Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಖ್ಯಾತ ‘ಶ್ರದ್ಧಾ ಡ್ಯಾನ್ಸ್ ಸೆಂಟರ್’ ನೃತ್ಯ ಸಂಸ್ಥೆಯ ಬದ್ಧತೆಯ ನೃತ್ಯಗುರು ಮತ್ತು ಉತ್ತಮ ನೃತ್ಯಪಟುವೆಂದು ಹೆಸರಾದ ವಿದುಷಿ ಶಮಾ ಕೃಷ್ಣ ಇವರ ನುರಿತ ಗರಡಿಯಲ್ಲಿ ರೂಪುಗೊಂಡಿರುವ ಕಲಾಶಿಲ್ಪ ಕುಮಾರಿ ವಿದಿತಾ ಎನ್. ಕಳೆದ 6 ವರ್ಷಗಳಿಂದ ಅತ್ಯಾಸಕ್ತಿಯಿಂದ ಭರತನಾಟ್ಯ ಕಲಿಯುತ್ತಿರುವ ವಿದಿತಾ ಬೆಂಗಳೂರಿನ ಶ್ರೀ ನವೀನ್ ಮತ್ತು ಪುಷ್ಪಾ ದಂಪತಿಗಳ ಸುಪುತ್ರಿ. ಎಂಟನೆಯ ತರಗತಿಯಲ್ಲಿ ಓದುತ್ತಿರುವ ಹದಿಮೂರು ವರ್ಷದ ಈ ಬಾಲಪ್ರತಿಭೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತ, ಈಗಾಗಲೇ ಕರ್ನಾಟಕ ಸರ್ಕಾರದ ‘ಜ್ಯೂನಿಯರ್’ ನೃತ್ಯಪರೀಕ್ಷೆಯನ್ನು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾಳೆ. ವಯಸ್ಸಿಗೆ ಮೀರಿದ ಪ್ರತಿಭಾನ್ವಿತಳಾದ ವಿದಿತಾ ನಾಟ್ಯಶಾಸ್ತ್ರದ 108 ‘ಕರಣ’ಗಳನ್ನು ಕಲಿಯುತ್ತಿರುವುದು ನಿಜಕ್ಕೂ ಇವಳ ಅಗ್ಗಳಿಕೆ. ನಾಡಿನಾದ್ಯಂತ ಅನೇಕ ಪ್ರತಿಷ್ಠಿತ ನೃತ್ಯೋತ್ಸವಗಳಲ್ಲಿ, ದೇವಾಲಯಗಳಲ್ಲಿ ನರ್ತಿಸಿರುವ ಇವಳು, ಪಾಶಾತ್ಯ, ಫ್ರೀ ಸ್ಟೈಲ್ ಮತ್ತು ಇನ್ನಿತರ ನೃತ್ಯ ಪ್ರಕಾರಗಳಲ್ಲೂ ಪರಿಶ್ರಮಿಸುತ್ತಿದ್ದಾಳೆ. ಜೀ ಕನ್ನಡ ವಾಹಿನಿಯ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮತ್ತು ತೆಲುಗು ಈ ಟಿವಿಯ ‘ಧೀ’ ಡ್ಯಾನ್ಸ್ ಷೋ ನಲ್ಲಿ ಭಾಗವಹಿಸಿರುವ ವಿದಿತಾ,…
ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ‘ಭಾಗವತರು’ ಸಾಂಸ್ಕೃತಿಕ ಸಂಘಟನೆ ಇದರ ವತಿಯಿಂದ ಸಾಹಿತ್ಯ ಲೋಕದಲ್ಲಿ ಹೆಚ್.ಎಸ್. ಶಿವಪ್ರಕಾಶ್ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ, ಗಾಯನ, ಪುಸ್ತಕ ಬಿಡುಗಡೆ ಮತ್ತು ರಂಗ ಗೌರವ ಕಾರ್ಯಕ್ರಮವನ್ನು ದಿನಾಂಕ 21 ಡಿಸೆಂಬರ್ 2025ರಂದು ಬೆಂಗಳೂರಿನ ಜೆ. ಸಿ ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10-00 ಗಂಟೆಗೆ ಪ್ರಯೋಗ ರಂಗ ತಂಡದವರಿಂದ ಗಾಯನ ಪ್ರಸ್ತುತಿ, 10-30ಕ್ಕೆ ಹಿರಿಯ ಕವಿ ಅನ್ವರ್ ಆಲಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 12-30 ಗಂಟೆಗೆ ನಡೆಯುವ ಗೋಷ್ಠಿ 1ರಲ್ಲಿ ‘ಹೆಚ್.ಎಸ್. ಶಿವಪ್ರಕಾಶ್ – ಬದುಕು ಬರಹ’ದ ಬಗ್ಗೆ ಕವಿ ಸಿರಾಜ್ ಅಹಮ್ಮದ್ ‘ಕಾವ್ಯ’, ಸಂಸ್ಕೃತಿ ಚಿಂತಕರಾದ ಡಾ. ಎಂ.ಎಸ್. ಆಶಾದೇವಿ ‘ಗದ್ಯ’ ಮತ್ತು ಗೋಷ್ಠಿ 2ರಲ್ಲಿ ರಂಗ ನಿರ್ದೇಶಕರಾದ ನಟರಾಜ ಹೊನ್ನವಳ್ಳಿ ಇವರು ‘ನಾಟಕಗಳು’, ಹಿರಿಯ ಸಾಹಿತಿ ಡಾ.…
ಬೆಂಗಳೂರು : ನಾಟಕ ಬೆಂಗ್ಳೂರ್ -26ರ ರಂಗಸಂಭ್ರಮದ ಪ್ರಯುಕ್ತ ‘ಅನೇಕ ಬೆಂಗಳೂರು’ ಅಭಿನಯಿಸುವ ‘ಲೈಟ್ಸ್ ಆಫ್’ ನಾಟಕ ಪ್ರದರ್ಶನವನ್ನು ದಿನಾಂಕ 19 ಡಿಸೆಂಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಪೀಟರ್ ಷಾಫರ್ ಇವರ ಈ ನಾಟಕವನ್ನು ಸುರೇಶ್ ಆನಗಳ್ಳಿಯವರು ಕನ್ನಡ ರೂಪ ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಶಮಂತ್ ಹತ್ವಾರ್, ಮುರುಳಿ ಪೂರ್ವಿಕ್, ರಿತಿ ಶೆಟ್ಟಿ, ಸಿಂಧೂ ಹಂದೆ, ಪ್ರವೀಣ್ ಬಂಗೇರ್, ಪವನ್ ಜಿ.ಎನ್., ಗೃಹಿತ, ರಕ್ಷಿತ್ ಹೆಚ್.ವಿ. ರಂಗದ ಮೇಲೆ ಅಭಿನಯಿಸಲಿದ್ದಾರೆ.
ಉಡುಪಿ : 47ನೆಯ ‘ವಾದಿರಾಜ ಕನಕದಾಸ ಸಂಗೀತೋತ್ಸವ’ ಕಾರ್ಯಕ್ರಮವು ದಿನಾಂಕ 28 ಡಿಸೆಂಬರ್ 2025ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ.ಜಿ.ಎಂ. ಕಾಲೇಜು ಉಡುಪಿ, ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ) ಪರ್ಕಳ ಸಂಸ್ಥೆಗಳು ಸಂಘಟಿಸಿವೆ. ಸಂಗೀತೋತ್ಸವದ ಪ್ರಯುಕ್ತ ಪ್ರಾಥಮಿಕ, ಪ್ರೌಢ, ಕಾಲೇಜು, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ವಾದಿರಾಜ-ಕನಕ ಗಾಯನ ಸ್ಪರ್ಧೆಯನ್ನು ದಿನಾಂಕ 27 ಡಿಸೆಂಬರ್ 2025ರಂದು ಬೆಳಿಗ್ಗೆ 9-00 ಗಂಟೆಗೆ ಸರಿಯಾಗಿ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ರವೀಂದ್ರ ಮಂಟಪದಲ್ಲಿ ನಡೆಸಲಾಗುವುದು. ಸ್ಪರ್ಧಾಳುಗಳು ವಾದಿರಾಜರ ಮತ್ತು ಕನಕದಾಸರ ಎರಡೆರಡು ಕೀರ್ತನೆಗಳನ್ನು ಅಭ್ಯಸಿಸಿದ್ದು, ತೀರ್ಪುಗಾರರು ಕೇಳುವ ಕೀರ್ತನೆಯನ್ನು ಹಾಡಲು ಶಕ್ತರಿರಬೇಕು. ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು ಆಡಳಿತಾಧಿಕಾರಿಗಳು, ಕನಕದಾಸ ಅಧ್ಯಯನ ಸಂಶೋಧನ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ,…
ಮೂಡಬಿದಿರೆ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಧವಳತ್ರಯ ಜೈನಕಾಶಿ ಟ್ರಸ್ಟ್ (ರಿ.) ಶ್ರೀ ಜೈನಮಠ ಮೂಡಬಿದಿರೆ ಮತ್ತು ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಇವರ ಆಶ್ರಯದಲ್ಲಿ ದಿನಾಂಕ 16 ಡಿಸೆಂಬರ್ 2025ರಂದು ಮೂಡಬಿದಿರೆ ಜೈನಮಠದಲ್ಲಿ ಜರಗಿದ ‘ತುಳು ನಾಡು – ನುಡಿಗೆ ಜೈನರ ಕೊಡುಗೆ’ ವಿಚಾರ ಸಂಕಿರಣದ ಅಂಗವಾಗಿ ‘ಮಹಾತ್ಮ’ ನೂತನ ಪ್ರಸಂಗದ ತುಳು ತಾಳಮದ್ದಳೆ ಜರಗಿತು. ಜೈನ ಧರ್ಮದ 16ನೇ ತೀರ್ಥಂಕರ ಶಾಂತಿನಾಥ ಸ್ವಾಮಿಯ ಪ್ರಥಮ ಭವಾಂಕವನ್ನು ಆಧರಿಸಿ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ಕಾರ್ಯದರ್ಶಿ ಮತ್ತು ಯುವ ಪ್ರಸಂಗಕರ್ತೆ ಶುಭಾಶಯ ಇವರು ಬರೆದ ‘ಮಹಾತ್ಮ’ ಪ್ರಸಂಗದ ಮೊದಲ ಪ್ರಯೋಗದಲ್ಲಿ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರು ಭಾಗವಹಿಸಿದರು. ಹೆಸರಾಂತ ತಾಳಮದ್ದಳೆ ಅರ್ಥಧಾರಿಗಳಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ಸತ್ಯಕ – ವಿದ್ಯಾಧರ), ಎಂ.ಕೆ. ರಮೇಶಾಚಾರ್ಯ (ಸತ್ಯಭಾಮೆ), ಡಾ. ತಾರಾನಾಥ ವರ್ಕಾಡಿ (ಧರಣೀಜಟ), ರಾಧಾಕೃಷ್ಣ ಕಲ್ಚಾರ್ (ಕಪಿಲ), ಸದಾಶಿವ ಆಳ್ವ ತಲಪಾಡಿ (ಶ್ರೀಷೇಣ ರಾಜ) ಮತ್ತು ಡಾ. ಶ್ರುತಕೀರ್ತಿ ರಾಜ್…
ಉಡುಪಿ : ಯಕ್ಷಗಾನ ಕಲಾರಂಗವು ಪ್ರತೀವರ್ಷ ವೃತ್ತಿ ಕಲಾವಿದರಾದ 1300 ಯಕ್ಷನಿಧಿ ಸದಸ್ಯರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನೊಳಗೊಂಡ ಡೈರಿಯನ್ನು ಪ್ರಕಟಿಸುತ್ತಿದ್ದು, 2026ರ ಯಕ್ಷನಿಧಿ ಡೈರಿಯನ್ನು ದಿನಾಂಕ 17 ಡಿಸೆಂಬರ್ 2025ರಂದು ಬಾರ್ಕೂರು ಬಳಿಯ ಬೆಣ್ಣೆಕುದುರು ಕುಲಮಹಾ ಸ್ತ್ರೀ ದೇವಳದಲ್ಲಿ ಅಮೃತೇಶ್ವರೀ ಮೇಳದ ಸಂಚಾಲಕರೂ, ಗೀತಾನಂದ ಫೌಂಡೇಶನ್ ಅಧ್ಯಕ್ಷರೂ ಆದ ಆನಂದ ಸಿ. ಕುಂದರ್ ಇವರು ಬಿಡುಗಡೆಗೊಳಿಸಿ, ಸಂಸ್ಥೆಯ ನಿರಂತರ ಕಾರ್ಯ ಚಟುವಟಿಕೆಗಳು ಬೆರಗುಂಟುಮಾಡುವಂತದ್ದು, ಕಲಾರಂಗಕ್ಕೆ ಶ್ರೇಯಸ್ಸಾಗಲೆಂದು ಶುಭ ಹಾರೈಸಿದರು. ವೃತ್ತಿ ಮೇಳದ ಕಲಾವಿದರಿಗೆ ಕಳೆದ ಎರಡು ದಶಕಗಳಿಂದ ಕೆನರಾ ಬಸ್ ಮಾಲಕರ ಸಂಘವು ನೀಡುತ್ತಾ ಬಂದ 50% ರಿಯಾಯತಿಯ ಬಸ್ ಪಾಸನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಕುಯಿಲಾಡಿ ಸುರೇಶ್ ನಾಯಕ್ ಇವರು ವಿವಿಧ ಮೇಳಗಳ ಪ್ರತಿನಿಧಿಗಳಿಗೆ ವಿತರಿಸಿದರು. 10 ತಿಂಗಳ ಅವಧಿಯ ಬಸ್ ಪಾಸ್ ಸೌಲಭ್ಯವನ್ನು ಮುಂದೆ ಸಂಘದ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರದೊಂದಿಗೆ ಒಂದು ವರ್ಷಕ್ಕೆ ವಿಸ್ತರಿಸುವ ಯೋಚನೆ ಇದೆ ಎಂಬುದಾಗಿ ಈ ಸಂದರ್ಭದಲ್ಲಿ ಸುರೇಶ್ ನಾಯಕರು ನುಡಿದರು.…
ಒಂದೇ ವೇದಿಕೆಯ ಮೇಲೆ ನೂರಾರು ಬಣ್ಣಗಳ ಕಾರಂಜಿಗಳು ಪುಟಿದ ರೋಮಾಂಚಕ ಅನುಭವ. ಕಣ್ತುಂಬಿದ ಬಣ್ಣಗಳ ಓಕುಳಿ. ಉದಯೋನ್ಮುಖ ನೃತ್ಯ ಕಲಾವಿದರ ಚೈತನ್ಯ ಸಮಾಗಮ. ಒಂದು ಗಳಿಗೆಯೂ ಬಿಡುವು ಕೊಡದೆ ರಂಗದ ಮೇಲಿನ ನವಿಲಂಥ ಚೆಲುವೆಯರು, ಗರಿಬಿಚ್ಚಿ ನಲಿದ ಸಂಭ್ರಮ ‘ನೃತ್ಯ ದರ್ಪಣ್’ದ ‘ತಾಳ್ ತರಂಗ್’ ದ ವೈಶಿಷ್ಟ್ಯ. ಇವೆಲ್ಲ ಸಾಕ್ಷಾತ್ಕರವಾದದ್ದು ಬೆಂಗಳೂರಿನ ‘ನೃತ್ಯ ದರ್ಪಣ್’ ಅಕಾಡೆಮಿಯ ಆರ್ಟಿಸ್ತಿಕ್ ಡೈರೆಕ್ಟರ್ ಪಾದರಸ ವ್ಯಕ್ತಿತ್ವದ ವಿದುಷಿ ವೀಣಾ ಭಟ್ ಇವರ ವಿಶಿಷ್ಟ ಪರಿಕಲ್ಪನೆಯ ಸಮರ್ಥ ಕಾರ್ಯಕ್ಷಮತೆಯಿಂದ. ವರ್ಷ ಪೂರ್ತಿ ನಿರಂತರ ಸಕ್ರಿಯರಾಗಿರುವ ಪ್ರಯೋಗಶೀಲ ಕಥಕ್ ನೃತ್ಯಗಾರ್ತಿ ವೀಣಾ ಆರ್. ಭಟ್ ಕಳೆದ ಒಂದೂವರೆ ದಶಕಕ್ಕೂ ಹೆಚ್ಚಿನ ಕಾಲದಿಂದ ‘ನೃತ್ಯದರ್ಪಣ್’ -ಕಥಕ್ ನೃತ್ಯಶಾಲೆಯನ್ನು ಉತ್ತಮ ಗುರುವಾಗಿ, ಮುನ್ನಡೆಸುತ್ತ ತಮ್ಮ ವರ್ಣರಂಜಿತ ಕಾರ್ಯಕ್ರಮಗಳಿಗೆ ಅತ್ಯಂತ ಜನಪ್ರಿಯತೆ ಪಡೆದಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ಕಥಕ್ ನೃತ್ಯದ ಶಿಕ್ಷಣ ನೀಡುತ್ತ ಮಾರ್ಗದರ್ಶಕರಾಗಿ ಯಶಸ್ವಿಯಾಗಿ ಅನೇಕ ಸಮ್ಮೋಹಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಅವರ ಅಸ್ಮಿತೆ. ಇತ್ತೀಚೆಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ‘ತಾಳ್ ತರಂಗ್’ ವೀಕ್ಷಿಸಲು…
ಉಡುಪಿ : ರಂಗಭೂಮಿ ಉಡುಪಿ ಆಶ್ರಯದಲ್ಲಿ ಕಿನ್ನರ ಮೇಳ ತುಮರಿ ಪ್ರಸ್ತುತಿಯಲ್ಲಿ ರಥಬೀದಿಯ ಪೇಜಾವರ ಮಠದ ಮುಂಭಾಗದಲ್ಲಿ ದಿನಾಂಕ 14 ಡಿಸೆಂಬರ್ 2025ರಂದು ಡಾ. ಚಂದ್ರಶೇಖರ ಕಂಬಾರರು ರಚಿಸಿದ ಮೂರು ಕಥೆಗಳನ್ನು ಆಧಾರಿಸಿದ ‘ಮರವೇ ಮರ್ಮರವೇ!’ ಬೀದಿ ನಾಟಕದ ಪ್ರಥಮ ಪ್ರದರ್ಶನ ಹಾಗೂ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಮಾತನಾಡಿ “ನಮ್ಮ ಸಮಾಜ, ಜನ ಸಾಮಾನ್ಯರು ಬದುಕಿನಲ್ಲಿ ಎದುರಿಸುತ್ತಿರುವ ಬವಣೆಗಳು, ಸಾಮಾಜಿಕ ಸಂಘರ್ಷಗಳ ಬಗ್ಗೆ ಬೀದಿ ನಾಟಕಗಳು ಬೆಳಕು ಚೆಲ್ಲಿ ಜಾಗೃತಿಯನ್ನುಂಟು ಮಾಡುವ ಕಾರ್ಯ ಮಾಡುತ್ತಿವೆ. 60 ಸಂವತ್ಸರಗಳನ್ನು ಕಂಡಿರುವ ರಂಗಭೂಮಿ ಉಡುಪಿ ವತಿಯಿಂದ ಸಾಮಾಜಿಕ ಜಾಗೃತಿ, ಸಂದೇಶವನ್ನು ಸಾರುವ ಬೀದಿ ನಾಟಕಗಳನ್ನು ಮಾಡಿಸಿಕೊಂಡು ಬರುತ್ತಿದ್ದು, ಇತ್ತೀಚಿಗೆ ಕೋವಿಡ್ ಕಾಲದಲ್ಲಿ ನಡೆದಿರಲಿಲ್ಲ. ಇದೀಗ ಮತ್ತೆ ಈ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, ಇದರಲ್ಲಿ ಡಾ. ಚಂದ್ರಶೇಖರ ಕಂಬಾರರು ರಚಿಸಿದ ಮೂರು ಕಥೆಗಳನ್ನು ಆಧಾರಿಸಿದ ‘ಮರವೇ ಮರ್ಮವರವೇ !’ ನಾಟಕವನ್ನು ತುಮರಿಯ…
ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ಶ್ರೀ ರಾಮಾಶ್ರಮ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕೊಂಚಾಡಿ ಇವರ ಜಂಟಿ ಆಶ್ರಯದಲ್ಲಿ 115ನೇಯ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ವು ದಿನಾಂಕ 17 ಡಿಸೆಂಬರ್ 2025ರಂದು ಶಾಲೆಯ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಬಾಲಚಂದ್ರ ಕೆ. ವಹಿಸಿದ್ದರು. ಮುಖ್ಯ ಸಂಪನ್ಮೂಲ ಅತಿಥಿಯಾಗಿ ನಿವೃತ್ತ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಉದಯರಾಜ್ ಮಾತನಾಡುತ್ತಾ “ಮಕ್ಕಳು ದಿನನಿತ್ಯ ದಿನಚರಿ ಡೈರಿ ಬರೆಯುವ ಹವ್ಯಾಸವನ್ನು ಹೊಂದಿರಬೇಕು. ಮೊದಲು ತಮ್ಮನ್ನು ತಾನು ಪ್ರೀತಿಸಬೇಕು. ಮುಂದೆ ಉತ್ತಮ ಪ್ರಜೆಯಾಗಿ ಬಾಳಬೇಕು. ತಮ್ಮ ಹೆತ್ತವರು ಹಾಗೂ ಗುರುಗಳಿಗೆ ಕೃತಜ್ಞತೆಗಳನ್ನು ನಿತ್ಯವೂ ಸಲ್ಲಿಸಬೇಕು. ಪ್ರತಿನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು” ಎಂದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಬೆನೆಟ್ ಜೆ. ಅಮ್ಮನ್ನ ಹಾಗೂ ತುಳು ಪರಿಷತ್ ಮಂಗಳೂರು ಅಧ್ಯಕ್ಷರಾದ ಶುಭೋದಯ ಆಳ್ವ, ಸಂಸ್ಥೆಯ ಆಡಳಿತ ಅಧಿಕಾರಿ ಡಾ. ರಾಜೇಶ್ ಕದ್ರಿ, ಅಮೃತ ಪ್ರಕಾಶ…
ಕನ್ನಡ ಸಾಹಿತ್ಯವು ನವ್ಯೋತ್ತರಕ್ಕೆ ಹೊರಳಿದ ಸಂದರ್ಭದಲ್ಲಿ ಪ್ರಕಟವಾದ ‘ತಂದೆ ಬದುಕು ಗುಲಾಬಿ’ (1988)ಯು ಕಾವ್ಯದ ಸೂಕ್ಷ್ಮತೆಗಳನ್ನು ಮೈಗೂಡಿಸಿಕೊಂಡು ಮೈವಡೆದಿದ್ದು, ಆತ್ಮಶೋಧನೆಯೆಡೆಗೆ ಗಮನವನ್ನು ಹರಿಸಿವೆ. ದಲಿತ ಬಂಡಾಯ ಪಂಥದ ಕೃತಿಗಳಲ್ಲಿ ಕಾಣಿಸುವ ಸಿಟ್ಟು ಅಬ್ಬರಗಳ ಬದಲಾಗಿ ಮಾರ್ದವತೆಯು ಆವರಿಸಿಕೊಂಡಿದೆ. ಸಂಕಲನದ ಶೀರ್ಷಿಕೆಯು ಎದುರಾದ ಅಡ್ಡಿ ಆತಂಕ ಮತ್ತು ತಲ್ಲಣಗಳಿಗೆದುರಾಗಿ ಬದುಕಿಗೆ ಪ್ರೀತಿ ಮತ್ತು ಮೃದುತ್ವವನ್ನು ತಂದು ಕೊಟ್ಟ ಘಟಕಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ಮಾನವೀಯ ಸಂಬಂಧಗಳು ಶಿಥಿಲವೂ ಅಪರಿಚಿತವೂ ಆಗುತ್ತಿರುವ ಈ ಹೊತ್ತಿನಲ್ಲಿ ಪ್ರೀತಿಯ ದನಿಗಳು ಅನಿವಾರ್ಯವೂ ಅಪೇಕ್ಷಣೀಯವೂ ಆಗಿವೆ. ಸರಕು ಸಂಸ್ಕೃತಿಯ ಭೌತಿಕ ಸಂಪನ್ನತೆ, ಬೌದ್ಧಿಕ ಹೆಚ್ಚುಗಾರಿಕೆ, ಶುಷ್ಕ ತತ್ವೋಪದೇಶಗಳು ಬದುಕನ್ನು ಆರ್ದಗೊಳಿಸಲಾರವು. ಪ್ರೀತಿ ಎಂಬ ಎರಡಕ್ಷರಗಳೇ ಬದುಕಿನ ತಾರಕ ಮಂತ್ರ ಎನಿಸಬಲ್ಲವು. ಪ್ರೀತಿಯ ತುಡಿತವನ್ನು ಹೊಂದಿದ ಸಾಹಿತ್ಯ ಸದಾ ಜೀವಂತವಾಗಿರುತ್ತದೆ ಎಂಬುದಕ್ಕೆ ಈ ಸಂಕಲನವು ಸಾಕ್ಷಿಯಾಗಿದೆ. ಉಪದೇಶ, ಭಾಷಣ, ಘೋಷಣೆಗಳಿಂದ ಕೂಡಿದ ರಚನೆಗಳು ಇಲ್ಲಿದ್ದರೂ ಅವುಗಳಿಂದ ಹೊರತಾದ ಅಪ್ಪಟ ಕವಿತೆಗಳು ನಳನಳಿಸುತ್ತವೆ. ಈ ಸಂಕಲನಕ್ಕೆ ಮುನ್ನುಡಿಯನ್ನು ಬರೆದ ಪು.ತಿ. ನರಸಿಂಹಾಚಾರ್…