Subscribe to Updates

    Get the latest creative news from FooBar about art, design and business.

    What's Hot

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೇಸಿಗೆ ಕವಿಗೋಷ್ಠಿ

    April 30, 2026

    ಕನ್ನಡ ಸಾಹಿತ್ಯ ಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ‘ರಂಗಾಭಿನಯ ಕಾರ್ಯಾಗಾರ’

    April 30, 2026

    ಯಕ್ಷಗಾನ ಕಲಾವಿದ ಮಳಲಿ ಶೀನಯ್ಯ ನಿಧನ

    April 29, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೇಸಿಗೆ ಕವಿಗೋಷ್ಠಿ
    Literature

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೇಸಿಗೆ ಕವಿಗೋಷ್ಠಿ

    April 30, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಳಗಾವಿ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಹಮ್ಮಿಕೊಂಡಿದ್ದ ಬೇಸಿಗೆ ಕವಿಗೋಷ್ಠಿಯು ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ದಿನಾಂಕ 27 ಏಪ್ರಿಲ್ 2026ರಂದು ಜರಗಿತು.

    ಈ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಳಗಾವಿ ಜಿಲ್ಲಾಧ್ಯಕ್ಷೆ ಸುಶೀಲಾ ಲ. ಗುರವ ಇವರು ಮಾತನಾಡಿ “ಕವಿಗಳು ನಮ್ಮ ಪೂರ್ವಜರ ಕವಿತೆಗಳನ್ನು ಅಧ್ಯಯನ ಮತ್ತು ಅಧ್ಯಾಪನ ಮಾಡಿದಾಗ ಕಾವ್ಯ ಪ್ರಭೇದಗಳು, ಗುಣಲಕ್ಷಣಗಳು, ಓಘ, ಲಯಬದ್ಧತೆ, ಪದಪ್ರಯೋಗ, ಭಾವಾಭಿವ್ಯಕ್ತಿ ಗೋಚರಿಸುತ್ತದೆ. ಕವಿಗಳು ಪರಂಪರೆಯ ಕಿವಿಯಾಗಬೇಕು, ಕಣ್ಣಾಗಬೇಕು. ಅನುಭವದ ಅಭಿವ್ಯಕ್ತಿ ಕಾವ್ಯವಾಗುತ್ತದೆ. ಕವಿಗಳು ಸಮಾಜದ ಕಟ್ಟಕಡೆಯ ಬದುಕಿನ ತಲ್ಲಣಗಳಿಗೆ ಧ್ವನಿಯಾಗಬೇಕು. ಕವಿಯಾದವನು ಜಾತ್ಯಾತೀತ, ಧರ್ಮಾತೀತ, ಲಿಂಗಾತೀತ ಸಮತೆಯ ಹೊಳವುಗಳನ್ನು ತನ್ನ ಕಾವ್ಯದಲ್ಲಿ ದಾಖಲಿಸಿದಾಗ ಮಾತ್ರ ಅವನು ಅವನ ಕಾವ್ಯ ಸಾರ್ವತ್ರಿಕವಾಗಲು ಸಾಧ್ಯ. ನಮ್ಮ ವೇದಿಕೆಯ ಕೇಂದ್ರ ಸಮಿತಿಯ ಸಲಹೆಯಂತೆ ನಿರಂತರವಾಗಿ ವೈವಿಧ್ಯಮಯ ಸಾಹಿತ್ಯಿಕ ಚಟವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಯುವ ಪ್ರತಿಭೆಗಳನ್ನು ಗುರುತಿಸುವ, ಹಿರಿಯ ಅನುಭಾವಿಕರ ನುಡಿಗಳನ್ನು ಕೇಳಿಸುತ್ತಾ ಸಾಹಿತ್ಯದ ರಥವನ್ನು ಎಳೆಯುವ ಜವಬ್ದಾರಿ ನಮ್ಮೆಲ್ಲರದಾಗಿದೆ” ಎಂದು ಅಭಿಪ್ರಾಯಪಟ್ಟರು.

    ಕವಯಿತ್ರಿ ಇಂದಿರಾ ಮೋಟೆಬೆನ್ನೂರು ಆಶಯ ನುಡಿಗಳನ್ನಾಡಿ “ನಾವು ಹೆಚ್ಚೆಚ್ಚು ಓದಿದಷ್ಟು, ಕವಿತೆಗಳನ್ನು ಕೇಳಿದಷ್ಟು ನಮ್ಮಲ್ಲಿ ಕವನ ಬರೆಯುವ ಆಸಕ್ತಿ ಹೆಚ್ಚಾಗುತ್ತದೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಈ ದಿಸೆಯಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದೆ” ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಿಂತಾಮಣರಾವ್ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಭಾರತಿ ಭೀಮರಾವ್ ದಾಸೋಗ ಮಾತನಾಡಿ “ಕವಿಗಳಿಗೆ ದೊಡ್ಡವರ ನರಳಿರಬೇಕು, ಹಿರಿಯರ ಮಾತುಗಳು ನಮಗೆ ಜೀವನದಲ್ಲಿ ಸದಾ ದಾರಿ ದೀಪಗಳಾಗುತ್ತವೆ” ಎಂದರು.

    ಕವಿಗೋಷ್ಠಿಯಲ್ಲಿ ಅಕ್ಕಮಹಾದೇವಿ ತೆಗ್ಗಿ, ಸುಧಾ ಪಾಟೀಲ, ಹೀರಾ ಚೌಗಲೆ, ಸುನೀತಾ ಸೊಲ್ಲಾಪುರೆ, ಶಾಲಿನಿ ಚಿನಿವಾರ, ಗಂಗಾ ಚಕ್ರಸಾಲಿ, ಮಹಾನಂದಾ, ಸುನೀತಾ ನಂದಣ್ಣವರ್, ಪ್ರಭಾ ಪಾಟೀಲ, ದೀಪಾ ಉಳ್ಳೇಗಡ್ಡಿ ಸೇರಿದಂತೆ ಹಲವು ಕವಿಗಳು ಕವಿತೆ ವಾಚನ ಮಾಡಿದರು. ಕವಯಿತ್ರಿ ಸುಧಾ ಸಾಬಣ್ಣವರ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳು ಹಾಜರಿದ್ದರು. ಸಾವಿತ್ರಿ ಉಪ್ಪಿನ ಸ್ವಾಗತಿಸಿ, ಮಹಾದೇವಿ ಪಾಟೀಲ ಪ್ರಾರ್ಥಿಸಿ, ಗಂಗಮ್ಮ ಪಾಟೀಲ ನಿರೂಪಿಸಿದರು, ಗೀತಾ ಜಮಖಂಡಿ ಹಾಗೂ ಗೌರಿ ರಾಮಗುರವಾಡಿ ಕಾರ್ಯಕ್ರಮ ನಿರ್ವಹಿಸಿದರು. ದಾಮೋದರ್ ಬಡಿಗೇರ್ ವಂದಿಸಿದರು.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಕನ್ನಡ ಸಾಹಿತ್ಯ ಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ‘ರಂಗಾಭಿನಯ ಕಾರ್ಯಾಗಾರ’
    roovari

    Add Comment Cancel Reply


    Related Posts

    ಕನ್ನಡ ಸಾಹಿತ್ಯ ಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ‘ರಂಗಾಭಿನಯ ಕಾರ್ಯಾಗಾರ’

    April 30, 2026

    ಯಕ್ಷಗಾನ ಕಲಾವಿದ ಮಳಲಿ ಶೀನಯ್ಯ ನಿಧನ

    April 29, 2026

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಕಾಜಾಣ ನಾಟಕೋತ್ಸವ’ 2026 | ಏಪ್ರಿಲ್ 30

    April 29, 2026

    ಗೀತಾ ಎನ್. ಇವರ ‘ಷಟ್ಪದಿ ಮಂಜರಿ’ ಮೌಲ್ಯಾಧಾರಿತ ಕೃತಿ ಅನಾವರಣ

    April 29, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.