Author: roovari

ವಿಜಯಪುರ : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಿಜಯಪುರ ಜಿಲ್ಲಾ ಸಮಿತಿಯು ಆಯೋಜಿಸಿದ್ದ ಕುಮಾರ ವಾಲ್ಮೀಕಿ ರಚಿಸಿದ ತೊರವೆ ರಾಮಾಯಣದ ಸೀತಾರಾಮ ಕಲ್ಯಾಣ ಪ್ರಸಂಗದ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 19 ಜನವರಿ 2026ರಂದು ಯಶಸ್ವಿಯಾಗಿ ಪೂರ್ಣಗೊಂಡಿತು. ಹಿರಿಯ ಗಮಕಿ ಶ್ರೀಮತಿ ಶಾಂತಾಬಾಯಿ ಕೌತಾಳ ಇವರು ಸ್ಪಷ್ಟವಾಗಿ, ನಿರಾಯಾಸವಾಗಿ ಗಮಕ ವಾಚನ ಮಾಡಿದರು ಮತ್ತು ಹಿರಿಯ ಸಾಹಿತಿ, ಗಮಕ ಸಾಹಿತ್ಯ ಪರಿಷದ್ ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಶ್ರೀ ಕಲ್ಯಾಣರಾವ ದೇಶಪಾಂಡೆ ವ್ಯಾಖ್ಯಾನ ಮಾಡಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ಜರುಗಿದ ಕಾರ್ಯಕ್ರಮದಲ್ಲಿ 55ಕ್ಕಿಂತ ಹೆಚ್ಚು ಆಸಕ್ತರಿಗೆ ಹಿರಿಯ ಕಲಾವಿದರಿಬ್ಬರೂ ಗಮಕದ ಸವಿ ಉಣಬಡಿಸಿದರು.

Read More

ಕನ್ನಡ ಮಹಿಳಾ ಸಾಹಿತ್ಯ ಪರಂಪರೆಯ ನಾಲ್ಕು ಪೀಳಿಗೆಗಳನ್ನು ವಿಮರ್ಶಕರು ಸ್ಪಷ್ಟವಾಗಿ ಗುರುತಿಸಿದ್ದಾರೆ. ಮೊದಲ ಪೀಳಿಗೆಯ ಲೇಖಕಿಯರಾದ ಕೊಡಗಿನ ಗೌರಮ್ಮ, ಶ್ಯಾಮಲಾ ಬೆಳಗಾಂವಕರ ಮೊದಲಾದವರು ಸಾಮಾಜಿಕ ಹಿನ್ನೆಲೆಯಲ್ಲಿ ಹೆಣ್ಣಿನ ಸಮಸ್ಯೆಗಳ ಕುರಿತು ಮೂಲಭೂತ ಪ್ರಶ್ನೆಗಳನ್ನು ಎತ್ತಿದರು. ಸಮಾಜದ ಜ್ವಲಂತ ಸಮಸ್ಯೆಗಳ ಚಿತ್ರಣವನ್ನು ನೀಡಲು ವಾಸ್ತವದ ಹಾದಿಯನ್ನು ಅನುಸರಿಸಿದರು. ಆ ಕಾಲದ ಹೆಂಗಸರಿಗೆ ಸ್ವತಂತ್ರ ಅಸ್ತಿತ್ವವಿಲ್ಲದಿದ್ದುದರಿಂದ ಇವರ ಕತೆಗಳಲ್ಲಿ ಹೆಂಗಸರು ಹೆಚ್ಚಾಗಿ ಶೋಷಿತ ಪಾತ್ರಗಳಾಗಿ ಕಾಣಿಸಿಕೊಂಡರು. ಅವರ ಅಸ್ತಿತ್ವ, ಹೃದಯವಂತಿಕೆ ಮತ್ತು ಪ್ರತಿಭೆಗಳನ್ನು ಸಮಾಜವು ಗುರುತಿಸುವುದಿಲ್ಲ ಎಂಬ ನೋವು ಅವರಿಂದ ಕತೆಗಳನ್ನು ಬರೆಸಿತು. ಎರಡನೇ ಪೀಳಿಗೆಯ ಪ್ರಮುಖ ಲೇಖಕಿಯರಾದ ತ್ರಿವೇಣಿ, ಅನುಪಮಾ ನಿರಂಜನ ಮೊದಲಾದವರ ಕತೆ ಕಾದಂಬರಿಗಳು ಹೆಣ್ಣಿನ ಅಸ್ಮಿತೆಯ ಅರಿವು, ಆಕೆಯ ಕ್ರಿಯಾಶಕ್ತಿಯನ್ನು ಅನಾವರಣಗೊಳಿಸುವುದರೊಂದಿಗೆ ವೈಜ್ಞಾನಿಕ ತಿಳಿವು ಮತ್ತು ಮನೋವೈಜ್ಞಾನಿಕ ಒಳನೋಟಗಳನ್ನು ಒದಗಿಸಿದ್ದರಿಂದ ಅವರ ಕೃತಿಗಳಿಗೆ ಆಳ, ವಿಸ್ತಾರಗಳು ಒದಗಿದವು. ರಾಜಲಕ್ಷ್ಮಿ ಎನ್. ರಾವ್ ಮತ್ತು ವೀಣಾ ಶಾಂತೇಶ್ವರರ ಕತೆಗಳಲ್ಲಿ ಕಾಣುವ ಅಂತರ್ಮುಖತೆ, ದ್ವಂದ್ವ ಮತ್ತು ದಿಟ್ಟತನಗಳು ನವ್ಯ ಮನೋಧರ್ಮದ ಅಂಗವಾಗಿ ಬಂದವು.…

Read More

ಬೆಂಗಳೂರು : ಚೇತನ ಪ್ರತಿಷ್ಠಾನ ಧಾರವಾಡ ಮತ್ತು ಗಡಿನಾಡ ಕನ್ನಡ ಸಾಂಸ್ಕೃತಿಕ ಸೇವಾ ಸಂಸ್ಥೆ ಕಾಸರಗೋಡು ಇವರ ಜಂಟಿ ಆಶ್ರಯದಲ್ಲಿ 77ನೇ ಗಣ ರಾಜ್ಯೋತ್ಸವದ ಅಂಗವಾಗಿ ‘ಜನ ಗಣ ಮನ’ ಯಕ್ಷಗಾನ ನೃತ್ಯ, ಗೀತಗಾಯನ, ಬಹುಭಾಷಾ ಭಾವೈಕ್ಯತಾ ಕಾವ್ಯವಾಚನ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 24 ಜನವರಿ 2026ರಂದು ಬೆಂಗಳೂರು ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಲೇಖಕಿ ಡಾ. ಶ್ವೇತಾ ಪ್ರಕಾಶ್ ಇವರು ಉದ್ಘಾಟಿಸಲಿದ್ದು, ಸಾಹಿತಿ ಡಾ. ಚಂದ್ರಶೇಖರ ಮಾಡಲಗೇರಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಸೇವಕ ಮಹೇಂದ್ರ ಮುಣ್ಣೋತ ಇವರ ಘನ ಉಪಸ್ಥಿತಿಯಲ್ಲಿ ಖ್ಯಾತ ಚಲನಚಿತ್ರ ಗೀತ ರಚನೆಕಾರರಾದ ಡಾ. ವಿ. ನಾಗೇಂದ್ರ ಪ್ರಸಾದ್ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಭಾರತ ಸೇವಾರತ್ನ ಪ್ರಶಸ್ತಿ, ಭಾರತ ಭೂಷಣ ರಾಷ್ಟ್ರೀಯ ಪ್ರಶಸ್ತಿ, ಜ್ಞಾನ ಭಾರತಿ ರಾಷ್ಟ್ರೀಯ ಶಿಕ್ಷಕ/ಕಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Read More

ಮಂಗಳೂರು : ಸಂದೇಶ ಸಂಸ್ಥೆಯ ಆವರಣದಲ್ಲಿ ದಿನಾಂಕ 21 ಜನವರಿ 2026ರಂದು ಕರ್ನಾಟಕ ಪ್ರಾಂತೀಯ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ (ರಿ.) ಇದರ ವತಿಯಿಂದ 35ನೇ ವರ್ಷದ ‘ಸಂದೇಶ ಪ್ರಶಸ್ತಿ 2026’ ಪ್ರದಾನ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ “ಇಂದು ಜಗತ್ತು ಯುದ್ಧದ ಕಾತರ, ತಲ್ಲಣದಿಂದ ತುಂಬಿದೆ. ಲಾಭಕೋರತನ, ಸಾಮ್ರಾಜ್ಯಶಾಹಿತ್ವದ ಲಾಲಸೆಗಳು ಗಾಬರಿ ಹುಟ್ಟಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳು ಮಾತ್ರ ಸಮಾಜವನ್ನು ಒಗ್ಗೂಡಿಸುತ್ತವೆ. ಜಗತ್ತಿಗೆ ಸೌಹಾರ್ದ, ಸಾಮರಸ್ಯ, ಎಲ್ಲರ ಒಳಗೊಳ್ಳುವಿಕೆಯ ಜಾತ್ಯತೀತ ವ್ಯವಸ್ಥೆ ಬೇಕಾಗಿದೆ. ಅದರಿಂದ ಮಾತ್ರ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ. 1998ರಲ್ಲಿ ಸಂದೇಶ ಪ್ರಶಸ್ತಿಯನ್ನು ‘ಅಮೇರಿಕಾ ಅಮೇರಿಕಾ’ ಸಿನೆಮಾಕ್ಕಾಗಿ ಸ್ವೀಕರಿಸಿ ತುಂಬಾ ಸಂತೋಷಗೊಂಡಿದ್ದೆ. ‘ಅಮೇರಿಕಾ ಅಮೇರಿಕಾ ಭಾಗ-2’ ಸದ್ಯದಲ್ಲಿ ಬಿಡುಗಡೆಯಾಗಲಿದ್ದು ಆ ಸಂದರ್ಭ ಪ್ರಶಸ್ತಿ ನೀಡಲು ಬಂದಿರುವುದು ಸಂತೋಷ ತಂದಿದೆ” ಎಂದು ಹೇಳಿದರು. ಮಂಗಳೂರು…

Read More

ಬಾಗಲಕೋಟೆ : ಚೇತನ ಫೌಂಡೇಶನ್ ಧಾರವಾಡ ಇದರ ವತಿಯಿಂದ ‘ಅಖಿಲ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನ’ವನ್ನು ದಿನಾಂಕ 25 ಜನವರಿ 2026ರಂದು ಬಾಗಲಕೋಟೆಯಲ್ಲಿ ಆಯೋಜಿಸಲಾಗಿದೆ. ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ರಮೇಶ ಕಮತಗಿ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಜಾನಪದ ಕಲಾ ಪ್ರದರ್ಶನ, ಪುಸ್ತಕ ಬಿಡುಗಡೆ, ಯುವಕವಿಗಳಿಗಾಗಿ ಕವಿಗೋಷ್ಠಿ, ವಿಚಾರ ಮಂಡನೆ, ಸರ್ವಾಧ್ಯಕ್ಷರು-ಹಿರಿಯ ಲೇಖಕರ ಸಂವಾದ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ‘ವೀರ ಪುಲಿಕೇಶಿ ಹೆಮ್ಮೆಯ ಕನ್ನಡಿಗ ಪ್ರಶಸ್ತಿ’, ಯುವ ಕವಿಗಳಿಗೆ, ಶಿಕ್ಷಕರಿಗೆ, ಸಮಾಜ ಸೇವಕರಿಗೆ ‘ಚಾಲುಕ್ಯ ಯುವ ಪ್ರಶಸ್ತಿ’, ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಅತ್ಯುತ್ತಮ ಯುವ ಶಿಕ್ಷಕರಿಗೆ ‘ಆದರ್ಶ ಶಿಕ್ಷಕ ಪ್ರಶಸ್ತಿ’ ಹಾಗೂ ಹಿರಿಯ ಸಾಹಿತಿಗಳು, ಶಿಕ್ಷಕರಿಗೆ ಕಿರಿಯ ಸಾಹಿತಿ, ಶಿಕ್ಷಕರಿಂದ ಗೌರವಾರ್ಪಣೆ ಗುರುವಂದನಾ ಸಮಾರಂಭ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Read More

ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಇದರ ಸಾರಥ್ಯದಲ್ಲಿ ಹವ್ಯಕ ಸಭಾ ಮಂಗಳೂರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇದರ ಸಹಕಾರದೊಂದಿಗೆ ‘ವಿಚಾರಗೋಷ್ಠಿ’ಯನ್ನು ದಿನಾಂಕ 25 ಜನವರಿ 2026ರಂದು ಸಂಜೆ 6-00 ಗಂಟೆಗೆ ನಂತೂರು ಶ್ರೀ ಭಾರತಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ‘ಕೌಟುಂಬಿಕ ಮತ್ತು ಸಾಮಾಜಿಕ ಮೌಲ್ಯಗಳ ಅನಿವಾರ್ಯತೆ’ ಎಂಬ ವಿಷಯಯ ಬಗ್ಗೆ ಮಾಯಾಮೃಗ ಖ್ಯಾತಿಯ ಸೇತುರಾಮ್ ಇವರು ವಿಷಯ ಮಂಡನೆ ಮಾಡಲಿದ್ದಾರೆ. ವಲಯ ಮುಖ್ಯಸ್ಥರಾದ ರಾಜೇಶ್ ಖನ್ನಾ ಮತ್ತು ಹವ್ಯಕ ಸಭಾದ ಅಧ್ಯಕ್ಷರಾದ ಶ್ರೀಮತಿ ಗೀತಾದೇವಿ ಚೂಂತಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಮಂಜುನಾಥ ರೇವಣಕರ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

Read More

ಮಂಗಳೂರು : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಜಾತ್ರಾ ಮಹೋತ್ಸವದ ರಥೋತ್ಸವದ ದಿನದಂದು ದಿನಾಂಕ 21 ಜನವರಿ 2026ರಂದು ಹರಿದಾಸ, ಭಜನಾ ಕೀರ್ತನಕಾರ ಶರತ್ ಶೆಟ್ಟಿ ಪಡುಪಳ್ಳಿ ಇವರ ತುಳು ಬರಹಗಳ ಗುಚ್ಚ ‘ಕಡ್ಲೆ ಬಜಿಲ್’ ಎಂಬ ಪುಸ್ತಕ ಕದ್ರಿ ದೇವಳದ ರಾಜಾಂಗಣದಲ್ಲಿ ಬಿಡುಗಡೆಗೊಂಡಿತು. ಪುಸ್ತಕಕ್ಕೆ ಮುನ್ನುಡಿ ಬರೆದ ಹಿರಿಯ ಲೇಖಕಿ ರೂಪಕಲಾ ಆಳ್ವ ಮಾತನಾಡಿ “ಕಡ್ಲೆ ಬಜಿಲ್ ಪುಸ್ತಕ ತುಳುವರ ದಿನನಿತ್ಯದ ಕಷ್ಟ ಸುಖ, ಹಬ್ಬ ಹರಿದಿನ, ಊರಿನ ಜಾತ್ರೆ ಸಡಗರ ಮತ್ತು ಹಿಂದೆ ಕಳೆದ ಬಾಲ್ಯದ ಬಗೆಗಿನ ನೆನಪು ಹುಟ್ಟಿಸುವ ಉತ್ತಮ ವಿಚಾರಗಳನ್ನು ಹೊಂದಿದ ಒಂದು ಸಮಗ್ರ ಲೇಖನ ಮಾಲೆ. ಆಸಕ್ತರು ಖರೀದಿಸಿ ಓದಿದರೆ ಹಿಂದಿನ ‘ಕಡ್ಲೆಬಜಿಲ್’ ಸವಿದ ರುಚಿ ನೀಡುವುದು ಗ್ಯಾರಂಟಿ” ಎಂದರು. ಮಲ್ಲಿಕಾ ಕಲಾವೃಂದ ಕಾರ್ಯಾಧ್ಯಕ್ಷ ಸುಧಾಕರ ರಾವ್ ಪೇಜಾವರ ಮಾತನಾಡಿ, “ಈ ಪುಸ್ತಕ ಲೋಕನೀತಿಯ ವಿಚಾರಗಳ ಒಂದು ಗುಚ್ಚ ಎಂದು ಶುಭ ಹಾರೈಸಿದರು. ತುಳು ಸಾಹಿತಿ ಕುಶಾಲಾಕ್ಷಿ ವಿ. ಕುಲಾಲ್ ಕಣ್ವತೀರ್ಥ ಮತ್ತಿತರರು ಉಪಸ್ಥಿತರಿದ್ದರು.…

Read More

ಮಂಗಳೂರು : ಕರಾವಳಿ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ಚಿತ್ರಕಲಾವಿದರಾದ ಉದಯ ಕೃಷ್ಣ ಜಿ. ಮತ್ತು ಅವರ ಪುತ್ರಿ ನಿಯತಿ ಯು. ಭಟ್ ಇವರ ಕಲಾ ಪ್ರದರ್ಶನ ‘ದ ದಾಪರ್ ಎಕ್ಸ್ಪೋ’ ದಿನಾಂಕ 17 ಜನವರಿ 2025ರಂದು ಮಂಗಳೂರಿನ ಬಲ್ಲಾಳ್‌ಬಾಗ್‌ನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿತು. ತಂದೆ, ಮಗಳ ಕುಂಚದಿಂದ ಮೂಡಿ ಬಂದ 80ಕ್ಕೂ ಅಧಿಕ ಚಿತ್ರಗಳು ಪ್ರದರ್ಶನದಲ್ಲಿವೆ. ಸಾಮಾನ್ಯ ಪೈಂಟಿಂಗ್, ಡ್ರಾಯಿಂಗ್ ಗಳ ಜತೆಗೆ ಹೆಚ್ಚಿನ ಕೈ ಚಳಕದ ಅಗತ್ಯವಿರುವ ಮಂಡಲ ಆರ್ಟ್, ಅತೀ ಕಷ್ಟದ ಮತ್ತು ಬಹಳಷ್ಟು ಏಕಾಗ್ರತೆಯ ಅಗತ್ಯವಿರುವ ಸ್ಪ್ರಿಂಗ್ ಆರ್ಟ್ ಚಿತ್ರಗಳು ಪ್ರದರ್ಶನದಲ್ಲಿ ಆಕರ್ಷಿಸುತ್ತಿದ್ದು, ಛಾಯಾಚಿತ್ರಗಳಲ್ಲಿ ಅಂಡರ್ ವಾಟರ್ ಫೋಟೋಗ್ರಫಿ, ಹಾರುತ್ತಿರುವ ಹಕ್ಕಿಗಳ ಫೋಟೋಗಳು, ವಿಮಾನಗಳ ಕಸರತ್ತಿನ ಚಿತ್ರಗಳು ನೋಡುಗರನ್ನು ಸೆಳೆಯುತ್ತಿತ್ತು. ಕಲಾಪ್ರದರ್ಶನವನ್ನು ಉದ್ಘಾಟಿಸಿದ ವಿಶ್ರಾಂತ ಪ್ರಾಂಶುವಾಲ ಪ್ರೊ. ಜಿ.ಎನ್. ಭಟ್ ಮಾತನಾಡಿ, “ಚಿತ್ರಕಲಾವಿದರಾಗಿ ತಂದೆ, ಮಗಳ ಜೋಡಿ ಈಗಾಗಲೇ ಯಶಸ್ವಿಯಾಗಿದ್ದು ಭವಿಷ್ಯದಲ್ಲೂ ಇದು ಮುಂದುವರಿಯಲಿ” ಎಂದರು. ಖ್ಯಾತ ಜಾದೂ ಕಲಾವಿದ ಪ್ರೊ. ಶಂಕರ್ ಮಾತನಾಡಿ, “ಮಕ್ಕಳಲ್ಲಿರುವ…

Read More

ಬಂಟ್ವಾಳ : ಕಥಾಬಿಂದು ಪ್ರಕಾಶನ ಮಂಗಳೂರು, ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ನೇತ್ರಾವತಿ ಸಂಗಮ ಜೋಡುಮಾರ್ಗ ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಸಮಿತಿ ಅಶ್ರಯದಲ್ಲಿ ‘ಕಥಾಬಿಂದು ಸಾಹಿತ್ಯ ಸಂಭ್ರಮ -2026’ ದಿನಾಂಕ 04 ಜನವರಿ 2025ರಂದು ಪಾಣೆಮಂಗಳೂರಿನ ಶ್ರೀ ಭಯಂಕೇಶ್ವರ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು “ಸಾಹಿತ್ಯ ಜನಮನವನ್ನು ತಲುಪಬೇಕು. ಪುಸ್ತಕ ಓದುವ ಪ್ರವೃತ್ತಿ ಬೆಳೆಯಬೇಕು. ಪುಸ್ತಕಗಳನ್ನು ಪ್ರಕಟಣೆಗೆ ಸಹಕಾರ ನೀಡುವ ಮೂಲಕ ಬರೆಯುವವರಿಗೆ ಪ್ರೋತ್ಸಾಹ ನೀಡಬೇಕು” ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಸೀನಿಯರ್ ಛೇಂಬರ್ ಅಧ್ಯಕ್ಷ ತೇವು ತಾರನಾಥ ಕೊಟ್ಟಾರಿ ಭಾಗವಹಿಸಿ “ಸಾಹಿತ್ಯದಿಂದ ಸಂಘಟನೆ ಸಾಧ್ಯ. ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಸಾಹಿತ್ಯ ಹೆಚ್ಚು ಹೆಚ್ಚು ಪ್ರಕಟವಾಗಬೇಕು” ಎಂದರು. ಹಿರಿಯ ಸಾಹಿತಿ ಡಾ. ಕೊಳ್ಚಪ್ಪೆ ಗೋವಿಂದ ಭಟ್, ಕ.ಚು.ಸಾ.ಪ. ಬಂಟ್ವಾಳ ತಾಲೂಕು ಅಧ್ಯಕ್ಷ ರವೀಂದ್ರ ಕುಕ್ಕಾಜೆ, ಕವಯಿತ್ರಿ ಡಾ. ಶಾಂತ ಪುತ್ತೂರು ಸಮ್ಮೇಳನಕ್ಕೆ ಶುಭ ಹಾರೈಸಿ…

Read More

ಬೆಂಗಳೂರು : 2026ನೇ ಸಾಲಿನ ಕೆ.ಪಿ. ಪೂರ್ಣಚಂದ್ರ ತೇಜಸ್ವಿ (ಪೂಚಂತೆ) ಇವರ ಹೆಸರಿನಲ್ಲಿ ನೀಡಲಾಗುವ ‘ಪೂಚಂತೆ ಸಾಹಿತ್ಯ ಪುರಸ್ಕಾರ’ಕ್ಕೆ ಲೇಖಕರಿಂದ ಕನ್ನಡದ ಕೃತಿಗಳನ್ನು ಆಹ್ವಾನಿಸಲಾಗಿದೆ. ಪರಿಗಣನೆಯ ಅವಧಿ : 2025ರಿಂದ 2026ರ ಜನವರಿವರೆಗೆ ಪ್ರಕಟವಾದ ಕೃತಿಗಳು ಪರಿಗಣನೆಯಲ್ಲಿರುವ ಕೃತಿ ಪ್ರಕಾರಗಳು : 1. ಕವನ ಸಂಕಲನ 2. ಕಾದಂಬರಿ 3. ನಾಟಕ 4. ಲೇಖನ ಸಂಗ್ರಹ 5. ಕಥಾ ಸಂಕಲನ 6. ಮಕ್ಕಳ ಸಾಹಿತ್ಯ ಪ್ರತಿ ಶೀರ್ಷಿಕೆಯ ಮೂರು ಪ್ರತಿಗಳನ್ನು ಏಪ್ರಿಲ್ ಅಂತ್ಯದೊಳಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಕಳುಹಿಸುವ ವಿಳಾಸ : ಲಿಖಿತ್ ಹೊನ್ನಾಪುರ, ಸುಗ್ಗನಹಳ್ಳಿ ಅಂಚೆ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲೂಕು, ಬೆಂಗಳೂರು ದಕ್ಷಿಣ ಜಿಲ್ಲೆ – 561101. ಸಂಪರ್ಕ ಸಂಖ್ಯೆ : 9353062539 ಲಿಖಿತ್ ಹೊನ್ನಾಪುರ, ಯುವ ಕವಿ, ಸ್ಥಾಪಕರು – ಪೂಚಂತೆ ಸಾಹಿತ್ಯ ಪುರಸ್ಕಾರ ಉಪಾಧ್ಯಕ್ಷರು – ಯಶೋಮಾರ್ಗ ಸೇವಾ ಫೌಂಡೇಶನ್ (ರಿ.), ಕರ್ನಾಟಕ 2025ನೇ ಸಾಲಿನ ‘ಪೂಚಂತೆ ಸಾಹಿತ್ಯ ಪುರಸ್ಕಾರ’ ಪಡೆದ 5 ಕೃತಿಗಳು -…

Read More