Author: roovari

ಸುಳ್ಯ : ಸುಳ್ಯ ಪ್ರೆಸ್ ಕ್ಲಬ್, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಘಟಕದ ಆಶ್ರಯದಲ್ಲಿ ದಿನಾಂಕ 31 ಜನವರಿ 2026ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಲೇಖಕ, ಸಂಶೋಧಕ ಡಾ. ಸುಂದರ ಕೇನಾಜೆಯವರ ‘ಮಾತಿಲ್ಲದ ಮಾತು’ ಅಂಕಣ ಬರಹಗಳ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಹಾಗೂ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ “ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದೇ ಕಲೆ ಮತ್ತು ಸಾಹಿತ್ಯದ ಮೂಲ ಧ್ಯೇಯ. ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗದಿದ್ದರೆ ಸ್ವಸ್ಥ ಸಮಾಜ ಕಟ್ಟಲು ಸಾಧ್ಯವಿಲ್ಲ. ಸಮಾಜದಲ್ಲಿ ಕಂಡ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಅದನ್ನು ಎದುರಿಸುವ ಶಕ್ತಿಯನ್ನು ಸಾಹಿತ್ಯ ಮತ್ತು ಕಲೆಗಳು ಪ್ರದರ್ಶಿಸಬೇಕು. ವಾಸ್ತವವನ್ನು ಬಿಂಬಿಸದಿದ್ದರೆ ಅಂತಹಾ ಸಾಹಿತ್ಯ ಮತ್ತು ಕಲೆ ಅಪ್ರಸ್ತುತವಾಗುತ್ತದೆ. ಒಬ್ಬ ಸಾಹಿತಿ ಒಂದು ಪದ ಸೃಷ್ಟಿಸಿದರೆ ಅದು…

Read More

ಮಂಗಳೂರು : ನೃತ್ಯಾಂಗನ್ ಟ್ರಸ್ಟ್ ಈ ಬಾರಿ ತನ್ನ 13ನೇ ಆವೃತ್ತಿಯ ‘ಸಮರ್ಪಣ್ 2026’ ಎರಡು ದಿನಗಳ ಭಾರತೀಯ ಶಾಸ್ತ್ರೀಯ ನೃತ್ಯೋತ್ಸವನ್ನು ಮಂಗಳೂರಿನ ಡಾನ್‌ಬಾಸ್ಕೊ ಹಾಲ್‌ನಲ್ಲಿ ದಿನಾಂಕ 7 ಮತ್ತು 8 ಫೆಬ್ರವರಿ 2026ರಂದು ಪ್ರತಿದಿನ ಸಂಜೆ ಗಂಟೆ 5-45ಕ್ಕೆ ಆಯೋಜಿಸಿದೆ. ದಿನಾಂಕ 7 ಫೆಬ್ರವರಿ 2026ರಂದು ನಡೆಯುವ ಕಾರ್ಯಕ್ರಮಕ್ಕೆ ಶಾರದಾ ನಾಟ್ಯಾಲಯ ಕುಳಾಯಿ ಹೊಸಬೆಟ್ಟುವಿನ ಕಲಾ ನಿರ್ದೇಶಕಿ, ಗುರು ಭಾರತಿ ಸುರೇಶ್ ಚಾಲನೆ ನೀಡುವರು. ಅನಂತರ, ಮೈಸೂರಿನ ಶ್ರೀದುರ್ಗಾ ನೃತ್ಯ ಅಕಾಡೆಮಿಯ ಶ್ರೀವಿದ್ಯಾ ಶಶಿಧರ್ ಅವರ ಶಿಷ್ಯರಾದ ಭುವನ್ ಕುಮಾರ್ ಎಸ್, ಸ್ಪೂರ್ತಿ ಬಿ.ವಿ. ಮತ್ತು ನಿಸರ್ಗ ಎಸ್. ಭರತನಾಟ್ಯ ತ್ರಯ ಪ್ರದರ್ಶನ ನೀಡುವರು. ನಂತರ ಚೆನ್ನೈಯ ಅಶ್ವತಿ ಸುರೇಶ್ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನೀಡುವರು. ದಿನಾಂಕ 08 ಫೆಬ್ರವರಿ 2026ರಂದು ಕಲ್ಲಡ್ಕದ ಕಲಾನಿಕೇತನ ಡಾನ್ಸ್ ಫೌಂಡೇಶನ್ ಇದರ ಕಲಾ ನಿರ್ದೇಶಕಿ, ಗುರು ವಿದ್ಯಾ ಮನೋಜ್ ಚಾಲನೆ ನೀಡುವರು. ನಂತರ ಬೆಂಗಳೂರಿನ ಗೌರಿ ಮನೋಹರಿ ಎಚ್. ಹಾಗೂ ಕಿನ್ನಿಗೋಳಿ ಮೂಲದ…

Read More

ಮಾಲತಿ ಪಟ್ಟಣಶೆಟ್ಟಿಯವರು ಕಾವ್ಯ ಮತ್ತು ಕಥೆಗಳ ಜೊತೆಗೆ ಪ್ರಬಂಧಗಳನ್ನು ಕೂಡ ಬರೆದಿದ್ದಾರೆ. 2020ರಲ್ಲಿ ಪ್ರಕಟವಾದ ‘ಬಗೆದಷ್ಟು ಜೀವಜಲ’ ಎಂಬ ಸಂಕಲನದಲ್ಲಿ ಇಪ್ಪತ್ತಾರು ಪ್ರಬಂಧಗಳಿವೆ. ಬಗೆದಷ್ಟು ಉಕ್ಕಿ ಬರುವ ಬದುಕಿನ ಚೆಲುವು ಎಂಬ ಅರ್ಥವನ್ನು ಈ ಶೀರ್ಷಿಕೆಯು ಧ್ವನಿಸುತ್ತದೆ. ಅವರ ಪ್ರಬಂಧಗಳಲ್ಲಿ ಅನುಭವಾತ್ಮಕ, ಆತ್ಮಕಥಾನಕ ವಿಚಾರಗಳೊಂದಿಗೆ ಪ್ರವಾಸ, ಪ್ರಸಂಗ ಮತ್ತು ವ್ಯಕ್ತಿಚಿತ್ರಗಳಿವೆ. ಇವುಗಳು ನೆನಪಿನ ತುಣುಕುಗಳಂತಿರುವ ಅನುಭವ ಕಥನದ ಅಧ್ಯಾಯಗಳಂತಿರುವುದರಿಂದ ಶುದ್ಧಾಂಗವಾಗಿ ಲಲಿತಪ್ರಬಂಧ ಅಥವಾ ಹರಟೆ ಪ್ರಕಾರಕ್ಕೆ ಸೇರುವುದಿಲ್ಲ. ಲೇಖಕಿಯ ಆತ್ಮಕತೆಯ ಪುಟದಂತಿರುವ ‘ನೆನಪು ಗಂಧರ್ವರು’ ಕಲಿಕೆಯ ಮೇಲಿನ ಆಸಕ್ತಿ, ಆಟಪಾಠಗಳೊಡನೆ ಸಾಗುತ್ತಿದ್ದ ಚಟುವಟಿಕೆಗಳು, ಸ್ಪರ್ಧೆಗಳು, ದೊರೆತ ಸಾಹಿತ್ಯ ಸಂಸ್ಕಾರ ಹಿನ್ನೆಲೆಯಲ್ಲಿ ಅವರ ಶಾಲಾಜೀವನದ ವಿವರಗಳನ್ನು ಕಟ್ಟಿಕೊಡುತ್ತದೆ. ‘ಇದಕ್ಕೆ ಏನೆನ್ನಬೇಕು?’ ಎಂಬ ರಚನೆಯು ಇದರ ಮುಂದುವರಿದ ಪುಟದಂತಿದ್ದು ಗುರು ಶಿಷ್ಯೆಯರ ಸಂಬಂಧ ಭಕ್ತಿ ಆರಾಧನೆಗಳನ್ನು ಮೀರಿ ಪ್ರೇಮವಾಗಿ ಬದಲಾಗುವ ರೀತಿಯು ನವಿರಾಗಿ ಮೂಡಿ ಬಂದಿದೆ. “ಇದಕ್ಕೆ ಏನೆನ್ನಬೇಕು? ಗುರುಭಕ್ತಿಯೇ? ಪ್ರೀತಿಯೇ? ಸ್ನೇಹವೇ? ಹುಚ್ಚು ಹಂಬಲವೇ? ಅಥವಾ ಹೆಸರಿಸಲು ಬಾರದ ಮುಗ್ಧ, ಸ್ನಿಗ್ಧ ಎಳೆಹರೆಯದ…

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಾ. ಡಿಸೋಜಾ ಮಕ್ಕಳ ಸಾಹಿತ್ಯ ದತ್ತಿ ಕಾರ್ಯಕ್ರಮದಂತೆ ಕೊಡಗು ಜಿಲ್ಲೆಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕತೆ ಬರೆಯುವ ಸ್ಪರ್ಧೆಯನ್ನು ನಗರದ ಮಹದೇವ ಪೇಟೆಯಲ್ಲಿರುವ ಎ.ಎಲ್.ಜಿ. ಕ್ರೆಸೆಂಟ್ ಶಾಲೆಯಲ್ಲಿ ದಿನಾಂಕ 10 ಫೆಬ್ರುವರಿ 2026ರಂದು ಬೆಳಿಗ್ಗೆ 10-30 ಗಂಟೆಗೆ ಏರ್ಪಡಿಸಲಾಗಿದೆಯೆಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ತಿಳಿಸಿದ್ದಾರೆ. ಸ್ಪರ್ಧೆಗೆ ಜಿಲ್ಲೆಯ ಎಲ್ಲಾ ಪ್ರಾಥಮಿಕ ಶಾಲೆಗಳಿಂದ ಓರ್ವ ಅಥವಾ ಇಬ್ಬರು ವಿದ್ಯಾರ್ಥಿಗಳನ್ನು ಕಳುಹಿಸಬಹುದು. ಕಥಾ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಹೆಸರನ್ನು ದಿನಾಂಕ 05 ಫೆಬ್ರುವರಿ 2026ರ ಒಳಗಾಗಿ ಮೊಬೈಲ್ ಸಂಖ್ಯೆ 9113892396 ಗೆ ವಾಟ್ಸಪ್ ಮೂಲಕ ಕಳುಹಿಸಬಹುದು ಅಥವಾ ಅಧ್ಯಕ್ಷರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುದರ್ಶನ ವೃತ್ತದ ಬಳಿ, ಮಡಿಕೇರಿ ಈ ವಿಳಾಸಕ್ಕೆ ಪತ್ರ ಮುಖೇನ ತಿಳಿಸಬೇಕಾಗಿ ಕ.ಸಾ.ಪ. ಜಿಲ್ಲಾಧ್ಯಕ್ಷರು ಕೋರಿದ್ದಾರೆ.

Read More

ಮಂಗಳೂರು : ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 290ನೇ ಕಾರ್ಯಕ್ರಮವಾಗಿ ಸುರ್ ಸೊಭಾಣ್ ಗಾಯನ ಶಾಲೆಯ ವಿದ್ಯಾರ್ಥಿಗಳಿಂದ ‘ಸುರ್ ಸುರಾಯ್’ ಎಂಬ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಮತ್ತು ಕೊಂಕಣಿ ಹಾಡುಗಳ ಸಂಗೀತ ಸಂಜೆ ದಿನಾಂಕ 01 ಫೆಬ್ರವರಿ 2026ರಂದು ಶಕ್ತಿನಗರದ ಕಲಾಂಗಣದಲ್ಲಿ ಪ್ರಸ್ತುತವಾಯಿತು. ಈ ಕಾರ್ಯಕ್ರಮವನ್ನು ಕೊಂಕಣಿ ಲೇಖಕರ ಸಂಘದ ಸಂಚಾಲಕ ರಿಚಾರ್ಡ್ ಮೊರಾಸ್ ಅವರು ಗಂಟೆ ಬಾರಿಸಿ ಉದ್ಘಾಟಿಸಿದರು. ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಲುವಿ ಜೆ. ಪಿಂಟೊ, ರೊನಿ ಕ್ರಾಸ್ತಾ ಮತ್ತು ಎಲ್ರೊನ್ ರೊಡ್ರಿಗಸ್ ಉಪಸ್ಥಿತರಿದ್ದರು. ಆರಂಭದಲ್ಲಿ ಆಸ್ಟನ್ ಪಿಂಟೊ ಇವರಿಂದ ಕೊಳಲು ವಾದನ ನಡೆಯಿತು. ನಂತರ ನಿರ್ದೇಶಕಿ ಶಿಲ್ಪಾ ಕುಟಿನ್ಹಾ ನೇತೃತ್ವದಲ್ಲಿ ಮಕ್ಕಳು ಹಿಂದೂಸ್ತಾನಿ ಶಾಸ್ತ್ರೀಯ ಗಾಯನದ ಕೆಲ ರಾಗಗಳನ್ನು ಹಾಗೂ ಕೊಂಕಣಿಯ ಕೆಲ ಹಾಡುಗಳನ್ನು ಪ್ರಸ್ತುತಪಡಿಸಿದರು. ಎರಿಕ್ ಒಝೇರಿಯೊ ಸ್ವರ ಸಂಯೋಜಿಸಿದ ಕೆಲ ಹಾಡುಗಳನ್ನು ಸರ್ ಗಮದಲ್ಲಿ ಹಾಡುವ ಪ್ರಯೋಗ ಕೂಡಾ ನಡೆಯಿತು. ಸಹತರಬೇತುದಾರೆ ಡಿಯಲ್ ಡಿಸೋಜ ಮತ್ತು ಮಕ್ಕಳ ಪೋಷಕರು ಕೂಡಾ ಒಂದೊಂದು ಹಾಡುಗಳನ್ನು…

Read More

ಉಡುಪಿ : ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಇವರ ವತಿಯಿಂದ 2024 (ಜನವರಿ 2024ರಿಂದ ಡಿಸೆಂಬರ್ 2024) ಹಾಗೂ 2025 (ಜನವರಿ-2025ರಿಂದ ಡಿಸೆಂಬರ್-2025)ನೇ ಸಾಲಿನಲ್ಲಿ ಮಕ್ಕಳ ಕ್ಷೇತ್ರದಲ್ಲಿ ರಚಿಸಲ್ಪಟ್ಟ ಆಯ್ದ ಉತ್ತಮ ಪುಸ್ತಕಗಳಿಗೆ ‘ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿ’ಗಾಗಿ ಪುಸ್ತಕಗಳನ್ನು ಪ್ರದಾನ ಮಾಡಲು ಉದ್ದೇಶಿಸಲಾಗಿದ್ದು, 2024 ಹಾಗೂ 2025ನೇ ಸಾಲಿನ ಅವಧಿಯಲ್ಲಿ ಅಂದರೆ ಜನವರಿಯಿಂದ ಡಿಸೆಂಬರ್ ತಿಂಗಳ ಅಂತ್ಯದ ಅವಧಿಯಲ್ಲಿ ಪ್ರಕಟಗೊಂಡ ಸ್ವರಚಿತ ಕವನ ಸಂಕಲನ, ಕಥಾ ಸಂಕಲನ, ನಾಟಕ (ಪಠ್ಯಾಧಾರಿತ ಬಿಟ್ಟು), ಮಕ್ಕಳ ಕಾದಂಬರಿ, ವೈಜ್ಞಾನಿಕ ಲೇಖನಗಳ ಸಂಕಲನ, ಅನುವಾದಿತ ಕೃತಿ (ಯಾವುದೇ ಪ್ರಕಾರದ ಮಕ್ಕಳ ಸಾಹಿತ್ಯ), ಮಕ್ಕಳ ಸಾಹಿತ್ಯ ವಿಮರ್ಶಾ ಕೃತಿ ಹೀಗೆ ಏಳು ಪ್ರಕಾರದ ಮಕ್ಕಳ ಸಾಹಿತ್ಯದ ಕೃತಿಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ. ಪ್ರಶಸ್ತಿಗಾಗಿ ಪರಿಗಣಿಸಲು ಪ್ರತಿಯೊಂದು ಕೃತಿಯ 4 ಪ್ರತಿಗಳನ್ನು ಹಾಗೂ ಸ್ವವಿವರಗಳನ್ನೊಳಗೊಂಡ ಮನವಿಯೊಂದಿಗೆ ದಿನಾಂಕ 20 ಫೆಬ್ರವರಿ 2026ರ ಒಳಗಾಗಿ ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಂದ್ರಿಕಾ ಲೇ-ಔಟ್ ಹಿಂಭಾಗ, ಕೆ.ಹೆಚ್.ಬಿ. ಕಾಲೋನಿ, ಲಕಮನಹಳ್ಳಿ, ಧಾರವಾಡ-580004…

Read More

ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ‘ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.)’ ಇದರ ವತಿಯಿಂದ ದತ್ತಿ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ ಸಮಾರಂಭವನ್ನು ದಿನಾಂಕ 07 ಫೆಬ್ರುವರಿ 2026ರಂದು ಅಪರಾಹ್ನ 2-30 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ಸಾಹಿತ್ಯ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಶಕುಂತಳಾ ಟಿ. ಶೆಟ್ಟಿಯವರು ವಹಿಸಲಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲ ಸಚಿವರಾದ ಡಾ. ಎ. ಸುಬ್ಬಣ್ಣ ರೈ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಪ್ರಕಟಿತ ಕವನ ಸಂಕಲನದ ಬಗ್ಗೆ ಕವಿ ಡಾ. ವಸಂತಕುಮಾರ್ ಪೆರ್ಲ ಹಾಗೂ ಸಂಶೋಧನಾತ್ಮಕ ಕೃತಿಯ ಬಗ್ಗೆ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಪಿ. ಇವರು ಅನಿಸಿಕೆಗಳನ್ನಾಡಲಿದ್ದಾರೆ. ಮುಂಬಯಿಯ ಸುನೀತಾ ಎಂ. ಶೆಟ್ಟಿ ಪ್ರಾಯೋಜಿಸುವ ‘ತೌಳವ ಸಿರಿ’ ಪ್ರಶಸ್ತಿಗೆ ತುಳು, ಕನ್ನಡ ಮತ್ತು ಕೊಂಕಣಿ ಭಾಷೆಯ ಹಿರಿಯ ಲೇಖಕಿ ಕ್ಯಾಥರಿನ್…

Read More

ಕಾಸರಗೋಡು : “ಬಹು ಭಾಷಾ ಸಂಗಮ ಭೂಮಿಯಾದ ಕಾಸರಗೋಡು ಪ್ರದೇಶದಲ್ಲಿ ವಿವಿಧ ಆಚಾರ, ವಿಚಾರಗಳು ಧ್ವನಿಸುತ್ತವೆ. ಇಲ್ಲಿನ ಭಾಷಾ ವೈವಿಧ್ಯತೆಗಳು ಉಳಿದೆಲ್ಲಾ ಪ್ರದೇಶಗಳಿಗೆ ಮಾದರಿ. ನೂರ ಇಪ್ಪತ್ತೈದು ಗಾಯಕ-ಗಾಯಕಿಯರನ್ನ ಒಂದೇ ವೇದಿಕೆಯಲ್ಲಿ ವಿವಿಧ ಭಾಷೆಗಳ ಹಾಡುಗಳನ್ನು ಹಾಡುವುದೆಂದರೆ ದೊಡ್ಡ ಸಾಹಸವೇ ಸರಿ” ಎಂದು ಕಾಸರಗೋಡಿನ ಶಾಸಕ ಎನ್.ಎ. ನೆಲ್ಲಿಕುನ್ನು ಹೇಳಿದರು. ಅವರು ಕಾಸರಗೋಡಿನ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು (ರಿ.) ಇದರ ಸಂಗೀತ ಘಟಕವಾದ ‘ಸ್ವರಚಿನ್ನಾರಿ’ಯ ನೇತೃತ್ವದಲ್ಲಿ ದಿನಾಂಕ 05 ಜನವರಿ 2026ರಂದು ಪದ್ಮಗಿರಿ ಕಲಾಕುಟೀರದಲ್ಲಿ ಏರ್ಪಡಿಸಿದ ‘ಅಂತರ್ಧ್ವನಿ’ ಕರೋಕೆ ಗಾಯಕರ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಇಲ್ಲಿನ ನಾಡು ನುಡಿ ಸಂಸ್ಕೃತಿಗಳಿಗಾಗಿ ಕಳೆದ ಎರಡು ದಶಕಗಳಿಂದ ದುಡಿಯುತ್ತಿರುವ ರಂಗಚಿನ್ನಾರಿಯ ಸಾಧನೆಗಳನ್ನು ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು. ಕಾಸರಗೋಡಿನ ಎಲ್ಲಾ ವರ್ಗದ ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸಂಭ್ರಮಿಸುವುದೆಂದರೆ ನಿಜಕ್ಕೂ ಅಭಿನಂದನೀಯ ಎಂದರು. ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ವಿ. ಮನೋಹರ್, ಕಾಸರಗೋಡಿನ ನಗರ ಸಭಾ ಮಾಜಿ…

Read More

ಮಂಗಳೂರು : ಸ್ಪೀಕ್ ಮಕೇ ಎನ್.ಐ.ಟಿ.ಕೆ. ಇವರು ಪ್ರಸ್ತುತ ಪಡಿಸುವ ‘ವಿರಾಸತ್’ ಸಂಗೀತ, ನೃತ್ಯ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ದಿನಾಂಕ 4ರಿಂದ 8 ಫೆಬ್ರುವರಿ 2026ರಂದು ಸುರತ್ಕಲ್ಲಿನ ಎನ್.ಐ.ಟಿ.ಕೆ.ಯ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ದಿನಾಂಕ 4 ಫೆಬ್ರುವರಿ 2026ರಂದು ಸಂಜೆ 5-00 ಗಂಟೆಗೆ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಪದ್ಮಶ್ರೀ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ಇವರ ಹಿಂದೂಸ್ತಾನಿ ಗಾಯನಕ್ಕೆ ನರೇಂದ್ರ ನಾಯಕ್ ಹಾರ್ಮೋನಿಯಂ ಮತ್ತು ಪಂಡಿತ್ ಕೇಶವ್ ಜೋಶಿ ತಬಲಾ ಸಾಥ್ ನೀಡಲಿದ್ದಾರೆ. ದಿನಾಂಕ 5 ಫೆಬ್ರುವರಿ 2026ರಂದು ಸಂಜೆ 6-00 ಗಂಟೆಗೆ ವಿದ್ವಾನ್ ಆರ್.ಕೆ. ಶ್ರೀರಾಮಕುಮಾರ್ ಇವರ ಕರ್ಣಾಟಿಕ್ ವಯೋಲಿನ್ ವಾದನಕ್ಕೆ ವಿದ್ವಾನ್ ಮನೋಜ್ ಸಿವ ಮೃದಂಗದಲ್ಲಿ ಮತ್ತು ವಿದ್ವಾನ್ ಅನಿರುದ್ಧ ಆತ್ರೇಯ ಇವರು ಕಾಂಜೀರದಲ್ಲಿ ಸಹಕರಿಸಲಿದ್ದಾರೆ. ದಿನಾಂಕ 6 ಫೆಬ್ರುವರಿ 2026ರಂದು ಬೆಳಗ್ಗೆ 9-30 ಗಂಟೆಗೆ ವಿದುಷಿ ವೈಜಯಂತಿ ಕಾಶಿ ಇವರಿಂದ ಕೂಚಿಪುರಿ ಮತ್ತು ವಿದ್ವಾನ್ ಪ್ರವೀಣ್ ಕುಮಾರ್ ಇವರಿಂದ ಭರತನಾಟ್ಯ ಹಾಗೂ 1-30 ಗಂಟೆಗೆ…

Read More

ಕಾಸರಗೋಡು : ಕೇರಳ ಸಂಗೀತ ಅಕಾಡೆಮಿಯ ಸ್ಕಾಲರ್ಷಿಪ್, ಇಂಡಿಯನ್ ಪೀಪಲ್ ಥೀಯೇಟರ್ ನ ‘ಗಾನ ಸುಧಾ’ ಪ್ರಶಸ್ತಿ ವಿಜೇತೆ 1997ರಿಂದಲೇ ಕಾಸರಗೋಡಿನಲ್ಲಿ ‘ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯ’ ಸ್ಥಾಪಿಸಿ ಸಾವಿರಾರು ಸಂಗೀತ ವಿದ್ಯಾರ್ಥಿಗಳಿಗೆ ಪ್ರತಿಭೆ ಬೆಳಗಿಸಲು ಸಂಗೀತ ಉಪಕರಣ ವಿಧಗ್ದ ತನ್ನ ಪತಿ ಶ್ರೀ ಈಶ್ವರ ಭಟ್ ಇವರ ಪ್ರೋಸ್ತಾಹದಿಂದ ಕಲಾ ತಪಸ್ಸು ಮಾಡುತ್ತಿರುವ ಹಾಗೂ ನೆರೆಯ ಹೊಸದುರ್ಗದಲ್ಲಿ ಸದ್ಗುರು ತ್ಯಾಗ ಬ್ರಹ್ಮ ಸಭಾ ಹುಟ್ಟು ಹಾಕುವಲ್ಲಿ ಪಾಲುಗೊಂಡು, ಕರ್ನಾಟಕ, ಕೇರಳ, ತಮಿಳುನಾಡಿನ ಸಭಾಗಳಲ್ಲಿ ತಮ್ಮ ಪ್ರತಿಭೆಯನ್ನು ಮಿಂಚಿಸಿ ಕಾಸರಗೋಡಿನ ಹೆಸರನ್ನು ದೇಶ ವ್ಯಾಪಿ ಮಾಡಿದ, ಮಾಡುತ್ತಿರುವ ಕಾಸರಗೋಡಿನ ವಿದ್ಯಾನಗರದ ನಿವಾಸಿಗಳಾದ ಸಂಗೀತ ಲೋಕದ ಶಾಸ್ತ್ರೀಯ ಕಲಾ ತಪಸ್ವಿಗಳಾದ ಉಷಾ ಈಶ್ವರ ಭಟ್ ದಂಪತಿಗಳಿಗೆ ‘ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008) ಇದರ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ ‘ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026’ ನೀಡಿ ಗೌರವಿಸಲು ತೀರ್ಮಾನಿಸಿದೆ. ಈ ಪ್ರಶಸ್ತಿಯನ್ನು ಕನ್ನಡ ಭವನದ…

Read More