Author: roovari

ಧಾರವಾಡ : ಕಾದಂಬರಿ ಪಿತಾಮಹ ಗಳಗನಾಥರ 155ನೇ ಜನ್ಮದಿನೋತ್ಸವ ಹಾಗೂ 2022-23ನೇ ಸಾಲಿನ ‘ಶ್ರೀ ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 05-01-2024ನೇ ಶುಕ್ರವಾರದಂದು ಧಾರವಾಡದ ಅಲೂರು ವೆಂಕಟರಾವ್ ಸ್ಮಾರಕ ಭವನದಲ್ಲಿ ನಡೆಯಿತು. ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರತಿಷ್ಠಾನ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ರೂಪಾಯಿ 50 ಸಾವಿರ ನಗದನ್ನು ಒಳಗೊಂಡ 2022-23ನೇ ಸಾಲಿನ ‘ಗಳಗನಾಥ ಪ್ರಶಸ್ತಿ’ಯನ್ನು ಸಾಹಿತಿ ಜಯಂತ ಕಾಯ್ಕಿಣಿಗೆ ಹಾಗೂ ಅಷ್ಟೇ ಮೊತ್ತದ ‘ನಾ. ಶ್ರೀ. ರಾಜಪುರೋಹಿತ ಪ್ರಶಸ್ತಿ’ಯನ್ನು ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡಮಿಯ ಅಧ್ಯಕ್ಷರಾದ ಡಾ. ದೇವರಕೊಂಡಾ ರೆಡ್ಡಿಯವರಿಗೆ, ಕಥೆಗಾರ ಹಾಗೂ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಪ್ರದಾನಿಸಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಜಯಂತ ಕಾಯ್ಕಿಣಿ ಮಾತನಾಡಿ “ನಾನು ಕಾದಂಬರಿ ಬರೆದಿಲ್ಲ. ಆದಾಗ್ಯೂ ಗಳಗನಾಥ ಅವರ ಹೆಸರಿನ ಪ್ರಶಸ್ತಿ ನೀಡಿರುವುದು ಖುಷಿ ಇದೆ. ಆದರೆ, ಇದು ರಾವಣನ ಕೈಯಲ್ಲಿ ಆತ್ಮಲಿಂಗ ಕೊಟ್ಟಂತೆ ಅನುಭವ ನೀಡಿದೆ ಎಂದರು. ಅನಾಮಿಕರಾಗಿ ಬರಿಯೋದು,…

Read More

ಮಂಗಳೂರು : ಭರತನಾಟ್ಯ ಗುರು ಶ್ರೀಕಾಂತ್ ಸುಬ್ರಹ್ಮಣ್ಯಂ ಅವರ ಶಿಷ್ಯೆ ಅನನ್ಯಾ ಚಿಂಚಳ್ಳರ್ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 07-01-2024ರಂದು ಮಧ್ಯಾಹ್ನ 3.30ಕ್ಕೆ ಮಂಗಳೂರಿನ ಡಾನ್ ಬಾಸ್ಕೊ ಸಭಾಂಗಣದಲ್ಲಿ ನಡೆಯಿತು. ಅನನ್ಯಾ ಚಿಂಚಳ್ಳ‌ರ್ ಅವರು ವಿದೇಶದಲ್ಲಿ ಹುಟ್ಟಿ ಬೆಳೆದು, ವಿದೇಶದಲ್ಲಿದ್ದುಕೊಂಡೇ ಅಪ್ಪಟ ಭಾರತೀಯ ಶಾಸ್ತ್ರೀಯ ಭರತನಾಟ್ಯವನ್ನು ಕಲಿತು, ಭಾರತದಲ್ಲಿ ಪ್ರದರ್ಶನ ನೀಡಿದರು. ಇಂಗ್ಲೆಂಡ್‌ನ ಲೀಡ್ಸ್‌ ನಗರದಲ್ಲಿ ಹುಟ್ಟಿ ತನ್ನ ಶಾಲಾ ಶಿಕ್ಷಣದ ಜತೆಗೆ ಗುರು ಶ್ರೀಕಾಂತ್ ಸುಬ್ರಹ್ಮಣ್ಯಂ ಅವರ ಶಿಷ್ಯೆಯಾಗಿ, ತನ್ನ ಐದನೇ ವಯಸ್ಸಿನಲ್ಲಿಯೇ ಭರತನಾಟ್ಯದ ಅಭ್ಯಾಸವನ್ನು ಪ್ರಾರಂಭಿಸಿದ ಅನನ್ಯಾ ಅವರು 6 ಗ್ರೇಡಿನ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ. ಈಕೆ ನಗರದ ಡೊಂಗರಕೇರಿಯ ಡಾ. ಪ್ರವೀಣ್ ಪ್ರಭಾಕರ್ ಮತ್ತು ಡಾ. ದೀಪಾ ಪ್ರವೀಣ್ ಅವರ ಪುತ್ರಿ. ಈ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮಂಗಳೂರಿನ ನೃತ್ಯಭಾರತಿ ನಿರ್ದೇಶಕಿ ವಿದುಷಿ ಗೀತಾ ಸರಳಾಯ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಅತಿಥಿಯಾಗಿ ಭಾಗವಹಿಸಿದ್ದರು.

Read More

ಬಂಟ್ವಾಳ: ಪುತ್ತೂರು ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರದ ಆಶ್ರಯದಲ್ಲಿ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನೃತ್ಯಧಾರ ಮತ್ತು ಕಲಾನಯನ ಪ್ರಶಸ್ತಿ ಪ್ರದಾನ ಸಮಾರಂಭವು ಬಿ.ಸಿ. ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ದಿನಾಂಕ 07-01-2024ರ ಭಾನುವಾರದಂದು ನಡೆಯಿತು. ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ. ಚಂದ್ರಶೇಖರ ನಾವಡ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಾಸ್ಯ ಕಲಾವಿದ ರಸಿಕರತ್ನ ದಿ. ನಯನ ಕುಮಾರ್ ಸ್ಮರಣಾರ್ಥ ನೀಡಲಾಗುವ ಕಲಾನಯನ ಪ್ರಶಸ್ತಿಯನ್ನು ಪುತ್ತೂರಿನ ಚರ್ಮವಾದ್ಯ ತಯಾರಕ ಮತ್ತು ಕೊಳಲು ವಾದಕ ಪಿ. ರಾಜರತ್ನಂ ದೇವಾಡಿಗ ಅವರಿಗೆ ಪ್ರದಾನ ಮಾಡಲಾಯಿತು. ವಸ್ತ್ರ ವಿನ್ಯಾಸಗಾರ ಮತ್ತು ಮುಖವರ್ಣಿಕೆ ಕಲಾವಿದ ಸುನೀಲ್ ಉಚ್ಚಿಲ ದಂಪತಿ ಅವರನ್ನು ಸನ್ಮಾನಿಸಲಾಯಿತು. ತುಳುವೆ‌ರ್ ಜನಪದ ಕೂಟದ ಖಜಾಂಜಿ ಪ್ರಭು ರೈ ಮಾತನಾಡಿ “ಇದೊಂದು ಅರ್ಥಗರ್ಭಿತ ಕಾರ್ಯಕ್ರಮವಾಗಿದ್ದು, ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ವ್ಯಕ್ತಿತ್ವ ನಿರ್ಮಾಣದ ಕೆಲಸವು ಸಂಸ್ಥೆಯಿಂದಾಗುತ್ತಿರುವುದು ಅಭಿನಂದನೀಯ ಎಂದರು.” ಬಾಲಕೃಷ್ಣ ಪ್ರಭು ವೇದಿಕೆಯಲ್ಲಿದ್ದರು. ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರದ ಸಂಚಾಲಕ ಉದಯ…

Read More

ಮಣಿಪಾಲ : ವಿದುಷಿ ಭ್ರಮರಿ ಶಿವಪ್ರಕಾಶ್ ಅವರು ಮಂಡಿಸಿದ ಸಾಹಿತಿ ರಂಗಕರ್ಮಿ ಪ್ರೊ. ಉದ್ಯಾವರ ಮಾಧವ ಆಚಾರ್ಯರ ‘ಸಮೂಹ-ಉಡುಪಿ ರಂಗ ಪ್ರಯೋಗಗಳ ಅಧ್ಯಯನ’ ಎಂಬ ವಿಷಯದ ಕುರಿತು ನಡೆಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಾಹೆ ವಿ.ವಿ.ಯು ಪಿಎಚ್.ಡಿ. ನೀಡಿದೆ. ಇವರು ಮಾಹೆ ವಿ.ವಿ.ಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸ್ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರದ (ಆರ್‌.ಆರ್‌.ಸಿ.) ಮೂಲಕ ಮಣಿಪಾಲ ಸೆಂಟರ್ ಫಾರ್ ಯುರೋಪಿಯನ್ ಸ್ಟಡೀಸ್ ವಿಭಾಗದ ಮುಖ್ಯಸ್ಥೆ ಡಾ. ನೀತಾ ಇನಾಂದಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಶ್ರೀಮತಿ ಭ್ರಮರಿ ಶಿವಪ್ರಕಾಶ್ ಶಾಸ್ತ್ರೀಯ ಭರತನಾಟ್ಯ ಕ್ಷೇತ್ರದಲ್ಲಿ ತನ್ನ ಅಧ್ಯಯನ ಆಧಾರಿತ ಸೃಜನಶೀಲ ನೃತ್ಯ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಕಲಾವಿದೆ. ವಸುಂಧರಾ ನೃತ್ಯ ಬಾಣಿಯ ಹರಿಕಾರ್ತಿ, ಹಿರಿಯ ಗುರು ಡಾ. ವಸುಂಧರಾ ದೊರೆಸ್ವಾಮಿಯವರಲ್ಲಿ ಕಳೆದ 26 ವರ್ಷಗಳಿಂದ ಶಿಷ್ಯತ್ವ ವಹಿಸಿದ್ದಾರೆ. ಪ್ರಸ್ತುತ ಮಂಗಳೂರಿನ ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಬರಲ್…

Read More

ಸುರತ್ಕಲ್ : ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು ಉಡುಪಿ ಜಿಲ್ಲೆ, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ-ಕೇರಳ, ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ) ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಮತ್ತು ಗೋವಿಂದ ದಾಸ ಕಾಲೇಜು ಸುರತ್ಕಲ್‌ ಇವರ ಸಂಯುಕ್ತ ಆಶ್ರಯದಲ್ಲಿ ‘ಬುಡಕಟ್ಟು ಯುವ ಬರಹಗಾರರ ಕಮ್ಮಟ’ವು ದಿನಾಂಕ 13-01-2024 ಮತ್ತು 14-01-2024ರಂದು ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನ ದೃಶ್ಯ ಶ್ರಾವ್ಯ ಮಂದಿರದಲ್ಲಿ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಸಬಿತಾ ಗುಂಡ್ಮಿ ಇವರ ನಿರ್ದೇಶನದಲ್ಲಿ ನಡೆಯಲಿರುವ ಈ ಕಮ್ಮಟವನ್ನು ಪೂರ್ವಾಹ್ನ 9.30ಕ್ಕೆ ಸಿಂಬಿಯೋಸಿಸ್ ಅಂತಾರಾಷ್ಟ್ರೀಯ ಡೀಮ್ಡ್ ಕಾನೂನು ವಿಶ್ವವಿದ್ಯಾನಿಲಯ ಪುಣೆಯ ನಿರ್ದೇಶಕರಾದ ಡಾ. ಶಶಿಕಲಾ ಗುರುಪುರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿಯವರು ಅಧ್ಯಕ್ಷತೆ ವಹಿಸಲಿದ್ದು, ಹಿಂದೂ ವಿದ್ಯಾದಾಯಿನಿ ಸಂಘ (ರಿ) ಸುರತ್ಕಲ್‌ ಇದರ ಕಾರ್ಯದರ್ಶಿ ಶ್ರೀರಂಗ ಹೆಚ್., ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ-ಕೇರಳದ ಅಧ್ಯಕ್ಷೆ ಸುಶೀಲ ನಾಡ…

Read More

ಮಂಗಳೂರು : ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್ ಪ್ರಕಟಿಸಿದ ಪತ್ರಕರ್ತ ಸಾಹಿತಿ ರಘುನಾಥ ಎಂ. ವರ್ಕಾಡಿ ಬರೆದಿರುವ ‘ಸೂರ್ಯೆ ಚಂದ್ರೆ ಸಿರಿ’ ದೇವಕಿ ಬೈದ್ಯೆತಿ ಹೇಳಿರುವ ತುಳು ಜನಪದ ಕಥಾ ಸಂಕಲನ ಲೋಕಾರ್ಪಣೆಯ ಕಾರ್ಯಕ್ರಮ ದಿನಾಂಕ 04-01-2024ರಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು. ಕೃತಿಕಾರ ರಘುನಾಥ ಎಂ. ವರ್ಕಾಡಿ ಸ್ವಾಗತಿಸಿದರು. ಶ್ರೀನಿವಾಸ ವಿಶ್ವವಿದ್ಯಾನಿಲಯ ಮುಕ್ಕದ ಪ್ರೊ. ಎಂ.ಎಸ್. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಅಧ್ಯಕ್ಷರು ಡಾ. ತುಕಾರಾಮ ಪೂಜಾರಿ ‘ಸೂರ್ಯೆ ಚಂದ್ರೆ ಸಿರಿ’ ಕೃತಿ ಲೋಕಾರ್ಪಣೆಗೊಳಿಸಿದರು. ಡಾ. ತುಕಾರಾಮ ಪೂಜಾರಿ ಮಾತನಾಡಿ “ಕೃತಿಕಾರರು 30 ಕತೆಗಳನ್ನು ಬಾರೀ ಅಂದವಾಗಿ ಜೋಡಣೆ ಮಾಡಿದ್ದಾರೆ. ಮೊದಲ ಕತೆಯೆ ಅತಿಕಾರ ತಳಿಯ ಬಗ್ಗೆ ಇದೆ. ಈ ತಳಿಯ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇದನ್ನು ಎಣೆಲ್ ನಲ್ಲಿ ಬಿತ್ತಿದರೂ ಪೈರು ಆಗುವುದು ಸುಗ್ಗಿಯಲ್ಲಿ. ತುಳುನಾಡನ್ನು ಯಾವ ರೀತಿಯಲ್ಲಿ ನೋಡುವುದಾದರೂ ಶಾಸನ ಆಧಾರವಾಗಿದೆ. ಶಾಸನ ಬರೆಸುವವನು ರಾಜ.…

Read More

ಅಲ್ಲಿ ಒಂದು ಹಬ್ಬದ ಸಂಭ್ರಮವಿತ್ತು. ಸುಂದರ ಕಲಾಕೃತಿಗಳನ್ನು ನೋಡುವ ಕುತೂಹಲವಿತ್ತು. ಕಲಾಕೃತಿಗಳಿಂದ ಮನೆಯನ್ನು ಅಲಂಕರಿಸುವ ತವಕವಿತ್ತು. ಹಲವು ಮನಸ್ಸಿನ ಬಣ್ಣದ ಬೆಡಗಿತ್ತು. ಇದೆಲ್ಲಾ ಇದ್ದದ್ದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ. 2003ರಲ್ಲಿ ಪ್ರಾರಂಭವಾದ ಚಿತ್ರಸಂತೆ ವರ್ಷದಿಂದ ವರ್ಷಕ್ಕೆ ಕಲಾಸಕ್ತರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಆರಂಭದಲ್ಲಿ ಕೇವಲ ಸಾವಿರದಷ್ಟು ಜನ ಬರುತ್ತಿದ್ದ ಚಿತ್ರಸಂತೆ ಇವತ್ತು ಲಕ್ಷ ಲಕ್ಷ ಜನರನ್ನು ಸೆಳೆಯುತ್ತಿದೆ. ಮನೆಗೊಂದು ಕಲಾಕೃತಿ ಬೇಕೆಂದರೆ ಮುಂದಿನ ಚಿತ್ರಸಂತೆಯವರೆಗೆ ಕಾಯುವಂತೆ ಮಾಡಿದೆ. ಯುವ ಕಲಾವಿದರಿಗಂತೂ ಇದೊಂದು ಪ್ರಧಾನ ಕಲಾವೇದಿಕೆ. ಚಿತ್ರಸಂತೆಗಂದೇ ಚಿತ್ರ ರಚಿಸುವ ಕಲಾವಿದರಿದ್ದಾರೆ. ಅಲ್ಲಿ ಕಲಾಕೃತಿಗಳನ್ನು ಖರೀದಿಸುವವರ ಮನದ ಮಿಡಿತವನ್ನು ಯುವ ಕಲಾವಿದರು ಅರಿತಿದ್ದಾರೆ. ಒಂದು ವಾರ್ಷಿಕ ಸಂಭ್ರಮವನ್ನು ಮುಂದಿಟ್ಟುಕೊಂಡು ವರ್ಷಪೂರ್ತಿ ಕಲಾಕೃತಿಗಳನ್ನು ನಿರ್ಮಿಸುವುದು ಅದೊಂದು ಪೂಜೆಯೇ ಸರಿ. 2024ರ ಚಿತ್ರಸಂತೆ, ಬೆಂಗಳೂರಿನ ಜನರು ಕಲಾಪ್ರಿಯರು ಎನ್ನುವುದನ್ನು ಸಾಬೀತು ಪಡಿಸಿದೆ. ಮಾನ್ಯಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡು , ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲಿ ಲಕ್ಷ ಲಕ್ಷ ಜನರ ಮನಸೂರೆಗೊಂಡ ಚಿತ್ರಸಂತೆ. ಕರೋನಾಕ್ಕೂ ಕ್ಯಾರೇ ಅನ್ನದ ಜನ ಸಾಗರೋಪಾದಿಯಲ್ಲಿ ಹರಿದು…

Read More

ಮೂಡುಬಿದಿರೆ : ಮೂಡುಬಿದಿರೆಯ ಕನ್ನಡ ಭವನದಲ್ಲಿರುವ ತುಳುಕೂಟದ ಕಛೇರಿಯಲ್ಲಿ ಮಾಸಿಕ ಸಭೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವು ದಿನಾಂಕ 06-01-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ‘ನಾಗಾರಾಧನೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಜೋತಿಷ್ಯ ಮತ್ತು ವಾಸ್ತುಶಾಸ್ತ್ರದಲ್ಲಿ ತಜ್ಞರಾಗಿರುವ ಪೊಳಲಿಯ ಶ್ರೀ ರಾಜಶೇಖರ ರಾವ್ ಎನ್. “ನಾಗಲೋಕ ಎನ್ನುವುದು ಭೂಮಿಯ ಗರ್ಭವಾಗಿದ್ದು ಅದರಿಂದ ಉಂಟಾಗುವ ತೊಂದರೆಗಳಿಗೆ ವಾಹಕವಾಗಿ ಸರ್ಪವನ್ನು ಕಾಣುತ್ತೇವೆ. ನಾಗ ಎಂದರೆ ಸರ್ಪ ಎನ್ನುವ ಹೆಸರಿರುವುದಾದರೂ ನಾಗಾರಾಧನೆಯಲ್ಲಿ ಬರುವ ನಾಗ ಎಂದರೆ ಸರ್ಪವಲ್ಲ. ನಾಗರ ಹಾವು ತೊಂದರೆಗಳನ್ನು ಮನಗಾಣಿಸುವ ಮಾಧ್ಯಮವಾಗಿ ಮಾತ್ರ ಮುಖ್ಯವಾಗುವುದರಿಂದಲೇ ಅದು ಆರಾಧನೆಗೆ ಯೋಗ್ಯವಾಗಿದೆ.”ಎಂದರು. ನಾಗಾರಾಧನೆಯ ನಂಬಿಕೆ ಬೆಳೆದು ಬಂದ ಹಿನ್ನೆಲೆಯನ್ನು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸಿದ ಅವರು ನಂತರ ಸಂವಾದದಲ್ಲಿ ಪಾಲ್ಗೊಂಡು ಸದಸ್ಯರ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರಗಳನ್ನೂ ನೀಡಿದರು. ತುಳುಕೂಟದ ಅಧ್ಯಕ್ಷರಾದ ಶ್ರೀ ಧನಕೀರ್ತಿ ಬಲಿಪ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಥಾಪಕಾಧ್ಯಕ್ಷರಾದ ಚಂದ್ರಹಾಸ ದೇವಾಡಿಗರು ಸ್ವಾಗತಿಸಿ, ಕಾರ್ಯದರ್ಶಿಗಳಾದ ವೇಣುಗೋಪಾಲ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Read More

ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಆಯೋಜಿಸಿದ ‘ಅರ್ಥಾಂಕುರ-6’ ಹೊಸ ತಲೆಮಾರಿನ ಅರ್ಥಧಾರಿಗಳ ಪರಿಶೋಧ ಹಾಗೂ ಗ್ರಾಮೀಣ ಕಲಾ ಪ್ರತಿಭೆ ಸಂಜೀವ ಕದ್ರಿಕಟ್ಟು ಸಂಸ್ಮರಣಾ ಕಾರ್ಯಕ್ರಮವು ದಿನಾಂಕ 07-01-2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಮರಣಾ ನುಡಿಗಳನ್ನಾಡಿದ ಹೆರಿಯ ಮಾಸ್ಟರ್ “ಉರಿಯುವ ದೀಪದಂತೆ ಸಮಾಜಕ್ಕೆ ಕಲೆಯ ಬೆಳಕಾಗಿ ಬೆಳೆದವರು ಸಂಜೀವ ಕದ್ರಿಕಟ್ಟು. ಎಷ್ಟೋ ಜನ ಕಲಾವಿದರನ್ನು ಬಾಲ್ಯದಿಂದಲೇ ಹುಟ್ಟು ಹಾಕಿದವರು. ರಂಗಭೂಮಿಯ ಪ್ರೇರಣೆಯಿಂದಲೇ ಸ್ತಬ್ಧ ಚಿತ್ರ ರಚನೆಯಿಂದ ಹಲವಾರು ಪಾತ್ರಗಳಾಗಿ ಸಂಘ ಸಂಸ್ಥೆಗಳಲ್ಲಿ ಕಾಣಿಸಿಕೊಳ್ಳುತ್ತ ಕಲಾಭಿರುಚಿಯನ್ನು ಸಮಾಜಕ್ಕೆ ಪಸರಿಸಿದವರು ಸಂಜೀವಣ್ಣ. ಅವರ ಅಗಲುವಿಕೆ ಕುಟುಂಬಕ್ಕಷ್ಟೇ ಮೀಸಲಾಗಿರದೇ ಸಮಾಜಕ್ಕೂ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ” ಎಂದು ಹೇಳಿದರು. “ಕಲಿಯುವ ಉತ್ಸಾಹಿಗಳಿಗೆ ಈ ಅಭ್ಯಾಸ ಕೂಟ ಹೆಚ್ಚು ಉಪಯುಕ್ತವಾಗಿದೆ. ವೇದಿಕೆಯೇನೋ ಯಶಸ್ವೀ ಕಲಾವೃಂದ ಸಿದ್ಧಗೊಳಿಸಿದೆ. ತಾಳಮದ್ದಳೆಗೆ ಅರ್ಥ ಹೇಳುವ ಮನಸ್ಸುಳ್ಳವರು ಈ ವೇದಿಕೆಯನ್ನು ಉಪಯೋಗಿಸಿಕೊಳ್ಳಬೇಕು. ಉಡುಪಿಯಿಂದೀಚೆ ವಿರಳವಾದ ಅಭ್ಯಾಸಕೂಟ ತೆಕ್ಕಟ್ಟೆಯಲ್ಲಿ ಸಾಹಸದಿಂದ ಮೈದೋರಿದೆ. ಇಲ್ಲಿ ಸಹಸ್ರ ಸಂಖ್ಯೆಯಲ್ಲಿ ಕಲಾವಿದರುಗಳು ಪ್ರಬುದ್ಧ ಕಲಾವಿದರಾಗಿ ರೂಪುಗೊಳ್ಳಲಿ” ಎಂದು ಯುವ…

Read More

ಮಂಗಳೂರು : ಸುರತ್ಕಲ್ಲಿನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ ಗೋವಿಂದ ದಾಸ ಕಾಲೇಜು ವತಿಯಿಂದ ‘ನೀನಾಸಂ ತಿರುಗಾಟ ನಾಟಕೋತ್ಸವ 2024’ ಕಾರ್ಯಕ್ರಮವು ದಿನಾಂಕ 14-01-2024 ಮತ್ತು 15-01-2024ರಂದು ಸಂಜೆ ಗಂಟೆ 6.50ಕ್ಕೆ ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ನಡೆಯಲಿದೆ. ಈ ನಾಟಕೋತ್ಸವವನ್ನು ಪ್ರೊ. ಯಚ್.ಜಿ.ಕೆ. ರಾವ್ ದತ್ತಿನಿಧಿ, ಸುರತ್ಕಲ್ ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘ, ಬಿ.ಎ.ಎಸ್.ಎಫ್. ಬಾಳ, ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, 1982ರ ವಿಜ್ಞಾನ ತಂಡದ ದತ್ತಿನಿಧಿ, ಶಿಕ್ಷಕ ರಕ್ಷಕ ಸಂಘ, ಅಲ್ಯುಮ್ನಿ ಅಸೋಸಿಯೇಶನ್ ಇವುಗಳ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 14-01-2024ರಂದು ಡಾ. ಚಂದ್ರಶೇಖರ ಕಂಬಾರ ರಚಿಸಿದ, ಕೆ.ಜಿ. ಕೃಷ್ಣಮೂರ್ತಿಯವರ ನಿರ್ದೇಶನದ ‘ಹುಲಿಯ ನೆರಳು’ ಮತ್ತು ದಿನಾಂಕ 15-01-2024ರಂದು ಲೂಯಿ ನ ಕೋಶಿ ಅವರ ರಚನೆಯ ಶ್ವೇತಾರಾಣಿ ಎಚ್.ಕೆ. ಇವರ ನಿರ್ದೇಶನದ ‘ಆ ಲಯ ಈ ಲಯ’ ನಾಟಕ ಪ್ರದರ್ಶನಗೊಳ್ಳಲಿದೆ. ‘ಹುಲಿಯ ನೆರಳು’ ಹುಲಿ ಬೇಟೆಯೊಂದರ ಹೆಳೆಯಲ್ಲಿ ಪ್ರಾರಂಭವಾಗುವ ಈ ನಾಟಕ ಕಣ್ಣಿಗೆ…

Read More