Author: roovari

ಬದಿಯಡ್ಕ : ಕಾಸರಗೋಡಿನ ಬದಿಯಡ್ಕ ಬಳಿಯ ವೀಣಾವಾದಿನಿ ಸಂಗೀತ ವೈದಿಕ ತಾಂತ್ರಿಕ ವಿದ್ಯಾಪೀಠದ ನಾಲ್ಕು ದಿವಸಗಳ ವಾರ್ಷಿಕೋತ್ಸವದ ಶುಭ ಸಮಾರಂಭವು ದಿನಾಂಕ 25 ಡಿಸೆಂಬರ್ 2025ರಂದು ಜರಗಿತು. ಬೆಳಗ್ಗೆ ಬ್ರಹ್ಮಶ್ರೀ ಅನಂತ ಭಟ್ ಚೂರಿಕ್ಕೋಡು ಇವರಿಂದ ಶ್ರೀ ಮಹಾಗಣಪತಿ ಹೋಮ, ಬ್ರಹ್ಮಶ್ರೀ ರಾಧೇಶ್ಯಾಮ್ ಪರಂಬರ ಇವರಿಂದ ಲಕ್ಷಾರ್ಚನೆ ಸೇವೆ, ಬ್ರಹ್ಮಶ್ರೀ ಬಾಲಕೃಷ್ಣ ಭಟ್ ಇವರಿಂದ ಚಕ್ರಾಬ್ಜ ಪೂಜೆ ಹಾಗೂ ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಇವರಿಂದ ನವಗ್ರಹ ಪೂಜೆ ಮುಂತಾದ ವೈದಿಕ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನೆರವೇರಿತು. ನವಗ್ರಹ ಪೂಜಾ ವಿಧಿಯ ಸಂದರ್ಭದಲ್ಲಿ ವೀಣಾವಾದಿನಿಯ ಸಂಸ್ಥಾಪಕರೂ ಗುರುಗಳೂ ಆದ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಮತ್ತು ಶಿಷ್ಯವೃಂದದವರಿಂದ ನವಗ್ರಹ ಕೃತಿಗಳ ಆಲಾಪನೆಯು ವಿಶೇಷ ಆಕರ್ಷಣೆಯಾಗಿತ್ತು. ಹಾಡುಗಾರಿಕೆಗೆ ವಯಲಿನ್ ನಲ್ಲಿ ಕುಮಾರಿ ಧನಶ್ರೀ ಶಬರಾಯ ಹಾಗೂ ಮೃದಂಗದಲ್ಲಿ ಚೇರ್ತಲ ಕೃಷ್ಣ ಕುಮಾರ್ ಸಹಕರಿಸಿದರು. ವಾರ್ಷಿಕೋತ್ಸವದ ಎರಡನೆಯ ದಿನದ ಕಾರ್ಯಕ್ರಮವು ದಿನಾಂಕ 26 ಡಿಸೆಂಬರ್ 2025ರಂದು ಪೂರ್ವಾಹ್ನ ಘಂಟೆ 6-30ಕ್ಕೆ ಮಹಾಗಣಪತಿ ಹೋಮದೊಂದಿಗೆ ಪ್ರಾರಂಭಗೊಂಡು…

Read More

ಅಮ್ಮ ನಿನ್ನ ನೆನಪೆ ನನ್ನ ಬಾಳಿಗೊಂದು ಶಕ್ತಿ ಮರೆಯಲೆಂತು ಉಣಿಸಿ ಉಳಿಸಿ ಕೊಟ್ಟು ಹೋದ ಪ್ರೀತಿ ||ಪ.|| ಅಂಕೆಯಿರದೆ ಕಟ್ಟಿಕೊಂಡೆ ಕಣ್ಣತುಂಬ ಕನಸು ಶಂಕೆಯಿರದೆ ನೋಡಿಕೊಂಡೆ ಆಗಲೆಂದು ನನಸು| ಮೌನದಲ್ಲೆ ಪುಳಕಗೊಂಡೆ ಕಂಡು ಮಡಿಲ ಸೊಗಸು ಬಿಂಕದಿಂದ ಹೇಳಿಕೊಂಡೆ ಅದುವೆ ನನ್ನ ಕೂಸು ||೧|| ಕಲಿಸಿ ರೀತಿ-ನೀತಿ, ಮಿತಿಯು ಮೀರದಂತೆ ದಾಟಿ ತಿಳಿಸಿ, ಬೆಳೆಸಿ, ಒಲವ ಆಳ ರಾಗ-ಭಾವ ಮೀಟಿ | ಮಾತಿಗಿಂತ ದುಡಿದೆ ಹೆಚ್ಚು ದಣಿವರಿಯದ ಮೇಟಿ ತ್ಯಾಗ, ಸಹನೆ, ಕರುಣೆಯೊಡಲು ನಿನಗೆ ನೀನೆ ಸಾಟಿ ||೨|| ಅಪ್ಪಿ ನಾನು ಮುದದಿ ನೀನು ಹಾಕಿ ಕೊಟ್ಟ ದಾರಿ ಭಯದ ಮನದಿ ಎಲ್ಲಿ ಗುರಿಯು ತಪ್ಪಬಹುದೊ ಜಾರಿ | ಗುಡುಗೊ, ಮಳೆಯೊ ಬಿಡದೆ ನಡೆದೆ, ತಿರುಗಲಿಲ್ಲ ಹೆದರಿ ಜತನದಿಂದ ಕಾಯ್ದೆ ಬದುಕು ಹೋಗದಂತೆ ಸೋರಿ ||೩|| – ರೂಪಕಲಾ ಆಳ್ವ

Read More

ಬೆಂಗಳೂರು : ಜಂಗಮ ಕಲೆಕ್ಟಿವ್ ಪ್ರಸ್ತುತ ಪಡಿಸುವ ‘ಪಂಚಮ ಪದ’ ನಾಟಕ ಪ್ರದರ್ಶನವನ್ನು ದಿನಾಂಕ 02 ಜನವರಿ 2025ರಂದು ಸಂಜೆ ಗಂಟೆ 7-30ಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ವೆಂಕಟಗಿರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಚಂದ್ರಶೇಖರ್ ಕೆ. ಇವರ ನಿರ್ದೇಶನದಲ್ಲಿ ಹೋರಾಟದ ಹಾಡುಗಳು ಮತ್ತು ಕಥನ ಪ್ರಸ್ತುತಿ. ಕರ್ನಾಟಕದಲ್ಲಿ ಹೋರಾಟದ ಹಾಡುಗಳ ದೊಡ್ಡ ಪರಂಪರೆಯೇ ಇದೆ. ಆ ಹಾಡುಗಳೊಂದಿಗೆ ಇಲ್ಲಿನ ಹಲವು ಜನ ಸಮುದಾಯಗಳ ಸಂಸ್ಕೃತಿ, ಬದುಕು, ಬವಣೆ, ಚಳುವಳಿಯ ನೆನಪುಗಳು ಬೆಸೆದುಕೊಂಡಿವೆ. ಇಂತಹ ಹತ್ತಾರು ಹಾಡುಗಳ ಹುಟ್ಟಿನ ಸುತ್ತಲಿನ ಕಥನಗಳನ್ನು ನಾವು ಬಗೆಯುತ್ತಾ ಹೋದಂತೆ ಈ ನೆಲದ ಸಾಂಸ್ಕೃತಿಕ ಇತಿಹಾಸದ ಭಿನ್ನ ಮಗ್ಗುಲುಗಳು ತೆರೆದುಕೊಳ್ಳುತ್ತವೆ. ಪ್ರಸ್ತುತ ಪ್ರಯೋಗ ಹಾಡು, ನೆನಪು, ಮರೆತ ಇತಿಹಾಸವನ್ನು ವಿಶಿಷ್ಟ ನೇಯ್ಗೆಯಲ್ಲಿ ಬೆಸೆದು ಕಟ್ಟಿರುವ ಸಂಗೀತ ಪ್ರಯೋಗ. ಇದು ಹೀಗೆ ಮುಂದೆ ಆಗಲಿರುವ ಹಲವು ಪ್ರಯೋಗಗಳ ಸರಣಿಯ ಆರಂಭ ಬಿಂದು.

Read More

ರಾಯಚೂರು : ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆ ‘ಮಹಿಳಾ ಪರಿಷತ್’ ಇದರ ಉದ್ಘಾಟನಾ ಕಾರ್ಯಕ್ರಮ, ಪದಗ್ರಹಣ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 04 ಜನವರಿ 2026ರಂದು ರಾಯಚೂರು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮುಂಜಾನೆ 10-00 ಗಂಟೆಗೆ ಸಂಸ್ಥಾಪಕ ಅಧ್ಯಕ್ಷರಾದ ಡಾ. ಸರ್ವಮಂಗಳ ಸಂಕ್ರಿ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ‘ಕಾಯಕ ವಿಭೂಷಣ ಪ್ರಶಸ್ತಿ’ ಪ್ರದಾನ ಮಾಡಿ ಸನ್ಮಾನಿಸಲಾಗುವುದು. 2-30 ಗಂಟೆಗೆ ನಡೆಯಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಡಾ. ರಾಜಶ್ರೀ ಕಲ್ಲುರ್ಕರ್ ಇವರು ವಹಿಸಲಿದ್ದು, ಹಿರಿಯ ಸಾಹಿತಿ ವೀರ ಹನುಮನ ಉದ್ಘಾಟನೆ ಮಾಡಲಿದ್ದಾರೆ. ಸಾಹಿತಿ ವೆಂಕಟೇಶ ಬಾಗಲವಾಡ ಇವರು ಆಶಯ ನುಡಿಗಳನ್ನಾಡಲಿದ್ದು, ದಾವಣಗೆರೆ ಅಕ್ಕ ಮಹಾದೇವಿ ಭಜನಾ ಮಂಡಳಿಯ ಶ್ರೀಮತಿ ಮಹಾದೇವಿ ಹೆಚ್., ಶ್ರೀಮತಿ ಎಂ. ಗೀತಾ ಮತ್ತು ಶ್ರೀಮತಿ ಭಾಮಾ ಇವರ ಗಾಯನ ಪ್ರಸ್ತುತಗೊಳ್ಳಲಿದೆ.

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಕರಾವಳಿ ಉತ್ಸವ – 2025 ಅಂಗವಾಗಿ ದಿನಾಂಕ 21 ಡಿಸೆಂಬರ್ 2025ರಂದು ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಜರಗಿತು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ನೇತೃತ್ವದ ಆಕಾಶವಾಣಿ ಮತ್ತು ದೂರದರ್ಶನ ಖ್ಯಾತಿಯ ಕರ್ನಾಟಕ ಯಕ್ಷ ಭಾರತಿ ಪುತ್ತೂರು ತಂಡವು ಕರಾವಳಿ ಉತ್ಸವದ ವಸ್ತು ಪ್ರದರ್ಶನ ವೇದಿಕೆಯಲ್ಲಿ ‘ವೀರಮಣಿ ಕಾಳಗ’ ಪ್ರಸಂಗವನ್ನು ಪ್ರಸ್ತುತಪಡಿಸಿತು. ಯಕ್ಷಗಾನ ರಂಗದ ಪ್ರಮುಖ ಅರ್ಥಧಾರಿಗಳಾದ ಡಾ. ಎಂ. ಪ್ರಭಾಕರ ಜೋಶಿ, ಭಾಸ್ಕರ ರೈ ಕುಕ್ಕುವಳ್ಳಿ, ಜಬ್ಬಾರ್ ಸಮೋ ಸಂಪಾಜೆ ಮತ್ತು ಪ್ರಸಾದ ಪೂಜಾರಿ ಭಟ್ಕಳ ವಿವಿಧ ಪಾತ್ರಗಳನ್ನು ನಿರ್ವಹಿಸಿದರು. ಭಾಗವತ ಹರೀಶ ಶೆಟ್ಟಿ ಸೂಡ ಇವರ ಹಾಡುಗಾರಿಕೆಗೆ ವಿಕಾಸ್ ರಾವ್ ಕೆರೆಕಾಡ್, ಶ್ರೀಶ ರಾವ್ ನಿಡ್ಲೆ ಮತ್ತು ಕೀರ್ತನ್ ಹಿಮ್ಮೇಳದಲ್ಲಿ ಸಹಕರಿಸಿದರು. ಜಿಲ್ಲಾಡಳಿತದ ಪರವಾಗಿ ದ.ಕ. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ ಇವರು ಕರ್ನಾಟಕ…

Read More

ಬೆಂಗಳೂರು : ಕರ್ನಾಟಕ ಜಾನಪದ ಅಕಾಡೆಮಿಯು 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ತುಮಕೂರಿನ ಜಾನಪದ ವಿದ್ವಾಂಸರಾದ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಇವರು ‘ಡಾ. ಜೀ.ಶಂ.ಪ. ತಜ್ಞ ಪ್ರಶಸ್ತಿ’ ಹಾಗೂ ಕಲಬುರಗಿಯ ಡಾ. ಎಚ್.ಟಿ. ಪೋತೆ ಇವರು ‘ಡಾ. ಬಿ.ಎಸ್. ಗದ್ದಗಿಮಠ ತಜ್ಞ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ರಿಜಿಸ್ಟ್ರಾರ್ ಎನ್. ನಮ್ರತಾ ಇವರು ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ‘ಜಾನಪದ ತಜ್ಞ ಪ್ರಶಸ್ತಿ’ಯು ತಲಾ ರೂ.50,000/- ನಗದು ಒಳಗೊಂಡಿದೆ. ‘ವಾರ್ಷಿಕ ಗೌರವ ಪ್ರಶಸ್ತಿ’ಗೆ 31 ಜಿಲ್ಲೆಗಳಿಂದ 30 ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿಯು ತಲಾ ರೂ.25,000/- ನಗದು ಒಳಗೊಂಡಿದೆ. ಪ್ರಶಸ್ತಿ ಮೊತ್ತದ ಜತೆಗೆ ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ನೀಡಿ ಗೌರವಿಸಲಾಗುವುದು. ಗೌರವ ಪ್ರಶಸ್ತಿಗೆ ಬೆಂಗಳೂರಿನ ಸಿದ್ದರಾಜು (ನೀಲಗಾರರ ಪದ ಮತ್ತು ತಂಬೂರಿ ಪದ), ಬೆಂಗಳೂರು ಗ್ರಾಮಾಂತರದ ಬಚ್ಚಮ್ಮ (ಸೋಬಾನೆ ಪದ, ತತ್ವಪದ, ಸಂಪ್ರದಾಯ ಪದ), ರಾಮನಗರದ ಬಿ. ಸಿದ್ದರಾಜಯ್ಯ (ಜಾನಪದ ಗಾಯನ),…

Read More

ಮಂಗಳೂರು : ಶರಧಿ ಪ್ರತಿಷ್ಠಾನ (ರಿ.) ಮಂಗಳೂರು ಆಯೋಜಿಸುವ ‘ಕಲಾಪರ್ಬ’ ಚಿತ್ರ ಶಿಲ್ಪ ಸಾಂಸ್ಕೃತಿಕ ಮೇಳದಲ್ಲಿ ‘ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ’ಯನ್ನು ದಿನಾಂಕ 10 ಜನವರಿ 2026ರಂದು ಮಧ್ಯಾಹ್ನ 3-30ರಿಂದ 5-30ರವರೆಗೆ ಮಂಗಳೂರಿನ ಕದ್ರಿ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾಗಿದೆ. 2ರಿಂದ 4ನೇ ತರಗತಿ, 5ರಿಂದ 7ನೇ ತರಗತಿ, 8ರಿಂದ 10ನೇ ತರಗತಿ ಹಾಗೂ ಕಾಲೇಜು ವಿಭಾಗ ಈ ಚಿತ್ರ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧಾಳುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನದ ಜೊತೆ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೂ ಅಭಿನಂದನಾ ಪತ್ರ ಮತ್ತು ಪದಕ ನೀಡಲಾಗುವುದು. ಸ್ಪರ್ಧೆಯ ವಿಷಯ : 2ರಿಂದ 4ನೇ ತರಗತಿ : ಸೂರ್ಯೋದಯ, 5ರಿಂದ 7ನೇ ತರಗತಿ : ವನ್ಯಜೀವಿ, 8ರಿಂದ 10ನೇ ತರಗತಿ : ಪ್ರಕೃತಿ / ಸಂಸ್ಕೃತಿ, ಕಾಲೇಜು ವಿಭಾಗ : ತುಳುನಾಡಿನ / ಪದ್ಧತಿ ಭಾಗವಹಿಸಲಿರುವ ವಿದ್ಯಾರ್ಥಿಗಳು ಮಧ್ಯಾಹ್ನ ಗಂಟೆ 2-30ಕ್ಕೆ ಹಾಜರಿರಬೇಕು. ಶಾಲಾ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ಡ್ರಾಯಿಂಗ್ ಶೀಟನ್ನು ನೀಡಲಾಗುವುದು ಉಳಿದ ಪರಿಕರಗಳನ್ನು ಸ್ಪರ್ಧಾಳುಗಳೇ…

Read More

ನೃತ್ಯಕ್ಷೇತ್ರದೊಳಗೆ ಇಂದು ಅನೇಕ ಆವಿಷ್ಕಾರಗಳು ನಡೆಯುತ್ತಿದ್ದು, ಹೊಸ ವಿಚಾರಗಳನ್ನು ಹೊತ್ತು ತರುವ ಕೆಲಸವನ್ನು ಅದೆಷ್ಟೋ ಕಲಾವಿದರು ಪ್ರಾಮಾಣಿಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಪ್ರಾಯೋಗಿಕವಾಗಿ ಮಂಡಿಸುವ ವಿಚಾರಗಳನ್ನು ಈ ರೀತಿಯಲ್ಲೂ ತಿಳಿಸಬಹುದಾ?! ಎಂದು ಕಲಾ ರಸಿಕರಲ್ಲಿ ಹೊಸದೊಂದು ಕಲ್ಪನೆ ಮೂಡುವ ರೀತಿಯಲ್ಲಿ ನೃತ್ಯ ಕಲಾಲೋಕ ಸಾಗುತ್ತಿದೆ. ಹೊಸ ವಿಚಾರಗಳನ್ನು ಪ್ರಾಯೋಗಿಕವಾಗಿ ಮುನ್ನಡೆಸುವಾಗ ಸೈದ್ಧಾಂತಿಕ ಜ್ಞಾನ ಮತ್ತು ಅದರ ಒಳಹರಿವು ನಮ್ಮಲ್ಲಿ ಉಂಟಾಗಲೇಬೇಕು. ಇದರಿಂದಲೇ ನೃತ್ಯ ಪ್ರದರ್ಶನಗಳು ಕಲಾ ರಸಿಕರ ಮನ ಮುಟ್ಟುವ ಮೂಲಕ ವೇದಿಕೆಯಲ್ಲಿ ಗೆದ್ದು ಬೀಗುತ್ತವೆ. ನಿರಂತರ ಓದು, ಕ್ರಿಯಾಶೀಲ ಚಿಂತನೆ ಮತ್ತು ಆಳವಾದ ಅಧ್ಯಯನಶೀಲ ಮನಸ್ಥಿತಿಯ ಗುರುಗಳು ಹಲವರಿದ್ದಾರೆ. ಈ ಸಾಲಿನಲ್ಲಿ ಗುರುತಿಸಿಕೊಂಡಿರುವ ಅಗ್ರಪಂಕ್ತಿಯ ನೃತ್ಯಗುರು ಕಲೈಮಾಮಣಿ ಡಾ. ಲಕ್ಷ್ಮೀ ರಾಮಸ್ವಾಮಿ. ಭರತನೃತ್ಯದ ಮೂಲ ನೆಲೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಇವರು ಹುಟ್ಟು ಹಾಕಿದ ನೃತ್ಯಸಂಸ್ಥೆ ಶ್ರೀ ಮುದ್ರಾಲಯವು 35 ವರುಷಗಳಿಂದ ಹಲವಾರು ನೃತ್ಯರೂಪಕಗಳನ್ನು, ಮಾರ್ಗಂ ಚೌಕಟ್ಟುಗಳನ್ನು ಕಲಾ ರಸಿಕರಿಗೆ ನೀಡಿರುತ್ತದೆ. ಶ್ರೀ ಮುದ್ರಾಲಯದ ಹೊಸ ಪ್ರಯತ್ನ ‘ಐಕ್ಯಂ’ ಎನ್ನುವ ಮನೋಚಿಂತನೆಯ…

Read More

ದಲಿತ – ಬಂಡಾಯ ಸಾಹಿತ್ಯವು ಹೊಸ ದಿಕ್ಕಿನತ್ತ ಹೊರಳಿದಾಗ ಹಸಿಹಸಿ ಅನುಭವ, ಪೂರ್ವ ನಿಯೋಜಿತ ಮಾದರಿ, ಏಕರೀತಿಯ ಘಟನಾವಳಿ, ಧ್ವನಿರಹಿತ ಭಾಷೆ, ವರದಿಗಾರಿಕೆಯ ಶೈಲಿ ಮತ್ತು ಸುಲಭ ಪರಿಹಾರಗಳನ್ನು ಮೀರಿ ಬದುಕಿನ ಆಳ ವಿಸ್ತಾರಗಳನ್ನು ಶೋಧಿಸುವ ಕವಿತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದವು. ಹಿರಿಯ ಕವಯತ್ರಿ ಮಾಲತಿ ಪಟ್ಟಣಶೆಟ್ಟಿಯವರ ‘ಮೌನ ಕರಗುವ ಹೊತ್ತು’ (1999) ಅದಕ್ಕೆ ಒಂದು ನಿದರ್ಶನವಾಗಿದೆ. “ಕ್ಷೋಭೆಗೊಂಡು ಉರಿದುರಿದ ಮನವು ತನ್ನ ಆತ್ಮಬಲವನ್ನು ಪ್ರಜ್ವಲಿಸಿಕೊಳ್ಳುತ್ತ, ಇಷ್ಟು ವರ್ಷಗಳ, ಶತಮಾನಗಳ ಶೋಷಣೆ, ಕ್ರೌರ್ಯ, ಅನ್ಯಾಯಗಳಿಗೆ ಸಂಯಮ ತೋರುತ್ತ, ಆತ್ಮಹನನ ಮಾಡಿಕೊಳ್ಳುತ್ತ ಬಂದುದರ ತಿಳಿವಿನ ಸೂರ್ಯ ಈಗ ಮೂಡಿ ಮೌನ ಕರಗುವ ಹೊತ್ತಿನತ್ತ ಬೆರಳು ಮಾಡುವ ಕವಿತೆಗಳು ಇಲ್ಲಿವೆ” ಎಂದು ಕವಯತ್ರಿಯು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಎಂದು ಹೆಣ್ಣಿನ ಶೋಷಣೆಯ ವಿರುದ್ಧ ದನಿಯಾಗುವ, ಲಿಂಗ ಸಮಾನತೆಯನ್ನು ಪ್ರತಿಪಾದಿಸುವ, ಸಾಮಾಜಿಕ ಅನ್ಯಾಯಗಳನ್ನು ಸಂಯಮದಿಂದ ಮಂಡಿಸುವ ರೀತಿಯು ಮುಖ್ಯವಾಗುತ್ತದೆ. ಹೆಚ್ಚಿನ ಲೇಖಕಿಯರು ಪುರುಷ ನಿಂದೆಯಲ್ಲೇ ನೆಮ್ಮದಿಯನ್ನು ಕಂಡುಕೊಳ್ಳುತ್ತಿರುವ ಹೊತ್ತಿನಲ್ಲಿ ಸಮಸ್ಯೆಯನ್ನು ಸಮಚಿತ್ತದಿಂದ ಗ್ರಹಿಸಿ, ಆರೋಗ್ಯಪೂರ್ಣ ಧೋರಣೆಯನ್ನು…

Read More

ಮೂಡುಬಿದಿರೆ : ಯುವ ಲೇಖಕಿ, ವಾಗ್ಮಿ ಹಾಗೂ ಎಬಿವಿಪಿ ಕಾರ್ಯಕರ್ತೆ ರಿಶಲ್ ಬ್ರಿಟ್ನಿ ಫರ್ನಾಂಡಿಸ್ ಇವರು 2025ನೇ ಸಾಲಿನ ‘ದೇಶ್’ ರತ್ನಾ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದೆಹಲಿಯ ಭಾರತ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ವಿವಿಧ ಕೇಂದ್ರ ಹಾಗೂ ರಾಜ್ಯ ಸಚಿವರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ರಿಶಲ್ ಬ್ರಿಟ್ನಿ ಇವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಸಾಧನೆಗಳನ್ನು ಗುರುತಿಸಿ ಭಾರತೀಯ ಯುವ ಅಸೋಸಿಯೇಷನ್ ಹಾಗೂ ವಿವಿಧ ಸಚಿವಾಲಯಗಳ ಜಂಟಿ ಆಶ್ರಯದಲ್ಲಿ ಈ ಗೌರವವನ್ನು ನೀಡಲಾಗುತ್ತದೆ. ಈ ಹಿಂದೆ ಇವರು ರಾಜ್ಯ ಸರ್ಕಾರದ ಪ್ರತಿಷ್ಠಿತ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೂ ಪಾತ್ರರಾಗಿದ್ದರು. ರಿಶಲ್ ಅವರ ಲೇಖನಿಯಿಂದ ಮೂಡಿಬಂದ ಕೃತಿಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿವೆ. ‘ಭಾರತ್ @2047 ರೋಲ್ ಆಫ್ ಯೂತ್’ ಪುಸ್ತಕವು ಯುವಶಕ್ತಿಯ ಮಹತ್ವದ ಬಗ್ಗೆ ಬೆಳಕು ಚೆಲ್ಲಿದ್ದು, ಸ್ವತಃ ಭಾರತದ ಪ್ರಧಾನ ಮಂತ್ರಿಯವರಿಂದ ಪ್ರಶಂಸೆಗೆ ಒಳಗಾಗಿದೆ. ಸುರಾಜ್ಯ – ಗುಡ್ ಗವರ್ನನ್ಸ್‌ ವೀಲ್ ಆಫ್ ಡೆಮಾಕ್ರಸಿ :…

Read More