Author: roovari

ಮಂಡ್ಯ : ಕರ್ನಾಟಕ ಸಂಘ ಮಂಡ್ಯ ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 23 ನವೆಂಬರ್ 2025ರಂದು ಬೆಳಗ್ಗೆ ಗಂಟೆ 11-00ಕ್ಕೆ ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ವನರಂಗದಲ್ಲಿ ಆಯೋಜಿಸಲಾಗಿದೆ. ಮಂಡ್ಯದ ಎಸ್.ಬಿ. ಎಜುಕೇಷನ್ ಟ್ರಸ್ಟ್ ಇವರ ಅಧ್ಯಕ್ಷರಾದ ಡಾ. ಬಿ. ಶಿವಲಿಂಗಯ್ಯ ಇವರು ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರಿನ ಪ್ರಸಿದ್ಧ ಗಾಯಕರಾದ ಡಾ. ಅಪ್ಪಗೆರೆ ತಿಮ್ಮರಾಜು ಇವರು ಈ ಸಮಾರಂಭವನ್ನು ಉದ್ಘಾಟನೆ ಮಾಡಿ ರಾಜ್ಯೋತ್ಸವ ಕುರಿತು ಮಾತನಾಡಲಿದ್ದಾರೆ. ಮಂಡ್ಯ ಜಿಲ್ಲಾ ಲಯನ್ಸ್ ಇದರ ಮಾಜಿ ರಾಜ್ಯಪಾಲರಾದ ಶ್ರೀ ಲಯನ್ ಕೆ. ದೇವೇಗೌಡ ಮತ್ತು ಪರಿಸರ ಇಂಜಿನಿಯರಿಂಗ್ ಸಂಘ ಕರ್ನಾಟಕ ಇದರ ಅಧ್ಯಕ್ಷರಾದ ಡಾ. ಕೆ.ಸಿ. ಜಯರಾಮು ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಂಡ್ಯ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಇದರ ಪ್ರಾಂಶುಪಾಲರಾದ ಪ್ರೊ. ಗುರುರಾಜಪ್ರಭು ಕೆ. ಇವರು ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.

Read More

ಸಾಗರ : ನಾಟ್ಯಶ್ರೀ ಕಲಾತಂಡ (ರಿ.) ಶಿವಮೊಗ್ಗ, ಶ್ರೀ ಗುರು ಯಕ್ಷಗಾನ ಮಂಡಲಿ ಸಾಗರ, ವಿದ್ವಾನ್ ದತ್ತಮೂರ್ತಿ ಭಟ್ ಸಂಘಟನೆಯಲ್ಲಿ ‘ಯಕ್ಷ ಷಡಾಖ್ಯಾನಮ್’ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 23 ನವೆಂಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ಸಾಗರ ಎಲ್.ಬಿ. ಕಾಲೇಜ್ ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ‘ದುಷ್ಯಂತ ಶಾಕುಂತಲಾ’, ‘ಅದಿಚುಂಚನಗಿರಿ ಶ್ರೀ ಕಾಲಭೈರವೇಶ್ವರ ಮಹಾತ್ಮೆ’, ‘ದ್ರುಪದ ಗರ್ವಭಂಗ’, ‘ಲವ ಕುಶ’, ‘ರಾಜ ಉಗ್ರಸೇನ’, ‘ಚಕ್ರವ್ಯೂಹ’ ಪ್ರಸಂಗದ ಯಕ್ಷಗಾನ ಪ್ರದರ್ಶನವು ಪ್ರಸಿದ್ಧ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ.

Read More

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ನಾಲ್ಕುವರೆ ದಶಕಗಳಿಂದ ಗುಣಾತ್ಮಕ ಯಕ್ಷಗಾನ ಪ್ರದರ್ಶನ, ಯಕ್ಷಗಾನ ತರಬೇತಿ, ಕಮ್ಮಟ, ಪುಸ್ತಕ ಬಿಡುಗಡೆ, ಯಕ್ಷಗಾನ ಉತ್ಸವ, ಯಕ್ಷಗಾನ ಪ್ರಾತ್ಯಕ್ಷಿಕೆ ಹೀಗೆ ಹಲವು ಚಟುವಟಿಕೆಯಿಂದಿರುವ ಯಕ್ಷದೇಗುಲ ಸಂಸ್ಥೆಯು ನಾಡಿನಾದ್ಯಂತ ಪ್ರದರ್ಶನ ನೀಡಿರುವುದಲ್ಲದೇ ಜಮ್ಮು-ಕಾಶ್ಮೀರ ಹೊರತು ಪಡಿಸಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಪ್ರದರ್ಶನಗಳನ್ನು ನೀಡಿದೆ. ಅಮೇರಿಕ ಮತ್ತು ಲಂಡನ್‌ನಲ್ಲಿಯೂ ಹಲವು ಪ್ರದರ್ಶನ ನೀಡಿದಲ್ಲದೆ ಇತ್ತೀಚೆಗೆ ಸಿಂಗಾಪುರ ಮತ್ತು ಮೊದಲ ಬಾರಿಗೆ ಇಸ್ರೇಲ್‌ನಲ್ಲೂ ಯಕ್ಷಗಾನದ ಕಂಪನ್ನು ಹರಿಸಿದೆ. ಯಕ್ಷದೇಗುಲವು ಪ್ರತಿ ವರ್ಷವೂ ಸಾಧಕ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವ ಯಕ್ಷದೇಗುಲ ಸಂಸ್ಥೆಯು ಈವರೆಗೆ 38 ಕಲಾವಿದರನ್ನು ಗೌರವಿಸಿದೆ. ಪ್ರಸ್ತುತ ವರ್ಷ ಸಂಸ್ಥೆಯು ಕಳೆದ ಐವತ್ತು ವರ್ಷಗಳಿಂದ ಯಕ್ಷ ಗುರುಗಳಾಗಿ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಸರು ಮಾಡಿದ, ಯಕ್ಷ ಕಲೆಯ ಕುರಿತಾದ ಸಮಗ್ರ ಜ್ಞಾನವನ್ನು ಹೊಂದಿದ, ಅನೇಕ ವಿಚಾರ ಸಂಕಿರಣ, ಕಮ್ಮಟಗಳಲ್ಲಿ ಭಾಗವಹಿಸುವ ಮೂಲಕ ಯಕ್ಷ ಕಲೆಯ ಸಮರ್ಥ ವಿದ್ವಾಂಸರಾಗಿದ್ದ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳರನ್ನು ‘ಯಕ್ಷದೇಗುಲ 2025’ರ ಪ್ರಶಸ್ತಿಗೆ…

Read More

ಸಾಲಿಗ್ರಾಮ : ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಚಿಣ್ಣರ ತಂಡದವರಿಂದ ‘ದ್ರೌಪದಿ ಪ್ರತಾಪ’ ಎಂಬ ಯಕ್ಷಗಾನ ಪ್ರಸಂಗದ ಪ್ರದರ್ಶನವು ವಾರ್ಷಿಕ ದೀಪೋತ್ಸವದ ಸಂದರ್ಭದಲ್ಲಿ ದಿನಾಂಕ 19 ನವೆಂಬರ್ 2025ರಂದು ಸಾಲಿಗ್ರಾಮ ಗುರುನರಸಿಂಹ ಬಯಲು ರಂಗ ಮಂಟಪದಲ್ಲಿ ನಡೆಯಿತು. ಗುರು ನರಸಿಂಹ ದೇವಳದ ಅಧ್ಯಕ್ಷ, ಮನೋವೈದ್ಯಕೀಯ ತಜ್ಞ ಡಾ. ಕೆ.ಎಸ್. ಕಾರಂತರು ಚಿಣ್ಣರನ್ನುದ್ದೇಶಿಸಿ ಮಾತನಾಡಿ “ಚಿಣ್ಣರ ವೇಷಭೂಷಣ, ಕುಣಿತ, ಸಂಭಾಷಣೆ, ಹಾವ ಭಾವಗಳು ಪ್ರೇಕ್ಷಕರ ಮನಸೂರೆಗೊಂಡದ್ದನ್ನು ಗಮನಿಸಿದ್ದೇನೆ. ಬದುಕೆಂಬ ರಂಗಸ್ಥಳದಲ್ಲಿ ಭವಿಷ್ಯದ ಬೇರೆ ಬೇರೆ ಕಾರ್ಯಭಾರವನ್ನು ವಹಿಸಿಕೊಳ್ಳಲಿರುವ ಇವತ್ತಿನ ಪುಟಾಣಿ ವೇಷಧಾರಿಗಳು ಇಂದು ಕಟ್ಟಿಕೊಂಡಿರುವ ಗೆಜ್ಜೆ, ಹಾಕಿದ ಹೆಜ್ಜೆಗಳು ಲಯಬದ್ಧ ಭವಿಷ್ಯಕ್ಕೆ ಭದ್ರ ಬುನಾದಿಯಾಗುವಂತೆ ಶ್ರೀ ಮದ್ಯೋಗಾನಂದ ಗುರು ನರಸಿಂಹನು ಅನುಗ್ರಹಿಸಲಿ” ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ತಂಡದ ಕಾರ್ಯದರ್ಶಿ ವೆಂಕಟೇಶ ವೈದ್ಯ ಇವರನ್ನು ಗೌರವಿಸಲಾಯಿತು. ವೇಷಧಾರಿಯಾದ ಪೂಜಾ ಆಚಾರ್ ತೆಕ್ಕಟ್ಟೆ, ಪರಿಣಿತ ವೈದ್ಯ, ರಚಿತ್ ಶೆಟ್ಟಿ, ಮನೋಮಯ್ ಕಾರಂತ್, ಸನ್ನಿಧಿ ಹೊಳ್ಳ ಉಪಸ್ಥಿತರಿದ್ದರು.

Read More

ಉಡುಪಿ : ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ತನ್ನ 61ನೇ ವರ್ಷದಲ್ಲಿ ದಿ. ಡಾ. ಟಿ.ಎಂ.ಎ. ಪೈ, ದಿ. ಎಸ್.ಎಲ್. ನಾರಾಯಣ ಭಟ್ ಮತ್ತು ದಿ. ಮಲ್ಪೆ ಮಧ್ವರಾಜ್ ಸ್ಮಾರಕ 46ನೇ ‘ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ -2025’ಯನ್ನು ದಿನಾಂಕ 23 ನವೆಂಬರ್ 2025ರಿಂದ 04 ಡಿಸೆಂಬರ್ 2025ರವರೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿ ಮುದ್ದಣ ಮಂಟಪದಲ್ಲಿ ನಡೆಸಲಿದೆ. ದಿನಾಂಕ 23 ನವೆಂಬರ್ 2025ರಂದು ಈ ಸಮಾರಂಭದ ಉದ್ಘಾಟನೆಯನ್ನು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಇವರು ನಿರ್ವಹಿಸಲಿದ್ದು, ರಂಗಭೂಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4-00 ಗಂಟೆಗೆ ರಂಗಭೂಮಿ ಕಲಾವಿದರಿಂದ ‘ಸಂಗೀತ ಸೌರಭ’ ಪ್ರಸ್ತುತಗೊಳ್ಳಲಿದೆ. ಸಭಾ ಕಾರ್ಯಕ್ರಮದ ಬಳಿಕ ಸ್ಪರ್ಧೆಯ ಮೊದಲ ದಿನದ ನಾಟಕ ಭಾನುಪ್ರಕಾಶ್ ಎಸ್.ವಿ. ಇವರ ನಿರ್ದೇಶನದಲ್ಲಿ ತುಮಕೂರಿನ ಗುಬ್ಬಿ ವೀರಣ್ಣ ಶಿಕ್ಷಣ ಕಲಾ ತಂಡದವರಿಂದ ‘ಗೌತಮ ಬುದ್ಧ’ ನಾಟಕ ಪ್ರದರ್ಶನಗೊಳ್ಳಲಿದೆ. ದಿನಾಂಕ 24 ನವೆಂಬರ್…

Read More

ಉಡುಪಿ : ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಆಶ್ರಯದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಮತ್ತು ವಿಶ್ವಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಸಹಯೋಗದೊಂದಿಗೆ ಕವಿ ಕುರಾಡಿ ಸೀತಾರಾಮ ಅಡಿಗ ‘ಕಾವ್ಯ ಪ್ರಶಸ್ತಿ -2025’ ಪ್ರದಾನ ಸಮಾರಂಭವನ್ನು ದಿನಾಂಕ 23 ನವೆಂಬರ್ 2025ರಂದು ಸಂಜೆ 5-00 ಗಂಟೆಗೆ ಉಡುಪಿಯ ಅಂಬಲಪಾಡಿ ಭವಾನಿ ಮಂಟಪದಲ್ಲಿ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಪುಸ್ತಕ ಲೋಕಾರ್ಪಣೆ ಮತ್ತು ಸಾಕ್ಷ್ಯಚಿತ್ರ ಬಿಡುಗಡೆ ನಡೆಯಲಿದೆ. ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಇದರ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ ಬಲ್ಲಾಳ್ ಇವರು ದೀಪ ಪ್ರಜ್ವಲನೆ ಮಾಡಿ ಈ ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದು, ವಿಶ್ರಾಂತ ಉಪಸಂಪಾದಕರಾದ ಎಸ್. ನಿತ್ಯಾನಂದ ಪಡ್ರೆ ಇವರು ಕವಿ ಕುರಾಡಿ ಸೀತಾರಾಮ ಅಡಿಗ ‘ಕಾವ್ಯ ಪ್ರಶಸ್ತಿ’ಯನ್ನು ಶಶಿ ತರೀಕೆರೆ ಇವರಿಗೆ ಪ್ರದಾನ ಮಾಡಲಿದ್ದಾರೆ. ಮಂಜುಶ್ರೀ ಕೃಷ್ಣ ಭಟ್ ಇವರ ‘ಜೀವನ ಧರ್ಮ’ ಕೃತಿಯನ್ನು ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ…

Read More

ಸಾಗರ : ಶ್ರೀಮತಿ ಸುಶೀಲಾ ಆರ್. ಶೆಟ್ಟಿಗಾರ್ ಇವರು ನೂತನವಾಗಿ ನಿರ್ಮಿಸಿರುವ ‘ಶ್ರೀ ಚೌಡೇಶ್ವರಿ ಪ್ರಸಾದತ್’ ಗೃಹಪ್ರವೇಶದ ಅಂಗವಾಗಿ ‘ಯಕ್ಷ-ಗಾನ-ವೈಭವ’ ಕಾರ್ಯಕ್ರಮವನ್ನು ದಿನಾಂಕ 23 ನವೆಂಬರ್ 2025ರಂದು ಬೆಳಗ್ಗೆ 11-30 ಗಂಟೆಗೆ ಸಾಗರ ಸೊರಬ ರಸ್ತೆ ಗಮಗಶ್ರೀ ಹೊಟೇಲ್ ಹತ್ತಿರ, ಟೀಚರ್ ಲೇಔಟ್ ಎದುರು ಬಸವೇಶ್ವರ ನಗರದಲ್ಲಿ ಆಯೋಜಿಸಲಾಗಿದೆ. ಚಿನ್ಮಯ ಭಟ್ ಕಲ್ಲಡ್ಕ, ದಿನೇಶ್ ಶೆಟ್ಟಿ ಬೆಪ್ಡೆ, ಶಾಲಿನಿ ಹೆಬ್ಬಾರ್, ಕೌಶಲ್ ರಾವ್ ಪುತ್ತಿಗೆ, ಶ್ರೀಧರ ವಿಟ್ಲ, ನಿಶ್ವತ್ಥ್ ಜೋಗಿ, ಸುನಿಲ ಭಂಡಾರಿ ಮತ್ತು ಸುಜಾನ್ ಹಾಲಾಡಿ ಇವರುಗಳು ಭಾಗವಹಿಸಲಿದ್ದಾರೆ.

Read More

‘ಗಾಡ್ is not ರೀಚಬಲ್’ ಯುವ ಕಥೆಗಾರ ರವೀಂದ್ರ ಮುದ್ದಿಯವರ ಮೊದಲ ಕಾದಂಬರಿ. ತನ್ನ ವಿಶಿಷ್ಟ ಶೀರ್ಷಿಕೆಯಿಂದಲೇ ಗಮನ ಸೆಳೆಯುವ ಇದು ಒಂದು ಭಿನ್ನ ಅನುಭವ ನೀಡುವ ಕಾದಂಬರಿ. ನೇರ ನಿರೂಪಣೆಯ, ಸರಳ ಶೈಲಿಯ, ಎಲ್ಲಿಯೂ ಕೆಳಗಿಡಬೇಕೆಂದು ಅನ್ನಿಸದೆ ಒಂದೇ ಓಟಕ್ಕೆ ಓದಿಸಿಕೊಂಡು ಹೋಗುವ ಇದು ಮೇಲ್ನೋಟಕ್ಕೆ ಒಂದು ಜನಪ್ರಿಯ ಥ್ರಿಲ್ಲರ್ ಎಂದು ಫಕ್ಕನೆ ಅನ್ನಿಸಿದರೂ ಓದಿ ಮುಗಿಸಿದ ನಂತರ ಮರೆತು ಹೋಗುವಂಥ ಕಾದಂಬರಿಯಲ್ಲ, ಬದಲಾಗಿ ಮನಸ್ಸಿನ ಮೂಲೆಗಳಲ್ಲಿ ತಂಗಿ ನಿಂತು ಕಾಡುವ ಗುಣ ಇದಕ್ಕಿದೆ ಅನ್ನುವ ಭಾವನೆ ಹುಟ್ಟಿಸುತ್ತದೆ. ದೇವರು ಅನ್ನುವ ಅಮೂರ್ತ ಪರಿಕಲ್ಪನೆಯು ಮನುಷ್ಯನ ನಂಬಿಕೆಯ ಪದರಗಳಲ್ಲಿ ಬೇರುಬಿಟ್ಟು ಅವನನ್ನು ಅಲುಗಾಡಿಸುವ ಕೆಲಸವನ್ನು ಹೇಗೆ ಮಾಡುತ್ತದೆ ಅನ್ನುವುದಕ್ಕೆ ಕಾದಂಬರಿಯ ಹಲವು ಕಥಾಪಾತ್ರಗಳು ಸಾಕ್ಷಿಯಾಗುತ್ತವೆ. ಮನುಷ್ಯರ ನಡುವಣ ಪ್ರೀತಿ ಹಾಗೂ ಸ್ನೇಹ ಸಂಬಂಧಗಳೇ ದೇವರೆಂಬ ನಂಬಿಕೆ ಮನಸ್ಸಿನಲ್ಲಿ ಬೇರೂರುವಂತಾದರೆ ಆ ದೇವರನ್ನು ಮುಟ್ಟುವುದು ತಡವಾದರೂ ಅಸಾದ್ಯವಾದ ಕಾರ್ಯವೇನಲ್ಲ. ಕಥಾನಾಯಕ ಗೌತಮ್ ಆರಂಭದಲ್ಲಿ ತಾನು ತನ್ನ ಸರ್ವಸ್ವವನ್ನೂ ಕಳೆದುಕೊಂಡು ಬಿಟ್ಟೆ ಎಂಬ…

Read More

ಮಂಗಳೂರು : ಜಾಗೃತಿ ಟ್ರಸ್ಟ್ (ರಿ.) ಬೆಂಗಳೂರು ಇದರ ವತಿಯಿಂದ ಬಿ.ಎಸ್. ಮಂಜುನಾಥ್ ಇವರ ಪುಸ್ತಕ ಬಿಡುಗಡೆ, ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 23 ನವೆಂಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ಮಂಗಳೂರಿನ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮದ ಬಳಿಕ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಕಾಸರಗೋಡು ಇದರ ಕಲಾವಿದರಿಂದ ‘ಸಾಂಸ್ಕೃತಿಕ ಕಲಾ ವೈಭವ’ ಪ್ರಸ್ತುತಗೊಳ್ಳಲಿದೆ.

Read More

ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆ ಇವರ ವತಿಯಿಂದ ಸಾಹಿತಿ ಮೇಟಿ ಮುದಿಯಪ್ಪ ನೆನಪಿನ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2025’ ಪ್ರದಾನ ಸಮಾರಂಭವನ್ನು ದಿನಾಂಕ 22 ನವೆಂಬರ್ 2025ರಂದು ಸಂಜೆ 3-30 ಗಂಟೆಗೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ಸಾಹಿತಿ ಡಾ. ಮಾಧವಿ ಭಂಡಾರಿ ಇವರು ಸಭಾಧ್ಯಕ್ಷತೆ ವಹಿಸಲಿದ್ದು, ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚನ್ನಪ್ಪ ಅಂಗಡಿ ‘ಸಮಗ್ರ ಸಾಹಿತ್ಯ’, ಡಾ. ನಿಕೇತನ ‘ಸಂಶೋಧನೆ ವಿಮರ್ಶೆ’, ಮುದಲ್ ವಿಜಯ್ ‘ಕಾವ್ಯ’ ಇವರಿಗೆ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2025’ ಪ್ರದಾನ ಮಾಡಲಾಗುವುದು. ಚನ್ನಪ್ಪ ಅಂಗಡಿ : ಹಾನಗಲ್ ತಾಲೂಕಿನ ಬಮ್ಮನಹಳ್ಳಿಯಲ್ಲಿ ಹುಟ್ಟಿದ ಚನ್ನಪ್ಪ ಅಂಗಡಿಯವರು ಪ್ರಸ್ತುತ ಧಾರವಾಡದಲ್ಲಿ ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವರು. ಇವರು ಸುಮಾರು 12…

Read More