Author: roovari

ಕಾಸರಗೋಡು: ಗಾಯಕರಾಗಿ ಹೆಸರು ಮಾಡಬೇಕೆಂದರೆ ಸತತ ಅಭ್ಯಾಸ ಮತ್ತು ಸಂಗೀತದ ಬಗ್ಗೆ ಶ್ರದ್ಧೆ, ಆಸಕ್ತಿ ಇರಬೇಕು. “ಸ್ವರ, ತಾಳ, ಲಯಗಳ ಮಿಲನವೇ ಸಂಗೀತ” ಎಂದು ಕಾಸರಗೋಡಿನ ನಿವೃತ್ತ ಡಿವೈಎಸ್ಪಿ, ಖ್ಯಾತ ಗೀತರಚನೆಗಾರ ಟಿ.ಪಿ. ರಂಜಿತ್ ಹೇಳಿದರು. ಅವರು ಕಾಸರಗೋಡಿನ ಖ್ಯಾತ ಸಾಹಿತ್ಯಿಕ-ಸಾಂಸ್ಕೃತಿಕ ಸಂಘಟನೆ ರಂಗಚಿನ್ನಾರಿ ಕಾಸರಗೋಡು (ರಿ) ಏರ್ಪಡಿಸಿದ ಕರೋಕೆ ಗಾಯಕರ ಸಮ್ಮಿಲನ ‘ಅಂತರಧ್ವನಿ-11’ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ದಿನಾಂಕ ನವೆಂಬರ್ 22ರಂದು ಕಾಸರಗೋಡಿನ ಕರೆಂದಕ್ಕಾಡಿನಲ್ಲಿರುವ ಪದ್ಮಗಿರಿ ಕಲಾಕುಟೀರದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ‘ಕಲಾವಿದರು ಒಳ್ಳೆಯ ಸಂಗೀತ ಕೇಳುವ ಹವ್ಯಾಸ ಬೆಳೆಸಿಕೊಳ್ಳಬೇಕು – ಮನಸ್ಸಿಗೆ ನೋವಾದಾಗಲೆಲ್ಲಾ ಒಳ್ಳೆಯ ಸಂಗೀತ ಕೇಳುವುದರಿಂದ ಮನಸ್ಸಿಗೆ ಸಂತಸ ಲಭಿಸುತ್ತದೆ’ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಸರಗೋಡಿನ ಖ್ಯಾತ ನೇತ್ರ ತಜ್ಞ, ಸಾಮಾಜಿಕ-ಧಾರ್ಮಿಕ ಮುಂದಾಳು ಡಾ। ಅನಂತ ಕಾಮತ್ ಅವರು ಮಾತನಾಡಿ ‘ಕಳೆದ ಎರಡು ದಶಕಗಳಿಂದ ಕಾಸರಗೋಡಿನಲ್ಲಿ ನಿರಂತರವಾಗಿ ಸಾಂಸ್ಕೃತಿಕ-ಸಾಹಿತ್ಯಿಕ ರಂಗದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ರಂಗ ಚಿನ್ನಾರಿ ಸಂಸ್ಥೆ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಖ್ಯಾತ…

Read More

ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 136ನೇ ಸರಣಿಯಲ್ಲಿ ಅಮೇರಿಕಾದ ನಿವಾಸಿಯಾದ ಕು. ವೇದ್ಯ ಸ್ಫೂರ್ತಿ ಕೊಂಡ ಇವರಿಂದ ಬಹಳ ಮನೋಜ್ಞವಾದ ಹಾಗೂ ಶುದ್ಧ ಸಾಂಪ್ರದಾಯಿಕ ಶೈಲಿಯ ಕೂಚಿಪುಡಿ ಕಾರ್ಯಕ್ರಮ ನವೆಂಬರ್ 15ರಂದು ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಅಭ್ಯಾಗತರಾಗಿ ಆಗಮಿಸಿದ ಮಂಗಳೂರಿನ ಕಲಾ ಸೂರ್ಯ ನೃತ್ಯಾಲಯದ ನೃತ್ಯ ಶಿಕ್ಷಕಿ ವಿದುಷಿ ಸೌಜನ್ಯ ಪಡುವೆಟ್ನಾಯರವರು ತಮ್ಮ ಮಾತೃ ಸಂಸ್ಥೆಯಲ್ಲಿ ನಡೆಯುವ ಕಲಾ ಕೈಂಕರ್ಯ, ಸಮಾಜಕ್ಕೆ ಇದರಿಂದ ಆಗುವ ಸತ್ಪರಿಣಾಮಗಳ ಬಗ್ಗೆ ಮಾಹಿತಿಕರವಾಗಿ ಜನರಿಗೆ ಕೊಡುವಂತಹ ಪ್ರಯೋಜನಗಳನ್ನು ಬಹಳಷ್ಟು ಮನೋಜ್ಞವಾಗಿ ಶ್ಲಾಘಿಸಿದರು ಹಾಗೂ ವೇದ್ಯ ಸ್ಫೂರ್ತಿಯವರ ಅದ್ಭುತ ಕಲಾಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಕಾರ್ಯಕ್ರಮದ ಒಟ್ಟು ನಿರ್ವಹಣೆಯನ್ನು ವಿದ್ವಾನ್ ದೀಪಕ್ ಕುಮಾರ್ ರವರು ಆಯೋಜಿಸಿದರು. ಕಾರ್ಯಕ್ರಮವನ್ನು ಕುಮಾರಿ. ಸೃಷ್ಟಿ ಎನ್.ವಿ. ರವರು ನಿರೂಪಿಸಿದವರು. ಅಭ್ಯಾಗತರ ಪರಿಚಯವನ್ನು ಮಾಡಿದವರು ಕುಮಾರಿ. ಜನ್ಯ. ಕಲಾವಿದರ ಪರಿಚಯವನ್ನು ಮಾಡಿದವರು ಕುಮಾರಿ. ಸಾನ್ವಿ ಪಿ.ಎಸ್. ವಿಷಯ ಮಂಡನೆಯನ್ನು ಮಾಡಿದವರು ಕುಮಾರಿ ಶೋನಲ್ ರೈ. ಪ್ರಾರ್ಥನೆಯನ್ನು…

Read More

ಶಿಶಿರ ಶಿಕ್ಷಕ ಶಿಕ್ಷಣ ರಂಗ ಮಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಕನ್ನಡ ವಿಭಾಗ, ತುಳು ಎಂ. ಎ. ಹಳೆ ವಿದ್ಯಾರ್ಥಿ ಸಂಘ, ಇವುಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ “ತುಳುಪರ್ಬ ಸಂಭ್ರಮೊ ವಿಚಾರಗೋಷ್ಠಿ ಬೊಕ್ಕ ಕವಿ ಗೋಷ್ಠಿ”. ಶಿಶಿರ ಶಿಕ್ಷಕ ಶಿಕ್ಷಣ ರಂಗ ಮಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಕನ್ನಡ ವಿಭಾಗ ಮತ್ತು ತುಳು ಎಂ. ಎ. ಹಳೆ ವಿದ್ಯಾರ್ಥಿ ಸಂಘ ಇವುಗಳ ಜಂಟಿ ಆಶಯದಲ್ಲಿ “ತುಳುಪರ್ಬ ಸಂಭ್ರಮೋ” ವಿಚಾರಗೋಷ್ಠಿ ಬೊಕ್ಕ ಕವಿಗೋಷ್ಠಿ ಕಾರ್ಯಕ್ರಮವು 5 ಡಿಸೆಂಬರ್ 2025 ರಂದು ಪೂರ್ವಾನ್ನ 9.30ಕ್ಕೆ ಮಂಗಳೂರಿನ ಹಂಪನ್ಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪೂರ್ವಾನ್ನ 10 ಗಂಟೆಗೆ ಕರ್ನಾಟಕ ವಿಧಾನಸಭಾಧ್ಯಕ್ಷರಾದ ಡಾ. ಯು. ಟಿ. ಖಾದರ್ ಉದ್ಘಾಟಿಸಲಿರುವರು. ಶಿಶಿರ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಸುಭಾಷ್ಚಂದ್ರ ಕಣ್ವತೀರ್ಥ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನಡೆಯಲಿದೆ. ಡಾ. ಜ್ಯೋತಿ ಚೇಳಾಯ್ರು, ಡಾ. ತುಕರಾಮ್ ಪೂಜಾರಿ ಮತ್ತು ಡಾ. ದಿನಕರ ಪಂಚನಾಡಿ ಸಂಪನ್ಮೂಲ ವ್ಯಕ್ತಿಗಳಾಗಿ…

Read More

ಖ್ಯಾತ ಯಕ್ಷಗಾನ ಪ್ರಸಂಗ ಕರ್ತ ತಾಳಮದ್ದಳೆ ಅರ್ಥಧಾರಿ ಹವ್ಯಾಸಿ ಸ್ತ್ರೀ ವೇಷದಾರಿ ಕಂದಾವನ ರಘುರಾಮ ಶೆಟ್ಟಿ ಅವರು ತಮ್ಮ 89ನೇ ವರ್ಷ ವಯಸ್ಸಿನಲ್ಲಿ 26.11.2025ರ ಬುಧವಾರದಂದು ಸ್ವಗೃಹದಲ್ಲಿ ನಿಧನರಾದರು. ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರುವರೆ ದಶಕಗಳ ಕಾಲ ಅಧ್ಯಾಪಕರಾಗಿ ಮತ್ತು ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಇವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದರು . ಶಾಲಾ ವಾರ್ಷಿಕೋತ್ಸವದಲ್ಲಿ ನಾಟಕ ಬರೆದು ಮಕ್ಕಳಿಂದ ಅದನ್ನು ರಂಗಕ್ಕೆ ತರುವಲ್ಲಿ ನಿಷ್ಣಾತರಾಗಿದ್ದರು. ನಾಟಕ ನಟರಾಗಿ ಹಾಗೂ ನಿರ್ದೇಶಕರಾಗಿ ರಂಗಭೂಮಿಯಲ್ಲಿ ಅನನ್ಯ ಕೆಲಸ ಮಾಡಿದವರು ರಘುರಾಮ ಶೆಟ್ಟಿಯವರು. ಯಕ್ಷಗಾನ ಇವರಿಗೆ ಬಹಳ ಇಷ್ಟವಾದ ಕಲಾಪ್ರಕಾರವಾಗಿತ್ತು. ಯಕ್ಷಗಾನ ಕ್ಷೇತ್ರದಲ್ಲಿ ಕಂದಾವರರೆಂದೇ ಗುರುತಿಸಲ್ಪಟ್ಟಿದ್ದ ಇವರು ತಮ್ಮ ಎಳವೆಯಲ್ಲಿಯೇ ಯಕ್ಷಗಾನದ ಹಾಡುಗಳನ್ನು ಹಾಡುತ್ತಾ “ಬಾಲ ಭಾಗವತ”ರೆಂದು ಮೆಚ್ಚುಗೆಗೆ ಪಾತ್ರರಾಗಿದ್ದರು. ಯಕ್ಷಗಾನ ಹವ್ಯಾಸವನ್ನು ಕೊನೆಯವರೆಗೂ ಉಳಿಸಿಕೊಂಡು ಬಂದ ಇವರು ಪ್ರಸಂಗ ಕರ್ತರಾಗಿ ಹಲವು ಉತ್ತಮ ಕೃತಿಗಳನ್ನು ಯಕ್ಷ ಲೋಕಕ್ಕೆ ಸಮರ್ಪಿಸಿದ್ದಾರೆ. ರತಿ ರೇಖಾ, ವಸುವರಾಂಗಿ, ಚೆಲುವೆ ಚಿತ್ರಾವತಿ, ಶೂದ್ರ ತಪಸ್ವಿನಿ…

Read More

ನೃತ್ಯ ಗುರು ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ಇವರ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಪ್ರಸ್ತುತಪಡಿಸಿದ ನಿತ್ಯಾಂತರಂಗ 137ನೇ ಸರಣಿ ಕಾರ್ಯಕ್ರಮವು 21.11.2025 ರಂದು ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ಸಂಪನ್ನಗೊಂಡಿತು. ಕರಾವಳಿಯ ಪ್ರತಿಭಾವಂತ ಕಲಾವಿದರಾದ ಶ್ರೀಮತಿ ರಾಧಿಕಾ ಶೆಟ್ಟಿ, ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ ದೀಪಕ್, ವಿದುಷಿ ಅನ್ನಪೂರ್ಣ ರಿತೇಶ್, ಶ್ರೀಮತಿ ಮಂಜರಿ ಚಂದ್ರ ಪುಷ್ಪರಾಜ್ ಈ ಐದು ಮಂದಿ ಸೇರಿ ಮಾಡಿದ “ಕೃಷ್ಣಾನಂದ ಲಹರಿ” ಸರಣಿ ಕಾರ್ಯಕ್ರಮವು ಜನ ಮೆಚ್ಚುಗೆಯನ್ನು ಪಡೆಯಿತು. ಮಾನವ ಸಂಕುಲ ಗೋವುಗಳ ಹಾಗೆ.’ದೈವಿಕ ಗೋಪಾಲ’ನ ಮಾರ್ಗದರ್ಶನದಲ್ಲಿ ಗೋವುಗಳು ನಡೆಯುವಂತೆ, ಅದೇ ಗೋಪಾಲಕೃಷ್ಣನ ಆಣತಿಯಂತೆ ನಾವೂ ನಡೆಯುವುದು ಎಂಬ ವಿಚಾರವನ್ನು “ದೈವಿಕ ಗೋಪಾಲ” ಎಂಬ ನೃತ್ಯದ ಮೂಲಕ ಸುಂದರವಾಗಿ ಪ್ರಸ್ತುತಪಡಿಸಿದವರು ವಿದುಷಿ ಅನ್ನಪೂರ್ಣಾ ರಿತೇಶ್. ಕಲಾದೀಪ ದಂಪತಿಗಳಾದ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ದೀಪಕ್ ಇವರು ಯಶೋದೆ ಕೃಷ್ಣರ ನಡುವಿನ ವಾತ್ಸಲ್ಯಭರಿತ ಸಂಬಂಧವನ್ನು “ಮೈಯ್ಯಾ ಮೊರೆ ಮೈ…

Read More

ಬಾಳಪ್ಪ ಶೆಟ್ಟಿ ಸ್ವಾಭಿಮಾನಿ ಕಲಾವಿದ: ಕೆ. ಗೋವಿಂದ ಭಟ್ ——————————————– ಮಂಗಳೂರು: ‘ಕರ್ನಾಟಕ ಕಲಾವಿಹಾರ ಹಾಗೂ ಕುಂಡಾವು ಮೇಳಗಳಲ್ಲಿ ತಾನು ಬೆಟ್ಟಂಪಾಡಿ ಬಾಳಪ್ಪ ಶೆಟ್ಟರ ಒಡನಾಡಿಯಾಗಿದ್ದೆ. ಅವರು ಓರ್ವ ಸ್ವಾಭಿಮಾನಿ ಕಲಾವಿದ; ಹಾಸ್ಯ ಪಾತ್ರವನ್ನು ಎಂದೂ ಅಪಹಾಸ್ಯವಾಗಲು ಬಿಡುತ್ತಿರಲಿಲ್ಲ’ ಎಂದು ಯಕ್ಷಗಾನ ರಂಗದ ಹಿರಿಯ ಕಲಾವಿದ ದಶಾವತಾರಿ ಕೆ ಗೋವಿಂದ ಭಟ್ಟರು ಹೇಳಿದ್ದಾರೆ. ಅವರು ಮಂಗಳೂರು ವಿವಿ ಕಾಲೇಜಿನಲ್ಲಿ ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ, ಮಂಗಳೂರು ವಿವಿಯ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಹಾಗೂ ಕರ್ನಾಟಕ ಯಕ್ಷಭಾರತಿ( ರಿ) ಪುತ್ತೂರು ಇವರ ಸಹಯೋಗದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2025’ ಹದಿಮೂರನೇ ವರ್ಷದ ನುಡಿಹಬ್ಬ ತ್ರಯೋದಶ ಸರಣಿಯ ದ್ವಿತೀಯ ದಿನ ಯಕ್ಷಗಾನ ಹಾಸ್ಯಪಟು ದಿ| ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣಾ ಸಮಾರಂಭದಲ್ಲಿ ಬಾಳಪ್ಪ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.…

Read More

ಮಂಗಳೂರು: ನವೋದಯ ಕಾಲಘಟ್ಟದ ವರೆಗೂ ಸಾಹಿತ್ಯರಚನೆ ಎಂಬುದು ಹೃದಯದಿಂದ ಹುಟ್ಟಿ ಪ್ರಾಮಾಣಿಕವಾಗಿ ರೂಪುಗೊಳ್ಳುತ್ತಿತ್ತು. ಅನಂತರ ನಗರೀಕರಣ ಹೆಚ್ಚಾದಂತೆ ಮನುಷ್ಯನ ಮನಸ್ಸು ಕಲುಷಿತಗೊಳ್ಳುತ್ತ ಬಂತು ಹಾಗೂ ಸಾಹಿತ್ಯರಚನೆಯು ಬುದ್ಧಿಯ ಸೊತ್ತಾಯಿತು. ಹಾಗಾಗಿ ಸಾಹಿತಿ ಮುಂದೆ ಸಾಹಿತ್ಯ ಹಿಂದೆ ಎಂಬ ಸ್ಥಿತಿ ನಿರ್ಮಾಣವಾಯಿತು. ಆದರೆ ಇವುಗಳನ್ನೆಲ್ಲ ಮೀರಿ ಸಾಹಿತ್ಯ ರಚನೆಯು ಪ್ರಾಮಾಣಿಕವಾಗಿರಬೇಕು ಎಂದು ಕವಿ ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಹೇಳಿದರು. ಮಂಗಳೂರಿನ ಹಿರಿಯ ನ್ಯಾಯವಾದಿ ಕೆ. ಎಂ. ಕೃಷ್ಣಭಟ್ಟರ ‘ಇಂದ್ರಧನುಷ್’ ಎಂಬ ಲಲಿತ ಪ್ರಬಂಧಗಳ ಸಂಕಲನವನ್ನು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಗೊಳಿಸಿ ಅವರು ಮಾತಾಡುತ್ತಿದ್ದರು. ಸಾಹಿತ್ಯಕ್ಕಿಂತ ಸಾಹಿತಿ ಮೆರವಣಿಗೆ ಹೊರಡುವುದು ಸಾಹಿತ್ಯದ ದೃಷ್ಟಿಯಿಂದ ಮತ್ತು ಸಮಾಜದ ಹಿತಚಿಂತನೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಸಮಾಜದ ಕ್ಷೇಮಚಿಂತನೆ ಮಾಡಬೇಕಾದ ಸಾಹಿತಿ ತನ್ನ ಸಾಹಿತ್ಯದ ಮೂಲಕ ಮಾತಾಡಬೇಕೇ ಹೊರತು ವೇದಿಕೆಯ ಮೇಲಿನ ಮಾತುಗಳ ಮೂಲಕ ಅಲ್ಲ ಎಂದು ಡಾ. ಪೆರ್ಲ ಅವರು ಹೇಳಿದರು. ಕೆ. ಎಂ. ಕೃಷ್ಣ ಭಟ್ಟರ ಲಲಿತ…

Read More

ಹಳ್ಳಿ ಪರಿಸರದಲ್ಲಿ ಹುಟ್ಟಿ ಬೆಳೆದ ಕಾರಣ ಜಾನಪದದ ಸೊಗಡು ನಲ್ಲೂರು ಪ್ರಸಾದ್ ಆರ್.ಕೆ.ಯವರಲ್ಲಿ ರಕ್ತಗತವಾಗಿದೆ. ಜೊತೆಯಲ್ಲಿ ದೊರೆತ ಬೋಧನೆಯ ಅವಕಾಶ ಜಾನಪದ ಜ್ಞಾನಕ್ಕೆ ಇನ್ನಷ್ಟು ಮೆರುಗು ನೀಡಿತು. ಸೃಜನಶೀಲತೆ, ಕ್ರಿಯಾಶೀಲತೆ ಹಾಗೂ ಆಸಕ್ತಿಯಿಂದಾಗಿ ಇವರು ಜಾನಪದ ತಜ್ಞರಾಗಿ, ರಂಗಭೂಮಿ ನಟರಾಗಿ, ಗಾಯಕರಾಗಿ, ಯಶಸ್ವಿ ಸಂಘಟಕರಾಗಿ ಮುನ್ನೆಲೆಗೆ ಬರಲು ಸಹಾಯಕವಾಯಿತು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಲ್ಲೂರಿನಲ್ಲಿ 25 ನವಂಬರ್ 1947ರಲ್ಲಿ ಎಸ್.ಕೆ. ಸಂಜೀವಯ್ಯ ಮತ್ತು ಶಾಂತಮ್ಮ ದಂಪತಿಯ ಸುಪುತ್ರರಾಗಿ ಪ್ರಸಾದ್ ಆರ್.ಕೆ. ಜನಿಸಿದರು. ಶ್ರವಣಬೆಳಗೊಳದ ಕಾಲೇಜಿನಲ್ಲಿ ಪದವಿ, ನಂತರ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರ ಅಧ್ಯಯನ ಇಲ್ಲಿಗೆ ನಿಲ್ಲದೆ, ‘ಕರ್ನಾಟಕದ ಒಕ್ಕಲಿಗರಲ್ಲಿ ಗಂಗಡಿಕಾರರು ಒಂದು ಅಧ್ಯಯನ’ ಎಂಬ ಮಹಾ ಪ್ರಬಂಧ ಮಂಡಿಸಿ, ಬೆಂಗಳೂರು ವಿಶ್ವ ವಿದ್ಯಾನಿಲಯದಿಂದ ಪಿ.ಎಚ್.ಡಿ. ಪದವಿ ಪಡೆದರು 1977ರಿಂದ 2005ರವರೆಗೆ ವಿವಿಧ ಕಾಲೇಜುಗಳಲ್ಲಿ ಅಧ್ಯಾಪನ ವೃತ್ತಿ ಮಾಡಿದ್ದಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನ ಜಾನಪದ ಪ್ರವೇಶ ಮತ್ತು ಪ್ರೌಢ ತರಗತಿಗಳಲ್ಲಿಯೂ ಬೋಧಕರಾಗಿ ಸೇವೆ ಸಲ್ಲಿಸಿದವರು ಇವರು.…

Read More

ಸುಳ್ಯ : ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸ್ವಾಗತ ಸಮಿತಿ 28ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ -2025 ಇದರ ಆಶ್ರಯದಲ್ಲಿ ದಿನಾಂಕ 30 ಡಿಸೆಂಬರ್ 2025ರಂದು ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕದಲ್ಲಿ 28ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈ ಸಮ್ಮೇಳನ ಸಮಾರಂಭದಲ್ಲಿ ನಡೆಯಲಿರುವ ಕವಿಗೋಷ್ಠಿಯಲ್ಲಿ ಭಾಗವಹಿಸುವ ಆಸಕ್ತರು ತಮ್ಮ ಕವನ ಮತ್ತು ಹೆಸರು ಹಾಗೂ ವಿಳಾಸವನ್ನು ಹೆಸರನ್ನು ದಿನಾಂಕ 02 ಡಿಸೆಂಬರ್ 2025ರ ಒಳಗೆ ಅಧ್ಯಕ್ಷರು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು (9448889005) ಇವರಿಗೆ ಕಳುಹಿಸಲು ತಿಳಿಸಿದೆ. ಸುಳ್ಯ ತಾಲೂಕಿನ ಆಯ್ದ ಕವನಗಳನ್ನು ವಾಚನ ಮಾಡಲು ಅವಕಾಶ ನೀಡಲಾಗುವುದು ಎಂದು ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ತಿಳಿಸಿದ್ದಾರೆ.

Read More

ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ಆಶ್ರಯದಲ್ಲಿ ಭಾರತೀಯ ವಿದ್ಯಾಭವನ ಮಂಗಳೂರು ಮತ್ತು ರಾಮಕೃಷ್ಣ ಮಠದ ಸಹಯೋಗದಲ್ಲಿ ದಿನಾಂಕ 28ರಿಂದ 30 ನವೆಂಬರ್ 2025ರವರೆಗೆ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ‘ಮಂಗಳೂರು ಸಂಗೀತೋತ್ಸವ’ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ 28 ನವೆಂಬರ್ 2025ರಂದು ಸಂಜೆ 5-00 ಗಂಟೆಗೆ ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಉದ್ಘಾಟಿಸುವರು. ಸಂಜೆ 5-15ರಿಂದ ಎಸ್.ಕೆ. ಮಹತಿ ವಡೋದರ ಇವರು ಹಾಡುಗಾರಿಕೆ ನಡೆಸಲಿದ್ದಾರೆ. ದಿನಾಂಕ 29 ನವೆಂಬರ್ 2025ರಂದು ಸಂಜೆ 5-00 ಗಂಟೆಗೆ ಜಿ.ಎನ್. ಕೃಷ್ಣಪವನ್ ಕುಮಾ‌ರ್ ಇವರಿಂದ ವೇಣುವಾದನ ನಡೆಯಲಿದೆ. ದಿನಾಂಕ 30 ನವೆಂಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಚೆನ್ನೈಯ ಜನಪ್ರಿಯ ಕಲಾವಿದ ಸಿಕ್ಕಿಲ್ ಗುರುಚರಣ್ ಹಾಡುಗಾರಿಕೆ ಪ್ರಸ್ತುತಪಡಿಸಲಿದ್ದಾರೆ. ಅಪರಾಹ್ನ 2-00 ಗಂಟೆಯಿಂದ ಕುಮಾರಿ ತನ್ಮಯೀ ಉಪ್ಪಂಗಳ…

Read More