾಮ್ ಅವರದು. ಅವರದು ಸಮಗ್ರ ದೃಷ್ಟಿ, ಅಂತಸ್ಸತ್ವ ಬೆಳೆಸುವ ಸುತ್ಯಾರ್ಹ ಪ್ರಯತ್ನ. ಪುಟ್ಟ ಮಕ್ಕಳ ನೃತ್ಯ ಸಾಮರ್ಥ್ಯವನ್ನು ಬೆಳೆಸುವ ದೃಷ್ಟಿಯಿಂದ ವೇದಿಕೆ ಒದಗಿಸಿ, ಅನೇಕ ಬಗೆಯಲ್ಲಿ ಅವರ…

Read More

ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ಪ್ರಸ್ತುತ ಪಡಿಸುವ ಗಾಯನ ಸಂಗೀತ ಕಾರ್ಯಾಗಾರವು ದಿನಾಂಕ 24, 25, 31 ಜನವರಿ ಮತ್ತು 01 ಫೆಬ್ರುವರಿ 2026ರಂದು (ಶನಿವಾರ ಮತ್ತು ಭಾನುವಾರ) ಸಂಜೆ 8-00 ಗಂಟೆಯಿಂದ 9-15ರವೆರೆಗೆ ಆನ್ ಲೈನ್ ನಲ್ಲಿ ನಡೆಯಲಿದೆ. ಸಂಗೀತ ಕಲಾ ಆಚಾರ್ಯ ವಿದುಷಿ ಪ್ರಾರ್ಥನಾ ಸಾಯಿ ನರಸಿಂಹನ್ ಇವರು ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ವಿವಿಧ ಸಂಯೋಜಕರ ತಮಿಳು ಕೃತಿಗಳನ್ನು ಕಲಿಸಲಾಗುವುದು. ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಾಗಿ 74119 16098 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಸವದತ್ತಿ : ಕೇಂದ್ರ ಸಂಸ್ಕೃತಿ ಸಚಿವಾಲಯ ನವ ದೆಹಲಿ ಭಾರತ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ (ರಿ.) ಸವದತ್ತಿ ಇವರು ಪ್ರಸ್ತುತ ಪಡಿಸುವ ‘ಪರಸಗಡ ನಾಟಕೋತ್ಸವ 2026’ವನ್ನು ದಿನಾಂಕ 24 ಜನವರಿ 2026ರಿಂದ 02 ಫೆಬ್ರುವರಿ 2026ರವರೆಗೆ ಸಂಜೆ 7-00 ಗಂಟೆಗೆ ಸವದತ್ತಿ ಕೋಟೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 24 ಜನವರಿ 2026ರಂದು ಝಕೀರ ನದಾಫ ಇವರ ರಚನೆ ಮತ್ತು ನಿರ್ದೇಶನದಲ್ಲಿ ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ (ರಿ.) ತಂಡದವರಿಂದ ‘ಬಿರುಕು’, ದಿನಾಂಕ 25 ಜನವರಿ 2026ರಂದು ಝಕೀರ ನದಾಫ ಇವರ ರಚನೆ ಮತ್ತು ನಿರ್ದೇಶನದಲ್ಲಿ ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ (ರಿ.) ತಂಡದವರಿಂದ ‘ಮಾಂತ ಮಲ್ಲಯ್ಯ’, ದಿನಾಂಕ 26 ಜನವರಿ 2026ರಂದು ಡಾ. ಪ್ರಕಾಶ ಗರುಡ ಇವರ ರಂಗ ರೂಪ ಮತ್ತು ನಿರ್ದೇಶನದಲ್ಲಿ ಧಾರವಾಡದ ರಂಗಾಯಣ ತಂಡದವರಿಂದ ‘ಕಂದಗಲ್ಲರಿಗೆ…

Read More

ಬೆಂಗಳೂರು : ಬೆಂಗಳೂರು ಹಬ್ಬ 2026’ರ ಭಾಗವಾಗಿ ಕಲಾವಿಲಾಸಿ ತಂಡದ ಕಲಾವಿದರು ಪ್ರಸ್ತುತ ಪಡಿಸುವ ಪಿ. ಲಂಕೇಶ್ ಅವರ ‘ಕ್ರಾಂತಿ ಬಂತು # ಕ್ರಾಂತಿ’ ನಾಟಕ ಪ್ರದರ್ಶನವನ್ನು ದಿನಾಂಕ 20 ಜನವರಿ 2026ರಂದು ಸಂಜೆ 7-00 ಗಂಟೆಗೆ ಬೆಂಗಳೂರು ಜಯನಗರದ ಯುವಕ ಸಂಘದಲ್ಲಿ ಆಯೋಜಿಸಲಾಗಿದೆ. ಯುವ ನಿರ್ದೇಶಕ ಅಭಿಷೇಕ ಚಕ್ರಣ್ಣವರ ನಿರ್ದೇಶಿಸುತ್ತಿರುವ ನಾಟಕವನ್ನು ಹಿರಿಯ ರಂಗಕರ್ಮಿ ಮಹಾದೇವ ಹಡಪದ ಇವರು ವಿನ್ಯಾಸ ಮಾಡಿದ್ದಾರೆ. ನಾಟಕದ ಅವಧಿ 110 ನಿಮಿಷಗಳು. ಹೆಚ್ಚಿನ ಮಾಹಿತಿಗೆ 9739398819 ಸಂಖ್ಯೆಗೆ ಕರೆ ಅಥವಾ ವಾಟ್ಸಪ್‌ ಮಾಡಬಹುದು. ‘ಕ್ರಾಂತಿ ಬಂತು # ಕ್ರಾಂತಿ’ ನಾಟಕವನ್ನು ಸಾಹಿತಿ ಪಿ. ಲಂಕೇಶ್‌ ಅವರ ‘ಕ್ರಾಂತಿ ಬಂತು ಕ್ರಾಂತಿ’ ನಾಟಕದ ಪಠ್ಯವನ್ನು ಪ್ರಸ್ತುತಕ್ಕೆ ಅಳವಡಿಸಿಕೊಂಡು ಕಟ್ಟಲಾಗಿದೆ. ಈ ನಾಟಕವು ಮೊದಲ ಬಾರಿಗೆ ಪ್ರಕಟವಾಗಿದ್ದು 1971ರಲ್ಲಿ. ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳಲ್ಲಿ ಅಂದಿಗೂ – ಇಂದಿಗೂ ಸಾಕಷ್ಟು ಬದಲಾವಣೆಗಳು ಕಂಡುಬಂದರೂ, ಆ ಬದಲಾದ ಪರಿಸ್ಥಿತಿಗಳು ತಮ್ಮ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿರುವುದು ನೋವಿನ ಸಂಗತಿ.…

Read More

ವಿಜಯಪುರ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಇವರ ಸಹಯೋಗದಲ್ಲಿ ವಿಜಯಪುರ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 20 ಮತ್ತು 21 ಜನವರಿ 2026ರಂದು ಹಿಟ್ಟಿನಹಳ್ಳಿ ಶ್ರೀ ಶಿವಮೂರ್ತಿ ಸ್ವಾಮಿ ಚರಂತಿಮಠ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಸೋಮಲಿಂಗ ಗೆಣ್ಣೂರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

Read More

ಸುಮಾರು ಐದು ದಶಕದ ಸಾಹಿತ್ಯ ಹಾದಿಯಲ್ಲಿ ಮಾಲತಿ ಪಟ್ಟಣಶೆಟ್ಟಿಯವರದ್ದು ಸಹಜ ನಡಿಗೆ. ನದಿ ತನ್ನ ತೆಕ್ಕೆಗೆ ಸಿಕ್ಕಿದ್ದನ್ನು ಸೆಳೆದುಕೊಂಡು ಹರಿಯುವಂತೆ ಇವರ ಕಾವ್ಯವು ಕಾಲದ ಸ್ಪಂದನೆಗೆ ಹೊಂದಿಕೆಯಾಗುವ ವಿಚಾರಗಳನ್ನು ತಮ್ಮ ಕಾವ್ಯದಲ್ಲಿ ಅಳವಡಿಸಿಕೊಂಡು ಮುನ್ನಡೆದಿದ್ದಾರೆ. ‘ಬಾಳೆಂಬ ವ್ರತ’ (2018) ಸಂಕಲನದಲ್ಲಿ ವ್ಯಷ್ಟಿಗಿಂತ ಸಮಷ್ಟಿಯ ಕಡೆ ಗಮನವಿದೆ. ಮೊದಲ ಸಂಕಲನದಲ್ಲಿ ವೈಯಕ್ತಿಕ ನೋವೇ ಕೇಂದ್ರವಾಗಿದ್ದರೆ ನಂತರದ ಕೃತಿಗಳಲ್ಲಿ ವೈಯಕ್ತಿಕ ನೋವಿನ ಮೂಲಕ ಸಾಮಾಜಿಕತೆಯತ್ತ ಮುಖ ಮಾಡಿದ ಕವನಗಳಿವೆ. ಆದರೆ ಇಲ್ಲಿ ವೈಯಕ್ತಿಕ ತವಕ ತಲ್ಲಣಗಳಿಗಿಂತ ಹೆಚ್ಚಾಗಿ ಸಮಾಜದ ಜ್ವಲಂತ ವಿದ್ಯಮಾನಗಳಿಗೆ ಮುಖಾಮುಖಿಯಾಗುವ ತುಡಿತವಿದೆ. ಕವಿತೆಗಳನ್ನು ಬರೆಯದೆ ಮನೆಯ ಹಿತ್ತಿಲು ಮೂಲೆಯಲ್ಲೊಂದು ಸಸಿ ನೆಟ್ಟು ನೀರೆರೆದು ಕಣ್ಣಿಟ್ಟು ಬೆಳೆಸಿದ್ದರೆ ನೂರು ಗರಿ ಬಿಚ್ಚಿದ ನವಿಲಂತೆ ಕಣ್ಣ ತುಂಬುವ ಹಚ್ಚನೆ ಮರವಾಗಿ ಕುಣಿಯುತ್ತಿತ್ತು ಸಾರ್ಥಕತೆಯ ಕಣ್ಣೀರು ತುಂಬುತ್ತಿತ್ತು (ಹೃದಯವಂತಿಕೆ, ಪುಟ 1) ಪುಟ್ಟ ಸೇವೆಗೆ ಬೆಟ್ಟದಂಥ ಸಾರ್ಥಕತೆ! ಇಲ್ಲಿ ಜೀವಪರ ನಿಲುವು ಪ್ರಾಯೊಗಿಕ ರೂಪವನ್ನು ತಾಳಬೇಕಾದ ಅಗತ್ಯವನ್ನು ಕಾಣುತ್ತೇವೆ. ಕುಳಿತುಕೊಂಡು ಬರೆಯುವುದು, ಸಾಮಾಜಿಕ ಕಳಕಳಿಯನ್ನು ಮರೆಯುವುದು…

Read More

ಮಂಗಳೂರು : ಮಂಗಳೂರು ರಾಮಕೃಷ್ಣ ಮಿಷನ್‌ನ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ದಿನಾಂಕ 13 ಜನವರಿ 2026ರಂದು ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ‘ಶಕ್ತಿ’ ಮಹಿಳಾ ಸಬಲೀಕರಣ ವಿಚಾರ ಸಂಕಿರಣ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಜೆ.ವಿ. ಗ್ರೂಪ್ ಆಫ್ ಕಂಪನಿಯ ನಿರ್ದೇಶಕರಾದ ಆತ್ಮಿಕಾ ಅಮೀನ್‌ “ನಮಗೆ ಜೀವನದಲ್ಲಿ ಹಲವಾರು ಅವಕಾಶಗಳು ಸಿಗುತ್ತವೆ. ಅವುಗಳನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ಯುವತಿಯರು ತಮ್ಮ ವಿದ್ಯಾಭ್ಯಾಸವನ್ನು ಸಂಪೂರ್ಣಗೊಳಿಸಿದ ಬಳಿಕ ಉದ್ಯಮದ ಕಡೆಗೆ ಮುಖ ಮಾಡಬೇಕಾದ ಅಗತ್ಯವಿದೆ. ಮಹಿಳೆಯರಲ್ಲಿ ಅಂತರ್ಗತವಾದ ಕೌಶಲ್ಯವಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಪ್ರತಿಯೊಬ್ಬರು ಗಮನಹರಿಸಬೇಕು. ಉದ್ಯಮಶೀಲತೆ ಎಂದರೆ ಸೋಲುಗಳನ್ನು ಸ್ವೀಕರಿಸಿ ಅದರಲ್ಲಿ ಮುಂದುವರಿಯುವುದು. ಸಾಮಾಜಿಕ ಜಾಲತಾಣದ ಮೂಲಕ ಹಲವಾರು ಮಾಹಿತಿಗಳು ಇಂದು ನಮಗೆ ಸಿಗುತ್ತದೆ. ಹಲವಾರು ಅವಕಾಶಗಳು ನಮ್ಮ ಮುಂದಿವೆ. ಅವುಗಳನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಾಗಿದೆ. ಇಂದು ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ನಾವು ಉನ್ನತ ಸ್ಥಾನಕ್ಕೇರಬೇಕಾದರೆ ಗುರಿಯನ್ನು ತಲುಪುವ ಬಲವಾದ ಆತ್ಮಸ್ಥೈರ್ಯ ನಮ್ಮಲ್ಲಿರಬೇಕು. ದೊಡ್ಡ…

Read More

ಹಾವೇರಿ : ಹಾವೇರಿಯ ಪ್ರತಿಮಾನ ಸಾಹಿತ್ಯ ಸಂಘವು ದಿನಾಂಕ 07 ಮತ್ತು 08 ಫೆಬ್ರವರಿ 2026ರಂದು ಕಾಗಿನೆಲೆಯಲ್ಲಿ ಎರಡು ದಿನಗಳ ರಾಜ್ಯಮಟ್ಟದ ಕಥಾ ಕಮ್ಮಟ ಆಯೋಜಿಸಿದೆ. ಈ ಕಥಾ ಕಮ್ಮಟಕ್ಕೆ ಮುಕ್ತ ಪ್ರವೇಶವಿದ್ದು, ಆಸಕ್ತ ಲೇಖಕ/ಕಿಯರು, ಓದುಗರು ಮತ್ತು ಸಹೃದಯರು ನಿಯಾಮಾನುಸಾರವಾಗಿ ಅರ್ಜಿ ಸಲ್ಲಿಸಿ, ಭಾಗವಹಿಸಬಹುದು. ನಿಯಮಗಳು : ಹಾವೇರಿ ಜಿಲ್ಲೆಯ ಖ್ಯಾತ ಪ್ರವಾಸಿ ತಾಣವಾದ ಕಾಗಿನೆಲೆಯಲ್ಲಿ ಫೆಬ್ರವರಿ 07 ಮತ್ತು 08ರಂದು ಈ ಕಥಾ ಕಮ್ಮಟ ನಡೆಯಲಿದೆ. ಈ ಕಥಾ ಕಮ್ಮಟಕ್ಕೆ ಮುಕ್ತ ಪ್ರವೇಶಿಸಿದ್ದು, ಲೇಖಕ/ಕಿಯರು, ಓದುಗರು ಮತ್ತು ಸಹೃದಯರು ಇದರಲ್ಲಿ ಭಾಗವಹಿಸಬಹುದು. ಎರಡು ದಿನಗಳ ಈ ಕಥಾ ಕಮ್ಮಟಕ್ಕೆ ರೂ.600/- ಫೀಸು ಇದ್ದು ವಿದ್ಯಾರ್ಥಿಗಳಿಗೆ ರೂ.400/- ಫೀಸು ಇರಲಿದೆ. ಕಥಾ ಕಮ್ಮಟದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ತಿಂಡಿ, ಊಟ ಮತ್ತು ವಸತಿ ವ್ಯವಸ್ಥೆ (ಹಾಸಿಗೆ ಮತ್ತು ಹೊದಿಕೆಯನ್ನು ಶಿಬಿರಾರ್ಥಿಗಳೇ ತರಬೇಕು) ಇರಲಿದೆ. ಎಲ್ಲ ಶಿಬಿರಾರ್ಥಿಗಳಿಗೆ ಲೇಖನ ಸಾಮಗ್ರಿ ಮತ್ತು ಪುಸ್ತಕಗಳ ಕಿಟ್ ವೊಂದನ್ನು ನೀಡಲಾಗುವುದು. ಆಸಕ್ತರು ದಿನಾಂಕ 04 ಫೆಬ್ರವರಿ…

Read More

ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘವು ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ 12ನೇ ಶತಮಾನದ ವಚನಕಾರ್ತಿಯರ ಕುರಿತಾದ ಒಂದು ದಿನದ ಕಮ್ಮಟವನ್ನು ದಿನಾಂಕ 28 ಫೆಬ್ರವರಿ 2026ರಂದು ಬೆಂಗಳೂರಿನ ಜೆ.ಎಸ್.ಎಸ್. ಸಭಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಕಮ್ಮಟಕ್ಕೆ 40 ಜನರನ್ನು ಮಾತ್ರ ಆಯ್ಕೆ ಮಾಡಲಾಗುವುದು ಮತ್ತು 40 ವಯಸ್ಸಿನ ಒಳಗಿರುವ ಯುವ ಬರಹಗಾರ್ತಿಯರಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಬೇಕಾದ ಇಮೇಲ್ ವಿಳಾಸ : [email protected] ನಿಮ್ಮ ಅರ್ಜಿಯಲ್ಲಿ ಒಳಗೊಂಡಿರಬೇಕಾದ ವಿವರಗಳು : ವಿಳಾಸ, ಸಂಪರ್ಕ ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ಐ.ಡಿ.ಗಳನ್ನು ತಪ್ಪದೇ ಕಳಿಸಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15 ಫೆಬ್ರವರಿ 2026. ಹೆಚ್ಚಿನ ಮಾಹಿತಿಗಾಗಿ ಕಮ್ಮಟದ ಸಂಚಾಲಕರು : ಇಂದಿರಾ ಶಿವಣ್ಣ 98455 35026 ಮತ್ತು ಡಾ. ಮುಕ್ತಾ ಬಿ. ಕಾಗಲಿ 9845689845 ಇವರನ್ನು ಸಂಪರ್ಕಿಸಿರಿ. ಪ್ರೊ. ಆರ್. ಸುನಂದಮ್ಮ ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ (ರಿ.) ಬೆಂಗಳೂರು.

Read More

ಕಿನ್ನಿಗೋಳಿ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಇಯಾನ್ ಕೇರ್ಸ್ ಫೌಂಡೇಶನ್ ಇವರ ಸಹಯೋಗದೊಂದಿಗೆ ದಿನಾಂಕ 15 ಜನವರಿ 2026ರಂದು ಕಿನ್ನಿಗೋಳಿಯಲ್ಲಿ ‘ಆಜ್ ಆಮಿ ಕೊಂಕ್ಣಿ ಉಲೊವ್ಯಾಂ’ ಎಂಬ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಹಮ್ಮಿಕೊಂಡಿತ್ತು. ಮೊದಲಿಗೆ ಮೂರುಕಾವೇರಿ ಜಂಕ್ಷನ್ನಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆರಂಭವಾದ ಭವ್ಯ ಮೆರವಣಿಗೆಯು ಹೆಚ್ಚಿನ ಮೆರುಗನ್ನು ನೀಡಿತು. ಕಿನ್ನಿಗೋಳಿ ಪರಿಸರದ ಹಿರಿಯರಾದ ಶ್ರೀಮತಿ ಕಾರ್ಮಿಣ್ ರೊಡ್ರಿಗಸ್ಯವರು ಅಕ್ಕಿ ಮುಡಿಯಿಂದ ಅಕ್ಕಿಯನ್ನು ಹೊರ ತೆಗೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು. ಇಯಾನ್ ಕೇರ್ಸ್ ಫೌಂಡೇಶನ್ನ ಸಂಸ್ಥಾಪಕರಾದ ಶ್ರೀ ಹೇಮಾಚಾರ್ಯರವರು ವೇದಿಕೆಯಲ್ಲಿದ್ದರು. ಮಕ್ಕಳಿಗೆ ಪ್ರಕೃತಿಯ ಒಡನಾಟ ಗಳಿಸುವುದಕ್ಕಾಗಿ ಕಾಡಿನ ಸುತ್ತಾಟವನ್ನು ಹಮ್ಮಿಕೊಂಡು ವಿಧ ವಿಧದ ಮರ-ಗಿಡಗಳು, ಹೂವು- ಬಳ್ಳಿಗಳು, ಔಷದೀಯ ಸಸ್ಯಗಳು, ಪ್ರಾಣಿ- ಪಕ್ಷಿಗಳು, ಕ್ರಿಮಿ-ಕೀಟಗಳು ಹಾಗೂ ಮನುಷ್ಯ ಸಂಬಂಧಗಳ ಬಗ್ಗೆ ಕೊಂಕಣಿ ಹೆಸರುಗಳನ್ನು ಮನವರಿಕೆ ಮಾಡಲಾಯಿತು. ತದನಂತರ ಮಕ್ಕಳಿಗೆ ಹಲವಾರು ಸ್ಪರ್ಧೆಗಳನ್ನು ಹಮ್ಮಿಕೊಂಡು…

Read More