Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಭವನದ ‘ರಜತ ಸಂಭ್ರಮ’ ನಾಡು ನುಡಿ ಹಬ್ಬ, ವಿವಿಧ ಪ್ರಶಸ್ತಿ ಪ್ರದಾನ | ಜನವರಿ 18

    January 16, 2026

    ಮಕರ ಸಂಕ್ರಮಣದ ಅಂಗವಾಗಿ ‘ಶಾಂಭವಿ ವಿಲಾಸ’ ತಾಳಮದ್ದಳೆ

    January 16, 2026

    ನಾರಿ ಚಿನ್ನಾರಿಯಿಂದ ಪದ್ಮಗಿರಿ ಕಲಾಕುಟೀರದಲ್ಲಿ ‘ಶ್ರುತಿ ಸುಗಂಧ’ ವಾದ್ಯ ಸಂಗೀತ | ಜನವರಿ 17    

    January 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುರಭವನದಲ್ಲಿ ಶ್ರೀ ನಾಟ್ಯಾoಜಲಿ ಕಲಾ ಅಕಾಡೆಮಿಯ ‘ನಾಟ್ಯಾಂಜಲಿ ಕಲೋತ್ಸವ’
    Bharathanatya

    ಪುರಭವನದಲ್ಲಿ ಶ್ರೀ ನಾಟ್ಯಾoಜಲಿ ಕಲಾ ಅಕಾಡೆಮಿಯ ‘ನಾಟ್ಯಾಂಜಲಿ ಕಲೋತ್ಸವ’

    December 20, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಶ್ರೀ ನಾಟ್ಯಾoಜಲಿ ಕಲಾ ಅಕಾಡೆಮಿ ಸುರತ್ಕಲ್ ಸಂಸ್ಥೆಯ ‘ನಾಟ್ಯಾಂಜಲಿ ಕಲೋತ್ಸವ’ವು ಮಂಗಳೂರು ಪುರಭವನದಲ್ಲಿ ದಿನಾಂಕ 16-12-2023 ಮತ್ತು 17-12-2023ರಂದು ಎರಡು ದಿನಗಳ ಕಾಲ ಸಂಭ್ರಮಿಸಿತು. ಹಿರಿಯ ನೃತ್ಯ ಗುರು ಉಳ್ಳಾಲ ಶ್ರೀ ಮೋಹನ್ ಕುಮಾರ್ ಇವರು ಎರಡೂ ದಿನಗಳ ಕಲೋತ್ಸವವನ್ನು ದೇವತಾ ಜ್ಯೋತಿ ಪ್ರಜ್ವಲನ ಮಾಡಿ ಉದ್ಘಾಟಿಸಿದರು.

    ಮೊದಲ ದಿನ ಹಿರಿಯ ಚಿತ್ರಕಲಾವಿದ ದಿ. ಪಿ. ಪುರುಷೋತ್ತಮ ಕಾರಂತರ ಸ್ಮರಣಾರ್ಥ ‘ವರ್ಣ ಕಾವ್ಯ ನರ್ತನ’ ಎಂಬ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರರು, ಚಿತ್ರ ಕಲಾವಿದ ಬಿ. ಗಣೇಶ್ ಸೋಮಯಾಜಿ ಉಪಸ್ಥಿತರಿದ್ದರು. ಚಿತ್ರ ಕಲಾವಿದೆ ಶ್ರೀಮತಿ ಕೆ. ಮನೋರಂಜನಿ ರಾವ್ ಇವರಿಗೆ ‘ಪುರುಷೋತ್ತಮ ವರ್ಣಾಂಜಲಿ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.

    ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿ. ಸುಮಂಗಲ ರತ್ನಾಕರ್ ರಾವ್, ವಿ. ವಿದ್ಯಾಶ್ರೀ ರಾಧಾಕೃಷ್ಣ, ಡಾ. ಶ್ರೀವಿದ್ಯಾ ಮುರಳೀಧರ್, ವಿದ್ವಾನ್ ಸೂರ್ಯ ಎನ್. ರಾವ್ ಇವರುಗಳ ಏಕವ್ಯಕ್ತಿ ಭರತನಾಟ್ಯ ಹಾಗೂ ಶ್ರೀ ನಾಟ್ಯಾoಜಲಿ ಕಲಾ ಅಕಾಡೆಮಿ, ಕಲಾವಟಿಕ ಡಾನ್ಸ್ ಅಕಾಡೆಮಿ ಬೆಂಗಳೂರು, ನೃತ್ಯ ಸುಧಾ ಸಂಸ್ಥೆ ಹಾಗೂ ನಾಟ್ಯಾರಾಧನಾ ಕಲಾಕೇಂದ್ರ ತಂಡದವರು ಸಮೂಹ ಭರತನಾಟ್ಯ ಕಾರ್ಯಕ್ರಮವನ್ನು ನೀಡಿದರು.

    ಎರಡನೇ ದಿನದ ಕಾರ್ಯಕ್ರಮದಲ್ಲಿ ಅಮೇರಿಕಾದ ಕಾವೇರಿ ನಾಟ್ಯ ಯೋಗ ಸಂಸ್ಥೆಯವರಿಂದ ಡಾ. ಶ್ರೀಧರ್ ಅಕ್ಕಿಹೆಬ್ಬಾಳು ಇವರ ನಿರ್ದೇಶನದಲ್ಲಿ ಕಲಾವಿದೆಯರಾದ ಅನುಸೂಯ ಪೂಂಜಾ, ಅನುರಾಧ ರಾಮಚಂದ್ರ, ಶ್ರೀಲಕ್ಷ್ಮಿ ನಾಗರಾಜ್ ಹಾಗೂ ದಿವ್ಯ ವಾರಿಯರ್ ಇವರಿಂದ ‘ಶತಕ ತ್ರಯ’ ಎಂಬ ನೃತ್ಯವು ಸೊಗಸಾಗಿ ಮೂಡಿ ಬಂದಿತು. ನಾಗಭೂಷಣ ಕಶ್ಯಪ್ ನಿರೂಪಿಸಿ, ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ಕೆ. ಚಂದ್ರಶೇಖರ ನಾವಡ ಸ್ವಾಗತಿಸಿ, ಧನ್ಯವಾದವನ್ನು ನೀಡಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಫರಂಗಿಪೇಟೆಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ‘ವರ್ಣಾಂಜಲಿ’ | ಡಿಸೆಂಬರ್ 24
    Next Article ಬೆಳಗಾವಿಯಲ್ಲಿ ‘ಈ ಹೊತ್ತಿಗೆ’ಯಿಂದ ‘ನಾಟಕ ರಚನಾ ಕಮ್ಮಟ’ | ಕೊನೆಯ ದಿನಾಂಕ ಜನವರಿ 7
    roovari

    Add Comment Cancel Reply


    Related Posts

    ಕನ್ನಡ ಭವನದ ‘ರಜತ ಸಂಭ್ರಮ’ ನಾಡು ನುಡಿ ಹಬ್ಬ, ವಿವಿಧ ಪ್ರಶಸ್ತಿ ಪ್ರದಾನ | ಜನವರಿ 18

    January 16, 2026

    ನೃತ್ಯ ವಿಮರ್ಶೆ | ಕೀರ್ತನಾಳ ಮನಸೆಳೆದ ನೃತ್ಯಾವಳಿ

    January 12, 2026

    ಪುತ್ತೂರಿನ ವಿವೇಕಾನಂದ ಶಾಲೆಯಲ್ಲಿ ‘ನೃತ್ಯೋತ್ಕ್ರಮಣ’ ರಂಗಪ್ರವೇಶ ಸ್ಮೃತಿ ಸಂಧ್ಯಾ | ಜನವರಿ 11

    January 10, 2026

    ನೃತ್ಯ ವಿಮರ್ಶೆ | ‘ನಾಟ್ಯ ಕುಸುಮಾಂಜಲಿ’ ಪ್ರತಿಭೆಗಳ ಹೆಜ್ಜೆ-ಗೆಜ್ಜೆ ಮಧುರ ನಾದ ತರಂಗಗಳು

    January 9, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.