ಮಂತ್ರಾಲಯ : ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ರಾಘವೇಂದ್ರ ಗುರು ವೈಭವೋತ್ಸವದ ಪ್ರಯುಕ್ತ ‘ಯಕ್ಷಗಾನ ತಾಳಮದ್ದಳೆ’ಯನ್ನು ದಿನಾಂಕ 24 ಫೆಬ್ರವರಿ 2026ರಂದು ಸಂಜೆ 6-00 ಗಂಟೆಗೆ ಯೋಗೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳೂರು ಕದ್ರಿ ಇಲ್ಲಿಯ ಯಕ್ಷ ಮಂಜುಳಾ ಮಹಿಳಾ ಬಳಗದವರಿಂದ ಪ್ರಸ್ತುತಗೊಳ್ಳುವ ‘ಗದಾ ಯುದ್ಧ’ ಪ್ರಸಂಗದ ಯಕ್ಷಗಾನ ತಾಳಮದ್ದಳೆಯ ನಿರ್ದೇಶನ ರವಿ ಅಲೆವೂರಾಯ ವರ್ಕಾಡಿ, ಭಾಗವತರು ಮಹೇಶ್ ಕನ್ಯಾಡಿ, ಚೆಂಡೆಯಲ್ಲಿ ಶಿತಿಕಂಠ ಭಟ್ ಮತ್ತು ಮದ್ದಲೆಯಲ್ಲಿ ನವೀನ್ ಚಂದ್ರ ಸಹಕರಿಸಲಿದ್ದಾರೆ. ಅರ್ಥಧಾರಿಗಳಾಗಿ ಪೂರ್ಣಿಮಾ ಪೇಜಾವರ, ಪೂರ್ಣಿಮಾ ಪ್ರಶಾಂತ್ ಶಾಸ್ತ್ರಿ, ಅರುಣಾ ಸೋಮಶೇಖರ್, ರೂಪಾ ರಾಧಾಕೃಷ್ಣ, ಶೈಲಜಾ ಶ್ರೀಕಾಂತ್ ರಾವ್, ಅನುಪಮಾ ಪ್ರಭಾಕರ ಅಡಿಗ ಮತ್ತು ವಿಜಯಲಕ್ಷ್ಮಿ ನಿಡ್ವಣ್ಣಾಯ ಭಾಗವಹಿಸಲಿದ್ದಾರೆ.

