Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಅರೆಹೊಳೆ ಪ್ರತಿಷ್ಠಾನವು ‘ನಾನು ಬರೆದ ಕಥೆ’ ಎಂಬ ಕನ್ನಡ ಸಣ್ಣ ಕಥಾ ಸ್ಪರ್ಧೆಯನ್ನು ಆಯೋಜಿಸಿದ್ದು, ಕಥೆಗಾರರಿಂದ ಸ್ವರಚಿತ ಅಪ್ರಕಟಿತ ಕಥೆಗಳನ್ನು ಆಹ್ವಾನಿಸಿದೆ. 2000 ಶಬ್ದ ಮಿತಿಯ ಕಥೆಗಳಾಗಿರಬೇಕು. ಆಯ್ಕೆಯಾದ ಕಥೆಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳಿದ್ದು ಅನುಕ್ರಮವಾಗಿ ರೂ.7000/-, ರೂ.5000/- ಮತ್ತು ರೂ.3,000/- ನಗದು, ಪ್ರಶಸ್ತಿ ಪತ್ರ ನೀಡಲಾಗುವುದು. ತೀರ್ಪುಗಾರರ ಮೆಚ್ಚುಗೆ ಪಡೆದ ಐದು ಕಥೆಗಳಿಗೆ ತಲಾ ರೂ.1000/- ಬಹುಮಾನವಿರುತ್ತದೆ. ಕಥೆ ಕಳಿಸಲು ಕೊನೆಯ ದಿನ ಜನವರಿ 30 ಎಂದು ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ತಿಳಿಸಿದ್ದಾರೆ.
ಮಂಗಳೂರು : ಅಡ್ಯಾರ್ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕಗಳ ಸಹಯೋಗದೊಂದಿಗೆ ದಿನಾಂಕ 04 ಜನವರಿ 2026ರಂದು ಸಂಜೆ ಯಕ್ಷಧ್ರುವ- ಯಕ್ಷಶಿಕ್ಷಣ ಯೋಜನೆಯ ವಿದ್ಯಾರ್ಥಿಗಳ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ 2025-26’ದ ಸಮಾರೋಪ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ “ಯಕ್ಷಗಾನ ಕರಾವಳಿಯ ಶ್ರೇಷ್ಠ ಕಲೆ. ಈ ಕಲೆಯನ್ನು ಕೇವಲ ಜಿಲ್ಲೆಗೆ ಸೀಮಿತಗೊಳಿಸದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಮಕ್ಕಳಿಗೆ ಯಕ್ಷಶಿಕ್ಷಣ ಕಲಿಸುವ ಮೂಲಕ ವಿಸ್ತರಣೆಯಾಗಲಿ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ವಸತಿ ಶಾಲೆಗಳಲ್ಲಿ ಯಕ್ಷಶಿಕ್ಷಣವನ್ನು ನೀಡುವ ಮೂಲಕ ಯಕ್ಷಗಾನ ಕಲೆಯನ್ನು ರಾಜ್ಯದಾದ್ಯಂತ ವಿಸ್ತರಿಸುತ್ತಿರುವ ಕೀರ್ತಿ ಪ್ರಖ್ಯಾತ ಯುವ ಭಾಗವತರಾದ ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನಿಗೆ ಸಲ್ಲುತ್ತದೆ. ಯಕ್ಷಗಾನದ ಮೂಲಕ ಪುರಾಣ, ಇತಿಹಾಸವನ್ನು ವಿಶ್ವಕ್ಕೆ ಪರಿಚಯಿಸಿದ ಪಟ್ಲ ಫೌಂಡೇಶನ್ ಟ್ರಸ್ಟಿನ ಕೆಲಸ ಕಾರ್ಯ ಶ್ಲಾಘನೀಯ” ಎಂದು ತಿಳಿಸಿದರು. ಇನ್ನೋರ್ವ ಮುಖ್ಯ…
ಡಾ. ಚಂದ್ರಶೇಖರ ಕಂಬಾರರ ‘ಜೋಕುಮಾರ ಸ್ವಾಮಿ’ ನಾಟಕವನ್ನು ನಮ್ಮ ಹೊಸ ಟೀಮ್ ಕನ್ನಡ ವಿಶ್ವವಿದ್ಯಾಲಯದಲ್ಲಿ ಅದ್ಬುತ ಪ್ರದರ್ಶನ ನೀಡಿತ್ತು. ಈ ನಾಟಕವು ಉತ್ತರ ಕರ್ನಾಟಕದ ಜಾನಪದ ಕಥೆ, ಪೌರಾಣಿಕ ಹಿನ್ನೆಲೆ (ಜೋಕುಮಾರಸ್ವಾಮಿ) ಮತ್ತು ಸಮಕಾಲೀನ ಸಾಮಾಜಿಕ ಸಮಸ್ಯೆಗಳನ್ನು (ಭೂಮಿ, ಹೆಣ್ಣು, ಅಧಿಕಾರ) ಒಟ್ಟಿಗೆ ತರುವ ಶ್ರೇಷ್ಠ ಕೃತಿಯಾಗಿದೆ; ಇದು ‘ಉಳುವವನೇ ನೆಲದ ಒಡೆಯ’ ಎಂಬ ಸಂದೇಶದೊಂದಿಗೆ ಲೈಂಗಿಕ ಫಲವಂತಿಕೆ, ಸಾಂಸ್ಕೃತಿಕ ಸಂಘರ್ಷ ಮತ್ತು ಅಸಮಾನತೆಗಳ ಬಗ್ಗೆ ವಿಶ್ಲೇಷಿಸುತ್ತದೆ, ಬಯಲಾಟದ ಸೊಗಡಿನಲ್ಲಿ ರಚಿಸಲ್ಪಟ್ಟಿದ್ದು ಶ್ರೇಷ್ಠ ನಾಟಕವೆನಿಸಿದೆ. ನಾಟಕದ ಪ್ರಮುಖ ಅಂಶಗಳು: ಕಥಾಹಂದರ: ಉತ್ತರ ಕರ್ನಾಟಕದ ಜನಪದ ಕಥೆಗಳಾದ ಜೋಕುಮಾರಸ್ವಾಮಿ (ಏಳು ದಿನಗಳಲ್ಲಿ ಹುಟ್ಟಿ ಸಾಯುವ ಅಲ್ಪಾಯುಷಿ ದೇವತೆಯ ಕಥೆ) ಮತ್ತು ‘ಉಳುವವನೇ ನೆಲದ ಒಡೆಯ’ ಎಂಬ ಸಾಮಾಜಿಕ ವಿಷಯವನ್ನು ಆಧರಿಸಿದೆ. (Themes): ಸಾಂಸ್ಕೃತಿಕ ಸಂಘರ್ಷ: ಪ್ರಾಕೃತಿಕ ಶಕ್ತಿಗಳು ಮತ್ತು ಸಾಂಪ್ರದಾಯಿಕ ಚೌಕಟ್ಟುಗಳ ನಡುವಿನ ಸಂಘರ್ಷ. ಹೆಣ್ಣು ಮತ್ತು ಭೂಮಿ: ಹೆಣ್ಣಿನ ಸಾರ್ಥಕತೆ, ಲೈಂಗಿಕತೆ ಮತ್ತು ಭೂಮಿಯ ಫಲವಂತಿಕೆಯನ್ನು ಸಮೀಕರಿಸುತ್ತದೆ. ಅಧಿಕಾರ ಮತ್ತು ದಬ್ಬಾಳಿಕೆ:…
ಪುತ್ತೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ ಮತ್ತು ಪುತ್ತೂರು ತಾಲೂಕು ಘಟಕ ಹಾಗೂ ಕರ್ನಾಟಕ ಸಂಘದ ಸಹಯೋಗದೊಂದಿಗೆ ಕುಮಾರವ್ಯಾಸ ಜಯಂತಿ ಪ್ರಯುಕ್ತ ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮವನ್ನು ದಿನಾಂಕ 04 ಜನವರಿ 2026ನೇ ಭಾನುವಾರದಂದು ಪುತ್ತೂರಿನ ಅನುರಾಗ ವಠಾರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ, ಕುಮಾರವ್ಯಾಸ ಭಾರತದಿಂದ ಆಯ್ದ, ಶ್ರೀಕೃಷ್ಣ ಕಾರುಣ್ಯಕ್ಕೆ ಸಂಬಂಧಿಸಿದ ‘ಸೈಂಧವ ವಧೆ’ ಎಂಬ ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು. ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಗಮಕಿ ಮಧೂರು ಮೋಹನ ಕಲ್ಲೂರಾಯರು ಗಮಕ ವಾಚನಗೈದರೆ, ಗಮಕ ಕಲಾ ಪರಿಷತ್ತಿನ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀಯುತ ರಾಮಕೃಷ್ಣ ಬಳಂಜ ಇವರು ವ್ಯಾಖ್ಯಾನವನ್ನು ನಡೆಸಿಕೊಟ್ಟರು. ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀಯುತ ಬಿ. ಪುರಂದರ ಭಟ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ದಿನದ ಪ್ರಾಮುಖ್ಯತೆಯನ್ನು ವಿವರಿಸುತ್ತಾ, ಕುಮಾರವ್ಯಾಸರು ಒದ್ದೆ ಬಟ್ಟೆ ಉಟ್ಟುಕೊಂಡು ಗದುಗಿನ ವೀರನಾರಾಯಣದ ಸನ್ನಿಧಿಯಲ್ಲಿ ಬರೆದಂತಹ ಕಾವ್ಯವು ಓದುಗರ ಹೃದಯಾಂತರಾಳವನ್ನು ಒದ್ದೆ…
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಡಾ. ಅಮೃತ ಸೋಮೇಶ್ವರ ಇವರ ಮೂರು ನಾಟಕಗಳ ಇಂಗ್ಲೀಷ್ ಅನುವಾದ ಕೃತಿಯ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 14 ಜನವರಿ 2026ರಂದು ಮಧ್ಯಾಹ್ನ ಗಂಟೆ 3-00ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಾನ್ನಿಧ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಅಮೃತ ಸೋಮೇಶ್ವರ ಇವರ ಗೊಂದೋಳು, ಸತ್ಯನಾಪುರ ಸಿರಿ, ರಾಯ ರಾವುತೆ ಈ ಮೂರು ನಾಟಕ ಕೃತಿಯನ್ನು ಅಲೋಶಿಯಸ್ ವಿವಿಯ ಆಂಗ್ಲ ಭಾಷಾ ಉಪನ್ಯಾಸಕಿ ಡಾ. ಸಿಲ್ವಿಯಾ ರೇಗೊ ಇವರು ಇಂಗ್ಲೀಷ್ಗೆ ಅನುವಾದಿಸಿರುತ್ತಾರೆ. ವಿಶ್ರಾಂತ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಇವರು ಕೃತಿ ಬಿಡುಗಡೆ ಮಾಡಲಿದ್ದು, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಾಸ್ತಾವಿಕ ಮಾತುಗಳನ್ನಾಡುವರು. ವಿಶ್ರಾಂತ ಆಕಾಶವಾಣಿ ಕಾರ್ಯಕ್ರಮ ನಿರೂಪಕ ಮುದ್ದು ಮೂಡುಬೆಳ್ಳೆ, ನಿವೃತ್ತ ಸಹ ಪ್ರಾಧ್ಯಾಪಕ ಡಾ. ಚೇತನ್ ಸೋಮೇಶ್ವರ…
ಮಧೂರು : ಉಳಿಯ ದನ್ವಂತರಿ ಯಕ್ಷಗಾನ ಕಲಾಸಂಘ ಮಧೂರು ಇದರ ವಾರದ ಕೂಟ ಉಳಿಯ ಮನೆಯ ಸುಧಾ ಮಂದಿರದಲ್ಲಿ ದಿನಾಂಕ 11 ಜನವರಿ 2025 ಭಾನುವಾರದಂದು ‘ಭೀಷ್ಮ ವಿಜಯ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ತಲ್ಪನಾಜೆ ವೆಂಕಟ್ರಮಣ ಭಟ್ ಮತ್ತು ಶ್ರೀ ರವಿಶಂಕರ ಮಧೂರು ಹಾಗೂ ಮದ್ದಳೆಯಲ್ಲಿ ಶ್ರೀ ಉದಯ ಕಂಬಾರು ಇವರುಗಳು ಸಹಕರಿಸಿದರು. ಮುಮ್ಮೇಳದಲ್ಲಿ ಭೀಷ್ಮ 1 : ಬ್ರಹ್ಮಶ್ರೀ ಉಳಿಯತಾಯ ವಿಷ್ಣು ಆಸ್ರ, ಭೀಷ್ಮ 2 : ಶ್ರೀ ಬಹಾಬಲ ನಾಯ್ಕ್, ಅಂಬೆ : ಶ್ರೀ ನರಸಿಂಹ ಬಲ್ಲಾಳ್, ಸಾಲ್ವ ರಾಜ : ಶ್ರೀ ಮಯೂರ ಆಸ್ರ ಉಳಿಯ, ಪರಶುರಾಮ : ಶ್ರೀಮತಿ ರಕ್ಷಾ ರಾಮ್ ಕಿಶೋರ ಆಸ್ರ, ವಿಪ್ರರು : ಶ್ರೀಮತಿ ಧನ್ಯಮುರಳಿ ಕೃಷ್ಣ ಆಸ್ರ ಇವರುಗಳು ಸಹಕರಿಸಿದರು.
ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಘಟಕಗಳ ಸಹಯೋಗದೊಂದಿಗೆ ಯಕ್ಷಧ್ರುವ-ಯಕ್ಷ ಶಿಕ್ಷಣ ಯೋಜನೆಯ ವಿದ್ಯಾರ್ಥಿಗಳ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ 2025-26’ ಕಾರ್ಯಕ್ರಮವು ದಿನಾಂಕ 04 ಜನವರಿ 2026ರಂದು ಅಡ್ಯಾರ್ ಸಹ್ಯಾದ್ರಿ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ “ಈ ನೆಲದ ಅಸ್ಮಿತೆ ಸನಾತನ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿರುವವರು ಕರಾವಳಿಗರು. ಇಲ್ಲಿ ಕಲೆ ಮತ್ತು ಸಂಸ್ಕೃತಿ ದೊಡ್ಡ ಪಾತ್ರವನ್ನು ವಹಿಸಿಕೊಂಡಿದೆ. ಈ ನೆಲದ ಕಲೆ ಮತ್ತು ಸಂಸ್ಜೃತಿಯನ್ನು ಉಳಿಸುವ ಕೆಲಸ ಯಕ್ಷಗಾನ ಮಾಡಿದೆ. ಯಕ್ಷಗಾನದ ಮೂಲಕ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ದೇಶ ಕಟ್ಟುವ ರಾಷ್ಟ್ರೀಯ ನಿರ್ಮಾಣದ ಕೆಲಸ ಮಾಡುತ್ತಿದೆ. ಯಕ್ಷಗಾನಕ್ಕೆ ದೀರ್ಘಕಾಲಿಕವಾದ ಇತಿಹಾಸ ಇದೆ. ಇದು ಹೀಗೆಯೆ ಮುಂದುವರಿಯಲಿ” ಎಂದು ತಿಳಿಸಿದರು. “ಯಕ್ಷಗಾನ ಶ್ರೇಷ್ಠಕಲೆ. ವಿಶ್ವಮಟ್ಟದಲ್ಲಿ ಬೆಳೆಯುತ್ತಿದೆ. ದೇಶ ಉಳಿಯಬೇಕಾದರೆ ನಮ್ಮ ಸಂಸ್ಕೃತಿ ಬೆಳೆಯಬೇಕು, ಉಳಿಯಬೇಕು, ಶಾಲಾ ಕಾಲೇಜುಗಳ ಪ್ರೋತ್ಸಾಹ ಮತ್ತು ಪೋಷಕರ ಬೆಂಬಲದಿಂದ ಇಂತಹ…
ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಇದರ ಆಶ್ರಯದಲ್ಲಿ 49ನೆಯ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾ ಭವನದಲ್ಲಿ ದಿನಾಂಕ 10 ಜನವರಿ 2026ರಂದು ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಬಿ. ಸತ್ಯವತಿ ಎಸ್. ಭಟ್ ಕೊಳಚಪ್ಪು ಇವರ ಹನ್ನೆರಡನೆಯ ಕೃತಿ ‘ಹೆಜ್ಜಾಲದ ಬಿಳಲುಗಳು’ ಕೌಟುಂಬಿಕ ಕಥಾ ಹಂದರವನ್ನು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಇಂಜಿನಿಯರ್ ಬಿ. ಮಹಾಬಲ ತಿಲಕ ಮಂಗಳೂರು ಇವರು ಬಿಡುಗಡೆಗೊಳಿಸಿ ಅಮ್ಮನ ಸಾಹಿತ್ಯ ಸಾಧನೆಗೆ ಅತೀವ ಸಂತಸ ವ್ಯಕ್ತಪಡಿಸಿದರು. ಹಿರಿಯ ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಇವರು ಕೃತಿಯ ಪರಿಚಯಗೈದು “ಕೃತಿಗಾರ್ತಿ ಸತ್ಯವತಿ ಭಟ್ ಕೊಳಚಪ್ಪು ಇವರಲ್ಲಿ ಕೌಟುಂಬಿಕ ಕಥೆಯನ್ನು ಹೆಣೆಯುವ ಸಾಮರ್ಥ್ಯ ರಕ್ತಗತವಾಗಿದೆ. ಯಾವ ರೀತಿ ಕಥೆಗಳು ಓದುಗರ ಮನಸ್ಸನ್ನು ಸೆಳೆಯಬೇಕು ಎನ್ನುವುದನ್ನು ಚೆನ್ನಾಗಿ ಅರಿತುಕೊಂಡು ವಿವಿಧ ರೀತಿಯ ಕಥೆಗಳನ್ನು ವಿಭಿನ್ನವಾಗಿ ಜೋಡಿಸಿರುವುದು ನಿಜಕ್ಕೂ ವಿಶೇಷವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. “ಎಂಭತ್ತೊಂದರ ಹರೆಯದಲ್ಲಿ ಅತ್ಯಂತ ಹುರುಪಿನಿಂದ,…
ಮಂಗಳೂರು : ಓದುಗ ಬಳಗ ಹೊಸಬೆಟ್ಟು ಕುಳಾಯಿ ಇದರ ವತಿಯಿಂದ ಆಯೋಜಿಸಿದ್ದ ಸಾಹಿತಿ ಯೋಗೀಶ್ ಕಾಂಚನ್ ಬೈಕಂಪಾಡಿ ನುಡಿ ನಮನ ಕಾರ್ಯಕ್ರಮವು ದಿನಾಂಕ 10 ಜನವರಿ 2026ರಂದು ಕುಳಾಯಿ ಮಹಿಳಾ ಮಂಡಲದಲ್ಲಿ ನಡೆಯಿತು. ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಲೇಖಕ ಕೃಷ್ಣಮೂರ್ತಿ ಪಿ. “ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸಾಹಿತ್ಯ ಸೃಷ್ಟಿ ಮಾಡಿ ಜನಪ್ರಿಯತೆ ಪಡೆದಿದ್ದ ಯೋಗೀಶ್ ಕಾಂಚನ್ ಬೈಕಂಪಾಡಿಯವರು ಅನನ್ಯ ಸಾಧನೆಯನ್ನು ಮಾಡಿದ್ದು ಸಮಾಜ ಅವರ ಸೇವೆಯನ್ನು ಗುರುತಿಸಬೇಕು. ತುಳು ಕನ್ನಡದ ಕವಿಯಾಗಿ ಸಮಾಜದ ಅಸಮಾನತೆಯನ್ನು, ನೋವು ನಲಿವುಗಳನ್ನು ಕವಿತೆಗಳಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟರು. ತುಳು ಅಕಾಡೆಮಿಯ ಸದಸ್ಯರಾಗಿ ತುಳು ಸಾಹಿತ್ಯದ ಸೇವೆಯನ್ನು ಯೋಗೀಶ್ ಕಾಂಚನ್ ಮಾಡಿದವರು” ಎಂದು ನುಡಿದರು. ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಕಾರ್ಯದರ್ಶಿ ಸತೀಶ್ ಸದಾನಂದ ಮಾತನಾಡಿ “ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಯೋಗೀಶ್ ಕಾಂಚನ್ ನ್ಯಾಯ ಪರ ವಿಚಾರಗಳಿಗೆ ಬೆಂಬಲ ನೀಡಿದವರು” ಎಂದರು. ಹೊಸಬೆಟ್ಟು ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕಿ ಚಂದ್ರಕಲಾ ಅವರು ಯೋಗೀಶ್ ಕಾಂಚನ್ ಅವರ ಬದುಕು…
ಧಾರವಾಡ : ಕರ್ನಾಟಕ ಹಿಸ್ಟಾರಿಕಲ್ ರಿಸರ್ಚ್ ಸೊಸೈಟಿ (ಕೆ.ಎಚ್.ಆರ್.ಎಸ್.) ಹಾಗೂ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಸಹಯೋಗದಲ್ಲಿ ದಿನಾಂಕ 03 ಜನವರಿ 2025ರಂದು ರಂಗಾಯಣದಲ್ಲಿ ‘ಸ್ವರ-ವರ್ಣ ಸಮನ್ವಯ’ ಎಂಬ ವಿನೂತನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀಧರ ಉದಗಟ್ಟಿ ಇವರ ಕೊಳಲು ವಾದನ ಹಾಗೂ ಪಂಡಿತ್ ನಂದಿಕೇಶ್ವರ ಗುರವ ಇವರ ತಬಲಾ ನಾದದೊಂದಿಗೆ, ಕಲಾವಿದೆ ಶ್ರೀಮತಿ ಸಪ್ನಾ ಕಟ್ಟಿಯವರು ನಡೆಸಿಕೊಟ್ಟ ಲೈವ್ ಪೇಂಟಿಂಗ್ (ಚಿತ್ರಕಲೆ) ಕಲಾಭಿಮಾನಿಗಳ ಮನಸೂರೆಗೊಂಡಿತು. ಸಂಗೀತ ಮತ್ತು ಚಿತ್ರಕಲೆಯ ಈ ಅಪರೂಪದ ಸಂಗಮಕ್ಕೆ ಪ್ರೇಕ್ಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ರಂಗಕರ್ಮಿ ಡಾ. ಶಶಿಧರ್ ನರೇಂದ್ರ ಕಲೆಗಳ ನಡುವೆ ಇರುವ ಅವಿನಾಭಾವ ಸಂಬಂಧದ ಬಗ್ಗೆ ವಿವರಿಸಿ ಅವು ಕಾರ್ಯಕ್ರಮದಲ್ಲಿ ವ್ಯಕ್ತವಾದ ರೀತಿಯನ್ನು ಶ್ಲಾಘಿಸಿದರು. ನಿವೃತ್ತ ಐ.ಎಫ್.ಎಸ್. ಅಧಿಕಾರಿ ಡಾ. ಗಿರಿಧರ ಕಿನ್ನಾಳ ಅಧ್ಯಕ್ಷೀಯ ಭಾಷಣದಲ್ಲಿ ಇಂದಿನ ಕಾರ್ಯಕ್ರಮಕ್ಕೆ ದೇವರು ಸೃಷ್ಟಿಸಿದ ಕಾನನದ ಹಚ್ಚ ಹಸಿರು ಬಣ್ಣ, ಪಕ್ಷಿಗಳ ಕಲರವ ಹಾಗೂ ಕಿರಣಗಳ ನಾಟ್ಯದ ಸಮ್ಮಿಲನದ…