Subscribe to Updates
Get the latest creative news from FooBar about art, design and business.
Author: roovari
ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯು 40 ವರ್ಷದೊಳಗಿನ ಹೊಸ ಪೀಳಿಗೆಯ ಲೇಖಕ/ಕಿಯರ ಆಯ್ದ ಕಥೆ, ಪ್ರಬಂಧ ಮತ್ತು ಲೇಖನಗಳ ಸಂಯುಕ್ತ ಸಂಪುಟವೊಂದನ್ನು ಯುವ ಸಂಘಟಕ ಶ್ರೀ ಸೋಮನಾಥ ಶೇಷಗಿರಿ ಮತ್ತು ಯುವ ಲೇಖಕಿ ಕುಮಾರಿ ಮಧು ಕಾರಗಿಯವರ ಸಂಪಾದಕತ್ವದಲ್ಲಿ ಹೊರ ತರಲಿದೆ. ಆಸಕ್ತ ಲೇಖಕ/ಕಿಯರು ನಿಯಮಾನುಸಾರವಾಗಿ ಕಥೆ, ಪ್ರಬಂಧ, ಲೇಖನ ಕಳುಹಿಸಬಹುದು. ನಿಯಮಗಳು : 40 ವರ್ಷದೊಳಗಿನ ಲೇಖಕ/ಕಿಯರು ಮಾತ್ರ ಬರಹಗಳನ್ನು ಕಳುಹಿಸಬಹುದು. ಕಥೆ, ಲಲಿತ ಪ್ರಬಂಧ, ಪ್ರವಾಸ ಪ್ರಬಂಧ, ಐತಿಹಾಸಿಕ ಲೇಖನ, ವೈಜ್ಞಾನಿಕ ಲೇಖನ ಮತ್ತು ಸಿನಿಮಾ ಕುರಿತ ಲೇಖನಗಳಿಗೆ ಮಾತ್ರ ಅವಕಾಶವಿದೆ. ಬರಹಗಳು ಸ್ವತಂತ್ರವಾಗಿದ್ದು ಈ ಮೊದಲು ಎಲ್ಲೂ ಪ್ರಕಟವಾಗಿರಬಾರದು. ಅನುವಾದ, ಅನುಸೃಷ್ಟಿ, ಪ್ರೇರಣೆ, ಸ್ಫೂರ್ತಿ ಪಡೆದ ಲೇಖನಗಳಿಗೆ ಅವಕಾಶವಿಲ್ಲ. ಎಲ್ಲ ಬರಹಗಳೂ 1500 ಪದಗಳ ಮಿತಿಯನ್ನು ದಾಟುವಂತಿಲ್ಲ. ಇಲ್ಲಿ ಲಿಂಗ, ಜಾತಿ, ಪ್ರದೇಶ, ಎಡ-ಬಲ ಸೇರಿದಂತೆ ಯಾವುದೇ ಬಗೆಯ ಮೀಸಲಾತಿಯಿರುವುದಿಲ್ಲ. ಬರಹಗಳ ಗುಣಮಟ್ಟವೊಂದೇ ಆಯ್ಕೆಯ ಏಕೈಕ ಮಾನದಂಡ. ಬರಹಗಳ ಸಾಫ್ಟ್ ಕಾಪಿಯನ್ನು ಸಂಪಾದಕರ ವಾಟ್ಸಪ್…
ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 22 ಫೆಬ್ರವರಿ 2026ರಂದು ನಡೆಯಲಿರುವ ಕಾಸರಗೋಡು-ಕರ್ನಾಟಕ ‘ಚುಟುಕು ಸಾಹಿತ್ಯ ಸಮ್ಮೇಳನ’ದ ಆಮಂತ್ರಣ ಪತ್ರಿಕೆಯನ್ನು ದಿನಾಂಕ 16 ಫೆಬ್ರವರಿ 2026ರಂದು ಎಡನೀರು ಶ್ರೀ ಮಠದಲ್ಲಿ ಎಡನೀರು ಮಠಾಧಿಪತಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಬಿಡುಗಡೆಗೊಳಿಸಿ ಶುಭಾಶೀರ್ವಾದ ನೀಡಿದರು. ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಇವರ ಸರ್ವಾಧ್ಯಕ್ಷತೆಯಲ್ಲಿ, ಡಾ. ವಾಮನ್ ರಾವ್ ಬೇಕಲ್ ಸಾರಥ್ಯದ ಕನ್ನಡ ಭವನದ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕನ್ನಡ ಭವನದ ಅಂಗ ಸಂಸ್ಥೆಯಾದ ‘ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವರ್ಷಾಚರಣೆ ಪ್ರಯುಕ್ತ ಪರಿಷತ್ತಿನ ಜಿಲ್ಲಾ ಘಟಕಗಳ ಸಹಕಾರದಲ್ಲಿ ಸಮ್ಮೇಳನ ಆಯೋಜಿಸಲಾಗಿದ್ದು, ಬೆಳಿಗ್ಗೆ 7-00ರಿಂದ ಭಜನೆ, 8-30ಗೆ ಸರ್ವಾಧ್ಯಕ್ಷರ ಮೆರವಣಿಗೆ, ಗಂಟೆ 9-00ಕ್ಕೆ ಉದ್ಘಾಟನೆ, ಶ್ರೀ ಶ್ರೀ ರಮೇಶ ಗುರೂಜಿ, ಗೋವಿನಾಳ ಗದಗ ಹಾಗೂ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಜಿಗಳಿಂದ ಆಶೀರ್ವಚನ, ಸ್ವಾಮೀಜಿಗಳಿಗೆ ವಿಶೇಷ ಸಮ್ಮೇಳನ ಗೌರವ ಪ್ರದಾನ.…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರಿಂದ ಶ್ರೀ ರಾಮಕೃಷ್ಣಯ್ಯ ವಿರಚಿತ ‘ಸುಧನ್ವಾರ್ಜುನ’ ಪ್ರಸಂಗದೊಂದಿಗೆ ಮಾಸಿಕ ತಾಳಮದ್ದಲೆಯು ದಿನಾಂಕ 17 ಫೆಬ್ರವರಿ 2026ರ ಮಂಗಳವಾರ ಬನ್ನೂರಿನ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್ ಹಾಗೂ ಚೆಂಡೆ ಮದ್ದಲೆಗಳಲ್ಲಿ ಅನೀಶ ಕೃಷ್ಣ ಪುಣಚ, ಸಮರ್ಥ ವಿಷ್ಣು ಕಡಂಬಳಿಕೆ ಭಾಗವಹಿಸಿದರು. ಮುಮ್ಮೇಳದಲ್ಲಿ ಗುಡ್ಡಪ್ಪ ಬಲ್ಯ (ಸುಧನ್ವ), ಮಾಂಬಾಡಿ ವೇಣುಗೋಪಾಲ ಭಟ್ (ಅರ್ಜುನ), ಭಾಸ್ಕರ ಬಾರ್ಯ (ಪ್ರಭಾವತಿ), ಬಡೆಕ್ಕಿಲ ಚಂದ್ರಶೇಖರ ಭಟ್ (ಶ್ರೀ ಕೃಷ್ಣ), ದುಗ್ಗಪ್ಪ ನಡುಗಲ್ಲು (ಹಂಸಧ್ವಜ), ಪ್ರೇಮಲತಾ ರಾವ್ (ಶಂಖ, ಲಿಖಿತ), ಕಿಶೋರಿ ದುಗ್ಗಪ್ಪ ನಡುಗಲ್ಲು (ಸುಗರ್ಭೆ) ಪಾತ್ರಪೋಷಣೆ ಮಾಡಿದರು. ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ದೇವಳದ ಸಂಚಾಲನಾ ಸಮಿತಿಯ ಸದಸ್ಯರಾದ ಶಂಕರ ಭಟ್ ಪ್ರಾಯೋಜಿಸಿದರು. ಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್ಯ ಸ್ವಾಗತಿಸಿ, ದೇವಳದ ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್ ವಂದಿಸಿದರು.
ಸುಳ್ಯ : ಡಾ. ಪೂವಪ್ಪ ಕಣಿಯೂರು ಇವರ ‘ಅಚ್ಚಗನ್ನಡ ಗಾರುಡಿಗ ವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡ’ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 15 ಫೆಬ್ರವರಿ 2026ರಂದು ಸುಳ್ಯದ ಸಂಧ್ಯಾರಶ್ಮಿ ಸಾಹಿತ್ಯ ಸಂಘದ ವತಿಯಿಂದ ಸುಳ್ಯ ಸಂಧ್ಯಾರಶ್ಮಿ ಸಭಾಂಗಣದಲ್ಲಿ ನಡೆಯಿತು. ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಮಂಜೇಶ್ವರ ಇವರು ಕೃತಿ ಬಿಡುಗಡೆ ಮಾಡಿ ಮಾತನಾಡಿ, “ಕೊಳಂಬೆ ಅವರ ಬಗೆಗಿನ ಕೃತಿಗೆ ಅರ್ಥಪೂರ್ಣ ಹೆಸರು ನೀಡಲಾಗಿದ್ದು, ಭಾವಪೂರ್ಣ ಭಾವಚಿತ್ರವನ್ನು ಅಳವಡಿಸಲಾಗಿದೆ. ಇದರಲ್ಲಿ ಅವರ ವ್ಯಕ್ತಿತ್ವ ಹೃದಯಾಂಗಮವಾಗಿ ಮೂಡಿಬಂದಿದೆ. ಕೊಳಂಬೆ ಅವರು ಎಷ್ಟೋ ವಿಷಯಗಳಲ್ಲಿ ಸಾಧನೆ ಮಾಡಿರಬಹುದು. ನನಗೆ ಮೂರು ವರ್ಷದ ಶಿಕ್ಷಣ ನೀಡಿದ ಸಮಯದಲ್ಲಿ ನನ್ನ ಬದುಕನ್ನೇ ರೂಪಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಹೆಸರಾಗಿದ್ದು, ಜೀವಂತವಾಗಿ ಉಳಿಯುವ ಸಾಧನೆ ಮಾಡಿದ್ದಾರೆ. ವಸ್ತು, ವಿಷಯ, ನಿರ್ವಹಣೆ, ಮಾಧ್ಯಮ ಮುಂತಾದ ಜನಪರ ಮಹಾಕಾವ್ಯವನ್ನು ನೀಡಿದ್ದಾರೆ” ಎಂದು ಹೇಳಿದರು. ಅಧ್ಯಾಪಕ ಮತ್ತು ಲೇಖಕ ಅರವಿಂದ ಚೊಕ್ಕಾಡಿ ಅವರು ಕೃತಿ ಪರಿಚಯ ಮಾಡಿದರು. ಸಂಧ್ಯಾರಶ್ಮಿ ಸಾಹಿತ್ಯ ಉಪಾಧ್ಯಕ್ಷ ಕೆ.ಆರ್.…
ಕಿನ್ನಿಗೋಳಿ : ಸಚ್ಚೇರಿಪೇಟೆ ಸೇತುವೆ ಬಳಿಯ ಶಾಂಭವಿ ನದಿ ತಟದಲ್ಲಿರುವ ಆಳಗುಂಡಿ ಬ್ರಹ್ಮಸ್ಥಾನದಲ್ಲಿ ದಿನಾಂಕ 15 ಫೆಬ್ರವರಿ 2026ರಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ವತಿಯಿಂದ ಡಾ. ಬಿ. ಜನಾರ್ದನ ಭಟ್ ಬರೆದ ‘ತುಳುನಾಡಿನ ಬೆರ್ಮರು’ ಹಾಗೂ ‘ಹೊಸಹೊಳಲು’ ಕೃತಿಗಳ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು. ಸಂವಾದದಲ್ಲಿ ಭಾಗವಹಿಸಿದ ಖ್ಯಾತ ಸಾಹಿತಿ ಡಾ. ಬಿ. ಜನಾರ್ದನ ಭಟ್ “ತುಳುನಾಡಿನ ದೈವಾರಾಧನೆಯ ಕ್ಷೇತ್ರಗಳಲ್ಲಿ ಪ್ರಧಾನ ದೈವವಾಗಿ ಆರಾಧನೆಗೊಳ್ಳುವ ದೈವಿಕಶಕ್ತಿಯಾದ ಬೆರ್ಮರು ಚತುರ್ಮುಖ ಬ್ರಹ್ಮನಲ್ಲ. ಬೆರ್ಮರು ಎನ್ನುವ ಪದ ತಮಿಳು ಭಾಷೆಯ ಪೆರುಮಾಳ್ ಪದದ ಹಾಗೆ ದೇವರು ಎಂಬ ಅರ್ಥ ಕೊಡುವ ರೂಢನಾಮವಾಗಿದೆ. ‘ಬೆರ್ಮರು’ ಪದವನ್ನು ‘ಬ್ರಹ್ಮ’ ಎಂದು ಬರೆಯುವ ಕ್ರಮ ತುಳುಪದಗಳನ್ನು ಕನ್ನಡದಲ್ಲಿ ಬರೆಯುವ ಕ್ರಮದಂತೆ ಬಂದಿದೆ. ತುಳುವರ ಪ್ರಧಾನ ದೈವ ಬೆರ್ಮರು ಅಂದರೆ ಶಾಸ್ತಾವು ಅಥವಾ ಶಾತವಾಹನ. ಜೈನರ ಬ್ರಹ್ಮ ಯಕ್ಷನೂ ತುಂಬಾ ಕಾರಣಿಕದ ದೈವವಾಗಿದ್ದಾನೆ. ಮೊದಲು ಕೆಂಪುಕಲ್ಲು, ಆಮೇಲೆ ಗ್ರಾನೈಟ್ ಕಲ್ಲು,…
ಬೆಂಗಳೂರು : ಜನಪದರು ಸಾಂಸ್ಕೃತಿಕ ವೇದಿಕೆ (ರಿ.) ಪ್ರಸ್ತುತ ಪಡಿಸುವ ‘ಜ್ಞಾನ ದೇಗುಲ’ ನಮ್ಮೂರ ಸರ್ಕಾರಿ ಶಾಲೆ ನಾಟಕ ಪ್ರದರ್ಶನವನ್ನು ದಿನಾಂಕ 20 ಫೆಬ್ರವರಿ 2026ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಬಸವನ ಗುಡಿಯಲ್ಲಿರುವ ವಾಡಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕಕ್ಕೆ ಸಿದ್ಧೇಶ್ವರ ನನಸುಮನೆ ಇವರ ರಚನೆ ಮತ್ತು ನಿರ್ದೇಶನ, ಜನಾರ್ದನ್ ದಾಸರಹಳ್ಳಿ ಇವರ ಸಂಗೀತ ಹಾಗೂ ರಾಜಪ್ಪ ಕೋಲಾರ ಇವರ ಗಾಯನವಿದೆ. ನಮ್ಮ ಸರ್ಕಾರಿ ಶಾಲೆಗಳು ನಶಿಸಿ ಹೋಗುತ್ತಿರುವುದಕ್ಕೆ ಕಾರಣ ಯಾರು? ನಮ್ಮ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಹಾಗೂ ಬೆಳೆಯಬೇಕಾದರೆ ಯಾರೆಲ್ಲರ ಜವಾಬ್ದಾರಿ ಇರಬೇಕು, ಒಣ ಪ್ರತಿಷ್ಠೆಗೆ ಖಾಸಗಿ ಶಾಲೆಗೆ ಮಕಳನ್ನು ಸೇರಿಸಿ ಎದುರಿಸುವ ಸಮಸ್ಯೆಗಳ ಕುರಿತಾದ ಪರಿಣಾಮಕಾರಿ ದೃಶ್ಯಗಳುಳ್ಳ ಈ ‘ಜ್ಞಾನ ದೇಗುಲ’ ನಾಟಕವನ್ನು ನೋಡಲು ಕುಟುಂಬ ಸಮೇತರಾಗಿ ತಪ್ಪದೇ ಬನ್ನಿ.
ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನದ ಆಶ್ರಯದಲ್ಲಿ ‘ಸ್ತ್ರೀ ಶಕ್ತಿ’ ಎಂಬ ಪರಿಕಲ್ಪನೆಯಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ದಿನಾಂಕ 22 ಫೆಬ್ರವರಿ 2026ರಂದು ಭಾನುವಾರ ಸಂಜೆ 5-00 ಗಂಟೆಗೆ ಮಂಗಳೂರಿನ ಉರ್ವ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ನಡೆಯಲಿದೆ. ಉತ್ಕೃಷ್ಟ ಮಟ್ಟದ ‘ಶಾಸ್ತ್ರೀಯ ಗಾಯನ ಜುಗಲ್ಬಂಧಿ’ ಮತ್ತು ‘ವಯೋಲಿನ್ ಟ್ರಿಯೋ’ ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಸಂಗೀತಪ್ರಿಯರಿಗೆ ಇದೊಂದು ಸಂಗೀತದ ರಸದೌತಣವಾಗಲಿದೆ. ಪೂರ್ವಾರ್ಧದಲ್ಲಿ ಯಲ್ಲಾಪುರದ ಕುಮಾರಿ ವಿಭಾ ಹೆಗ್ಡೆ ಮತ್ತು ಬೆಂಗಳೂರಿನ ಕುಮಾರಿ ಶಿವಾನಿ ಮಿರ್ಜಾಕಾರ್ ಇವರಿಂದ ‘ಶಾಸ್ತ್ರೀಯ ಗಾಯನ ಜುಗಲ್ಬಂಧಿ’ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಹಾರ್ಮೋನಿಯಂನಲ್ಲಿ ಮಂಗಳೂರಿನ ಕುಮಾರಿ ಮೇಧಾ ಜಿ. ಭಟ್ ಮತ್ತು ಭೋಪಾಲ್ನ ಕುಮಾರಿ ವಿಜೇತಾ ಹೆಗ್ಡೆಯವರು ತಬ್ಲಾದಲ್ಲಿ ಸಾಥ್ ನೀಡಲಿದ್ದಾರೆ. ಉತ್ತಾರಾರ್ಧದಲ್ಲಿ ಮುಂಬೈನ ಡಾ. ಸಂಗೀತ ಶಂಕರ್, ರಾಗಿಣಿ ಶಂಕರ್ ಮತ್ತು ನಂದಿನಿ ಶಂಕರ್ ಇವರಿಂದ ‘ವಯೋಲಿನ್ ಟ್ರಿಯೋ’ ಕಾರ್ಯಕ್ರಮ ನಡೆಯಲಿದೆ. ಇವರಿಗೆ ತಬ್ಲಾದಲ್ಲಿ ಮುಂಬೈನ ಅನುರಾಧ ಪಾಲ್ ಇವರು ಸಾಥ್ ನೀಡಲಿದ್ದಾರೆ. ಈ…
ಬೆಂಗಳೂರು : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್, ಬೆಂಗಳೂರು ಲೀಜನ್ ಇವರ ವತಿಯಿಂದ ದಿನಾಂಕ 07 ಮತ್ತು 08 ಮಾರ್ಚ್ 2026ರಂದು ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನ ವಿಜಯೋತ್ಸವ 2026 ಸಂಬಂಧ ಉದಯೋನ್ಮುಖ ಕವಿ-ಕವಯತ್ರಿಯರಿಗೆ ಕವನ ಸ್ಪರ್ಧೆ ಏರ್ಪಡಿಸಿದೆ. ‘ವನ್ಯಜೀವಿ ಸಂರಕ್ಷಣೆ ನಮ್ಮ ಹೊಣೆ’ ಕುರಿತು 16 ಸಾಲುಗಳಿಗೆ ಮೀರದಂತೆ ಒಂದು ಕವನವನ್ನು ರಚಿಸಿ ಸ್ಪರ್ಧೆಗೆ ಕಳುಹಿಸಿಕೊಡಬಹುದಾಗಿದೆ. ಪ್ರಥಮ ಬಹುಮಾನ ರೂ.3000/-, ದ್ವಿತೀಯ ಬಹುಮಾನ ರೂ.2000/-, ತೃತೀಯ ಬಹುಮಾನ ರೂ.1000/- ಆಗಿದ್ದು, ಆಸಕ್ತರು ತಮ್ಮ ಕವನವನ್ನು ಸಿ.ಎಸ್. ಚಂದ್ರಶೇಖರ್, ಅಧ್ಯಕ್ಷರು, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್, 114, 4ನೇ ಮೇನ್, ಗಿರಿಧಾಮ ಲೇಔಟ್, ರಾಜರಾಜೇಶ್ವರಿ ನಗರ, ಬೆಂಗಳೂರು 560098 ಈ ವಿಳಾಸಕ್ಕೆ ದಿನಾಂಕ 28 ಫೆಬ್ರವರಿ 2026ರೊಳಗೆ ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಿ ಕಳುಹಿಸಬೇಕು. ದಿನಾಂಕ 07 ಮಾರ್ಚ್ 2026ರಂದು ಬಂಟರ ಸಂಘ, ಅತ್ತಿಗುಪ್ಪೆಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು.
ಮಂಗಳೂರು : ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರ, ಅತ್ತಾವರ ಮಂಗಳೂರು ಇಲ್ಲಿನ ಭಾಗವತಿಕೆ ವಿದ್ಯಾರ್ಥಿಗಳಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ ಪುರಸ್ಕೃತರು ಮತ್ತು ಯಕ್ಷಗುರುಗಳಾದ ಶ್ರೀ ರಾಮ ಸಾಲಿಯಾನ್ ಮಂಗಲ್ಪಾಡಿ ಇವರ ನಿರ್ದೇಶನದಲ್ಲಿ ‘ಯಕ್ಷ-ಗಾನಾರ್ಚನೆ’ ಕಾರ್ಯಕ್ರಮವು ದಿನಾಂಕ 13 ಫೆಬ್ರವರಿ 2026ರಂದು ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶ್ರೀ ರಾಮ ಸಾಲಿಯಾನ್ “ಯಕ್ಷಗಾನದ ಜೀವಾಳವಾದ ಭಾಗವತಿಕೆಯಲ್ಲಿ ತರಬೇತಿಯು ಸಾಂಪ್ರದಾಯಿಕ ಗಾಯನ ಶೈಲಿ, ತಾಳ-ಲಯ ಜ್ಞಾನ ಮತ್ತು ಸಾಹಿತ್ಯದ ಭಾವನೆಗಳನ್ನು ಅರ್ಥೈಸಿಕೊಂಡರೆ ಮುಂದೆ ಯಕ್ಷಗಾನ ಕ್ಷೇತ್ರದಲ್ಲಿ ಉತ್ತಮ ಭಾಗವತರಾಗಿ ಉತ್ತಮ ಹೆಸರ ಪಡೆಯಬಹುದು” ಎಂದು ಹೇಳಿದರು. ಸಮಾರಂಭದಲ್ಲಿ ಉಮಾಮಹೇಶ್ವರ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಲಕ್ಷೀಶ ಉಪಾಧ್ಯಾಯರು, ಉಮಾಮಹೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರಾದ ಶ್ರಿ ಕೇಶವ ಮಳಲಿ, ಉಮಾಮಹೇಶ್ವರ ಯಕ್ಷಗಾನ ಕೇಂದ್ರದ ಅಧ್ಯಕ್ಷರಾದ ಶ್ರಿ ಜಯದೇವ, ಗೌರವಾಧ್ಯಕ್ಷರಾದ ಶ್ರೀ ಚಂದ್ರಶೇಖರ್ ರೈಯವರು ಉಪಸ್ಥಿತರಿದ್ದರು. ಶ್ರೀ ದೇವಿಯವರು ಪ್ರಾರ್ಥನೆಗೈದರು. ಶ್ರೀ ಪ್ರಸಾದಣ್ಣರವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.…
ಮಂಗಳೂರು : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡ ‘ಸಂಗೀತ, ನೃತ್ಯ ವಿಚಾರ ಸಂಕಿರಣ’ ಸಂಭ್ರಮ 2026 ಕಾರ್ಯಕ್ರಮವು ದಿನಾಂಕ 14 ಫೆಬ್ರವರಿ 2025ರಂದು ಮಂಗಳೂರಿನ ತುಳು ಭವನದ ಸಿರಿ ಚಾವಡಿಯಲ್ಲಿ ಜರುಗಿತು. ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ನಿಕಟಪೂರ್ವ ಯೋಜನ ನಿರ್ದೇಶಕ ಪ್ರೊ. ಬೋಳಾರ ಶಿವರಾಮ್ ಶೆಟ್ಟಿ “ಸಂಗೀತ ನೃತ್ಯ ಶಿಲ್ಪ ಹಾಗೂ ಸಾಹಿತ್ಯ ದೈವಿಕ ಕಲೆ. ಇವೆಲ್ಲವೂ ನಮ್ಮ ಸಂಸ್ಕಾರದಿಂದ ಕೈ ಗೂಡುತ್ತವೆ. ಎಲ್ಲಿ ಸಂಸ್ಕಾರವಿದೆಯೋ ಅಲ್ಲಿ ಸಂಸ್ಕೃತಿ ಅಚ್ಚಳಿಯದೆ ಉಳಿಯುತ್ತದೆ. ಸಂಶೋಧನೆ ಎಂದರೆ ಏನು? ಸತ್ಯವನ್ನು ತೋರಿಸುವುದು ಒಂದು ವಿಷಯದ ಮೇಲೆ ದೀರ್ಘವಾದ ಅಧ್ಯಯನ ಇರುವುದನ್ನೇ ಪುನರಪಿ ಶೋಧಿಸುವುದು” ಎಂದು ನುಡಿದರು. ಅಧ್ಯಕ್ಷತೆ ವಹಿಸಿದ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಡಾ. ಶುಭ ಧನಂಜಯ್ ಅವರು “ನಮ್ಮ ಅಕಾಡೆಮಿಯಿಂದ ಇಂತಹ ವಿಚಾರ ಸಂಕಿರಣ, ಸಂಗೀತ ನೃತ್ಯಕ್ಕೆ ಬೇಕಾದಂತ ಹಲವು ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಎಟಕುವಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ವ್ಯವಸ್ಥಿತವಾಗಿ ಮಾಡಬೇಕೆಂದು…