ಉಡುಪಿ : ರಂಜನಿ ಮೆಮೋರಿಯಲ್ ಟ್ರಸ್ಟ್ (ರಿ.) ಇದರ ವತಿಯಿಂದ ‘ರಂಜನಿ ಉತ್ಸವ 2026’ ಕಾರ್ಯಕ್ರಮವನ್ನು ದಿನಾಂಕ 05 ಸೆಪ್ಟೆಂಬರ್ 2026ರಿಂದ 13 ಸೆಪ್ಟೆಂಬರ್ 2026ರವರೆಗೆ ಉಡುಪಿಯ ಯಕ್ಷಗಾನ ಕಲಾರಂಗ ಇನ್ಫೋಸಿಸ್ ಹಾಲ್ (ಐ.ವೈ.ಸಿ.) ಇಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 05 ಸೆಪ್ಟೆಂಬರ್ 2026ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ವಿನಯ್ ವಾರಣಾಸಿ ಇವರಿಂದ ‘ಶ್ರೀ ಕೃಷ್ಣ ಲೀಲೆ’ ಕುರಿತು ವಿಶೇಷ ಉಪನ್ಯಾಸಕ್ಕೆ ಗಾಯನ ಬೆಂಬಲ ಅರ್ಚನಾ ಮತ್ತು ಸಮನ್ವಿ ನೀಡಲಿದ್ದು, ಶ್ರುತಿ ಸಿ.ವಿ. ವಯೋಲಿನ್ ಮತ್ತು ಅದಮ್ಯ ರಮಾನಂದ ಮೃದಂಗ ಸಹಕಾರ ನೀಡಲಿದ್ದಾರೆ.
ದಿನಾಂಕ 06 ಸೆಪ್ಟೆಂಬರ್ 2026ರಂದು ಬೆಳಗ್ಗೆ 10-00 ಗಂಟೆಗೆ ಚೆನ್ನೈಯ ಡಾ. ವೆಂಕಟೇಶ್ ಇವರಿಂದ ಜಯದೇವ ಅವರ ‘ಗೀತ ಗೋವಿಂದ’ ಒಂದು ಮಾತುಕತೆ ಹಾಗೂ ಸಂಜೆ 5-30 ಗಂಟೆಗೆ ಪುಣೆ ಮಿಲಿಂದ ತುಲಂಕರ್ ಇವರಿಂದ ಪ್ರಸ್ತುತಗೊಳ್ಳುವ ‘ಹಿಂದೂಸ್ತಾನಿ ಜಲತರಂಗ್’ಗೆ ಗಣೇಶ್ ತನ್ವಾಡೆ ಇವರು ತಬಲಾದಲ್ಲಿ ಸಹಕರಿಸಲಿದ್ದಾರೆ.
ದಿನಾಂಕ 07 ಸೆಪ್ಟೆಂಬರ್ 2026ರಂದು ಸಂಜೆ 6-00 ಗಂಟೆಗೆ ಚೆನ್ನೈಯ ಸವಿತಾ ಶ್ರೀರಾಮ್ ಮತ್ತು ತಂಡದವರಿಂದ ‘ನಾಮ ಸಂಕೀರ್ತನಂ’ ಪ್ರಸ್ತುತಗೊಳ್ಳಲಿದೆ.
ದಿನಾಂಕ 08 ಸೆಪ್ಟೆಂಬರ್ 2026ರಂದು ಸಂಜೆ 6-00 ಗಂಟೆಗೆ ಆದಿತ್ಯದೇವ್ ವಿ. ಪುನ್ನಯುರ್ಕುಲಂ ಗುರುವಾಯೂರ್ ಇವರ ಹಾಡುಗಾರಿಕೆಗೆ ಕುಶಾಲ್ ಬಿ.ಆರ್. ಇವರು ವಯೋಲಿನ್, ಪ್ರಜ್ವಲ್ ಭಾರದ್ವಾಜ್ ಇವರು ಮೃದಂಗ ಮತ್ತು ಮಾಧವ ಆಚಾರ್ಯ ಇವರು ತಬಲಾ ಸಾಥ್ ನೀಡಲಿದ್ದಾರೆ.
ದಿನಾಂಕ 09 ಸೆಪ್ಟೆಂಬರ್ 2026ರಂದು ಸಂಜೆ 6-00 ಗಂಟೆಗೆ ಚೆನ್ನೈಯ ಜೆ.ಬಿ. ಕೀರ್ತನಾ ಇವರ ಕರ್ಣಾಟಿಕ್ ಹಾಡುಗಾರಿಕೆಗೆ ಕೇಶವ ಮೋಹನ್ ಕುಮಾರ್ ಇವರು ವಯೋಲಿನ್, ಸುಮೇಶ್ ಎಸ್. ನಾರಾಯಣನ್ ಇವರು ಮೃದಂಗ ಮತ್ತು ನೆರ್ಕುಣಂ ಡಾ. ಎಸ್. ಶಂಕರ್ ಖಂಜೀರ ಸಾಥ್ ನೀಡಲಿದ್ದಾರೆ.
ದಿನಾಂಕ 10 ಸೆಪ್ಟೆಂಬರ್ 2026ರಂದು ಸಂಜೆ 6-00 ಗಂಟೆಗೆ ವಿಶಾಖಪಟ್ಟಣಂ ಪಂತುಲ ರಾಮ ಇವರ ಕರ್ಣಾಟಿಕ್ ಹಾಡುಗಾರಿಕೆಗೆ ಎಂ.ಎಸ್.ಎನ್. ಮೂರ್ತಿ ಇವರು ವಯೋಲಿನ್, ಬಿ.ಸಿ. ಮಂಜುನಾಥ್ ಇವರು ಮೃದಂಗ ಮತ್ತು ಸ್ಕಂದ ಮಂಜುನಾಥ್ ಇವರು ಘಟಂನಲ್ಲಿ ಸಾಥ್ ನೀಡಲಿದ್ದಾರೆ.
ದಿನಾಂಕ 11 ಸೆಪ್ಟೆಂಬರ್ 2026ರಂದು ಸಂಜೆ 6-00 ಗಂಟೆಗೆ ಧನ್ಯ ದಿನೇಶ್ ರುದ್ರಪಟ್ಟಣ ಇವರ ಕರ್ಣಾಟಿಕ್ ಹಾಡುಗಾರಿಕೆಗೆ ಶ್ರುತಿ ಸಿ.ವಿ. ಇವರು ವಯೋಲಿನ್, ಸುನಾದಕೃಷ್ಣ ಅಮೈ ಇವರು ಮೃದಂಗ ಮತ್ತು ಶರತ್ ಕೌಶಿಕ್ ಇವರು ಘಟಂನಲ್ಲಿ ಸಾಥ್ ನೀಡಲಿದ್ದಾರೆ.
ದಿನಾಂಕ 12 ಸೆಪ್ಟೆಂಬರ್ 2026ರಂದು ಸಂಜೆ 6-00 ಗಂಟೆಗೆ ಚೆನ್ನೈಯ ರಾಮಕೃಷ್ಣನ್ ಮೂರ್ತಿ ಇವರ ಕರ್ಣಾಟಿಕ್ ಹಾಡುಗಾರಿಕೆಗೆ ಎಲ್. ರಾಮಕೃಷ್ಣನ್ ಇವರು ವಯೋಲಿನ್ ಮತ್ತು ತ್ರಿವಂಡ್ರಂ ಬಾಲಾಜಿ ಇವರು ಮೃದಂಗ ಘಟಂನಲ್ಲಿ ಸಾಥ್ ನೀಡಲಿದ್ದಾರೆ.
ದಿನಾಂಕ 13 ಸೆಪ್ಟೆಂಬರ್ 2026ರಂದು ಬೆಳಗ್ಗೆ 09-30 ಗಂಟೆಗೆ ಬೆಂಗಳೂರಿನ ಅನಕು ರಾಮನಾಥ್ ಇವರು ‘ಸಂಗೀತದಲ್ಲಿ ಹಾಸ್ಯ’ ಕುರಿತು ಮಾತನಾಡಲಿದ್ದಾರೆ. 10-00 ಗಂಟೆಗೆ ಆರ್.ಎಂ.ಟಿ. ವಿದ್ಯಾರ್ಥಿ ವೇತನ ಹೊಂದಿರುವ ಹದಿನೇಳು ಮಂದಿಯಿಂದ ಪ್ರಸ್ತುತಿ, ಸಂಜೆ 5-30 ಗಂಟೆಗೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಇದರ ಶ್ರೀ ಶ್ರೀ ಛಾಯಾಪತಿ ಗುರೂಜಿ ಮತ್ತು ತಂಡದವರಿಂದ ಸತ್ಸಂಗ ಭಜನೆ ನಡೆಯಲಿದೆ.

