Author: roovari

ಬೆಂಗಳೂರಿನಲ್ಲಿ ಹುಟ್ಟಿದ ಸುಪ್ರಸಿದ್ಧ ಪಿಟೀಲು ವಾದಕರಾದ ವೀರಭದ್ರಯ್ಯನವರು ಸಂಗೀತದ ವಾತಾವರಣದಲ್ಲಿಯೇ ಬೆಳೆದರು. ತಂದೆ ಹಾರ್ಮೋನಿಯಂ ವಿದ್ವಾನ್ ಎಂ ಅರುಣಾಚಲಪ್ಪ, ತಾಯಿ ಅನ್ನಪೂರ್ಣಮ್ಮ. 4 ಡಿಸೆಂಬರ್ 1923ರಲ್ಲಿ ಜನಿಸಿದ ಇವರು ಎಳವೆಯಲ್ಲಿ ತಂದೆಯಿಂದಲೇ ಪಿಟೀಲು ಶಿಕ್ಷಣವನ್ನು ಪಡೆದರು. ಪ್ರೌಢ ಶಿಕ್ಷಣವನ್ನು ನೀಡಿದವರು ಎಲ್.ಎಸ್‌ ನಾರಾಯಣಸ್ವಾಮಿ ಭಾಗವತರು. “ಗಾನ ಸುಧಾಕರ ಖ್ಯಾತಿಯ” ಎ. ಸುಬ್ಬರಾಯರ ಕಚೇರಿಗಳಿಗೆ 40 ವರ್ಷಗಳ ಕಾಲ ನಿರಂತರವಾಗಿ ಪಕ್ಕ ವಾದ್ಯ ನುಡಿಸಿದ ದಾಖಲೆ ಇವರದು. ಏಕವ್ಯಕ್ತಿ ಪಿಟೀಲು ವಾದನ ಕಚೇರಿ ಮಾತ್ರವಲ್ಲದೆ, ಪ್ರತಿಷ್ಠಿತ ವೇದಿಕೆಗಳಲ್ಲಿ ಘನವೆತ್ತ ವಿದ್ವಾಂಸರಿಗೆ ಹಿನ್ನೆಲೆ ನೀಡಿದ ಖ್ಯಾತರು. “ಅರುಣಾ ಮ್ಯೂಸಿಕಲ್” ಸ್ಥಾಪಿಸುವ ಮೂಲಕ ವೀಣೆ ಮತ್ತು ತಂಬೂರಿ ತಯಾರಿಕಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು. “ಕರ್ನಾಟಕ ಗಾನ ಕಲಾ ಪರಿಷತ್ತು”ಇದರ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ ಸಮರ್ಥವಾಗಿ ನಡೆಸಿಕೊಂಡು ಬಂದವರು. ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ವಿಜಯ ಸಂಗೀತ ಮಹಾ ವಿದ್ಯಾಲಯದ ಸ್ಥಾಪಕ ಸದಸ್ಯರಾಗಿ, ” ವಾಣಿ ಸಂಗೀತ ವಿದ್ಯಾಲಯ” ಮತ್ತು “ಕೃಷ್ಣ ಸಂಗೀತ ಸಭೆ”ಯ…

Read More

ಉಡುಪಿ : ಕನ್ನಡದ ಡಿಜಿಟಲ್ ಯುಗಕ್ಕೆ ಕೀಲಿಮಣೆ ಮೂಲಕ ಹೊಸ ದಾರಿ ತೋರಿದ ಕಂಪ್ಯೂಟರ್ ಕೀಲಿಮಣೆ ವಿನ್ಯಾಸಗಾರ ಪ್ರೊ. ಕೆ.ಪಿ. ರಾವ್ ಇವರನ್ನು ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಆಯ್ಕೆ ಸಮಿತಿ ವಿದ್ವಾಂಸರಾದ ಎಚ್.ವಿ. ನಾಗರಾಜ ರಾವ್, ಉಮಾಕಾಂತ ಭಟ್, ಮಲ್ಲೇಪುರಂ ಜಿ. ವೆಂಕಟೇಶ್ ಸರ್ವಾನುಮತದ ಆಯ್ಕೆಯನ್ನು ಸೂಚಿಸಿದ್ದಾರೆ ಎಂದು ಟ್ರಸ್ಟ್ ವಿಶ್ವಸ್ಥೆ ವೀಣಾ ಬನ್ನಂಜೆ ತಿಳಿಸಿದ್ದಾರೆ. ಬನ್ನಂಜೆ ಗೋವಿಂದಾಚಾರ್ಯರ ಪುಣ್ಯ ಸ್ಮರಣೆಯ ಪ್ರಯುಕ್ತ ದಿನಾಂಕ 13 ಡಿಸೆಂಬರ್ 2025ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಪುರಸ್ಕಾರ ಗೌರವ ಫಲಕ, ಪ್ರಶಸ್ತಿ ಪತ್ರ ಮತ್ತು 25,000 ಗೌರವ ಧನ ಸಹಿತವಾಗಿ ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದರು ಪ್ರದಾನ ಮಾಡುವರು. ಯುವ ವಿದ್ವಾಂಸ ವಿನಯ ವಾರಣಾಸಿ ಇವರು ‘ಗೋವಿಂದ ನಾಮ ಜಿಜ್ಞಾಸೆ’ ವಿಷಯವಾಗಿ ಉಪನ್ಯಾಸ ನೀಡುವರು.

Read More

ಬಂಟ್ವಾಳ : ವಿದುಷಿ ವಿದ್ಯಾ ಮನೋಜ್ ನಿರ್ದೇಶನದ ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಭರತನಾಟ್ಯ ಸಂಸ್ಥೆಯ 25ನೇ ವರ್ಷದ ಅಂಗವಾಗಿ ರಜತ ಕಲಾಯಾನ ಸರಣಿ ಕಾರ್ಯಕ್ರಮದ ಪ್ರಯುಕ್ತ ‘ಭಾವಾಭಿವ್ಯಕ್ತಿ’ ಭರತನಾಟ್ಯ ಕಾರ್ಯಕ್ರಮ ಕಲ್ಲಡ್ಕದ ಕಲಾನಿಕೇತನದಲ್ಲಿ ದಿನಾಂಕ 28 ನವೆಂಬರ್ 2025ರಂದು ಆರಂಭಗೊಂಡಿದ್ದು, ಖ್ಯಾತ ನೃತ್ಯ ಗುರುಗಳಾದ ವಿದುಷಿ ಶೀಲ ಚಂದ್ರಶೇಖರ್ ಹಾಗೂ ದೀಪ್ತಿ ರಾಧಾಕೃಷ್ಣ ಇವರ ಭರತನಾಟ್ಯ ಕಾರ್ಯಕ್ರಮ ಸಂಸ್ಥೆಯ ವಿದ್ಯಾರ್ಥಿಗಳನ್ನು ಹಾಗೂ ನೆರೆದ ಪ್ರೇಕ್ಷಕ ವರ್ಗವನ್ನು ಮಂತ್ರಮುಗ್ಧಗೊಳಿಸಿತು. ಭಾನುಮತಿ ನೃತ್ಯ ಕಲಾಮಂದಿರಂ ಇದರ ನಿರ್ದೇಶಕಿ ಮತ್ತು ಜೈನ್ (ಡಿಮ್ಸ್ ಟು ಬಿ) ಯೂನಿವರ್ಸಿಟಿ ಬೆಂಗಳೂರು ಇದರ ಅತಿಥಿ ಉಪನ್ಯಾಸಕಿ ಗುರು ವಿದುಷಿ ಶೀಲಾ ಚಂದ್ರಶೇಖರ್ ಹಾಗೂ ಭಾನುಮತಿ ನೃತ್ಯ ಕಲಾಮಂದಿರಂ ಶಿಷ್ಯ ಹಾಗೂ ಜೈನ್ (ಡಿಮ್ಸ್ ಟು ಬಿ) ಯೂನಿವರ್ಸಿಟಿ ಬೆಂಗಳೂರು ಇಲ್ಲಿನ ಸಂಶೋಧಕಿ ಮತ್ತು ಉಪನ್ಯಾಸಕಿ ದೀಪ್ತಿ ರಾಧಾಕೃಷ್ಣ ಇವರಿಂದ ಭರತನಾಟ್ಯ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಮೊದಲ ದಿನ ಇಬ್ಬರ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಖ್ಯಾತ ನೃತ್ಯ ಪಟುಗಳ ನಾಟ್ಯ,…

Read More

ಕಾಸರಗೋಡು : ಖ್ಯಾತ ಸಾಹಿತಿ ಡಾ. ಪ್ರಭಾಕರ ಶಿಶಿಲ ಇವರ ಎರಡು ಕೃತಿಗಳನ್ನು ಕೇಂದ್ರ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ.ವಿ. ಕುಮಾರನ್ ಮಾಸ್ತರ್ ಮಲೆಯಾಳಕ್ಕೆ ಅನುವಾದಿಸಿದ್ದು, ಅದರ ಬಿಡುಗಡೆ ಸಮಾರಂಭವು ದಿನಾಂಕ 27 ಡಿಸೆಂಬರ್ 2025ರಂದು ಪಿಲಿಕುಂಜೆ ಜಿಲ್ಲಾ ಲೈಬ್ರರಿ ಸಭಾಂಗಣದಲ್ಲಿ ಜರಗಿತು. ಸಮಾರಂಭವನ್ನು ಉದ್ಘಾಟಿಸಿದ ಲೈಬ್ರರಿ ಕೌನ್ಸಿಲ್ ಮುಖಂಡ ಪಿ.ವಿ.ಕೆ. ಪನಯಾಲ್ ಮಾತನಾಡಿ, “ಸಾಹಿತ್ಯ ಕೃತಿಗಳ ಭಾಷಾಂತರ ಕೇವಲ ರಸಾಸ್ವಾದನೆಯ ಉದ್ದೇಶವಷ್ಟೇ ಅಲ್ಲದೆ ಸಾಂಸ್ಕೃತಿಕ, ಸಾಮಾಜಿಕ ಸಹಿತ ವಿವಿಧ ಆಯಾಮಗಳ ವಿನಿಮಯವಾಗಿ ಮಹತ್ವಿಕೆಯನ್ನು ಹೊಂದಿದೆ. ಡಾ. ಶಿಶಿಲರ ವಿಶಿಷ್ಟ ಓದಿನ ಕೃತಿಗಳೆಲ್ಲ ವಿವಿಧ ಭಾಷೆಗೆ ಇನ್ನಷ್ಟು ಭಾಷಾಂತರಗೊಳ್ಳಬೇಕು” ಎಂದರು. ಪಿ.ದಾಮೋದರನ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕದಲ್ಲಿ ಕೃಷಿಕರ ಹೋರಾಟ ಪುಸ್ತಕವನ್ನು ಡಾ. ಸಿ. ಬಾಲನ್ ಹಾಗೂ ‘ಚಿತಾಗ್ನಿ’ ಕೃತಿಯನ್ನು ಡಾ. ರಾಧಾಕೃಷ್ಣ ಬೆಳ್ಳೂರು ಬಿಡುಗಡೆಗೊಳಿಸಿದರು. ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಮತ್ತು ಸಾಹಿತಿ ರವೀಂದ್ರನ್ ಪಾಡಿ ಮೊದಲ ಪ್ರತಿಗಳನ್ನು ಸ್ವೀಕರಿಸಿದರು. ಕೃತಿಕರ್ತ ಡಾ. ಪ್ರಭಾಕರ ಶಿಶಿಲ, ಅನುವಾದಕ…

Read More

ಶಿವಮೊಗ್ಗ : ಛಾಯಾಗ್ರಹಣ ತರಬೇತಿ ಕ್ಷೇತ್ರದಲ್ಲಿ 25 ವರ್ಷಗಳಿಂದ ಕಾರ್ಯನಿರತವಾಗಿರುವ ಸಾಗರ ಪಟ್ಟಣದ ಸಾಗರ ಫೋಟೋಗ್ರಫಿಕ್ ಸೊಸೈಟಿಯು ಹೆಗ್ಗೋಡಿನ ನೀನಾಸಂ ಸಂಸ್ಥೆಯ ಸಹಯೋಗದಲ್ಲಿ ಹೆಗ್ಗೋಡಿನಲ್ಲಿ ದಿನಾಂಕ 25ರಿಂದ 28 ಡಿಸೆಂಬರ್ 2025ರವರೆಗೆ ರಾಜ್ಯ ಮಟ್ಟದ ಛಾಯಾಗ್ರಹಣ ಕಾರ್ಯಾಗಾರ ಆಯೋಜಿಸಿದೆ. ಹಿರಿಯ ಛಾಯಾಗ್ರಹಣ ಪರಿಣತರು ಈ ಶಿಬಿರದಲ್ಲಿ ಉಪನ್ಯಾಸ ನೀಡಲಿದ್ದು, ಛಾಯಾಗ್ರಹಣ ಕಲೆಯ ಕುರಿತು ವ್ಯಾಪಕವಾದ ತರಬೇತಿ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಶುಲ್ಕ ರಿಯಾಯಿತಿ ಇದೆ. ಸೀಮಿತ ವಸತಿಯ ಅವಕಾಶದ ಕಾರಣದಿಂದಾಗಿ ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು ಎಂದು ಸೊಸೈಟಿಯ ಸಹ ಕಾರ್ಯದರ್ಶಿ ಜಿ.ಆರ್ . ಪಂಡಿತ್ ತಿಳಿಸಿದ್ದಾರೆ. ಫೋಟೋಗ್ರಫಿಯಲ್ಲಿ ಆಸಕ್ತಿಯುಳ್ಳವರು ಮೊಬೈಲ್ ನಂ. 94486 27878ಗೆ ಸಂಪರ್ಕಿಸಬಹುದು.

Read More

ವಿಜಯಪುರ : ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ ನೀಡುವ ಹಸ್ತಪ್ರತಿ ಪ್ರಶಸ್ತಿ, ಸೃಜನಶೀಲ ಸಾಹಿತ್ಯ ಪ್ರಶಸ್ತಿ, ಸೃಜನೇತರ ವಿಭಾಗದ ಪ್ರಶಸ್ತಿಗಳನ್ನು ಪ್ರಕಟಿಸಿದೆ. ರಾಜ್ಯಮಟ್ಟದ 2025ನೇ ಸಾಲಿನ ‘ಪ್ರೊ. ಎಚ್.ಟಿ. ಪೋತೆ ಹಸ್ತಪ್ರತಿ ಪ್ರಶಸ್ತಿ’ಗೆ ಸಿಂದಗಿಯ ದೇವೂ ಮಾಕೊಂಡ ಇವರ ‘ಯುದ್ಧ ಮೃದಂಗ’ ಅನುವಾದಿತ ಸಂಕಲನ ಆಯ್ಕೆಯಾಗಿದೆ. ‘ಪ್ರೊ. ಎಚ್.ಟಿ. ಪೋತೆ ಸೃಜನಶೀಲ ಸಾಹಿತ್ಯ ಪ್ರಶಸ್ತಿ’ಗೆ ಬೆಂಗಳೂರಿನ ಡಾ. ಪದ್ಮನಿ ನಾಗರಾಜು ಇವರ ‘ಸಮುದ್ರದ ತೆರೆಯ ಸರಿಸಿ’ ಕಥಾ ಸಂಕಲನ ಮತ್ತು ವಿಜಯಪುರದ ಡಾ. ಸುಜಾತ ಚಲವಾದಿ ಇವರ ‘ಲಚಮವ್ವ ಮತ್ತು ಇತರ ಕತೆಗಳು’ ಆಯ್ಕೆಯಾಗಿವೆ. ದಿ. ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ 2024ರ ಸಾಲಿನ ಸೃಜನೇತರ ವಿಭಾಗದ ಪುಸ್ತಕ ಪ್ರಶಸ್ತಿಗೆ ಬಾಗಲಕೋಟೆಯ ಮಹಾದೇವ ಬಸರಕೋಡ ಇವರ ‘ಸುರಧೇನು’ ಮತ್ತು ತುಮಕೂರಿನ ಅನಂತ ಕುಣಿಗಲ್ ಇವರ ‘ಅಪ್ಪನ ಆಟೋಗ್ರಾಫ್’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬೆರಗು ಪ್ರಕಾಶನ ಸಂಸ್ಥೆ ಅಧ್ಯಕ್ಷೆ ವಿಜಯಲಕ್ಷ್ಮಿ ಆರ್. ಕತ್ತಿ ಹೇಳಿದ್ದಾರೆ. ಹಸ್ತಪ್ರತಿ ಪ್ರಶಸ್ತಿ ರೂ.ಹತ್ತು ಸಾವಿರ…

Read More

ಶಿವಮೊಗ್ಗ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಂಗಾಯಣ ಶಿವಮೊಗ್ಗ ಇವರ ಜಂಟಿ ಆಶ್ರಯದಲ್ಲಿ ರಂಗಾಯಣ ಶಿವಮೊಗ್ಗದ ರೆಪರ್ಟರಿ ಕಲಾವಿದರು ಅಭಿನಯಿಸುವ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನವನ್ನು ದಿನಾಂಕ 05 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ಶಿವಮೊಗ್ಗದ ರಂಗಾಯಣ ಸುವರ್ಣ ಸಂಸ್ಕೃತಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಡಿ.ಎಸ್. ಚೌಗಲೆ ಇವರು ರಚಿಸಿರುವ ಈ ನಾಟಕವನ್ನು ಚಿದಂಬರ ರಾವ್ ಜಂಬೆ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.

Read More

ಮಂಗಳೂರು : ಯಕ್ಷ ಪ್ರತಿಭೆ (ರಿ.) ಮತ್ತು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿ ವತಿಯಿಂದ ಸಾಧಕರ ಅಭಿನಂದನಾ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 29 ನವೆಂಬರ್ 2025ರಂದು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಪಾವಂಜೆ ಮೇಳದ ಬಯಲಾಟದ ವೇದಿಕೆಯಲ್ಲಿ ನಡೆಯಿತು. ಪ್ರಶಸ್ತಿ ಪ್ರಧಾನ ನೆರವೇರಿಸಿ ಆಶೀರ್ವಚನ ನೀಡಿದ ಕಟೀಲಿನ ಪ್ರಧಾನ ಅರ್ಚಕ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ “ಕಳೆದ ಅನೇಕ ವರ್ಷಗಳಿಂದ ಕೀರ್ತಿಶೇಷ ಗೋಪಾಲಕೃಷ್ಣ ಅಸ್ರಣ್ಣರವರ ಸಂಸ್ಮರಣೆಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಿರುವ ಸಂಸ್ಥೆ ಯಕ್ಷ ಪ್ರತಿಭೆ. ಇದರ ಹಿಂದಿರುವ ಅಪ್ರತಿಮ ಪ್ರತಿಭೆ ಗೋಣಿಬೀಡು ಸಂಜಯ್ ಕುಮಾರ್ ಶೆಟ್ಟಿಯವರು. ನಮ್ಮ ತಂದೆಯವರ ಸಂಸ್ಮರಣೆ ಬೇರೆ ಬೇರೆ ಕಡೆಯಲ್ಲಿ ನಡೆದರೂ ಸಂಜಯರು ನಡೆಸುತ್ತಿರುವ ಈ ಕಾರ್ಯಕ್ರಮಕ್ಕೆ ವಿಶೇಷ ಅರ್ಥವಿದೆ. ಅವರೊಬ್ಬ ಯಕ್ಷಗಾನ ರಂಗದ ಉತ್ತಮ ಕಲಾವಿದನಾಗಿಯೂ, ಸಂಘಟಕನಾಗಿಯೂ ಕಾರ್ಯ ನಿರ್ವಹಿಸುತ್ತಾ ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿದ ಪ್ರಮುಖರನ್ನು, ಸಾಧಕರನ್ನು ಹಾಗೂ ಯಕ್ಷಗಾನ ಕಲಾವಿದರನ್ನು ಸನ್ಮಾನಿಸುತ್ತಾ ಗೌರವಿಸುತ್ತಾ ಬಂದಿದ್ದಾರೆ. ತನ್ನ ಜೊತೆಯಲ್ಲಿ…

Read More

ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸಿದ್ಧಗೊಂಡ ‘ಅಪ್ಪ’ ಅರೆಭಾಷೆ ನಾಟಕದ ರಂಗ ಪ್ರದರ್ಶನವು ದಿನಾಂಕ 27 ನವೆಂಬರ್ 2025ರಂದು ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ ಇದರ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಇವರು ರಂಗಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, “ಭಾಷೆಯ ಬೆಳವಣಿಗೆಗೆ ಕಲೆಯೂ ಒಂದು ಮಾಧ್ಯಮ. ರಂಗಭೂಮಿಯ ಮೂಲಕ ಭಾಷೆಯು ಬೆಳವಣಿಗೆ ಸಾಧ್ಯ” ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, “ಅರೆಭಾಷೆಯ ಬೆಳವಣಿಗೆಗೆ ಅಕಾಡೆಮಿಯ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೀಗ ಹಲವು ಸಮಯದ ಪ್ರಯತ್ನದಿಂದ ಅರೆಭಾಷೆ ನಾಟಕ ಸಿದ್ದಗೊಂಡಿದೆ. ಸ್ಥಳೀಯ ಕಲಾವಿದರನ್ನೇ ಒಳಗೊಂಡ ನಾಟಕ ಸಿದ್ಧಪಡಿಸಲಾಗಿದೆ. ಒಂದು ವರ್ಷದಲ್ಲಿ 25ಕ್ಕೂ ಹೆಚ್ಚು ಪ್ರದರ್ಶನ ಮಾಡುವ ಉದ್ದೇಶ ಇದೆ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕಾರಾಮ ಏನೆಕಲ್, ರಂಗನಿರ್ದೇಶಕ ಬಾಸುಮಾ ಕೊಡಗು, ನೆಹರೂ ಸ್ಮಾರಕ…

Read More

ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯ‌ರ್ ಎಜ್ಯುಕೇಶನ್ ಸಹಯೋಗದಲ್ಲಿ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ದಿನಾಂಕ 29 ನವೆಂಬರ್ 2025ರಂದು ಹಮ್ಮಿಕೊಂಡಿದ್ದ ಡಾ. ಯು.ಪಿ. ಉಪಾಧ್ಯಾಯ ಹಾಗೂ ಡಾ. ಸುಶೀಲಾ ಪಿ. ಉಪಾಧ್ಯಾಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಮಕ ವ್ಯಾಖ್ಯಾನಕಾರ ಕಬ್ಬಿನಾಲೆ ಡಾ. ವಸಂತ ಭಾರದ್ವಾಜ್ “ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಸರಿಯಾದ ದಾರಿಯಲ್ಲಿ ಭಾಷಾ ಸಂವಹನ ಕಲಿಸಬೇಕು, ಇಲ್ಲದಿದ್ದರೆ ಮುಂದೆ ಕಷ್ಟವಿದೆ. ಸಂಶೋಧಕರಿಗೆ ಎಲ್ಲಾ ಕಡೆ ವಿಪುಲ ಸಾಮಗ್ರಿಗಳು ದೊರಕುತ್ತವೆ. ಆದರೆ, ಯುವ ಮನಸ್ಸುಗಳು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಹಳೆಯ ಶಬ್ದಗಳನ್ನು ಕಲಿಯುವುದರ ಜೊತೆಗೆ ಹೊಸ ಶಬ್ದ ಸೃಷ್ಟಿಗೂ ಸಾಧ್ಯತೆಗಳಿವೆ. ಆದರೆ, ಇಂದು ಭಾಷಾತಜ್ಞರ ನಾಡಿನಲ್ಲಿ ಭಾಷಾಗತಿ, ಸರಸ್ವತಿಯ ಚರಣ ಚಿಹ್ನೆ ಹೆಜ್ಜೆ ತಪ್ಪುತ್ತಿದೆ. ಸಾಹಿತ್ಯದಲ್ಲಿ ಹೊಳವು ಮುಖ್ಯ. ಕಲೆ ಮತ್ತು ಸಂಸ್ಕೃತಿಯ ಸಂಶೋಧನೆ ತಪಸ್ಸಿನ ರೀತಿಯಲ್ಲಿ ನಡೆಯುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.…

Read More