Author: roovari

ಮಂಗಳೂರು : ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ 2025-26ನೇ ಸಾಲಿಗೆ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಪುರಸ್ಕಾರ-2026 ಹಾಗೂ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪುರಸ್ಕಾರ 2026 ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ರಂಗಶ್ರೇಷ್ಠ ಪುರಸ್ಕಾರಕ್ಕಾಗಿ 60 ವರ್ಷಕ್ಕಿಂತ ಹಿರಿಯ, ಕೊಂಕಣಿ ಮಾತೃಭಾಷಿಕ, ರಂಗಭೂಮಿಯ ಏಳಿಗೆಗಾಗಿ ಸಿನೆಮಾ-ನಾಟಕಗಳಲ್ಲಿ ನಟನೆ, ನಿರ್ದೇಶನ, ನಾಟಕ ರಚನೆಯಂತಹ ಕ್ಷೇತ್ರಗಳಲ್ಲಿ ನಿರಂತರ ದುಡಿಮೆ ಹಾಗೂ ಸಮರ್ಪಣ ಭಾವದೊಂದಿಗೆ ಜೀವಮಾನದ ಸೇವೆ ನೀಡಿರುವ ರಂಗಕರ್ಮಿಗಳಿಂದ ನೇರವಾಗಿ ಅಥವಾ ಹಿತೈಷಿ ಕಲಾಸಕ್ತರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. ಅನುವಾದ ಪುರಸ್ಕಾರಕ್ಕಾಗಿ ಭಾಷಾಂತರ ಕ್ಷೇತ್ರದಲ್ಲಿ ವಿಶೇಷವಾಗಿ ಇತರ ಭಾಷೆಗಳ ಕೃತಿಗಳನ್ನು ಕೊಂಕಣಿಗೆ ಅತ್ಯುತ್ತಮವಾಗಿ ಅನುವಾದಿಸಿ ದೀರ್ಘ ಅವಧಿಗೆ ಸೇವೆ ಸಲ್ಲಿಸಿರುವವರಿಂದ ನೇರವಾಗಿ ಅಥವಾ ಹಿತೈಷಿ ಸಾಹಿತ್ಯಾಸಕ್ತರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು ಮೊದಲು www.vishwakonkani.org ತಮ್ಮ ಹೆಸರು ನೊಂದಾಯಿಸಿಕೊಂಡು, ಆನಂತರ ವಿವರವಾದ ಪ್ರಸ್ತಾವನ ಅರ್ಜಿಯನ್ನು ಅಧ್ಯಕ್ಷರು, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು-575016 ಇಲ್ಲಿಗೆ ದಿನಾಂಕ 05 ಜನವರಿ…

Read More

ಮಂಗಳೂರು : ಮಂಗಳೂರಿನ ಕಲಾಸೂರ್ಯ ನೃತ್ಯಾಲಯ ಇದರ ಎರಡನೇ ವರ್ಷದ ವಾರ್ಷಿಕ ಸಂಭ್ರಮದ ಪ್ರಯುಕ್ತ ಪ್ರಸ್ತುತ ಪಡಿಸುವ ‘ಪರಿಭ್ರಮಣ 2025’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 06 ಡಿಸೆಂಬರ್ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಜೈಲ್ ರೋಡಿನಲ್ಲಿರುವ ಸುಬ್ರಹ್ಮಣ್ಯ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಸಭಾದ ಅಧ್ಯಕ್ಷರಾದ ಡಾ. ಎ.ಪಿ. ಕೃಷ್ಣ ಇವರು ಉದ್ಘಾಟನೆ ಮಾಡಲಿದ್ದು, ಕೊಲ್ಯ ನಾಟ್ಯನಿಕೇತನದ ನೃತ್ಯ ನಿರ್ದೇಶಕರಾದ ವಿದುಷಿ ರಾಜಶ್ರೀ ಶೆಣೈ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5-30 ಗಂಟೆಗೆ ಕಲಾಸೂರ್ಯ ನೃತ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಬಳಿಕ ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ‘ತ್ರಿಶಕ್ತಿ’ ತ್ರಿಮಾತಾ ಸ್ವರೂಪಿಣಿ ದೇವಿಗೆ ನೃತ್ಯ ನಮನಕ್ಕೆ ನಟುವಾಂಗದಲ್ಲಿ ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ವಿದ್ವಾನ್ ವಿ. ಮನೋಹರ್ ರಾವ್ ಮತ್ತು ಪಿಟೀಲಿನಲ್ಲಿ ಕುಮಾರಿ…

Read More

ಉಡುಪಿ : ರಂಗಭೂಮಿ ಉಡುಪಿ ಸಂಸ್ಥೆಯು ದಿ. ಡಾ. ಟಿ.ಎಂ.ಎ. ಪೈ, ದಿ. ಎಸ್.ಎಲ್. ನಾರಾಯಣ ಭಟ್ ಮತ್ತು ದಿ. ಮಲ್ಪೆ ಮಧ್ವರಾಜ್ ಸ್ಮಾರಕ ಹಮ್ಮಿಕೊಂಡಿದ್ದ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ ಪ್ರಥಮ ಬಹುಮಾನವು ‘ಸುಮನಸಾ (ರಿ‌.) ಕೊಡವೂರು, ಉಡುಪಿ’ ತಂಡದ “ಈದಿ” ನಾಟಕಕ್ಕೆ ಲಭಿಸಿದೆ. ಈ ತಂಡವು ಪಿ.ವಿ.ಎಸ್. ಬೀಡೀಸ್ ಪ್ರಾಯೋಜಿತ ದಿ. ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ನಗದು ಬಹುಮಾನ ರೂ.35,000/- ಮತ್ತು ಸ್ಮರಣಿಕೆ ಹಾಗೂ ಡಾ. ಟಿ.ಎಮ್.ಎ. ಪೈ ಸ್ಮಾರಕ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿದೆ. ದ್ವಿತೀಯ ಬಹುಮಾನವಾದ ದಿ. ಮಲ್ಪೆ ಮಧ್ವರಾಜ್ ಸ್ಮಾರಕ ಪ್ರಮೋದ್ ಮಧ್ವರಾಜ್ ರವರ ಕೊಡುಗೆಯಾದ ರೂ.25,000/- ನಗದು ಬಹುಮಾನ ಮತ್ತು ಸ್ಮರಣಿಕೆ ಹಾಗೂ ಡಾ. ಆರ್.ಪಿ. ಕೊಪ್ಪೀಕರ್ ಸ್ಮಾರಕವು ‘ಕ್ರಾನಿಕಲ್ಸ್ ಆಫ್ ಇಂಡಿಯಾ (ರಿ.) ಬೆಂಗಳೂರು’ ತಂಡದ ‘ಶಿವೋಹಂ’ ನಾಟಕಕ್ಕೆ ಲಭಿಸಿದೆ. ‘ಸ್ಪಂದನಾ (ರಿ.) ಸಾಗರ’ ತಂಡದ ‘ಪ್ರಾಣಪದ್ಮಿನಿ’ ನಾಟಕವು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದು, ದಿ. ಪಿ.…

Read More

ಉಡುಪಿ : ಶಾರದಾ ನೃತ್ಯಾಲಯ (ರಿ.) ಮಾರ್ಪಳ್ಳಿ ಇದರ ರಜತ ಮಹೋತ್ಸವದ ಪ್ರಯುಕ್ತ ಪ್ರಸ್ತುತ ಪಡಿಸುವ ‘ನೃತ್ಯೋಲ್ಲಾಸ’ ನೃತ್ಯ ಕಾರ್ಯಕ್ರಮವು ದಿನಾಂಕ 06 ಮತ್ತು 07 ಡಿಸೆಂಬರ್ 2025ರಂದು ಉಡುಪಿಯ ಐ.ವೈ.ಸಿ. ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ನಡೆಯಲಿದೆ. ದಿನಾಂಕ 06 ಡಿಸೆಂಬರ್ 2025ರಂದು ಸಂಜೆ 4-45 ಗಂಟೆಗೆ ಸಭಾ ಕಾರ್ಯಕ್ರಮವನ್ನು ಮೈಸೂರಿನ ವಸುಂಧರಾ ಪ್ರದರ್ಶನ ಕಲೆಗಳ ಕೇಂದ್ರದ ನಿರ್ದೇಶಕರಾದ ಡಾ. ವಸುಂಧರಾ ದೊರೆಸ್ವಾಮಿ ಇವರು ಉದ್ಘಾಟನೆ ಮಾಡಲಿದ್ದಾರೆ. ಸಂಜೆ 6-00 ಗಂಟೆಗೆ ಸಂಸ್ಥೆಯ ವಿದ್ಯಾರ್ಥಿಗಳಿಂದ ಮತ್ತು ಹಳೆ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ದಿನಾಂಕ 07 ಡಿಸೆಂಬರ್ 2025ರಂದು ಸಂಜೆ 4-30 ಗಂಟೆಗೆ ಸಭಾ ಕಾರ್ಯಕ್ರಮವನ್ನು ಹಿರಿಯ ನೃತ್ಯ ಗುರುಗಳಾದ ಶ್ರೀಮತಿ ಪ್ರತಿಭಾ ಎಲ್. ಸಾಮಗ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಸಮಾರೋಪ ಸಮಾರಂಭದ ಬಳಿಕ ಡಾ. ವಸುಂಧರಾ ದೊರೆಸ್ವಾಮಿ ಇವರಿಂದ ‘ಅಮ್ಮ’ (ಉಲಿಯದ ಕತೆ) ಏಕವ್ಯಕ್ತಿ ಪ್ರದರ್ಶನ ನಡೆಯಲಿದೆ.

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಸ್ವಸ್ತಿಕ್ ಕಲಾ ಕೇಂದ್ರ (ರಿ.) ಜಲ್ಲಿಗುಡ್ಡೆ ಮಂಗಳೂರು ಇವರ ವತಿಯಿಂದ ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ.) ಪಡೀಲ್ ಇವರ ಸಹಭಾಗಿತ್ವದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ರಾಮಕೃಷ್ಣ ಮಿಷನ್ ಮಂಗಳೂರು ಇವರ ಸಹಯೋಗದೊಂದಿಗೆ ಯಕ್ಷರಂಗದ ಧೀಮಂತ ಪ್ರತಿಭೆ ‘ದಿ. ಬಾಬು ಕುಡ್ತಡ್ಕ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 07 ಡಿಸೆಂಬರ್ 2025ರಂದು ಸಂಜೆ 3-30 ಗಂಟೆಗೆ ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಲ್ಲಿಗುಡ್ಡೆ ಸ್ವಸ್ತಿಕ್ ಕಲಾ ಕೇಂದ್ರ ವತಿಯಿಂದ ನೀಡಲಾಗುವ 2025-26ನೇ ಸಾಲಿನ ಪ್ರತಿಷ್ಠಿತ ಬಾಬು ಕುಡ್ತಡ್ಕ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರ ಗೌಡ ಇವರನ್ನು ಆಯ್ಕೆ ಮಾಡಲಾಗಿದೆ. ಯಕ್ಷರಂಗದ ಶ್ರೀಮಂತ ಪ್ರತಿಭೆ ಬಾಬು ಕುಡ್ತಡ್ಕ ಇವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ ಶಾಶ್ವತ ಫಲಕ, ಸ್ಮರಣಿಕೆ, ಪದಕ ಹಾಗೂ ರೂ.10 ಸಾವಿರ ನಗದು…

Read More

ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು, ಜಿಲ್ಲಾ ಘಟಕ ಹಾಸನ ಸಹಯೋಗದಲ್ಲಿ 2025 ಡಿಸೆಂಬರ್ 14 ಭಾನುವಾರ ಹಮ್ಮಿಕೊಳ್ಳುವ ಹಾಸನ ಜಿಲ್ಲಾ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಕವಿ, ಗಾಯಕ, ರಂಗಭೂಮಿ ಕಲಾವಿದರಾದ ಗ್ಯಾರಂಟಿ ರಾಮಣ್ಣನವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ. ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ವೇದಿಕೆಯ ಗೌರವ ಸಲಹೆಗಾರ ನಾಗರಾಜ್ ಹೆತ್ತೂರು, ರಾಜ್ಯ ಕಾರ್ಯದರ್ಶಿ ಡಾ. ಪಿ. ದಿವಾಕರ ನಾರಾಯಣ, ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ ದೊಡ್ಡಮನಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ, ರಾಜ್ಯ ಸಹ ಕಾರ್ಯದರ್ಶಿ ದೇಸು ಆಲೂರು, ಸಾಮಾಜಿಕ ಹೋರಾಟಗಾರ ಮಲ್ನಾಡ್ ಮೆಹಬೂಬ್, ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ವೈ.ಎಸ್. ರಮೇಶ್, ಹಾಸನ ತಾಲೂಕು ಅಧ್ಯಕ್ಷೆ ಕೆ.ಸಿ. ಗೀತಾರವರುಗಳನ್ನೊಳಗೊಂಡ ಸಮಿತಿ ಕಳೆದ ಐದು ದಶಕಗಳಿಂದ ಬೀದಿ ನಾಟಕ, ಹೋರಾಟಗೀತೆಗಳು, ರೈತ ಚಳವಳಿ,…

Read More

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬೆಳ್ತಂಗಡಿ ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿ ಆಡಳಿತ ಸಮಿತಿ ಸಹಯೋಗದೊಂದಿಗೆ ದಿನಾಂಕ 20 ಡಿಸೆಂಬರ್ 2025ರಂದು ಜಿಲ್ಲಾ ಮಟ್ಟದ ದಫ್ ಸ್ಪರ್ಧೆ ಆಯೋಜಿಸಿದೆ. ತಾಲೂಕು ಮಟ್ಟದ ಸ್ಪರ್ಧೆ ದಿನಾಂಕ 11 ಡಿಸೆಂಬರ್ 2025ರಂದು ನಡೆಯಲಿದ್ದು, ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದ ತಂಡಗಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ಜಿಲ್ಲಾಮಟ್ಟದ ಸ್ಪರ್ಧೆ ವಿಜೇತ ತಂಡಗಳಿಗೆ ರೂ.10,000/-, ರೂ.7,000/- ಮತ್ತು ರೂ.5,000/- ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನ ಹಾಗೂ ತಾಲೂಕು ಮಟ್ಟದ ವಿಜೇತ ತಂಡಗಳಿಗೆ ರೂ.3,000/- ಮತ್ತು ರೂ.2000/- ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ನಗದು ಬಹುಮಾನ ನಿಗದಿಪಡಿಸಲಾಗಿದೆ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ತಂಡಗಳಿಗೆ ರೂ.2,000/- ಮತ್ತು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ರೂ.1,000/- ಪ್ರಯಾಣ ಭತ್ಯೆ ಹಾಗೂ ಎಲ್ಲ ಕಲಾವಿದರಿಗೆ ಆಕಾಡೆಮಿ ವತಿಯಿಂದ ಪ್ರಮಾಣಪತ್ರ ನೀಡಲಾಗುವುದು. ಆಸಕ್ತರು ದಿನಾಂಕ 08 ಡಿಸೆಂಬರ್ 2025ರ ಒಳಗಾಗಿ…

Read More

ಮೈಸೂರು : ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ (ರಿ.) ಆಯೋಜಿಸುವ ‘ನೆನಪಿನಂಗಳ’ ರಂಗಭೂಮಿಯ ನೆನ್ನೆ ನಾಳೆಗಳ ನಡುವೆ ಸಂವಾದ ಕಾರ್ಯಕ್ರಮವನ್ನು ದಿನಾಂಕ 06 ಡಿಸೆಂಬರ್ 2025ರಂದು ಸಂಜೆ 5-00 ಗಂಟೆಗೆ ಮೈಸೂರಿನ ಶ್ರೀರಂಗ ರಂಗಾಯಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂಗಳದಲ್ಲಿ ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಇವರು ಭಾಗವಹಿಸಲಿದ್ದಾರೆ.

Read More

ಬೆಳಗಾವಿ : ರಂಗಸಂಪದ ಬೆಳಗಾವಿ ಪ್ರಸ್ತುತ ಪಡಿಸುವ ‘ಅಭಿಷೇಕ ಅಲಾಯನ್ಸ ನಾಟಕೋತ್ಸವ’ವನ್ನು ದಿನಾಂಕ 05ರಿಂದ 07 ಡಿಸೆಂಬರ್ 2025ರಂದು ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 05 ಡಿಸೆಂಬರ್ 2025ರಂದು ಸಂಜೆ 6-00 ಗಂಟೆಗೆ ನಾಟಕೋತ್ಸವ ಉದ್ಘಾಟನೆಗೊಳ್ಳಲಿದ್ದು, ನೀನಾಸಮ್ ತಿರುಗಾಟ – 2025ರ ಹೊಸ ನಾಟಕ ಬಾನು ಮುಷ್ತಾಕ ಕಥೆ ಆಧಾರಿತ ‘ಹೃದಯದ ತೀರ್ಪು’ ನಾಟಕ ಪ್ರದರ್ಶನ ಡಾ. ಎಮ್. ಗಣೇಶ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ, ದಿನಾಂಕ 06 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ‘ಅವತಾರಣಮ್ ಭ್ರಾಂತಾಲಯಂ’ ನಾಟಕ ಪ್ರದರ್ಶನ ಜಿ. ಶಂಕರ್ ಪಿಳ್ಳೆ (ಮಲಯಾಳಂ) ಇವರ ಮೂಲ ಕೃತಿಯನ್ನು ನಾ. ದಾಮೋದರ ಶೆಟ್ಟಿ ಇವರು ಕನ್ನಡಕ್ಕೆ ಅನುವಾಡಿಸಿದ್ದು, ಶಂಕರ ವೆಂಕಟೇಶ್ವರ್ ಇವರ ನಿರ್ದೇಶನದಲ್ಲಿ ಪ್ರಸ್ತುತಗೊಳ್ಳಲಿದೆ. ದಿನಾಂಕ 07 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಳಗಾವಿಯ ರಂಗಸಂಪದ ತಂಡ ಪ್ರಸ್ತುತ ಪಡಿಸುವ ‘ಸ್ಮರಿಸಿ ಬದುಕಿರೋ’ ಭಕ್ತಿಪೂರ್ಣ ನಾಟಕ ಡಾ. ಅರವಿಂದ ಕುಲಕರ್ಣಿ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.

Read More

ಬೆಂಗಳೂರಿನಲ್ಲಿ ಹುಟ್ಟಿದ ಸುಪ್ರಸಿದ್ಧ ಪಿಟೀಲು ವಾದಕರಾದ ವೀರಭದ್ರಯ್ಯನವರು ಸಂಗೀತದ ವಾತಾವರಣದಲ್ಲಿಯೇ ಬೆಳೆದರು. ತಂದೆ ಹಾರ್ಮೋನಿಯಂ ವಿದ್ವಾನ್ ಎಂ. ಅರುಣಾಚಲಪ್ಪ, ತಾಯಿ ಅನ್ನಪೂರ್ಣಮ್ಮ. 4 ಡಿಸೆಂಬರ್ 1923ರಲ್ಲಿ ಜನಿಸಿದ ಇವರು ಎಳವೆಯಲ್ಲಿ ತಂದೆಯಿಂದಲೇ ಪಿಟೀಲು ಶಿಕ್ಷಣವನ್ನು ಪಡೆದರು. ಪ್ರೌಢ ಶಿಕ್ಷಣವನ್ನು ನೀಡಿದವರು ಎಲ್.ಎಸ್‌ ನಾರಾಯಣಸ್ವಾಮಿ ಭಾಗವತರು. ‘ಗಾನ ಸುಧಾಕರ ಖ್ಯಾತಿಯ’ ಎ. ಸುಬ್ಬರಾಯರ ಕಛೇರಿಗಳಿಗೆ 40 ವರ್ಷಗಳ ಕಾಲ ನಿರಂತರವಾಗಿ ಪಕ್ಕ ವಾದ್ಯ ನುಡಿಸಿದ ದಾಖಲೆ ಇವರದು. ಏಕವ್ಯಕ್ತಿ ಪಿಟೀಲು ವಾದನ ಕಚೇರಿ ಮಾತ್ರವಲ್ಲದೆ, ಪ್ರತಿಷ್ಠಿತ ವೇದಿಕೆಗಳಲ್ಲಿ ಘನವೆತ್ತ ವಿದ್ವಾಂಸರಿಗೆ ಹಿನ್ನೆಲೆ ನೀಡಿದ ಖ್ಯಾತರು. ‘ಅರುಣಾ ಮ್ಯೂಸಿಕಲ್’ ಸ್ಥಾಪಿಸುವ ಮೂಲಕ ವೀಣೆ ಮತ್ತು ತಂಬೂರಿ ತಯಾರಿಕಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು. ‘ಕರ್ನಾಟಕ ಗಾನ ಕಲಾ ಪರಿಷತ್ತು’ ಇದರ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ ಸಮರ್ಥವಾಗಿ ನಡೆಸಿಕೊಂಡು ಬಂದವರು. ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ವಿಜಯ ಸಂಗೀತ ಮಹಾವಿದ್ಯಾಲಯದ ಸ್ಥಾಪಕ ಸದಸ್ಯರಾಗಿ, ‘ವಾಣಿ ಸಂಗೀತ ವಿದ್ಯಾಲಯ’ ಮತ್ತು ‘ಕೃಷ್ಣ ಸಂಗೀತ ಸಭೆ’ಯ ಅಧ್ಯಕ್ಷರಾಗಿ…

Read More