ಉಡುಪಿ : ಕಥಾಬಿಂದು ಪ್ರಕಾಶನ ಮಂಗಳೂರು ಇವರ ಆಶ್ರಯದಲ್ಲಿ ಉಡುಪಿಯ ರಾಜಾಂಗಣದಲ್ಲಿ ದಿನಾಂಕ 12 ಏಪ್ರಿಲ್ 2026ರ ಭಾನುವಾರದಂದು ಕಥಾ ಬಿಂದು ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಅಂದು ಬೆಳಗ್ಗೆ 10-00 ಗಂಟೆಗೆ ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕವನ ವಾಚನದ ವಿಷಯ : ‘ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಕವಿಗಳ ಪಾತ್ರ’. ಈ ವಿಷಯದ ಬಗ್ಗೆ ಕವಿ-ಕವಯಿತ್ರಿಯರು ತಮ್ಮ ಕವನವನ್ನು ವಾಚಿಸಬೇಕು.
ನೋಂದಣಿ ವಿವರಗಳು : ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಸರು ನೋಂದಾಯಿಸಿದವರು ತಪ್ಪದೆ ಕಾರ್ಯಕ್ರಮಕ್ಕೆ ಹಾಜರಾಗಬೇಕು. ಭಾಗವಹಿಸಲು ಸಾಧ್ಯವಾಗದಿದ್ದರೆ ದಯವಿಟ್ಟು ಹೆಸರನ್ನು ಕೊಡಬೇಡಿ.
25 ಜನರಿಗೆ ಮಾತ್ರ ಅವಕಾಶ
ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ
ಸಮಯಕ್ಕೆ ಸರಿಯಾಗಿ ಹಾಜರಿರಬೇಕು
ಕವನ ವಾಚನಕ್ಕೆ ಉಚಿತ ಪ್ರವೇಶ
ಕವನವು 16 ಸಾಲುಗಳ ಮಿತಿಯಲ್ಲಿ ಇರಬೇಕು.
ಕಾರ್ಯಕ್ರಮದಲ್ಲಿ ವಾಚಿಸಿದ ಕವಿ-ಕವಯಿತ್ರಿಯವರ ಕವನವನ್ನು ಮುಂದೆ ಕವನ ಸಂಕಲನವಾಗಿ ಹೊರ ತರುವ ಯೋಜನೆ ಇದೆ. ಭಾಗವಹಿಸುವ ಪ್ರತಿಯೊಬ್ಬರಿಗೂ ಸಂಸ್ಥೆಯ ವತಿಯಿಂದ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.
ನೋಂದಣಿಗಾಗಿ : ವಾಟ್ಸಪ್ಪ್ ಮಾತ್ರ. ಕರೆಯನ್ನು ಸ್ವೀಕರಿಸಲಾಗುವುದಿಲ್ಲ. ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು
ಈ ಕೆಳಗಿನ ಮೊಬೈಲ್ ಸಂಖ್ಯೆಗೆ ವಾಟ್ಸಪ್ಪ್ ಮೂಲಕ ಮೆಸೇಜ್ ಮಾಡಿ ನೋಂದಾಯಿಸಿಕೊಳ್ಳಿ.
74111 37333
