Author: roovari

ಮಂಗಳೂರು : ಸೌಹಾರ್ದ ಸಾಹಿತ್ಯ ವೇದಿಕೆ ಹುಬ್ಬಳ್ಳಿ ಇದರ ಮಂಗಳೂರು ಘಟಕದ ವತಿಯಿಂದ ಮಂಗಳೂರಿನ ಕವಿ ಮನದವರಿಗೆ ಈ ತಿಂಗಳು ಸಾಹಿತ್ಯ ವಿಮರ್ಶೆಗಾಗಿ ಕನ್ನಡದ ಪ್ರೇಮ ಕವಿ ಖ್ಯಾತ ಕೆ.ಎಸ್. ನರಸಿಂಹಸ್ವಾಮಿಯವರ ಕವನಗಳನ್ನು ಆಯ್ಕೆ ಮಾಡಿ ವಾಚನ ಮತ್ತು ಭಾವಾರ್ಥ ವ್ಯಕ್ತಪಡಿಸುವ ಮೂಲಕ ವಿಚಾರ ಸಂಕಿರಣವನ್ನು ದಿನಾಂಕ 08 ಫೆಬ್ರುವರಿ 2026 ರವಿವಾರ ಸಂಜೆ 3-00 ಗಂಟೆಗೆ ಮಂಗಳೂರು ಲಾಲ್ ಭಾಗ್ ಪಬ್ಬಾಸ್ ಎದುರು ಇಂದಿರಾ ಪ್ರಿಯದರ್ಶಿನಿ ಉದ್ಯಾನವನದಲ್ಲಿ ಆಯೋಜಿಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಶ್ರೀಮತಿ ಅನಿತಾ ಶೆಣೈ 72595 86907 ಹೆಸರು ನೊಂದಾಯಿಸಿ ಹಾಗೂ ಗ್ರೂಪ್ ನಲ್ಲಿ ವಾಚಿಸುವ ಕವನಗಳನ್ನು ಕಳುಹಿಸಿಬೇಕಾಗಿ ಈ ಮೂಲಕ ವಿನಂತಿ.

Read More

ಗಂಗೊಳ್ಳಿ : ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ರೋಟರಿ ಸಭಾಂಗಣದಲ್ಲಿ ಎಸ್‌. ವಿ ಕಾಮರ್ಸ್ ಕ್ಲಬ್ ಮತ್ತು ಗಂಗೊಳ್ಳಿಯ ಸಂಜೀವ ಪಾರ್ವತಿ ಪ್ರಕಾಶನದ ಜಂಟಿ ಆಶ್ರಯದಲ್ಲಿ ದಿನಾಂಕ 30 ಜನವರಿ 2026ರಂದು ಬೆಂಗಳೂರಿನ ಜಯರಾಮ ಪಬ್ಲಿಕೇಶನ್ ಪ್ರಕಟಿಸಿರುವ ಲೇಖಕ ನರೇಂದ್ರ ಎಸ್. ಗಂಗೊಳ್ಳಿ ಇವರ ಆರನೇ ಕೃತಿ ‘ಅವಳ ನಿಟ್ಟುಸಿರು’ ಅಂಕಣ ಬರಹಗಳ ಸಂಕಲನದ ಬಿಡುಗಡೆ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕರಾದ ನಾರಾಯಣ ಈ ನಾಯ್ಕ್ “ಓದು ವ್ಯಸನವಾಗಬೇಕು ಪಠ್ಯೇತರ ಪುಸ್ತಕಗಳ ಓದು ನಮ್ಮ ಜ್ಞಾನದ ಪರಿಧಿಯನ್ನು ಹೆಚ್ಚಿಸುವುದರ ಜೊತೆಗೆ ಆತ್ಮವಿಶ್ವಾಸವನ್ನು ಕೂಡ ನೀಡುತ್ತದೆ” ಎಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಪ್ರಯೋಗಾಲಯ ಸಹಾಯಕರಾದ ವಿಜಯಕುಮಾರ್ ಎನ್. ಮಾತನಾಡಿ “ಸೃಜನಶೀಲ ಸಾಹಿತ್ಯ ಇಂದಿನ ಅಗತ್ಯ. ಉತ್ತಮ ವಿಚಾರಗಳ ಓದು ನಮ್ಮ ವ್ಯಕ್ತಿತ್ವವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತದೆ. ಅವಳ ನಿಟ್ಟುಸಿರು ಕೃತಿ ಈ ನಿಟ್ಟಿನಲ್ಲಿ ಉತ್ತಮ ಕೊಡುಗೆ” ಎಂದು…

Read More

ಮಂಗಳೂರು : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಪ್ರತಿವರ್ಷ ನೀಡುವ ‘ವೀರಾರಾಣಿ ಅಬ್ಬಕ್ಕ ಪ್ರಶಸ್ತಿ’ಗೆ ಸಾಹಿತ್ಯದಲ್ಲಿ ಡಾ. ಸಾಯಿಗೀತಾ ಹಾಗೂ ಕಲೆಯಲ್ಲಿ ವಿದುಷಿ ರಾಜಶ್ರೀ ಉಳ್ಳಾಲ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ರೂ.25,000/- ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಹೊಂದಿದ್ದು, ದಿನಾಂಕ 14 ಫೆಬ್ರುವರಿ 2026ರಂದು ತೊಕ್ಕೊಟ್ಟಿನಲ್ಲಿ ನಡೆಯುವ ಅಬ್ಬಕ್ಕ ಉತ್ಸವದಲ್ಲಿ ಪ್ರಧಾನ ಮಾಡಲಾಗುತ್ತದೆ. ಹಲವು ಮಂದಿ ಗಣ್ಯರು ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಮಾನವಿಕ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಹಾಗೂ ಇದೇ ಸಂಸ್ಥೆಯಲ್ಲಿ ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿರುವ ಡಾ. ಸಾಯಿಗೀತಾ ಅವರು ಸಂಶೋಧನೆ, ಪದಕೋಶ, ಕವನಸಂಕಲನ, ಜೀವನಚರಿತ್ರೆ, ಭಾಷೆ ಕಲಿಯುವಿಕೆಯ ಪಠ್ಯ, ಅನುವಾದ ಹಾಗೂ ಸಂಪಾದಿತ ಪುಸ್ತಕಗಳು ಸೇರಿ 70ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ವಿದುಷಿ ರಾಜಶ್ರೀ ಉಳ್ಳಾಲ್ ಇವರು ತಮ್ಮ ತಂದೆ ಕರ್ನಾಟಕ ಕಲಾ ತಿಲಕ ಮೋಹನ್ ಕುಮಾರ್ ಇವರಿಂದ ಭರತನಾಟ್ಯ ಶಿಕ್ಷಣ ಪಡೆದು,…

Read More

ಬೆಂಗಳೂರು : ಸಂಸ್ಕೃತಿ ಸಚಿವಾಲಯ ಭಾರತ ಸರ್ಕಾರ, ರಾಷ್ಟ್ರೀಯ ನಾಟಕ ಶಾಲೆ ನವದೆಹಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ ‘ಭಾರತ ರಂಗ ಮಹೋತ್ಸವ 2026 ಹಾಗೂ ರಂಗ ಪರಿಷೆ’ ದಿನಾಂಕ 01ರಿಂದ 06 ಫೆಬ್ರವರಿ 2026ರವರೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಮಳವಳ್ಳಿ ಸುಂದರಮ್ಮ ವೇದಿಕೆಯಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಶತಮನೋತ್ಸವ ಸಂಭ್ರಮ ಕವಿಗೋಷ್ಠಿ, ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಪ್ರಸಿದ್ಧ ಕಲಾವಿದರ ಚಿತ್ರಕಲಾ ಪ್ರದರ್ಶನ, ಚಿತ್ರಕಲಾ ರಚನೆ ಪ್ರಾತ್ಯಕ್ಷಿಕೆ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಯಕ್ಷಗಾನ ಪ್ರದರ್ಶನ, ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಲ್ಲಿ ಪ್ರತಿದಿನ ಬೆಳಿಗ್ಗೆ 10-30 ಗಂಟೆಗೆ ಭಾರತ ರಂಗ ಮಹೋತ್ಸವದ ನಾಟಕಗಳ ತಂಡಗಳೊಂದಿಗೆ ರಂಗ ಸಂವಾದ ನಡೆಯಲಿದೆ. ದಿನಾಂಕ 01 ಫೆಬ್ರವರಿ 2026ರಂದು ಮಧ್ಯಾಹ್ನ 3-30 ಗಂಟೆಗೆ ‘ರಂಗ ಪರಿಷೆ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಡಾ. ಸಿದ್ಧಲಿಂಗಯ್ಯ ವೇದಿಕೆಯಲ್ಲಿ ನಡೆಯಲಿದ್ದು, ಮಾನ್ಯ…

Read More

ಉಡುಪಿ : ಸ್ವರ ಸಾಮ್ರಾಟ್ ವಿದ್ವಾನ್ ಅಭಿರಾಮ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕರ್ನಾಟಕ ಇದರ ವತಿಯಿಂದ ಶ್ರೀ ಮದ್ವ ಪುರಂದರ ಕನಕ ವಾದಿರಾಜ ತ್ಯಾಗರಾಜ ಭಾಗವತರ ‘ಆರಾಧನಾ ಮಹೋತ್ಸವ’ವನ್ನು ದಿನಾಂಕ 01 ಫೆಬ್ರುವರಿ 2026ರಂದು ಉಡುಪಿ ಗುಂಡಿಬೈಲು ಇಲ್ಲಿರುವ ಶ್ರೀ ಅಭಿರಾಮಧಾಮ ಸಂಕೀರ್ತನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಗಂಟೆ 09030ಕ್ಕೆ ದೀಪಪ್ರಜ್ವಲನೆ ಬಳಿಕ ಪಿಳ್ಳಾರಿ ಗೀತೆಗಳು, ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಮಹಾನ್ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜ ಭಾಗವತರ ಪಂಚರತ್ನ ಕೀರ್ತನೆಗಳು, ದಾಸವರೇಣ್ಯ ಶ್ರೀಪುರಂದರದಾಸರ ಕೃತಿಗಳು, ಯಮಧರ್ಮರಾಯನ ಅವತಾರ ತಾಳಿದ್ದ ಶ್ರೀಕನಕದಾಸರ ಕೃತಿಗಳು, ನೂರಿಪ್ಪತ್ತು ವರುಷಗಳ ಕಾಲ ಉಡುಪಿಯ ಶ್ರೀಕೃಷ್ಣನ ಪೂಜಿಸಿ, ಒಲಿಸಿಕೊಂಡ ಕನ್ನಡ ಕವಿಕುಲತಿಲಕ ಶ್ರೀವಾದಿರಾಜಗುರುಸಾರ್ವಭೌಮರ ಕೃತಿಗಳು, ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ದ್ವಾದಶ ಸ್ತೋತ್ರಗಳ ವಿದ್ಯುಕ್ತ ಗೋಷ್ಠಿ – ಗಾಯನ ಸಮರ್ಪಣೆ ನಡೆಯಲಿದೆ.

Read More

ಮಂಗಳೂರು : ಸುರ್ ಸೊಭಾಣ್ ಗಾಯನ ತರಬೇತಿ ಶಾಲೆಯ ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಂದ ‘ಸುರ್ ಸುರಾಯ್’ (ಸ್ವರ -ಶ್ರಾವ್ಯ) ಎಂಬ ಸಂಗೀತ ಕಾರ್ಯಕ್ರಮವು ದಿನಾಂಕ 01 ಫೆಬ್ರವರಿ 2026ರಂದು ಸಂಜೆ 6-30 ಗಂಟೆಗೆ ಶಕ್ತಿನಗರದ ಕಲಾಂಗಣದಲ್ಲಿ ನಡೆಯಲಿದೆ. ಇದು ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 290ನೇ ಕಾರ್ಯಕ್ರಮವಾಗಿದ್ದು, ಪ್ರಸಿದ್ಧ ಗಾಯಕಿ ಹಾಗೂ ಹಿಂದೂಸ್ತಾನಿ ಸಂಗೀತ ತರಬೇತುದಾರರಾದ ಶಿಲ್ಪಾ ತೇಜಸ್ವಿನಿ ಕುಟಿನ್ಹಾ ಇವರ ನಿರ್ದೇಶನದಲ್ಲಿ ತರಬೇತಿ ಪಡೆದ ಮಕ್ಕಳು ಹಿಂದೂಸ್ತಾನಿ ಗಾಯನದ ವಿವಿಧ ರಾಗಗಳನ್ನು ಮತ್ತು ಕೆಲ ಕೊಂಕಣಿ ಹಾಡುಗಳನ್ನು ಹಾಡಲಿರುವರು. ಅದೇ ರೀತಿ ಎರಿಕ್ ಒಝೇರಿಯೊ ಸ್ವರ ಸಂಯೋಜಿಸಿದ ಕೆಲ ಹಾಡುಗಳನ್ನು ಶಾಸ್ತ್ರೀಯ ಸರ್ಗಮದ ಆಧಾರದಲ್ಲಿ ಹಾಡುವ ಪ್ರಯೋಗ ಮೊದಲ ಬಾರಿಗೆ ನಡೆಯಲಿದೆ. ಮಕ್ಕಳೇ ಹಾಡುಗಳ ವಿವರಣೆ ನೀಡಿ, ಕಾರ್ಯಕ್ರಮ ನಿರೂಪಿಸಲಿದ್ದಾರೆ. ಕೆಲ ಪೋಷಕರು ಒಂದು ಹಾಡನ್ನು ಹಾಡಲಿದ್ದಾರೆ. ಉದಯೋನ್ಮುಖ ಸಂಗೀತಗಾರ ಕೇತನ್ ಕ್ಯಾಸ್ತೆಲಿನೊ ನಿರ್ದೇಶನದಲ್ಲಿ ಆಶ್ವಿಲ್ ಕುಲಾಸೊ, ಹ್ಯಾನ್ಸನ್ ಲಸ್ರಾದೊ, ಶನನ್ ಕುಟಿನ್ಹಾ ಮತ್ತು ಐಸ್ಟನ್‌ ರೊಡ್ರಿಗಸ್ ಸಂಗೀತ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ವತಿಯಿಂದ ಪಾಕ್ಷಿಕ ತಾಳಮದ್ದಳೆ ‘ಶರಸೇತು ಬಂಧ’ ಪ್ರಸಂಗದೊಂದಿಗೆ ದಿನಾಂಕ 30 ಜನವರಿ 2026ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಆನಂದ ಸವಣೂರು, ಅಚ್ಯುತ ಪಾಂಗಣ್ಣಾಯ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಗುಡ್ಡಪ್ಪ ಬಲ್ಯ (ಹನೂಮಂತ), ಭಾಸ್ಕರ ಬಾರ್ಯ ಮತ್ತು ವೇಣುಗೋಪಾಲ ಭಟ್ ಮಾಂಬಾಡಿ (ಅರ್ಜುನ), ಪ್ರೇಮಲತಾ ರಾವ್ (ಶ್ರೀ ರಾಮ), ಹರಿಣಾಕ್ಷಿ ಜೆ. ಶೆಟ್ಟಿ (ವೃದ್ಧ ವಿಪ್ರ) ಸಹಕರಿಸಿದರು. ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿ, ಹರೀಶ್ ಪುಣಚ ವಂದಿಸಿದರು. ಶ್ರೀಮತಿ ಪ್ರೇಮಲತಾ ರಾವ್ ಮತ್ತು ಶ್ರೀ ರಂಗನಾಥ ರಾವ್ ಪ್ರಾಯೋಜಿಸಿದರು.

Read More

ಮಂಗಳೂರು : ಸನಾತನ ನಾಟ್ಯಾಲಯ ಮತ್ತು ನೃತ್ಯಾಂಗಣ ಇವರ ವತಿಯಿಂದ ‘ವರ್ಕಾರಿ’ ನೃತ್ಯ ಪ್ರದರ್ಶನವನ್ನು ದಿನಾಂಕ 01 ಫೆಬ್ರುವರಿ 2026ರಂದು ಸಂಜೆ 6-00 ಗಂಟೆಗೆ ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ವರ್ಕಾರಿ/ಅಭ್ಯಂಗ್ಸ್ ವನ್ನು ವ್ಯಾಪಕವಾಗಿ ಅಭ್ಯಾಸಿಸಿ ಭರತನಾಟ್ಯ ಸಂಗ್ರಹಕ್ಕೆ ತಂದಿರುವ ಅದ್ಬುತ ಕಲಾವಿದೆ ದಿವ್ಯಾ ರವಿ ಇವರು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.

Read More

ಉಡುಪಿ : ಕನ್ನಡದ ಖ್ಯಾತ ಕವಿ ಎಸ್.ವಿ. ಪರಮೇಶ್ವರ ಭಟ್ಟ ಇವರ ಹೆಸರಿನ ಪ್ರಶಸ್ತಿಯು ಕನ್ನಡ ಸಾಹಿತ್ಯ, ಅನುವಾದ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಹಿತಿಗಳಿಗೆ ಎಸ್.ವಿ.ಪಿ. ಪ್ರತಿಷ್ಠಾನದಿಂದ ನೀಡುವ ಪ್ರಶಸ್ತಿಯಾಗಿದೆ. 2026ರ ಸಾಲಿನಿಂದ ಈ ಪ್ರಶಸ್ತಿಯನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ನೀಡಲಾಗುವುದು. ಪ್ರಸಕ್ತ ಸಾಲಿನ ಪ್ರಶಸ್ತಿಗೆ ಕನ್ನಡದ ಖ್ಯಾತ ಕವಿ, ಕಥೆಗಾರ ಶ್ರೀ ಸುಬ್ರಾಯ ಚೊಕ್ಕಾಡಿ ಇವರನ್ನು ಪ್ರಶಸ್ತಿ ಸಮಿತಿ ಆಯ್ಕೆ ಮಾಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಸುಬ್ರಾಯ ಚೊಕ್ಕಾಡಿಯವರು 1940ರ ಜೂನ್ 29ರಂದು ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಜನಿಸಿದರು. ಅವರ ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯನವರು ಮತ್ತು ತಾಯಿ ಸುಬ್ಬಮ್ಮನವರು. ಸುಬ್ರಾಯ ಚೊಕ್ಕಾಡಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ 39 ವರ್ಷ ಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ಕವಿ ಗೋಪಾಲಕೃಷ್ಣ…

Read More

ಮಂಗಳೂರು : ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಪ್ರತಿಷ್ಟಿತ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಹಾಗೂ ಅನುವಾದ ಪ್ರಶಸ್ತಿ ಪದಾನ ಸಮಾರಂಭ -2026ವನ್ನು ದಿನಾಂಕ 31 ಜನವರಿ ಹಾಗೂ 01 ಫೆಬ್ರವರಿ 2026ರಂದು ಮಂಗಳೂರಿನ ಕೊಡಿಯಾಲ್-ಬೈಲ್ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ವಿಶ್ವ ಕೊಂಕಣಿ ನಾಟಕ ಮಹೋತ್ಸವದ ಪ್ರಯುಕ್ತ ನಡೆಯಲಿರುವ ನಾಲ್ಕು ಪ್ರಸಿದ್ಧ ಕೊಂಕಣಿ ನಾಟಕಗಳ ಪ್ರದರ್ಶನ ಜನಮನ ಗೆಲ್ಲಲಿದ್ದು, ನೆರೆಯ ಜಿಲ್ಲೆಗಳಿಂದ ನಾಟಕಪ್ರಿಯರನ್ನು ಆಕರ್ಷಿಸಲಿದೆ. ದಿನಾಂಕ 31 ಜನವರಿ 2026ರಂದು ಸಂಜೆ 5-00 ಗಂಟೆಗೆ ಮಂಗಳೂರು ಸಾಧನಾ ಬಳಗ ಶ್ರೀ ಪ್ರಕಾಶ್ ಶೆಣೈ ನೇತೃತ್ವದ ಮಕ್ಕಳ ಕಲಾತಂಡದವರು ‘ಭಕ್ತ ಪುರಂದರ’ಯೆಂಬ ಕೊಂಕಣಿ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಅದೇ ದಿನ ಸಂಜೆ 7-00 ಗಂಟೆಗೆ ಮಂಗಳೂರಿನ ರಂಗ ಅಧ್ಯಯನ ಕೇಂದ್ರ ತಂಡದವರು ಅಭಿನಯಿಸುವ ಜನಪ್ರಿಯ ‘ಚಿಕೆ ರಾಬ್’ (ಹ್ಯಾಂಗ್ ಓನ್) ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ. ದಿನಾಂಕ 01 ಫೆಬ್ರವರಿ 2026ರಂದು ಸಂಜೆ 5-00 ಗಂಟೆಗೆ ಗೋವಾದ…

Read More