ಉಡುಪಿ : ಮಣಿಪಾಲದ ಡಾ. ಟಿ.ಎಂ.ಎ. ಪೈ ಫೌಂಡೇಶನ್ ನೀಡುವ 2024ನೇ ಸಾಲಿನ ಡಾ. ಟಿ.ಎಂ.ಎ. ಪೈ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರಕ್ಕೆ ಗೋವಾ ಕಾಣ ಕೋಣ-ಪೈಂಗಿಣದ ಅನಂತ ಅಗ್ನಿ ಅವರ ‘ಆತ್ಮಸೋದ’ ಎಂಬ ಲೇಖನ ಸಂಗ್ರಹದ ಪುಸ್ತಕ ಆಯ್ಕೆಯಾಗಿದೆ. ಪುಸ್ತಕ ಪುರಸ್ಕಾರವು ರೂ.25,000/- ನಗದು ಮತ್ತು ಪ್ರಶಂಸಾಪತ್ರವನ್ನು ಒಳಗೊಂಡಿದೆ.
ಪ್ರಶಂಸಾ ಪುರಸ್ಕಾರಕ್ಕಾಗಿ ಗೋವಾ ಪೋಂಡಾ-ಬಾಂದೋಡೆಯ ಆರ್.. ರಾಮನಾಥ ಇವರ ಕೊಂಕಣಿ ಕವಿತಾ ಸಂಗ್ರಹದ ‘ಹುಯೆಲ’ ಪುಸ್ತಕ ಆಯ್ಕೆ ಮಾಡಲಾಗಿದೆ. ಪುರಸ್ಕಾರವು ರೂ.10,000/- ನಗದು ಮತ್ತು ಪ್ರಶಂಸಾಪತ್ರ ಒಳಗೊಂಡಿದೆ. ಈ ಪುಸ್ತಕ ದೇವನಾಗರಿ ಲಿಪಿಯಲ್ಲಿದ್ದು, 2023ರಲ್ಲಿ ಗೋವಾ ಆಗಶಿಯ ಬಿಂಬ ಪ್ರಕಾಶನದವರು ಪ್ರಕಟಿಸಿದ್ದಾರೆ ಎಂದು ಡಾ. ಟಿ.ಎಂ.ಎ. ಪೈ ಫೌಂಡೇಶನ್ ತಿಳಿಸಿದೆ.
