Author: roovari

ಮಂಗಳೂರು : ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಸಹಯೋಗದಲ್ಲಿ ನವಂಬರ 19ರಿಂದ ನಗರದ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2013’ ಹನ್ನೊಂದನೇ ವರ್ಷದ ನುಡಿ ಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 25-11-2023ರಂದು ನಡೆಯಿತು. ಈ ಸಮಾರಂಭದಲ್ಲಿ ಪ್ರಧಾನ ಅತಿಥಿಗಳಾಗಿ ಭಾಗವಹಿಸಿದ ಮಾಜಿ ಸಚಿವ ಹಾಗೂ ಲ್ಯಾಂಡ್ ಲಿಂಕ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಜೆ.ಕೃಷ್ಣ ಪಾಲೆಮಾರ್ “ಕನ್ನಡ ಕರಾವಳಿಯ ಸಮಗ್ರ ಕಲೆಯಾದ ಯಕ್ಷಗಾನದ ಬಗ್ಗೆ ಮುಂದಿನ ಪೀಳಿಗೆಗೆ ಆಸಕ್ತಿ ಹುಟ್ಟಿಸುವುದು ನಮ್ಮ ಜವಾಬ್ದಾರಿ. ಪರಂಪರಾಗತವಾದ ಜೀವನ ಮೌಲ್ಯಗಳು ಹಾಗೂ ನಮ್ಮ ಸಂಸ್ಕೃತಿಯ ಬೇರುಗಳನ್ನು ಅದು ಸಹಜವಾಗಿ ಬಿಂಬಿಸುತ್ತದೆ. ಯಕ್ಷಗಾನ ಈಗಿನ ಮಟ್ಟಕ್ಕೆ ಬೆಳೆದಿರುವುದು ನೈಜ ಕಲಾಭಿಮಾನಿಗಳಿಂದ. ‘ಯಕ್ಷಗಾನ ತಾಳಮದ್ದಳೆ…

Read More

ಮಂಗಳೂರು : ಅಂತರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೋನ್ ಕಲಾವಿದರಾದ ಪದ್ಮಶ್ರೀ ಪುರಸ್ಕೃತ ಡಾ.ಕದ್ರಿ ಗೋಪಾಲನಾಥ್ ಇವರ ಹೆಸರಿನಲ್ಲಿ ನಡೆಯುತ್ತಿರುವ ‘ಡಾ. ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ (ರಿ)’ ವತಿಯಿಂದ ದಿನಾಂಕ 23-12-2023ರಂದು ‘ಕದ್ರಿ ಸಂಗೀತ ಸೌರಭ 2023’ ಕಾರ್ಯಕ್ರಮವನ್ನು ಮಂಗಳೂರಿನ ಉರ್ವಸ್ಟೋರ್ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ಅಂದು ಬೆಳಗ್ಗಿನಿಂದ ಉದಯೋನ್ಮುಖ ಕಲಾವಿದರಿಗೆ ವೇದಿಕೆ, ಭವ್ಯ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ ನಡೆಯಲಿರುವ ವೇದಿಕೆಯ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗಾಯಕರಾದ ಪದ್ಮಶ್ರೀ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ಇವರಿಗೆ ‘ಡಾ. ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯು ನಗದು ರೂ.50,000/- ಹಾಗೂ ಬೆಳ್ಳಿಯ ಫಲಕ ಹೊಂದಿರುತ್ತದೆ. ನಂತರ ಭವ್ಯ ವೇದಿಕೆಯಲ್ಲಿ ಶ್ರೀಯುತರ ಸಂಗೀತ ಕಾರ್ಯಕ್ರಮವಿರುತ್ತದೆ. ನಾಡಿನ ಅನೇಕ ಹಿರಿಯ ಕಲಾವಿದರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ದು ಸಾಕ್ಸೋಫೋನ್ ವಾದನದಲ್ಲಿ ಅದ್ವಿತೀಯ ಅನ್ನುವ ಹಾಗೆ…

Read More

ಮಂಗಳೂರು : ಉದ್ಯಮಿಯಾಗಿ,ಯಕ್ಷಗಾನ ವೇಷಧಾರಿ ಹಾಗೂ ಕಲಾವಿದನಾಗಿ ಖ್ಯಾತಿ ಹೊಂದಿದ್ದ ಎಂ.ಬಿ.ಎ. ಪದವೀಧರ ಎಂ.ಎಂ.ಸಿ. ರೈ (ಮೋಹನ ಚಂದ್ರ ರೈ) ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಮುಂಜಾನೆ ಕುಳಾಯಿ ಹೊನ್ನಕಟ್ಟೆ ಬಳಿಯ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಯಕ್ಷಗಾನ ರಂಗದ ಅತ್ಯುತ್ತಮ ಅರ್ಥಧಾರಿ ಮತ್ತು ವೇಷಧಾರಿಯಾಗಿದ್ದ ಎಂ.ಎಂ.ಸಿ. ರೈ ಅವರು ಮೊನ್ನೆ ತಾನೇ 2023 ನವೆಂಬರ್ 25ರಂದು ನಮ್ಮ ಯಕ್ಷಾಂಗಣ ತಾಳಮದ್ದಳೆ ಸಪ್ತಾಹದಲ್ಲಿ ಶಲ್ಯನ ಪಾತ್ರವಹಿಸಿ ತರ್ಕ ಬದ್ಧ ಅರ್ಥ ಹೇಳಿದ್ದರು. ತಮ್ಮ ತುಳುನಾಡು ಬೋರ್ ವೆಲ್ಸ್ ಎಂಬ ಉದ್ಯಮ ಸಂಸ್ಥೆಯ ಮೂಲಕ ಅವಿಭಜಿತ ಜಿಲ್ಲೆಯಲ್ಲಿ ನೂರಾರು ಕೊಳವೆ ಬಾವಿಗಳನ್ನು ನಿರ್ಮಿಸಿ ಜನಪ್ರಿಯರಾಗಿದ್ದ ಅವರು ಕೊಡುಗೈ ದಾನಿ ಎನಿಸಿದ್ದರು. ಮೃತರ ಆತ್ಮಕ್ಕೆ ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷರಾದ ಭಾಸ್ಕರ ರೈ ಕುಕ್ಕುವಳ್ಳಿ, ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಚಿರಶಾಂತಿ ಲಭಿಸಲಿ ಎಂದು ಪ್ರಾರ್ಥಿಸಿದ್ದಾರೆ.

Read More

ಪುತ್ತೂರು : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಿವೇಕಾನಂದ ಬಿ.ಎಡ್ ಕಾಲೇಜು, ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ವಿದ್ಯಾಭಾರತೀ ಉಚ್ಚ ಶಿಕ್ಷಾ ಸಂಸ್ಥಾನ್- ಕರ್ನಾಟಕ ಸಹಯೋಗದಲ್ಲಿ ದಿನಾಂಕ 27-12-2023ರಂದು ‘ಭಾರತೀಯ ಭಾಷಾ ಉತ್ಸವ’ದ ಪ್ರಯುಕ್ತ ಪುತ್ತೂರಿನ ತೆಂಕಿಲದಲ್ಲಿ ಇರುವ ವಿವೇಕಾನಂದ ಬಿ.ಎಡ್. ಕಾಲೇಜಿನಲ್ಲಿ ‘ಬಹುಭಾಷಾ ಕವಿಗೋಷ್ಠಿ’ ನಡೆಯಲಿದೆ. ಈ ಕವಿಗೋಷ್ಠಿಯು ಸಾರ್ವಜನಿಕ ಹಾಗೂ ವಿದ್ಯಾರ್ಥಿ ವಿಭಾಗದಲ್ಲಿ ನಡೆಯಲಿದ್ದು, ಗೋಷ್ಠಿಯಲ್ಲಿ ಕನ್ನಡ, ತುಳು, ಕೊಂಕಣಿ, ಅರೆ ಭಾಷೆ, ಶಿವಳ್ಳಿ, ತುಳು, ಕೊಡವ, ಹವ್ಯಕ ಕನ್ನಡ, ಹಿಂದಿ, ಮಲಯಾಳಂ, ಬ್ಯಾರಿ, ತಮಿಳ್, ತೆಲುಗು, ಮರಾಠಿ ಮಾತ್ರವಲ್ಲದೆ ಭಾರತದಲ್ಲಿ ಪ್ರಚಲಿತದಲ್ಲಿರುವ ಯಾವುದೇ ಭಾಷೆಯ ಕವನಗಳನ್ನು ಪ್ರಸ್ತುತಪಡಿಸಲು ಅವಕಾಶವಿದೆ. ಆಸಕ್ತರು ದಿನಾಂಕ 25-12-2023ರ ಮೊದಲಾಗಿ ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಶೋಭಿತ ಸತೀಶ್ ಅವರ ದೂರವಾಣಿ ಸಂಖ್ಯೆ 89719 38355ಗೆ ತಮ್ಮ ಹೆಸರು ಹಾಗೂ ಪ್ರಸ್ತುತಪಡಿಸುವ ಕವನದ ಭಾಷೆಯನ್ನು ವಾಟ್ಸಪ್ಪ್ ಮೂಲಕ ತಿಳಿಸಬಹುದು.

Read More

ಮಂಗಳೂರು : ವಿಶ್ವಕರ್ಮ ಕಲಾ ಪರಿಷತ್‌ ಮಂಗಳೂರು ಇದರ ಆಶ್ರಯದಲ್ಲಿ ಪ್ರಾರಂಭಿಸುತ್ತಿರುವ ‘ವಿಶ್ವಂ ಸ್ಕೂಲ್ ಆಫ್ ಆರ್ಟ್’ ಇದರ ಉದ್ಘಾಟನಾ ಸಮಾರಂಭ ಹಾಗೂ ಕಲಾ ಪ್ರದರ್ಶನವು ದಿನಾಂಕ 17-12-2023ರ ರವಿವಾರದಂದು ಪೂರ್ವಾಹ್ನ ಗಂಟೆ 10.00ಕ್ಕೆ ಮಂಗಳೂರಿನ ಟೆಂಪಲ್ ಸ್ಕ್ವಾರ್ ನಲ್ಲಿರುವ ಪ್ರೇಮ ಪ್ಲಾಝದ 2 ನೇ ಮಹಡಿಯಲ್ಲಿ ನಡೆಯಲಿದೆ. ಮಂಗಳೂರಿನ ವಿಶ್ವಕರ್ಮ ಕಲಾ ಪರಿಷತ್ ಇದರ ಅಧ್ಯಕ್ಷರಾದ ಡಾ. ಎಸ್. ಪಿ. ಗುರುದಾಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ಉದ್ಘಾಟಿಸಲಿದ್ದಾರೆ. ವಿಶ್ವಕರ್ಮ ಕಲಾ ಪರಿಷತ್ತಿನ , ಗೌರವಾಧ್ಯಕ್ಷರು ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದರಾದ ಶ್ರೀ ಪಿ. ಎನ್. ಆಚಾರ್ಯ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಚಿತ್ರ ಕಲಾವಿದರು ಹಾಗೂ ಮಂಗಳೂರಿನ ಕರಾವಳಿ ಚಿತ್ರಕಲಾ ಚಾವಡಿ (ರಿ.) ಇದರ ಗೌರವಾಧ್ಯಕ್ಷರಾದ ಶ್ರೀ ಗಣೇಶ ಸೋಮಯಾಜಿ ಬಿ., ಪರಿಸರ ಹೋರಾಟಗಾರರು, ಲೇಖಕರು…

Read More

ಹಾವೇರಿ : ಬೆಂಗಳೂರಿನ ರಂಗ ಶಂಕರ ಮತ್ತು ಶೇಷಗಿರಿಯ ಗಜಾನನ ಯುವಕ ಮಂಡಳಿ ವತಿಯಿಂದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶೇಷಗಿರಿಯಲ್ಲಿ ಡಾ. ಶ್ರೀಪಾದ್ ಭಟ್ ಇವರ ನಿರ್ದೇಶನದಲ್ಲಿ ‘ರಂಗ ಶಿಬಿರ’ವು ದಿನಾಂಕ 22-12-2023 ರಿಂದ 27-12-2023ರವರೆಗೆ ನಡೆಯಲಿದೆ. ಈ ಶಿಬಿರದಲ್ಲಿ ಬಿ. ಸುರೇಶ ‘ನಾಟಕ ಬರೆಯುವುದು ಹೇಗೆ’, ಶರಣ್ಯ ‘ನಿರ್ದೇಶಕನ ಜವಾಬ್ದಾರಿ’, ಗರೂಡ ಪ್ರಕಾಶ್ ‘ಕಂಪನಿ ನಾಟಕ ಯಾಕೆ ಮುಖ್ಯ’, ಎಂ.ಡಿ. ಪಲ್ಲವಿ ‘ಸಂಗೀತ ಮತ್ತು ರಂಗಭೂಮಿ’ ಮತ್ತು ಸುರೇಂದ್ರನಾಥ್ ‘ರಂಗಭೂಮಿಯನ್ನು ಸಜ್ಜುಗೊಳಿಸುವುದು’ ಎಂಬ ವಿಷಯಗಳ ತರಬೇತಿ ನೀಡಲಿದ್ದಾರೆ. ಊಟ, ವಸತಿ ಸಹಿತ ಉಚಿತ ತರಬೇತಿ ನೀಡಲಾಗುವ ಈ ಶಿಬಿರದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾದ ವಸತಿ ವ್ಯವಸ್ಥೆ ಇದೆ. 18 ವರ್ಷ ವಯಸ್ಸಿನಿಂದ ಮೇಲ್ಪಟ್ಟವರು ಭಾಗವಹಿಸಬಹುದು. ಪ್ರತಿದಿನ ರಾತ್ರಿ 8 ಗಂಟೆಗೆ ನಾಟಕ ಪ್ರದರ್ಶನ ನಡೆಯುತ್ತದೆ. ಮಾಹಿತಿಗಾಗಿ ಸಂಪರ್ಕಿಸಿ ಪ್ರಭು ಗುರಪ್ಪನವರ್ 8095719018 ಮತ್ತು ನಾಗರಾಜ ಧಾರೇಶ್ವರ್ 9008551395.

Read More

ಮಂಗಳೂರು : ಹಿಂದೂಸ್ಥಾನಿ ಸಂಗೀತದಲ್ಲಿ ಪ್ರತಿಯೊಂದು ರಾಗಕ್ಕೂ ತನ್ನದೇ ಆದ ಗಾಯನ ಸಮಯವಿದೆ. ಅದರಲ್ಲೂ ರಾತ್ರಿ, ತಡರಾತ್ರಿಯ ರಾಗಗಳು ಬಹಳ‌ ರಂಗು ಹುಟ್ಟಿಸುವಂತವು. ಆ ರಾಗಗಳ ನೈಜ‌ ಪರಿಣಾಮವನ್ನು ಕಾಣಬೇಕಾದರೆ ಅವುಗಳನ್ನು ಅವುಗಳ‌ ಗಾಯನ ಸಮಯದಲ್ಲಿ‌ ಕೇಳಬೇಕು. ರಾತ್ರಿಯ ಆ‌ ನೀರವದಲ್ಲಿ ಆ ರಾಗಗಳು ಒಂದು ಅಲೌಕಿಕ ಮಾಧುರ್ಯದ ನಾದಲೋಕವನ್ನು ಸೃಜಿಸಿ ಶ್ರೋತೃಗಳನ್ನು ಮಾಧುರ್ಯದ ರಸದಲ್ಲಿ‌ ಅದ್ದಿ ಮಂತ್ರಮುಗ್ಧಗೊಳಿಸುವ ಪರಿ ಅನನ್ಯ. ಸಂಗೀತ ರಸಿಕರಿಗೆ ರಾತ್ರಿ, ತಡರಾತ್ರಿ, ಬೆಳಗ್ಗಿನ ರಾಗಗಳನ್ನು‌ ಕೇಳಲು ಅನುವು ಮಾಡಿಕೊಡುವ ಸಲುವಾಗಿ ಹಿಂದೆ ಬಹಳಷ್ಟು ಆಹೋರಾತ್ರಿ ಸಂಗೀತ ಸಮ್ಮೇಳನಗಳು ನಡೆಯುತ್ತಿದ್ದವು. ಕಛೇರಿ ಮುಗಿದರೂ ಆ ರಾಗಗಳ ಗುಂಗು ಶ್ರೋತೃಗಳ ಕಿವಿಯಲ್ಲಿ ಬಹಳ ಕಾಲ‌ ಉಳಿಯುತ್ತಿತ್ತು. ಆದರೆ ಇತ್ತೀಚೆಗೆ ಆಹೋರಾತ್ರಿ ಕಚೇರಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ತನ್ನ ಜೀವನವನ್ನೇ ಮುಡಿಪಾಗಿಟ್ಟು ಕಠಿಣ ಸಾಧನೆಯ ಮೂಲಕ ರಾತ್ರಿ, ಮಧ್ಯಾರಾತ್ರಿಯ ರಾಗಗಳನ್ನು ಒಲಿಸಿಕೊಂಡ ಸಾಧಕನಿಗೆ ಆ ರಾಗಗಳನ್ನು ಹಾಡುವ ಅವಕಾಶ ಇಲ್ಲವಾಗಿದೆ. ಹಾಗಾಗಿ ರಾತ್ರಿಯ ಆ ಎಲ್ಲಾ ಅಪೂರ್ವ ರಾಗಗಳು…

Read More

ಬೆಂಗಳೂರು : ಸಪ್ತಕ್ ಬೆಂಗಳೂರು ಪ್ರಸ್ತುತ ಪಡಿಸುವ ‘ಸ್ವರ ಸಂಧ್ಯಾ’ ಕಾರ್ಯಕ್ರಮವು ದಿನಾಂಕ 17-12-2023ರಂದು ಸಂಜೆ 5.30ಕ್ಕೆ ಬೆಂಗಳೂರಿನ ಬಸವನಗುಡಿ, ಶ್ರೀ ಬಿ.ಪಿ. ವಾಡಿಯ ರೋಡಿನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಇಲ್ಲಿ ನಡೆಯಲಿದೆ. ಶ್ರೀಮತಿ ಗೀತಾ ಹೆಗ್ಡೆ, ಶ್ರೀ ಓಂಕಾರ್ ಹವಾಲ್ದಾರ್ ಮತ್ತು ಪಂ. ನಾಗರಾಜ್ ಹವಾಲ್ದಾರ್ ಇವರ ಶಿಷ್ಯೆಯಾದ ಬೆಂಗಳೂರಿನ ಶ್ರೀಮತಿ ದಿವ್ಯ ಶೆಣೈ ಇವರ ಹಾಡುಗಾರಿಕೆಗೆ ಶ್ರೀ ಪ್ರಹ್ಲಾದ್ ದೇಶಪಾಂಡೆ ತಬಲದಲ್ಲಿ ಮತ್ತು ಶ್ರೀಮತಿ ನೀತಾ ಬೆಳೆಯೂರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಮುಂಬೈಯ ಪಂ. ಬಿ. ಕೃಷ್ಣ ಭಟ್ ಇವರ ಹಾಡುಗಾರಿಕೆಗೆ ಶ್ರೀ ಗುರುಮೂರ್ತಿ ವೈದ್ಯ ತಬಲದಲ್ಲಿ ಮತ್ತು ಶ್ರೀ ಅಶ್ವಿನ್ ವಾಲಾವಲ್ಕರ್ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

Read More

ಬೆಂಗಳೂರು : ಅಭಿನಯ ತರಂಗ ಪ್ರಸ್ತುತ ಪಡಿಸುವ ಶ್ವೇತಾ ರಾಣಿ ಹೆಚ್.ಕೆ. ಇವರ ರಂಗವಿನ್ಯಾಸ, ವಸ್ತ್ರವಿನ್ಯಾಸ ಮತ್ತು ನಿರ್ದೇಶನದ ‘ಆತಂಕವಾದಿಯ ಆಕಸ್ಮಿಕ ಸಾವು’ ನಾಟಕವು ದಿನಾಂಕ 16-12-2023ರಂದು ಸಂಜೆ ಗಂಟೆ 7ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕಕ್ಕೆ ಸಹ ನಿರ್ದೇಶನ ಸ್ಕಂದಾ ಘಾಟೆ ಮಾಡಿದ್ದು, ಬೆಳಕು ವಿನ್ಯಾಸ ಮಂಜು ನಾರಾಯಣ್ ಹಾಗೂ ಬೆಳಕು ನಿರ್ವಹಣೆ ಸಚಿನ್ ಇವರದ್ದು. ಈ ನಾಟಕದ ಪಾತ್ರವರ್ಗದಲ್ಲಿ ಕಾರ್ತಿಕ್ ಎಚ್.ಆರ್., ಅಮಿತ್, ಚಂದನ್, ಚೇತನ್, ಶರತ್, ನಂದಿನಿ, ಯೋಗೀಶ್, ಲಕ್ಷ್ಯ, ದರ್ಶನ ಮತ್ತು ರಂಗವೇಂದ್ರ ಅಭಿನಯಿಸಲಿದ್ದಾರೆ. ನಿರ್ದೇಶಕರು ಶ್ವೇತಾ ರಾಣಿ ಹೆಚ್.ಕೆ. ಹಾಸನ ಜಿಲ್ಲೆಯವರಾದ ಶ್ವೇತಾ ರಾಣಿ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಪದವಿ, ನೀನಾಸಂ ತಿರುಗಾಟದಲ್ಲಿ ನಟರಾಗಿ ತಂತ್ರಜ್ಞರಾಗಿ ಕೆಲಸ ಮಾಡಿರುತ್ತಾರೆ. ರಾಷ್ಟ್ರೀಯ ನಾಟಕ ಶಾಲೆ ದೆಹಲಿಯಲ್ಲಿ ಪದವಿ ಪಡೆದ ನಂತರ ಕರ್ನಾಟಕದ ಹಲವು ಕಡೆ ಅಭಿನಯ ಶಿಬಿರಗಳನ್ನು ನಡೆಸಿದ್ದಾರೆ. ಅನೇಕ ನಾಟಕಗಳಿಗೆ ರಂಗ ವಿನ್ಯಾಸಕರಾಗಿ, ವಸ್ತ್ರ ವಿನ್ಯಾಸಕರಾಗಿ ಕೆಲಸ ಮಾಡಿದ ಅನುಭವ ಇವರದು.…

Read More

ಮಂಗಳೂರು : ಹರಿಪಾದಗೈದಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುಣ್ಯ ತಿಥಿಯ ಸಲುವಾಗಿ ಕಲ್ಕೂರ ಪ್ರತಿಷ್ಠಾನವು ವಿಶ್ವೇಶತೀರ್ಥ ಶ್ರೀಪಾದರ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ಕಾಲೇಜು ಹಾಗೂ ಮುಕ್ತ ಎಂಬ 2 ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪ್ರಬಂಧದ ವಿಷಯ : ಕಾಲೇಜು ವಿಭಾಗ – ” ವಿಶ್ವೇಶ ತೀರ್ಥರು ನಾನು ಕಂಡಂತೆ ” ಹಾಗೂ ಮುಕ್ತ ವಿಭಾಗ – ” ವಿಶ್ವೇಶತೀರ್ಥ ಶ್ರೀಪಾದರು ವಿಶ್ವಮಾನ್ಯರು – ಅವಲೋಕನ, ಅನುಸಂಧಾನ.” ಪ್ರಬಂಧವನ್ನು ಮೂರು ಪುಟಗಳಿಗೆ ಮೀರದಂತೆ ಬರೆದು ದಿನಾಂಕ 23-12-2023ರ ಶನಿವಾರದೊಳಗಾಗಿ, ಸ್ವ ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು ಈ ವಿಳಾಸಕ್ಕೆ ತಲಪುವಂತೆ ಕಳುಹಿಸಿಕೊಡಬೇಕು.

Read More