ಮಂಗಳೂರು : ತುಳುಕೂಟ ಕುಡ್ಲ ಮತ್ತು ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇವರ ವತಿಯಿಂದ ನಡೆಯುತ್ತಿರುವ ಮರೋಳಿ ಬಿ. ದಾಮೋದರ ನಿಸರ್ಗ ಸಂಸ್ಮರಣೆ-ತುಳು ತಾಳಮದ್ದಳೆ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮ ದಿನಾಂಕ 09 ಡಿಸೆಂಬರ್ 2025ರಂದು ಮಂಗಳೂರಿನ ಕಂಕನಾಡಿ ಗರೋಡಿಯ ದೇವಿ ಬೈದೆತಿ ಬಾವಡಿಯಲ್ಲಿ ನಡೆಯಿತು.
ಈ ದಿನದ ಸಪ್ತಾಹವನ್ನು ಆತ್ಮಶಕ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಚಿತ್ತರಂಜನ್ ಬೋಳಾರ ಇವರು ದೀಪ ಪ್ರಜ್ವಲಿಸಿ “ದಾಮೋದರ ನಿಸರ್ಗರ ಹೆಸರನ್ನು ತುಳುವರೆಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ತುಳು ಭಾಷೆಯ ಉಳಿವಿಗಾಗಿ, ತುಳು ಸಾಹಿತ್ಯಗಳ ಪ್ರಕಟಣೆ, ನಾಟಕಗಳ ಪ್ರದರ್ಶನ ಇಲ್ಲೆಲ್ಲಾ ನಿಸರ್ಗರು ಮತ್ತೆ ಮತ್ತೆ ನೆನಪಾಗುತ್ತಾರೆ. ಯಕ್ಷಗಾನ ಅಭಿಮಾನಿಯಾಗಿರುವ ಅವರ ನೆನಪಲ್ಲಿ ತುಳು ತಾಳಮದ್ದಳೆ ಸಪ್ತಾಹ ನಡೆಸುತ್ತಿರುವ ತುಳುಕೂಟ ಹಾಗೂ ಸರಯೂ ಸಂಸ್ಥೆಯ ಕಾರ್ಯ ಸ್ತುತ್ತರ್ಹ” ಎಂದು ಹೇಳಿದರು.
ಸುಧಾಕರ ರಾವ್ ಪೇಜಾವರ, ಕಲಾವತಿ ಸುರತ್ಕಲ್, ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ, ದೀಪ್ತಿ ಭಟ್, ಲಲಿತಾ, ಜಯಂತಿ ಹೊಳ್ಳ, ನಾಟಕಕಾರ ನಾಗೇಶ ದೇವಾಡಿಗ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸುರತ್ಕಲ್ ಯಕ್ಷಕಲಾ ತಂಡದವರಿಂದ ‘ಬೀರೆ ಸುಧನ್ವೆ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಲೆ ನಡೆಯಿತು.
