Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ನಿರಂಜನ 100 ವರ್ಷದ ನೆನಪಿನ ಉತ್ಸವ ಕಾರ್ಯಕ್ರಮವನ್ನು ದಿನಾಂಕ 22 ಫೆಬ್ರವರಿ 2025ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ತುಳು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ ಗಂಟೆ 11-45ಕ್ಕೆ ‘ನಿರಂಜನ ಇವರ ಬದುಕು ಬರಹ’ದ ಕುರಿತು ವಿಚಾರಗೋಷ್ಠಿ, ಮಧ್ಯಾಹ್ನ 12-30 ಗಂಟೆಗೆ ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳಿಂದ ‘ಪದರಂಗಿತ’, 2-00 ಗಂಟೆಗೆ ವಿದ್ಯಾರ್ಥಿ ಗೋಷ್ಠಿಯಲ್ಲಿ ನಿರಂಜನ ಇವರ ಸಾಹಿತ್ಯ ಹೊಸ ತಲೆಮಾರಿನ ದೃಷ್ಠಿಯಿಂದ ಎಂಬ ವಿಷಯದ ಬಗ್ಗೆ ಸಂವಾದ, 3-30 ಗಂಟೆಗೆ ವಿಚಾರಗೋಷ್ಠಿ, 4-30 ಗಂಟೆಗೆ ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ (ರಿ.) ಇವರಿಂದ ‘ಪದರಂಗಿತ’, ಸಂಜೆ 5-30 ಗಂಟೆಗೆ ಚಿರಸ್ಮರಣೆ…
ತುಮಕೂರು : ಪ್ರೊ. ಎಚ್.ಜಿ. ಸಣ್ಣಗುಡ್ಡಯ್ಯ ಪ್ರತಿಷ್ಠಾನ (ರಿ.) ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯ ಮತ್ತು ತುಮಕೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಾಪಕರ ಒಕ್ಕೂಟ ಇದರ ವತಿಯಿಂದ ‘ಪ್ರಶಸ್ತಿ ಪ್ರದಾನ ಸಮಾರಂಭ’ವನ್ನು ದಿನಾಂಕ 21 ಫೆಬ್ರವರಿ 2025ರಂದು ಮಧ್ಯಾಹ್ನ 12-00 ಗಂಟೆಗೆ ತುಮಕೂರು ವಿಶ್ವವಿದ್ಯಾನಿಲಯದ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು ಇವರು ವಹಿಸಲಿದ್ದು, ಬಹುಮುಖಿ ಸಂಸ್ಕೃತಿ ಚಿಂತಕರಾದ ಪ್ರೊ. ಬರಗೂರು ರಾಮ ಚಂದ್ರಪ್ಪ ಇವರು ಆಶಯ ನುಡಿಗಳನ್ನಾಡಲಿದ್ದಾರೆ. ಶ್ರೀ ರಘುನಾಥ ಚ. ಹ. ಮತ್ತು ಶ್ರೀಮತಿ ರೂಪ ಹಾಸನ ಇವರುಗಳಿಗೆ ಬೆಂಗಳೂರಿನ ಪ್ರಸಿದ್ಧ ವಿಮರ್ಶಕರಾದ ಡಾ. ಎಚ್.ಎಸ್. ರಾಘವೇಂದ್ರ ರಾವ್ ಇವರು ಪ್ರಶಸ್ತಿ ಪ್ರದಾನ ಮಾಡಲಿರುವರು.
ಕೊಡಗು : ರಂಗಮಂಡಲ ಬೆಂಗಳೂರು ಮತ್ತು ಕೊಡಗು ಕವಿ ಬಳಗ ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು ಜನಸಾಮಾನ್ಯರ ದನಿಯಾಗಲಿ ಕಾವ್ಯ ಈ ಕಾರ್ಯಕ್ರಮದ ಎಂಟನೇ ಕವಿಗೋಷ್ಠಿಯನ್ನು ದಿನಾಂಕ 23 ಫೆಬ್ರವರಿ 2025ರಂದು ಬೆಳಿಗ್ಗೆ 10-30 ಗಂಟೆಗೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕು, ಕೂಡ್ಲೂರು ಗ್ರಾಮದ ಪೂರ್ಣಚಂದ್ರ ಕುಟೀರದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ಕವಯತ್ರಿ ಹಾಗೂ ಬರಹಗಾರರಾದ ಸ್ಮಿತಾ ಅಮೃತರಾಜ್ ಇವರು ಕೊಡಗು ಜಿಲ್ಲೆಯ ಕಾವ್ಯ ಸಂಸ್ಕೃತಿ ಯಾನದ ಸರ್ವಾಧ್ಯಕ್ಷರಾಗಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಬೆಳಿಗ್ಗೆ 12-00 ಗಂಟೆಗೆ ಕವಿಗೋಷ್ಠಿ ಭಾಗ 01 ಸುನೀತಾ ಕುಶಾಲನಗರ ಹಾಗೂ ಮಧ್ಯಾಹ್ನ ಗಂಟೆ 2-45ಕ್ಕೆ ಕವಿಗೋಷ್ಠಿ ಭಾಗ 2 ಮೇಜರ್ ಕುಶ್ವಂತ್ ಕೋಳಿಬೈಲು ಇವರುಗಳ ಅಧ್ಯಕ್ಷತೆಯಲ್ಲಿ ಪ್ರಸ್ತುತಗೊಳ್ಳಲಿದೆ. ಮಧ್ಯಾಹ್ನ ಗಂಟೆ 1-45ಕ್ಕೆ ಸರ್ವಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, ಮಾಲಾ ಮೂರ್ತಿ ಕುಶಾಲನಗರ, ಶರ್ಮಿಳಾ ರಮೇಶ್, ಆಶಾ ಎಸ್.ಎಂ. ಸೋಮವಾರಪೇಟೆ, ಕೂಡು ಮಂಗಳೂರು ಸರ್ಕಾರಿ…
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ ಮತ್ತು ಮಿತ್ರ ಮಂಡಳಿ ಕೋಟ ಇದರ ಆಶ್ರಯದಲ್ಲಿ ಏಳು ಕೃತಿಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 23 ಫೆಬ್ರವರಿ 2025ರಂದು ಸಂಜೆ 3-30 ಗಂಟೆಗೆ ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡಾ. ಕಾರಂತ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಶ್ರೀ ಆನಂದ ಸಿ. ಕುಂದರ್ ಇವರ ಘನ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಹರಿಕೃಷ್ಣ ಪುನರೂರು ಮತ್ತು ಹಿರಿಯ ವಕೀಲರಾದ ಎ.ಎಸ್.ಎನ್. ಹೆಬ್ಬಾರ್ ಇವರು ಪುಸ್ತಕ ಲೋಕಾರ್ಪಣೆಗೊಳಿಸಲಿದ್ದು, ಶಿಕ್ಷಕರಾದ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಮಂಜುನಾಥ ಉಪಾಧ್ಯ, ಸಾಂಸ್ಕೃತಿಕ ಸಂಪನ್ಮೂಲರು ಸುಬ್ರಹ್ಮಣ್ಯ ಶೆಟ್ಟಿ, ಉಪನ್ಯಾಸಕರಾದ ಜಿ. ಸಂಜೀವ, ಸಾಹಿತಿ ಶ್ರೀಮತಿ ಪೂರ್ಣಿಮಾ ಕಮಲಶಿಲೆ ಇವರುಗಳು ಪುಸ್ತಕದ ಕುರಿತು ಮಾತನಾಡಲಿದ್ದಾರೆ. ನೀಲಾವರ ಸುರೇಂದ್ರ ಅಡಿಗ ಇವರ ‘ನೀಲೇಂದ್ರ ವಾಣಿ’ ಮತ್ತು ‘ಕೋಟ ಹದಿನಾಲ್ಕು ಗ್ರಾಮಗಳು’, ನರೇಂದ್ರ ಕುಮಾರ್ ಕೋಟ ಇವರ ‘ಸಮಗ್ರ ಗದ್ಯ ಬರೆಹ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ಎಂ. ಗೋಪಾಲಕೃಷ್ಣ ಅಡಿಗರ 107ನೆಯ ಜನ್ಮದಿನೋತ್ಸವ ಕಾರ್ಯಕ್ರಮವು ದಿನಾಂಕ 18 ಫೆಬ್ರವರಿ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ “ಎಂ. ಗೋಪಾಲಕೃಷ್ಣ ಅಡಿಗರು ಯಾವುದೇ ನಾಡು ಹೆಮ್ಮೆ ಪಡುವಂತಹ ಅಸಾಮಾನ್ಯ ಕವಿ. ಅಡಿಗರ ಸಮಗ್ರ ಕಾವ್ಯವನ್ನು ಓದಿದಾಗ ‘ಆಧುನಿಕ ಮಹಾಕಾವ್ಯ’ವೊಂದನ್ನು ಓದಿದ ಅನುಭವವಾಗುತ್ತದೆ. ಇವರ ಕಾವ್ಯದ ನಾಯಕ ಇಪ್ಪತ್ತನೇ ಶತಮಾನದ ಸ್ವಾತಂತ್ರ್ಯೋತ್ತರ ಭಾರತದ ಆಧುನಿಕ ಸಂವೇದನೆಯ ವ್ಯಕ್ತಿ. ಸ್ವತಂತ್ರ ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಾಸ್ತವ ಅಡಿಗರ ಕಾವ್ಯದಲ್ಲಿ ಆಕಾರ ಪಡೆದಂತೆ ಬಹುಶಃ ಕನ್ನಡದಲ್ಲಿ ಮತ್ತೆ ಯಾರ ಕಾವ್ಯದಲ್ಲೂ ಕಾಣಿಸಿಕೊಂಡಿಲ್ಲವೆನ್ನಬಹುದು. ಅವರು ಬರದಂತೆ ಬದುಕಿದರು, ಬದುಕಿದಂತೆ ಬರೆದರು. ಅವರ ಹೋರಾಟದ ಹಾದಿ ನಮಗೆಲ್ಲರಿಗೂ ಮಾರ್ಗದರ್ಶಿ. ಡಾ. ಎಂ. ಗೋಪಾಲಕೃಷ್ಣ ಅಡಿಗರು ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ 1918ರ ಫೆಬ್ರವರಿ 18ರಂದು ಜನಿಸಿದರು. ಅಡಿಗರು ತಮ್ಮ ಪ್ರಾರಂಭದ ವಿದ್ಯಾಭ್ಯಾಸವನ್ನು ದಕ್ಷಿಣ…
ಉಪ್ಪುಂದ : ಶ್ರೀ ಶ್ರೀನಿವಾಸ್ ಅಕ್ಕಿಅಂಗಡಿ ಸದ್ಭವನಾ ವೇದಿಕೆ ಚರ್ಚ್ ರೋಡ್ ಪಡುವರಿ ಬೈಂದೂರು ಮತ್ತು ಕುಂದ ಅಧ್ಯಯನ ಕೇಂದ್ರ (ರಿ.) ಶಂಕರ ಕಲಾ ಮಂದಿರ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀಮತಿ ಸೀತಾ ಶ್ರೀನಿವಾಸ ಇವರ ಸ್ವರಚಿತ ಕವನ ಸಂಕಲನ ‘ಅಮ್ಮ ಹಚ್ಚಿದ ಹಣತೆ’ ಕೃತಿ ಅನಾವರಣವನ್ನು ದಿನಾಂಕ 21 ಫೆಬ್ರವರಿ 2025ರಂದು ಅಪರಾಹ್ನ 4-00 ಗಂಟೆಗೆ ಉಪ್ಪುಂದ ಶಂಕರ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಪೂರ್ವಾಧ್ಯಕ್ಷರಾದ ಉಪ್ಪುಂದ ಚಂದ್ರಶೇಖರ ಹೊಳ್ಳ ಇವರು ಸಭಾಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಶ್ರೀಮತಿ ವರಮಹಾಲಕ್ಷ್ಮೀ ಹೊಳ್ಳ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಶ್ರೀರಾಮ ಟ್ರಸ್ಟ್ ಅಧ್ಯಕ್ಷರಾದ ರಾಮಕೃಷ್ಣ ಶೇರುಗಾರ್ ಬಿಜೂರು ಇವರು ಕೃತಿ ಅನಾವರಣ ಮಾಡಲಿದ್ದು, ಕ.ಸಾ.ಪ. ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾದ ಅರುಣ ಕುಮಾರ್ ಇವರು ಶುಭಶಂಸನೆ ಮತ್ತು ಸಾಹಿತಿ ಮಂಜುನಾಥ ಮರವಂತೆ ಇವರು ಪುಸ್ತಕ ಪರಿಚಯ ಮಾಡಲಿದ್ದಾರೆ.
ಆತ್ಮವಿಶ್ವಾಸದ ದೃಢವಾದ ಹೆಜ್ಜೆಗಳಲ್ಲಿ ನಗುಮುಖದಿಂದ ವೇದಿಕೆ ಪ್ರವೇಶಿಸಿದ ನೃತ್ಯಗಾರ್ತಿ ಬಿದರಕೋಟಿಯ ಮೇಘಾಳ ನೃತ್ಯದ ಚೆಲುವು ಮೊದಲನೋಟದಲ್ಲೇ ಸೆಳೆಯಿತು. ಅಂದವಳ ವಿದ್ಯುಕ್ತ ರಂಗಪ್ರವೇಶ. ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ ಕಲಾಭಿಮಾನಿಗಳ ಸಮ್ಮುಖ ಅವಳು ನಿರೂಪಿಸಿದ ಎಲ್ಲ ದೈವೀಕ ಕೃತಿಗಳೂ ಕಣ್ಮನ ಸೆಳೆದವು, ಹೃದಯಸ್ಪರ್ಶಿಯಾಗಿದ್ದವು. ಹೆಸರಾಂತ ಅಂಜಲಿ ಇನ್ಸ್ಟಿಟ್ಯುಟ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಭರತನಾಟ್ಯ ಶಾಲೆಯ ನೃತ್ಯಗುರು ಡಾ. ಸ್ವರೂಪಲಕ್ಷ್ಮಿ ಕೃಷ್ಣಮೂರ್ತಿ ಇವರ ನುರಿತ ಗರಡಿಯಲ್ಲಿ ತಯಾರಾದ ಕಲಾಶಿಲ್ಪ ಮೇಘಾ, ಗುರುಗಳ ಸುಮನೋಹರ ನೃತ್ಯ ಸಂಯೋಜನೆಯನ್ನು ಅಷ್ಟೇ ಮನಮೋಹಕವಾಗಿ ಸಾಕ್ಷಾತ್ಕರಿಸಿದಳು. ಶುಭಾರಂಭ- ಸಕಲ ದೇವಾನುದೇವತೆಗಳಿಗೆ, ಗುರು ಹಿರಿಯರಿಗೆ ಪುಷ್ಪಾಂಜಲಿ (ರಚನೆ- ಮಧುರೆ ಮುರಳೀಧರನ್, ರಾಗ- ಜೋಗ್, ಆದಿತಾಳ)ಯ ಮೂಲಕ ಸಲ್ಲಿಸಿದ ಹೊಸವಿನ್ಯಾಸದ ನೃತ್ತಗಳ ನಮನ ಸೊಗಸೆನಿಸಿತು. ತನ್ನ ಪದಾಘಾತವನ್ನು ಮನ್ನಿಸೆಂದು ಭೂದೇವಿಯನ್ನು ವಿನಮ್ರವಾಗಿ ಪ್ರಾರ್ಥಿಸಿದ ಕಲಾವಿದೆ, ನಂತರ ಆನಂದ ನರ್ತನ ಗಣಪತಿಯ ಆಶೀರ್ವಾದವನ್ನು ಬೇಡಿದ ವಿನಾಯಕ ಸ್ತುತಿ (ರಾಗ – ನಾಟೈ, ಆದಿತಾಳ) ಆತನ ಹಲವು ನಾಮಗಳ ಅರ್ಚನೆ ಮಾಡಿ, ಗುಣ-ಮಹಿಮೆಗಳನ್ನು ತನ್ನ ಸುಂದರ ಭಂಗಿ-ಅಭಿನಯಗಳಿಂದ,…
ಮಂಗಳೂರು : ಕೀರ್ತಿಶೇಷ ವರ್ಕಾಡಿ ಲಕ್ಷ್ಮೀನಾರಾಯಣ ಅಲೆವೂರಾಯರು ಯಕ್ಷರಂಗದಲ್ಲಿ ಸಂಘಟಕರಾಗಿ, ಅರ್ಥಧಾರಿಯಾಗಿ, ವೇಷಧಾರಿಯಾಗಿ ಮೆರೆದವರು. ಈಗ ಅವರ ಹೆಸರಿನಲ್ಲಿ ಅಲೆವೂರಾಯ ಸಹೋದರರು ಅಲೆವೂರಾಯ ಪ್ರತಿಷ್ಠಾನದ ಹೆಸರಿನಲ್ಲಿ ‘ಯಕ್ಷತ್ರಿವೇಣಿ’ಯನ್ನು ನಡೆಸುತ್ತಾ ಬರುತ್ತಿದ್ದು, ಈ ಬಾರಿ ಎಂಟನೇ ವರ್ಷಾಚರಣೆಯನ್ನು ಶ್ರೀಕ್ಷೇತ್ರ ಮಂಗಳಾದೇವಿಯ ಅಮ್ಮನವರ ರಾಜಾಂಗಣದಲ್ಲಿ ದಿನಾಂಕ 22ರಿಂದ 24 ಫೆಬ್ರವರಿ 2025ರಂದು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಬಡಗುತಿಟ್ಟಿನ ಶ್ರೀ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕರು ಉಪನ್ಯಾಸಕ ಶ್ರೀ ಸುಜಯೀಂದ್ರ ಹಂದೆ, ಬೆಂಕಿನಾಥೇಶ್ವರ ಮೇಳದ ಸಂಚಾಲಕ ಗುರುಪುರ ಶ್ರೀ ಸುರೇಂದ್ರ ಮಲ್ಲಿ ಮತ್ತು ಕಟೀಲು ಮೇಳದ ಪ್ರಧಾನ ಮದ್ದಲೆಗಾರರಾದ ಶ್ರೀ ಸುದಾಸ್ ಕಾವೂರು ಇವರುಗಳನ್ನು ಸನ್ಮಾನಿಸಲಾಗುವುದು. ಸರಯೂ ಬಾಲಯಕ್ಷ ವೃಂದ (ರಿ.) ಮಕ್ಕಳ ಮೇಳ ಇವರಿಂದ ಅನುಕ್ರಮವಾಗಿ ‘ವರಾಹಾವಾತಾರ’, ‘ರಾಮಾವತಾರ’, ‘ಕೃಷ್ಣಾವತಾರ’ಗಳೆಂಬ ಆಖ್ಯಾನಗಳು ಪ್ರದರ್ಶನಗೊಳ್ಳಲಿವೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 21 ಮತ್ತು 22 ಫೆಬ್ರವರಿ 2025ರಂದು ಕೋಣಾಜೆ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಮಂಗಳ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ದಿನಾಂಕ 21 ಫೆಬ್ರವರಿ 2025ರಂದು ಬೆಳಿಗ್ಗೆ ಗಂಟೆ 8-45ಕ್ಕೆ ಅಸೈಗೋಳಿ ಕೇಂದ್ರ ಮೈದಾನದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬನವರು ಕನ್ನಡ ಸಾಂಸ್ಕೃತಿಕ ದಿಬ್ಬಣದ ಮೆರವಣಿಗೆಯನ್ನು ಉದ್ಘಾಟನೆ ಮಾಡಲಿದ್ದು, ಬಳಿಕ ಭುವನೇಶ್ವರಿಗೆ ಪುಷ್ಪಾರ್ಚನೆ, ರಾಷ್ಟ್ರ, ಪರಿಷತ್ತಿನ ಹಾಗೂ ಸಮ್ಮೇಳನ ಧ್ವಜಾರೋಹಣ ನಡೆಯಲಿದೆ. 10-00 ಗಂಟೆಗೆ ಹಿರಿಯ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನಾಡೋಜ ಡಾ. ಎಂ. ಮಹೇಶ್ ಜೋಶಿ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ, ಪುಸ್ತಕ ಮತ್ತು ಇತರ ಮಳಿಗೆಗಳು ಉದ್ಘಾಟನೆಗೊಳ್ಳಲಿದೆ. ಕೊಳಲು ಸಂಗೀತ ವಿದ್ಯಾಲಯ (ರಿ.) ಇರಾ ಇದರ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇವರ ಸಂಯೋಜನೆಯಲ್ಲಿ ದಿನಾಂಕ 18 ಫೆಬ್ರವರಿ 2025ರ ಮಂಗಳವಾರ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ತಿಂಗಳ ತಾಳಮದ್ದಲೆ ಕವಿ ದೇವಿದಾಸ ವಿರಚಿತ ‘ಭೀಷ್ಮ ಸೇನಾಧಿಪತ್ಯ’ ಆಖ್ಯಾನದೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀ ನಾರಾಯಣ ಭಟ್, ನಿತೀಶ್ ಕುಮಾರ್ ಎಂಕಣ್ಣಮೂಲೆ ಹಾಗೂ ಚೆಂಡೆ ಮದ್ದಲೆಗಳಲ್ಲಿ ಟಿ.ಡಿ. ಗೋಪಾಲಕೃಷ್ಣ ಭಟ್ ಮತ್ತು ಮುರಲೀಧರ ಕಲ್ಲೂರಾಯ ಭಾಗವಹಿಸಿದರು. ಭೀಷ್ಮನಾಗಿ ಗುಡ್ಡಪ್ಪ ಬಲ್ಯ, ಕೌರವನಾಗಿ ವಿ.ಕೆ. ಶರ್ಮ ಅಳಿಕೆ, ದ್ರೋಣನಾಗಿ ಶಾರದಾ ಅರಸ್ ಹಾಗೂ ಕರ್ಣನಾಗಿ ಮಾಂಬಾಡಿ ವೇಣುಗೋಪಾಲ ಭಟ್ ಪಾತ್ರಗಳನ್ನು ಪೋಷಿಸಿದರು. ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ನಡೆದ ಕಾರ್ಯಕ್ರಮವನ್ನು ವಿಜಯಶ್ರೀ ಶಾಮಿಯಾನದ ಮಾಲಕರಾದ ಮಂಜುನಾಥ ಭಟ್ ಪ್ರಾಯೋಜಿಸಿದರು. ವೇಣುಗೋಪಾಲ ಭಟ್ ಸ್ವಾಗತಿಸಿ, ದೇವಳದ ಮೇನೇಜರ್ ಸುಬ್ರಹ್ಮಣ್ಯ ಭಟ್ ವಂದಿಸಿದರು.