Author: roovari

ಶ್ರೀ ಬ್ರಾಹ್ಮರಿ ನಾಟ್ಯಾಲಯ (ರಿ.) ರಜತ ವರ್ಷದ ಸಂಭ್ರಮದಲ್ಲಿದ್ದು ದಿನಾಂಕ 16. 11. 2025 ರಂದು ಅಂಬಲಪಾಡಿಯ ಭವಾನಿ ಮಂಟಪದಲ್ಲಿ ಮಧ್ಯಾಹ್ನ 3:00 ಯಿಂದ ಮಾರ್ಗಂ ಭರತನಾಟ್ಯ ಪ್ರಸ್ತುತಿಯನ್ನು ರಜತ ವರ್ಷದ ಅಂಗವಾಗಿ ಹಮ್ಮಿಕೊಂಡಿದೆ. ನವರು ನವಂಬರ್ 2025 ರಿಂದ ಆರಂಭಗೊಂಡು ಪ್ರತಿ ತಿಂಗಳು ಕಾರ್ಯಕ್ರಮ ನೀಡುತ್ತಾ 2027  ಏಪ್ರಿಲ್ ತಿಂಗಳಲ್ಲಿ ರಜತ ವರ್ಷದ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಗೆಜ್ಜೆಯೊಂದಿಗೆ  ಬೆಳ್ಳಿ ಹೆಜ್ಜೆಯಿಡುವ ಸಂದರ್ಭದಲ್ಲಿ ನವಂಬರ್ 16ರಂದು ನಡೆಯುವ ಕಾರ್ಯಕ್ರಮದ ನಟುವಾಂಗ ಹಾಗೂ ಹಾಡುಗಾರಿಕೆಯಲ್ಲಿ ವಿದ್ವಾನ್ ಭವಾನಿ ಶಂಕರ್, ಮೃದಂಗದಲ್ಲಿ ಬಿ ಮನೋಹರ್ ರಾವ್ ಮಂಗಳೂರು, ಪಿಟೀಲು ವಾದಕರಾಗಿ ವೈಭವ ಪೈ ಮಣಿಪಾಲ್ ಮತ್ತು ಯೋಗೀಶ್ ಕೊಳಲಗಿರಿ ಇವರ ನಿರೂಪಣೆ ಹಾಗೂ ಶ್ರೀಮತಿ ಸುಹಾಸಿನಿಯವರ ಸಹಕಾರದೊಂದಿಗೆ ನಡೆಯಲಿದೆ.

Read More

ವಿರಾಜಪೇಟೆ : ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಕನ್ನಡ ವಿದ್ಯಾರ್ಥಿ ಬಳಗದ ವತಿಯಿಂದ ಕೊಡಗಿನ ಕನ್ನಡ ನುಡಿ ವೈಭವದ ಹಬ್ಬ ‘ನುಡಿ ಉತ್ಸವ-2025’ದ ಲಾಂಛನ ಬಿಡುಗಡೆ ಕಾರ್ಯಕ್ರಮವು ದಿನಾಂಕ 11 ನವೆಂಬರ್ 2025ರಂದು ನಡೆಯಿತು. ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ. ಫಾ. ಮದಲೈ ಮುತ್ತು ಇವರು ಲಾಂಛನ ಬಿಡುಗಡೆಗೊಳಿಸಿ “ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜರುಗುವ ಈ ಕಾರ್ಯಕ್ರಮವು ಸಂಭ್ರಮದ ಕಾರ್ಯಕ್ರಮವಾಗಿದ್ದು, ನಮ್ಮ ನಾಡಿನ ಹೆಮ್ಮೆಯ ಹಬ್ಬವು ಆಗಿದೆ. ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕನ್ನಡ ನಾಡು ಪ್ರಾಚೀನ ಇತಿಹಾಸವನ್ನು ಹೊಂದಿದ್ದು, ರಾಜ್ಯೋತ್ಸವದ ಆಚರಣೆಯು ನಾವು ನಾಡಿಗೆ ಸಲ್ಲಿಸುವ ಗೌರವವಾಗಿದೆ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ನುಡಿ ಉತ್ಸವ ಸಮಿತಿಯ ಸಂಚಾಲಕರು ಹಾಗೂ ಪತ್ರಕರ್ತರಾದ ಅಬ್ದುಲ್ ರೆಹಮಾನ್ ಮಾತನಾಡಿ “ಕನ್ನಡಮ್ಮನ ಸೇವೆಗೆ ನಾವು ಸದಾ ಸಿದ್ಧರಿರಬೇಕು. ವಿರಾಜಪೇಟೆಯ ಈ ಪ್ರತಿಷ್ಠಿತ…

Read More

ಮಂಗಳೂರು : ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ವಚನ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ದಿನಾಂಕ 07 ನವೆಂಬರ್ 2025ರಂದು ಆಯೋಜಿಸಿದ್ದ ರಸಪ್ರಶ್ನೆಯ 2ನೇ ಸರಣಿ ಕಾರ್ಯಕ್ರಮವನ್ನು ಬೆಸೆಂಟ್ ಹಿರಿಯ ಪ್ರೌಢಶಾಲೆ ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿತ್ತು. ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ತ್ರಿವೇಣಿ ಕಾರ್ಯಕ್ರಮವನ್ನು ಉದ್ಘಾಟಿಸಿ “ಮಕ್ಕಳಿಗಾಗಿ ನಡೆಸುವ ಈ ಕಾರ್ಯಕ್ರಮ ಉತ್ತಮವಾಗಿದೆ ಮತ್ತು ಸಾಹಿತ್ಯದ ಬಗ್ಗೆ ಒಲವನ್ನು ಮೂಡಿಸುವಲ್ಲಿ ಅನುಕೂಲವಾಗಿದೆ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ರತ್ನಾವತಿ ಜೆ. ಬೈಕಾಡಿ ಇವರು “ಮಕ್ಕಳು ಬಾಲ್ಯದಲ್ಲಿಯೇ ಶರಣರು ವಚನಗಳಲ್ಲಿ ಹೇಳಿದ ಒಳ್ಳೆಯ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೊಡ್ಡ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು” ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಸುರೇಂದ್ರ ರಾವ್ ಇವರು “ಕನ್ನಡ ಮಾಧ್ಯಮದಲ್ಲಿ ಕಲಿತಂತಹ ಅನೇಕ ಸಾಧಕರು ನಮ್ಮ ಮುಂದಿದ್ದಾರೆ. ಹಾಗಾಗಿ ಕನ್ನಡ ಮಾಧ್ಯಮದಲ್ಲಿ ಓದುವಂತಹ ಮಕ್ಕಳು ಯಾವುದೇ…

Read More

ಕೋಣಾಜೆ : ಮಂಗಳೂರು ವಿಶ್ವವಿದ್ಯಾನಿಲಯ, ಕನಕದಾಸ ಸಂಶೋಧನ ಕೇಂದ್ರ, ಮಂಗಳ ಗಂಗೋತ್ರಿ ಇದರ ವತಿಯಿಂದ ‘ಕನಕ ಜಯಂತಿ’ ಪ್ರಯುಕ್ತ ಎಸ್.ವಿ.ಪಿ. ಸಂಸ್ಥೆಯ ಪ್ರೊ. ವಿವೇಕ್ ರೈ ವಿಚಾರವೇದಿಕೆಯಲ್ಲಿ ದಿನಾಂಕ 12 ನವೆಂಬರ್ 2025ರಂದು 2025-26ನೇ ಸಾಲಿನ ಶೈಕ್ಷಣಿಕ ವರ್ಷದ ‘ಕನಕ ಕೀರ್ತನ ಗಂಗೋತ್ರಿ’ ಶೈಕ್ಷಣಿಕ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕನಕದಾಸರ ಕೀರ್ತನೆಗಳ ಸಮೂಹ ಗಾಯನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಿವಮೊಗ್ಗದ ಕಲಾವಿದರು ಮತ್ತು ಸಂಶೋಧಕರಾದ ಡಾ. ಕೆ.ಎಸ್. ಪವಿತ್ರ “ಸಂಗೀತ, ಸಾಹಿತ್ಯದ ಮೂಲಕ ಸಾಮಾಜಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಕನಕದಾಸರ ಕಾವ್ಯ, ಸಾಹಿತ್ಯ ಸಂಗತಿಗಳು ಅತ್ಯಂತ ವಿಸ್ತಾರವಾಗಿದೆ. ಅವರ ಸಾಹಿತ್ಯ, ಕೀರ್ತನೆಗಳ ಜೊತೆ ಜೊತೆಯಾಗಿ ಭಕ್ತಿ, ವೈಚಾರಿಕತೆ, ಭಾವನಾ ತೀವ್ರತೆಯೂ ಇರುವುದನ್ನು ನಾವು ಗಮನಿಸಬಹುದು. ಕನಕದಾಸ ಜೀವನ ಚರಿತ್ರೆಯನ್ನು ನಾವು ಓದಿದರೆ ಅದರಲ್ಲಿ ಅವರ ಪಾಡು ಹಾಡಾಗಿ ಹರಿದಿದೆ ಎಂಬುವುದು ನಮಗೆ ಸ್ಪಷ್ಟವಾಗುತ್ತದೆ. ಅವರ ಕಾವ್ಯ, ಕೀರ್ತನೆಗಳನ್ನು ಹಾಡುವುದರ ಜೊತೆಗೆ ಅದರ ಅರ್ಥ,…

Read More

ಪುತ್ತೂರು : ಆಳ್ವಾಸ್‌ ಎಜುಕೇಷನ್ ಫೌಂಡೇಷನ್, ಆಳ್ವಾಸ್‌ ನುಡಿಸಿರಿ – ವಿರಾಸತ್ ಪುತ್ತೂರು ಘಟಕ ಇದರ ವತಿಯಿಂದ ಆಳ್ವಾಸ್ ವಿದ್ಯಾರ್ಥಿ ಕಲಾವಿದರಿಂದ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ವನ್ನು ದಿನಾಂಕ 16 ನವೆಂಬರ್ 2025ರಂದು ಸಂಜೆ 6-30 ಗಂಟೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಯೋಗದೀಪಿಕ, ಶಾಸ್ತ್ರೀಯ ನೃತ್ಯ- ಅಷ್ಟಲಕ್ಷ್ಮೀ, ಬಡಗುತಿಟ್ಟು ಯಕ್ಷಗಾನ- ಶ್ರೀರಾಮ ಪಟ್ಟಾಭಿಶೇಕ, ಗುಜರಾತಿನ ದಾಂಡಿಯಾ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಲ್ಲಕಂಬ ಹಾಗೂ ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ನೃತ್ಯ-ವರ್ಷಧಾರೆ, ಪುರುಲಿಯಾ, ತೆಂಕುತಿಟ್ಟು ಯಕ್ಷಗಾನ-ಅಗ್ರಪೂಜೆ, ಬೊಂಬೆ ವಿನೋದಾವಳಿಗಳು ಪ್ರಸ್ತುತಗೊಳ್ಳಲಿವೆ.

Read More

ಕಾಸರಗೋಡು : ಬಿ. ಶಿವಕುಮಾರ್ ಸಾರಥ್ಯದ ಸ್ವರ್ಣಭೂಮಿ ಫೌಂಡೇಷನ್ ಅರಳೇಪೇಟೆ ಕೋಲಾರ ಮತ್ತು ಡಾ. ವಾಮನ್ ರಾವ್ ಬೇಕಲ್ ಮತ್ತು ಸಂಧ್ಯಾರಾಣಿ ಟೀಚರ್ ಸಾರಥ್ಯದ ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಹಾಗೂ ಗ್ರಂಥಾಲಯ (ರಿ.) ಇವುಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಗಡಿನಾಡು ಕನ್ನಡ ರಾಜ್ಯೋತ್ಸವ ಸಂಭ್ರಮ -2025’ವನ್ನು ದಿನಾಂಕ 15 ನವೆಂಬರ್ 2025ರಂದು ಬೆಳಗ್ಗೆ 10-30 ಗಂಟೆಗೆ ಕಾಸರಗೋಡಿನ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಭವನ ರಜತ ಮಹೋತ್ಸವದ ನವೀಕರಣ ವೇದಿಕೆ ಉದ್ಘಾಟನೆ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸ್ವರ್ಣಭೂಮಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ನಡೆಯಲಿದೆ.

Read More

ಕಾಸರಗೋಡು : ಶಂಪಾ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ವತಿಯಿಂದ ‘ಡಾ. ಎಸ್.ಎಲ್. ಭೈರಪ್ಪ ಸಂಸ್ಮರಣೆ ಹಾಗೂ ಕೃತಿಗಳ ಅವಲೋಕನ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಕ 15 ಮತ್ತು 16 ನವೆಂಬರ್ 2025ರಂದು ಕಾಸರಗೋಡಿನ ನಿಸರ್ಗಧಾಮದಲ್ಲಿ ಆಯೋಜಿಸಲಾಗಿದೆ. ದಿನಾಂಕ 15 ನವೆಂಬರ್ 2025ರಂದು ಪೂರ್ವಾಹ್ನ 9-30 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜಾನಪದ ತಜ್ಞರಾದ ಡಾ. ಕೆ. ಚಿನ್ನಪ್ಪ ಗೌಡ ಇವರು ಅಧ್ಯಕ್ಷತೆ ವಹಿಸಲಿದ್ದು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರು ಉದ್ಘಾಟನೆ ಮಾಡಲಿದ್ದಾರೆ. 11-30 ಗಂಟೆಗೆ ನಡೆಯುವ ಗೋಷ್ಠಿ 1ರಲ್ಲಿ ಉಪನ್ಯಾಸಕರಾದ ಟಿ.ಎ.ಎಂ. ಖಂಡಿಗೆ ಇವರು ‘ಉತ್ತರಕಾಂಡ’, ಸಹ ಪ್ರಾಧ್ಯಾಪಕರಾದ ಡಾ. ವೇದಾವತಿ ಇವರು ‘ನಿರಾಕರಣ’ ಮತ್ತು ಕನ್ನಡ ಅಧ್ಯಾಪಕರಾದ ಡಾ. ಸುಭಾಷ್ ಪಟ್ಟಾಜೆಯವರು ‘ಯಾನ’, ಗೋಷ್ಠಿ 2ರಲ್ಲಿ ಖ್ಯಾತ ವಿಮರ್ಶಕರಾದ ಡಾ. ಬಿ. ಜನಾರ್ದನ ಭಟ್ ಇವರು ‘ಗೃಹಭಂಗ’, ಪ್ರಾಧ್ಯಾಪಕರಾದ ಡಾ. ಶಾಂತರಾಜು ಇವರು ‘ಸಾರ್ಥ’, ಪ್ರಾಧ್ಯಾಪಕರಾದ…

Read More

ಮೇಲುಕೋಟೆ : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಮೇಲುಕೋಟೆ ಇವರ ವತಿಯಿಂದ ದೃಶ್ಯ ಟ್ರಸ್ಟ್ (ರಿ.) ಮೇಲುಕೋಟೆ ಇವರ ಸಹಯೋಗದೊಂದಿಗೆ ರಂಗ ತರಬೇತಿ ಕಾರ್ಯಾಗಾರ ಉದ್ಘಾಟನಾ ಸಮಾರಂಭವನ್ನು ದಿನಾಂಕ 14 ನವೆಂಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

Read More

ಬೆಂಗಳೂರು : ಶುಭದ ಚಾರಿಟಬಲ್ ಟ್ರಸ್ಟ್, ಅಕ್ಷಯ ಸೇವಾ ಫೌಂಡೇಶನ್, ರಂಗಮಂಡಲ ಮತ್ತು ಸ್ನೇಹ ಸೇವಾ ಫೌಂಡೇಶನ್ ಇವುಗಳ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಶುಭ ಸಮಾರಂಭದಲ್ಲಿ ಶ್ರೀ ಪಾಲನೇತ್ರರಿಗೆ ಅಭಿನಂದನೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಕ 16 ನವೆಂಬರ್ 2025ರಂದು ಬೆಳಿಗ್ಗೆ 11-00 ಗಂಟೆಗೆ ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಶರಣ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಉದ್ಘಾಟನೆ ಮಾಡಿ ಕನ್ನಡ ಚಳವಳಿಗಾರ ಶ್ರೀ ಪಾಲನೇತ್ರರಿಗೆ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಗಾನ ಸಿದ್ಧಗಂಗಾ ಕಲ್ಚರಲ್ ಟ್ರಸ್ಟ್ ಇದರ ಶ್ರೀಮತಿ ಗೀತಾ ಭತ್ತದ್ ತಂಡದವರಿಂದ ಕನ್ನಡ ಗೀತ ಗಾಯನ ಪ್ರಸ್ತುತಗೊಳ್ಳಲಿದೆ. ವಿಚಾರ ಸಂಕಿರಣದಲ್ಲಿ ‘ಗಾಯತ್ರಿ ನಗರ, ಶ್ರೀರಾಂಪುರ, ಪ್ರಕಾಶನಗರ, ಪರಿಸರದ ಕನ್ನಡ ಚಳವಳಿ’ ಎಂಬ ವಿಷಯದ ಬಗ್ಗೆ ಮಾಜಿ ಮಹಾ ಪೌರ ಜೆ. ಹುಚ್ಚಪ್ಪ, ‘ನಾಡಪ್ರಭು ಕೆಂಪೇಗೌಡರು…

Read More

ಬೆಂಗಳೂರು : ವೀರಕಪುತ್ರ ಶ್ರೀನಿವಾಸ ಸಾರಥ್ಯದಲ್ಲಿ ವೀರಲೋಕ ಇದರ ಆಶ್ರಯದಲ್ಲಿ ‘ಪುಸ್ತಕ ಸಂತೆ -3’ ಕಾರ್ಯಕ್ರಮವು ದಿನಾಂಕ 14, 15 ಮತ್ತು 16 ನವೆಂಬರ್ 2025ರಂದು ಬೆಳಿಗ್ಗೆ ಗಂಟೆ 10-00ರಿಂದ ಬೆಂಗಳೂರಿನ ಜಯನಗರ ಶಾಲಿನಿ ಗ್ರೌಂಡ್ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ನಡೆಯಲಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಹೊಸ ತಲೆಮಾರಿನ ಲೇಖಕರುಗಳ ಜೊತೆಗೆ ಜನಪ್ರಿಯ ಲೇಖಕರ, ಸಾಹಿತಿಗಳ ಪುಸ್ತಕಗಳ ಜೊತೆಗೆ ಹಳೆಯ ತಲೆಮಾರಿನ ಅಪರೂಪದ ಕೃತಿಗಳು ಸೇರಿದಂತೆ ಲಕ್ಷಾಂತರ ಪುಸ್ತಕಗಳು ಓದುಗರನ್ನು ಸ್ವಾಗತಿಸಲು ವೇದಿಕೆಗಳು ಸಜ್ಜಾಗುತ್ತಿವೆ. 300ಕ್ಕೂ ಹೆಚ್ಚು ಜನಪ್ರಿಯ ಲೇಖಕರು, ಸಾಹಿತಿಗಳು ಈ ಮೂರು ದಿನದ ಸಂತೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೆ, ಈ ಸಂತೆಯಲ್ಲಿ ಮಕ್ಕಳಿಗಾಗಿಯೇ ವಿಶೇಷ ಆಟದ ಸಂತೆ, ಹಾರ್ಟ್ ಅಂಡ್ ಕ್ರಾಫ್ಟ್ ಚಟುವಟಿಕೆಗಳು, ನಾಟಕ, ಯಕ್ಷಗಾನ, ಸಂಗೀತ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೊತೆಗೆ ನೆಚ್ಚಿನ ಲೇಖಕನ ಜೊತೆಗೆ ಮೆಚ್ಚಿದ ಓದುಗನ ಮುಖಾಮುಖಿಯ ಅಪರೂಪದ ‘ಓಲೇ : ಓದುಗ – ಲೇಖಕ’ನಲ್ಲಿ ನೂರಕ್ಕೂ ಹೆಚ್ಚು ಓದುಗರು ತಮ್ಮ…

Read More