Author: roovari

ಬೆಂಗಳೂರು : ಬುಕ್ ಬ್ರಹ್ಮ ಸಂಸ್ಥೆಯು ಕೋರಮಂಗಲದ ಸೈಂಟ್ ಜಾನ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ಕ್ಕೆ ದಿನಾಂಕ 09 ಆಗಸ್ಟ್ 2024ರಂದು ಚಾಲನೆ ದೊರೆಯಲಿದೆ. ಕನ್ನಡದ ಸಾಹಿತಿಗಳೊಂದಿಗೆ ಹೊರ ರಾಜ್ಯಗಳು ಹಾಗೂ ವಿದೇಶಿ ಬರಹಗಾರರೂ ಈ ಸಾಹಿತ್ಯ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿನಾಂಕ 09 ಆಗಸ್ಟ್ 2024ರಿಂದ 11 ಆಗಸ್ಟ್ 2024ರವರೆಗೆ ಮೂರೂ ದಿನ ಬೆಳಿಗ್ಗೆ 9-00ರಿಂದ ರಾತ್ರಿ 8-00 ಗಂಟೆಯವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಸಾಹಿತ್ಯ ಗೋಷ್ಠಿಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. 300 ಬರಹಗಾರರು ಈ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ, ಮಾತ್ರವಲ್ಲದೆ, ಕೆಲ ವಿದೇಶಿ ಬರಹಗಾರರು ಭಾಗವಹಿಸುತ್ತಾರೆ. ಕನ್ನಡ, ತಮಿಳು, ಮಲಯಾಳಂ, ತೆಲುಗು ಮತ್ತು ಇಂಗ್ಲೀಷ್ ಭಾಷೆಯ 50ಕ್ಕೂ ಅಧಿಕ ಪುಸ್ತಕ ಮಳಿಗೆಗಳು ಉತ್ಸವದಲ್ಲಿ ಇರಲಿವೆ. ದಕ್ಷಿಣದ ಐದು ರಾಜ್ಯಗಳಿಂದ ನೂರಕ್ಕೂ ಅಧಿಕ ಪ್ರಕಾಶಕರು ಭಾಗವಹಿಸಲಿದ್ದು, ಉತ್ಸವದಲ್ಲಿ ಪ್ರಕಾಶಕರ ಸಮಾವೇಶವೂ ನಡೆಯಲಿದೆ. ಇದೇ ಸಂದರ್ಭದಲ್ಲಿ ಭಾರತೀಯ ಭಾಷೆಗಳಲ್ಲಿ ಸಾಹಿತ್ಯ ಸೃಷ್ಟಿಸಿ, ಮಹತ್ವದ ಕೊಡುಗೆ ನೀಡಿದ ಸಾಹಿತಿಗಳಿಗೆ…

Read More

ಬೆಂಗಳೂರು : ನಟನ ರಂಗಶಾಲೆಯ ವತಿಯಿಂದ ದಿನಾಂಕ 09 ಆಗಸ್ಟ್ 2024, 15 ಆಗಸ್ಟ್ 2024 ಮತ್ತು 22 ಆಗಸ್ಟ್ 2024ರಂದು ಪ್ರತಿದಿನ ಸಂಜೆ 6-30 ಗಂಟೆಗೆ ಬೆಂಗಳೂರಿನಲ್ಲಿ ನಟನದ ನಾಟಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ 09 ಆಗಸ್ಟ್ 2024ರಂದು ಕೋರಮಂಗಲದ ಸೈಂಟ್ ಜಾನ್ಸ್ ಆಡಿಟೋರಿಯಂನಲ್ಲಿ ಡಾ. ಶ್ರೀಪಾದ ಭಟ್ ಇವರ ನಿರ್ದೇಶನದಲ್ಲಿ ಬುಕ್ ಬ್ರಹ್ಮ ಲಿಟ್ ಫೆಸ್ಟ್ 2024 ಸಲುವಾಗಿ ಆಯೋಜಿಸಿರುವ ‘ಕನ್ನಡ ಕಾವ್ಯ ಕಣಜ’ ನಾಟಕ, ದಿನಾಂಕ 15 ಆಗಸ್ಟ್ 2024ರಂದು ಜಯನಗರದ ಸರದೇವ ಕಣ್ಣಿನ ಆಸ್ಪತ್ರೆಯ ಕಲಾ ಕಾಂಪೌಂಡ್ ಇಲ್ಲಿ ಡಾ. ಶ್ರೀಪಾದ ಭಟ್ ಇವರ ನಿರ್ದೇಶನದಲ್ಲಿ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ‘ಕಣಿವೆಯ ಹಾಡು’ ನಾಟಕ ಮತ್ತು ದಿನಾಂಕ 22 ಆಗಸ್ಟ್ 2024ರಂದು ಮಲ್ಲತ್ತಳ್ಳಿ ಕಲಾ ಗ್ರಾಮದಲ್ಲಿ ಮಂಡ್ಯ ರಮೇಶ್ ಇವರ ನಿರ್ದೇಶನದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ವತಿಯಿಂದ ಆಯೋಜಿಸಿರುವ ‘ಸ್ಥಾವರವೂ ಜಂಗಮ’ ನಾಟಕಗಳು ಪ್ರದರ್ಶನಗೊಳ್ಳಲಿದೆ.

Read More

ಬೆಂಗಳೂರು : ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ವತಿಯಿಂದ ಬೆಂಗಳೂರಿನ ಕೆ.ಆರ್. ರೋಡ್, ಗಾಯನ ಸಮಾಜದ ಸಭಾಂಗಣದಲ್ಲಿ ದಿನಾಂಕ 03 ಆಗಸ್ಟ್ 2024ರಂದು ‘ಆಚಾರ್ಯರ ಜನ್ಮಾರಾಧನೆ 88’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ವಾಂಸ ಪ್ರೊ. ಪಾದೇಕಲ್ಲು ವಿಷ್ಣು ಭಟ್ಟ ಇವರು ಮಾತನಾಡಿ “ಯಾವುದೇ ವಿಷಯವಾಗಲಿ ಸತ್ಯವಾಗಿ ಕಂಡದ್ದನ್ನು ಯಾರ ಮುಲಾಜು ಇಲ್ಲದೇ ಹೇಳುವಂತಹ ಗುಣವನ್ನು ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು ರೂಢಿಸಿಕೊಂಡಿದ್ದರು. ಗೋವಿಂದಾಚಾರ್ಯರು ಉದಯವಾಣಿ ಪತ್ರಿಕೆಯಲ್ಲಿ ಬರೆಯುತ್ತಿದ್ದ ‘ಕಿಷ್ಕಂದ ಕಾಂಡ’ ಎಂಬ ಅಂಕಣವನ್ನು ನಾನು ಪ್ರೌಢಶಾಲೆಯಲ್ಲಿ ಇದ್ದಾಗ ಮಕ್ಕಳೆಲ್ಲಾ ಅತ್ಯಂತ ಕುತೂಹಲದಿಂದ ಓದುತ್ತಿದ್ದೆವು. ಸರಳವಾಗಿ, ಸ್ಪಷ್ಟವಾಗಿ ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುತ್ತಿದ್ದರು. ಜತೆಗೆ ಯಾವುದೇ ವಿಶೇಷ ದಿನ ಅಥವಾ ಹಬ್ಬಗಳ ಸಂದರ್ಭದಲ್ಲಿ ವಿಶೇಷಗಳ ಲೇಖನಗಳು ಅವರಲ್ಲಿ ಸದಾ ಸಿದ್ಧವಾಗಿರುತ್ತಿದ್ದವು. ಬನ್ನಂಜೆಯವರು 44 ವರ್ಷಗಳ ಕಾಲ ಈ ಉತ್ಸವದಲ್ಲಿ ಉಪನ್ಯಾಸ ಮಾಡಿದ್ದಾರೆ. ರಾಮಾಯಣ, ಮಹಾಭಾರತ ಅವರಿಗೆ ಕಂಠಸ್ಥವಾಗಿತ್ತು. ಅವರು ಸಾಂಪ್ರದಾಯಿಕರನ್ನು ಹಾಗೂ ಆಧುನೀಕತೆಯರನ್ನೂ ಟೀಕಿಸುತ್ತಿದ್ದರು. ಆದರೂ ಇವರಿಬ್ಬರಿಗೂ…

Read More

ಮಂಗಳೂರು : ಯಕ್ಷಗಾನ ಕಲಾವಿದ ರಕ್ಷಿತ್ ಶೆಟ್ಟಿ ಪಡ್ರೆ ಇವರ ಶಿಷ್ಯವೃಂದದ ಯಕ್ಷ ಸಿದ್ದಿ ಸಂಭ್ರಮದ ಪ್ರಯುಕ್ತ ಸಿದ್ಧಿ ದಶಯಾನ ಕಾರ್ಯಕ್ರಮವು ದಿನಾಂಕ 10 ಆಗಸ್ಟ್ 2024 ಮತ್ತು 11 ಆಗಸ್ಟ್ 2024ರಂದು ಮಂಗಳೂರಿನ ಉರ್ವಸ್ಟೋರ್ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಆಯೋಜಿಸಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ತರಗತಿ ನಡೆಸುತ್ತಿರುವ ರಕ್ಷಿತ್ ಶೆಟ್ಟಿ ಪಡ್ರೆಯವರ ಯಕ್ಷ ಶಿಕ್ಷಣ ಕಾರ್ಯಕ್ಕೆ ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ದಶಮಾನೋತ್ಸವ ಅಂಗವಾಗಿ ವಿವಿಧೆಡೆಯ ಶಿಷ್ಯವೃಂದ ಒಗ್ಗೂಡಿಸಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಒಂದೇ ವೇದಿಕೆಯಲ್ಲಿ 300ಕ್ಕೂ ಅಧಿಕ ಶಿಷ್ಯರು ಭಾಗವಹಿಸಲಿದ್ದಾರೆ. ದಿನಾಂಕ 10 ಆಗಸ್ಟ್ 2024ರಂದು ಬೆಳಗ್ಗೆ 9-00 ಗಂಟೆಗೆ ಚೌಕಿಪೂಜೆ, ಪೂರ್ವರಂಗ ನಡೆಯಲಿದೆ. ಬೆಳಗ್ಗೆ 10-00 ಗಂಟೆಗೆ ಯಕ್ಷಗಾನ ವಿದ್ವಾಂಸ ಶ್ರೀ ವಾಸುದೇವ ರಂಗಾ ಭಟ್ಟ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸುವರು. ಬೆಳಗ್ಗೆ 10.30ರಿಂದ ‘ದೇವಸೇನಾನಿ’, ‘ಪಾವನ ಪಕ್ಷಿ’, ‘ದಾಶರಥಿ ದರ್ಶನ’, ಧರ್ಮ ದಂಡನೆ’ ಎಂಬ ಪ್ರಸಂಗದ ಯಕ್ಷಗಾನ…

Read More

ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯು ಕನ್ನಡದ ಕೆಲವು ಉತ್ಸಾಹಿ ಪ್ರಕಾಶಕರ ನೆರವಿನೊಂದಿಗೆ ಕನ್ನಡದಲ್ಲಿ ಜನಪ್ರಿಯ ವೈಜ್ಞಾನಿಕ ಕೃತಿಗಳನ್ನು ಬರೆಯಬಲ್ಲ ಉದಯೋನ್ಮುಖ ಬರಹಗಾರರ ಕೃತಿಗಳನ್ನು ಪ್ರಕಟಿಸುವ ಯೋಜನೆ ಹಾಕಿಕೊಂಡಿದೆ. ವಿಜ್ಞಾನದಲ್ಲಿ ಪದವಿ ಪಡೆದ ಮತ್ತು ಇತ್ತೀಚೆಗೆ ಬರೆಯಲಾರಂಭಿಸಿರುವ ಯುವ ಮತ್ತು ಮಧ್ಯವಯಸ್ಕ ಬರಹಗಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಪುಸ್ತಕಗಳು 2025ರ ಆರಂಭದಲ್ಲಿ ಪ್ರಕಟವಾಗಲಿವೆ. ನಿಯಮಗಳು : 1) ವಿಜ್ಞಾನದ ಯಾವುದೇ ಪ್ರಕಾರದಲ್ಲಿ ಲೇಖನ, ಪ್ರಬಂಧ ಮತ್ತು ಕಥೆಗಳನ್ನು ಬರೆಯಬಹುದು. 2) ಬರಹಗಳು ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ಸರಳ ಮತ್ತು ಜನಪ್ರಿಯ ಶೈಲಿಯಲ್ಲಿರಬೇಕು. 3) ಸ್ವತಂತ್ರ, ಅನುವಾದ, ಅನುಸೃಷ್ಟಿ ಮತ್ತು ರೂಪಾಂತರ ಮಾಡಿದ ಗುಣಮಟ್ಟದ ಲೇಖನಗಳಿಗೂ ಅವಕಾಶವಿದೆ. 4) ಕೃತಿಯಲ್ಲಿ ಕನಿಷ್ಠ 20 ಲೇಖನಗಳು, ಗರಿಷ್ಠ 30 ಲೇಖನಗಳಿರಬೇಕು. 5) ಕೃತಿಯಲ್ಲಿ ಕನಿಷ್ಠ 25000, ಗರಿಷ್ಠ 35000 ಪದಗಳಿರಬೇಕು. 6) ತಪ್ಪಿಲ್ಲದಂತೆ ಟೈಪಿಸಿದ ಸಾಫ್ಟ್ ಕಾಪಿಯನ್ನು ಕಳಿಸಬೇಕು. ಕೈ ಬರಹದ ಹಸ್ತಪ್ರತಿ ಸ್ವೀಕರಿಸಲಾಗುವುದಿಲ್ಲ. 7) ಒಬ್ಬ ಬರಹಗಾರರು ಒಂದು ಕೃತಿಯನ್ನು…

Read More

ಕುಮಟಾ : ಯಕ್ಷಗಾನ ಸಂಶೋಧನಾ ಕೇಂದ್ರ (ರಿ.) ಮಣಕಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಶ್ರಾವಣ ಯಕ್ಷ ಸಂಭ್ರಮ’ವನ್ನು ದಿನಾಂಕ 10 ಆಗಸ್ಟ್ 2024ರಂದು ಸಂಜೆ 4-00 ಗಂಟೆಗೆ ಕುಮಟಾ ಮೂರೂರು ರಸ್ತೆಯಲ್ಲಿರುವ ಹವ್ಯಕ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಶಾಸಕರಾದ ಶ್ರೀ ದಿನಕರ ಕೆ. ಶೆಟ್ಟಿ ಇವರು ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ರವಿ ನಾಯಕ ಇವರು ಅತಿಥಿಯಾಗಿ ಭಾಗವಹಿಸಲಿರುವರು. ಕನ್ಯಾನ ವೆಂಕಟ್ರಮಣ ಭಟ್ಟ ವಿರಚಿತ ‘ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಭಾಗವತರು ಶ್ರೀ ರಾಮಕೃಷ್ಣ ಹಿಲ್ಲೂರು, ಮದ್ದಲೆಯಲ್ಲಿ ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಮತ್ತು ಚಂಡೆಯಲ್ಲಿ ಶ್ರೀ ಗಜಾನನ ಹೆಗಡೆ ಸಾಂತೂರು ಹಾಗೂ ಮುಮ್ಮೇಳದಲ್ಲಿ ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ, ಶ್ರೀ ನರಸಿಂಹ ಚಿಟ್ಟಾಣಿ, ಶ್ರೀ ವಿಘ್ನೇಶ್ವರ ಹಾವಗೋಡಿ, ಶ್ರೀ ಸುಬ್ರಹ್ಮಣ್ಯ ಮೂರೂರು, ಶ್ರೀ ಶಂಕರ ಹೆಗಡೆ ನೀಲಕೋಡು ಮತ್ತು ಶ್ರೀಧರ ಹೆಗಡೆ ಚಪ್ಪರಮನೆ ಇವರುಗಳು ಸಹಕರಿಸಲಿದ್ದಾರೆ.

Read More

ಮಂಗಳೂರು : ಕಾಸರಗೋಡು ಜಿಲ್ಲೆಯೂ ಸೇರಿದಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ಸಾಹಿತ್ಯ ಸಂಗಮ ಸಂಸ್ಥೆಯ ಆಶ್ರಯದಲ್ಲಿ ಪ್ರತಿ ವರ್ಷವೂ ಆಯೋಜಿಸುತ್ತಾ ಬಂದಿರುವ ಮಕ್ಕಳ ಸಾಹಿತ್ಯಿಕ, ಸಾಂಸ್ಕೃತಿಕ ಹಬ್ಬ ಮಕ್ಕಳ ಧ್ವನಿ 2023-24ನೇ ಸಾಲಿನ ‘ಮಕ್ಕಳ ಧ್ವನಿ ಸಾಹಿತ್ಯ ಸಮ್ಮೇಳನ’ವನ್ನು 2024ನೇ ಸೆಪ್ಟೆಂಬರ್ ತಿಂಗಳ 2ನೇ ವಾರದಲ್ಲಿ ಸುರತ್ಕಲ್ಲಿನ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇದರ ಅಂಗವಾಗಿ ಕಾರ್ಡ್ ಕಥೆ ಹಾಗೂ ಕವನ ಗೋಷ್ಠಿಯನ್ನು ಆಯೋಜಿಸಲಾಗಿದೆ. ಈ ಸಮ್ಮೇಳನದ ಗೋಷ್ಠಿಗಾಗಿ ಪ್ರಾಥಮಿಕದಿಂದ ಪ್ಲಸ್ ಟು ಅಥವಾ ಪದವಿ ಪೂರ್ವ ತರಗತಿಯ ತನಕದ ಆಸಕ್ತ ವಿದ್ಯಾರ್ಥಿಗಳಿಂದ ಸ್ವತಂತ್ರ, ಸ್ವರಚಿತ ಕಥೆ ಹಾಗೂ ಕವನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಸ್ವರಚಿತ ಬರಹಗಳನ್ನು ಪ್ರೊ. ರಮೇಶ್ ಭಟ್ ಎಸ್.ಜಿ., ಕಾರ್ಯದರ್ಶಿ, ಮಕ್ಕಳ ಸಾಹಿತ್ಯಸಂಗಮ, ಶ್ರೀನಿಕೇತನ, 1-194(1), ಎನ್.ಎಂ.ಪಿ.ಟಿ. ಕಾಲನಿಯ ಹಿಂಭಾಗ, ಕಡಂಬೋಡಿ, ಹೊಸಬೆಟ್ಟು, ಕುಳಾಯಿ ಅಂಚೆ, ಸುರತ್ಕಲ್ – 575019 ವಿಳಾಸಕ್ಕೆ 20 ಆಗಸ್ಟ್ 2024ರ ಮೊದಲು…

Read More

ಕುಂಬಳೆ: ಕಣಿಪುರ ಮಿತ್ರ ಬಳಗ ಮತ್ತು ಕುಂಬಳೆ ಶ್ರೀಧರ ರಾವ್ ಅಭಿಮಾನಿ ಬಳಗದ ವತಿಯಿಂದ ಇತ್ತೀಚೆಗೆ ನಿಧನರಾದ ಕುಂಬಳೆ ಶ್ರೀಧರ ರಾವ್‌ ಇವರಿಗೆ ನುಡಿನಮನ ಹಾಗೂ ತಾಳಮದ್ದಳೆ ಕಾರ್ಯಕ್ರಮವು  28 ಜುಲೈ 2024ರಂದು ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ, ಅಂಕಣಕಾರ, ಕಲಾವಿದ ನಾ. ಕಾರಂತ ಪೆರಾಜೆ “ತೆಂಕುತಿಟ್ಟಿನ ಹಿರಿ ಪರಂಪರೆಯ ಮೇರು ಕಲಾವಿದರ ಸಾಲಿನಲ್ಲಿ ದಿ. ಕುಂಬಳೆ ಶ್ರೀಧರ ರಾವ್ ಇವರು ಗರತಿ ಪಾತ್ರಗಳಲ್ಲಿ ಅಚ್ಚೊತ್ತಿ, ಮಾದರಿ ಪಾತ್ರಗಳನ್ನು ಸೃಜಿಸಿದ ಸೃಷ್ಟಿಶೀಲ ಕಲಾವಿದ. ಶೇಣಿ, ಸಾಮಗ ಸಹಿತ ಗತ ಪರಂಪರೆಯ ಮೇರು ಕಲಾವಿದರ ಜೊತೆ ರಂಗದಲ್ಲಿ ಅಷ್ಟೇ ಸಮರ್ಥವಾಗಿ ಮೆರೆದು ಎಲ್ಲರ ಪ್ರೀತಿಗೆ ಪಾತ್ರರಾದವರು. ಅವರ ಕಲಾ ಬದುಕಿನ ಆಳ ಅಗಲ ಅತ್ಯಂತ ವಿಸ್ತಾರವಾದುದು.” ಎಂದು ಹೇಳಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಮಾತನಾಡಿ “ನಮ್ಮ ನೆಲಕ್ಕೆ ಕೀರ್ತಿ ತಂದ ಕಲಾವಿದರನ್ನು ಸ್ಮರಿಸುವುದು ನಮ್ಮ…

Read More

 ಮಂಗಳೂರು: ವಿಶ್ವ ಬಂಟ ಪ್ರತಿಷ್ಠಾನವು ಡಾ. ಡಿ. ಕೆ. ಚೌಟ ದತ್ತಿನಿಧಿಯಿಂದ ನೀಡುವ ‘ಯಕ್ಷಗಾನ ಪ್ರಶಸ್ತಿ’ಗೆ 2024ನೇ ಸಾಲಿನಲ್ಲಿ ಬಡಗು ತಿಟ್ಟಿನ ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ್ರೊ. ಜಿ. ಆರ್. ರೈ, ಪಳ್ಳಿ ಕಿಶನ್ ಹೆಗ್ಡೆ ಮತ್ತು ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಅವರ ಹೆಸರನ್ನು ಶಿಫಾರಸು ಮಾಡಿದೆ. ಪ್ರಶಸ್ತಿಯು ರೂ.25,000/- ನಗದು ಹಾಗೂ ಫಲಕವನ್ನೊಳಗೊಂಡಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಲೆಕ್ಕ ಪರಿಶೋಧಕ (ಸಿ. ಎ.) ವೈ. ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಹಳ್ಳಾಡಿ ಜಯರಾಮ ಶೆಟ್ಟಿ: ಕುಂದಾಪುರ ತಾಲೂಕಿನ ಹಳ್ಳಾಡಿಯ ಅಣ್ಣಪ್ಪ ಶೆಟ್ಟಿ ಹಾಗೂ ಅಕ್ಕಮ್ಮ ದಂಪತಿಗೆ 1955ರಲ್ಲಿ ಜನಿಸಿದ ಜಯರಾಮ ಶೆಟ್ಟಿ ಬಡಗು ತಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ಹಿರಿಯ ಹಾಸ್ಯ ಕಲಾವಿದ. ಕಮಲಶಿಲೆ, ಮಂದರ್ತಿ, ಪೆರ್ಡೂರು, ಅಮೃತೇಶ್ವರಿ, ಸಾಲಿಗ್ರಾಮವಲ್ಲದೆ ತೆಂಕಿನ ಕುಂಬಳೆ ಮತ್ತು ಮೂಲ್ಕಿ ಮೇಳಗಳಲ್ಲಿ ಒಟ್ಟು 55 ವರ್ಷಗಳ ತಿರುಗಾಟ ಮಾಡಿದ್ದಾರೆ. ಸಾಲಿಗ್ರಾಮ ಮೇಳವೊಂದರಲ್ಲೇ 25…

Read More

ಕೊಣಾಜೆ: ಮಂಗಳೂರು ವಿ. ವಿ.ಯಲ್ಲಿನ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ವತಿಯಿಂದ ಕಲಾವಿದರ ಯಕ್ಷಪಯಣದ ಸ್ವಗತ ಯಕ್ಷಾಯಣ- ದಾಖಲೀಕರಣ ಸರಣಿಯ 5ರ ಕಾರ್ಯಕ್ರಮವು 30 ಜುಲೈ 2024ರ ಮಂಗಳವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ತಮ್ಮ ಯಕ್ಷ ಪಯಣದ ಅನುಭವ ಕಥನವನ್ನು ಹಂಚಿಕೊಂಡ ಯಕ್ಷಗಾನ ರಂಗದ ಹಿರಿಯ ಹಿಮ್ಮೇಳ ಕಲಾವಿದರು ಹಾಗೂ ಯಕ್ಷಗಾನ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ “ಯಕ್ಷಗಾನ ಸಂಪ್ರದಾಯ ಬದ್ದವಾಗಿ ಮುನ್ನಡೆಯಬೇಕಾದರೆ ಯಕ್ಷಗಾನ ಪರಂಪರೆಯ ಜ್ಞಾನ, ಅರಿವನ್ನು ಸಮರ್ಥವಾಗಿ ಮುಂದಿನ ತಲೆಮಾರಿಗೆ ತಲುಪಿಸುವವರು ಹಾಗೂ ವಿವರಿಸುವವರು ಮುಖ್ಯವಾಗುತ್ತಾರೆ. ಯಕ್ಷಗಾನದಲ್ಲಿ ಅನುಭವದಿಂದಲೇ ಬಹುತೇಕ ಶಿಕ್ಷಣ ಸಿಗುತ್ತದೆ. ನಮ್ಮಲ್ಲಿನ ಬಹುತೇಕ ಕಲಾವಿದರು ರಂಗದಲ್ಲಿ ಮತ್ತು ಹಿರಿಯ ಕಲಾವಿದರ ಮಾರ್ಗದರ್ಶನದಿಂದಲೇ ರೂಪುಗೊಂಡವರು. ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರವು ಈ ನಿಟ್ಟಿನಲ್ಲಿ ಹಿರಿಯ ಕಲಾವಿದರ ಅನುಭವ ಕಥನವನ್ನು ದಾಖಲಿಸುವ ಕಾರ್ಯ ಶ್ಲಾಘನೀಯ ಹಾಗೂ ಇದರಿಂದ ಮುಂದಿನ ಯುವ ಪೀಳಿಗೆಗೆ ಅನುಕೂಲವಾಗಲಿದೆ. ಹಿಮ್ಮೇಳ ಕಲಿಯುವವರಿಗೆ ಯಕ್ಷಗಾನದ…

Read More