ಧಾರವಾಡ : ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯು 2026ನೇ ಸಾಲಿನ ‘ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ’ಗಾಗಿ ಅಪ್ರಕಟಿತ ಕಥಾಸಂಕಲನಗಳ ಹಸ್ತಪ್ರತಿಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಯು 20,000 ರೂಪಾಯಿಗಳ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ.
ಸ್ಪರ್ಧೆಗೆ ಪ್ರವೇಶ ಶುಲ್ಕವಿರುವುದಿಲ್ಲ. ಯೋಗ್ಯತೆ ಮತ್ತು ಕಥೆಗಳ ಗುಣಮಟ್ಟವೇ ಆಯ್ಕೆಯ ಮಾನದಂಡವಾಗಿದ್ದು, ಪುಸ್ತಕ ರೂಪದಲ್ಲಿ ಪ್ರಕಟವಾಗದ (ಪತ್ರಿಕೆ/ವಿಶೇಷಾಂಕಗಳಲ್ಲಿ ಪ್ರಕಟವಾದ ಕಥೆಗಳನ್ನೊಳಗೊಂಡ) ಸ್ವತಂತ್ರ ಕಥಾಸಂಕಲನಗಳನ್ನು ಮಾತ್ರ ಕಳುಹಿಸಬಹುದು. ಅನುವಾದ, ಅನುಸೃಷ್ಟಿ, ರೂಪಾಂತರ, ಪ್ರೇರಣೆ ಪಡೆದ ಕಥೆಗಳು, ವೈಜ್ಞಾನಿಕ ಕಥೆಗಳು ಮತ್ತು ಮಕ್ಕಳ ಕಥೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಸಂಕಲನದಲ್ಲಿ ಕನಿಷ್ಠ 10ರಿಂದ ಗರಿಷ್ಠ 18 ಕಥೆಗಳಿರಬೇಕು. ಕಾಗುಣಿತದ ತಪ್ಪುಗಳಿಲ್ಲದಂತೆ ಬೆರಳಚ್ಚು ಮಾಡಿ, ಬೈಂಡ್ ಮಾಡಿಸಿದ ಮೂರು ಪ್ರತಿಗಳನ್ನು ಲೇಖಕರ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ ಮತ್ತು ಒಂದು ಭಾವಚಿತ್ರದೊಂದಿಗೆ ಪ್ರತ್ಯೇಕವಾಗಿ ಲಗತ್ತಿಸಿ ದಿನಾಂಕ 05 ಅಕ್ಟೋಬರ್ 2026ರ ಮುಂಚಿತವಾಗಿ ಕಳುಹಿಸಬೇಕು. ಸಮಯ ಮೀರಿ ಬಂದ ಮತ್ತು ನಿಯಮಗಳನ್ನು ಪಾಲಿಸದ ಹಸ್ತಪ್ರತಿಗಳನ್ನು ಪರಿಗಣಿಸಲಾಗುವುದಿಲ್ಲ.
ಹಸ್ತಪ್ರತಿಯನ್ನು ಕಳುಹಿಸಬೇಕಾದ ವಿಳಾಸ : ವಿಕಾಸ ಹೊಸಮನಿ, 2ನೇ ಕ್ರಾಸ್, 2ನೇ ಮೇನ್, ದಾನೇಶ್ವರಿ ನಗರ, ಹಾವೇರಿ – 581110 (ಹಾವೇರಿ ಜಿಲ್ಲೆ) ಮೊಬೈಲ್: 9110687473.

