ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಛೇರಿಯಲ್ಲಿ ತಾರೀಕು 06 ಜುಲೈ 2026ರಂದು ಅಕಾಡೆಮಿಯು ಹಮ್ಮಿಕೊಂಡ ಕೊಂಕಣಿ ಕಾದಂಬರಿ ಸ್ಪರ್ಧೆಯ ಪ್ರಶಸ್ತಿ ವಿಜೇತ ರೋಶನ್ ಮೆಲ್ಕಿ ಸಿಕ್ವೇರಾ (ರೋಶು ಬಜ್ಪೆ)ಯವರು ಬರೆದ ‘ಹೊ ಮ್ಹಜೊ ಅಪ್ರಾಧ್’ : ಪ್ರಥಮ ಬಹುಮಾನ, ವಿನ್ಸೆಂಟ್ ಪಿಂಟೊ (ವಿನ್ಸಿ ಪಿಂಟೊ, ಆಂಜೆಲೊರ್) ಇವರು ಬರೆದ ‘ಕುದ್ರ್ಯಾಚೊ ರಾಕ್ವಲಿ’ :ದ್ವಿತೀಯ ಬಹುಮಾನ ಹಾಗೂ ಸ್ಟೀಫನ್ ಮಸ್ಕರೇನ್ಹಸ್ (ಹೇಮಾಚಾರ್ಯ) ಇವರು ಬರೆದ ‘ಆನಿ ಸಾಂಜ್ ಜಾಲಿ’ : ತೃತೀಯ ಬಹುಮಾನ ಪುಸ್ತಕಗಳನ್ನು ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಲೋಕಾರ್ಪಣೆಗೈದರು. ಅಕಾಡೆಮಿ ರಿಜಿಸ್ಟ್ರಾರ್ರಾದ ರಾಜೇಶ್ ಜಿ., ಸ್ಥಾಯಿ ಸಮಿತಿ ಸದಸ್ಯರಾದ ನವೀನ್ ಲೋಬೊ, ದಯಾನಂದ ಮಡ್ಕೇಕರ್, ಸಮರ್ಥ್ ಭಟ್ ಹಾಗೂ ರೊನಾಲ್ಡ್ ಕ್ರಾಸ್ತಾರವರು ಉಪಸ್ಥಿತರಿದ್ದರು.
