Author: roovari

ಉಡುಪಿ : ಕನ್ನಡದ ಖ್ಯಾತ ಕವಿ ಎಸ್.ವಿ. ಪರಮೇಶ್ವರ ಭಟ್ಟ ಇವರ ಹೆಸರಿನ ಪ್ರಶಸ್ತಿಯು ಕನ್ನಡ ಸಾಹಿತ್ಯ, ಅನುವಾದ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತಿಗಳಿಗೆ ಎಸ್.ವಿ.ಪಿ. ಪ್ರತಿಷ್ಠಾನದಿಂದ ನೀಡುವ ಪ್ರಶಸ್ತಿಯಾಗಿದೆ. 2026ರ ಸಾಲಿನಿಂದ ಈ ಪ್ರಶಸ್ತಿಯನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ನೀಡಲಾಗುವುದು. ಪ್ರಸಕ್ತ ಸಾಲಿನ ಪ್ರಶಸ್ತಿಗೆ ಕನ್ನಡದ ಖ್ಯಾತ ಕವಿ, ಕಥೆಗಾರ ಶ್ರೀ ಸುಬ್ರಾಯ ಚೊಕ್ಕಾಡಿ ಇವರನ್ನು ಪ್ರಶಸ್ತಿ ಸಮಿತಿ ಆಯ್ಕೆ ಮಾಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಸುಬ್ರಾಯ ಚೊಕ್ಕಾಡಿಯವರು 1940ರ ಜೂನ್ 29ರಂದು ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಜನಿಸಿದರು. ಅವರ ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯನವರು ಮತ್ತು ತಾಯಿ ಸುಬ್ಬಮ್ಮನವರು. ಸುಬ್ರಾಯ ಚೊಕ್ಕಾಡಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ 39 ವರ್ಷ ಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ಕವಿ ಗೋಪಾಲಕೃಷ್ಣ…

Read More

ಮಂಗಳೂರು : ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಪ್ರತಿಷ್ಟಿತ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಹಾಗೂ ಅನುವಾದ ಪ್ರಶಸ್ತಿ ಪದಾನ ಸಮಾರಂಭ -2026ವನ್ನು ದಿನಾಂಕ 31 ಜನವರಿ ಹಾಗೂ 01 ಫೆಬ್ರವರಿ 2026ರಂದು ಮಂಗಳೂರಿನ ಕೊಡಿಯಾಲ್-ಬೈಲ್ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ವಿಶ್ವ ಕೊಂಕಣಿ ನಾಟಕ ಮಹೋತ್ಸವದ ಪ್ರಯುಕ್ತ ನಡೆಯಲಿರುವ ನಾಲ್ಕು ಪ್ರಸಿದ್ಧ ಕೊಂಕಣಿ ನಾಟಕಗಳ ಪ್ರದರ್ಶನ ಜನಮನ ಗೆಲ್ಲಲಿದ್ದು, ನೆರೆಯ ಜಿಲ್ಲೆಗಳಿಂದ ನಾಟಕಪ್ರಿಯರನ್ನು ಆಕರ್ಷಿಸಲಿದೆ. ದಿನಾಂಕ 31 ಜನವರಿ 2026ರಂದು ಸಂಜೆ 5-00 ಗಂಟೆಗೆ ಮಂಗಳೂರು ಸಾಧನಾ ಬಳಗ ಶ್ರೀ ಪ್ರಕಾಶ್ ಶೆಣೈ ನೇತೃತ್ವದ ಮಕ್ಕಳ ಕಲಾತಂಡದವರು ‘ಭಕ್ತ ಪುರಂದರ’ಯೆಂಬ ಕೊಂಕಣಿ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಅದೇ ದಿನ ಸಂಜೆ 7-00 ಗಂಟೆಗೆ ಮಂಗಳೂರಿನ ರಂಗ ಅಧ್ಯಯನ ಕೇಂದ್ರ ತಂಡದವರು ಅಭಿನಯಿಸುವ ಜನಪ್ರಿಯ ‘ಚಿಕೆ ರಾಬ್’ (ಹ್ಯಾಂಗ್ ಓನ್) ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ. ದಿನಾಂಕ 01 ಫೆಬ್ರವರಿ 2026ರಂದು ಸಂಜೆ 5-00 ಗಂಟೆಗೆ ಗೋವಾದ…

Read More

ಮೈಸೂರು : ಸಮತಾ ಅಧ್ಯಯನ ಕೇಂದ್ರವು ಸಂಸ್ಥಾಪಕ ಅಧ್ಯಕ್ಷೆ ವಿಜಯಾ ದಬ್ಬೆಯವರ ಹೆಸರಿನಲ್ಲಿ ಸ್ಥಾಪಿಸಿರುವ ‘ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಲೇಖಕಿಯರಿಂದ ಕಥಾಸಂಕಲನಗಳನ್ನು ಆಹ್ವಾನಿಸಿದೆ. 2022-2025ರ ಅವಧಿಯಲ್ಲಿ ಪ್ರಥಮ ಮುದ್ರಣ ಕಂಡ ಸಂಕಲನಗಳನ್ನು ಪರಿಗಣಿಸಲಾಗುವುದು. ಪ್ರಶಸ್ತಿಯು ರೂ.25,000/- ನಗದು ಮತ್ತು ಫಲಕವನ್ನು ಒಳಗೊಂಡಿದ್ದು, ದಿನಾಂಕ 01 ಜೂನ್ 2026ರಂದು ಮೈಸೂರಿನಲ್ಲಿ ಪ್ರದಾನ ಮಾಡಲಾಗುವುದು. ಸಂಕಲನದ ನಾಲ್ಕು ಪ್ರತಿಗಳನ್ನು ಕಳುಹಿಸಲು ದಿನಾಂಕ 28 ಫೆಬ್ರುವರಿ 2026 ಕಡೆಯ ದಿನವಾಗಿದೆ. ವಿಳಾಸ : ಎಂ.ಎಸ್. ವೇದಾ, ಅಲಂಪು, 1257, ಪಡುವಣ ರಸ್ತೆ, 4ನೇ ತಿರುವು, ಟಿ.ಕೆ. ಬಡಾವಣೆ, 4ನೇ ಹಂತ, ಕುವೆಂಪು ನಗರ, ಮೈಸೂರು-570023. ಮಾಹಿತಿಗೆ ಮೊ. ಸಂ. 9481814836 ಸಂಪರ್ಕಿಸಲು ಅಧ್ಯಕ್ಷೆ ಸಬಿಹಾ ಭೂಮಿಗೌಡ ತಿಳಿಸಿದ್ದಾರೆ.

Read More

ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ ಸಂಸ್ಥೆಗಳ ಆಶ್ರಯದಲ್ಲಿ ದಿನಾಂಕ 01 ಫೆಬ್ರುವರಿ 2026ರಂದು ಭಾನುವಾರ ಸಂಜೆ 5-00 ಗಂಟೆಗೆ ಸುರತ್ಕಲ್‌ನ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ಎರಡು ಸಂಗೀತ ಕಛೇರಿಯನ್ನು ಆಯೋಜಿಸಲಾಗಿದೆ. ಅಭಿರಾಜ್ ಮಯ್ಯ ಮತ್ತು ಅಭಯರಾಜ್ ಮಯ್ಯ ಇವರಿಂದ ವಯಲಿನ್ ವಾದನ ನಡೆಯಲಿದ್ದು, ಇವರಿಗೆ ಕೃಷ್ಣ ಪವನ್ ಕುಮಾರ್ ಮೃದಂಗದಲ್ಲಿ ಸಹಕರಿಸುವರು. ಬಳಿಕ ಉಡುಪಿಯ ಪ್ರಜ್ಞಾ ಅಡಿಗ ಇವರ ಹಾಡುಗಾರಿಕೆಗೆ ಕಾರ್ಕಳದ ಮಹತೀ ಕೆ. ವಯಲಿನ್‌ನಲ್ಲಿ, ಮಂಗಳೂರಿನ ಸುನಾದಕೃಷ್ಣ ಅಮೈ ಮೃದಂಗದಲ್ಲಿ ಹಾಗೂ ಉಡುಪಿಯ ಕಾರ್ತಿಕ್ ಭಟ್ ಖಂಜೀರದಲ್ಲಿ ಸಹಕರಿಸುವರು. ಸಂಗೀತ ಗುರು ವಾರಿಜಾಕ್ಷಿ ಆರ್. ಭಟ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಸಂಗೀತ ಕಛೇರಿಗೆ ಮುಕ್ತ ಪ್ರವೇಶವಿದ್ದು ಆಸಕ್ತರು ಪಾಲ್ಗೊಳ್ಳುವಂತೆ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ತಿಳಿಸಿದ್ದಾರೆ.

Read More

ಮಂಗಳೂರು : ತುಳು – ಕನ್ನಡ ಕವಿ ಮತ್ತು ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರ ‘ಕಲ್ಲುರ್ಟಿ ಕಥನ’ ಗೀತ ಚಿತ್ರ ‘ನಮ್ಮ ಕೊಂಬಾರು’ ಯೂಟ್ಯೂಬ್ ವಾಹಿನಿಯಲ್ಲಿ ಅತೀ ಹೆಚ್ಚು ವೀಕ್ಷಕರನ್ನು ಹೊಂದಿ ಮುನ್ನಡೆಯುತ್ತಿರುವಂತೆ ಇದೀಗ ಅವರದೇ ಸಾಹಿತ್ಯವಿರುವ ತುಳು ಪ್ರೇಮ ಗೀತೆಯೊಂದನ್ನು ವಾಹಿನಿ ಬಿಡುಗಡೆಗೊಳಿಸಿದೆ. ದಿನಾಂಕ 25 ಜನವರಿ 2026ರಂದು ರಥಸಪ್ತಮಿಯ ಶುಭದಿನ ‘ಸಿಂಗಾರೊದ ಸಿರಿ’ ಎಂಬ ಈ ತುಳು ಹಾಡನ್ನು ಅತ್ಯಾಕರ್ಷಕ ದೃಶ್ಯ ಸಂಯೋಜನೆಯೊಂದಿಗೆ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿದೆ ಎಂದು ವಾಹಿನಿ ನಿರ್ದೇಶಕರಾದ ಬೆಂಗಳೂರಿನ ಹೈಕೋರ್ಟ್ ವಕೀಲ ಪ್ರವೀಣ್ ಕುಮಾರ್ ಕಟ್ಟೆ ತಿಳಿಸಿದ್ದಾರೆ. ಗೀತಾ ಸಾಹಿತ್ಯ : ಸುಂದರವಾದ ಹೆಣ್ಣಿನ ಬಿನ್ನಾಣದ ನಡಿಗೆಯೂ ಒಂದೊಮ್ಮೆ ನವಿಲಿನ ನಾಟ್ಯದಂತೆ ಭಾಸವಾಗುತ್ತದೆ. ಅವಳ ಮಧುರ ಸಾಂಗತ್ಯ ತನ್ನ ಜನ್ಮಾಂತರದ ಸುಯೋಗವೆಂದು ಪ್ರಿಯಕರ ಭಾವಿಸುತ್ತಾನೆ. ಆಕೆಯ ಸೀರೆ ಸೆರಗಿನ ತಂಪು ಗಾಳಿಗೆ ಸುತ್ತಲಿನ ಹೂ ಬನ ತೂಗಿ ತೊನೆಯುತ್ತದೆ. ಮುಖದ ಕಾಂತಿಯಲ್ಲಿ ಪೂರ್ಣ ಚಂದ್ರಮ ಉದಯಿಸಿ ಬಾನಗಲ ನಕ್ಷತ್ರ ಲೋಕವೇ ಕಾಣಿಸಿದೆ.…

Read More

ಮಂಗಳೂರು : ಸುರತ್ಕಲ್ ನ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ‘ಸಂದೇಶ ಪ್ರಶಸ್ತಿ’ ಪುರಸ್ಕೃತರಾದ ಡಾ. ಇಂದಿರಾ ಹೆಗ್ಗಡೆಯವರನ್ನು ದಿನಾಂಕ 26 ಜನವರಿ 2026ರಂದು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ವಿಕಿ ಸೋರ್ಸ್ ಮತ್ತು ವಿಕಿಪೀಡಿಯಾದ ಕನ್ನಡ, ತುಳು ಭಾಷಾ ಸಮೂಹ ಬಳಗವು ವಿಕಿಸೋರ್ಸ್ ಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಇಂದಿರಾ ಹೆಗ್ಗಡೆಯವರಿಗೆ ಕೃತಜ್ಞತಾ ಪ್ರಮಾಣ ಪತ್ರವನ್ನು ನೀಡಿ ಸಂಮಾನಿಸಿತು. ಮಂಗಳೂರು ವಿ.ವಿ.ಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಅತಿಥಿ ಉಪನ್ಯಾಸಕಿ ಕವಿತಾ ಗಣೇಶ್ ಮಾತನಾಡಿ “2023ರ ಸೆಪ್ಟೆಂಬರ್ ನಲ್ಲಿ ಗೋವಿಂದ ದಾಸ ಕಾಲೇಜಿನಲ್ಲಿ ಸಾಹಿತಿಗಳ ಅನುಮತಿಯೊಂದಿಗೆ ಅವರ ಕೃತಿಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯದ ತರಬೇತಿ ಪಡೆದು ಇದೀಗ ಕನ್ನಡ ವಿಕಿಸೋರ್ಸ್ ನೊಂದಿಗೆ ತುಳು ವಿಕಿಸೋರ್ಸ್ ನ್ನು ಆರಂಭಿಸಲಾಗಿದೆ. ತುಳು ವಿಕಿಸೋರ್ಸ್ ಹನ್ನೆರಡು ಲೇಖಕರ 101 ಪುಸ್ತಕಗಳನ್ನು ಡಿಜಿಟೈಸೇಷನ್ ಮಾಡುತ್ತಿದ್ದು, ಲೇಖಕರ ಸಹಕಾರ ಅಗತ್ಯ” ಎಂದರು. ಕೆನರಾ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಬಬಿತ ಶೆಟ್ಟಿ ವಿಕಿಸೋರ್ಸ್ ನ…

Read More

ಉಡುಪಿ : ಉಡುಪಿಯ ರಾಗಧನ ಸಂಸ್ಥೆಯ ವತಿಯಿಂದ ಕೊಡಲ್ಪಡುವ, ಪ್ರಸಿದ್ಧ ಸಂಶೋಧಕಿ ಡಾ. ಸುಶೀಲಾ ಉಪಾಧ್ಯಾಯ ಅವರ ಸ್ಮರಣಾರ್ಥ, ಡಾ. ಯು.ಪಿ. ಉಪಾಧ್ಯಾಯರು ಸೂಚಿಸಿರುವ ‘ರಾಗ ಧನ ಪಲ್ಲವಿ ಪ್ರಶಸ್ತಿ’ಗೆ ಈ ಬಾರಿ ಉಡುಪಿಯ ಪ್ರತಿಭಾವಂತ ಗಾಯಕಿ ಪ್ರಜ್ಞಾ ಅಡಿಗ ಆಯ್ಕೆಯಾಗಿರುವರು. ದಿನಾಂಕ 07 ಫೆಬ್ರವರಿ 2026ರಂದು ಶನಿವಾರ ಸಂಜೆ 5-30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ 38ನೆಯ ಶ್ರೀ ಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯನ್ನು ಡಾ. ಗಣಪತಿ ಜೋಯಿಸ್ ಪ್ರದಾನ ಮಾಡಲಿದ್ದು, ಸಂಸ್ಥೆಯ ಅಧ್ಯಕ್ಷರಾದ ಡಾ. ಶ್ರೀಕಿರಣ್ ಹೆಬ್ಬಾರ್ ಸಭೆಯ ಅಧ್ಯಕ್ಷತೆ ವಹಿಸಲಿರುವರು. ನಂತರ ಪ್ರಜ್ಞಾ ಅಡಿಗ ಅವರ ರಾಗಂ.. ತಾನಂ.. ಪಲ್ಲವಿ.. ಗಾಯನ ನಡೆಯಲಿದೆ. ಇವರಿಗೆ ವಯೊಲಿನ್ ನಲ್ಲಿ ವೈಭವ ರಮಣಿ ಹಾಗೂ ಮೃದಂಗದಲ್ಲಿ ಪ್ರಜ್ವಲ್ ಭಾರದ್ವಾಜ್ ಸಹಕರಿಸಲಿರುವರು ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿರುತ್ತಾರೆ.

Read More

ವರಕವಿ ಅಂಬಿಕಾತನಯದತ್ತ (ದ.ರಾ. ಬೇಂದ್ರೆ) ಇವರ 130ನೆಯ ಜನ್ಮದಿನದಂದು ಸಾಧನಕೇರಿಯ ಬೇಂದ್ರೆಯವರ ಮನೆಯ ಅಂಗಳದಲ್ಲಿ ಅಂಬಿಕಾತನಯದತ್ತ ವೇದಿಕೆ ಅಡಿಯಲ್ಲಿ ದಿನಾಂಕ 31 ಜನವರಿ 2026ರಂದು ಬೆಳಿಗ್ಗೆ 8-30 ಗಂಟೆಗೆ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಶ್ರೀಮತಿ ಪುನರ್ವಸು ಬೇಂದ್ರೆಯವರ ಸಹಕಾರದೊಂದಿಗೆ ‘ಇದು ಬರಿ ಬೆಳಗಲ್ಲೋ ಅಣ್ಣಾ’ ಶಿರೋನಾಮೆಯಡಿಯಲ್ಲಿ ಬೇಂದ್ರೆ ಕಾವ್ಯ ವಾಚನ – ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕವಿ ನರಸಿಂಹ ಪರಾಂಜಪೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶ್ರೀಮತಿ ಪುನರ್ವಸು ಬೇಂದ್ರೆಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಿರಿಯ ಸಾಹಿತಿ ಹರ್ಷ ಡಂಬಳ ಇವರು ಅಧ್ಯಕ್ಷತೆ ವಹಿಸಲಿದ್ದು, ಡಾ. ಕೃಷ್ಣ ಕಟ್ಟಿಯವರ ಪ್ರಸ್ತಾವಿಕ ನುಡಿಗಳನ್ನಾಡಲಿದ್ದಾರೆ. ನಂತರ ಶ್ರೀ ಎ.ಎ. ದರ್ಗಾ, ಡಾ. ಬಾಳಣ್ಣ ಶೀಗೀಹಳ್ಳಿ, ಡಾ. ಎಸ್.ಎಮ್. ಶಿವಪ್ರಸಾದ, ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಡಾ. ಎಸ್.ಆರ್. ಹೆಬ್ಬಾಳ, ಶ್ರೀ ಈರೇಶ ಅಂಚಟಗೇರಿ, ಡಾ. ಶಶಿಧರ ನರೇಂದ್ರ, ಶ್ರೀಮತಿ ಶ್ರೀದೇವಿ ಜೋಶಿ, ಶ್ರೀ ಮಹಾದೇವ ಹಡಪದ, ಡಾ. ಬಸವರಾಜ ಡೋಣೂರ, ಶ್ರೀಮತಿ ವರ್ಷಾ ಮಾಡಲಗಿ,…

Read More

ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಇದರ 16ನೇ ವಾರ್ಷಿಕೋತ್ಸವವನ್ನು ದಿನಾಂಕ 31 ಜನವರಿ 2026ರಂದು ಅಪರಾಹ್ನ 3-00 ಗಂಟೆಗೆ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ವೇದಿಕೆಯಲ್ಲಿ ಆಯೋಜನೆಗೊಳಿಸಲಾಗಿದೆ. ಕೀರ್ತನ ಕುಟೀರ ಕುಂಬ್ಳೆ ಇದರ ವಿದ್ಯಾರ್ಥಿನಿಯರಾದ ರಾಜ್ಯ ಮಟ್ಟದ ಹರಿಕಥಾ ಸ್ಪರ್ಧೆಯಲ್ಲಿ ವಿಜೇತರಾದ ಕುಮಾರಿ ದೇವಿಕಾ ಕೆ. ಹಾಗೂ ಕುಮಾರಿ ಭಾವನಾ ನಾಯಕ್ ಇವರಿಂದ ಹರಿಕಥೆ ಜರಗಲಿದೆ. ಬಳಿಕ ಸಭಾ ಕಲಾಪವನ್ನು ಶ್ರೀ ಮಂಗಳಾದೇವಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎಂ. ಅರುಣ್ ಐತಾಳ್ ಉದ್ಘಾಟಿಸಲಿದ್ದು, ರಾಮಕೃಷ್ಣ ಮಠದ ಸ್ವಾಮಿ ಯುಗೇಶಾನಂದ ಜೀ ಆಶೀರ್ವಚನ ನೀಡಲಿದ್ದಾರೆ. ಹರಿಕಥಾ ಪರಿಷತ್ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಅಡ್ವಕೇಟ್ ಎಚ್.ವಿ. ರಾಘವೇಂದ್ರ, ಬಿ. ಅಶೋಕ್ ಕುಮಾರ್, ದಿಲ್‌ರಾಜ್ ಆಳ್ವ, ಶ್ರೀಮತಿ ಹೇಮಾ ದಾಮೋದರ ನಿಸರ್ಗ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಹರಿದಾಸ ಉಮೇಶ್ ಗೌತಮ್ ನಾಯಕ್, ಕಲಾಪೋಷಕ ಸುಧಾಕರ ರಾವ್ ಪೇಜಾವರ, ಹಾರ್ಮೋನಿಯಂ ಕಲಾವಿದೆ ಗುಣವತಿ ಜೆ.…

Read More

ಬಳ್ಳಾರಿ : ಬಳ್ಳಾರಿಯ ‘ಸಂಗಂ ಟ್ರಸ್ಟ್’ ನೀಡುವ ‘ಸಂಗಂ ಸಾಹಿತ್ಯ ಪುರಸ್ಕಾರ’ಕ್ಕೆ ಕಾವ್ಯ ಸಂಕಲನಗಳನ್ನು ಆಹ್ವಾನಿಸಿದೆ. 2023-25ರ ಅವಧಿಯಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಕವನ ಸಂಕಲನವನ್ನು ಬರಹಗಾರರು, ಪ್ರಕಾಶಕರು ಸ್ಪರ್ಧೆಗೆ ಕಳುಹಿಸಬಹುದು. ಪ್ರಶಸ್ತಿಯು ರೂ.25,000/- ನಗದು, ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಸಂಗಂ ಸಂಸ್ಥೆಯ ಅಧ್ಯಕ್ಷರಾದ ಡಾ. ವೈ.ಸಿ. ಯೋಗಾನಂದ ರೆಡ್ಡಿ ತಿಳಿಸಿದ್ದಾರೆ. ವಿಳಾಸ : ಕೆ. ಶಿವಲಿಂಗಪ್ಪ ಹಂದಿಹಾಳು, ಮನೆ ಸಂಖ್ಯೆ : 44/C, ಚೇತನಾ ಕ್ಲಿನಿಕ್ ಪಕ್ಕ, ಜಿಮ್ ಖಾನಾ ರಸ್ತೆ, ಪಾರ್ವತಿ ನಗರ, ಬಳ್ಳಾರಿ -583103. ದೂರವಾಣಿ ಸಂಖ್ಯೆ: 9980346474.

Read More