Subscribe to Updates
Get the latest creative news from FooBar about art, design and business.
Author: roovari
ಗಿಡದಲ್ಲರಳಿದ ಗೊಂಚಲು ಗೊಂಚಲು ಗುಲಾಬಿ ಕಂಡಾಗ ಮರಳುತ್ತದೆ ನನ್ನ ಮನ ಬಾಲ್ಯದತ್ತ ಆಹಾ ಅದೆಂತಹ ಅದ್ಭುತ ಬಾಲ್ಯ ಒಂದೇ ಮನೆಯಲ್ಲಿ ಹತ್ತಾರು ಮಕ್ಕಳು ದೊಡ್ಡಪ್ಪನ ಮಕ್ಕಳು ಚಿಕ್ಕಪ್ಪನ ಮಕ್ಕಳು ಎಲ್ಲರೂ ಒಟ್ಟಾಗಿ ಅಂಗಳದಲ್ಲಿ ಆಡುವಾಗ ಏನು ಮೋಜು ಏನು ಮೋಜು ಕಿತ್ತಾಟ ಕಚ್ಚಾಟ ಮತ್ತೆ ಒಟ್ಟುಗೂಡಿ ಆಟ ಬಾಲ್ಯವೆಂದರೆ ಹಾಗೇ ಅಲ್ಲವೇ ಅವ ಹಿರಿಯವ ಇವ ಕಿರಿಯವ ಎಂಬ ಭಾವ ಮೂಡುವುದೇ ಇಲ್ಲ ಅವ ಅಣ್ಣನ ಮಗ ಇವ ತಮ್ಮನ ಮಗ ಎಂಬ ಭೇದವಿಲ್ಲ ನಾವೆಲ್ಲರೂ ಒಂದು ಎಂಬ ಸದ್ಭಾವ ನಾವು ಕಚ್ಚಾಡಿದರೆ ನಾವು ಜಗಳಾಡಿದರೆ ಎಂದೂ ಬರುತ್ತಿರಲಿಲ್ಲ ನಮ್ಮ ಮಧ್ಯೆ ಹಿರಿಯರು ನಾವು ನಾವೇ ಜಗಳಾಡಿ ಮತ್ತೆ ಮರೆತು ಒಂದುಗೂಡಿ ಆಡುತ್ತಿದ್ದ ಆ ದಿನಗಳು ಎಷ್ಟು ಚೆಂದ ಅಂದು ನೋವಿರಲಿಲ್ಲ ಎಂಬ ತೀರ್ಮಾನ ಬೇಡ ಹೂವಿನ ಮುಂದೆ ಮುಳ್ಳಿರುವಂತೆ ನಮಗೂ ಹಲವು ನೋವುಗಳಿದ್ದರೂ ಅರಳಿದ ಗುಲಾಬಿಗಳಂತೆ ನೋವ ಮರೆತು ಸದಾ ನಗುತ್ತಿದ್ದೆವು ಆ ದಿನಗಳು ಆ ಬದುಕು ಎಷ್ಟು ಚಂದ…
ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಡಿಸೆಂಬರ್ ಮತ್ತು ಜನವರಿ ಮಾಹೆಯಲ್ಲಿ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಪ್ರಮಾಣ ವರ್ಷ ನಡೆಸುವ ಈ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರ ನಡೆಸಿಕೊಂಡು ಬಂದಿರುವ ಹೆಗ್ಗಳಿಕೆ ನಮ್ಮದು ಎಂದು ಅಧ್ಯಕ್ಷರಾದ ಡಿ. ಮಂಜುನಾಥ ತಿಳಿಸಿದ್ದಾರೆ. ಡಿಸೆಂಬರ್ ಕೊನೆಯ ವಾರದಲ್ಲಿ ಎಲ್ಲಾ ತಾಲೂಕು ಮಟ್ಟದಲ್ಲಿ ಸಮ್ಮೇಳನ ಏರ್ಪಡಿಸಲಾಗುವುದು. ಜನವರಿ ಮೊದಲ ವಾರ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನಂತರ ರಾಜ್ಯ ಮಟ್ಟದ ಸಮ್ಮೇಳನ ಏರ್ಪಡಿಸಲಾಗುವುದು. ಜಿಲ್ಲೆಯ ವ್ಯಾಪ್ತಿಯಲ್ಲಿರುವ ಪ್ರಾಥಮಿಕ, ಪ್ರೌಢಶಾಲಾ, ಪದವಿ ಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸ್ವಂತ ಕವನ, ಕಥೆ, ಪ್ರಬಂಧ ಬರೆಯುತ್ತಿದ್ದರೆ, ಆಶುಭಾಷಣದಲ್ಲಿ ಆಸಕ್ತಿಯಿದ್ದರೆ ನಿಮಗೆ ಸಾಮೂಹಿಕ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತಿಯಿರುವ ವಿದ್ಯಾರ್ಥಿಗಳು ತಮ್ಮ…
ಮಂಗಳೂರು : ತುಳು ಕೂಟ ಕುಡ್ಲ ಮತ್ತು ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇವರ ವತಿಯಿಂದ ನಡೆಯುತ್ತಿರುವ ಮರೋಳಿ ಬಿ. ದಾಮೋದರ ನಿಸರ್ಗ ಸಂಸ್ಮರಣೆ-ತುಳು ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭವು ದಿನಾಂಕ 13 ಡಿಸೆಂಬರ್ 2025ರಂದು ಮಂಗಳೂರಿನ ಕಂಕನಾಡಿ ಗರೋಡಿ ದೇವಿ ಬೈದೆತಿ ಬಾವಡಿಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರೂ, ಧರ್ಮದರ್ಶಿಗಳೂ ಆದ ಡಾ. ಪುನರೂರು “ತುಳುವಿಗಾಗಿ ಈ ಹಿಂದೆಯೂ ಅನೇಕ ಹೋರಾಟಗಳು ನಡೆದಿವೆ. ಹಳ್ಳಿಯಿಂದ ದಿಲ್ಲಿಯವರೆಗೂ ಸಾಗಿದ್ದೇವೆ. ಅದರಲ್ಲೆಲ್ಲಾ ದಾಮೋದರ ನಿಸರ್ಗರೂ ಇದ್ದರು. ಇಂದು ಅವರ ನೆನಪಿನಲ್ಲಿ ಸಂಸ್ಮರಣಾ ಸಪ್ತಾಹ ನಡೆಸಿರುವುದು ಸಾಮಯಿಕವೇ ಆಗಿದೆ. ತುಂಬು ಅಭಿಮಾನದ ಕಾರ್ಯಕ್ರಮವಿದು” ಎಂದು ಹೇಳಿದರು. ತುಳು ಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗರು ಸಪ್ತಾಹವನ್ನು ಯಶಸ್ವಿಗೊಳಿಸಿದವರನ್ನು ಅಭಿನಂದಿಸುತ್ತಾ ನಿವೃತ್ತ ಬ್ಯಾಂಕ್ ಉದ್ಯೋಗಿ ರೊ. ಜೆ.ವಿ. ಶೆಟ್ಟರನ್ನು ತುಳು ಕೂಟ ಹಾಗೂ ಸರಯೂ ಬಳಗದ ವತಿಯಿಂದ ಸನ್ಮಾನಿಸಿದರು. ಹಿರಿಯರಾದ ಶ್ರೀ ಗಂಗಾಧರ ಶಾಂತಿ, ಯೋಗೀಶ್ ಶೆಟ್ಟಿ ಜೆಪ್ಪು,…
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಳಲಿಯ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಮಣೇಲ್ ರಾಣಿ ಅಬ್ಬಕ್ಕ ಚಾವಡಿ ಸಂಯುಕ್ತ ಆಶ್ರಯದಲ್ಲಿ ದಿನಾಂಕ 14 ಡಿಸೆಂಬರ್ 2025ರಂದು ಮಳಲಿ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ ‘ಮಣೇಲಿನ ಹೆಮ್ಮೆ ರಾಣಿ ಅಬ್ಬಕ್ಕ’ ವಿಚಾರ ಸಂಕಿರಣ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ “ರಾಣಿ ಅಬ್ಬಕ್ಕನ ಅರಮನೆ ಇದ್ದಂತಹ ಹಾಗೂ ವಿದೇಶಿ ಪ್ರವಾಸಿ ಅಬ್ಬಕ್ಕನನ್ನು ಭೇಟಿ ಮಾಡಿದ ಗಂಜೀಮಠ ಗ್ರಾಂ.ಪಂ ವ್ಯಾಪ್ತಿಯ ಮಣೇಲಿನಲ್ಲಿ ಅಬ್ಬಕ್ಕ ರಾಣಿಯ ಉತ್ಸವ ಗ್ರಾಮೋತ್ಸವದ ರೂಪದಲ್ಲಿ ಆರಂಭಗೊಳ್ಳಬೇಕು, ಸಹಬಾಳ್ವೆ, ಕೋಮು ಸಾಮರಸ್ಯ, ಬಹುತ್ವದ ಜೀವನ ಮೌಲ್ಯಗಳನ್ನು ಕಟ್ಟಿಕೊಡುವ ಜತೆಗೆ ಅಬ್ಬಕ್ಕ ರಾಣಿಯ ಐತಿಹ್ಯದ ದಿನಗಳನ್ನು ಸ್ಮರಿಸಿಕೊಳ್ಳುವಂತಹ ‘ಅಬ್ಬಕ್ಕ’ ಸಾಂಸ್ಕೃತಿಕ ಗ್ರಾಮವನ್ನು ಕಟ್ಟುವ ಕಾರ್ಯ ನಡೆಯಬೇಕು. ರಾಣಿ ಅಬ್ಬಕ್ಕ ಕುರಿತು ಚಾರಿತ್ರ್ಯಿಕ ಸಾಧನೆಗಳ ಬಗ್ಗೆ ಇನ್ನೂ ದೊಡ್ಡ ಮಟ್ಟದಲ್ಲಿ ಅಧ್ಯಯನ ನಡೆದಿಲ್ಲ.…
‘ನೃತ್ಯಾಂಕುರ’- ನೃತ್ಯ ಸಂಸ್ಥೆಯ ರೂವಾರಿ, ನಾಟ್ಯಗುರು- ಕಲಾವಿದೆ ಪಾದರಸದ ವ್ಯಕ್ತಿತ್ವದ ಶ್ರೀಮತಿ ಅಮೃತಾ ರಮೇಶ್ ಬಹುಮುಖಿ ಪ್ರತಿಭೆ. ನೀಳ ನಿಲುವಿನ ತೆಳುಕಾಯದ ಅಮೃತಾ, ತನ್ನ ದೇಹವನ್ನು ಹಾವಿನಂತೆ ಬಾಗಿ- ಬಳುಕಿಸಿ, ಕಾಲನ್ನು ಎತ್ತರಕ್ಕೆ ಆಕಾಶಚಾರಿಯಲ್ಲಿ ಮಿನುಗಿಸಿ, ಅರೆಮಂಡಿಯಲ್ಲಿ, ಮಂಡಿ ಅಡವುಗಳಲ್ಲಿ ವೇದಿಕೆಯ ತುಂಬಾ ಸಲೀಸಾಗಿ ಚಲಿಸುವ ಮೋಡಿಕಾರ್ತಿ. ತನ್ನ ನೀಳ ತೋಳು, ಕಾಲ್ಗಳು – ಸೊಂಟವನ್ನು ದ್ರವೀಕೃತ ಚಲನೆಗಳಿಂದ ತಿರುಗಿಸಿ ಕಣ್ಮನ ಸೆಳೆಯುವ ಮೆರುಗಿನ ಪ್ರತಿಭೆ. ಅದ್ಭುತ ಭಂಗಿಗಳನ್ನು ನಿರಾಯಾಸವಾಗಿ, ಕಡೆದಿಟ್ಟ ಶಿಲ್ಪದಂತೆ ಸುಮನೋಹರವಾಗಿ ಭಂಗಿಗಳನ್ನು ರಚಿಸಿ ಕಲಾರಸಿಕರನ್ನು ಬೆರಗುಗೊಳಿಸುವ ಕಲಾವಂತೆ. ಇದ್ಯಾವುದೂ ಅತಿಶಯೋಕ್ತಿಯಲ್ಲ ಬಣ್ಣನೆಯಲ್ಲ. ಈ ಕಲಾವಿದೆಯ ವಿಶಿಷ್ಟ ಕಲಾವಂತಿಕೆಯನ್ನು ಕಣ್ಣಾರೆ ಕಂಡವರಿಗೆ ಮನವರಿಕೆಯಾಗುವ ಸತ್ಯ. ಎಲ್ಲಕ್ಕಿಂತ ಮೆಚ್ಚಾದುದು ಶಾಸ್ತ್ರೀಯತೆಗೇ ಅಂಟಿದ ಮಡಿವಂತಿಕೆಯಿಲ್ಲದ ಮುಕ್ತ ಮುನ್ನಡೆಗೆ ಖುಷಿಯಾಯಿತು. ಮಕ್ಕಳಿಗೆ ಭರತನಾಟ್ಯದ ಶಾಸ್ತ್ರೀಯ ನೃತ್ಯದ ಪರಿಚಯವೂ ಉಂಟು ಎಂಬುದನ್ನು ಮನದಟ್ಟು ಮಾಡಿ, ಸಮಕಾಲೀನ ನೃತ್ಯ ಪ್ರಯೋಗ- ಪರಿಕಲ್ಪನೆಗಳಿಗೆ ಮುಂದಾಗಿದ್ದು ಅಮೃತಾರ ವೈಶಿಷ್ಟ್ಯ- ಅಸ್ಮಿತೆ. ಇತ್ತೀಚೆಗೆ ಮಲ್ಲತ್ತಳ್ಳಿಯ ಕಲಾಗ್ರಾಮ ವೇದಿಕೆಯ ಮೇಲೆ ಮೂರು…
ಉಡುಪಿ : ಎಂ.ಜಿ.ಎಂ. ಪದವಿ ಪೂರ್ವ ಕಾಲೇಜಿನ ವತಿಯಿಂದ ಪ್ರಸಿದ್ಧ ನೃತ್ಯಗಾರ, ಅಂತರಾಷ್ಟ್ರೀಯ ಕಲಾವಿದ ಪಂಡಿತ್ ರಾಹುಲ್ ಆಚಾರ್ಯ ಇವರ ಒಡಿಸ್ಸಿ ನೃತ್ಯ ಪ್ರದರ್ಶನವು ದಿನಾಂಕ 11 ಡಿಸೆಂಬರ್ 2025ರಂದು ನಡೆಯಿತು. ‘ಸೊಸೈಟಿ ಫಾರ್ ದ ಪ್ರೊಮೋಷನ್ಸ್ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಆಂಡ್ ಕಲ್ಚರ್ ಅಮೊಂಗ್ಸ್ಟ್ ಯೂಥ್’ [SPICMACAY) ಆಶ್ರಯದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮ ನೆರೆದಿದ್ದ ಕಲಾಭಿಮಾನಿಗಳ ಮನ ಸೆಳೆಯಿತು. ‘ಡಿವೈನ್ ಡ್ಯಾನ್ಸರ್’ ಎಂದೇ ಖ್ಯಾತರಾದ ರಾಹುಲ್ ಆಚಾರ್ಯ ಇವರ ಶಾಸ್ತ್ರೀಯವಾದ, ಶುದ್ಧವಾದ ನೈಜ ಕಲಾ ಪ್ರದರ್ಶನ ಹಾಗೂ ಅವರ ಪಾಂಡಿತ್ಯ ಮತ್ತು ಮೃದು ಮಾತು ನೆರೆದಿದ್ದ ಕಲಾರಸಿಕರಿಗೆ ರಸದೌತಣ ನೀಡಿತು. ಅವರೊಂದಿಗೆ ಸಹಕಲಾವಿದರಾಗಿ ಸಂಗೀತದಲ್ಲಿ ಸುಕಾಂತ ಕುಮಾರ್ ಕುಂಡ, ಮರ್ಧಲಾದಲ್ಲಿ ದಿಬಾಕರ್ ಪಾರಿದಾ, ವಯಲಿನ್ನಲ್ಲಿ ಪ್ರದೀಪ್ ಕುಮಾರ್ ಮಹಾರಣ ಮತ್ತು ಮಂಜೀರದಲ್ಲಿ ಸುಮುಖ ತಮಂಕರ್ ಸಹಕಾರ ನೀಡಿದರು. ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ಉಪ ಪ್ರಾಂಶುಪಾಲ ಡಾ.…
ಬೆಂಗಳೂರು : ಶ್ರೀ ವಿನಾಯಕ್ ಭಟ್ಟ ಸಂಯೋಜನೆಯಲ್ಲಿ ದಕ್ಷಿಣೋತ್ತರ ಅತಿಥಿ ಕಲಾದಿಗ್ಗಜರ ಕೂಡುವಿಕೆಯಲ್ಲಿ ‘ಯಕ್ಷ ಭಾವ ಸಂಗಮ’ ಯಕ್ಷಗಾನ ಕಾರ್ಯಕ್ರಮವನ್ನು ದಿನಾಂಕ 13 ಡಿಸೆಂಬರ್ 2025ರಂದು ರಾತ್ರಿ 10-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ದೇವಿದಾಸ್ ವಿರಚಿತ ‘ಭೀಷ್ಮ ಪರ್ವ’ ಪ್ರಸಂಗದ ಯಕ್ಷಗಾನದಲ್ಲಿ ಕೊಂಡದಕುಳಿ, ಥಂಡಿಮನೆ, ತೋಟಿಮನೆ, ಹಿಲ್ಲೂರು ಮಂಜು, ಪ್ರಶಾಂತ್ ಹೆಗಡೆ, ನಾಗೇಶ್ ಕುಳಿಮನೆ ಮತ್ತು ಆತ್ರೇಯ ಗಾಂವ್ಕರ್ ಭಾಗವಹಿಸಲಿದ್ದಾರೆ.
ಬೆಂಗಳೂರು : ನಾಟಕ ಬೆಂಗ್ಳೂರ್ -26ರ ರಂಗಸಂಭ್ರಮದ ಪ್ರಯುಕ್ತ ಅಭಿನಯ ತರಂಗ ರಂಗಶಾಲೆ ಇವರು ಮಹೇಶ್ ದತ್ತಾನಿಯವರ ‘ತಾರ’ ಎರಡು ಅಂಕಗಳ ನಾಟಕ ಪ್ರದರ್ಶನವನ್ನು ದಿನಾಂಕ 15 ಡಿಸೆಂಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಘವೇಂದ್ರ ಜೆ. ಇವರು ಈ ನಾಟಕದ ಅನುವಾದ ಮತ್ತು ನಿರ್ದೇಶನ ಮಾಡಿರುತ್ತಾರೆ.
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಇದರ ವತಿಯಿಂದ ಆಯೋಜಿಸಿರುವ ‘ರಾಗ ಸುಧಾರಸ -2025’ ಸಂಗೀತ ಮತ್ತು ನೃತ್ಯ ಉತ್ಸವ ಕಾರ್ಯಕ್ರಮವು ದಿನಾಂಕ 13ರಿಂದ 20 ಡಿಸೆಂಬರ್ 2025ರವರೆಗೆ ಕಾಸರಗೋಡಿನ ಶ್ರೀ ಎಡನೀರು ಮಠ ಮತ್ತು ಸುರತ್ಕಲ್ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಡೆಯಲಿದೆ. ದಿನಾಂಕ 13 ಡಿಸೆಂಬರ್ 2025ರಂದು ಸಂಜೆ ಗಂಟೆ 4-15ಕ್ಕೆ ಮಂಗಳೂರಿನ ವಿದುಷಿ ರಶ್ಮಿ ಸರಳಾಯ ಇವರ ಮಗಳು ಬೇಬಿ ಧ್ರುವಿ ಚಿದಾನಂದ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ‘ಲಲಿತ ಕಲಾ ಪೋಷಕ ಮಣಿ ಪ್ರಶಸ್ತಿ’ಯನ್ನು ವಿದ್ವಾನ್ ವಿಠಲರಾಮ ಮೂರ್ತಿ ಇವರಿಗೆ ಪ್ರದಾನ ಮಾಡಲಾಗುವುದು. ವಿದ್ವಾನ್ ವಿಠಲರಾಮ ಮೂರ್ತಿ ಅಂತಾರಾಷ್ಟ್ರೀಯ ಪಿಟೀಲುವಾದಕ, ಉನ್ನತ ಶ್ರೇಣಿಯ ಆಕಾಶವಾಣಿ, ದೂರದರ್ಶನ ಕಲಾವಿದರಾದ ನಿಡ್ಲೆಯ ಕರುಂಬಿತ್ಲು ವಿಠಲ ರಾಮಮೂರ್ತಿಯವರು ಲಾಲ್ಗುಡಿ ಬಾನಿಯನ್ನು ಮುಂದುವರಿಸುತ್ತಿರುವ ಹೆಸರಾಂತ ಕಲಾವಿದರು. ನೂರಾರು ಶಿಷ್ಯರನ್ನು ತರಬೇತುಗೊಳಿಸಿದ ಅತ್ಯುತ್ತಮ ಸಹವಾದಕರೂ ಹಾಗೂ ಸೋಲೋ ಕಲಾವಿದರು. ಪ್ರಪಂಚದಾದ್ಯಂತ ತಮ್ಮ ವಾದನದ ಇಂಪನ್ನು ಪಸರಿಸುವ ಇವರು ತನ್ನ ಊರಾದ…
ಬೆಂಗಳೂರು : ಸಂಸ ಥಿಯೇಟರ್ ಬೆಂಗಳೂರು ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದೊಂದಿಗೆ ಕೆ.ಎನ್. ವಿಜಯಲಕ್ಷ್ಮಿ ಅನುವಾದ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 14 ಡಿಸೆಂಬರ್ 2025ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಸಂಜೆ 4-00 ಗಂಟೆಗೆ ಅನುವಾದ ಕವಿಗೋಷ್ಠಿಯನ್ನು ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಇವರು ಉದ್ಘಾಟನೆ ಮಾಡಲಿದ್ದು, ಪ್ರಾಧ್ಯಾಪಕರು ಹಾಗೂ ಅನುವಾದಕರಾದ ಪ್ರೊ. ಷಾಕಿರ ಖಾನುಂ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. 7-00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಂ.ಆರ್. ಕಮಲ ಇವರಿಗೆ 2025ನೇ ಸಾಲಿನ ಕೆ.ಎನ್. ವಿಜಯಲಕ್ಷ್ಮಿ ಅನುವಾದ ಪ್ರಶಸ್ತಿ ಪ್ರದಾನ ನಡೆಯಲಿದೆ.