Author: roovari

ತೆಕ್ಕಟ್ಟೆ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ವತಿಯಿಂದ ಅಭಿನಂದನಾ ಸಮಾರಂಭ ಮತ್ತು ತೆಕ್ಕಟ್ಟೆ ಯಶಸ್ವಿ ಕಲಾಕೇಂದ್ರದ ವಾರ್ಷಿಕೋತ್ಸವದ ಪ್ರಯುಕ್ತ ‘ರಂಗಾರ್ಪಣ’ ಕಾರ್ಯಕ್ರಮವು ದಿನಾಂಕ 07 ಡಿಸೆಂಬರ್ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯ ರಾಜ್ಯೋತ್ಸವ ಹಾಗೂ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಪ್ರಾಚಾರ್ಯ ಕೆ.ಪಿ. ಹೆಗಡೆ, ಕೋಟ ಸುರೇಶ್ ಬಂಗೇರ, ಐರ್ಬೈಲ್ ಆನಂದ ಶೆಟ್ಟಿ, ಲಕ್ಷ್ಮೀ ಮಚ್ಚಿನ, ಸತೀಶ್ ಪೂಜಾರಿ, ಸುದೀಪ್ ಮಲ್ಯಾಡಿ ಹಾಗೂ ಶಿವರಾಮ ಕಾರಂತ ಬಾಲ ಪುರಸ್ಕೃತ ಹರ್ಷಿತಾ ಅಮೀನ್ ಇವರನ್ನು ಅಭಿನಂದಿಸಿಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಲ್ಲೂರು ಶಿವರಾಮ ಶೆಟ್ಟಿ “ವಿಶಿಷ್ಟ ಪರಿಕಲ್ಪನೆಯಿಂದಲೇ ಕಾರ್ಯಕ್ರಮವನ್ನು ಗೆಲ್ಲುವ ಸಂಸ್ಥೆ ಯಶಸ್ವೀ ಕಲಾವೃಂದ. ರಾಜ್ಯೋತ್ಸವ ಪುರಸ್ಕಾರ ಯಶಸ್ವೀ ಕಲಾವೃಂದದ ಗುರುವಿಗೂ ಬಂದಿರುವುದು ನನಗೂ ಸಂತೋಷ ತಂದಿದೆ. ಸಾಧನಾ ಕ್ಷೇತ್ರದಲ್ಲಿ ಬಹಳ ದೂರ ಸಾಗಿ ಬಂದ ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರ ದೊರೆತಾಗ ಪ್ರತೀ ವರ್ಷವು ಸಂಭ್ರಮಿಸುವುದು ಯಶಸ್ವಿ ಕಲಾವೃಂದ. ಅನೇಕರನ್ನು ಈ ವೇದಿಕೆಯಲ್ಲಿ ಅಭಿನಂದಿಸಿ ಸಂತೋಷ ಕಂಡಿದ್ದನ್ನು…

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 06 ಡಿಸೆಂಬರ್ 2025ರಂದು ‘ಕಾವ್ಯಾಂ ವ್ಹಾಳೊ-9ʼ ಶೀರ್ಷಿಕೆಯಡಿ ಕವಿಗೋಷ್ಟಿ ನಡೆಯಿತು. ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು ಪ್ರಾಸ್ತಾವಿಕವಾಗಿ ಮಾತಾನಾಡಿ “ಅಕಾಡೆಮಿಯು ವರ್ಷದ ಆರಂಭದಿಂದಲೇ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕವಿಗೋಷ್ಟಿಯು ಇದರಲ್ಲಿ ಒಂದು. ಕವಿಗಳಿಗೆ ವೇದಿಕೆಯನ್ನು ನೀಡುತ್ತಾ, ಹೊಸ ಕವಿಗಳನ್ನು ಪ್ರೋತ್ಸಾಹಿಸುತ್ತಿದೆ. ಖ್ಯಾತ ಕವಿಯಾದ ದಿ. ಚಾ. ಪ್ರಾ. ಡಿ’ಕೋಸ್ತರವರ 33ನೇ ವರ್ಷದ ಸ್ಮರಣೆಗಾಗಿ ಇಂದಿನ ಕವಿಗೋಷ್ಟಿಯನ್ನು ಅರ್ಪಿಸುತ್ತಿದ್ದೇವೆ. ಈ ಕವಿಗೋಷ್ಟಿಯು ಕವಿತೆಗಳನ್ನು ರಚಿಸಲು ಯುವಜನರಿಗೆ, ಹಿರಿಯರಿಗೆ ಪ್ರೇರಣೆಯಾಗಲಿ” ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು. ಮುಖ್ಯ ಅತಿಥಿಯಾದ ಇನ್ಫೆಂಟ್ ಜೀಸಸ್ ಶ್ರೈನ್ನ ನಿರ್ದೇಶಕರಾದ ಫಾ. ಸ್ಟೀವನ್ ಆಲ್ವಿನ್ ಪಿರೇರಾರವರು “ವಿವಿಧ ಪ್ರದೇಶದಲ್ಲಿ ವಿವಿಧ ಭಾಷೆಗಳನ್ನು ಮಾತಾನಾಡುವ ಜನ ಹಾಗೂ ಸಾಹಿತಿಗಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ಭಾಷೆಯ ಬರಹಗಳು ಹರಿದಾಡುತ್ತಿವೆ. ಆದರೆ ಜಾಲತಾಣಗಳಲ್ಲಿ ಕೊಂಕಣಿಯನ್ನು ಕನ್ನಡ ಲಿಪಿಯಲ್ಲಿ ಬರೆಯುವವರ ಸಂಖ್ಯೆ ಬಹಳ ವಿರಳವಾಗಿದ್ದರೂ…

Read More

ಮಂಗಳೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ತುಳು ಕೂಟ (ರಿ.) ಮಂಗಳೂರು ಹಾಗೂ ಸರಯೂ ಬಾಲ ಯಕ್ಷ ವೃಂದ (ರಿ.) ಕೋಡಿಕಲ್ ಇದರ ಸಹಯೋಗದೊಂದಿಗೆ ಹಮ್ಮಿಕೊಂಡ ಟಿ. ದಾಮೋದರ ನಿಸರ್ಗ ಸಂಸ್ಮರಣೆ ಮತ್ತು ತುಳು ತಾಳಮದ್ದಳೆ ಸಪ್ತಾಹದ ಅಂಗವಾಗಿ ‘ಪಗರಿದ ಸಂಕ’ ಎಂಬ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 07 ಡಿಸೆಂಬರ್ 2025ರ ರವಿವಾರದಂದು ಕಂಕನಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಜರುಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ಮುಳಿಯಾಲ ಹಾಗೂ ಚೆಂಡೆಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ ಮತ್ತು ಮಧುಸೂದನ ಅಲೆವೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ಹನೂಮಂತ), ಗುಡ್ಡಪ್ಪ ಬಲ್ಯ (ಅರ್ಜುನ), ಭಾಸ್ಕರ ಶೆಟ್ಟಿ ಸಾಲ್ಮರ (ವೃದ್ಧ ವಿಪ್ರ ಮತ್ತು ಶ್ರೀ ರಾಮ) ಸಹಕರಿಸಿದರು. ಕಲಾವಿದರನ್ನು ದೈಜಿ ವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಶಾಲು ಹೊದಿಸಿ ಗೌರವಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ತುಳು ಕೂಟ (ರಿ.) ಮಂಗಳೂರು ಇದರ ಸಂಚಾಲಕ ರವಿ ಅಲೆವೂರಾಯ…

Read More

‘ಮುಂಬಾಪುರಿ’ ಕಲಾ ಭಾಗ್ವತ್ ಅವರ ಅಂಕಣ ಬರಹಗಳ ಸಂಕಲನ. ಇದು ಮುಂಬೈ ವಿವಿ ಕನ್ನಡ ವಿಭಾಗದ ನೂತನ ಪ್ರಕಟಣೆಯಾಗಿ ಕೃತಿ ರೂಪದಲ್ಲಿ ಸಹೃದಯರ ಕೈ ಸೇರಿದೆ. ಮುಂಬೈ ಒಂದು ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದ ಮಹಾನಗರ. ಇದು ಮಾಯಾನಗರಿ ಎಂದೇ ಲೋಕ ವಿಖ್ಯಾತವಾಗಿದೆ. ಮುಂಬೈ ಒಂದು ಚಿತ್ರ ವಿಚಿತ್ರ ದೈತ್ಯ ನಗರವೂ ಹೌದು. ಈ ನಗರದ ವಿಭಿನ್ನ ಮುಖಗಳನ್ನು ಅತ್ಯಾಕರ್ಷಕವಾಗಿ ಆಪ್ತವಾಗಿ ವಾಚನೀಯವಾಗಿ ಭಾವ ಪ್ರಬಂಧದಂತೆ ಕಟ್ಟಿ ಕೊಟ್ಟಿರುವುದು ಮುಂಬಾಪುರಿ ಕೃತಿಯ ಅತಿಶಯತೆ. ಪ್ರತಿಯೊಂದು ನಗರಕ್ಕೂ ತನ್ನದೇ ಆದ ಸಾಂಸ್ಕೃತಿಕ ಚಹರೆ, ನೆಲೆಬೆಲೆ, ಇತಿಹಾಸ ಇದ್ದೇ ಇರುತ್ತದೆ. ಭಾರತದ ಮೂಲೆ ಮೂಲೆಗಳಿಂದ ವಲಸೆ ಬಂದ ಜನಸಮುದಾಯ ಮುಂಬೈ ನಗರವನ್ನು ನರರ ಶ್ರೇಷ್ಠ ನಗರವಾಗಿ ರೂಪಿಸಿ ಜಗದಗಲ ಕಂಗೊಳಿಸುವಂತೆ ಬೆಳೆಸಿದ್ದಾರೆ. ಇದೊಂದು ಸಮಷ್ಟಿ ಮನಸ್ಸುಗಳ ಮಹಾ ಸಂಗಮವೂ ಹೌದು. ಅರ್ಣವವೃತ ಧಾತ್ರಿಯಿಂದ ಕೂಡಿರುವ ಕಡಲನ್ನೇ ಉಡುಗೆಯಾಗಿ ಮಾಡಿಕೊಂಡಿರುವ ಈ ಜನಾರಣ್ಯದ ಬಗೆಗೆ ಏನೇನೋ ಅದೆಷ್ಟೋ ವದಂತಿ, ಕಟ್ಟು ಕಥೆ, ಅಪಪ್ರಥೆಗಳು ಚಾಲ್ತಿಯಲ್ಲಿವೆ. “ಬಂಗಾರ ನೀರ…

Read More

ಮಂಗಳೂರು : ಮಾಂಡ್‌ ಸೊಭಾಣ್‌ ತನ್ನ ಸಾಹಿತ್ಯದ ಅಂಗ ಮಿಟಾಕಣ್‌ ಅಕಾಡೆಮಿ ಮೂಲಕ ಮಕ್ಕಳಿಗಾಗಿ ಆಯೋಜಿಸಿದ ಪರಾಗ್‌ ಸಾಹಿತ್ಯ ಸಮ್ಮೇಳನವು ದಿನಾಂಕ 07 ಡಿಸೆಂಬರ್‌ 2025ರಂದು ಶಕ್ತಿನಗರದ ಕಲಾಂಗಣದಲ್ಲಿ ಜರಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿ ವಂದನೀಯ ಪ್ರಶಾಂತ್‌ ಮಾಡ್ತಾ “ವಿಶಿಷ್ಟ ಕಲ್ಪನಾ ವಿಲಾಸಕ್ಕೆ, ಹೊಸತನಕ್ಕೆ ಹಾತೊರೆಯಿರಿ. ಹೊಸ ಚಿಂತನೆಗಳಿಗೆ ಮನಸ್ಸು ತೆರೆದಿಡಿ. ಸಾಹಿತ್ಯ ಓದಲು ಮೊಬೈಲ್‌ ಬಿಡಬೇಕಿಲ್ಲ. ಆದರೆ ಮೊಬೈಲ್‌ ಬಳಕೆಯ ಮಿತಿ ಗೊತ್ತಿರಲಿʼʼ ಎಂದು ಹೇಳಿದರು. ಮಕ್ಕಳ ಪ್ರತಿನಿಧಿ ಸಂಜನಾ ರಿವಾ ಮತಾಯಸ್‌ ಶಾಲಾ ಓದು ಮತ್ತು ಸಾಹಿತ್ಯದ ಓದಿನ ವ್ಯತ್ಯಾಸಗಳನ್ನು ತಿಳಿಸಿ, ಉತ್ತಮ ಅಂಕಗಳು ಮಾತ್ರವಲ್ಲ ಉತ್ತಮ ಸಾಹಿತ್ಯ ಕೂಡಾ ಜೀವನದಲ್ಲಿ ಅಗತ್ಯ. ಸಾಹಿತ್ಯದ ಒಲವು ಮನೆಯಲ್ಲೇ ಆರಂಭವಾಗಬೇಕು ಎಂದು ಆಶಯ ಭಾಷಣ ಮಾಡಿದರು. ವಿತೊರಿ ಕಾರ್ಕಳ ಸಂಪಾದಿಸಿದ, 26 ಲೇಖಕರು ಅನುವಾದಿಸಿದ 36 ಕತೆಗಳ ಅನುವಾದ ಪುಸ್ತಕ ʻಮ್ಹೊಂವಾ-ಪೊಳಿʼ ಪುಸ್ತಕವನ್ನು ಜೇನುಗೂಡಿನಿಂದ ಹಾಗೂ ಎರಿಕ್‌ ಒಝೇರಿಯೊ ಅಮೃತೋತ್ಸವ ಸಂಶೋಧನಾ…

Read More

ಶಿರ್ವ : ಪ್ರದರ್ಶನಾ ಸಂಘಟನಾ ಸಮಿತಿ ಶಿರ್ವ, ಯಕ್ಷಗಾನ ಕಲಾರಂಗ ಉಡುಪಿ ಮತ್ತು ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಶಿರ್ವಾದ ಮಹಿಳಾ ಸೌಧದ ಆವರಣದಲ್ಲಿ ದಿನಾಂಕ 07 ಡಿಸೆಂಬರ್ 2025ರಂದು ಕಿಶೋರ ಯಕ್ಷಗಾನ ಸಂಭ್ರಮದ ಪ್ರಯುಕ್ತ ಆರು ಪ್ರೌಢಶಾಲೆಗಳ ಯಕ್ಷಗಾನ ಪ್ರದರ್ಶನದ ಸಮಾರೋಪ ಸಮಾರಂಭ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಪ್ರದರ್ಶನದಲ್ಲಿ ಪಾಲ್ಗೊಂಡ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಗ್ರೂಪ್ ಫೋಟೋವನ್ನು ವಿತರಿಸಲಾಯಿತು. ಯಕ್ಷಗಾನದ ಬಗ್ಗೆ ವಿದ್ಯಾರ್ಥಿಗಳಾದ ಹನಿ ಶೆಟ್ಟಿ, ನಮೀಕ್ಷ, ಹರ್ಷಿಣಿ ಭಟ್, ಕೆರಿಯಮ್ಮ ಹಾಗೂ ಉತ್ತರ ಪ್ರದೇಶದ ವಿದ್ಯಾರ್ಥಿನಿ ನಂದಿನಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಭೆಯಲ್ಲಿ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ವಿ.ಜಿ. ಶೆಟ್ಟಿ, ವೆಂಕಟೇಶ್ ಕಾಮತ್ ಶಿರ್ವ, ವಿಠಲ ಬಿ. ಕಾಂಚನ್, ವಿಷ್ಣುಮೂರ್ತಿ ಸರಳಾಯ, ನಿರಂಜನ ಭಟ್ ಉಪಸ್ಥಿತರಿದ್ದರು. ಪ್ರದರ್ಶನ ಸಂಘಟನಾ ಸಮಿತಿಯ ಅನಂತ ಮೂಡಿತ್ತಾಯ ಸ್ವಾಗತಿಸಿದರು. ಯಕ್ಷಶಿಕ್ಷಣದ ಟ್ರಸ್ಟಿ ನಟರಾಜ ಉಪಾಧ್ಯಾಯ ನಿರೂಪಿಸಿದ ಕಾರ್ಯಕ್ರಮದ ಕೊನೆಗೆ ಯಕ್ಷಗಾನ ಕಲಾರಂಗದ…

Read More

ಗುರುವಾಯನಕೆರೆ : ಗುರುವಾಯನಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 27 ನವೆಂಬರ್ 2025ರಿಂದ ನಾಲ್ಕು ದಿನಗಳ ಕಾಲ ಎಕ್ಸೆಲ್ ಹಬ್ಬ – ಅಕ್ಷರೋತ್ಸವ-2025 ನಡೆಯಿತು. ಈ ಸಂಭ್ರಮದ ಆರಂಭದ ದಿನ ನಾಡು – ನುಡಿಯ ಅಕ್ಷರೋತ್ಸವ ರಾಷ್ಟ್ರೀಯ ಸಮ್ಮೇಳನದ ಕವಿಗೋಷ್ಠಿಯು ಸುಂದರವಾಗಿ ಮೂಡಿ ಬಂತು. ಸುಗ್ರಾಸ ಭೋಜನದ ತರುವಾಯ, ತಂಪಾದ ವಾತಾವರಣದಲ್ಲಿ 35 ಮಂದಿ ಕವಿಗಳ ಗೋಷ್ಠಿ ನಡೆದರೂ ಸೇರಿದ್ದ ಪ್ರೇಕ್ಷಕರನ್ನು ನಿದ್ದೆ ಕಾಡಲೇ ಇಲ್ಲ. ಕಾಲೇಜಿನ ಕನ್ನಡ ಉಪನ್ಯಾಸಕರು ಅಷ್ಟು ವೈವಿಧ್ಯಮಯವಾಗಿ ಕವಿಗೋಷ್ಠಿಯನ್ನು ಸಂಯೋಜಿಸಿದ್ದರು. ಕವಿಗೋಷ್ಠಿಯ ಆರಂಭದಲ್ಲಿ ಗೋಷ್ಠಿಗೆ ಆಯ್ಕೆಯಾಗಿದ್ದ ಕವಿಯು ತಮ್ಮ ಕವನವನ್ನು ವಾಚಿಸುತ್ತಾರೆ. ಅನಂತರ ಕೆಲವು ರಾಗ ಸಂಯೋಜನೆಗೆ ಹೊಂದಿಕೊಳ್ಳುವ ಕವನಗಳನ್ನು ಸಂಗೀತದೊಂದಿಗೆ ಹಾಡಲಾಯಿತು. ಜತೆಗೆ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನವೂ ನಡೆಯಿತು. ಕೆಲವೊಂದು ಕವನಗಳ ಆಶಯವನ್ನು ಕಾಲೇಜಿನ ಉಪನ್ಯಾಸಕ ಸಂಜೀವ ಕೊಡಗು ಇವರು ಚಿತ್ರ ರಚಿಸುವ ಮೂಲಕ ತಿಳಿಸಿದರು. ಹೀಗೆ ಕವನ ವಾಚನ-ಗಾಯನ-ನೃತ್ಯ-ಕುಂಚ ಸಹಿತವಾದ ವೈವಿಧ್ಯತೆಯಿಂದ ಮೂಡಿ ಬಂದ ಕವಿಗೋಷ್ಠಿಯು ಸೇರಿದ್ದ ಸಾಹಿತ್ಯಾಸಕ್ತರ ಮನ ಗೆದ್ದಿತು.…

Read More

ಬೆಂಗಳೂರು : ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯ (ಡ್ರಿಮ್ಡ್ ಟು ಬಿ ಯೂನಿವರ್ಸಿಟಿ) ಕನ್ನಡ ಸಂಘ ಏರ್ಪಡಿಸಿದ ಡಾ. ದ.ರಾ. ಬೇಂದ್ರೆ ಸ್ಮೃತಿ ಅಂತರ ಕಾಲೇಜು ಕವನ ಸ್ಪರ್ಧೆ – 42 ಮತ್ತು ಡಾ. ಅ.ನ.ಕೃ ಸ್ಮಾರಕ ಅಂತರ ಕಾಲೇಜು ಕಥಾ ಸ್ಪರ್ಧೆ – 15 ಎರಡೂ ವಿಭಾಗದಲ್ಲಿ ಯುವ ಕವಯತ್ರಿ ಮಧು ಕಾರಗಿ ಇವರು ಪ್ರಥಮ ಬಹುಮಾನ ಪಡೆದಿದ್ದಾರೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಕೆರವಡಿ ಗ್ರಾಮದ ನಿವಾಸಿ ವೀರಪ್ಪ ಮತ್ತು ಮಂಜುಳಾ ದಂಪತಿಯ ಪುತ್ರಿಯಾಗಿರುವ ಮಧು ಕಾರಗಿಯವರು ಪ್ರಸ್ತುತ ದಾವಣಗೆರೆ ವಿಶ್ವವಿದ್ಯಾನಿಲಯದ ಡಾ. ಎಂ. ಚಿದಾನಂದಮೂರ್ತಿ ಕನ್ನಡ ಅಧ್ಯಯನ ವಿಭಾಗ ಮತ್ತು ಸಂಶೋಧನಾ ಕೇಂದ್ರದಲ್ಲಿ ಡಾ. ಆರ್. ರೂಪೇಶ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಮಾಡುತ್ತಿದ್ದಾರೆ. ‘ಕನಸುಗಳ ಚೀಲ’ ಮತ್ತು ‘ತೆರೆಯದ ಬಾಗಿಲು’ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಜ್ಯೋತಿ ಪುರಸ್ಕಾರ, ಪುನೀತ್ ರಾಜಕುಮಾರ್ ಸಾಹಿತ್ಯ ದತ್ತಿ ಪುರಸ್ಕಾರ, ಡಿ.ಎಸ್. ಕರ್ಕಿ ಕಾವ್ಯ ಪುರಸ್ಕಾರ ಮತ್ತು ಚೆನ್ನವೀರ ಕಣವಿ…

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಇದರ ವತಿಯಿಂದ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ಆಯೋಜಿಸಿರುವ ‘ರಾಗ ಸುಧಾರಸ -2025’ ಸಂಗೀತ ಮತ್ತು ನೃತ್ಯ ಉತ್ಸವ ಕಾರ್ಯಕ್ರಮವು ದಿನಾಂಕ 07 ಡಿಸೆಂಬರ್ 2025ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶರವು ಶ್ರೀ ಮಹಾ ಗಣಪತಿ ದೇವಸ್ಥಾನದ ಆಡಳಿತ ಟ್ರಸ್ಟಿ ಶರವು ರಾಘವೇಂದ್ರ ಶಾಸ್ತ್ರಿಯವರು “ಕರಾವಳಿ ಕರ್ನಾಟಕದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಹಾಗೂ ಯುವ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಲಭ್ಯವಾಗುತ್ತಿದೆ. ಸಂಗೀತ ಕಾರ್ಯಾಗಾರಗಳ ಸಂಘಟನೆ ಮತ್ತು ಸಾಮಾಜಿಕ ಮಾಧ್ಯಮದ ಸಮರ್ಥ ಹಾಗೂ ಪರಿಣಾಮಕಾರಿ ಬಳಕೆಯಿಂದ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.)ಯು ಕರ್ನಾಟಕ ಶಾಸ್ತ್ರೀಯ ಕಲಾವಿದರನ್ನು ವಿಶಿಷ್ಟ ರೀತಿಯಲ್ಲಿ ಬೆಂಬಲಿಸುತ್ತಾ ಬಂದಿದೆ” ಎಂದು ನುಡಿದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಕರ್ಮಯೋಗಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಶಾಸ್ತ್ರೀಯ ಸಂಗೀತ ಕಲಾವಿದರನ್ನು ಹಾಗೂ ಕಲಾ ಸಂಸ್ಥೆ ಗಳನ್ನು ನಿರಂತರವಾಗಿ ಸಮಾಜ ಪ್ರೋತ್ಸಾಹಿಸಬೇಕು” ಎಂದರು. ಮಂಗಳೂರಿನ ಸನಾತನ ನಾಟ್ಯಾಲಯ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ…

Read More

ಸೂಡ : ಶ್ರೀ ಮಯೂರವಾಹನ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ದಶಮ ಸಂಭ್ರಮ, ಸಪ್ತಾಹ ಮತ್ತು 10ನೇ ವರ್ಷದ ತಿರುಗಾಟದ ಶುಭಾರಂಭ ಸಂದರ್ಭ ಸೂಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ದಿನಾಂಕ 06 ಡಿಸೆಂಬರ್ 2025ರಂದು ಪ್ರಾರಂಭಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ಮತ್ತು ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿಯವರು ಮಾತನಾಡಿ “ಯಕ್ಷಗಾನ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಂರಕ್ಷಣೆ, ಸಂವರ್ಧನೆ ಮತ್ತು ವಿಸ್ತರಣೆ ಮಾಡಿ ಮುಂದಿನ ಜನಾಂಗಕ್ಕೆ ನೀಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಯಕ್ಷಗಾನದ ಗುಣಮಟ್ಟ ಮತ್ತು ಸೌಂದರ್ಯವನ್ನು ವರ್ಧಿಸುವ ಕೆಲಸವನ್ನು ತಿರುಗಾಟಕ್ಕೆ ಹೊರಟ ಸೂಡ ಮೇಳ ನಡೆಸುತ್ತಿದ್ದು, ಕಲಾವಿದರಿಗೆ ಉತ್ತಮ ವೇದಿಕೆ ಒದಗಿಸಿ, ಜನರಿಗೆ ಕಲಾಸಂಸ್ಕಾರ ನೀಡುವ ಪ್ರಯತ್ನ ಮಾಡಿದೆ” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸೂಡ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ ಮೇಳದ ಸಂಚಾಲಕ ಮತ್ತು…

Read More