Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಮಾಂಡ್ ಸೊಭಾಣ್ ಆಯೋಜಿಸಿದ ಮಕ್ಕಳ ವಸತಿಯುತ ರಜಾ ಶಿಬಿರ ‘ಕಾಜಳ್’ (ಕಣ್ಣ ಕಾಡಿಗೆ) ಇದರ ಸಮಾರೋಪ ದಿನಾಂಕ 04 ಮೇ 2025ರಂದು ಕಲಾಂಗಣದಲ್ಲಿ ನೆರವೇರಿತು. ಮುಖ್ಯ ಅತಿಥಿ ಸಂತ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಡಾ. ವೆನಿಸ್ಸಾ ಎ.ಸಿ. ಇವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು. ‘ಒಂದೆರಡು ದಿನ ಶಿಬಿರ ನಡೆಸುವಾಗ ಸುಸ್ತಾಗುವ ಸಂದರ್ಭದಲ್ಲಿ ಹತ್ತು ದಿನ ವಸತಿ ಶಿಬಿರ ನಡೆಸುವುದು ಬಹು ದೊಡ್ಡ ಸಂಗತಿ. ಶಿಬಿರದಲ್ಲಿ ಮಾತೃಭಾಷೆ ಕೊಂಕಣಿಗೆ ಮಹತ್ವ ನೀಡಿದ್ದಾರೆ. ವಿವಿಧ ಸ್ಥಳಗಳಿಂದ ಬಂದ ನೀವು ಒಬ್ಬರನ್ನೊಬ್ಬರು ಅರಿತು ತಂಡದ ಮನೋಭಾವ ಬೆಳೆಸಿದ್ದೀರಿ. ನಿಮಗಿದು ಮುಂದಿನ ಜೀವನದಲ್ಲಿ ಸಹಕಾರಿಯಾಗಲಿ. ನಿಮಗೂ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಗೆ ಶುಭ ಹಾರೈಸುತ್ತೇನೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ರಿಯೊನಾ ಡಿಸೋಜ ಕೆಲರಾಯ್ (ಕೊಂಕಣಿ ಶ್ರೇಷ್ಟ), ಪ್ರಿನ್ಶೆಲ್ ಪಿರೇರಾ ಕುಲ್ಶೇಕರ್ (ನೃತ್ಯ ಶ್ರೇಷ್ಟ), ಸಿಯೊನಾ ಡಿಕುನ್ಹಾ ಕುಲ್ಶೇಕರ್ (ನಾಟಕ ಶ್ರೇಷ್ಟ), ಆಸ್ಟನ್ ಲೆಸ್ಟರ್ ಫೆರ್ನಾಂಡಿಸ್ ಅಮ್ಮುಂಜೆ (ಗಾಯಾನ ಶ್ರೇಷ್ಟ)…
ದಾವಣಗೆರೆ : ರಂಗಮಿಡಿತ (ರಿ.) ಇದರ ವತಿಯಿಂದ 9ನೇ ‘ಚಿಣ್ಣರ ಚಿಗುರು’ ಎರಡು ದಿನಗಳ ಮಕ್ಕಳ ಬೇಸಿಗೆ ಶಿಬಿರವನ್ನು ದಿನಾಂಕ 10 ಮತ್ತು 11 ಮೇ 2025ರಂದು ಬೆಳಗ್ಗೆ 10-00ರಿಂದ ಸಂಜೆ 4-00 ಗಂಟೆ ತನಕ ಗೊಪ್ಪೇನಹಳ್ಳಿ ಪಾಂಡೋಮಟ್ಟಿಯ ಶ್ರೀ ರುದ್ರೇಶ್ವರ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿದೆ. ಈ ಶಿಬಿರವು ಸಂಪೂರ್ಣವಾಗಿ ಉಚಿತವಾಗಿದ್ದು, 4ರಿಂದ 10ನೇ ತರಗತಿಯ ಮಕ್ಕಳು ಭಾಗವಹಿಸಬಹುದು. ಕ್ಯೂಆರ್ ಕೋಡ್ ಲಿಂಕ್ ಬಳಸಿ ದಿನಾಂಕ 08 ಮೇ 2025ರ ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ 9481986116 ಸಂಖ್ಯೆಯನ್ನು ಸಂಪರ್ಕಿಸಿರಿ.
ಕಾಸರಗೋಡು : ಕಾಸರಗೋಡಿನ ಭರವಸೆಯ ಕವಯತ್ರಿ ಮೇಘಾ ಶಿವರಾಜ್ ಇವರ ಕವನ ಸಂಕಲನವನ್ನು ಕನ್ನಡ ಭವನದ ರೂವಾರಿಯಾಗಿರುವ ಸಂದ್ಯಾ ರಾಣಿ ಟೀಚರ್ ಇವರು ಕನ್ನಡ ಭವನ ಪ್ರಕಾಶದ ಮೂಲಕ ಕೃತಿ ಪ್ರಕಟಿಸಿದ್ದು, ದಿನಾಂಕ 27 ಏಪ್ರಿಲ್ 2025ರಂದು ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ನಡೆದ ‘ಬೇಕಲ ರಾಮನಾಯಕ ಸ್ಮರಣಾಂಜಲಿ’ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಮಕ್ಷತ್ರಿಯ ಸಂಘಗಳ ಒಕ್ಕೂಟ ಗೌರವ ಅಧ್ಯಕ್ಷರಾಗಿರುವ ಡಾ. ರವೀಂದ್ರ ಜೆಪ್ಪು ಇವರು ರಾಮರಾಜ ಕ್ಷತ್ರಿಯ ಸೇವಾ ಸಂಘ ಕಾಸರಗೋಡು ಜಿಲ್ಲಾ ಅಧ್ಯಕ್ಷರಾಗಿರುವ ಶ್ರೀ ಕಮಲಾಕ್ಷ ಕಲ್ಲುಗದ್ದೆಯವರಿಗೆ ಪುಸ್ತಕ ನೀಡುವ ಮೂಲಕ ‘ಮೌನ ಮಾತಾದಾಗ’ ಕೃತಿ ಬಿಡುಗಡೆಗೊಳಿಸಲಾಯಿತು. ಈ ಕೃತಿಗೆ ಮುನ್ನುಡಿ ಬರೆದ ಮಂಗಳೂರಿನ ಖ್ಯಾತ ಸಾಹಿತಿ, ಕವಿ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಇವರು ಕೃತಿ ಪರಿಚಯ ಮಾಡಿದರು. ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷರೂ ಸಾಹಿತ್ಯ ಪರಿಚಾರಕರಾದ ಶ್ರೀ ಶಶಿಧರ್ ನಾಯ್ಕ್ ಬೆನ್ನುಡಿ ಬರೆದು ಲೇಖಕಿಯನ್ನು ಹರಸಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ಭವನ…
ಬೆಂಗಳೂರು : ಕಪ್ಪಣ್ಣ ಅಂಗಳ ಇದರ ವತಿಯಿಂದ 89ನೇ ಶಾಸ್ತ್ರೀಯ ನೃತ್ಯ ‘ನೃತ್ಯ ಭಾನು’ ಕಾರ್ಯಕ್ರಮವನ್ನು ದಿನಾಂಕ 09 ಮೇ 2025ರಂದು ಸಂಜೆ 06-30 ಗಂಟೆಗೆ ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ಆಯೋಜಿಸಲಾಗಿದೆ. ಇದು ಶಾಂತಲಾ ನಾಟ್ಯ ಸಿರಿ ಪುರಸ್ಕೃತ ಗುರು ಬಿ. ಭಾನುಮತಿ ಇವರಿಗೆ ಸಮರ್ಪಿತ ಉತ್ಸವವಾಗಿದೆ. ಗುರುಗಳಾದ ನಂದಿನಿ ಮೆಹ್ತಾ ಮತ್ತು ಮುರಳಿ ಮೋಹನ್ ಕಲ್ವಾಕಾಲ್ವ ಇವರ ಶಿಷ್ಯೆ ಸೌಮ್ಯ ರವಿ ಇವರಿಂದ ‘ಕಥಕ್’ ಮತ್ತು ಗುರು ಸೀತಾ ಗುರುಪ್ರಸಾದ್ ಮತ್ತು ಗುರು ಬಿ. ಭಾನುಮತಿ ಇವರ ಶಿಷ್ಯೆ ಭುವನಾ ಜಿ. ಪ್ರಸಾದ್ ಇವರಿಂದ ‘ಭರತನಾಟ್ಯ’ ಪ್ರದರ್ಶನ ನಡೆಯಲಿದೆ.
ತೀರ್ಥಹಳ್ಳಿ : ಲೇಖಕ ಕಡಿದಾಳ್ ಪ್ರಕಾಶ್ ಇವರು ಬರೆದಿರುವ ‘ನನ್ನೂರಿನ ಶ್ರೀಸಾಮಾನ್ಯರು’ ಕೃತಿಯು ದಿನಾಂಕ 03 ಮೇ 2025ರಂದು ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ಜರಗಿದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು. ಪದ್ಮಶ್ರೀ ಪುರಸ್ಕೃತ ಹಾಗೂ ಸ್ವರ್ಣಕಮಲ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಕೃತಿ ಬಿಡುಗಡೆಗೊಳಿಸಿ “ಈ ಕೃತಿಯಲ್ಲಿ ಶ್ರೀಸಾಮಾನ್ಯರ ಕುರಿತ ನೋಟವನ್ನು ಬದಲಿಸುವ ಮತ್ತು ವಿಸ್ತರಿಸುವ ಸೊಗಸಾದ ಚಿತ್ರಣವಿದೆ. ಶ್ರೀಸಾಮಾನ್ಯರಲ್ಲೂ ಅಸಾಮಾನ್ಯ ಗುಣ ವಿಶೇಷಣಗಳಿರುವುದು ಚೆನ್ನಾಗಿ ಮೂಡಿಬಂದಿದೆ” ಎಂದರು. ಇದೇ ವೇದಿಕೆಯಲ್ಲಿ ‘ನಾ ಕಂಡಂತೆ ತೇಜಸ್ವಿ – ಶಾಮಣ್ಣ’ ಕೃತಿಯ ಪರಿಷ್ಕೃತ ಆವೃತ್ತಿ (3ನೇ ಮುದ್ರಣ)ಯನ್ನು ಲೇಖಕ – ಪ್ರಕಾಶಕ ಜಿ.ಎನ್. ಮೋಹನ್ ಇವರು ಬಿಡುಗಡೆಗೊಳಿಸಿ “ಕಿಟಕಿಗಳ ಮೂಲಕ ತಮ್ಮ ತಮ್ಮ ತೇಜಸ್ವಿಯನ್ನು ಕಾಣುವುದಕ್ಕೆ ಎಲ್ಲರಿಗೂ ಈ ಕೃತಿ ಸಹಾಯವಾಗಲಿದೆ” ಎಂದು ಅಭಿಪ್ರಾಯಪಟ್ಟರು. ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ‘ಕಟ್ಟುವ ಹಾದಿಯಲ್ಲಿ… ಕುವೆಂಪು ಪ್ರತಿಷ್ಟಾನ: ಉಗಮ-ವಿಕಾಸ’ ಕೃತಿಯ ಕುರಿತಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು…
ಉಡುಪಿ : ಉಡುಪಿ ಕನ್ನರ್ಪಾಡಿಯ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ಸಹಯೋಗದಲ್ಲಿ ನೂತನವಾಗಿ ಆರಂಭಿಸಲಾದ ‘ಶ್ರೀ ಜಯದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾಮಂಡಳಿ’ಯು ದಿನಾಂಕ 30 ಏಪ್ರಿಲ್ 2025ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ “ಯಾವುದೇ ಪ್ರಕಾರದ ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ಕಲಾಸಕ್ತರನ್ನು ತೊಡಗಿಸಿಕೊಳ್ಳುವುದು ಅತೀ ಮುಖ್ಯ. ಈ ನಿಟ್ಟಿನಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಕರಾವಳಿ ಜಿಲ್ಲೆಗಳಲ್ಲಿ ಅತೀ ಹೆಚ್ಚು ಪ್ರೋತ್ಸಾಹ ಧಾರ್ಮಿಕ ಕೇಂದ್ರಗಳಿಂದ ಸಿಗುತ್ತಿರುವುದು ಸಂತೋಷದ ಸಂಗತಿ. ಈ ಹಿಂದೆ ಕಲೆಗಳಿಗೆ ರಾಜಾಶ್ರಯವಿತ್ತು. ಆದರೆ ಇಂದು ಸರಕಾರಗಳು, ಅಭಿಮಾನಿಗಳ ಪ್ರೋತ್ಸಾಹ ಯಕ್ಷಗಾನಕ್ಕೆ ಲಭ್ಯವಿದೆ. ಮಕ್ಕಳ ಯಕ್ಷಗಾನ, ಹಿರಿಯ ಕಲಾವಿದರ ಹೆಸರಿನಲ್ಲಿ ಸಪ್ತಾಹ, ಯಕ್ಷಗಾನ ತರಬೇತಿಯಂತಹ ಕಾರ್ಯಕ್ರಮಗಳಿಗೆ ಅಕಾಡೆಮಿ ಸಹಕಾರ ನೀಡುತ್ತಿದೆ. ಉಡುಪಿಯ ಯಕ್ಷಗಾನ ಕಲಾರಂಗ ಅಧ್ಯಕ್ಷ ಗಂಗಾಧರ ರಾವ್ ಅವರ ನೇತೃತ್ವದಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಇದೀಗ ಜಯಪ್ರಕಾಶ್ ಕೆದ್ಲಾಯ ಅವರ ಗೌರವಾಧ್ಯಕ್ಷತೆಯಲ್ಲಿ ನೂತನ ಯಕ್ಷಗಾನ ಕಲಾಮಂಡಳಿ ಅಸ್ವಿತ್ವಕ್ಕೆ…
ಮಲೆನಾಡಿನ ಹೊಸನಗರ ಭಾಗದಲ್ಲಿ “ಯಕ್ಷಗಾನ” ಎಂಬ ವಿಷಯ ಬಂದಾಗ ವಿಶೇಷವಾಗಿ ಗುರುತಿಸಲ್ಪಡುವ ಊರು ನಾಗರಕೊಡಿಗೆ. ಯಕ್ಷಗಾನದ ಜೊತೆಗಿನ ನಾಗರಕೊಡಿಗೆಯ ಈ ಪರಂಪರೆಯ ಮುಂದುವರೆದ ಭಾಗವಾಗಿ ಕಾಣಿಸಿಕೊಳ್ಳುವ ಉದಯೋನ್ಮುಖ ಯುವ ಕಲಾವಿದ ಸಚಿನ್ ಶೆಟ್ಟಿ ನಾಗರಕೊಡಿಗೆ. ಸಂತೋಷ ಶೆಟ್ಟಿ ಹಾಗೂ ರತ್ನ ದಂಪತಿಗಳ ಸುಪುತ್ರನಾಗಿ 08.09.1998ರಂದು ನಾಗರಕೊಡಿಗೆಯಲ್ಲಿ ಸಚಿನ್ ಶೆಟ್ಟಿಯವರ ಜನನ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತ್ರಿಣಿವೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು “ಯು ಕಮಲಬಾಯಿ ಪ್ರೌಢಶಾಲೆ ಕಡಿಯಾಳಿ” ಉಡುಪಿ ಹಾಗೂ ಪದವಿಪೂರ್ವ ಶಿಕ್ಷಣವನ್ನು ಜೂನಿಯರ್ ಕಾಲೇಜು ಹೊಸನಗರ ಇಲ್ಲಿ ಪೂರೈಸಿದರು. ದ್ವಿತೀಯ PUC ಯವರೆಗೆ ವಿಧ್ಯಾಭ್ಯಾಸ. ಯಕ್ಷಗಾನ ಕಲಿಯುವ ಉದ್ದೇಶದಿಂದ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಉಡುಪಿಯಲ್ಲಿ ಸೇರಿ ಅಲ್ಲಿಯ ಶಿವಪ್ರಭಾ ಯಕ್ಷಗಾನ ಕಲಾಕೇಂದ್ರವನ್ನು ಸೇರಿ, ಅಲ್ಲಿ ಯಕ್ಷಗಾನ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣ ಹಾಗೂ ಐರೋಡಿ ಮಂಜುನಾಥ ಕುಲಾಲ್ ಇವರಿಂದ ಹೆಜ್ಜೆ ಕಲಿತು ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ನಂತರ ಪಿ.ಯು.ಸಿ ಓದುತ್ತಿರುವಾಗ ಕಾಲೇಜು ರಜಾ ದಿನಗಳಲ್ಲಿ ಗುತ್ಯಮ್ಮ ಮೇಳದಲ್ಲಿ…
ಉಡುಪಿ : ತುಳುಕೂಟ (ರಿ) ಉಡುಪಿ, ಪ್ರತಿ ವರ್ಷ ನೀಡುತ್ತಿರುವ ದಿ. ಎಸ್. ಯು. ಪಣಿಯಾಡಿ ಪ್ರಶಸ್ತಿಗೆ ಈ ವರ್ಷದಲ್ಲಿ ಮುಂಬೈಯ ಶ್ರೀಮತಿ ಶಾರದಾ ವಿ. ಅಂಚನ್ ಕೊಡವೂರು ಇವರ ‘ಅಕೇರಿದ ಎಕ್ಕ್’ ಹಸ್ತಪ್ರತಿಯು ಆಯ್ಕೆಯಾಗಿದೆ . ತುಳು ಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕೆಂಬ ಆಶಯದೊಂದಿಗೆ ತುಳು ಚಳುವಳಿಗೆ ಚಾಲನೆ ನೀಡಿದ ತುಳುವಿನ ಮೊದಲ ಕಾದಂಬರಿಕಾರ ಶ್ರೀ ಎಸ್. ಯು. ಪಣಿಯಾಡಿ ಇವರ ಸಾಧನೆಯನ್ನು ನೆನಪಿನಲ್ಲಿಟ್ಟುಕೊಳ್ಳುವ ಸದುದ್ದೇಶದಿಂದ ಕಳೆದ 30 ವರ್ಷಗಳಿಂದ ತುಳುಕೂಟ (ರಿ.) ಉಡುಪಿ ಇವರು ಪಣಿಯಾಡಿ ಪ್ರಶಸ್ತಿ ನೀಡುತ್ತಿದ್ದಾರೆ. ಈ ಸಲ ತೀರ್ಪುಗಾರರಾಗಿ ಶ್ರೀ ನಿತ್ಯಾನಂದ ಪಡ್ರೆ, ಶ್ರೀಮತಿ ಸುಲೋಚನಾ ಪಚ್ಚಿನಡ್ಕ ಹಾಗು ಶ್ರೀ ಪುತ್ತಿಗೆ ಪದ್ಮನಾಭ ರೈ ಸಹಕರಿಸಿದರು . ಈ ಬಾರಿಯ ಪಣಿಯಾಡಿ ಪುರಸ್ಕಾರಕ್ಕೆ ಆಯ್ಕೆಯಾದ ಬರಹಗಾರ್ತಿ ಶ್ರೀಮತಿ ಶಾರದಾ ಇವರು ಮೂಲತಃ ಉಡುಪಿ ಜಿಲ್ಲೆಯ ಕೊಡವೂರಿನವರು . ಸಾಹಿತ್ಯ ವಲಯದಲ್ಲಿ ಚಿರಪರಿಚಿತರು . ಬಿ ಎಸ್ಸಿ. ಹಾಗು ಡಿಪ್ಲೋಮ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆ “ಕರ್ಣ ಭೇದನ” ದಿನಾಂಕ 3 ಮೇ 2025 ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಯಲ್. ಯನ್. ಭಟ್ , ಸತೀಶ್ ಇರ್ದೆ , ಆನಂದ ಸವಣೂರು , ಪದ್ಯಾಣ ಶಂಕರನಾರಾಯಣ ಭಟ್ , ಮಾ. ಆದಿತ್ಯ ಕೃಷ್ಣ, ದ್ವಾರಕಾ, ಮಾ.ಅವಿನಾಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್ ( ಕರ್ಣ ) ಶುಭಾ ಜೆ ಸಿ ಅಡಿಗ (ಶ್ರೀ ಕೃಷ್ಣ ) ಮಾಂಬಾಡಿ ವೇಣುಗೋಪಾಲ ಭಟ್ ( ಕುಂತಿ ) ಅಚ್ಯುತ ಪಾಂಗಣ್ಣಾಯ ( ಸೂರ್ಯ ) ಸಹಕರಿಸಿದರು. ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿ ಗೌರವ ಕಾರ್ಯದರ್ಶಿ ಟಿ. ರಂಗನಾಥ ರಾವ್ ವಂದಿಸಿದರು. ಆನಂದ ಸವಣೂರು ಪ್ರಾಯೋಜಿಸಿದ್ದರು.
ಸುರತ್ಕಲ್ : ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಹಾಗೂ ಮಂಗಳೂರು ಘಟಕದ ವತಿಯಿಂದ ‘ಸಾಹಿತ್ಯ ಸಂಭ್ರಮ ಕವಿಗೋಷ್ಠಿ’ ಕಾರ್ಯಕ್ರಮವು ದಿನಾಂಕ 04 ಮೇ 2025ರಂದು ಸುರತ್ಕಲ್ ಇಲ್ಲಿನ ವಿರಾಟ್ ಸಭಾ ಭವನದಲ್ಲಿ ನಡೆಯಿತು. ಕ.ಸಾ.ಪ ಜಿಲ್ಲಾಧ್ಯಕ್ಷರಾದ ಶ್ರೀ ಎಂ. ಪಿ. ಶ್ರೀನಾಥ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಪ್ರಸಿದ್ಧ ಸಾಹಿತಿಗಳಾದ ಡಾ.ಇಂದಿರಾ ಹೆಗಡೆ ದೀಪ ಬೆಳಗಿಸಿ ಉದ್ಘಾಟಿಸಿರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ , ಪಿ. ದಯಾಕರ್ , ಮಂಗಳೂರು ಕ. ಸಾ. ಪ. ಅಧ್ಯಕ್ಷರಾದ ಮಂಜುನಾಥ ರೇವನ್ಕರ್, ವಿನಯ ಆಚಾರ್ ಸಹಿತ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೃಷ್ಣ ಮೂರ್ತಿ ಸುರತ್ಕಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭಾ ಕಾರ್ಯಕ್ರಮ ಹಾಗೂ ಗೀತ ಗಾಯನಗಳ ತರುವಾಯ ನಡೆದ ಕವಿಗೋಷ್ಠಿ ಯಲ್ಲಿ ವಿವಿಧ ರೀತಿಯ ಸ್ವರಚಿತ ಕಾವ್ಯ ವಾಚನವು ಸಭಿಕರನ್ನು ರಂಜಿಸಿತು. ರೇಮಂಡ್ ಡಿಕುನ್ಹಾ ತಾಕೊಡೆಯವರು ಸಕಾಲಿಕ ಕವನವನ್ನು, ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ. ಸುರೇಶ್ ನೆಗಳಗುಳಿ ಇವರು ಸುಮಧುರ ಗಜಲ್…