ಕುಂದಾಪುರ : ಕುಂದಾಪುರದ ‘ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ’ಯು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಾಸರಗೋಡು ಕರಾವಳಿಯ ನಾಲ್ಕು ಜಿಲ್ಲೆಯ ಮಹಿಳೆಯರಿಗಾಗಿ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ. ಕಥೆಯು 1,000 ಶಬ್ದಗಳ ಮಿತಿಯಲ್ಲಿರಬೇಕು. ವೇದಿಕೆಯ ಸದಸ್ಯರನ್ನು ಬಿಟ್ಟು ಹೇಳಿದ ಜಿಲ್ಲೆಗಳಲ್ಲಿ ಹುಟ್ಟಿ ಪ್ರಸ್ತುತ ಬೇರೆಡೆ ನೆಲೆಯಾದವರೂ, ಬೇರೆಡೆ ಹುಟ್ಟಿ ಈಗ ಈ ಜಿಲ್ಲೆಗಳಲ್ಲಿ ನೆಲೆಯಾದವರೂ ಭಾಗವಹಿಸಬಹುದು.
ವಸ್ತುವಿನ ಆಯ್ಕೆ ಕಥಾಗಾರರದ್ದು. ಆದರೆ ಅದರಲ್ಲಿ ಮಹಿಳಾಪರ ಚಿಂತನೆಯಿರಬೇಕು. ಕಥೆ ಸ್ವತಂತ್ರವಾಗಿರಬೇಕು. ಇದುವರೆಗೆ ಬೇರೆಲ್ಲಿಯೂ ಪ್ರಕಟವಾಗಿರಬಾರದು. ಪ್ರಥಮ ಬಹುಮಾನ ರೂ.4,000/-, ದ್ವಿತೀಯ ರೂ.3,000/- ಮತ್ತು ತೃತೀಯ ರೂ.2,000/- ನೀಡಲಾಗುವುದು. ಕಥೆಯನ್ನು ಟೈಪ್ ಮಾಡಿ ನಿಮ್ಮ ಆಧಾರ ಕಾರ್ಡ್ ಪ್ರತಿಯೊಂದಿಗೆ ದಿನಾಂಕ 07 ಜುಲೈ 2026ರೊಳಗೆ ಇ-ಮೇಲ್ suragangaksmv@ gmail.com ಗೆ ಮಾಡಬೇಕು. ಅನಂತರ ಬಂದ ಕಥೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
