Author: roovari

ಮೂಡುಬಿದಿರೆ : ಶಿವರಾಮ ಕಾರಂತ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ‘ಶಿವರಾಮ ಕಾರಂತ ಪ್ರಶಸ್ತಿ’ ಮತ್ತು ‘ಶಿವರಾಮ ಕಾರಂತ ಪುರಸ್ಕಾರ’ ಪ್ರದಾನ ಸಮಾರಂಭವು ದಿನಾಂಕ 29-05-2024ರಂದು ಸಂಜೆ 5-00 ಗಂಟೆಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನ ಕನ್ನಡ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಅಮರನಾಥ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಪುತ್ತೂರಿನ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರು ಉದ್ಘಾಟನೆ ಮಾಡಲಿದ್ದಾರೆ. ಖ್ಯಾತ ಜಾನಪದ ವಿದ್ವಾಂಸರು ಸೃಜನಶೀಲ ಲೇಖಕರು ಆಗಿರುವ ಮೈಸೂರಿನ ಪ್ರೊ. ಕೃಷ್ಣಮೂರ್ತಿ ಹನೂರ, ಖ್ಯಾತ ಕವಿಗಳು ಬರಹಗಾರರು ಆಗಿರುವ ಬೆಂಗಳೂರಿನ ಡಾ. ಚಿನ್ನಸ್ವಾಮಿ ಮೂಡ್ನಾಕೂಡು, ಕನ್ನಡದ ಕೀಲಿಮಣೆ ವಿನ್ಯಾಸ ಸಂಶೋಧಿಸಿ ಕನ್ನಡ ಭಾಷೆಗೆ ವಿಶಿಷ್ಟ ಕೊಡುಗೆ ನೀಡಿದ ಉಡುಪಿಯ ಶ್ರೀ ಕೆ.ಪಿ. ರಾವ್ ಇವರುಗಳಿಗೆ ಹಾಗೂ ಸಂಸ್ಕೃತಿಯನ್ನು ಕಟ್ಟುವ ಕಾಯಕದಲ್ಲಿ ಅರ್ಪಣಾ ಭಾವದಿಂದ 75 ವರ್ಷಗಳ ಕಾಲ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಹೆಗ್ಗೋಡಿನ ನೀನಾಸಂ ಸಂಸ್ಥೆಗೆ ‘ಶಿವರಾಮ ಕಾರಂತ ಪ್ರಶಸ್ತಿ’ಯನ್ನು ಮತ್ತು ‘ಶಿವರಾಮ ಕಾರಂತ ಪುರಸ್ಕಾರ’ವನ್ನು…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 27-05-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಮಾರಿ ಕೀರ್ತನ ಯು. ಭಟ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಕು. ಕೀರ್ತನಾ ಯು. ಭಟ್ ಉಡುಪಿ ಸಮೀಪದ ಕೊರಂಗ್ರಪಾಡಿ ನಿವಾಸಿಯಾದ ಉದಯ ಭಟ್ ಹಾಗೂ ಜ್ಯೋತಿ ಯು. ಭಟ್ ಇವರ ಸುಪುತ್ರಿಯಾದ ಕೀರ್ತನಾ ಯು. ಭಟ್ ಪ್ರಸ್ತುತ ಎಂ.ಬಿ.ಎ. ಪದವಿಯನ್ನು ಪೂರ್ಣಪ್ರಜ್ಞಾ ಸಂಸ್ಥೆಯಲ್ಲಿ ನಡೆಸುತ್ತಿದಾಳೆ. ಬಾಲ್ಯದಿಂದಲೇ ಭರತನಾಟ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ ಇವಳು ತನ್ನ 3ನೇ ತರಗತಿ ಇರುವಾಗಲೇ ಭರತನಾಟ್ಯ ಕ್ಷೇತ್ರಕ್ಕೆ ಕಾಲಿಟ್ಟವಳು. ತನ್ನ ನೆಚ್ಚಿನ ಗುರುಗಳಾದ ಸುಧೀರ್ ರಾವ್ ಕೊಡವೂರು ಹಾಗೂ ಮಾನಸಿ ಸುಧೀರ್ ಇವರ ಬಳಿ ಭರತನಾಟ್ಯವನ್ನು ಕಲಿತು ಇಂದಿಗೆ 13 ವರ್ಷವನ್ನು ಪೂರ್ಣಗೊಳಿಸಿದ್ದು,…

Read More

‘ಮೊದಲು ಹಿರಿಯ ಸಾಹಿತಿಗಳು ಬರೆದ ಒಳ್ಳೆಯ ಕೃತಿಗಳನ್ನು ಓದಿ. ಅನಂತರ ಬರೆಯಿರಿ’ ಎಂದು ನಾವು ತರುಣ ಬರಹಗಾರರಿಗೆ ಯಾವಾಗಲೂ ಸಲಹೆ ನೀಡುತ್ತಿರುತ್ತೇವೆ. ಇವತ್ತು ನಾವು ನೋಡುತ್ತಿರುವ ಅನೇಕ ತರುಣ ಲೇಖಕರಲ್ಲಿ ಒಂದು ರೀತಿಯ ಅಪಕ್ವತೆ, ಯಾಂತ್ರಿಕತೆ ಮತ್ತು ಅನುಭವದ ಕೊರತೆಯಿಂದ ಉಂಟಾಗುವ ಚರ್ವಿತ-ಚರ್ವಣಗಳನ್ನು ನಾವು ಕಾಣುತ್ತಿರುವುದು ಸುಳ್ಳಲ್ಲ. ಆದರೆ ಸಲಹೆಗಳನ್ನು ಬರೇ ಬಾಯಿ ಮಾತಿನಲ್ಲಿ ಹೇಳಿದರೆ ಸಾಕಾಗುವುದಿಲ್ಲ. ಇದನ್ನು ಮನಗಂಡ ಪ್ರಬುದ್ಧ ವಿಮರ್ಶಕ ನರೇಂದ್ರ ಪೈಯವರು ಜಾಗತಿಕ ಸಾಹಿತ್ಯದಲ್ಲಿ ಬಹಳಷ್ಟು ಹೆಸರು ಮಾಡಿ ಶ್ರೇಷ್ಠ ಲೇಖಕರು ಅನ್ನಿಸಿಕೊಂಡ ಹದಿನಾಲ್ಕು ಮಂದಿ ಲೇಖಕರ ಹದಿನಾರು ಕೃತಿಗಳನ್ನು ಓದಿ ತಮ್ಮ ಸೂಕ್ಷ್ಮ ಅವಲೋಕನದ ಮೂಲಕ ಅವುಗಳನ್ನು ವಿಶ್ಲೇಷಣೆ ಮತ್ತು ವಿಮರ್ಶೆಗೆ ಒಳಪಡಿಸಿ ‘ಸಾವಿರದ ಒಂದು ಪುಸ್ತಕ’ ಎಂಬ 180 ಪುಟಗಳ ಒಂದು ಕೃತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ. ಈ ಶೀರ್ಷಿಕೆಯನ್ನು ಮೊದಲು ನೋಡಿದಾಗ ನನಗೆ ಥಟ್ಟನೆ ಅರೇಬಿಯನ್ ನೈಟ್ಸ್ ನ ‘ಸಾವಿರದ ಒಂದು ರಾತ್ರಿ’ಯು ನೆನಪಾಯಿತು. ಅದರಲ್ಲಿ ಕ್ರೂರಿಯಾದ ರಾಜನ ಮನಃಪರಿವರ್ತನೆ ಮಾಡಲು…

Read More

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಇದರ ವತಿಯಿಂದ ಶ್ರೀ ಜನಾರ್ದನದುರ್ಗ ಇವರ ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿಯು ದಿನಾಂಕ 27-05-2024ರಂದು ಮಧ್ಯಾಹ್ನ 2-30 ಗಂಟೆಗೆ ಪುತ್ತೂರಿನ ಜೈನ ಭವನ ರಸ್ತೆಯ ಅನುರಾಗ ವಠಾರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಪುತ್ತೂರು ತಾಲೂಕು ಕ.ಸಾ.ಪ.ದ ಅಧ್ಯಕ್ಷರಾದ ಶ್ರೀ ಉಮೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಝೇವಿಯರ್ ಡಿ’ಸೋಜ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೋಕೇಶ್ ಎಸ್.ಆರ್. ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ಹಿರಿಯ ಸಾಹಿತಿಯಾದ ಡಾ. ವರದರಾಜ ಚಂದ್ರಗಿರಿ ಕೃತಿ ಪರಿಚಯ ಹಾಗೂ ಬೆಟ್ಟಂಪಾಡಿ ಕಾಲೇಜಿನ ಗ್ರಂಥಪಾಲಕರಾದ ಶ್ರೀ ರಾಮ ಕೆ. ಇವರು ಕೃತಿಕಾರರ ಪರಿಚಯ ಮಾಡಲಿರುವರು. ಇದೇ ಸಂದರ್ಭದಲ್ಲಿ ಸಾಹಿತಿ ಶ್ರೀ ಪಿ.ಎಸ್. ನಾರಾಯಣ ಭಟ್ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಹಾಗೂ ವಿಶೇಷ ಕಾರ್ಯಕ್ರಮವಾಗಿ ಶ್ರೀಮತಿ ನಂದಿನಿ ವಿನಾಯಕ್ ಇವರಿಂದ…

Read More

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ಅಳಗೋಡು ನಿವಾಸಿ ಶ್ರೀಯುತ ಅನಂತಮೂರ್ತಿ ಬಿ.ಟಿ ಹಾಗೂ ಶ್ರೀಮತಿ ಗೀತಾ ಅವರ ಮಗನಾಗಿ 1.05.1995 ರಂದು ಡಾ.ಶಿವಕುಮಾರ ಅಳಗೋಡು ಅವರ ಜನನ. ಕನ್ನಡ ಸಾಹಿತ್ಯದಲ್ಲಿ ದ್ವಿತೀಯ ರ್ಯಾಂಕಿನೊಂದಿಗೆ ಸ್ನಾತಕೋತ್ತರ ಪದವಿ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ಯಕ್ಷಗಾನ ಪೂರ್ವರಂಗ ಅಧ್ಯಯನ’ ವಿಷಯಕ್ಕೆ ಪಿ.ಎಚ್ಡಿ ಪದವಿ ಇವರ ವಿದ್ಯಾಭ್ಯಾಸ. ಡಾ.ಶಿವಕುಮಾರ  ಅಳಗೋಡು ಅವರು ಹವ್ಯಾಸಿ ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥಧಾರಿ, ಛಂದೋಬದ್ದ ಯಕ್ಷ ಕವಿ, ಲೇಖಕರಾಗಿ ಗುರುತಿಸಿಕೊಂಡಿರುವ ಇವರು ಪ್ರಸ್ತುತ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪದವಿ ವಿಭಾಗದ ಕನ್ನಡ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಡಿ.ಎಸ್. ಸುಬ್ರಹ್ಮಣ್ಯ ಮೂರ್ತಿ, ನಿಟ್ಟೂರು ಇವರು ಯಕ್ಷಗಾನದ ಪ್ರಾಥಮಿಕ ಗುರು. ಬಳಿಕ ಮಂಜುನಾಥ ಕುಲಾಲ್ ಐರೋಡಿ, ಪ್ರಸಾದ್ ಕುಮಾರ್ ಮೊಗೆಬೆಟ್ಟು, ಕೃಷ್ಣಮೂರ್ತಿ ಭಟ್ ಬಗ್ವಾಡಿ ಅವರ ಬಳಿ ಯಕ್ಷಗಾನವನ್ನು ಅಭ್ಯಾಸ ಮಾಡಿರುತ್ತಾರೆ ಹಾಗೂ ಶಿಮಂತೂರು ನಾರಾಯಣ ಶೆಟ್ಟಿ ಅವರ ಪಟ್ಟದ ಶಿಷ್ಯರಾದ ಗಣೇಶ್ ಕೊಲೆಕಾಡಿ, ಡಿ.ಎಸ್ ಶ್ರೀಧರ್ ಇವರು ಛಂದಸ್ಸಿನ…

Read More

ಮೂಡುಬಿದಿರೆ : ಶಿವರಾಮ ಕಾರಂತ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಈ ಬಾರಿಯ ಡಾ. ‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ನಾಲ್ವರು ಸಾಹಿತಿಗಳ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಎಚ್.ಆರ್. ಲೀಲಾವತಿಯವರ ಆತ್ಮ ಕಥನ – ‘ಹಾಡಾಗಿ ಹರಿದಾಳೆ’, ಡಾ. ಬಿ. ಜನಾರ್ದನ ಭಟ್ ಇವರ ‘ವಿನೂತನ ಕಥನ ಕಾರಣ’, ಪ್ರೊ. ಎಚ್.ಟಿ. ಪೋತೆ ಇವರ ‘ಅಂಬೇಡ್ಕರ್ ಮತ್ತು…’, ಡಾ. ನಿತ್ಯಾನಂದ ಬಿ. ಶೆಟ್ಟಿಯವರ ‘ಮಾರ್ಗಾನ್ವೇಷಣೆ’ ಕೃತಿಗಳಿಗೆ ನೀಡಲಾಗಿದೆ. ಪುರಸ್ಕಾರವು ರೂ.10 ಸಾವಿರ ನಗದು ಗೌರವ ಸಂಭಾವನೆ ಹೊಂದಿದೆ ಎಂದು ಶಿವರಾಮ ಕಾರಂತ ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ್ ಮಾವಿನಕುಳಿ ತಿಳಿಸಿದ್ದಾರೆ. ಎಚ್.ಆರ್. ಲೀಲಾವತಿ ಇವರು ಆಕಾಶವಾಣಿ ಮೈಸೂರಿನ ‘ಎ’ ದರ್ಜೆಯ ಸಂಗೀತ ಸಂಯೋಜಕ ಕಲಾವಿದೆ. ಹಲವಾರು ಶ್ರೇಷ್ಟ ಸಂಗೀತ ಅಧ್ಯಾಪಕರಿಂದ ಶಾಸ್ತ್ರೀಯ ಸಂಗೀತದೊಂದಿಗೆ ಭಾವಗೀತೆ ಭಜನೆಗಳಂತಹ ಸಂಗೀತದ ಬೇರೆ ಬೇರೆ ವಿಭಾಗಗಳನ್ನು ಕಲಿತು ಕರಗತ ಮಾಡಿಕೊಂಡವರು. ಮೈಸೂರು ಬೆಂಗಳೂರು ಕಲ್ಕತ್ತ ಮಾತ್ರವಲ್ಲದೆ, ಭಾರತದಾದ್ಯಂತ ಬೇರೆ ಬೇರೆ…

Read More

ಮಂಗಳೂರು : ಎರಿಕ್ ಅಲೆಕ್ಸಾಂಡರ್ ಒಝೇರಿಯೊ ಇವರ ಜನುಮದ ಅಮೃತೋತ್ಸವ ಪ್ರಯುಕ್ತ, ಅವರು ಭಾಷೆ, ಸಂಗೀತ, ಕಲೆ, ಸಂಸ್ಕೃತಿ, ಸಂಘಟನೆ ಹೀಗೆ ಕೊಂಕಣಿಯ ಸಮಗ್ರ ಅಭಿವೃದ್ಧಿಗಾಗಿ ಮಾಡಿದ ಕಾರ್ಯಗಳನ್ನು ಗೌರವಿಸಲು, ಅವರಿಂದ ಪ್ರೇರಣೆ ಪಡೆದು, ಅವರ ಕೊಂಕಣಿ ಕೆಲಸಗಳ ಮುಂದುವರಿಕೆಯನ್ನು ಪ್ರೋತ್ಸಾಹಿಸಲು ಮಾಂಡ್ ಸೊಭಾಣ್ ‘ಎರಿಕ್ ಅಲೆಕ್ಸಾಂಡರ್ ಒಝೇರಿಯೊ ಅಮೃತೋತ್ಸವ ಸಂಶೋಧನಾ ಅನುದಾನ’ವನ್ನು ಘೋಷಿಸಿದೆ. ಈ ಅನುದಾನ ಒಂದು ಲಕ್ಷ ರೂಪಾಯಿಯನ್ನು ಒಳಗೊಂಡಿದ್ದು, ಮೂರು ತಿಂಗಳ ಕಾಲಾವಧಿಯಲ್ಲಿ, ಕೆಳಗೆ ನೀಡಿದ ವಿಷಯಗಳ ಪೈಕಿ ಒಂದರ ಮೇಲೆ ಅಧ್ಯಯನಾತ್ಮಕ ಸಂಶೋಧನೆ ನಡೆಸಬೇಕು. ಬೇರೆ ಬೇರೆ ಸಂಶೋಧನಾ ಅಧ್ಯಯನದ ಬಗ್ಗೆ ಈ ಅನುದಾನವನ್ನು ವಾರ್ಷಿಕವಾಗಿ ನೀಡಲಾಗುವುದು. ಕೊಂಕಣಿ ಭಾಷೆ-ಸಂಸ್ಕೃತಿಯ ಬಗ್ಗೆ ಅಧ್ಯಯನ ನಡೆಸುವ ಕ್ಷಮತೆಯುಳ್ಳ, ಯಾವುದೇ ಭಾಷೆ ಅಥವಾ ಕೊಂಕಣಿಯ ಯಾವುದೇ ಭಾಷಾ ಪ್ರಬೇಧದ ಜನರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-07-2024. ಆಸಕ್ತಿಯುಳ್ಳವರು ತಮ್ಮ ಪರಿಚಯ ಹಾಗೂ ಸಂಶೋಧನೆಗೆ ಆಯ್ಕೆ ಮಾಡಿದ ವಿಷಯದ ಸಾರಾಂಶ ಬರೆದು ಮಾಂಡ್ ಸೊಭಾಣ್ ಮಿಂಚಂಚೆಗೆ…

Read More

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 2023-24ನೇ ಸಾಲಿನ ಪ್ರತಿಭಾ ದಿನಾಚರಣೆ ಕಾರ್ಯಕ್ರಮವು ದಿನಾಂಕ 24-05-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ ಇದರ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ “ಯಕ್ಷಗಾನ ಶ್ರೀಮಂತ ಕಲೆಯಾಗಿದ್ದು, ಬದುಕಿನಲ್ಲಿ ಸಂಸ್ಕಾರ ಕಲಿಸುತ್ತದೆ. ಶಿಕ್ಷಣವು ಜೀವನ ನಡೆಸಲು ಸಂಪಾದನೆಗೆ ದಾರಿ ಮಾಡಿಕೊಟ್ಟರೆ, ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಯಕ್ಷಗಾನ ದಾರಿ ದೀಪವಾಗಿದೆ. ಶಿಕ್ಷಣ ನನ್ನ ಕೈ ಸೇರದಿದ್ದರೂ ಯಕ್ಷಗಾನ ನನ್ನ ಹೃದಯ ಸೇರಿದೆ. ಛಲ ಹಾಗೂ ಅಭಿಮಾನಿಗಳ ಪ್ರೋತ್ಸಾಹ ಈ ಕ್ಷೇತ್ರದಲ್ಲಿ ನನ್ನನ್ನು ಯಶಸ್ವಿಗೊಳಿಸಿದೆ. ಜಾತಿ, ಧರ್ಮ, ಭೇದಭಾವ ಮರೆತು ಮನುಷ್ಯತ್ವ ಮೈಗೂಡಿಸಿಕೊಳ್ಳಿ. ಒಳ್ಳೆಯತನ ಎಂದಿಗೂ ಎಲ್ಲರ ಕೈ ಹಿಡಿಯುತ್ತದೆ.” ಎಂದರು. ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಸ್ಕೂಲಿನ ಪ್ರಾಂಶುಪಾಲೆ ಡಾ. ಮಾಲಿನಿ ಎನ್‌. ಹೆಬ್ಬಾರ್ ಮಾತನಾಡಿ “ಜೀವನದಲ್ಲಿ ಸಮಯ ಪ್ರಜ್ಞೆ ಇದ್ದಾಗ ಮಾತ್ರ ಯಶಸ್ಸು ಲಭಿಸುತ್ತದೆ. ಹಾಗಾಗಿ ಸಮಯ ಪ್ರಜ್ಞೆ ಕೂಡ ಒಂದು ಪ್ರತಿಭೆ ಇದ್ದಂತೆ. ಸುತ್ತಲಿನ ಪರಿಸರದಲ್ಲಿರುವುದನ್ನು ಸೂಕ್ಷ್ಮವಾಗಿ ಗ್ರಹಿಸಿ…

Read More

ಬಂಟ್ವಾಳ : ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿ ಆಯೋಜಿಸಿದ್ದ ಹಿರಿಯ ಸಾಹಿತಿ, ವಿದ್ವಾಂಸದ್ವಯರಾದ ದಿ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಹಾಗೂ ದಿ. ದೇರಾಜೆ ಸೀತಾರಾಮಯ್ಯ ಅವರ ಒಡನಾಟದ ಸಂಸ್ಮರಣೆಯ ‘ದೇರಾಜೆ – ಏರ್ಯ ನೆನಪಿನ ಕ್ಷಣಗಳು’ ಕಾರ್ಯಕ್ರಮವು ದಿನಾಂಕ 23-05-2024ರಂದು ಮೊಡಂಕಾಪು ಸಮೀಪ ಏರ್ಯಬೀಡಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಪತ್ನಿ ಏರ್ಯ ಆನಂದಿ ಆಳ್ವ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಉಭಯ ಸಾಹಿತಿಗಳ ಕುರಿತು ಮಾತನಾಡಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, “ಏರ್ಯ ಮತ್ತು ದೇರಾಜೆ ಸೀತಾರಾಮಯ್ಯ ಇಬ್ಬರೂ ಯಕ್ಷಗಾನ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಏರ್ಯ ಅವರಿಗೆ ಸಾಹಿತ್ಯ, ಸಂಸ್ಕೃತಿ ಕಲೆಗಳ ಮೇಲಿನ ಪ್ರೀತಿ ಅಗಾಧವಾಗಿತ್ತು. ಅವರು ಸಮಾಜಮುಖಿಯಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿದಿದ್ದು, ಉತ್ಸಾಹ ಗಮನಾರ್ಹ. ಕಲೆಯ ರಸದ ಬಗ್ಗೆ ಇದ್ದಂಥ ಒಲವು ದೇರಾಜೆ ಸೀತಾರಾಮಯ್ಯ ಅವರೆಡೆ ಸೆಳೆದಿತ್ತು. ಮಾತು ಮತ್ತು ಬರಹಗಳ ಮೂಲಕ ಶ್ರೇಷ್ಠವಾದ ಸಾಹಿತ್ಯ ಸೃಷ್ಟಿ ಮಾಡಿರುವುದು ದೇರಾಜೆ…

Read More

ಕಾರ್ಕಳ : ಅಮಿತ್ ಎಸ್. ಪೈ ಸ್ಮಾರಕ ಯೋಗ ಧ್ಯಾನ ಮಂದಿರ ಪೆರ್ವಾಜೆಯಲ್ಲಿ ಹೊಸಸಂಜೆ ಪ್ರಕಾಶನದ 33ನೆಯ ಪ್ರಕಟಣೆ ಲೇಖಕ ಕೆ.ಎ. ಶೆಟ್ಟಿ ಕುಂಜತ್ತೂರು ಇವರ ‘ಭಾಂಧವ್ಯದ ಬೆಸುಗೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 19-05-2024ರಂದು ನಡೆಯಿತು. ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಕಾರ್ಕಳ ಸಾಹಿತ್ಯ ಸಂಘದ ಗೌರವಾಧ್ಯಕ್ಷ ತುಕಾರಾಮ ನಾಯಕ್ “ಆಧುನಿಕ ಬದುಕಿನಲ್ಲಿ ಬಹುವಿಧದ ತಂತ್ರಜ್ಞಾನ ಕೈಯಳತೆಯಲ್ಲಿದೆ. ಇದರಿಂದ ನಮ್ಮ ಬದುಕು ಸುಲಲಿತವಾಗಿದೆ ಎಂಬುದು ಸತ್ಯ. ಆದರೆ ಇದರ ಅತಿಯಾದ ಬಳಕೆಯಿಂದ ಮನುಷ್ಯನ ಬದುಕು ಕೂಡ ಅಸ್ತವ್ಯಸ್ತವಾಗಿದೆ ಎಂಬುದನ್ನು ಮರೆಯುವಂತಿಲ್ಲ. ಮೊಬೈಲ್, ಕಂಪ್ಯೂಟರ್, ಇಂಟರ್ ನೆಟ್ ಗಳಂತಹ ಆಧುನಿಕ ಸೌಲಭ್ಯಗಳನ್ನು ಮಿತವಾಗಿ ಬಳಸುವ ಮೂಲಕ ನಮ್ಮ ಬದುಕಿನಲ್ಲಿ ಸೌಕರ್ಯಗಳು ಸೃಷ್ಟಿಸುವ ಅನಾಹುತಗಳನ್ನು ತಪ್ಪಿಸಬಹುದು. ನೆಮ್ಮದಿಯ ಬದುಕು ಬೇಕಿದ್ದರೆ ಇಂತಹ ಸಾಧನಗಳ ಅತಿಬಳಕೆ ಬಿಟ್ಟು ಪುಸ್ತಕಗಳನ್ನು ಓದುವ ಮತ್ತು ಬರೆಯುವ ಮೂಲಕ ಬದಲಾವಣೆ ತಂದುಕೊಳ್ಳಬೇಕು” ಎಂದು ಸಲಹೆ ನೀಡಿದರು. ಕರ್ನಾಟಕ ರಾಜ್ಯ ಕ್ವಾರಿ ಮತ್ತು ಕೃಷರ್ಸ್ ಓನರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ…

Read More