Author: roovari

ಮೈಸೂರು : ಅದಮ್ಯ ರಂಗಶಾಲೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪ್ರತಿಭಾವಂತ ಮಕ್ಕಳಿಗೆ ‘ಅದಮ್ಯ ಚಿಗುರು ಪ್ರತಿಭಾ ಚೇತನ’ ಪುರಸ್ಕಾರ ನೀಡಲು ಉದ್ದೇಶಿಸಲಾಗಿದ್ದು, ಅರ್ಹ ಪ್ರತಿಭಾವಂತ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದ್ದಾರೆ. ಜಿಲ್ಲೆಯ ವ್ಯಾಪ್ತಿಯೊಳಗಿನ ಸರಕಾರಿ, ಅನುದಾನಿತ, ಖಾಸಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಎಲ್.ಕೆ.ಜಿ.ಯಿಂದ ಪ್ರಥಮ ಪಿಯುಸಿ ವರೆಗೆ ವ್ಯಾಸಂಗ ಮಾಡುತ್ತಿರುವ ಕಲೆ, ಸಾಹಿತ್ಯ, ಶಿಕ್ಷಣ, ಸಂಗೀತ, ರಂಗಭೂಮಿ, ಕ್ರೀಡೆ, ನೃತ್ಯ, ಜನಪದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಪರಿಚಯ, ಭಾವಚಿತ್ರ, ದೂರವಾಣಿ ಸಂಖ್ಯೆ ಹಾಗೂ ಸಾಧನೆಯ ವಿವರಗಳನ್ನು ಒಳಗೊಂಡ ಅಗತ್ಯ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬಹುದಾಗಿದೆ. ಮಕ್ಕಳ ಅಥವಾ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರು ಈ ಎಲ್ಲ ಅಗತ್ಯ ಮಾಹಿತಿಗಳನ್ನು ಹೊಂದಿರುವ ಅರ್ಜಿಯನ್ನು ಸಿದ್ದಪಡಿಸಿ ದಿನಾಂಕ 24 ನವೆಂಬರ್ 2025ರೊಳಗೆ ತಲುಪುವಂತೆ ಟಿ. ಸತೀಶ್ ಜವರೇಗೌಡ, ಗೌರವ ಕಾರ್ಯದರ್ಶಿ, ಅದಮ್ಯ ರಂಗಶಾಲೆ, ವಿಸ್ಮಯ ಪ್ರಕಾಶನ, ನಂ.442/10,…

Read More

ಶಿವಮೊಗ್ಗ : ಶ್ರೀ ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮಂಡಲಿ ಶ್ರೀ ಕ್ಷೇತ್ರ ಸೋಮವಾರಸಂತೆ ಇದರ 25ನೇ ವರ್ಷದ ಪ್ರದರ್ಶನವನ್ನು ದಿನಾಂಕ 21 ನವೆಂಬರ್ 2025ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಹೆದ್ದೂರು ಹೊಸಳ್ಳಿಯಲ್ಲಿ ನಡೆಯಲಿದೆ. ಯಕ್ಷಗಾನ ಕಲಾ ಪೋಷಕರಾದ ಸತ್ಯ ನಾರಾಯಣ ರಾವ್ ಕೂಳೂರು ಇವರು ಈ ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮಾಡಿ ಉದ್ಘಾಟನೆ ಮಾಡಲಿದ್ದು, ಹೊಸಳ್ಳಿಯ ಶ್ರೀ ಗುತ್ಯಮ್ಮ ದೇವಸ್ಥಾನದ ಅಧ್ಯಕ್ಷರಾದ ಬಿ. ವಿ. ನಾಗರಾಜ ಗೌಡ್ರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಪಾದಕರಾದ ಬಿ. ಗಣಪತಿ, ಕಲಾವಿದರಾದ ಎಂ. ಕೆ. ರಮೇಶ್ ಆಚಾರ್ಯ, ಯಕ್ಷಗಾನ ಭಾಗವತರಾದ ಮಂಜುನಾಥ ಗೌಡ ಮತ್ತು ಮದ್ದಳೆ ವಾದಕರಾದ ಗಣೇಶ್ ಮೂರ್ತಿ ಇವರಿಗೆ ‘ರಜತವರ್ಷ ಯಕ್ಷಾಭಿವಂದನಂ’ ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ‘ಶ್ರೀ ಸೋಮವಾರಸಂತೆ ಕ್ಷೇತ್ರ ಮಹಾತ್ಮೆ’ ಪ್ರಸಂಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

Read More

ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಶಾಖೆ ಮತ್ತು ಆರ್ಟ್ ಕೆನರಾ ಟ್ರಸ್ಟ್ ಇದರ ವತಿಯಿಂದ ‘ವಿಶ್ವ ಪರಂಪರೆ ಸಪ್ತಾಹ’ ಕಾರ್ಯಕ್ರಮವನ್ನು ದಿನಾಂಕ 19 ನವೆಂಬರ್ 2025ರಿಂದ 25 ನವೆಂಬರ್ 2025ರವರೆಗೆ ಪ್ರತಿ ದಿನ ಸಂವಾದ, ಕಾರ್ಯಾಗಾರ ಮತ್ತು ಪ್ರದರ್ಶನದೊಂದಿಗೆ ಮಂಗಳೂರಿನ ಬಲ್ಲಾಳ್ ಭಾಗ್, ಜಿ.ಜಿ. ರೋಡ್, ಕೊಡಿಯಾಲ್ ಗುತ್ತು (ಪಶ್ಚಿಮ), ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 19 ನವೆಂಬರ್ 2025ರಂದು ಸಂಜೆ 5-30 ಗಂಟೆಗೆ ‘ತುಳು ಭಾಷೆ ಬೊಕ್ಕ ಬದ್ಕ್’ ಎಂಬ ವಿಷಯದ ಬಗ್ಗೆ ಡಾ. ಗಣೇಶ್ ಅಮೀನ್ ಸಂಕಮಾರ್ ಮಾತನಾಡಲಿದ್ದಾರೆ. ದಿನಾಂಕ 20 ನವೆಂಬರ್ 2025ರಂದು ಸಂಜೆ 5-30 ಗಂಟೆಗೆ “ಇತಿಹಾಸದಿಂದ ಗುರುತಿಸಲ್ಪಟ್ಟ ಪಶ್ಚಿಮ ಗಂಗಾ ರಾಜವಂಶದ ನಾಣ್ಯಗಳು” ಎಂಬ ವಿಷಯದಲ್ಲಿ ಎಂ. ಪ್ರಶಾಂತ್ ಶೇಟ್ ಉಪನ್ಯಾಸ ನೀಡಲಿದ್ದಾರೆ. ದಿನಾಂಕ 21 ನವೆಂಬರ್ 2025ರಂದು ಸಂಜೆ 5-30 ಗಂಟೆಗೆ ಶ್ರುತಿ ಬಂಗೇರ ಇವರು ‘ಯಕ್ಷಗಾನದಲ್ಲಿ…

Read More

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗ ಮತ್ತು ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ಜಾನಪದ ಸಂಶೋಧಕ, ಲೇಖಕ ಡಾ. ಸುಂದರ ಕೇನಾಜೆ ಸಹಯೋಗದಲ್ಲಿ ರಚಿಸಿದ ಕೃತಿಗಳ ಬಿಡುಗಡೆ ಕಾರ್ಯಕ್ರಮವು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಸಭಾಂಗಣದಲ್ಲಿ ದಿನಾಂಕ 18 ನವೆಂಬರ್ 2025ರಂದು ನಡೆಯಿತು. ಡಾ. ಕೇನಾಜೆ ಹಾಗೂ ಇತರ ಏಳು ಲೇಖಕರನ್ನೊಳಗೊಂಡ ಬೃಹತ್ ಗ್ರಂಥ ‘ನಾವು ಕೂಗುವ ಕೂಗು’ ಅಲ್ಲದೇ ಇತರ ಲೇಖಕರ ‘ಧರೆಗೆ ದೊಡ್ಡವರ ಕಾವ್ಯಗಳ ಏಳು ಪಠ್ಯಗಳು’ ಎಂಬ ಕೃತಿ ಹಾಗೂ ಮೈಸೂರ್ ಗುರುರಾಜ್ ಮತ್ತು ತಂಡದವರು ಇಪ್ಪತ್ತು ಗಂಟೆಗಳ ಕಾಲ ಹಾಡಿದ ಮಂಟೇಸ್ವಾಮಿಯ ದೃಶ್ಯ ಶ್ರಾವ್ಯ ಸರಣಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಇವುಗಳ ಸಂಪಾದನೆಯನ್ನು ಹಿರಿಯ ಜಾನಪದ ವಿದ್ವಾಂಸ ಡಾ. ಕೃಷ್ಣಮೂರ್ತಿ ಹನೂರು ಮಾಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಪ್ಪಡಿ ಕ್ಷೇತ್ರದ ಪೀಠಾಧಿಪತಿ ಎಂ.ಎಲ್. ವರ್ಚಸ್ವಿ ಶ್ರೀಕಂಠ ಸಿದ್ಧಲಿಂಗರಾಜೇ ಅರಸುರವರು ನಡೆಸಿ ಮಾತನಾಡಿದರು. ಕೃತಿಗಳ ಬಿಡುಗಡೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ…

Read More

ಬೆಂಗಳೂರು : ಪ್ರಯೋಗರಂಗ ಬೆಂಗಳೂರು ಇವರು ಪ್ರಸ್ತುತ ಪಡಿಸುವ ‘ಕಾಲಜ್ಞಾನಿ ಕನಕ’ ನಾಟಕ ಪ್ರದರ್ಶನವನ್ನು ದಿನಾಂಕ 21 ನವೆಂಬರ್ 2025ರಂದು ಬೆಂಗಳೂರಿನ ಕೆ.ಜಿ.ಎಫ್. ಬಿ.ಇ.ಎಂ.ಎಲ್. ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕದ ರಚನೆ ಕಿ.ರಂ. ನಾಗರಾಜ ಇವರು ಮಾಡಿದ್ದು, ಸಂಗೀತ ಹೆಚ್.ಕೆ. ಯೋಗಾನರಸಿಂಹ ಮತ್ತು ಸುರೇಶ್ ಆನಗಳ್ಳಿ ಇವರು ನೀಡಿದ್ದು, ಸಿಜಿಕೆ ನಿರ್ದೇಶನ ಮಾಡಿರುತ್ತಾರೆ. ಪ್ರಸ್ತುತ ಟಿ. ರಘು ಇವರು ಮರು ನಿರ್ದೇಶನ ಮಾಡಿದ್ದು, ಡಾ. ಕೆ.ವಿ. ನಾಗರಾಜಮೂರ್ತಿ ಇವರು ನಿರ್ಮಾಣ ಮತ್ತು ನಿರ್ವಹಣೆ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 98451 72822 ಸಂಖ್ಯೆಯನ್ನು ಸಂಪರ್ಕಿಸಿರಿ. ಪ್ರಯೋಗರಂಗದ ಬಗ್ಗೆ : ಪ್ರಯೋಗರಂಗ ನಾಟಕ ತಂಡ ಕಳೆದ 25 ವರ್ಷಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ನಾಟಕ ಪ್ರರ್ದಶಿಸುತ್ತಾ ಬಂದಿದೆ. ‘ಮಂಟೆಸ್ವಾಮಿ ಕಥಾಪ್ರಸಂಗ’, ‘ಮೌನಿ’, ‘ಪ್ರೇತದ್ವೀಪ’, ‘ಮಲ್ಲಮ್ಮನ ಮನೆ ಹೋಟು’, ‘ಬ್ರಹ್ಮಚಾರಿ ಶರಣಾದ’, ‘ಮಹಿಪತ ಕ್ವಾಣನ ತಂಬಿಗಿ ಎಂ.ಎ’, ‘ಜುಮ್ನಾಳ ದೂಳ್ಯನ ಪ್ರಸಂಗ’, ‘ರಾಜಬೇಟೆ’, ‘ಸಂತೆಯಲ್ಲಿ ನಿಂತ ಕಬೀರ’, ‘ಪರಿಹಾರ’, ‘ಜುಗಾರಿ ಕೂಟ’, ‘ಸಿರಿ ಪುರಂದರ’,…

Read More

ಪರ್ಕಳ : ಗುರುವಸಂತಿ ಸಾಂಸ್ಕೃತಿಕ ವೇದಿಕೆ – ಮಣಿಪಾಲ ಇದರ ದಶಮಾನೋತ್ಸವದ ಪ್ರಯುಕ್ತ ನಾಟಕ ರಂಗ ತರಬೇತಿ ಶಿಬಿರವನ್ನು ದಿನಾಂಕ 23 ನವೆಂಬರ್ 2025ರಂದು ಬೆಳಗ್ಗೆ 9-00 ಗಂಟೆಗೆ ಪರ್ಕಳದ ಬಿ.ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9-00 ಗಂಟೆಗೆ ಉದ್ಘಾಟನಾ ಸಮಾರಂಭ ಹಾಗೂ ಸಂಜೆ 5-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಶಿಬಿರವು ಉಚಿತವಾಗಿದ್ದು, 12ರಿಂದ 45ರವರೆಗಿನ ವಯೋಮಿತಿಯವರು ಭಾಗವಹಿಸಬಹುದು.

Read More

ಉಡುಪಿ : ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಕರಕುಶಲ ಅಭಿವೃದ್ಧಿ ಮಂಡಳಿಯ ವತಿಯಿಂದ ಕಾವಿ ಕಲೆಯ ವಿನ್ಯಾಸಗಳ ಅಭಿವೃದ್ಧಿ ಕಾರ್ಯಾಗಾರವು ದಿನಾಂಕ 15 ನವೆಂಬರ್ 2025ರಂದು ಹಾವಂಜೆಯ ಭಾಸ ಗ್ಯಾಲರಿ ಮತ್ತು ಸ್ಟುಡಿಯೋದಲ್ಲಿ ಪ್ರಾರಂಭವಾಯಿತು. ಹಾವಂಜೆ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾದ ಗುರುರಾಜ ಕಾರ್ತಿಬೈಲು ಇವರು ಈ ಕಾರ್ಯಾಗಾರವನ್ನು ಉದ್ಘಾಟನೆಗೊಳಿಸಿ “ಈ ರೀತಿಯ ಕಾರ್ಯಾಗಾರಗಳು ನಮ್ಮ ಹಳ್ಳಿಯಲ್ಲಿ ನಡೆಯುತ್ತಿರುವುದು ನಮಗೊಂದು ಹೆಮ್ಮೆ, ಕಾವಿ ಕಲೆಯನ್ನು ಬೆಳೆಸಿ, ಗ್ರಾಮೋದ್ಯೋಗವನ್ನು ಸೃಜಿಸುವ ಡಾ. ಹಾವಂಜೆಯವರ ಪ್ರಯತ್ನ ಶ್ಲಾಘನೀಯ” ಎಂಬುದಾಗಿ ಹೇಳಿದರು. “ಮಣ್ಣಿನ ಉತ್ಪನ್ನಗಳು, ಬಟ್ಟೆ, ಮರ ಮೊದಲಾದ ವಿವಿಧ ಮಾಧ್ಯಮದಲ್ಲಿ ಕಾವಿ ಕಲೆಯ ವಿನ್ಯಾಸಗಳನ್ನು ಬೆಳೆಸುವ ಈ ಕಾರ್ಯಾಗಾರವು ಸುಮಾರು 25 ದಿನಗಳ ಕಾಲ ನಡೆಯಲಿದ್ದು, ಉಡುಪಿ ಭಾಗದ ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಾಗಾರವು ಕಾವಿ ಕಲೆಯ ವಿನ್ಯಾಸಗಳನ್ನು ಉತ್ತೇಜಿಸುವುದು ಹಾಗೂ ದಿನಬಳಕೆಯ ವಸ್ತುಗಳಲ್ಲಿ ಅದನ್ನು ತರುವ ಪ್ರಯತ್ನ” ಎಂಬುದಾಗಿ ಕಾರ್ಯಾಗಾರದ, ಸಂಪನ್ಮೂಲ ವ್ಯಕ್ತಿ ಹಾಗೂ ಕಾವಿ ಕಲಾವಿದ ಡಾ. ಜನಾರ್ದನ ಹಾವಂಜೆ ತಿಳಿಸಿದರು.…

Read More

ಬೆಂಗಳೂರು : ಪ್ರಸಾರ ಭಾರತಿ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯ ಪ್ರಸ್ತುತ ಪಡಿಸುವ ‘ಆಕಾಶವಾಣಿ ಸಂಗೀತ್ ಸಮ್ಮೇಳನ 2025’ವನ್ನು ದಿನಾಂಕ 22 ನವೆಂಬರ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಇಂದಿರಾ ನಗರ ಸಂಗೀತ ಸಭಾದ ಪುರಂದರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಛೇರಿ 1ರಲ್ಲಿ ಪ್ರಸ್ತುತಗೊಳ್ಳುವ ಶಾಸ್ತ್ರೀಯ ಸಂಗೀತದಲ್ಲಿ ಬೆಂಗಳೂರಿನ ಸಹೋದರರಾದ ಹರಿಹರನ್ ಎಂ.ಬಿ. ಮತ್ತು ಅಶೋಕ್ ಎಸ್. ಇವರಿಂದ ಕರ್ನಾಟಕ ಸಂಗೀತ ಹಾಡುಗಾರಿಕೆಗೆ ವಿದ್ವಾನ್ ಮತ್ತೂರು ಆರ್. ಶ್ರೀನಿಧಿ ಇವರು ಪಿಟೀಲು, ವಿದ್ವಾನ್ ಎಚ್.ಎಸ್. ಸುಧೀಂದ್ರ ಮೃದಂಗ ಮತ್ತು ವಿದ್ವಾನ್ ಗಿರಿಧರ್ ಉಡುಪಿ ಇವರು ಘಟದಲ್ಲಿ ಸಹಕರಿಸಲಿದ್ದಾರೆ. ಕಛೇರಿ 2ರಲ್ಲಿ ಪ್ರಸ್ತುತಗೊಳ್ಳುವ ಸುಗಮ ಸಂಗೀತದಲ್ಲಿ ವಿದುಷಿ ಲಕ್ಷ್ಮೀ ನಾಗರಾಜ್ ಇವರ ಭಾವಗೀತೆ ಗಾಯನಕ್ಕೆ ಕೃಷ್ಣ ಉಡುಪ ಕೀಬೋರ್ಡ್, ಸುನಿಲ್ ಡಿ.ಎ. ಕೊಳಲು, ವಿಕಾಸ್ ನರೇಗಲ್ ತಬಲ ಮತ್ತು ಸಾಯಿ ವಂಶಿ ರಿದಮ್ ಪ್ಯಾಡ್ ನಲ್ಲಿ ಸಹಕರಿಸಲಿದ್ದಾರೆ.

Read More

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಪ್ರಸ್ತುತ ಪಡಿಸುವ ‘ನೃತ್ಯಾಂತರಂಗ 137’ ಕೃಷ್ಣಾನಂದ ಲಹರಿ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 21 ನವೆಂಬರ್ 2025ರಂದು ಸಂಜೆ ಗಂಟೆ 5-45ಕ್ಕೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಧಿಕಾ ಶೆಟ್ಟಿ, ದೀಪಕ್ ಕುಮಾರ್, ಪ್ರೀತಿಕಲಾ, ಮಂಜರಿಚಂದ್ರ ಪುಷ್ಪರಾಜ್ ಮತ್ತು ಅನ್ನಪೂರ್ಣ ರಿತೇಶ್ ಇವರು ನೃತ್ಯ ಪ್ರದರ್ಶನ ನೀಡಲಿದ್ದು, ಶ್ರೀಮತಿ ರತ್ನಾವತಿ ಜೆ. ಬೈಕಾಡಿ ಇವರು ಅಭ್ಯಾಗತರಾಗಿ ಭಾಗವಹಿಸಲಿರುವರು. Namaste Kalarasika’s, we the Mookambikan’s are presenting Krishnaanada Lahari, along with the very talented artists of Mangalore and Udupi, as it is a ticketed show and we have limit for the entries, do book your tickets ASAP. The ticket amount is Rs.200/-per person, you can GPAY the amount and send the…

Read More

ಕಲಬುರಗಿ : ಕರ್ನಾಟಕ ವಿಕಾಸ ರಂಗ ಬೆಂಗಳೂರು ಜಿಲ್ಲಾ ಘಟಕ ಕಲಬುರಗಿ ಇವರ ವತಿಯಿಂದ ಡಾ. ಚಿ.ಸಿ. ನಿಂಗಣ್ಣ ರಚಿಸಿದ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಕೃತಿ ಲೋಕಾರ್ಪಣೆ ಹಾಗೂ ಸಾಧಕರಿಗೆ ‘ಕನ್ನಡ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 21 ನವೆಂಬರ್ 2025ರಂದು ಸಂಜೆ 4-30 ಗಂಟೆಗೆ ಕಲಬುರಗಿ ಮುಖ್ಯ ರಸ್ತೆಯಲ್ಲಿರುವ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆಯಲಿದೆ. ಕಲಬುರಗಿ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ತಿಪ್ಪಣ್ಣಪ್ಪ ಕಮಕನೂರ ಇವರು ಈ ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದು, ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಶಾಸಕರಾದ ಸರೋಯಿ ಬಸವರಾಜ ಮತ್ತಿಮೂಡ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಬಿಜೆಪಿ ಮುಖಂಡರಾದ ಶಿವಕಾಂತ ಮಹಾಜನ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ಸಾಹಿತಿ ಪ್ರೊ. ಶಿವರಾಜ ಪಾಟೀಲ ಇವರು ಕೃತಿ ಕುರಿತು ಮಾತನಾಡಲಿದ್ದಾರೆ. ಕರ್ನಾಟಕ ವಿಕಾಸ ರಂಗ ಇದರ ಅಧ್ಯಕ್ಷರಾದ ಡಾ. ಚಿ.ಸಿ. ನಿಂಗಣ್ಣ ಇವರ ಗೌರವ ಉಪಸ್ಥಿತಿಯಲ್ಲಿ ನಿತೀನ ವ್ಹಿ. ಗುತ್ತೇದಾರ ಇವರು ವಿವಿಧ ಕ್ಷೇತ್ರದ…

Read More