Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ತೆಂಕುತಿಟ್ಟು ಯಕ್ಷಗಾನದಲ್ಲಿ ಮರೆಯಾಗಿರುವ ರಾಮಾಯಣ ಪ್ರಸಂಗದ ವಾಲಿ ಹಾಗೂ ಸುಗ್ರೀವರ ಒಡ್ಡೋಲಗವನ್ನು ಅಧ್ಯಯನ ಸಂಶೋಧನೆ ನಡೆಸಿ ದಾಖಲೀಕರಣ ಮಾಡುವ ಹೊಸ ಪ್ರಯತ್ನವನ್ನು ಯಕ್ಷಗಾನ ಚಿಂತಕ ರಾಜಗೋಪಾಲ್ ಕನ್ಯಾನ ನಡೆಸಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಸೂರಿಕುಮೇರು ಮಾರ್ಗದರ್ಶನ ಹಾಗೂ ನಿರ್ದೇಶನದಲ್ಲಿ ಪಾರಂಪರಿಕ ಪ್ರದರ್ಶನದ ವೀಡಿಯೋ ಚಿತ್ರೀಕರಣ ಮೂಲಕ ದಾಖಲೀಕರಣ ನಡೆಸಲಾಗಿದೆ. ಗೋವಿಂದ ಭಟ್ಟರ ಶಿಷ್ಯ ಧರ್ಮೇಂದ್ರ ಆಚಾರ್ಯ ಕೂಡ್ಲು ಹಾಗೂ ಶಿಷ್ಯವೃಂದದವರು ಭಾಗವಹಿಸಿದ್ದಾರೆ. ವಾಲಿ-ಸುಗ್ರೀವರ ಒಡ್ಡೋಲಗ ವಿಡಿಯೋ ಬಿಡುಗಡೆ ಮಂಗಳೂರಿನ ಪತ್ರಿಕಾಭವನದಲ್ಲಿ ದಿನಾಂಕ 19-10-2023ರಂದು ನಡೆಯಿತು. ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಸೂರಿಕುಮೇರು ಅವರು ಮಾತನಾಡಿ, “ತೆಂಕುತಿಟ್ಟು ಯಕ್ಷಗಾನವು ಈವರೆಗೆ ಹಲವು ಪ್ರಮುಖ ಅಂಶಗಳನ್ನು ಕಳೆದುಕೊಂಡಿದ್ದು ಇದೆ. ಈ ಸಾಲಿನಲ್ಲಿ ರಾಮಾಯಣ ಪ್ರಸಂಗದ ವಾಲಿ ಹಾಗೂ ಸುಗ್ರೀವರ ಒಡ್ಡೋಲಗವೂ ಒಂದಾಗಿದೆ. ಇದನ್ನು ರಾಜಗೋಪಾಲ್ ಕನ್ಯಾನ ಅವರು ದಾಖಲಾತಿ ಮಾಡಿದ್ದಾರೆ” ಎಂದರು. ಕಸಪಾ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ವೀಡಿಯೋ ದಾಖಲೀಕರಣವನ್ನು ಉದ್ಘಾಟಿಸಿ…
ಮಂಗಳೂರು : ನೃತ್ಯಾಂಗಣ ಪ್ರಸ್ತುತ ಪಡಿಸುವ ‘ಮಂಥನ 9ನೇ ಆವೃತ್ತಿ -2023’ ಭರತನಾಟ್ಯ ಕಾರ್ಯಕ್ರಮವನ್ನು ಶ್ರೀಮತಿ ವಿದ್ಯಾ ಸುಬ್ರಮಣ್ಯನ್ ಇವರು ಮಂಗಳೂರಿನ ಡಾನ್ ಬೋಸ್ಕೋ ಸಭಾಂಗಣದಲ್ಲಿ ದಿನಾಂಕ 03-11-2023ರಂದು ಮಂಗಳ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಿದ್ದಾರೆ. ಸಾಯಿಬೃಂದಾ ರಾಮಚಂದ್ರನ್ ಹೊಸೂರ್, ಪ್ರಿಯಾಂಜಲಿ ರಾವ್ ಮುಂಬೈ ಮತ್ತು ಧನ್ಯಶ್ರೀ ಪ್ರಭು ಉಡುಪಿ ಇವರುಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ‘ಮಂಥನ 2023’ ಭರತನಾಟ್ಯದ ಕಾರ್ಯಾಗಾರವನ್ನು ಶ್ರೀಮತಿ ವಿದ್ಯಾ ಸುಬ್ರಮಣ್ಯನ್ ಇವರು ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ದಿನಾಂಕ 04-11-2023 ಮತ್ತು 05-11-2023ರಂದು ನಡೆಸಿಕೊಡಲಿದ್ದಾರೆ. ಶ್ರೀಮತಿ ವಿದ್ಯಾ ಸುಬ್ರಮಣ್ಯನ್ ಇವರು ಜೀವನವನ್ನು ನೃತ್ಯ ಸೇವೆಗೆಂದೇ ಮುಡಿಪಾಗಿಟ್ಟವರು. ಇವರು ಖ್ಯಾತ ಗುರುಗಳಾದ ಎಸ್.ಕೆ. ರಾಜರತ್ನಂ ಹಾಗೂ ಅಭಿನಯದಲ್ಲಿ ಮೇರು ಸಾಧನೆಗೈದ ಶ್ರೀಮತಿ ಕಲಾನಿಧಿ ನಾರಾಯಣನ್ ಇವರಲ್ಲಿ ಭರತನಾಟ್ಯದ ವಳವೂರ್ ಶೈಲಿಯಲ್ಲಿ ನೃತ್ಯಾಭ್ಯಾಸವನ್ನು ಮಾಡಿದರು. ಇವರು ನರ್ತಿಸಿದ ರಾಧಾ ಮತ್ತು ಕೃಷ್ಣನ ನೃತ್ಯ ಹಾಗೂ ಅವರ ಅಂಗ ಶುದ್ಧಿ ಅಡವುಗಳನ್ನು ‘ನ್ಯೂಯಾರ್ಕ್ ಟೈಮ್ಸ್’ ಮತ್ತು ‘ದಿ ಟೈಮ್ಸ್ ಆಫ್ ಇಂಡಿಯಾ’…
ಮಂಗಳೂರು : ಕಥಾಬಿಂದು ಪ್ರಕಾಶನ ಇದರ ಹದಿನಾರನೇ ವಾರ್ಷಿಕ ಸಂಭ್ರಮದ ಪ್ರಯುಕ್ತ ‘ಕಥಾಬಿಂದು ಸಾಹಿತೋತ್ಸವ 2023’ವು ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ದಿನಾಂಕ 29-10-2023ರಂದು ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ‘ಕಥಾಬಿಂದು ಸಾಹಿತ್ಯ ಮಾಲೆ’ ಉದಯೋನ್ಮುಖ ಕವಿಗಳ ಕವನ ಸಂಕಲನಗಳ 50 ಕೃತಿಗಳು ಬಿಡುಗಡೆಗೊಳ್ಳಲಿವೆ. ಇದೇ ಸಂದರ್ಭದಲ್ಲಿ ಕಳೆದ 15 ವರ್ಷಗಳಿಂದ ಕಥಾಬಿಂದು ಪ್ರಕಾಶನದಿಂದ ಪ್ರಕಟಗೊಂಡ ಸುಮಾರು 200 ಲೇಖಕ, ಲೇಖಕಿಯರಿಗೆ ಗೌರವ ಸನ್ಮಾನ ಹಾಗೂ ಅವರ ಕೃತಿಗಳ ಪ್ರದರ್ಶನ, ನಾಡಿನ ವಿವಿಧ ಸಾಧಕರಿಗೆ ಪ್ರತಿಷ್ಠಿತ ರಾಜ್ಯ ಪ್ರಶಸ್ತಿಯಾದ ‘ಚೈತನ್ಯ ಶ್ರೀ’ ಪ್ರಶಸ್ತಿ, ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ವಹಿಸಲಿದ್ದು, ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಶ್ರೀಧರ್ ಇವರು ಉದ್ಘಾಟಿಸಲಿರುವರು. ಚಲನಚಿತ್ರ ಸಂಗೀತ ನಿರ್ದೇಶಕರಾದ ಕಲಾರತ್ನ ಜಯರಾಮ್ ಇವರಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ.
ಮಣಿಪಾಲ : ಸಂಗಮ ಕಲಾವಿದೆರ್ ಮಣಿಪಾಲ (ರಿ.) ಸಂಸ್ಥೆಯು ದಿನಾಂಕ 28-10-2023 ಮತ್ತು 29-10-2023ರಂದು ಎರಡು ದಿನಗಳ ಮುಖವರ್ಣಿಕೆ ಕಾರ್ಯಗಾರ ‘ಮೇಕಪ್ ಕಿಟ್’ನ್ನು ಪ್ರಸ್ತುತ ಪಡಿಸುತ್ತದೆ. ಮಣಿಪಾಲದ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಐದು ಜನ ಸಂಪನ್ಮೂಲ ವ್ಯಕ್ತಿಗಳ ನೇತೃತ್ವದಲ್ಲಿ ನಡೆಯುವ ಈ ಕಾರ್ಯಾಗಾರದಲ್ಲಿ ಯಕ್ಷಗಾನ, ರಿಯಾಲಿಸ್ಟಿಕ್, ಮೈಮ್ ಮತ್ತು stylized ಮೇಕಪ್ ಇವುಗಳ ಬಗ್ಗೆ ತರಬೇತಿ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳು : ಭುವನ್ ಮಣಿಪಾಲ್, ಸಂದೀಪ್ ಶೆಟ್ಟಿಗಾರ್, ಉಜ್ವಲ್ ಯು.ವಿ., ಶ್ವೇತ ಅರೆಹೊಳೆ ಮತ್ತು ಪ್ರಜ್ವಲ್ ಶೇರಿಗಾರ್ ಸೂಚನೆಗಳು: 1. ಕಾರ್ಯಗಾರ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಐದು ಗಂಟೆಯವರಗೆ ನಡೆಯಲಿದೆ. 2. 10 ವರ್ಷ ಮೇಲ್ಪಟ್ಟ ಆಸಕ್ತರು ಭಾಗವಹಿಸಬಹುದು. 3. ಭಾಗವಹಿಸುವ ವಿದ್ಯಾರ್ಥಿಗಳಿಗೆ ಊಟ ತಿಂಡಿಯ ವ್ಯವಸ್ಥೆ ಮಾಡಲಾಗುವುದು. 4. ಕಾರ್ಯಾಗಾರಕ್ಕೆ 1000/- ಶುಲ್ಕ ನಿಗದಿ ಪಡಿಸಲಾಗಿದೆ. 5. ಹೆಚ್ಚಿನ ಮಾಹಿತಿಗಳನ್ನು ಕಾರ್ಯಾಗಾರದ ಮುಂಚಿತವಾಗಿ ನೀಡಲಾಗುವುದು. ಸಂಗಮ ಕಲಾವಿದೆರ್ ಮಣಿಪಾಲ (ರಿ.), 1997ರಲ್ಲಿ ತುಳು ರಂಗಭೂಮಿಯ ಹವ್ಯಾಸಿ ಕಲಾವಿದರ…
ಮಂಗಳಗಂಗೋತ್ರಿ : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರ ಮತ್ತು ಕನ್ನಡ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ ಪುತ್ತೂರು ಸಹಯೋಗದೊಂದಿಗೆ ‘ಬಸವಣ್ಣ ಮತ್ತು ಕನಕದಾಸ ಇಹ-ಪರ ಲೋಕದೃಷ್ಟಿ’ ಎಂಬ ವಿಷಯದ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣವನ್ನು ದಿನಾಂಕ 08-11-2023ರ ಬುಧವಾರದಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಪುತ್ತೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಒಂದು ಅವಧಿಯನ್ನು ಪ್ರತಿನಿಧಿಗಳ ಪ್ರಬಂಧ ಮಂಡನೆಗೆ ಮೀಸಲಿರಿಸಲಾಗಿದೆ. ಪ್ರಬಂಧ ಮಂಡಿಸಲು ಇಚ್ಛಿಸುವ ಪ್ರತಿನಿಧಿಗಳು *ಕನಕದಾಸರ ಕೀರ್ತನೆಗಳಲ್ಲಿ ಕಾಯಕ ಜಿಜ್ಞಾಸೆ, *ಕುಲದ ಪ್ರಶ್ನೆ, *ಸಂಸಾರ, *ಆತ್ಮವಿಮರ್ಶೆ, *ಕನಕದಾಸರ ಮುಂಡಿಗೆಗಳ ವೈಶಿಷ್ಟ್ಯ, *ಬಸವಣ್ಣನ ವಚನಗಳಲ್ಲಿ ತಾತ್ವಿಕತೆ, *ಸಮಾಜ, *ಸಾಹಿತ್ಯ ಮೌಲ್ಯ, *ಪ್ರಭುತ್ವ ವಿರೋಧಿ ನೆಲೆಗಳು, *ಕುಟುಂಬ ಪರಿಕಲ್ಪನೆ ಇತ್ಯಾದಿ ವಿಷಯಗಳಲ್ಲಿ ಪ್ರಬಂಧವನ್ನು ಮಂಡಿಸಲು ಅವಕಾಶವಿದೆ. ಪ್ರಬಂಧ ಮಂಡಿಸುವವರು ತಮ್ಮ ಪೂರ್ಣ ಪ್ರಬಂಧವನ್ನು ದಿನಾಂಕ 04-11-2023ರ ಮೊದಲು ಸಂಯೋಜಕರು, ಕನಕದಾಸ ಸಂಶೋಧನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ 574199 ಅಥವಾ ಇಮೇಲ್ ID: [email protected]…
ಉಡುಪಿ : ಡಾ. ವಿರೂಪಾಕ್ಷ ದೇವರಮನೆಯವರ ‘ಕಣ್ಣಿಗೆ ಕಾಣುವ ದೇವರು’ ಮತ್ತು ‘DID YOU TALK TO YOUR CHILD TODAY’ ಎಂಬ ಎರಡು ಕೃತಿಗಳು ದಿನಾಂಕ 29-10-2023ರಂದು ಸಂಜೆ 5 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಹಿರಿಯ ಸಾಹಿತಿ ಯಂಡಮೂರಿ ವೀರೇಂದ್ರನಾಥ್ ಇವರು ‘ಪೋಷಕರು ಆರು ಬಗೆ’ ಮತ್ತು ರೂಬಿಕ್ಸ್ ಕ್ಯೂಬ್ ಗ್ರಾಂಡ್ ಮಾಸ್ಟರ್ ಆಫಾನ್ ಕುಟ್ಟಿ ಇವರು ‘ಅಂತರ್ಜಾಲ ವ್ಯಸನದಿಂದ ರೂಬಿಕ್ಸ್ ಕ್ಯೂಬ್ ನ ಇಂದ್ರಜಾಲದತ್ತ’ ಎಂಬ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ಡಾ. ಎ.ವಿ. ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ. ಪಿ.ವಿ. ಭಂಡಾರಿ, ಒನ್ ಗುಡ್ ಸ್ಟೆಪ್ ಇದರ ಸ್ಥಾಪಕರು ಮತ್ತು ಟ್ರಸ್ಟಿಗಳಾದ ಅಮಿತಾ ಪೈ ಮತ್ತು ಸಾವಣ್ಣ ಪ್ರಕಾಶನ ಇದರ ಪ್ರಕಾಶಕರಾದ ಜಮೀಲ್ ಸಾವಣ್ಣ ಇವರುಗಳು ನಮ್ಮೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಡಾ. ವಿರೂಪಾಕ್ಷ ದೇವರಮನೆ ಮತ್ತು ಡಾ. ವೀಣಾ ವಿರೂಪಾಕ್ಷ…
ಬೆಂಗಳೂರು : ಕೋಟೇಶ್ವರದ ಎನ್.ಆರ್.ಎ.ಎಮ್.ಎಚ್. ಪ್ರಕಾಶನ ಮತ್ತು ‘ಸ್ಥಿತಿಗತಿ’ ತ್ರೈಮಾಸಿಕ ಪತ್ರಿಕೆಯ ಆಶ್ರಯದಲ್ಲಿ ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ನೀಡಲಾಗುವ ಹದಿನಾಲ್ಕನೆಯ ವರ್ಷದ ‘ಚಡಗ ಕಾದಂಬರಿ ಪ್ರಶಸ್ತಿ’ಗೆ ಶಶಿಧರ ಹಾಲಾಡಿಯವರ ‘ಅಬ್ಬೆ’ ಕಾದಂಬರಿಯನ್ನು ಮತ್ತು ‘ಚಡಗ ಸಂಸ್ಕರಣಾ ಪುರಸ್ಕಾರ’ಕ್ಕೆ ಬಿ.ಜಿ. ಸತ್ಯಮೂರ್ತಿಯವರನ್ನು ಆಯ್ಕೆ ಮಾಡಿದೆ. ಶಶಿಧರ ಹಾಲಾಡಿಯವರ ‘ಅಬ್ಬೆ’ ಕಾದಂಬರಿಯು ಅಪರೂಪದ ಸಸ್ಯ ವೈವಿಧ್ಯಗಳಲ್ಲಿ ಮತ್ತು ಅಷ್ಟೇ ಅಪರೂಪದ ದಂತಕತೆಯಂತೆ ಇರುವ ಅಬ್ಬೆ ಜೇಡ ಮತ್ತಿತರ ಜೀವ ವೈವಿಧ್ಯಗಳಲ್ಲಿ ಆಸಕ್ತನಾದ ಬ್ಯಾಂಕ್ ನೌಕರನೊಬ್ಬ, ಪರಿಸರವನ್ನು ಅವಲಂಬಿಸಿರುವ ಮನುಷ್ಯ ಜೀವಿಯು, ಪರಿಸರದಲ್ಲಿನ ವಿಷಜಂತುಗಳಿಗಿಂತ ಹೆಚ್ಚು ಅಪಾಯಕಾರಿಯಾಗಬಲ್ಲ ಎಂಬ ಕಟು ಸತ್ಯವನ್ನು ಕಂಡುಕೊಳ್ಳುವ ಕಥೆಯನ್ನು ಹೇಳುತ್ತದೆ. ಬಿ.ಜಿ.ಎಲ್. ಸ್ವಾಮಿಯವರೂ ಪೂರ್ಣಚಂದ್ರ ತೇಜಸ್ವಿಯವರೂ ಸೃಷ್ಟಿಸಿ ಕೈಬಿಟ್ಟ ನಿಗೂಢ ಜಗತ್ತುಗಳ ಮುಂದುವರಿಕೆಯಂತೆ ಕಾಣಿಸುವ ಇಲ್ಲಿನ ವಸ್ತು ಮತ್ತು ನಿರೂಪಣೆಯ ಸ್ನಿಗ್ಧತೆ ಮತ್ತು ಗಹನತೆಗಳನ್ನು ಗುರುತಿಸಿ, ಮೂವರು ತೀರ್ಪುಗಾರರ ಸಮಿತಿಯು ಈ ಕಾದಂಬರಿಯನ್ನು ಈ ವರ್ಷದ ಚಡಗ ಕಾದಂಬರಿ ಪುರಸ್ಕಾರಕ್ಕೆ ಆಯ್ಕೆ ಮಾಡಿದೆಯೆಂದು…
ಮಂಗಳೂರು : ಮಂಗಳೂರಿನ ಉರ್ವ ಹೊಯಿಗೆಬೈಲ್ ಬಳಿಯ ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ವತಿಯಿಂದ ನಡೆಯುವ ನವರಾತ್ರಿ ಉತ್ಸವದ ಸಂದರ್ಭದಲ್ಲಿ ‘ಶ್ರೀ ಚಾಮುಂಡೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿ’ ಎಂಬ ನೂತನ ಮೇಳ ಆರಂಭಗೊಳ್ಳಲಿದೆ. ನೂತನ ಮೇಳದ ಉದ್ಘಾಟನೆಯು ದಿನಾಂಕ 22-10-2023ರಂದು ಸಂಜೆ 6.30ಕ್ಕೆ ಶ್ರೀ ಕ್ಷೇತ್ರದಲ್ಲಿ ಜರಗಲಿದೆ. ಉದ್ಘಾಟನಾ ಸಮಾರಂಭದ ಬಳಿಕ ಮೇಳದ ಕಲಾವಿದರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ. ಶ್ರೀ ಚಾಮುಂಡೇಶ್ವರೀ ಯಕ್ಷಗಾನ ಮೇಳ ಆರಂಭವಾದ ಬಗ್ಗೆ : ಸುಮಾರು 2013ರಲ್ಲಿ ಹರಕೆಗಾಗಿ ಬಂದ ಚೆಂಡೆ ಮತ್ತು ಮದ್ದಳೆಗಳನ್ನು ತಾಳಮದ್ದಳೆಯಲ್ಲಿ ಉಪಯೋಗಿಸಿಕೊಳ್ಳಲಾಯಿತು. ವಾರದಲ್ಲಿ ಒಂದು ದಿನದಂತೆ ಪ್ರತೀ ವಾರ ತಾಳಮದ್ದಳೆಯ ಸೇವೆ ದೇವರಿಗೆ ನಡೆಯುತಿತ್ತು. ಸುಮಾರು 2016ರಲ್ಲಿ ಯಕ್ಷಗಾನ ನಾಟ್ಯ ತರಗತಿ ಆರಂಭವಾಗಿ ಪರಿಸರದ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಲಾಯಿತು. ಶ್ರೀಕೃಷ್ಣ ಲೀಲೆ, ಕಂಸ ವಧೆ, ಮಹಿಷ ಮರ್ಧಿನಿ, ಸುದರ್ಶನ ವಿಜಯ, ಏಕಾದಶಿ ದೇವಿ ಮಹಾತ್ಮೆ ಇವುಗಳ ಯಶಸ್ವೀ ಪ್ರದರ್ಶನ ಹಾಗೂ ಮತ್ತೊಂದು ಬಾರಿ ಹರಕೆ ರೂಪದಲ್ಲಿ ‘ಸುದರ್ಶನ…
ಸಮುದ್ರದ ತೆರೆಗಳು ಸ್ನಾನಕ್ಕೋಸ್ಕರವೇ ಬೇರೆಯಾಗಿ ಬರುವುದಿಲ್ಲ. ಬಂದ ತೆರೆಗೆ ನಾವು ತಲೆಯೊಡ್ಡಿ ಸ್ನಾನ ಮಾಡಬೇಕು. ಬದುಕಿನಲ್ಲೂ ಅವಕಾಶಗಳು ನಮಗೋಸ್ಕರವೇ ಬೇರೆಯಾಗಿ ಸೃಷ್ಟಿಯಾಗುವುದಿಲ್ಲ. ಇದ್ದ ಅವಕಾಶವನ್ನೇ ನಮ್ಮದಾಗಿಸಿಕೊಂಡು ಸದುಪಯೋಗಪಡಿಸಿಕೊಳ್ಳಬೇಕು. ಡಾ. ಸುಬೋಧ ಕೆರ್ಕರ್ ಅವರು ದಿನನಿತ್ಯ ಸಮುದ್ರವನ್ನು ನೋಡುತ್ತಾ, ನಡೆಯುತ್ತಾ ಕಲಾವಿದರಾಗಿ ರೂಪುಗೊಂಡು ಕಲೆಯನ್ನು ಸಿದ್ಧಿಸಿಕೊಂಡವರು. ಸಮುದ್ರದ ತೆರೆಗಳು ಬಂದ ಹಾಗೆ ಇವರಲ್ಲಿ ಕಲಾ ಅಲೆಗಳು ರೂಪುಗೊಂಡವು. ಡಾಕ್ಟರ್ ಆಗಿ ರೋಗಿಗಳ ಮೈದಡವಿ ಸಾಂತ್ವನ ಹೇಳುತ್ತಿದ್ದವರು ಕಲೆಗೆ ಮಾರುಹೋಗಿ ಕಲಾವಿದರಾದವರು. ಗೋವಾ ಸಮುದ್ರ ದಂಡೆಯ ನಿಸರ್ಗ ಸವಿಯನ್ನು ಸವಿಯುತ್ತಾ ಕಲಾಸೃಷ್ಟಿಯಲ್ಲಿ ತೊಡಗಿಸಿಕೊಂಡವರು. ಗೋವಾ ಬೀಚಿನ ಮರಳಿನ ವಾಸನೆಯನ್ನೇ ಕಲೆಯಾಗಿಸಿದವರು. ಬೆಂಗಳೂರಿನ ಕಿಂಕಿಣಿ ಆರ್ಟ್ ಗ್ಯಾಲರಿಯಲ್ಲಿ Fish Tales & Catamarans ಹೆಸರಿನಲ್ಲಿ ಇವರ ಕಲಾಪ್ರದರ್ಶನ ನಡೆಯುತ್ತಿದೆ. ಮೀನುಗಾರರ ಮುಖದ ಭಾವನೆಗಳು, ಮರಳಿನಲ್ಲಿ ಮೂಡಿದಂತೆ ಕಾಣುವ ಭಿತ್ತಿ ಶಿಲ್ಪಗಳು, ಗೂಡು ಬಿಟ್ಟು ಹಾರಿಹೋದ ಕಣಜದ ಗೂಡು, ಜೇನುಗೂಡಿನ ಮರದಲ್ಲಿ ಕಾಣುವ ಅವಶೇಷದ ಬಿಳಿಪೊರೆಗಳು, ಮಂಗೇಶ್ಕರ್ ದೇವಸ್ಥಾನದ ಕಾವಿಕಲೆಯ ಚಿತ್ರದಂತೆ ಕಾಣುವ ಬಣ್ಣದ ಚಿತ್ರಗಳು. ಮೀನಿನ…
ಮೂಲ್ಕಿ : ವಿಜಯ ಕಾಲೇಜು ಮೂಲ್ಕಿ, ವಿಜಯ ಮ್ಯಾಗಝೀನ್ ಮತ್ತು ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಹಯೋಗದೊಂದಿಗೆ ದಿನಾಂಕ 13-10-2023ರಂದು ವಿಜಯ ಕಾಲೇಜಿನ ಕಿರು ಸಭಾಂಗಣದಲ್ಲಿ ಸೃಜನಶೀಲ ಬರಹ ಕಾರ್ಯಾಗಾರವು ನಡೆಯಿತು. ಈ ಕಾರ್ಯಾಗಾರವನ್ನು ತುಳುವೆರೆ ಆಯನೊ ಕೂಟದ ಅಧ್ಯಕ್ಷೆ ಶಮೀನಾ ಜಿ. ಆಳ್ವ ಇವರು ಉದ್ಘಾಟಿಸಿ ಮಾತನಾಡುತ್ತಾ “ಬರವಣಿಗೆ ಒಂದು ಸೃಜನಶೀಲ ಪ್ರಕ್ರಿಯೆ. ಪ್ರತಿ ವ್ಯಕ್ತಿ ತನ್ನದೇ ಚಿಂತನೆ, ಸಂವೇದನೆ ಮತ್ತು ಮಾತುಗಳನ್ನು ಭಾಷೆಯ ಕಲಾತ್ಮಕ ರೀತಿಯಲ್ಲಿ ಅಭಿವ್ಯಕ್ತಿಸುವ ರೀತಿ ವಿಶೇಷವಾದದ್ದು. ಇದು ಭಾಷೆಯ ಶಕ್ತಿ, ವ್ಯಕ್ತಿಯ ವಿಶಿಷ್ಟ ಶಕ್ತಿ” ಎಂದು ಹೇಳಿದರು. ಯುವ ಬರಹಗಾರ ರಾಜೇಶ್ ಕುಮಾರ್ ಕಲ್ಯಾ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀಮಣಿಯವರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ನುಡಿದರು. ವಿಜಯ ವಾರ್ಷಿಕ ಸಂಚಿಕೆಯ ಸಂಪಾದಕಿ ಡಾ. ಶೈಲಜಾ ವೈ.ವಿ. ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿ ಪ್ರತಿನಿಧಿ ಚೇತನಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ತಮ್ಮ ಸ್ವಅನುಭವ ಹಂಚಿಕೊಂಡರು. ಸಮಾರೋಪ ಸಮಾರಂಭದ…