ಬೆಂಗಳೂರು : ವಿಜಯನಗರ ಬಿಂಬದ ರಂಗ ಶಿಕ್ಷಣ ಕೇಂದ್ರ ಹಿರಿಯರ ವಿಭಾಗದ ವತಿಯಿಂದ 12ನೇ ವರ್ಷದ ಡಿಪ್ಲೋಮೋ ವಿದ್ಯಾರ್ಥಿಗಳಿಂದ ‘ಕಕೇಷಿಯನ್ ಚಾಕ್ ಸರ್ಕಲ್’ ನಾಟಕ ಪ್ರದರ್ಶನವನ್ನು ದಿನಾಂಕ 27 ಜೂನ್ 2025ರಂದು ಸಂಜೆ 4-00 ಹಾಗೂ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ. ಬರ್ಟೊಲ್ಟ್ ಬ್ರೆಕ್ಟ್ ಇವರ ನಾಟಕವನ್ನು ಜಿ.ಎನ್. ರಂಗನಾಥ್ ರಾವ್ ಇವರು ಕನ್ನಡಕ್ಕೆ ಅನುವಾದಿಸಿರುತ್ತಾರೆ.
ವಿಶೇಷ ಅಂದರೆ 30 ಪಾತ್ರಗಳಿರುವ ಈ ನಾಟಕವನ್ನು ಎಂಟು ಜನ ವಿದ್ಯಾರ್ಥಿಗಳು ರಂಗದ ಮೇಲೆ ತರುತ್ತಿದ್ದು, ವಿದ್ಯಾರ್ಥಿಗಳ ಈ ಪ್ರಸ್ತುತಿಗೆ ತಾವೆಲ್ಲರೂ ಬಂದು ಪ್ರೋತ್ಸಾಹಿಸಬೇಕೆಂದು ಕೋರುತ್ತೇನೆ. ರಂಗದ ಮೇಲೆ ಕಲ್ಪನಾ, ಸರಿತಾ, ಯಶಸ್, ಪ್ರಜ್ವಲ್, ಗೌತಮ್, ದಿಯಾ, ಸಂಜಿತ್, ಸ್ಕಂದ ಹಾಗೂ ಮೇಳದಲ್ಲಿ ಸಂಸ್ಕೃತಿ, ಸನತ್, ಭೂಮಿಸಾತಿ, ಅಚಿಂತ್ಯ, ಸಂವಿತ್, ಅಸ್ಮಿತ, ಶ್ರೀಕಂಠ ಭಾಗವಹಿಸಲಿದ್ದಾರೆ. ಸಂಗೀತ ನಿರ್ದೇಶನ : ರಾಘವೇಂದ್ರ ಬಿಜಾಡಿ, ವಸ್ತ್ರವಿನ್ಯಾಸ : ಶೋಭಾ ವೆಂಕಟೇಶ್, ಸಹಾಯ : ಸಾನ್ವಿ, ಬೆಳಕು : ಸೂರ್ಯ ಸಾತಿ ನೀಡಿದ್ದು, ಈ ನಾಟಕಕ್ಕೆ ಹಾಡುಗಳನ್ನು ಬರೆದು ಕೊಟ್ಟವರು : ಡಾ. ಎಸ್.ವಿ. ಕಶ್ಯಪ್, ಪರಿಕರಗಳು : ವಿಶ್ವನಾಥ್ ಮಂಡಿ, ಪ್ರಸಾದನ : ಮಾಲತೇಶ್ ಬಡಿಗೇರ್, ನಿರ್ವಹಣೆ : ಎಸ್.ಆರ್. ವೆಂಕಟೇಶ್, ಡಾ. ಬೃಂದಾ, ವಿನ್ಯಾಸ, ಸೀನೊಗ್ರಾಫರ್, ನೃತ್ಯ ಸಂಯೋಜನೆ, ನಿರ್ದೇಶನ : ಡಾ. ಸುಷ್ಮಾ ಎಸ್.ವಿ. ಇವರು ನಿರ್ವಹಿಸಿರುತ್ತಾರೆ.