Subscribe to Updates
Get the latest creative news from FooBar about art, design and business.
Author: roovari
ಧಾರವಾಡ : ಇಂದೋರಿನ ಸಾಹಿತ್ಯಾಲಯ್ ಮತ್ತು ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಗಳ ಸಹಯೋಗದಲ್ಲಿ ರಾಷ್ಟ್ರಮಟ್ಟದ ಸಂಶೋಧನ ಲೇಖನ ಸ್ಪರ್ಧೆ ಏರ್ಪಡಿಸಲಾಗಿದ್ದು, ಅತಿಹೆಚ್ಚು ಅಂಕ ಪಡೆದ ಮೊದಲ ಐದು ಪ್ರಬಂಧಗಳಿಗೆ ತಲಾ 10000 ರೂ. ನಗದು ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಸಂಶೋಧನ ಲೇಖನದ ವಿಷಯ : ಭಾರತೀಯ ಶಿಲ್ಪಕಲೆ ಮತ್ತು ಚಿತ್ರಕಲೆಯಲ್ಲಿ ಶೃಂಗಾರದ ಚಿತ್ರಣ ಮಧ್ಯಕಾಲೀನ ಭಾರತದ ಭಕ್ತಿ ಸಾಹಿತ್ಯ ಭಾರತದ ತಾಂತ್ರಿಕ ಪಂಥಗಳು ಅಂದು-ಇಂದು ನಿಯಮಗಳು: ಈ ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. 60 ವರ್ಷದೊಳಗಿನವರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಲೇಖನ ಕನಿಷ್ಠ 1000 ಪದ ಮತ್ತು ಗರಿಷ್ಠ 5000 ಪದಗಳ ಮಿತಿಯಲ್ಲಿರಬೇಕು. ಲೇಖನ ಸಿದ್ಧಪಡಿಸಲು ನೆರವಾದ ಆಕರ ಗ್ರಂಥಗಳ ಉಲ್ಲೇಖ ಮಾಡುವುದು ಕಡ್ಡಾಯ. ಲೇಖನಗಳನ್ನು ತಪ್ಪಿಲ್ಲದಂತೆ ಟೈಪಿಸಿ ಪಿ. ಡಿ. ಎಫ್. ರೂಪದಲ್ಲಿ ಕಳಿಸಬೇಕು. ಲೇಖಕರ ಪರಿಚಯ, ಪೂರ್ಣ ವಿಳಾಸ ಮತ್ತು ಇತ್ತೀಚಿನ ಒಂದು ಭಾವಚಿತ್ರವನ್ನು ಲೇಖನದ ಜೊತೆ ಕಳಿಸಬೇಕು. ಲೇಖನಗಳನ್ನು +919110687473 ಈ ವಾಟ್ಸಪ್…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಪಂಜೆ ಮಂಗೇಶರಾಯರು ಹಾಗೂ ಕೃತಿಗಳ ಅವಲೋಕನ ಕಾರ್ಯಾಕ್ರಮವು ದಿನಾಂಕ 10 ಅಕ್ಟೋಬರ್ 2025ರಂದು ಬೆಳಿಗ್ಗೆ 9.30ಕ್ಕೆ ಮಂಗಳೂರಿನ ಉರ್ವಾ ಮಾರ್ಕೆಟ್ ಬಳಿ ಇರುವ ಶ್ರೀ ಸಿದ್ಧಿವಿನಾಯಕ ಕೃಪಾ ಇಲ್ಲಿ ನಡೆಯಲಿದೆ. ದ. ಕ. ಜಿಲ್ಲಾ ಕ. ಸಾ. ಪ. ಇದರ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ನಿವೃತ್ತ ಪ್ರೌಢ ಶಾಲಾ ಶಿಕ್ಷಕಿ ಹಾಗೂ ಸಾಮಾಜಿಕ ಚಿಂತಕಿಯಾದ ಶ್ರೀಮತಿ ಕೆ. ಎ. ರೋಹಿಣಿ ಉದ್ಘಾಟಿಸಲಿದ್ದಾರೆ. ಪಂಜೆ ಬಗ್ಗೆ ಅವಲೋಕನವನ್ನು ವಿಶ್ರಾಂತ ಪ್ರಾಧ್ಯಾಪಕರಾದ ಪುತ್ತೂರಿನ ಡಾ. ವರದರಾಜ ಚಂದ್ರಗಿರಿ ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿವೃತ್ತ ಅಕಾಶವಾಣಿ ನಿರ್ದೇಶಕರಾದ ಡಾ. ವಸಂತಕುಮಾರ್ ಪೆರ್ಲ, ಎ.ಪಿ.ಎಸ್. ವಿದ್ಯಾಸಂಸ್ಥೆ ಬೆಂಗಳೂರು ಇಲ್ಲಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಪ್ರಮೀಳಾ ಮಾಧವ್, ಬೆಸೆಂಟ್ ಮಹಿಳಾ ಕಾಲೇಜು ಮಂಗಳೂರು ಇಲ್ಲಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ರಾಮಚಂದ್ರ, ಮಂಗಳೂರಿನ…
ಬ್ರಹ್ಮಾವರ : ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ (ರಿ.) ಎಸ್.ಎಮ್.ಎಸ್. ಪದವಿಪೂರ್ವ ಕಾಲೇಜು, ಬ್ರಹ್ಮಾವರ ಇದರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಆಯೋಜಿಸುವ “ನುಡಿಚಿತ್ತಾರ” ಮಕ್ಕಳಿಗಾಗಿ ಕಥೆ ಹೇಳುವ ಸ್ಪರ್ಧೆಯು ದಿನಾಂಕ 09 ನವೆಂಬರ್ 2025ರ ಅದಿತ್ಯವಾರದಂದು ಬ್ರಹ್ಮಾವರದ ಎಸ್. ಎಮ್. ಎಸ್. ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ವಿಜೇತರಿಗೆ – ಪ್ರಥಮ ಬಹುಮಾನ 3000, ದ್ವಿತೀಯ ಬಹುಮಾನ – 2000, ತೃತೀಯ ಬಹುಮಾನ 1000 ನೀಡಿ ಗೌರವಿಸಲಾಗುವುದು. ವಿಡಿಯೋ ಕಳುಹಿಸಲು ಕೊನೆಯ ದಿನಾಂಕ 20 ಅಕ್ಟೋಬರ್ 2025 ಸ್ಪರ್ಧೆಯ ನಿಯಮ ನಿಬಂಧನೆಗಳು : • ಸ್ಪರ್ಧೆ ಎರಡು ಸುತ್ತಿನಲ್ಲಿ ನಡೆಯುತ್ತದೆ. • ಮೊದಲ ಸುತ್ತು:- ನಿಮ್ಮ ಪ್ರಸ್ತುತಿಯನ್ನು ವಿಡಿಯೋ ಮಾಡಿ ಕಳಿಸಬೇಕು. ಇದರಲ್ಲಿ ಅತ್ಯುತ್ತಮ 25 ಪ್ರಸ್ತುತಿಗಳನ್ನು ಎರಡನೇ ಸುತ್ತಿಗೆ ಆಯ್ಕೆ ಮಾಡಲಾಗುವುದು. • ಕಥಾ ವೀಡಿಯೋ ಯಾವುದೇ ಎಡಿಟ್ ಇಲ್ಲದಿರಲಿ. • ಎರಡನೇ ಸುತ್ತು:-ಆಯ್ಕೆಯಾದ 25 ಸ್ಪರ್ಧಿಗಳು ನವೆಂಬರ್ 9 ರಂದು ಬ್ರಹ್ಮಾವರದಲ್ಲಿ ನಡೆಯುವ ‘ನುಡಿ…
ಕಾಸರಗೋಡು : ಕನ್ನಡ ಗ್ರಾಮ, ಕಾಸರಗೋಡು ಇದರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ,ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 4 ನವಂಬರ್ 2025 ಮಂಗಳವಾರದಂದು ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಮತ್ತು ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮ ದಿನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ ಕಾಸರಗೋಡು ಇದರ ಸಂಸ್ಥಾಪಕ ಅಧ್ಯಕ್ಷ ಶಿವರಾಮ ಕಾಸರಗೋಡು ಅವರ ಅಭಿನಂದನಾ ಸಮಾರಂಭವು ಸಂಜೆ ಗಂಟೆ 4.00 ಕ್ಕೆ ನಡೆಯಲಿದೆ. ಕಾರ್ಯಕ್ರಮಗಳು:- ಬೆಳಿಗ್ಗೆ ಗಂಟೆ 10.00 ಕ್ಕೆ ಕಾಸರಗೋಡು ಕನ್ನಡ ಗ್ರಾಮದಲ್ಲಿ ರಾಷ್ಟ್ರ ಧ್ವಜಾರೋಹಣ ಮಧ್ಯಾಹ್ನ ಗಂಟೆ :-1.00ಕ್ಕೆ ಕನ್ನಡ ಗ್ರಾಮದಲ್ಲಿ – ತಾಯಿ ಭುವನೇಶ್ವರಿಯ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ವತಿಯಿಂದ ತಿಂಗಳ ಸರಣಿ ತಾಳಮದ್ದಳೆ ದಿನಾಂಕ 6 ಅಕ್ಟೋಬರ್ 2025ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ” ರಾಜಗೋಪುರದಲ್ಲಿ ” “ಭರತಾಗಮನ” ತಾಳಮದ್ದಳೆ ಯೊಂದಿಗೆ ನಡೆಯಿತು. ಹಿಮ್ಮೇಳದಲ್ಲಿ ಯಲ್. ಯನ್. ಭಟ್, ಪದ್ಯಾಣ ಶಂಕರನಾರಾಯಣ ಭಟ್ ,ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಶರಣ್ಯ ನೆತ್ತರಕೆರೆ, ಸಮರ್ಥವಿಷ್ಣು ಈಶ್ವರಮಂಗಲ ಸಹಕರಿಸಿದರು. ಮುಮ್ಮೇಳದಲ್ಲಿ ಗುಡ್ಡಪ್ಪ ಬಲ್ಯ ( ಶ್ರೀರಾಮ ) ಗುಹ ( ಭಾಸ್ಕರ್ ಬಾರ್ಯ ) ಭರತ ( ವಿ.ಕೆ.ಶರ್ಮ ಅಳಿಕೆ ) ವಷಿಷ್ಟ ( ಮಾಂಬಾಡಿ ವೇಣು ಗೋಪಾಲ ಭಟ್ ) ಲಕ್ಷ್ಮಣ ( ಶುಭಾ ಅಡಿಗ ) ಸಹಕರಿಸಿದರು ಗೌರವ ಕಾರ್ಯದರ್ಶಿ ಟಿ.ರಂಗನಾಥ ರಾವ್ ಸ್ವಾಗತಿಸಿ ವಂದಿಸಿದರು.
ಉಡುಪಿ : ಕಲಾಂಗಣ ಪ್ರಸ್ತುತ ಪಡಿಸುವ ‘ಮಾರ್ಗ 2025’ ಅನಲಾ ಉಪಾಧ್ಯಾಯರಿಂದ ಆಯೋಜಿಲಾದ ಭರತನಾಟ್ಯ ನೃತ್ಯ ಉತ್ಸವವನ್ನು ದಿನಾಂಕ 10 ಅಕ್ಟೋಬರ್ 2025ರಂದು 5-00 ಗಂಟೆಗೆ ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಅನ್ನಪೂರ್ಣ ರಿತೇಶ್, ದೀಪಕ್ ಕುಮಾರ್, ಪ್ರೀತಿಕಲಾ, ರಾಧಿಕಾ ಶೆಟ್ಟಿ ಮತ್ತು ಮಂಜರಿ ಚಂದ್ರ ಪುಷ್ಪರಾಜ್ ಇವರು ‘ಕೃಷ್ಣಾನಂದ ಲಹರಿ’ ಹಾಗೂ ಡಾ. ರಶ್ಮಿ ತಾಪರ್ ಮತ್ತು ಅನಲಾ ಉಪಾಧ್ಯಾಯ ಇವರಿಂದ ‘ಮಾರ್ಗಂ’ ನೃತ್ಯ ಪ್ರದರ್ಶನ ಪ್ರಸ್ತುತಗೊಳ್ಳಲಿದೆ.
ಮೈಸೂರು : ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಮೈಸೂರಿನ ಅರಮನೆ ಆವರಣದಲ್ಲಿ ದಿನಾಂಕ 02 ಅಕ್ಟೋಬರ್ 2025ರಂದು ನಡೆದ ಜಾಥಾ ಕಾರ್ಯಕ್ರಮದಲ್ಲಿ ಒತ್ತೋರ್ಮೇರ ಕೊಡವ ಕೂಟದ ಸದಸ್ಯರು ಕೊಡಗಿನ ಸಾಂಪ್ರದಾಯವನ್ನು ಪ್ರದರ್ಶಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದರು. ಅರಮನೆ ಮೈದಾನದಿಂದ ಬನ್ನಿ ಮಂಟಪದವರೆಗೆ ನಡೆದ ಮೆರವಣಿಗೆಯಲ್ಲಿ ಕೊಡವರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ತಳಿಯತಕ್ಕಿ ದೀಪ ಹಿಡಿದು, ದುಡಿ ಕೊಟ್ಸ್ ದಾಟ್ ಜೊತೆಗೆ ಕೊಡವ ಸಂಸ್ಕೃತಿಯ ಅಂಗವಾದ ಒಡಿಕತ್ತಿ, ಬಿಲ್ಲು ಬಾಣ, ಬರ್ಜಿ ಹಿಡಿದು ವಾಟಕಪಾಟ್ ನೃತ್ಯ ಮಾಡುವ ಮೂಲಕ ಜಾಥಾ ನಡೆಸಲಾಯಿತು. ಕೊಡಗಿನ ವಾಲಗ ತಂಡದ ಪ್ರಾಯೋಜಕತ್ವವನ್ನು ಮುಖ್ಯಮಂತ್ರಿಗಳ ಕಾನೂರು ಸಲಹೆಗಾರರು ಹಾಗು ವಿರಾಜಬೇಟೆ ಕ್ಷೇತ್ರದ ಶಾಸಕ ಅಜ್ಜಿಕುಟೀರ ಪೊನ್ನಣ್ಣ ಅವರು ನೀಡಿದರು. ಕಾರ್ಯಕ್ರಮದಲ್ಲಿ ಒತ್ತೋರ್ಮೆರ ಕೊಡವ ಕೂಟದ ಸ್ಥಾಪಕ ಚೆಟ್ಟೋಳಿರ ಶರತ್ ಸೋಮಣ್ಣ, ಕಾರ್ಯಕ್ರಮ ಸಂಚಾಲಕ ಕಾಳಮಂಡ ಬಾಬಿನ್ ಅಚ್ಚಮ್ಮ,ಕಾರ್ಯಕ್ರಮ ಸಂಚಾಲಕ ಮಾಚಿಂಗ ಸಚಿನ್ ತಿಮ್ಮಯ್ಯ ಹಾಗೂ ಕಾಯಪಂಡ ಇಶಾನ್ ಪೂಣಚ್ಚ, ಪೊನ್ನೋಲತಂಡ ಶರಣು ತಮ್ಮಯ್ಯ, ಕೇಳಪ್ಪಂಡ ಲಿಂಕಿತ್ ತಿಮ್ಮಯ್ಯ, ಕಾಯಪಂದ…
Bangalore : Upasana Books, a publishing house, under the leadership of Asha Raghu, on 4th October 2025 published two upcoming poets from Bangalore, Jatin Sharma and Upasana Raghu and their collections ‘Flight’ and ‘On Duffy’s Wolf’ respectively. The event, taking place at Kerbside Bistro, Sadashiva Nagar was graced by the presence of K Srinath, writer and translator in Kannada and English. He spoke of the poets, likening them to Sylvia Plath and the notion of ‘suffering breeds art.’ In the wake of which, the poets spoke of their process and influences and this was followed by an open mic bringing…
ಉಡುಪಿ : ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ತನ್ನ 61ನೇ ವರ್ಷದಲ್ಲಿ, ಇದೇ ನವಂಬರ್ ತಿಂಗಳ 4ನೇ ವಾರದಲ್ಲಿ ದಿ. ಡಾ. ಟಿ.ಎಂ.ಎ. ಪೈ, ದಿ. ಎಸ್.ಎಲ್. ನಾರಾಯಣ ಭಟ್ ಮತ್ತು ದಿ. ಮಲ್ಪೆ ಮಧ್ವರಾಜ್ ಸ್ಮಾರಕ ರಾಜ್ಯ ಮಟ್ಟದ 46ನೇ ಕನ್ನಡ ನಾಟಕ ಸ್ಪರ್ಧೆಯನ್ನು ನಡೆಸಲಿದೆ. ಕರ್ನಾಟಕ ರಾಜ್ಯದ (ಕಾಸರಗೋಡು ಸಹಿತ) ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಕನಿಷ್ಟ 1 ಘಂಟೆ 30 ನಿಮಿಷ ಹಾಗೂ ಗರಿಷ್ಟ 2 ಘಂಟೆ 15 ನಿಮಿಷ ಅವಧಿಯ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ ಅಥವಾ ಯಾವುದೇ ಪ್ರಕಾರದ ನಾಟಕ ಪ್ರದರ್ಶನ ಮಾಡಬಹುದು. ಈ ಬಾರಿ ಸ್ಪರ್ಧೆಗೆ ಗರಿಷ್ಠ 12 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ಅನುಕ್ರಮವಾಗಿ ರೂ.35,000/-, ರೂ.25,000/-, ರೂ.15.000/-ದ ನಗದು ಬಹುಮಾನಗಳನ್ನು ಹಾಗೂ ಪರ್ಯಾಯ ಫಲಕಗಳನ್ನು ನೀಡಲಾಗುವುದು. ಅಲ್ಲದೆ ಶ್ರೇಷ್ಠ ನಿರ್ದೇಶನ,…
ಪುತ್ತೂರು : ಜಿಲ್ಲಾ ಮಟ್ಟದ ಗಮಕ ಸಮ್ಮೇಳನದ ಅಂಗವಾಗಿ ಪ್ರೌಢ ಮತ್ತು ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಗಮಕ ವಾಚನ ಸ್ಪರ್ಧೆಯನ್ನು ದಿನಾಂಕ 05 ಅಕ್ಟೋಬರ್ 2025ನೇ ಆದಿತ್ಯವಾರದಂದು ಪುತ್ತೂರಿನ ಅನುರಾಗ ವಠಾರದಲ್ಲಿ ಏರ್ಪಡಿಸಲಾಯಿತು. ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀಯುತ ಬಿ. ಪುರಂದರ ಭಟ್ಟರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಮಕ ಕಲಾ ಪರಿಷತ್ತು ಜಿಲ್ಲಾಧ್ಯಕ್ಷರಾದ ಪ್ರೊ. ಮಧೂರು ಮೋಹನ ಕಲ್ಲೂರಾಯರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪ್ರೊ. ವೇದವ್ಯಾಸ ರಾಮಕುಂಜ ಇವರು ಸ್ಪರ್ಧಾಳುಗಳಿಗೆ ಶುಭಾಶಯ ಕೋರಿದರು. ಪ್ರೌಢಶಾಲಾ ವಿಭಾಗದಿಂದ 12 ಮಂದಿ ಮತ್ತು ಪದವಿಪೂರ್ವ ಹಾಗೂ ಪದವಿ ವಿಭಾಗದಿಂದ ಎಂಟು ಮಂದಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಪ್ರೊ. ಮಧೂರು ಮೋಹನ ಕಲ್ಲೂರಾಯ ಮತ್ತು ಗಮಕಿ ಡಾ. ಕಾರ್ತಿಕ್ ತಾಮಣ್ಕರ್ ತೀರ್ಪುಗಾರರಾಗಿ ಸಹಕರಿಸಿದರು. ಪ್ರೌಢಶಾಲಾ ವಿಭಾಗದಲ್ಲಿ ಸನ್ಮಯ್ 8ನೇ ತರಗತಿ ಅಂಬಿಕಾ ವಿದ್ಯಾಲಯ ಬಪ್ಪಳಿಗೆ ಮತ್ತು…