ಆನೆಗುಡ್ಡೆ : ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಸಹಕಾರದೊಂದಿಗೆ ಯಶಸ್ವಿ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ (ರಿ.) ಸಿದ್ಧಾಪುರ ಜಂಟಿ ಆಶ್ರಯದಲ್ಲಿ ಸಂಕಷ್ಟ ಹರ ಚತುರ್ಥಿಯಂದು ‘ಅರ್ಥಾಂಕುರ-23’ ಸರಣಿ ತಾಳಮದ್ದಳೆ ಕಾರ್ಯಕ್ರಮವನ್ನು ದಿನಾಂಕ 03 ಜುಲೈ 2026ರಂದು ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಇವರು ಮಾತನಾಡಿ “ಯಕ್ಷಗಾನ ತಾಳಮದ್ದಳೆಗೆ ಹೊಸ ಕಲಾವಿದರು ರಂಗದಲ್ಲಿ ಬೆಳೆಯಬೇಕೆನ್ನುವ ನಿಟ್ಟಿನಲ್ಲಿ ‘ಅರ್ಥಾಂಕುರ’ ಕಾರ್ಯಕ್ರಮ ನಿಜಕ್ಕೂ ಶ್ಲಾಘ್ಯಾಯೋಗ್ಯವಾದದ್ದು. ಪ್ರತೀ ತಿಂಗಳು ಕೆಲವು ದೇವಸ್ಥಾನಗಳ ಸಹಕಾರವನ್ನು ಕೋರಿ ನೀಡುವ ಕಾರ್ಯಕ್ರಮ ಸಾಂಸ್ಕೃತಿಕವಾಗಿ ಪುರಾಣ ಕಥೆಯನ್ನು ಆಸ್ವಾದಿಸುವ ಕಾರ್ಯಕ್ರಮವನ್ನು ದೇಗುಲದಲ್ಲಿ ನೆರವೇರಿಸಿದಂತಾಗುತ್ತದೆ. ಇಂತಹ ಕಾರ್ಯಕ್ರಮ ಇನ್ನಷ್ಟು ಹೆಚ್ಚು ಹೆಚ್ಚು ಮಾಡುವ ಶಕ್ತಿ ಸಂಸ್ಥೆಗೆ ಒದಗಿ ಬರಲಿ” ಎಂದು ಹಿರಿಯ ಕಲಾವಿದರನ್ನು ಗೌರವಿಸಿ ಶುಭ ಹಾರೈಸಿದರು.

ಹಿರಿಯ ಅರ್ಥದಾರಿ ರಾಧಾಕೃಷ್ಣ ಕಲ್ಚಾರ್ ವಿಟ್ಲ, ಡಾ. ವೈಕುಂಠ ಹೇರ್ಳೆ, ಕೂಡ್ಲಿ ದೇವದಾಸ್ ರಾವ್, ರಾಜಾರಾಮ ಉಪಾಧ್ಯಾಯ, ಚಂದ್ರಯ್ಯ ಆಚಾರ್, ನಂದೀಶ್ ಶೆಟ್ಟಿ, ಶ್ರೀನಾಥ ಉರಾಳ, ವಾಗ್ವಿಲಾಸ್ ಭಟ್, ಅನಂತಕೃಷ್ಣ ನಾವಡ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಬಳಿಕ ತಾಳಮದ್ದಳೆ ‘ಅಂಗದ ಸಂಧಾನ’ ರಂಗ ಪ್ರಸ್ತುತಿಗೊಂಡಿತು.

