Author: roovari

ಕಲಬುರಗಿ : ಕರ್ನಾಟಕ ವಿಕಾಸ ರಂಗ ಬೆಂಗಳೂರು ಜಿಲ್ಲಾ ಘಟಕ ಕಲಬುರಗಿ ಇವರ ವತಿಯಿಂದ ಡಾ. ಚಿ.ಸಿ. ನಿಂಗಣ್ಣ ರಚಿಸಿದ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಕೃತಿ ಲೋಕಾರ್ಪಣೆ ಹಾಗೂ ಸಾಧಕರಿಗೆ ‘ಕನ್ನಡ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 21 ನವೆಂಬರ್ 2025ರಂದು ಸಂಜೆ 4-30 ಗಂಟೆಗೆ ಕಲಬುರಗಿ ಮುಖ್ಯ ರಸ್ತೆಯಲ್ಲಿರುವ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆಯಲಿದೆ. ಕಲಬುರಗಿ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ತಿಪ್ಪಣ್ಣಪ್ಪ ಕಮಕನೂರ ಇವರು ಈ ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದು, ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಶಾಸಕರಾದ ಸರೋಯಿ ಬಸವರಾಜ ಮತ್ತಿಮೂಡ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಬಿಜೆಪಿ ಮುಖಂಡರಾದ ಶಿವಕಾಂತ ಮಹಾಜನ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ಸಾಹಿತಿ ಪ್ರೊ. ಶಿವರಾಜ ಪಾಟೀಲ ಇವರು ಕೃತಿ ಕುರಿತು ಮಾತನಾಡಲಿದ್ದಾರೆ. ಕರ್ನಾಟಕ ವಿಕಾಸ ರಂಗ ಇದರ ಅಧ್ಯಕ್ಷರಾದ ಡಾ. ಚಿ.ಸಿ. ನಿಂಗಣ್ಣ ಇವರ ಗೌರವ ಉಪಸ್ಥಿತಿಯಲ್ಲಿ ನಿತೀನ ವ್ಹಿ. ಗುತ್ತೇದಾರ ಇವರು ವಿವಿಧ ಕ್ಷೇತ್ರದ…

Read More

ಮಂಗಳೂರು : ಕೆನರಾ ಕಲ್ಚರಲ್ ಅಕಾಡೆಮಿ ಪ್ರಸ್ತುತ ಪಡಿಸುವ ಸಂತ ಶಿಶುನಾಳ ಷರೀಫ್ ಪ್ರಶಸ್ತಿ ಪುರಸ್ಕೃತ ಶ್ರೀ ಪುತ್ತೂರು ನರಸಿಂಹ ನಾಯಕ್ ಇವರ ಮಾರ್ಗದರ್ಶನದಲ್ಲಿ ‘ಬಾಲ ಭಜನಾ ವೈಭವ’ ಮಕ್ಕಳ ಭಜನಾ ಸ್ಪರ್ಧಾ ಕೂಟವು ದಿನಾಂಕ 20 ಮತ್ತು 21 ಡಿಸೆಂಬರ್ 2025ರಂದು ಮಂಗಳೂರಿನ ಟಿ.ವಿ. ರಮಣ್ ಪೈ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿದೆ. ಸ್ಪರ್ಧಾ ನಿಯಮಗಳು: ತಂಡ ಕನಿಷ್ಟ 8 ಹಾಗೂ ಗರಿಷ್ಟ 12 ಸದಸ್ಯರನ್ನು ಹೊ೦ದಿರಬೇಕು (ಹಾರ್ಮೋನಿಯಂ ಹಾಗೂ ತಬಲಾ ವಾದಕರು ಸೇರಿ). ಒಬ್ಬ ಸ್ಪರ್ಧಿ ಒಂದು ತಂಡದಲ್ಲಿ ಮಾತ್ರ ಭಾಗವಹಿಸಬೇಕು. ಸ್ಪರ್ಧಿ ಗರಿಷ್ಟ ಹತ್ತನೇ ತರಗತಿ (ವಯಸ್ಸು ಗರಿಷ್ಠ 17 ವರ್ಷ) ಮೀರಿರಬಾರದು. ದಾಸರ ಪದಗಳು ಮತ್ತು ಸಂತರ ಭಜನೆಗಳನ್ನು ಹಾಗೂ ಅದರೊಂದಿಗೆ ನಾಮಾವಳಿಗಳನ್ನು ಹಾಡಬಹುದು. ಶಾಲಾ ಭಜನಾ ತಂಡಗಳು ಹಾಗೂ ಊರಿನ ಭಜನಾ ಮಂಡಳಿಗಳ ಬಾಲ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಈ ಸ್ಪರ್ಧೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮಕ್ಕಳಿಗಾಗಿ ಮಾತ್ರ ಸೀಮಿತ.…

Read More

ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು – ಹಾಸನ ತಾಲೂಕು ಘಟಕದ ವತಿಯಿಂದ ದಿನಾಂಕ 16 ನವೆಂಬರ್ 2025ರ ಭಾನುವಾರದಂದು ಹಾಸನದ ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಭವನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ವಿವಿಧ ಕ್ಷೇತ್ರಗಳ ಹತ್ತು ಮಂದಿ ಗಣ್ಯ ಸಾಧಕರಿಗೆ ‘ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಸಮಾರಂಭವನ್ನುದ್ದೇಶಿಸಿ ಮಾತನಾಡಿ “ಕನ್ನಡದಲ್ಲಿ ಅಗಾದವಾದ ಸಾಹಿತ್ಯದ ಭಂಡಾರವಿದೆ. ಇಡೀ ವಿಶ್ವದ ಯಾವುದೇ ಭಾಷೆಯಲ್ಲೂ ಕನ್ನಡಕ್ಕೆ ಸರಿಸಾಟಿ ಕಂಡುಬರುವುದಿಲ್ಲ. ಪರಂಪರೆ, ಇತಿಹಾಸ, ಜ್ಞಾನಸಂಪತ್ತಿನ ಮಹಾ ಹೊಳೆ ನಮ್ಮ ಕನ್ನಡ. ಆದರೆ ಈ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ದುರಂತವೆಂದರೆ ಸಾಹಿತ್ಯ ಪರಂಪರೆ, ಮೌಲ್ಯಗಳ ಅರಿವು ಇಲ್ಲದ ಕೆಲವರನ್ನು ನೇತೃತ್ವಕ್ಕೆ ತಂದುಕೊಳ್ಳುವುದು ಮತ್ತು ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದ ಪ್ರಾತಿನಿಧಿಕ…

Read More

ಹಾಸನ : ಪ್ರತಿಮಾ ಟ್ರಸ್ಟ್ (ರಿ.) ಚನ್ನರಾಯಪಟ್ಟಣ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಹಾಸನ ಇವರ ಸಹಯೋಗದಲ್ಲಿ ಉಮೇಶ್ ತೆಂಕನಹಳ್ಳಿಯವರ ಅನುಭವದ ಅಂತರಾಳದ ಕೃತಿ ‘ಕಪ್ಪು ಹಳ್ಳಿನ ಕತೆ’ ಕಾದಂಬರಿಯ ಎರಡನೇ ಆವೃತ್ತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 22 ನವೆಂಬರ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯಲಿದೆ. ಬೆಂಗಳೂರಿನ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಇವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಆರ್.ಪಿ. ವೆಂಕಟೇಶ ಮೂರ್ತಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಾಸನ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಡಾ. ಎಚ್.ಎಲ್. ಮಲ್ಲೇಶ ಗೌಡ ಮತ್ತು ಸಾಹಿತಿ ಶ್ರೀಮತಿ ದಯಾ ಗಂಗನಘಟ್ಟ ಇವರು ಕೃತಿ ಕುರಿತು ಮಾತನಾಡಲಿದ್ದಾರೆ.

Read More

ಮಂಗಳೂರು : ಕಟೀಲು ದುರ್ಗಾಪರಮೇಶ್ವರೀ ದೇವಳದ ಯಕ್ಷಗಾನ ತಿರುಗಾಟದ ಆರಂಭದ ಸೇವೆಯಾಟ ಹಾಗೂ ಏಳನೇ ಮೇಳದ ಉದ್ಘಾಟನೆ ದಿನಾಂಕ 16 ನವೆಂಬರ್ 2025ರಂದು ಜರಗಿತು. ಈ ಸಂದರ್ಭದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರ ಘನ ಅಧ್ಯಕ್ಷತೆ ಹಾಗು ಅತಿಥಿ ಗಣ್ಯರ ಸಮಕ್ಷ ದೇವಳದ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ, ಏಳು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಅನುವಂಶಿಕ ಮೊಕ್ತೇಸರುಗಳಾದ ವಾಸುದೇವ ಅಸ್ರಣ್ಣ ಮತ್ತು ಸಹೋದರರು ಕಲೆ- ಕಲಾವಿದರು ಮತ್ತು ಸಾಮಾಜಿಕ ಕಳಕಳಿಯ ಕೈಂಕರ್ಯ ಮಾಡುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗಕ್ಕೆ ‘ಶ್ರೀ ದುರ್ಗಾನುಗ್ರಹ ಪ್ರಶಸ್ತಿ’ ನೀಡಿ ಗೌರವಿಸಿದರು. ಶ್ರೀದೇವಿಯ ಪ್ರಸಾದ, ಸನ್ಮಾನ ಪತ್ರ ಹಾಗೂ ರೂ.25,000/-ದ ಹಮ್ಮಿಣಿಯನ್ನು ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಇವರಿಗೆ ನೀಡಿ ಅಭಿನಂದಿಸಿದರು. ಕಲಾವಿದ ಶ್ರುತಕೀರ್ತಿರಾಜ್ ಸಂಸ್ಥೆಯ ಕಾರ್ಯಚಟುವಟಿಕೆ ಪರಿಚಯಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್.ವಿ. ಭಟ್,…

Read More

ಬೆಂಗಳೂರು : ಬೆಂಗಳೂರಿನ ಮಲ್ಲೇಶ್ವರದ ಆಶಾ ರಘು ಇವರ ನಿವಾಸದಲ್ಲಿ ದಿನಾಂಕ 13 ನವೆಂಬರ್ 2025ರಂದು ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯ ಎರಡು ಹೊಸ ಕೃತಿಗಳನ್ನು ಲೋಕಾರ್ಪಣೆಗೊಂಡವು. ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಭಗವಾನ್ ಕೆ. ನಾರಾಯಣ್ “ವಿವಾದಗಳನ್ನೆಲ್ಲಾ ಬದಿಗಿಟ್ಟು, ಸಕಾರಾತ್ಮಕವಾದ ವಿಚಾರಗಳನ್ನಷ್ಟೇ ಉಳ್ಳಂತೆ ನಾಡಿನ ಪ್ರಖ್ಯಾತ ಲೇಖಕರು ಭೈರಪ್ಪನವರಿಗಾಗಿ ಬರೆದ ನುಡಿನಮನದ ಲೇಖನಗಳನ್ನು ಆಶಾ ರಘು ಇವರು ಸಂಪಾದಿಸಿರುವ ‘ಭೈರಪ್ಪನವರೆಡೆಗೆ ಭಾವತಂತು’ ಕೃತಿಯು ಒಳಗೊಂಡಿದೆ. ಇದು ನಿಜಕ್ಕೂ ಬಹಳ ಅರ್ಥಪೂರ್ಣವಾದ ಭಾವನಮನವಾಗಿದೆ” ಎಂದು ಅಭಿಪ್ರಾಯಪಟ್ಟರು. ಮಾಸ್ಟರ್ ಪ್ರಣವ್ ಭಾರದ್ವಾಜ್ ರಚನೆಯ ‘ಅಂಗದ’ ಎಂಬ ಪೌರಾಣಿಕ ಕಾದಂಬರಿಯ ಕುರಿತು ಮಾತನಾಡುತ್ತಾ, “ಹದಿನೈದರ ಪೋರ ಪ್ರಣವ್ ಭಾರದ್ವಾಜ್ ನ ಸಾಧನೆ ಶ್ಲಾಘನೀಯವಾದುದು. ಅಂಗದನಂತಹ ಪಾತ್ರವನ್ನು ನಿರ್ವಹಿಸಿರುವ ರೀತಿಯಲ್ಲಿ ಲೇಖಕನು ಬೆಳೆದುಬಂದಿರುವ ಸಂಸ್ಕಾರ ಎಂತಹುದೆಂದು ಅರಿವಾಗುತ್ತದೆ” ಎಂದರು. ಎರಡು ಕೃತಿಗಳ ಕುರಿತು ಪರಿಚಯಿಸಿದ ಲೇಖಕಿ ಉಷಾರಾಣಿ ಟಿ.ಆರ್. ಇವರು, ಭೈರಪ್ಪನವರ ನುಡಿನಮನವು ಸಂಗ್ರಹಯೋಗ್ಯವಾಗಿದೆ ಹಾಗೂ ‘ಅಂಗದ’ ಕಾದಂಬರಿಯು ನವೀನವಾದ ಒಳನೋಟವನ್ನು ನೀಡುತ್ತದೆ…

Read More

ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ ಧಾರವಾಡ ಹಾಗೂ ಸಕ್ಕರಿ ಬಾಳಾಚಾರ್ಯ ‘ಶಾಂತಕವಿ’ ಟ್ರಸ್ಟ (ರಿ.) ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 22 ಮತ್ತು 23 ನವೆಂಬರ್ 2025ರಂದು ಎರಡು ದಿನಗಳ ಕನ್ನಡ ರಾಜ್ಯೋತ್ಸವ ಮತ್ತು ಆಧುನಿಕ ಕನ್ನಡ ರಂಗಭೂಮಿ ದಿನದ ಅಂಗವಾಗಿ ‘ಶಾಂತಕವಿ ನಾಟಕೋತ್ಸವ-2025’ವನ್ನು ಧಾರವಾಡದ ಕರ್ನಾಟಕ ಕಾಲೇಜು ಆವರಣ ಸೃಜನಾ ಡಾ. ಅಣ್ಣಾಜಿ ರಾವ್ ಶಿರೂರು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. ದಿನಾಂಕ 22 ನವೆಂಬರ್ 2025ರಂದು ಸಂಜೆ 5-30 ಘಂಟೆಗೆ ಉದ್ಘಾಟನಾ ಸಮಾರಂಭ ಹಾಗೂ ನಾಟಕೋತ್ಸವ-2025 ಕಾರ್ಯಕ್ರಮವನ್ನು ಹುಬ್ಬಳ್ಳಿ ಧಾರವಾಡ ಪಶ್ಚಿಮ ಮತಕ್ಷೇತ್ರ ಮಾನ್ಯ ಶಾಸಕರಾದ ಶ್ರೀ ಅರವಿಂದ ಬೆಲ್ಲದ ಇವರು ಉದ್ಘಾಟಿಸುವರು. ಧಾರವಾಡದ ಸಕ್ಕರಿ ಬಾಳಾಚಾರ್ (ಶಾಂತಕವಿ) ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ಶ್ರೀಬಾಬುರಾವ್ ಸಕ್ಕರಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುತ್ತಾರೆ. ದಾವಣಗೆರೆ ವೃತ್ತಿ ರಂಗಭೂಮಿ, ರಂಗಾಯಣ ನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ ಕಡಕೋಳ ಇವರು ಮುಖ್ಯ ಅಥಿತಿಗಳಾಗಿರುತ್ತಾರೆ. ಈ ದಿವಸ ಪು.ತಿ. ನರಸಿಂಹಾಚಾರ್ಯರವರು ರಚಿಸಿದ ‘ಗೋಕುಲ ನಿರ್ಗಮನ’…

Read More

ಉಡುಪಿ : ಅಂಬಲಪಾಡಿಯ ಶ್ರೀ ಮಹಾಕಾಳಿ ಹಾಗೂ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ಭವಾನಿ ಮಂಟಪದಲ್ಲಿ ಅಮ್ಮುಂಜೆ ಶ್ರೀ ಭ್ರಾಮರೀ ನಾಟ್ಯಾಲಯದ ರಜತ ವರ್ಷದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 16 ನವೆಂಬರ್ 2025ರಂದು ನಡೆಯಿತು. ದೇವಸ್ಥಾನದ ಪೂಜ್ಯ ಧರ್ಮದರ್ಶಿಯವರಾದ ಡಾ. ನಿ.ಬಿ. ವಿಜಯ ಬಲ್ಲಾಳ್ ಇವರ ಅಮೃತ ಹಸ್ತದಿಂದ ದೀಪ ಪ್ರಜ್ವಲನೆ ಮಾಡುವುದರೊಂದಿಗೆ ಉದ್ಘಾಟನೆ ಮಾಡಿ ದೇವಸ್ಥಾನ ಹಾಗೂ ನೃತ್ಯ ಪರಂಪರೆ ಬಗ್ಗೆ ಮಾತನಾಡುತ್ತಾ ಪುರಾಣ ನೃತ್ಯ ಪ್ರಕಾರ ನೃತ್ಯಾಭ್ಯಾಸ ಭರತನಾಟ್ಯಗಳಿಂದ ಧರ್ಮ ಸಂಸ್ಕೃತಿ ಉಳಿವು ಸಾಧ್ಯ ಎಂಬ ಸಂದೇಶ ನೀಡಿದರು. ಪ್ರಸ್ತುತ 25 ವರ್ಷಗಳ ನೃತ್ಯ ಪರಂಪರೆಯನ್ನು ಆಚರಿಸುತ್ತಿರುವ ಶ್ರೀ ಭ್ರಾಮರೀ ನಾಟ್ಯಾಲಯವು ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದ್ದು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮ, ನಿವೃತ್ತ ಮುಖ್ಯೋಪಾಧ್ಯರಾದ ಬಿ. ರವೀಂದ್ರ ರಾವ್, ಯುವ ವಿಚಾರ ವೇದಿಕೆಯ ಅಧ್ಯಕ್ಷರಾದ ಶ್ರೀ ಸಂದೀಪ್ ಶೆಟ್ಟಿ, ನಾಟ್ಯಾಲಯದ ಗೌರವಾಧ್ಯಕ್ಷರಾದ ಶ್ರಿಯುತ ಕೆ. ಭಾಸ್ಕರ್ ಉಪಸ್ಥಿತರಿದ್ದು…

Read More

ಮಂಗಳೂರು : ರಾಮಕೃಷ್ಣ ಮಿಷನ್ ಮಂಗಳೂರು ಆಶ್ರಯದಲ್ಲಿ ಹರಿಕಥಾ ಪರಿಷತ್ (ರಿ.) ಮಂಗಳೂರು ಇವರ ವತಿಯಿಂದ ಕರ್ನಾಟಕ ರಾಜ್ಯ ಹಾಗೂ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ‘ಹರಿಕಥಾ ಸ್ಪರ್ಧೆ 2025’ಯನ್ನು ಕಿರಿಯರ ಮತ್ತು ಹಿರಿಯರ ವಿಭಾಗದಲ್ಲಿ ಆಯೋಜಿಸಲಾಗಿದೆ. ಹರಿಕಥಾ ಕಲೆಯನ್ನು ಉಳಿಸಿ ಬೆಳೆಸಲು ಆದಷ್ಟು ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಹರಿಕಥಾ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೇರೇಪಿಸಬೇಕಾಗಿ ವಿನಂತಿ. ದಿನಾಂಕ 01 ಡಿಸೆಂಬರ್ 2025ರ ಒಳಗೆ ತಮ್ಮ ಕನಿಷ್ಠ ಐದು ನಿಮಿಷ ಅವಧಿಯ ಹರಿಕಥಾ ಪ್ರಸ್ತುತಿಯ ವಿಡಿಯೊ/ ಆಡಿಯೊವನ್ನು ಸ್ಪರ್ಧಾಳುವಿನ, ಹೆಸರು, ತರಗತಿ, ವಿಳಾಸ ಈ ವಿವರಗಳೊಂದಿಗೆ ಈ ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮೂಲಕ ಕಳಿಸಿಕೊಡಬೇಕು – 9945370655, email : [email protected] ಆಯ್ಕೆಯಾದ ಸ್ಪರ್ಧಿಗಳಿಗೆ ಡಿಸೆಂಬರ್‌ ಮೊದಲ ವಾರದಲ್ಲಿ ಆಯ್ಕೆಯಾದ ವಿವರ ತಿಳಿಸಲಾಗುವುದು. ಆಯ್ಕೆಗೊಂಡ ಸ್ಪರ್ಧಿಗಳು ದಿನಾಂಕ 27 ಡಿಸೆಂಬರ್ 2025 ಶನಿವಾರದಂದು ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಆಹ್ವಾನಿತ ಶ್ರೋತೃಗಳ ಮುಂದೆ ಕಿರಿಯ ವಿಭಾಗದ ಸ್ಪರ್ಧಿಗಳು 15 ನಿಮಿಷ ಹಾಗೂ ಹಿರಿಯ…

Read More

ಸುರತ್ಕಲ್ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಇಡ್ಯಾ ಸುರತ್ಕಲ್ ಇವರ ವತಿಯಿಂದ ಮನು ಇಡ್ಯಾ ಇವರ ‘ಗಂಧದ ಕೊರಡ್’ ಮತ್ತು ‘ತಾಂಗ್ ನಿರೆಲ್’ ಎರಡು ನಾಟಕಗಳ ಪುಸ್ತಕ ಬಿಡುಗಡೆ ಮತ್ತು ಚಾವಡಿ ತಮ್ಮನ ಕಾರ್ಯಕ್ರಮವನ್ನು ದಿನಾಂಕ 13 ನವೆಂಬರ್ 2025ರಂದು ಸಂಜೆ 4-00 ಗಂಟೆಗೆ ಸುರತ್ಕಲ್ ಇಡ್ಯಾ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ. ಸುರತ್ಕಲ್ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಇಡ್ಯಾ ಸುರತ್ಕಲ್ ಬಿಲ್ಲವ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ದಿನಾಂಕ 13 ನವೆಂಬರ್ 2025ರಂದು ಆಯೋಜಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಮನು ಇಡ್ಯಾರ ‘ಗಂಧದ ಕೊರಡ್’ ಮತ್ತು ‘ತಾಂಗ್ ನಿರೆಲ್’ ನಾಟಕಗಳ ಪುಸ್ತಕ ಬಿಡುಗಡೆ ಮತ್ತು ಮನು ಇಡ್ಯಾರಿಗೆ ಚಾವಡಿ ತಮ್ಮನ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ವಿಜಯ ಕರ್ನಾಟಕದ ನಿವೃತ್ತ ಸ್ಥಾನೀಯ ಸಂಪಾದಕ ಯು.ಕೆ. ಕುಮಾರನಾಥ “ತುಳು ರಂಗ…

Read More