ಪುತ್ತೂರು : ಮಹಾಬಲ–ಲಲಿತ ಕಲಾ ಸಭಾ (ರಿ.) ಪುತ್ತೂರು ಪ್ರಸ್ತುತ ಪಡಿಸುವ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ ಕಾರ್ಯಕ್ರಮವನ್ನು ದಿನಾಂಕ 08 ಏಪ್ರಿಲ್ 2026ರಂದು ಸಂಜೆ 5-30 ಗಂಟೆಗೆ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಶ್ರೀ ಸತ್ಯಸಾಯಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಚೆನ್ನೈಯ ಕಲೈಮಾಮಣಿ ಡಾ. ಎಸ್. ಸುಂದರ್ ಮತ್ತು ವಿದುಷಿ ಜೆ.ಬಿ. ಕೀರ್ತನಾ ಶ್ರೀರಾಮ್ ಇವರ ಹಾಡುಗಾರಿಕೆಗೆ ಕಾಸರಗೋಡಿನ ವಿದ್ವಾನ್ ಗಣರಾಜ ಕಾರ್ಲೆ ಪಿಟೀಲು, ಬೆಂಗಳೂರಿನ ವಿದ್ವಾನ್ ಕೆ.ಯು. ಜಯಚಂದ್ರ ರಾವ್ ಮೃದಂಗ ಮತ್ತು ಬೆಂಗಳೂರಿನ ವಿದ್ವಾನ್ ಶರತ್ ಕೌಶಿಕ್ ಇವರು ಘಟಂನಲ್ಲಿ ಸಹಕರಿಸಲಿದ್ದಾರೆ.

