Subscribe to Updates
Get the latest creative news from FooBar about art, design and business.
Author: roovari
ಉಡುಪಿ : ಉಡುಪಿಯ ಪ್ರತಿಷ್ಠಿತ ರಾಗಧನ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ 38ನೆಯ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವ ದಿನಾಂಕ 6ರಿಂದ 8 ಫೆಬ್ರವರಿ 2026ರಂದು ನಡೆಯಲಿದೆ. ದಿನಾಂಕ 06 ಫೆಬ್ರವರಿ 2026ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ‘ಆರೋಹಣಂ’ ಸಂಗೀತ ಶಾಲೆಯ ಡಾ. ಅನೀಶ್ ಭಟ್ ಇವರ ಶಿಷ್ಯರಿಂದ ಹಾಡುಗಾರಿಕೆ, ವಯೊಲಿನ್ ನಲ್ಲಿ ಕುಮಾರಿ ಧನಶ್ರೀ ಶಬರಾಯ ಹಾಗೂ ಡಾ. ಬಾಲಚಂದ್ರ ಆಚಾರ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಸಂಜೆ 6-00 ಗಂಟೆಗೆ ಮೈಸೂರಿನ ಖ್ಯಾತ ಕಲಾ ವಿಮರ್ಶಕರಾದ ಪ್ರೊ.ಕೆ. ರಾಮಮೂರ್ತಿ ರಾವ್ ಇವರಿಂದ ಕಾರ್ಯಕ್ರಮ ಉದ್ಘಾಟನೆ ನೆರವೇರಲಿದೆ. ಮುಖ್ಯ ಅತಿಥಿಗಳಾಗಿ ಅದಾನಿ ಸಂಸ್ಥೆಯ ನಿರ್ದೇಶಕ ಕಿಶೋರ್ ಆಳ್ವ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಭಾಗವಹಿಸುವರು. ತದನಂತರ ಇತ್ತೀಚೆಗೆ ‘ಪುರಂದರ ಗಾನ ನರ್ತನ’ ಎಂಬ ಶೀರ್ಷಿಕೆಯಡಿ ಸತತವಾಗಿ 6 ಗಂಟೆ 13 ನಿಮಿಷಗಳ ಕಾಲ…
ಕಾಸರಗೋಡು : ಇರಾ ನೇಮು ಪೂಜಾರಿಯವರು ಕವಿಯಾಗಿ, ಸಾಹಿತಿಯಾಗಿ ಮಂಗಳೂರು ಕಾರಾಗೃಹದಲ್ಲಿ ಕೈದಿಗಳಿಗೆ ಒಂದು ತಿಂಗಳು ಮೇಲ್ಪಟ್ಟು ಕನ್ನಡ ಕಲಿಕೆ ಕಾರ್ಯಕ್ರಮ, ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಮ್ಮೇಳನ, ರಾಜ್ಯ ಸಮ್ಮೇಳನ, ದೆಹಲಿಯಲ್ಲಿ ಕನ್ನಡ ಸಂಘದಲ್ಲಿ ಕವಿಗೋಷ್ಠಿ, ವಿವಿಧ ಜಿಲ್ಲೆಯಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಡೆನ್ಮಾರ್ಕ್ ದೇಶದವರೊಂದಿಗೆ ಹೆಚ್ಚಿನ ಶಿಕ್ಷಣ ಪಡೆದು, ಸುಮಾರು 12 ಕೃತಿ ರಚನೆ, ಸಾಕ್ಷರತೆಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ, ಧಾರ್ಮಿಕ ಕ್ಷೇತ್ರದಲ್ಲಿ, ಸಾಹಿತ್ಯ ಕಾರ್ಯಕ್ರಮ, ಕೃತಿ ಬಿಡುಗಡೆ ಹೀಗೆ ಕನ್ನಡದ ಸೇವೆ ಮಾಡಿರುವುದನ್ನು ಗಮನಿಸಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ದಿನಾಂಕ 22 ಫೆಬ್ರುವರಿ 2026ರಂದು ಕಾಸರಗೋಡು ಕನ್ನಡ ಭವನದಲ್ಲಿ ಜರಗಲಿರುವ ಚುಟುಕು ಸಾಹಿತ್ಯ ಸಮ್ಮೇಳದಲ್ಲಿ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಸರ್ವಧ್ಯಕ್ಷರಾಗಿರುವ ವೇದಿಕೆಯಲ್ಲಿ ‘ಕವಿ ಕಾವ್ಯ ವಿಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಗುವುದೆಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ರವರು ತಿಳಿಸಿರುತ್ತಾರೆ. ಇದೇ ಸಂದರ್ಭದಲ್ಲಿ 101 ಮಂದಿಯಿಂದ…
ಧಾರವಾಡ : ಸಾಧನಕೇರಿಯಲ್ಲಿರುವ ವರಕವಿ ಅಂಬಿಕಾತನಯದತ್ತರ ‘ಶ್ರೀಮಾತಾ’ ಮನೆಯಂಗಳದಲ್ಲಿ ದಿನಾಂಕ 31 ಜನವರಿ 2026ರಂದು ಕವಿದಿನ “ಇದು ಬರೀ ಬೆಳಗಲ್ಲೋ ಅಣ್ಣಾ” ಬೇಂದ್ರೆ ಕಾವ್ಯ ವಾಚನ ಗಾಯನ ಕಾರ್ಯಕ್ರಮವನ್ನು ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಆಯೋಜಿಸಿತ್ತು. ಇಂದು ಬೇಂದ್ರೆಯವರ 130ನೇ ಜನ್ಮ ದಿನ. “ಬೇಂದ್ರೆ ನಮ್ಮ ಹೆಮ್ಮೆ. ಅವರ ಊರಲ್ಲಿ ಇರೋದು ನಮ್ಮ ಸೌಭಾಗ್ಯ. ಧಾರವಾಡದ ಪೋತ್ನಿಸ ಗಲ್ಲಿಯಲ್ಲಿರುವ ಅವರ ಮನೆಯನ್ನು ಸ್ಮಾರಕ ಮಾಡುವದಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾಪೌರರಾದ ಜ್ಯೋತಿ ಪಾಟೀಲ ನುಡಿದರು. ಬೇಂದ್ರೆಯವರು ಜನಮಾನಸದಲ್ಲಿ ಉಳಿಯುವ ಶ್ರೇಷ್ಠ ಕವಿ. ಹೊರಗೆ ಹೋದಲ್ಲೆಲ್ಲಾ ಬೇಂದ್ರೆ ಊರಿನವರೇ ನೀವು ಎಂದು ಜನ ನಮ್ಮನ್ನು ಪ್ರೀತಿ ಗೌರವದಿಂದ ಮಾತನಾಡಿಸುತ್ತಾರೆ” ಎಂದು ಅಭಿಮಾನ ಹಂಚಿಕೊಂಡರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕವಿ ನರಸಿಂಹ ಪರಾಂಜಪೆ “ಅವರು ಕವಿಯಂಗಳದ ಅಂಬೆಗಾಲಿನ ಕೂಸು ನಾನು. ಬೇಂದ್ರೆಯವರ ಆಶೀರ್ವಾದ ಇರುವದರಿಂದಲೇ ನಾಲ್ಕು ಸಾಲು ಬರೆಯುವಂತಾಯಿತು” ಎಂದರು. ಅನೇಕ ದಿಗ್ಗಜರ ಬೇಂದ್ರೆ ವರ್ಣನೆ ವಿವರಿಸುತ್ತ ‘ಬಾ ಹತ್ರರ’ ಬೇಂದ್ರೆ ಕವಿತೆಯ…
ಬೆಂಗಳೂರು : ಬೆಂಗಳೂರಿನ ಒರಿಯಂಟಲ್ ಫೌಂಡೇಶನ್ ರಿಜಿಸ್ಟರ್ ವತಿಯಿಂದ ನಡೆದ 2026 ಸಾಲಿನ ಪ್ರತಿಷ್ಠಿತ ನೋಬೆಲ್ ಕನ್ನಡಿಗ ರಾಜ್ಯ ಪ್ರಶಸ್ತಿಯನ್ನು ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 01 ಫೆಬ್ರುವರಿ 2026ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜಪೇಟೆ, ಕೃಷ್ಣರಾಜ ಪರಿಷತ್ ಮಂದಿರದಲ್ಲಿ ನಡೆಯಿತು. ಜ್ಯೋತಿಷ್ಯ ರತ್ನ ಡಾ. ಕುಮಾರ ವಶಿಷ್ಠ ಆಶೀರ್ವಚನ ನೀಡಿದರು. ಧಾರ್ಮಿಕ ಚಿಂತಕ ಹಾಗೂ ಹಿಂದೂ ಸಭಾ ಅಧ್ಯಕ್ಷರಾದ ಡಾ. ಪ್ರಹಲ್ಲಾದ್, ಡಾ. ವಿಜಯಕುಮಾರ್, ಕರ್ನಾಟಕ ರಾಜ್ಯ ಸಿ.ಆರ್.ಒ. ಅಧ್ಯಕ್ಷರಾದ ಡಾ. ರಾಜೀವ್ ಗಾಂಧಿ, ಹೆಸರಾಂತ ನಟಿ ಅಭಿನಯ, ಖ್ಯಾತ ಹಿನ್ನೆಲೆ ಗಾಯಕಿ ಡಾ. ಗೀತಾ ಎಚ್. ಕೈವಾರ, ಡಾ. ಸ್ಮಿತಾ ಪಾಟೀಲ್, ಮಹಾಲಕ್ಷ್ಮಿ ವೃದ್ಧಾಶ್ರಮದ ಡಾ. ಗೋವಿಂದರಾಜು, ಕರ್ನಾಟಕ ರೈತ ಸಂಘದ ಡಾ. ಎಚ್. ಪುಷ್ಪಲತಾ, ಹಾಸ್ಯ ಕಲಾವಿದ ಮೈಸೂರು ರಮಾನಂದ, ಕರ್ನಾಟಕ ರೈತ…
ಮಂಗಳೂರು : ದ.ರಾ. ಬೇಂದ್ರೆಯವರು ಕನ್ನಡದ ಶ್ರೇಷ್ಠ ಕವಿ. ಕಾವ್ಯವನ್ನೇ ಉಸಿರಾಡಿದ ಈ ಕವಿಯು ಕನ್ನಡದ ಎಲ್ಲ ಮಾದರಿಯ ಕಾವ್ಯ ಪ್ರಕಾರಗಳಲ್ಲೂ ತನ್ನ ಪ್ರತಿಭೆಯನ್ನು ಮೆರೆದವರು. ಬೇಂದ್ರೆ ಅವರ ಭಾಷಾ ವೈಖರಿಯು ಅದ್ಭುತವಾದುದು. ಅವರ ಕಾವ್ಯ ಜನಪದ ಗೀತೆಗಳಂತೆ ಕಂಡರೂ ಜನಪದವನ್ನು ಮೀರಿ ಆತ್ಮ ಅಧ್ಯಾತ್ಮಗಳ ಕಡೆಗೆ ಮುಖ ಮಾಡಿರುವುದು ಕವಿಯ ಅನನ್ಯತೆಯೇ ಆಗಿದೆ. 31 ಜನವರಿ 1896ರಲ್ಲಿ ಜನಿಸಿ ಕನ್ನಡ ಕಾವ್ಯದ ಅದ್ಭುತಗಳನ್ನು ಸೃಷ್ಟಿಸಿದ ಕವಿ ಬೇಂದ್ರೆಯವರ 131ನೇ ಜನ್ಮದಿನಾಚರಣೆಯನ್ನು ಮಂಗಳೂರಿನ ಕವಿ ಮಿತ್ರರು ಆಚರಿಸಿದರು. ಬೇಂದ್ರೆಯವರ ಕಾವ್ಯದ ಬಗ್ಗೆ ಮಾತುಕತೆ, ಸಂವಾದ, ಕವಿತಾ ವಾಚನಗಳ ಮೂಲಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರೊ. ಪಿ. ಕೃಷ್ಣಮೂರ್ತಿ, ಗುಣಾಜೆ ರಾಮಚಂದ್ರ ಭಟ್, ಡಾ. ಸುರೇಶ ನೆಗಳಗುಳಿ, ಮಹೇಶ ಆರ್. ನಾಯಕ್, ಎನ್. ಸುಬ್ರಾಯ ಭಟ್, ರೇಮಂಡ್ ಡಿಕುನ್ಹ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ರಾಜೇಂದ್ರ ಕೇದಿಗೆ, ಗೋಪಾಲಕೃಷ್ಣ ಶಾಸ್ತ್ರಿ, ಅನಾರ್ಕಲಿ ಸಲೀಂ ಮಂಡ್ಯ, ವೆಂಕಟೇಶ್ ಗಟ್ಟಿ, ರಘು ಇಡ್ಕಿದು, ವಿಭಾ ನಾರಾಯಣ್ ಪಾಲ್ಗೊಂಡಿದ್ದರು.
ಧಾರವಾಡ : ಗುರುಗಳ ಅನ್ವೇಷಣೆಗಾಗಿ ಮನೆ ಬಿಟ್ಟು ಉತ್ತರ ಭಾರತದಾದ್ಯಂತ ಸಂಚರಿಸಿ, ಅಲ್ಲಿ ವಿವಿಧ ಸಂಗೀತಗಾರರ ಸೇವೆಗೈದು ಪಂ. ವಿನಾಯಕರಾವ್ ಪಟವರ್ಧನರಿಂದ ದೊರೆತ ಸಲಹೆಯ ಮೇರೆಗೆ ಕುಂದಗೋಳದ ಸವಾಯಿ ಗಂಧರ್ವರ ಕಠೋರ ಶಿಷ್ಯತ್ವ ಸ್ವೀಕರಿಸಿ, ‘ಭೀಮಸೇನಿ ಗಾಯಕಿ’ಯಿಂದ ಸಂಗೀತ ಲೋಕದ ಧ್ರುವತಾರೆಯಾಗಿ ರಾರಾಜಿಸುತ್ತಿರುವವರು ಭಾರತರತ್ನ ಪಂಡಿತ್ ಭೀಮಸೇನ ಜೋಶಿ ಇವರ ಸಂಸ್ಮರಣೆಯಲ್ಲಿ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಅನೇಕ ವರ್ಷಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ‘ಭೀಮಣ್ಣ’ನವರ ಜನ್ಮದಿನ ಹಾಗೂ ಪುಣ್ಯತಿಥಿ ಅಂಗವಾಗಿ ಸಂಗೀತೋತ್ಸವಗಳನ್ನು ಆಯೋಜಿಸಿದೆ. ಭೀಮಪಲಾಸ ಸಂಗೀತೋತ್ಸವದ ಸರಣಿ ಕಾರ್ಯಕ್ರಮದ ಮುಂದಿನ ಭಾಗವಾಗಿ ಈಗ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಪಂಡಿತ್ ಭೀಮಸೇನ ಜೋಶಿಯವರ 104ನೇ ಜನ್ಮದಿನದ ಅಂಗವಾಗಿ ದಿನಾಂಕ 04 ಫೆಬ್ರುವರಿ 2026ರಂದು ಸಂಜೆ 5-00 ಗಂಟೆಗೆ ಧಾರವಾಡದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ‘ಸ್ವರ ಝಂಕಾರ’ ಕಾರ್ಯಕ್ರಮವನ್ನು ಆಯೋಜಿಸಿದ್ದು, ಗಾಯನ-ವಾದನಗಳ ನಿನಾದ ಹರಿದುಬರಲಿದೆ. ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಕ್ಷಮತಾ ಸಂಸ್ಥೆ ಹಾಗೂ ಪುಣೆಯ ವಯೋಲಿನ್…
ಕಾಸರಗೋಡು : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ ಅರವತ್ತ್ ಬೇಕಲ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಂಯುಕ್ತ ಆಶ್ರಯದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಮತ್ತು ಕರ್ನಾಟಕ ಜಾನಪದ ಪರಿಷತ್ತು ಯುಎಇ ಮತ್ತು ಒಮಾನ್ ಘಟಕದ ಸಹಕಾರದಲ್ಲಿ ದಿನಾಂಕ 01 ಫೆಬ್ರುವರಿ 2026ರಂದು ಬೆಳಗ್ಗೆ 9-00 ಗಂಟೆಗೆ ಬೇಕಲ ಅರವತ್ತ್ ಆಂಫಿಥಿಯೇಟರ್ಸ್ ‘ಸಮನ್ವಯ ಗಡಿನಾಡ ಜಾನಪದ ಉತ್ಸವ’ ನಡೆಯಲಿದೆ. ಬೆಳಗ್ಗೆ 9-00ಕ್ಕೆ ಮುದಿಯಕ್ಕಲ್ನಿಂದ ಟ್ರಸ್ಟ್ ಕಚೇರಿವರೆಗೆ ಸಾಂಸ್ಕೃತಿಕ ಮೆರವಣಿಗೆ, 9.30ಕ್ಕೆ ಚೆಂಡೆಮೇಳ, 10ರಿಂದ ಕಥಕ್ಕಳಿ –ಯಕ್ಷಗಾನ ಪ್ರದರ್ಶನ ನಡೆಯಲಿದೆ. 10.30ಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಕರ್ನಾಟಕ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಉದ್ಘಾಟಿಸುವರು. ಕೇರಳ ಮ್ಯೂಸಿಯಂ ಮತ್ತು ಪುರಾತತ್ವ ಇಲಾಖೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ…
ಕುಂದಾಪುರ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಹಾಗೂ ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಆಶ್ರಯದಲ್ಲಿ ಉಡುಪಿ ಜಿಲ್ಲಾ ಗಮಕ ಕಲಾ ಸಮ್ಮೇಳನವು ದಿನಾಂಕ 24 ಜನವರಿ 2026ರಂದು ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆಯಿತು. ಈ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ “ಗಮಕ ವಿಶಿಷ್ಟವಾದ ಕಲೆ. ಪದ್ಯವನ್ನು ಸುಲಭವಾಗಿ ಅರ್ಥವಾಗುವಂತೆ, ಲಯಬದ್ಧವಾಗಿ, ಸಂಗೀತದ ರೂಪದಲ್ಲಿ ಹೇಳುವುದೇ ಗಮಕ. ಪುರಾಣದ ಕಥೆಗಳನ್ನು ಗಮಕದ ಮೂಲಕ ಸರಳವಾಗಿ ಅರ್ಥ ಮಾಡಿಕೊಳ್ಳಬಹುದು. ಕನ್ನಡ ಭಾಷೆ ಇನ್ನಷ್ಟು ಶ್ರೀಮಂತವಾಗಬೇಕಾದರೆ ಗಮಕ ಕಲೆಗೆ ಮತ್ತಷ್ಟು ವಿಶೇಷ ಆದ್ಯತೆ ನೀಡಬೇಕು” ಎಂದು ಹೇಳಿದರು. “ಬಹು ಪ್ರತಿಭೆಗಳು ಅಂತರ್ಗತಗೊಳಿಸಿರುವ ಅದ್ಭುತ ಕಲಾ ಪ್ರಕಾರವೇ ಗಮಕ. ಸುಶ್ರಾವ್ಯತೆ, ರಸಾನುಭವ, ಭಾಷಾ ಸೌಂದರ್ಯ, ಕಾವ್ಯದ ಅರ್ಥವಂತಿಕೆ ಇದೆಲ್ಲದರ ಸಮರ್ಥ ಅರ್ಥ ಅಭಿವ್ಯಕ್ತಿಗೆ ಪೂರಕವಾದ ರಾಗ, ಭಾವ, ರಹಸ್ಯ ಇತ್ಯಾದಿಗಳು ಮೇಲೈಸಿರುವ ಕಲೆಯೇ ಗಮಕ. ಸಂಗೀತ, ಸಾಹಿತ್ಯ,…
ಶಿವಮೊಗ್ಗ : ಕರ್ನಾಟಕ ಸಂಘದಿಂದ 2025ನೇ ಸಾಲಿನ ‘ಪುಸ್ತಕ ಬಹುಮಾನ’ಕ್ಕೆ ಲೇಖಕರು ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ. 2025ರಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾದ ಕಾದಂಬರಿ, ಅನುವಾದ, ಮಹಿಳಾ ಸಾಹಿತ್ಯ, ಅಂಕಣ ಬರಹ, ನಾಟಕ, ಪ್ರವಾಸ ಸಾಹಿತ್ಯ, ಕವನ ಸಂಕಲನ ಸೇರಿದಂತೆ ಒಟ್ಟು 12 ವಿಭಾಗಗಳಲ್ಲಿ ಕೃತಿಗಳನ್ನು ಕಳುಹಿಸಬಹುದು. ಬಹುಮಾನಕ್ಕೆ ಕಳುಹಿಸುವ ಕೃತಿಗಳು ಮರು ಮುದ್ರಣ ಆಗಿರಬಾರದು. ಹಸ್ತಪ್ರತಿ, ಸಂಪಾದಿತ ಕೃತಿಗಳಿಗೆ ಅವಕಾಶ ಇಲ್ಲ. ಈ ಹಿಂದೆ ಬಹುಮಾನ ಪಡೆದವರು ಅದೇ ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ. ಬಹುಮಾನಕ್ಕೆ ಒಟ್ಟು 4 ಪುಸ್ತಕ ಕಳುಹಿಸಬೇಕು. ಕೃತಿ ಕಳುಹಿಸಲು 31 ಮಾರ್ಚ್ 2026 ಕಡೆಯ ದಿನವಾಗಿದೆ. ಪುಸ್ತಕಗಳನ್ನು ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಎಚ್. ರಸ್ತೆ, ಶಿವಮೊಗ್ಗ ಈ ವಿಳಾಸಕ್ಕೆ ಕೋರಿಯರ್ ಅಥವಾ ಅಂಚೆ ಮೂಲಕ ಇಲ್ಲವೇ ಖುದ್ದಾಗಿ ಸಲ್ಲಿಸಬೇಕು. ಆಯ್ಕೆಯಾದ ಕೃತಿಗಳಿಗೆ ರೂ.10,000 ನಗದು ಬಹುಮಾನವಿದೆ. ಮಾಹಿತಿಗೆ 9980159696 ಸಂಪರ್ಕಿಸಬಹುದು.
ಸಾಗರ : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಸಾಗರ ಘಟಕ ಶಿವಮೊಗ್ಗ ಜಿಲ್ಲೆ ಇವರ ವತಿಯಿಂದ ದಿನಾಂಕ 01 ಫೆಬ್ರುವರಿ 2026ರಂದು ಸಂಜೆ 4-30 ಗಂಟೆಗೆ ಸಾಗರ ವಿಜಯನಗರ ಕಂಬಳಿಕೊಪ್ಪ ಕ್ರಾಸ್ ಎದುರು ಭೀಮನ ಕೋಣೆ ರಸ್ತೆ, ಆಶೀರ್ವಾದ ಲೇಔಟ್ ಡಾ. ಅನ್ನಪೂರ್ಣ ಶ್ರೀ ಲೋಕೇಶ್ ಬಿ.ಎನ್. ಇವರ ‘ಅನಂತ ವಿಜಯ ನಿಲಯ’ದಲ್ಲಿ ಹಮ್ಮಿಕೊಳ್ಳಲಾಗಿದೆ. ಮಾನ್ಯ ಉಪ ವಿಭಾಗಾಧಿಕಾರಿಗಳಾದ ವೀರೇಶ್ ಕುಮಾರ್ ಕೆ.ಎ.ಎಸ್. ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಸಾಗರ ಘಟಕದ ಅಧ್ಯಕ್ಷರಾದ ಸತ್ಯನಾರಾಯಣ ಸಿರಿವಂತೆ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಕ. ಸಾ. ಪ. ಮತ್ತು ಕ. ಜಾ. ಪ. ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಡಿ. ಮಂಜುನಾಥ ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತು ಕಲಾವಿದರಿಂದ ಜಾನಪದ ಗಾಯನ ಪ್ರಸ್ತುತಿ ನಡೆಯಲಿದೆ.