Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಜ್ಞಾನೋದಯ ಸಮಾಜ ಮಂದಿರದಲ್ಲಿ ಮೋಹನಪ್ಪ ತಿಂಗಳಾಯರ ಸಂಸ್ಮರಣೆ

    July 31, 2025

    ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಯಕ್ಷ ವೈಭವ 2025’ | ಆಗಸ್ಟ್ 02

    July 31, 2025

    ಎಡನೀರು ಶಾಲೆಯಲ್ಲಿ ಕನ್ನಡ ಸಾಹಿತ್ಯ ಅಭಿಯಾನ -4 | ಆಗಸ್ಟ್ 02

    July 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರು ಚೇತನಾ ಬಾಲವಿಕಾಸ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ
    Yakshagana

    ಮಂಗಳೂರು ಚೇತನಾ ಬಾಲವಿಕಾಸ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    December 21, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ವಿಠೋಬಾ ದೇವಸ್ಥಾನ ರಸ್ತೆಯಲ್ಲಿರುವ ವಿಶೇಷ ವಿಕಲಚೇತನ ವಿದ್ಯಾರ್ಥಿಗಳಿಗಾಗಿರುವ ಸೇವಾ ಭಾರತಿ (ರಿ.)ಯ ವತಿಯಿಂದ ನಡೆಸಲ್ಪಡುವ ಚೇತನಾ ಬಾಲವಿಕಾಸ ಕೇಂದ್ರದ ವಿದ್ಯಾರ್ಥಿಗಳಿಂದ ಮಂಗಳೂರಿನ ಪುರಭವನದಲ್ಲಿ ದಿನಾಂಕ 15-12-2023ರಂದು ವಾರ್ಷಿಕೋತ್ಸವದ ಪ್ರಯುಕ್ತ ‘ಜಾಂಬವತಿ ಕಲ್ಯಾಣ’ವು ಪ್ರೇಕ್ಷಕರ ಮನ ಗೆದ್ದು ವಿಜೃಂಭಣೆಯಿಂದ ಜರಗಿತು.

    ವಿಕಲ ಚೇತನ ಮಕ್ಕಳಾದರೂ ಪರಾವಲಂಬನೆ ಇಲ್ಲದೇ ಸ್ವತಂತ್ರರಾಗಿ ನಟಿಸಿ ಪುರಭವನದಲ್ಲಿ ತುಂಬಿ ತುಳುಕಿದ ಕಲಾಪ್ರೇಮಿಗಳನ್ನು ನಿಬ್ಬೆರಗುಗೊಳಿಸಿದರು. ನೃತ್ಯ, ಹಾಡು, ಕುಣಿತ… ಹೀಗೆ ಬೇರೆ ಬೇರೆ ಕಾರ್ಯಕ್ರಮಗಳ ಮಧ್ಯೆಯೂ ಯಕ್ಷಗಾನ ರಂಜಿಸಿತು. ನೃತ್ಯ, ಅಭಿನಯ, ಕಲಾವಿದರ ಹೊಂದಾಣಿಕೆ ಎಲ್ಲೂ ರಾಜಿ ಮಾಡಿಕೊಳ್ಳದೇ ಸಶಕ್ತರಾಗಿ ; ಆತ್ಮಾಭಿಮಾನದಿಂದ ಪಾತ್ರಗಳೇ ಆಗಿ ಮೆರೆದು .. ಸಮಾಜದಲ್ಲಿ ತಮಗೆ ಯಾರದೇ ಅನುಕಂಪ ಬೇಡ; ಪ್ರೋತ್ಸಾಹ ನೀಡಿ ಸಾಕು… ಎನ್ನುವ ಹಾಗೆ ಯಕ್ಷಗಾನವನ್ನು ಕಳೆಗಟ್ಟಿಸಿದರು. ಜಾಂಬವಂತನಾಗಿ – ದೇವೇಶ, ಶ್ರೀಕೃಷ್ಣನಾಗಿ – ಶೀತಲ್, ಬಲರಾಮನಾಗಿ – ಕಿರಣ್, ನಾರದನಾಗಿ – ದಿವ್ಯಜ್ಯೋತಿ ಮತ್ತು ಜಾಂಬವತಿಯಾಗಿ – ಅನುಷಾ ಪಾತ್ರ ನಿರ್ವಹಣೆ ಮಾಡಿದರು.

    ಈ ಸಂಸ್ಥೆಯ ವಿಶ್ವಸ್ಥರಾದ ಶ್ರೀ ವಿನೋದ್ ಶೆಣೈ ಅವರು ಈ ವಿದ್ಯಾರ್ಥಿಗಳ ಬೆನ್ನು ತಟ್ಟಿ ಧೈರ್ಯ ತುಂಬಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಪ್ರೀತಾರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಿರ್ದೇಶಕರಾಗಿ ವರ್ಕಾಡಿ ರವಿ ಅಲೆವೂರಾಯರು ಇದ್ದರು. ಸಹಕಾರಿಗಳಾಗಿ ವಿಜಯಲಕ್ಷ್ಮೀ ಯಲ್.ಎನ್., ಶ್ರೀಮತಿ ವಾಣಿ, ಶ್ರೀಮತಿ ಚಂಪಾ, ಶ್ರೀ ನರಸಿಂಹರಾಜು ವಿದ್ಯಾರ್ಥಿಗಳನ್ನು ಮುನ್ನಡೆಸಿದ್ದರು. ಯೂಶಾನ್ ಎ೦. ಪೂಜಾರಿ ವೇಷಭೂಷಣದಲ್ಲಿ ಸಹರಿಸಿದ್ದರು. ಹಿಮ್ಮೇಳ ಕಲಾವಿದರಾಗಿ ಲಕ್ಷೀನಾರಾಯಣ ಹೊಳ್ಳ, ಸ್ಕ೦ದ ಕೊನ್ನಾರ್, ವರ್ಕಾಡಿ ಮಧುಸೂದನ ಅಲೆವೂರಾಯ ಮಕ್ಕಳಿಗೆ ಸಾಥ್ ನೀಡಿದರು.

    ವಿಕಲ ಚೇತನರಾದರೂ ಉಳಿದವರಿಗೆ ಬಿಟ್ಟಿಲ್ಲ… ಇವರಿಗೆ ಸಮಾಜದ ಬೆಂಬಲ ಬೇಕು… ಎಂದು ಜನರಾಡುತ್ತಾ ಸಾಗುವುದು ಕಂಡುಬರುತ್ತಿತ್ತು. ಹೌದು! ಬನ್ನಿ ಬಾಂಧವರೇ ‘ಅವರಿಗಾಗಿ ಮಿಡಿಯೋಣ. ಅವರೇ ಸಿದ್ಧಪಡಿಸಿದ ಗೃಹ ಬಳಕೆಗೆ, ನಿತ್ಯೋಪಯೋಗಕ್ಕಾಗಿ ಬಳಸುವ ವಸ್ತುಗಳನ್ನು ಖರೀದಿಸಿ ಅವರಿಗೆ ಆರ್ಥಿಕ ಬೆಂಬಲ ನೀಡೋಣ. ದೇವರಂತಹಾ ಈ ಮಕ್ಕಳಿಗೆ ದೇವರ ಅನುಗ್ರಹವಿರಲಿ ಎಂದು ಕೋರೋಣ. ದಯವಿಟ್ಟು ಇದನ್ನು ವಿಶೇಷವಾಗಿ ವಿಶೇಷ ಚೇತನ ಮಕ್ಕಳಿಗಾಗಿ ಪ್ರಕಟಿಸಿ… ನಮ್ಮೀ ಅಳಿಲ ಸೇವೆಯನ್ನು ಅರ್ಪಿಸೋಣ.

    Share. Facebook Twitter Pinterest LinkedIn Tumblr WhatsApp Email
    Previous Articleಅಂಕಿತ ಪುಸ್ತಕ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಕೃತಿಗಳ ಲೋಕಾರ್ಪಣಾ ಸಮಾರಂಭ
    Next Article ‘ಕೊಗ್ಗ ದೇವಣ್ಣ ಕಾಮತ್‌’ ಪ್ರಶಸ್ತಿಗೆ ಏಳ್ ಜಿತ್ ಸದಾನಂದ ಪ್ರಭು ಆಯ್ಕೆ | ಪ್ರಶಸ್ತಿ ಪ್ರದಾನ ಜನವರಿ 28
    roovari

    Add Comment Cancel Reply


    Related Posts

    ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಯಕ್ಷ ವೈಭವ 2025’ | ಆಗಸ್ಟ್ 02

    July 31, 2025

    ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ‘ತಿಂತಿಣಿ ಮೌನೇಶ್ವರ’ | ಆಗಸ್ಟ್ 03

    July 30, 2025

    ಬಂಟ್ವಾಳದಲ್ಲಿ ಕುಬಣೂರು ಶ್ರೀಧರ ರಾವ್ ಸ್ಮರಣೆ ಹಾಗೂ ತಾಳಮದ್ದಳೆ

    July 29, 2025

    ಬೆಳ್ತಂಗಡಿಯಲ್ಲಿ ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ ‘ಯಕ್ಷಾವತರಣ – 6’ | ಆಗಸ್ಟ್ 04ರಿಂದ 10

    July 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.