Subscribe to Updates
Get the latest creative news from FooBar about art, design and business.
Author: roovari
ಕಲ್ಲಹಳ್ಳಿ : ಸತ್ಯಕಾಮರ ಪುಣ್ಯಾರಾಧನೆ ಪ್ರಯುಕ್ತ ‘ಗಣೇಶ ದರ್ಶನ’ ಎಂಬ ಕಾರ್ಯಕ್ರಮವನ್ನು ದಿನಾಂಕ 20 ಅಕ್ಟೋಬರ್ 2025ರಂದು ಕಲ್ಲಹಳ್ಳಿ ಸುಮ್ಮನೆ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಗುರುರಾಜ ಕರ್ಜಗಿಯವರ ಮಾರ್ಗದರ್ಶನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ‘ಸಾಹಿತ್ಯದಲ್ಲಿ ಗಣೇಶ’ ಎಂಬ ವಿಷಯದ ಬಗ್ಗೆ ವಿಶ್ರಾಂತ ಕುಲಪತಿಗಳಾದ ಮಲ್ಲೇಪುರಂ ಜಿ. ವೆಂಕಟೇಶ್, ‘ತಿಲಕರು ಮತ್ತು ಗಣಪ’ ಎಂಬ ವಿಷಯದ ಬಗ್ಗೆ ಉಪನ್ಯಾಸಕರಾದ ಆದರ್ಶ ಗೋಖಲೆ ಮತ್ತು ‘ಪಾರ್ವತಿ ಮತ್ತು ಗಣಪತಿ’ ಎಂಬ ವಿಷಯದ ಬಗ್ಗೆ ಉಪನ್ಯಾಸಕಿ ಕುಮಾರಿ ಅಕ್ಷಯಾ ಗೋಖಲೆ ಇವರು ವಿಷಯ ಮಂಡನೆ ಮಾಡಲಿದ್ದಾರೆ. ಭಾರತೀಯ ಪರಂಪರೆಯಲ್ಲಿ ಪದ್ಮದ ಶೋಧ ‘ಪದ್ಮಗಂಧಿ ಸಿನೆಮಾ ಪ್ರದರ್ಶನ’ ನಡೆಯಲಿದೆ.
ಹುಬ್ಬಳ್ಳಿ : ಸಾಹಿತ್ಯ, ಸಾಂಸ್ಕೃತಿಕ ಮತ್ತು ಗ್ರಾಮಾಭ್ಯುದಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿಶ್ವಶಾಂತಿ ಸೇವಾ ಟ್ರಸ್ಟ್ ಪ್ರಕಟಿಸುವ ಪ್ರತಿಷ್ಠಿತ ‘ನಮ್ಮನೆ ಪ್ರಶಸ್ತಿ’ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಾರಿ ಪ್ರಶಸ್ತಿಗೆ ರಂಗಭೂಮಿ ಮತ್ತು ಚಿತ್ರರಂಗದ ಹಿರಿಯ ಕಲಾವಿದೆ ಬಿ. ಜಯಶ್ರೀ, ಔಷಧೋದ್ಯಮ ಕ್ಷೇತ್ರದ ಪ್ರಮುಖ ಸಾಧಕ ರಾಮನಂದನ ಹೆಗಡೆ ದೊಡ್ಮನೆ ಹಾಗೂ ಯುವ ಪ್ರತಿಭೆ ತೇಜಸ್ವಿ ಗಾಂವಕರ ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ತಿಳಿಸಿದ್ದಾರೆ. ಬಿ. ಜಯಶ್ರೀಗೆ ನಮ್ಮನೆ ಸಾಧಕ ಪ್ರಶಸ್ತಿ : ಪ್ರಖ್ಯಾತ ರಂಗಭೂಮಿ ನಟಿ, ನಿರ್ದೇಶಕಿ ಹಾಗೂ ಗಾಯಕಿ ಬಿ. ಜಯಶ್ರೀ ಇವರು ಈ ವರ್ಷದ ನಮ್ಮನೆ ಸಾಧಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಗುಬ್ಬಿ ವೀರಣ್ಣ ಇವರ ಮೊಮ್ಮಗಳಾದ ಜಯಶ್ರೀಯವರು ಹವ್ಯಾಸಿ ನಾಟಕ ಸಂಸ್ಥೆ ಸ್ಪಂದನ ಥಿಯೇಟರ್ನ ಸೃಜನಶೀಲ ನಿರ್ದೇಶಕರಾಗಿ ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. 2010ರಿಂದ 2016ರವರೆಗೆ ಅವರು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದು, ಕಲಾರಂಗದಲ್ಲಿ ರಾಜ್ಯೋತ್ಸವ ಹಾಗೂ ಪದ್ಮಶ್ರೀ ಸೇರಿದಂತೆ ಅನೇಕ ಗೌರವಗಳನ್ನು…
ಮೂಡುಬಿದಿರೆ : ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ಸಂಘ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ಘಟಕದ ಸಹಯೋಗದಲ್ಲಿ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ದಿನಾಂಕ 17 ಅಕ್ಟೋಬರ್ 2025ರಂದು ‘ನುಡಿನಮನ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಡಾ. ಎಸ್.ಎಲ್. ಭೈರಪ್ಪರವರ – ವ್ಯಕ್ತಿತ್ವ ಮತ್ತು ಬರಹಗಳಲ್ಲಿನ ಜೀವನ ಮೌಲ್ಯಗಳ ಕುರಿತು ಮಾತನಾಡಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್ ಇವರು “ಕನ್ನಡ ಸಾರಸ್ವತ ಲೋಕದಲ್ಲಿ ಅತ್ಯಂತ ಹೆಚ್ಚು ರಾಯಧನ (ರಾಯಲ್ಟಿ) ಪಡೆಯುತ್ತಿದ್ದವರು ಎಸ್.ಎಲ್. ಭೈರಪ್ಪನವರು. ಸಾಹಿತ್ಯದಿಂದ ಪಡೆದ ಹಣವನ್ನು ಸಂಪೂರ್ಣವಾಗಿ ಸಮಾಜಕ್ಕೆ ಹಿಂದಿರುಗಿಸಿದ ಕೀರ್ತಿಯು ಭೈರಪ್ಪರವರಿಗೆ ಸಲ್ಲುತ್ತದೆ. ಎಸ್.ಎಲ್. ಭೈರಪ್ಪನವರು ಬಾಲ್ಯದಿಂದಲೇ ಕಷ್ಟದ ಬದುಕನ್ನು ಬಾಳಿದವರು. ಇದರಿಂದಾಗಿ ಅವರ ಸಾಹಿತ್ಯದಲ್ಲಿ ಅನುಭವ ಶ್ರೀಮಂತಿಕೆ ಇದೆ. ಲೇಖಕನಿಗೆ ಅನುಭವ ಮುಖ್ಯ. ಅನುಭವ ಮತ್ತು ಕಲ್ಪನೆಯನ್ನು ಸಾಹಿತ್ಯದಲ್ಲಿ ಬೆರೆಸಿದಾಗ ಮಾತ್ರ ಸಾಹಿತ್ಯ ಓದುಗನಿಗೆ ಕಾಣುತ್ತದೆ. ಓದುಗನು ಪಾತ್ರವನ್ನು ತನ್ನಲ್ಲಿ ಕಂಡಾಗ ಮಾತ್ರ ಅದು…
ಮಧುರ ಸ್ವರಾಲಾಪನೆಯ ಏರಿಳಿತಗಳು ಜೀವ ಜಂಜಾಟಗಳ ನಿನ್ನೆ ನಾಳೆಗಳಂತೆ ಮೀಟುವ ತಂತಿಗೆ ನಾದ ಮಿಡಿಯುವ ಹಾಗೆ ಎದೆಯ ತುಡಿತಕೆ ನಾಡಿ ಮಿಡಿಯುತ್ತದೆ ; ನಾದ ತಂತುಗಳಿಗೆ ಸ್ಪಂದಿಸದ ತಾಳ ಸ್ವರಕೀರ್ತನೆಯ ದಿಕ್ಕು ತಪ್ಪಿಸುವ ಹಾಗೆ ಸ್ಪರ್ಶಾನುಭವ ಸೂಕ್ಷ್ಮವರಿಯದ ಮನಸು ಅಂತರ್ಭಾವದ ಹರಿವಿಗೆ ಮುಳುವಾಗುತ್ತದೆ ; ಸ,ರಿ,ಗ,ಮ,,,,ನಾದ ತರಂಗಿಣಿಯ ಸುರಭಿ ಶ್ರೋತೃಗಳ ಹೃನ್ಮನಗಳ ತಣಿಸುವ ಹಾಗೆ ಸ್ನೇಹ ವಾತ್ಸಲ್ಯದೊಲುಮೆಯ ನುಡಿಗಳು ಬೆಸೆದ ಸಂಬಂಧಗಳಿಗೆ ಮುದ ನೀಡುತ್ತವೆ ; ಲಯ ತಪ್ಪಿದ ರಾಗ ಭಾವಗಳ ಹಿಮ್ಮೇಳದಲಿ ಸ್ವರ ಸಂಕುಲಗಳ ಕ್ಷಣ ಭಂಗುರವಾದ ಹಾಗೆ ಸದ್ಭಾವನೆಯಿಲ್ಲದ ಆಡಂಬರದ ಮಾತುಗಳು ಹಸಿರು ಹೊದಿಕೆಯ ಹಾದಿಯನು ಬರಡಾಗಿಸುತ್ತವೆ ; ಉಚ್ಛ ಸ್ಥಾಯಿಯ ಮಧುರ ಗಾನ ಸುರಭಿಗೆ ಮಧ್ಯ ಸ್ಥಾಯಿಯ ವಾದ್ಯ ಇಂಪುಣಿಸುವ ಹಾಗೆ ಉತ್ಸಾಹದ ಹೆಜ್ಜೆಗಳಿಗೆ ಸ್ಫೂರ್ತಿಯ ಹೆಗಲು ಸುಪ್ತ ಸಂವೇದನೆಗಳನು ಚುರುಕಾಗಿಸುತ್ತವೆ ; ಬದುಕು ಸಂಗೀತವಾದಾಗ ಹೆಜ್ಜೆ ಪಲ್ಲವಿಸುತ್ತದೆ ಮಿಡಿವ ನಾಡಿಯ ಶೃತಿಲಯಗಳು ನರ್ತಿಸುತ್ತವೆ ತಾಳ ತಪ್ಪಿದ ಜೀವನದ ಹೆಗ್ಗುರುತುಗಳ ಆಳ ಸುಶ್ರಾವ್ಯ ನಾದತರಂಗಗಳನು ಅಳಿಸಿಹಾಕುತ್ತವೆ ;…
ಪೆರಿಯ : ಬೇಕಲ್ ಗೋಕುಲಂ ಗೋಶಾಲೆಯು ಈ ವರ್ಷದ ಪರಂಪರಾ ಪ್ರಶಸ್ತಿಗಳನ್ನು ಘೋಷಿಸಿದೆ. ಪ್ರಸಿದ್ಧ ಸಂಗೀತಜ್ಞರು ಮತ್ತು ವಯೋಲಿನ್, ಮೃದಂಗ ವಿದ್ವಾಂಸರಾದ ಟಿ.ವಿ. ಗೋಪಾಲಕೃಷ್ಣನ್ (ಟಿ.ವಿ.ಜಿ. ಎಂದು ಪ್ರಸಿದ್ಧ) ಇವರಿಗೆ ‘ಪರಂಪರಾ ವಿಭೂಷಣ ಪ್ರಶಸ್ತಿ’ ನೀಡಲಾಗುತ್ತಿದ್ದು ಈ ಪ್ರಶಸ್ತಿಯು ರೂ.61,000/- ನಗದು ಬಹುಮಾನ ಮತ್ತು ತಾಮ್ರ ಫಲಕವನ್ನು ಒಳಗೊಂಡಿದೆ. ‘ಪರಂಪರಾ ಶ್ರೀ ಪ್ರಶಸ್ತಿ’ಯನ್ನು ಪ್ರಸಿದ್ಧ ಡ್ರಮ್ ಮಾಂತ್ರಿಕ ಶಿವಮಣಿ ಇವರಿಗೆ ನೀಡಲಾಗುತ್ತಿದ್ದು, ಪ್ರಶಸ್ತಿಯು ರೂ.51,000/- ನಗದು ಮತ್ತು ತಾಮ್ರ ಫಲಕವನ್ನು ಒಳಗೊಂಡಿದೆ. ಈ ವರ್ಷದ ‘ಗುರುರತ್ನ ಪ್ರಶಸ್ತಿ’ ಕೇರಳದ ಹೆಮ್ಮೆ, ವೀಣೆ ವಿದ್ವಾಂಸ ತ್ರಿಶೂರ್ ಅನಂತ ಪದ್ಮನಾಭನ್ ಇವರಿಗೆ ದೊರಕಿದೆ. ಪ್ರಶಸ್ತಿಯು ರೂ.30,000/- ನಗದು ಮತ್ತು ತಾಮ್ರಪತ್ರ ನೀಡಲಾಗುತ್ತದೆ. ‘ಯುವ ಪ್ರತಿಭಾ ಪ್ರಶಸ್ತಿ’ ಪ್ರಸಿದ್ಧ ಯುವ ಸಂಗೀತಜ್ಞೆ ಮತ್ತು ತೇಜಸ್ವಿ ಸೂರ್ಯ ಇವರ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್ ಇವರಿಗೆ ನೀಡಲಾಗುತ್ತದೆ. ಪ್ರಶಸ್ತಿಯಲ್ಲಿ ರೂ.25,000/- ನಗದು ಮತ್ತು ತಾಮ್ರಪತ್ರವಿದೆ. ಮ್ಯಾಂಡೋಲಿನ್ ವಾದನದಲ್ಲಿ ಅದ್ಭುತ ತೋರಿಸಿರುವ ಸಿಂಗಪುರದ ರಾಗವ ಕೃಷ್ಣ ಇವರಿಗೆ ‘ಬಾಲ…
ರಾಗಧನ ಸಂಸ್ಥೆಯ ಆಶಯದಲ್ಲಿ ‘ರಾಗರತ್ನಮಾಲಿಕೆ -42’ಯಲ್ಲಿ ಕುಮಾರಿ ಧನಶ್ರೀ ಶಬರಾಯ ಇವರ ವಯೊಲಿನ್ ಸೋಲೋ ಹಾಗೂ ಪೂಜಾ ಉಡುಪ ಇವರ ಹಾಡುಗಾರಿಕೆಯು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿನಾಂಕ 12 ಅಕ್ಟೋಬರ್ 2025ರಂದು ನಡೆಯಿತು. ಪಿಸಿರಿಲ್ಲದ ಶುದ್ಧವಾದ ಬಿಲ್ಲುಗಾರಿಕೆಯೊಂದಿಗೆ ಹೆಚ್ಚಿನ ಅನುಭವ ಪಡೆಯುತ್ತಿರುವ ಧನಶ್ರೀ ಒಳ್ಳೆಯ ಆತ್ಮವಿಶ್ವಾಸದಿಂದ ಸೋಲೋ ಕಚೇರಿ ನೀಡಿ ಭರವಸೆ ಮೂಡಿಸಿದರು. ಕಾನಡ ಅಟತಾಳ ವರ್ಣ, ಸಂಕ್ಷಿಪ್ತವಾದ ರಾಗ ಮತ್ತು ಸ್ವರ- ವಿಸ್ತಾರಗಳೊಂದಿಗೆ ನುಡಿಸಲಾದ ಶ್ರೀರಾಗ (ಶ್ರೀ ವರಲಕ್ಷ್ಮಿ) ಯದುಕುಲ ಕಾಂಬೋಜಿ (ಹೆಚ್ಚರಿಕಗಾ) ಕೃತಿಗಳು ಅತ್ಯುತ್ತಮವಾಗಿ ಮೂಡಿ ಬಂದವು. ಜಿಂಗ್ಲಾ (ಅನಾಥುಡನು) ಕೃತಿಯ ನಂತರ ಪ್ರಧಾನರಾಗವಾಗಿ ಪೂರ್ವಿ ಕಲ್ಯಾಣಿ (ಪರಮ ಪಾವನ) ಚೊಕ್ಕದಾದ ಆಲಾಪನೆ, ನೆರವಲ್ ಮತ್ತು ಸ್ವರವಿನಿಕೆಗಳು ಹಾಗೂ ಮುಕ್ತಾಯದೊಂದಿಗೆ ಸೊಗಸಾಗಿ ಮೂಡಿಬಂತು. ವಾಸಂತಿ ರಾಗದ ತಿಲ್ಲಾನದೊಂದಿಗೆ ಕಚೇರಿ ಯಶಸ್ವಿಯಾಗಿ ಕೊನೆಗೊಂಡಿತು. ಈ ವಾದನ ತಾಳ, ರಾಗ, ಕೃತಿ ವೈವಿಧ್ಯದೊಂದಿಗೆ ನೀಡಲಾಗಿತ್ತೆನ್ನುವುದು ಗಮನಾರ್ಹ! ಮೃದಂಗದಲ್ಲಿ ಹಿತವಾದ ಸಹವಾದನ ಹಾಗೂ ಪುಟ್ಟ ತನಿ ಆವರ್ತನ ನೀಡಿದ…
ಮಂಗಳೂರು : ಕದ್ರಿ ಯಕ್ಷ ಬಳಗವು ಈ ವರ್ಷದ ಕದ್ರಿ ಕಂಬಳ ಗುತ್ತು ‘ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ’ಯನ್ನು ಪಾವಂಜೆ ಮೇಳದ ಪ್ರಧಾನ ವೇಷಧಾರಿ, ಪ್ರಬಂದಕ ಡಿ. ಮಾಧವ ಬಂಗೇರ ಕೊಳತ್ತಮಜಲು ಇವರಿಗೆ ನೀಡಿ ಗೌರವಿಸಲಿದೆ. ಇವರು ಕಳೆದ ಮೂರು ದಶಕಗಳಿಂದ ಯಕ್ಷಗಾನ ರಂಗದಲ್ಲಿ ಶ್ರೀರಾಮ, ಶ್ರೀ ಕೃಷ್ಣ, ಶ್ರೀ ವಿಷ್ಣು, ಜಾಬಾಲಿ ಮೊದಲಾದ ಸಾತ್ವಿಕ ಪಾತ್ರಗಳನ್ನು ನಿರ್ವಹಿಸಿ, ‘ಮಾನಿಷಾದ’ ಪ್ರಸಂಗದ ಶ್ರೀ ರಾಮನ ಪಾತ್ರ ನಿರ್ವಹಣೆಯಲ್ಲಿ ಸಿದ್ಧಿ ಪ್ರಸಿದ್ಧಿ ಹೊಂದಿರುವ ‘ಯಕ್ಷ ರಾಮ’ ಬಿರುದು ಪಡೆದ ಸರಳ ಸಜ್ಜನಿಕೆಯ ಕಲಾವಿದರಾಗಿದ್ದಾರೆ. ಕಟೀಲು ಮೇಳದಲ್ಲಿ ಕಲಾ ಜೀವನ ಆರಂಭ ಮಾಡಿ ಒಂದೂವರೆ ದಶಕ ಸೇವೆ ಸಲ್ಲಿಸಿ, ಬಪ್ಪನಾಡು, ಸುಂಕದಕಟ್ಟೆ ಮೇಳಗಳಲ್ಲಿ ತಿರುಗಾಟ ಅನುಭವ ಪಡೆದವರು. ಪಟ್ಲ ಭಾಗವತರ ನೆಚ್ಚಿನ ಕಲಾವಿದನಾಗಿ ಬೆಳೆದು ಪಾವಂಜೆ ಮೇಳದಲ್ಲಿ ಕಲಾ ಯಾನ ಮುಂದುವರಿಸುತ್ತಿರುವ ಇವರು ಹಲವಾರು ಯಕ್ಷಗಾನ ಬಯಲಾಟ, ತಾಳಮದ್ದಳೆ, ಗಾನ -ನಾಟ್ಯ ವೈಭವಗಳನ್ನು ಸಂಯೋಜಿಸಿದ್ದಾರೆ. ನಿರೂಪಕರಾಗಿಯೂ ಜನಪ್ರಿಯತೆ ಗಳಿಸಿದ್ದಾರೆ. ಕದ್ರಿ ಕಂಬಳ ಗುತ್ತಿನ ಯಜಮಾನರಾಗಿ ಹಲವು…
ಬೆಂಗಳೂರು: ‘ಈ ಹೊತ್ತಿಗೆ’ ಟ್ರಸ್ಟ್ 2026ನೇ ಸಾಲಿನ ‘ಈ ಹೊತ್ತಿಗೆ ಪ್ರಶಸ್ತಿ’ಗೆ ಕನ್ನಡದ ಅಪ್ರಕಟಿತ ಕಥಾ ಸಂಕಲನ ಮತ್ತು ಕವನ ಸಂಕಲನಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಯು ತಲಾ ರೂಪಾಯಿ 10 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಕಥಾ ಸಂಕಲನವು 8ರಿಂದ 10 ಕಥೆಗಳನ್ನು ಹಾಗೂ ಕವನ ಸಂಕಲನವು 35ರಿಂದ 40 ಕವನಗಳನ್ನು ಒಳಗೊಂಡಿರಬೇಕು. ಪ್ರಶಸ್ತಿ ಘೋಷಣೆಯಾದ 30 ದಿನಗಳಲ್ಲಿ ಆಯ್ಕೆಯಾದ ಕೃತಿಯು ಮುದ್ರಣಗೊಳ್ಳಬೇಕು. ಆಗ ಮಾತ್ರ ಘೋಷಿತ ಬಹುಮಾನದ ಮೊತ್ತ ಹಾಗೂ ಪ್ರಶಸ್ತಿ ಫಲಕವನ್ನು ಈ ಹೊತ್ತಿಗೆಯ ‘ಹೊನಲು’ ಸಮಾರಂಭದಲ್ಲಿ ನೀಡಲಾಗುತ್ತದೆ. ಪ್ರಶಸ್ತಿ ಪಡೆದ ಕೃತಿಯನ್ನು ಮುದ್ರಿಸುವಾಗ ಮುಖಪುಟ ಹಾಗೂ ಒಳಪುಟದಲ್ಲಿ ಈ ಹೊತ್ತಿಗೆ (ಕಥೆ/ಕಾವ್ಯ) ಪ್ರಶಸ್ತಿ ವಿಜೇತ ಕೃತಿ ಎಂದು ಮುದ್ರಿಸಬೇಕು ಎಂದು ಟ್ರಸ್ಟಿನ ಅಧ್ಯಕ್ಷೆ ಜಯಲಕ್ಷ್ಮಿ ಪಾಟೀಲ ತಿಳಿಸಿದ್ದಾರೆ. ಅಪ್ರಕಟಿತ ಸಂಕಲನಗಳನ್ನು ದಿನಾಂಕ 20 ನವೆಂಬರ್ 2025ರ ಒಳಗೆ ‘ಈ ಹೊತ್ತಿಗೆ’, #65, ಮುಗುಳ್ನಗೆ, 3ನೇ ಅಡ್ಡ ರಸ್ತೆ, ಪಿ. ಎನ್. ಬಿ. ನಗರ, ಕೋಣನಕುಂಟೆ, ಬೆಂಗಳೂರು-560062…
ಕೋಟ. : ಕೋಟ-ಪಡುಕೆರೆಯ ಲಕ್ಷ್ಮಿ ಸೋಮಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘ ಮತ್ತು ಐಕ್ಯೂಎಸಿ ಆಶ್ರಯದಲ್ಲಿ ಪುಸ್ತಕ ಲೋಕಾರ್ಪಣಾ ಸಮಾರಂಭವು ದಿನಾಂಕ 16 ಅಕ್ಟೋಬರ್ 2025ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ, ಕುಂದಾಪುರದ ಜೆಸ್ಸಿ ಎಲಿಝಬೆತ್ ಜೋಸೆಫ್ ಇವರು ಮಲೆಯಾಳದಿಂದ ಕನ್ನಡಕ್ಕೆ ಅನುವಾದಿಸಿದ ‘ಹೆಂಡತಿ’ ಕಾದಂಬರಿಯನ್ನು ಲೋಕರ್ಪಣೆಗೊಳಿಸಿದ ಕೋಟ-ಪಡುಕೆರೆಯ ಲಕ್ಷ್ಮಿ ಸೋಮಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ನಾಯಕ್ ಮಾತನಾಡಿ “ಇಂದಿನ ಕಲುಷಿತ ವಾತಾವರಣದಲ್ಲಿ ಜೀವನವನ್ನು ಸುಂದರವಾಗಿಸಬಲ್ಲ ಪ್ರೀತಿಗೆ ಬದಲಾಗಿ ಮನುಷ್ಯ-ಮನುಷ್ಯರ ನಡುವೆ ದ್ವೇಷದ ಬೆಂಕಿ ಹಬ್ಬುತ್ತಿದೆ. ಜಾತಿ-ಧರ್ಮಗಳ ಹೆಸರಿನಲ್ಲಿ ಕಲಹಗಳು ಮತ್ತು ಹಿಂಸೆ-ರಕ್ತಪಾತಗಳು ಹೆಚ್ಚುತ್ತಿವೆ. ಈ ಸಮಸ್ಯೆಗೆ ಪರಿಹಾರ ನೀಡಲು ಸಾಹಿತ್ಯದಿಂದ ಮಾತ್ರ ಸಾಧ್ಯ. ಇಂದಿನ ಯುವಜನರು ಹೆಚ್ಚು ಹೆಚ್ಚು ಸಾಹಿತ್ಯಾಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಬಾವಿಯೊಳಗಿನ ಕಪ್ಪೆಗಳ ಹಾಗಿರದೆ ವಿಶಾಲವಾದ ಪ್ರಪಂಚದ ಬಗ್ಗೆ ತಿಳಿದುಕೊಳ್ಳಲು ಕನ್ನಡ ಸಾಹಿತ್ಯ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಿಂದ ಅನುವಾದವಾದ ಸಾಹಿತ್ಯವನ್ನೂ ಓದಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ” ಎಂದು ಹೇಳಿದರು.…
ಬೈಂದೂರು : ‘ಸುರಭಿ’ ಬೈಂದೂರು ಸಾಂಸ್ಕೃತಿಕ, ಸಾಹಿತ್ಯ, ಸೇವಾ ಪ್ರತಿಷ್ಠಾನದ ಬೆಳ್ಳಿಹಬ್ಬದ ಪ್ರಯುಕ್ತ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸ್ಪರ್ಧೆಯು ಡಿಸೆಂಬರ್ 3ನೇ ವಾರದಲ್ಲಿ ಬೈಂದೂರಿನ ಯಡ್ತರೆ ಜೆ. ಎನ್. ಆರ್. ಕಲಾಮಂದಿರದ ಬಯಲು ರಂಗಮಂಟಪದಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಕಾಸರಗೋಡು ಹಾಗೂ ರಾಜ್ಯದ ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡ ಭಾಗವಹಿಸಬಹುದು. ಕನಿಷ್ಠ 1.30 ಗಂಟೆ, ಗರಿಷ್ಠ 2.15 ಗಂಟೆ ಅವಧಿಯ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ, ಯಾವುದೇ ಪ್ರಕಾರದ ನಾಟಕ ಪ್ರದರ್ಶನ ಮಾಡಬಹುದು. 8 ತಂಡಗಳನ್ನು ಆಯ್ಕೆ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಆನಂದ ಮದ್ದೋಡಿ ತಿಳಿಸಿದ್ದಾರೆ. ವಿಜೇತ ತಂಡಗಳಿಗೆ ಪ್ರಥಮ ರೂಪಾಯಿ 40 ಸಾವಿರ, ದ್ವಿತೀಯ ರೂಪಾಯಿ 30 ಸಾವಿರ, ತೃತೀಯ ರೂಪಾಯಿ 20 ಸಾವಿರ ನಗದು ಬಹುಮಾನ ಹಾಗೂ ಫಲಕ ನೀಡಿ ಗೌರವಿಸಲಾಗುವುದು. ಜೊತೆಗೆ ಶ್ರೇಷ್ಠ ನಿರ್ದೇಶನ, ನಟ, ನಟಿ, ಸಂಗೀತ, ಬೆಳಕು, ರಂಗ ಪರಿಕರ, ಪ್ರಸಾಧನ, ಬಾಲನಟ, ಹಾಸ್ಯ ಪಾತ್ರಗಳಿಗೆ ನಗದು ಸಹಿತ ಬಹುಮಾನ…