Author: roovari

‘ನೃತ್ಯಾಂಕುರ’- ನೃತ್ಯ ಸಂಸ್ಥೆಯ ರೂವಾರಿ, ನಾಟ್ಯಗುರು- ಕಲಾವಿದೆ ಪಾದರಸದ ವ್ಯಕ್ತಿತ್ವದ ಶ್ರೀಮತಿ ಅಮೃತಾ ರಮೇಶ್ ಬಹುಮುಖಿ ಪ್ರತಿಭೆ. ನೀಳ ನಿಲುವಿನ ತೆಳುಕಾಯದ ಅಮೃತಾ, ತನ್ನ ದೇಹವನ್ನು ಹಾವಿನಂತೆ ಬಾಗಿ- ಬಳುಕಿಸಿ, ಕಾಲನ್ನು ಎತ್ತರಕ್ಕೆ ಆಕಾಶಚಾರಿಯಲ್ಲಿ ಮಿನುಗಿಸಿ, ಅರೆಮಂಡಿಯಲ್ಲಿ, ಮಂಡಿ ಅಡವುಗಳಲ್ಲಿ ವೇದಿಕೆಯ ತುಂಬಾ ಸಲೀಸಾಗಿ ಚಲಿಸುವ ಮೋಡಿಕಾರ್ತಿ. ತನ್ನ ನೀಳ ತೋಳು, ಕಾಲ್ಗಳು – ಸೊಂಟವನ್ನು ದ್ರವೀಕೃತ ಚಲನೆಗಳಿಂದ ತಿರುಗಿಸಿ ಕಣ್ಮನ ಸೆಳೆಯುವ ಮೆರುಗಿನ ಪ್ರತಿಭೆ. ಅದ್ಭುತ ಭಂಗಿಗಳನ್ನು ನಿರಾಯಾಸವಾಗಿ, ಕಡೆದಿಟ್ಟ ಶಿಲ್ಪದಂತೆ ಸುಮನೋಹರವಾಗಿ ಭಂಗಿಗಳನ್ನು ರಚಿಸಿ ಕಲಾರಸಿಕರನ್ನು ಬೆರಗುಗೊಳಿಸುವ ಕಲಾವಂತೆ. ಇದ್ಯಾವುದೂ ಅತಿಶಯೋಕ್ತಿಯಲ್ಲ ಬಣ್ಣನೆಯಲ್ಲ. ಈ ಕಲಾವಿದೆಯ ವಿಶಿಷ್ಟ ಕಲಾವಂತಿಕೆಯನ್ನು ಕಣ್ಣಾರೆ ಕಂಡವರಿಗೆ ಮನವರಿಕೆಯಾಗುವ ಸತ್ಯ. ಎಲ್ಲಕ್ಕಿಂತ ಮೆಚ್ಚಾದುದು ಶಾಸ್ತ್ರೀಯತೆಗೇ ಅಂಟಿದ ಮಡಿವಂತಿಕೆಯಿಲ್ಲದ ಮುಕ್ತ ಮುನ್ನಡೆಗೆ ಖುಷಿಯಾಯಿತು. ಮಕ್ಕಳಿಗೆ ಭರತನಾಟ್ಯದ ಶಾಸ್ತ್ರೀಯ ನೃತ್ಯದ ಪರಿಚಯವೂ ಉಂಟು ಎಂಬುದನ್ನು ಮನದಟ್ಟು ಮಾಡಿ, ಸಮಕಾಲೀನ ನೃತ್ಯ ಪ್ರಯೋಗ- ಪರಿಕಲ್ಪನೆಗಳಿಗೆ ಮುಂದಾಗಿದ್ದು ಅಮೃತಾರ ವೈಶಿಷ್ಟ್ಯ- ಅಸ್ಮಿತೆ. ಇತ್ತೀಚೆಗೆ ಮಲ್ಲತ್ತಳ್ಳಿಯ ಕಲಾಗ್ರಾಮ ವೇದಿಕೆಯ ಮೇಲೆ ಮೂರು…

Read More

ಉಡುಪಿ : ಎಂ.ಜಿ.ಎಂ. ಪದವಿ ಪೂರ್ವ ಕಾಲೇಜಿನ ವತಿಯಿಂದ ಪ್ರಸಿದ್ಧ ನೃತ್ಯಗಾರ, ಅಂತರಾಷ್ಟ್ರೀಯ ಕಲಾವಿದ ಪಂಡಿತ್‌ ರಾಹುಲ್‌ ಆಚಾರ್ಯ ಇವರ ಒಡಿಸ್ಸಿ ನೃತ್ಯ ಪ್ರದರ್ಶನವು ದಿನಾಂಕ 11 ಡಿಸೆಂಬರ್‌ 2025ರಂದು ನಡೆಯಿತು. ‘ಸೊಸೈಟಿ ಫಾರ್‌ ದ ಪ್ರೊಮೋಷನ್ಸ್‌ ಆಫ್‌ ಇಂಡಿಯನ್‌ ಕ್ಲಾಸಿಕಲ್‌ ಮ್ಯೂಸಿಕ್‌ ಆಂಡ್‌ ಕಲ್ಚರ್‌ ಅಮೊಂಗ್ಸ್ಟ್‌ ಯೂಥ್‌’ [SPICMACAY) ಆಶ್ರಯದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮ ನೆರೆದಿದ್ದ ಕಲಾಭಿಮಾನಿಗಳ ಮನ ಸೆಳೆಯಿತು. ‘ಡಿವೈನ್‌ ಡ್ಯಾನ್ಸರ್’ ಎಂದೇ ಖ್ಯಾತರಾದ ರಾಹುಲ್‌ ಆಚಾರ್ಯ ಇವರ ಶಾಸ್ತ್ರೀಯವಾದ, ಶುದ್ಧವಾದ ನೈಜ ಕಲಾ ಪ್ರದರ್ಶನ ಹಾಗೂ ಅವರ ಪಾಂಡಿತ್ಯ ಮತ್ತು ಮೃದು ಮಾತು ನೆರೆದಿದ್ದ ಕಲಾರಸಿಕರಿಗೆ ರಸದೌತಣ ನೀಡಿತು. ಅವರೊಂದಿಗೆ ಸಹಕಲಾವಿದರಾಗಿ ಸಂಗೀತದಲ್ಲಿ ಸುಕಾಂತ ಕುಮಾರ್‌ ಕುಂಡ, ಮರ್ಧಲಾದಲ್ಲಿ ದಿಬಾಕರ್‌ ಪಾರಿದಾ, ವಯಲಿನ್‌ನಲ್ಲಿ ಪ್ರದೀಪ್‌ ಕುಮಾರ್‌ ಮಹಾರಣ ಮತ್ತು ಮಂಜೀರದಲ್ಲಿ ಸುಮುಖ ತಮಂಕರ್‌ ಸಹಕಾರ ನೀಡಿದರು. ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ಉಪ ಪ್ರಾಂಶುಪಾಲ ಡಾ.…

Read More

ಬೆಂಗಳೂರು : ಶ್ರೀ ವಿನಾಯಕ್ ಭಟ್ಟ ಸಂಯೋಜನೆಯಲ್ಲಿ ದಕ್ಷಿಣೋತ್ತರ ಅತಿಥಿ ಕಲಾದಿಗ್ಗಜರ ಕೂಡುವಿಕೆಯಲ್ಲಿ ‘ಯಕ್ಷ ಭಾವ ಸಂಗಮ’ ಯಕ್ಷಗಾನ ಕಾರ್ಯಕ್ರಮವನ್ನು ದಿನಾಂಕ 13 ಡಿಸೆಂಬರ್ 2025ರಂದು ರಾತ್ರಿ 10-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ದೇವಿದಾಸ್ ವಿರಚಿತ ‘ಭೀಷ್ಮ ಪರ್ವ’ ಪ್ರಸಂಗದ ಯಕ್ಷಗಾನದಲ್ಲಿ ಕೊಂಡದಕುಳಿ, ಥಂಡಿಮನೆ, ತೋಟಿಮನೆ, ಹಿಲ್ಲೂರು ಮಂಜು, ಪ್ರಶಾಂತ್ ಹೆಗಡೆ, ನಾಗೇಶ್ ಕುಳಿಮನೆ ಮತ್ತು ಆತ್ರೇಯ ಗಾಂವ್ಕರ್ ಭಾಗವಹಿಸಲಿದ್ದಾರೆ.

Read More

ಬೆಂಗಳೂರು : ನಾಟಕ ಬೆಂಗ್ಳೂರ್ -26ರ ರಂಗಸಂಭ್ರಮದ ಪ್ರಯುಕ್ತ ಅಭಿನಯ ತರಂಗ ರಂಗಶಾಲೆ ಇವರು ಮಹೇಶ್ ದತ್ತಾನಿಯವರ ‘ತಾರ’ ಎರಡು ಅಂಕಗಳ ನಾಟಕ ಪ್ರದರ್ಶನವನ್ನು ದಿನಾಂಕ 15 ಡಿಸೆಂಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಘವೇಂದ್ರ ಜೆ. ಇವರು ಈ ನಾಟಕದ ಅನುವಾದ ಮತ್ತು ನಿರ್ದೇಶನ ಮಾಡಿರುತ್ತಾರೆ.

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಇದರ ವತಿಯಿಂದ ಆಯೋಜಿಸಿರುವ ‘ರಾಗ ಸುಧಾರಸ -2025’ ಸಂಗೀತ ಮತ್ತು ನೃತ್ಯ ಉತ್ಸವ ಕಾರ್ಯಕ್ರಮವು ದಿನಾಂಕ 13ರಿಂದ 20 ಡಿಸೆಂಬರ್ 2025ರವರೆಗೆ ಕಾಸರಗೋಡಿನ ಶ್ರೀ ಎಡನೀರು ಮಠ ಮತ್ತು ಸುರತ್ಕಲ್ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಡೆಯಲಿದೆ. ದಿನಾಂಕ 13 ಡಿಸೆಂಬರ್ 2025ರಂದು ಸಂಜೆ ಗಂಟೆ 4-15ಕ್ಕೆ ಮಂಗಳೂರಿನ ವಿದುಷಿ ರಶ್ಮಿ ಸರಳಾಯ ಇವರ ಮಗಳು ಬೇಬಿ ಧ್ರುವಿ ಚಿದಾನಂದ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ‘ಲಲಿತ ಕಲಾ ಪೋಷಕ ಮಣಿ ಪ್ರಶಸ್ತಿ’ಯನ್ನು ವಿದ್ವಾನ್ ವಿಠಲರಾಮ ಮೂರ್ತಿ ಇವರಿಗೆ ಪ್ರದಾನ ಮಾಡಲಾಗುವುದು. ವಿದ್ವಾನ್ ವಿಠಲರಾಮ ಮೂರ್ತಿ ಅಂತಾರಾಷ್ಟ್ರೀಯ ಪಿಟೀಲುವಾದಕ, ಉನ್ನತ ಶ್ರೇಣಿಯ ಆಕಾಶವಾಣಿ, ದೂರದರ್ಶನ ಕಲಾವಿದರಾದ ನಿಡ್ಲೆಯ ಕರುಂಬಿತ್ಲು ವಿಠಲ ರಾಮಮೂರ್ತಿಯವರು ಲಾಲ್ಗುಡಿ ಬಾನಿಯನ್ನು ಮುಂದುವರಿಸುತ್ತಿರುವ ಹೆಸರಾಂತ ಕಲಾವಿದರು. ನೂರಾರು ಶಿಷ್ಯರನ್ನು ತರಬೇತುಗೊಳಿಸಿದ ಅತ್ಯುತ್ತಮ ಸಹವಾದಕರೂ ಹಾಗೂ ಸೋಲೋ ಕಲಾವಿದರು. ಪ್ರಪಂಚದಾದ್ಯಂತ ತಮ್ಮ ವಾದನದ ಇಂಪನ್ನು ಪಸರಿಸುವ ಇವರು ತನ್ನ ಊರಾದ…

Read More

ಬೆಂಗಳೂರು : ಸಂಸ ಥಿಯೇಟರ್ ಬೆಂಗಳೂರು ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದೊಂದಿಗೆ ಕೆ.ಎನ್. ವಿಜಯಲಕ್ಷ್ಮಿ ಅನುವಾದ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 14 ಡಿಸೆಂಬರ್ 2025ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಸಂಜೆ 4-00 ಗಂಟೆಗೆ ಅನುವಾದ ಕವಿಗೋಷ್ಠಿಯನ್ನು ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಇವರು ಉದ್ಘಾಟನೆ ಮಾಡಲಿದ್ದು, ಪ್ರಾಧ್ಯಾಪಕರು ಹಾಗೂ ಅನುವಾದಕರಾದ ಪ್ರೊ. ಷಾಕಿರ ಖಾನುಂ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. 7-00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಂ.ಆರ್. ಕಮಲ ಇವರಿಗೆ 2025ನೇ ಸಾಲಿನ ಕೆ.ಎನ್. ವಿಜಯಲಕ್ಷ್ಮಿ ಅನುವಾದ ಪ್ರಶಸ್ತಿ ಪ್ರದಾನ ನಡೆಯಲಿದೆ.

Read More

ಪುತ್ತೂರು : ಬಹುವಚನಂ ಇದರ ವತಿಯಿಂದ ಶಾಸ್ತ್ರೀಯ ಸಂಗೀತ ಕಛೇರಿ ಕಾರ್ಯಕ್ರಮವನ್ನು ದಿನಾಂಕ 14 ಡಿಸೆಂಬರ್ 2025ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ದರ್ಬೆ ವಿದ್ಯಾನಗರದ ಪದ್ಮಿನೀ ಸಭಾಭವನದಲ್ಲಿ ಆಯೋಜಿಸಿಲಾಗಿದೆ. ಉಜಿರೆಯ ಸರ್ವೆಶ್ ದೇವಸ್ಥಳಿ ಇವರ ಹಾಡುಗಾರಿಕೆಗೆ ಮಂಜುನಾಥ ಪದ್ಯಾಣ ಇವರು ವಯಲಿನ್ ಮತ್ತು ವಿದ್ವಾನ್ ವಾದಿರಾಜ ಭಟ್ ಇವರು ಮೃದಂಗದಲ್ಲಿ ಸಹಕರಿಸಲಿದ್ದಾರೆ.

Read More

ಬೆಂಗಳೂರು : ಸಾಮಾಜಿಕ ಕಾರ್ಯಕರ್ತ ಅಜಿತ್‌ ಕುಮಾರ್ ಸ್ಮಾರಕ – 2025ನೇ ಸಾಲಿನ ಅಜಿತಶ್ರೀ, ನಾಟ್ಯಶ್ರೀ ಮತ್ತು ಯೋಗಶ್ರೀ ಪ್ರಶಸ್ತಿ ಪ್ರಕಟಿಸಲಾಗಿದ್ದು, ಏಳು ಸಾಧಕರು ಭಾಜನರಾಗಿದ್ದಾರೆ. ‘ಅಜಿತಶ್ರೀ ಪ್ರಶಸ್ತಿ’ಗೆ ಹಿರಿಯ ರಂಗಕರ್ಮಿ ಡಾ. ಬಿ. ಜಯಶ್ರೀ, ಭರತನಾಟ್ಯ ಕಲಾವಿದೆ ಪದ್ಮನಿ ರವಿ ಹಾಗೂ ಹಿಂದೂಸ್ತಾನಿ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿ ಪಾತ್ರರಾಗಿದ್ದಾರೆ. ತಲಾ ರೂ.50 ಸಾವಿರ ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರಲಿದೆ. ‘ನಾಟ್ಯಶ್ರೀ ಪ್ರಶಸ್ತಿ’ಗೆ ಭರತನಾಟ್ಯ ಕಲಾವಿದೆ ಪೂರ್ಣಿಮಾ ಕೆ. ಗುರುರಾಜ್, ಕೊಳಲುವಾದಕ ಎಚ್.ಎಸ್. ವೇಣುಗೋಪಾಲ್ ಹಾಗೂ ರಂಗಭೂಮಿ ಸಂಘಟಕ ಎಂ.ಎಸ್. ಶ್ಯಾಮಸುಂದರ್ (ಅಂಕಲ್ ಶ್ಯಾಮ್) ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ರೂ.20 ಸಾವಿರ ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರಲಿದೆ. ‘ಯೋಗಶ್ರೀ ಪ್ರಶಸ್ತಿ’ಗೆ ಶಿವಮೊಗ್ಗದ ಯೋಗ ಶಿಕ್ಷಕ ಭಾ.ಸು. ಅರವಿಂದ ಭಾಜನರಾಗಿದ್ದಾರೆ. ಪ್ರಶಸ್ತಿಯು ರೂ.10 ಸಾವಿರ ನಗದು, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ದಿನಾಂಕ 14 ಡಿಸೆಂಬರ್ 2025ರಂದು ಬಸವನಗುಡಿಯ…

Read More

ಸುಳ್ಯ : ಭಾರತ್ ಸ್ಕೌಡ್ಸ್ ಮತ್ತು ಗೈಡ್ಸ್ ಕರ್ನಾಟಕ, ಕೊಡಗು ಜಿಲ್ಲಾ ಸಂಸ್ಥೆಯು ಸರಕಾರಿ ಪದವಿಪೂರ್ವ ಕಾಲೇಜು ಮಡಿಕೇರಿ ಇಲ್ಲಿ ನಡೆಸಿದ ಮೈಸೂರು ವಿಭಾಗೀಯ ಮಟ್ಟದ, ರೋವರ್ ರೇಂಜರ್ಸ್ ವಿಭಾಗದ ಗೀತಗಾಯನ ಸಮೂಹ ಸ್ಪರ್ಧೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜನ್ನು ಪ್ರತಿನಿಧಿಸಿದ ಸುಳ್ಯ ರಂಗಮನೆಯ ಮನುಜ ನೇಹಿಗನ ತಂಡವು ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಅದಕ್ಕೂ ಮೊದಲು ಮೂಡುಬಿದಿರೆ ಕನ್ನಡ ಭವನದಲ್ಲಿ ನಡೆದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು, ನಂತರ ಮಂಗಳೂರು ಪಿಲಿಕುಳದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲೂ ಪ್ರಥಮ ಬಹುಮಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದರು. ದಿನಾಂಕ 13 ಜನವರಿ 2025ರಂದು ರಾಜ್ಯಮಟ್ಟದ ಸ್ಪರ್ಧೆಯು ಬಳ್ಳಾರಿಯಲ್ಲಿ ನಡೆಯಲಿದೆ. ಇದಲ್ಲದೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕರ್ನಾಟಕ ಸರಕಾರ ಇವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆಸಿದ ಮೈಸೂರು ವಿಭಾಗ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಾನಪದ ಸ್ಪರ್ಧೆಯ ವೈಯ್ಯಕ್ತಿಕ ವಿಭಾಗದಲ್ಲಿ ದ್ವಿತೀಯ…

Read More

ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಶಿವಮೊಗ್ಗ ಮತ್ತು ಕರ್ಣಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಹಕಾರದೊಂದಿಗೆ ರಂಗಾಯಣ ಶಿವಮೊಗ್ಗದ ರೆಪರ್ಟರಿ ಕಲಾವಿದರು ಅಭಿನಯಿಸುವ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನವನ್ನು ದಿನಾಂಕ 16 ಡಿಸೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಡಿ.ಎಸ್. ಚೌಗಲೆ ಇವರು ರಚಿಸಿರುವ ಈ ನಾಟಕವನ್ನು ಚಿದಂಬರ ರಾವ್ ಜಂಬೆ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.

Read More