Subscribe to Updates
Get the latest creative news from FooBar about art, design and business.
Author: roovari
ಉಪ್ಪಿನಂಗಡಿ : ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅಧ್ಯಕ್ಷ ಡಾ. ಶ್ರೀಪತಿ ಕಲ್ಲುರಾಯ ಇವರ ಪ್ರಾಯೋಜಕತ್ವದಲ್ಲಿ ದಿನಾಂಕ 07 ಫೆಬ್ರವರಿ 2026ರಂದು ನಡೆದ ತಾಳಮದ್ದಳೆ ಕೂಟದಲ್ಲಿ ‘ಜಾಂಬವತಿ ಕಲ್ಯಾಣ’ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ ಉಡುಪಿ, ಚೆಂಡೆ ಮದ್ದಳೆಯಲ್ಲಿ ಪದ್ಯಾಣ ಜಯರಾಮ್ ಭಟ್ ಮತ್ತು ಮುರಳೀಧರ ಕಲ್ಲೂರಾಯ, ಹಾಗೂ ಮುಮ್ಮೇಳದಲ್ಲಿ ಬಲರಾಮನಾಗಿ ಡಾ. ಶ್ರೀಪತಿ ಕಲ್ಲೂರಾಯ, ಶ್ರೀ ಕೃಷ್ಣನಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ಜಾಂಬವಂತನಾಗಿ ಗಣರಾಜ ಕುಂಬಳೆ, ಜಾಂಬವತಿಯಾಗಿ ರಾಜಶ್ರೀ ಶಬರಾಯ ಉಡುಪಿ ಭಾಗವಹಿಸಿದ್ದರು. ದೇವಳದ ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ, ಕಾರ್ಯದರ್ಶಿ ಪ್ರಶಾಂತ ಪೈ, ಸ್ವರ್ಣಲತಾ, ಮನೋಹರ ಶೆಟ್ಟಿ ಮತ್ತು ಸೇವಾ ಟ್ರಸ್ಟಿನ ಪದಾಧಿಕಾರಿಗಳು ಕಲಾವಿದರನ್ನು ಗೌರವಿಸಿದರು. ಭಾಸ್ಕರ ಬಾರ್ಯ ಸ್ವಾಗತಿಸಿ, ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು.
ಉಪ್ಪಿನಂಗಡಿ : ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ಸ್ಥಾಪಕಗುರು, ಸಂಗೀತರತ್ನ ಋಷಿಗಂಧರ್ವ ವಿ. ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ 105ನೇ ಜನ್ಮ ವರ್ಷ ಮಹೋತ್ಸವದ ಅಂಗವಾಗಿ ಕಾಂಚನದಲ್ಲಿ ನಿರ್ಮಾಣವಾಗಿರುವ ನೂತನ ಸಂಗೀತ ಕಲಾಶಾಲೆ, ಸಭಾಭವನ ಹಾಗೂ ಭೋಜನ ಶಾಲೆಯ ಲೋಕಾರ್ಪಣೆಯ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ದಿನಾಂಕ 05 ಫೆಬ್ರವರಿ 2026ರಂದು ಪ್ರಾರಂಭವಾಗಿದ್ದು, 72ನೇ ವರ್ಷದ ‘ಕಾಂಚನೋತ್ಸವ 2026’ ಚಾಲನೆ ಪಡೆಯಿತು. ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆಯಲ್ಲಿ ವೇದ ಬ್ರಹ್ಮ ನಾರಾಯಣ ಬಡಿಕಿಲ್ಲಾಯರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. 72ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನ ಮಹೋತ್ಸವ, ಸ್ಥಾಪಕ ಗುರು, ಸಂಗೀತ ರತ್ನ ಕಾಂಚನ ವೆಂಕಟಸುಬ್ರಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ. ಸುಬ್ಬರತ್ನಂರವರ ಪುಣ್ಯ ಸ್ಮರಣೆಯ ಅಂಗವಾಗಿ ಆರಂಭ ಸ್ತುತಿಯಲ್ಲಿ ಸಂವಿತ್ ಆರ್.ಎಸ್. ಅವರು ತಬಲ ಹಾಗೂ ಕೆ.ಜೆ. ಋತ ವಯಲಿನ್ ನುಡಿಸಿದರು. ಸ್ವರ ಲಯ ಲಹರಿಯಲ್ಲಿ ಕೆ.ಜೆ. ಋತ, ಅಭಯ್…
ಕುಂದಾಪುರ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ವತಿಯಿಂದ ಶ್ರೀಮತಿ ಜಿ. ಸರೋಜಮ್ಮ ಪ್ರಾಯೋಜಿತ ‘ಪುಂಡಲೀಕ ಹಾಲಂಬಿ ದತ್ತಿ ಕಾರ್ಯಕ್ರಮ, ಪುಂಡಲೀಕ ಹಾಲಂಬಿ ಪ್ರಶಸ್ತಿ ಪ್ರದಾನ ಸಮಾರಂಭವು ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಕಲಾ ಮಂದಿರದಲ್ಲಿ ದಿನಾಂಕ 14 ಫೆಬ್ರವರಿ 2026ರಂದು ಸಂಜೆ 5-00 ಗಂಟೆಗೆ ನಡೆಯಲಿದೆ. ಯಕ್ಷಗಾನ ಕಲಾವಿದ ಹಳ್ಳಾಡಿ ಜಯರಾಮ್ ಶೆಟ್ಟಿ ಇವರಿಗೆ ಈ ಬಾರಿಯ ಪುಂಡಲೀಕ ಹಾಲಂಬಿ ಪ್ರಶಸ್ತಿ ಹಾಗೂ 25 ಸಾವಿರ ರೂ. ನಗದನ್ನು ನೀಡಿ ಗೌರವಿಸಲಾಗುತ್ತಿದೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಲಿದ್ದು, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಲಿದ್ದಾರೆ. ಡಾ. ಉಮೇಶ ಪುತ್ರನ್ ಆಶಯ ನುಡಿಗಳನ್ನಾಡಲಿದ್ದು, ಎ.ಎಸ್.ಎನ್. ಹೆಬ್ಬಾರ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಶ್ರೀಮತಿ ಜಿ. ಸರೋಜಮ್ಮ ಪುಂಡಲೀಕ ಹಾಲಂಬಿ, ನರೇಂದ್ರ ಕುಮಾರ್ ಕೋಟಿ, ಕೆ. ಸೀತಾರಾಮ ನಕ್ಕತ್ತಾಯ, ಪ್ರಾಂಶುಪಾಲ ಜಿ. ರಾಮಕೃಷ್ಣ ಉಪಸ್ಥಿತರಿರುವರು.
ಮೈಸೂರು : ಗಾಂಧಿವಾದಿ, ಪತ್ರಕರ್ತ ಕೆ.ವಿ. ಶ್ರೀನಿವಾಸನ್ (81) ಅವರು ಹುಣಸೂರಿನ ಕಲ್ಕುಣಿಕೆ ಗ್ರಾಮದಲ್ಲಿ ವಯೋಸಹಜ ಅನಾರೋಗ್ಯದಿಂದ ದಿನಾಂಕ 06 ಫೆಬ್ರವರಿ 2026ರಂದು ನಿಧನರಾದರು. ಅವಿವಾಹಿತರಾಗಿದ್ದ ಅವರು, ವೃತ್ತಿ ಬದ್ಧತೆ, ಕಿರಿಯರಿಗೆ ನೀಡುತ್ತಿದ್ದ ಪ್ರೋತ್ಸಾಹದ ಕಾರಣಕ್ಕೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಶ್ರೀನಿವಾಸನ್ ‘ಬ್ರದರ್’ ಎಂದೇ ಹೆಸರಾಗಿದ್ದರು. 1944ರ ಮಾರ್ಚ್ 6ರಂದು ಜನಿಸಿದ ಅವರು ಎಂ.ಎ. ಪತ್ರಿಕೋದ್ಯಮ ಹಾಗೂ ಎಲ್ಎಲ್ಬಿ ಪದವಿ ಪಡೆದಿದ್ದರು. ಭಾರತೀಯ ಹಾಗೂ ಪಾಶ್ಚಾತ್ಯ ತತ್ವಶಾಸ್ತ್ರದ ಸರ್ಟಿಫಿಕೇಟ್ ಕೋರ್ಸ್ ಮಾಡಿದ್ದರು. ಗಾಂಧಿ ತತ್ವದಲ್ಲಿ ಅಪಾರ ಒಲವಿದ್ದ ಅವರು, ಗಾಂಧಿ ಅಧ್ಯಯನದಲ್ಲಿ ಡಿಪ್ಲೊಮಾ ಮಾಡಿದ್ದರು. ‘ಪತ್ರಿಕೋದ್ಯಮಿಯಾಗಿ ಗಾಂಧೀಜಿ’ ಮತ್ತು ‘ಸಹ ಬರಹಗಾರರ ಜಾಹೀರಾತು’ ಕೃತಿಗಳನ್ನು ಬರೆದಿದ್ದಾರೆ. ‘ನವಧ್ವನಿ’ ಕನ್ನಡ ವಾರಪತ್ರಿಕೆಯನ್ನು ಸ್ಥಾಪಿಸಿದ್ದರು. ಹಲವು ಪತ್ರಕರ್ತರನ್ನು ರೂಪಿಸಿದ ‘ಮಹಾನಂದಿ’ ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ‘ಸಂಕ್ರಾಂತಿ’, ‘ಅಶೋಕ’, ‘ವಿಜಯ’, ‘ವರ್ತಮಾನ’ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಆಕಾಶವಾಣಿಯ ವರದಿಗಾರರಾಗಿದ್ದರು. 70ರ ದಶಕದಲ್ಲಿ ಜಯಪ್ರಕಾಶ ನಾರಾಯಣ ಮುನ್ನಡೆಸಿದ ಚಳವಳಿಗಳಲ್ಲಿ ಪಾಲ್ಗೊಂಡಿದ್ದರು. ಹಿಂದಿ ವಿರೋಧಿ ಚಳವಳಿಯಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದರು.…
ಸೋಮವಾರಪೇಟೆ : ಐಗೂರಿನ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 9ನೇ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 09 ಫೆಬ್ರವರಿ 2026ರಂದು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 6-30ಕ್ಕೆ ಧ್ವಜಾರೋಹಣದೊಂದಿಗೆ ಸೋಮವಾರಪೇಟೆ ತಾಲೂಕು ದಂಡಾಧಿಕಾರಿ ಮತ್ತು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ನಂತರ ದ್ವಾರಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 8-50 ಗಂಟೆಗೆ ಸಮ್ಮೇಳನಾಧ್ಯಕ್ಷೆ ಜಲಜಾ ಶೇಖರ್ ಇವರೊಂದಿಗೆ ಮೆರವಣಿಗೆ ಐಗೂರು ಕಬ್ಬಿಣ ಸೇತುವೆಯಿಂದ ಆರಂಭವಾಗಲಿದ್ದು, ಪರಮೇಶ್ ಕುಮಾರ್ ವಿ. ಇವರು ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಸಮ್ಮೇಳನದ ಪ್ರವೇಶ ದ್ವಾರ, ಸಮ್ಮೇಳನದ ಸಭಾಂಗಣ, ವಿವಿಧ ಮಳಿಗೆಗಳ ಮತ್ತು ಸಮ್ಮೇಳನದ ವೇದಿಕೆ ಉದ್ಘಾಟನೆ ನಡೆಯಲಿದೆ. 10-30 ಗಂಟೆಗೆ ಎನ್.ಎಸ್. ಬೋಸರಾಜು ಇವರು ಸಮ್ಮೇಳನದ ಉದ್ಘಾಟನೆ ಮಾಡಲಿದ್ದು, ಸ್ಮರಣ ಸಂಚಿಕೆ ಮತ್ತು ಕನ್ನಡ ಕೃತಿಗಳು ಬಿಡುಗಡೆಗೊಳ್ಳಲಿದೆ. ಮಧ್ಯಾಹ್ನ 1-30 ಗಂಟೆಗೆ ಗೀತ ಗಾಯನ ಕಾರ್ಯಕ್ರಮ, 2-30 ಗಂಟೆಗೆ ವಿಚಾರಗೋಷ್ಠಿ, 3-30 ಗಂಟೆಗೆ ಕವಿಗೋಷ್ಠಿ, 4-30 ಗಂಟೆಗೆ ಬಹಿರಂಗ ಅಧಿವೇಶನ ಹಾಗೂ…
ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಅಂಗ ಸಂಸ್ಥೆಯಾದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 22 ಫೆಬ್ರವರಿ 2026ರಂದು ಬೆಳಗ್ಗೆ 7-00 ಗಂಟೆಯಿಂದ ಕನ್ನಡ ಭವನದ ಬಯಲು ರಂಗಮಂದಿರದಲ್ಲಿ ಕಾಸರಗೋಡು- ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯುವ ಚುಟುಕು ಯುವ ಕವಿಗೋಷ್ಠಿಯಲ್ಲಿ ಭಾಗವಹಿಸುವ ಆಸಕ್ತರು ತಮ್ಮ ಹೆಸರನ್ನು ನೊಂದಾಯಿಸಬಹುದು. ಈ ವಿಭಾಗದಲ್ಲಿ ಭಾಗವಹಿಸುವವರು 18 ವರ್ಷಕ್ಕಿಂತ ಕೆಳಗಿನವರಾಗಿರಬೇಕು. ಒಬ್ಬರಿಗೆ ಮೂರು ಚುಟುಕು ವಾಚನಕ್ಕೆ ಅವಕಾಶ ಇದೆ. ಕವಿಗಳಿಗೆ ಮುಕ್ತ ಅವಕಾಶವಿದ್ದು ಆಸಕ್ತರು ತಮ್ಮ ಹೆಸರನ್ನು ವಿರಾಜ್ ಅಡೂರು : 9447490344ರಲ್ಲಿ ನೊಂದಾಯಿಸಬೇಕಾಗಿ ಸಂಸ್ಥೆಯ ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾ. ಕೆ. ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.
ಮೂಡುಬಿದಿರೆ : ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದ ಉಷಾ ಆರ್. ರಾವ್ (56) ದಿನಾಂಕ 03 ಫೆಬ್ರವರಿ 2026ರಂದು ನಿಧನ ಹೊಂದಿದರು. ಅವರು ಪತಿ, ಉದ್ಯಮಿ ರಮೇಶ್ ಕೆ. ರಾವ್, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ‘ಶರಧಿ’ ಕಾವ್ಯನಾಮದೊಂದಿಗೆ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದು, ‘ಶರದಿ ಕಾದಿದೆ’ ಕವನ ಸಂಕಲನದ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಉಷಾ ರಾವ್ ಅವರು ಕಾಗದದ ದೋಣಿ, ಅವಧಿ ನೀ ನಾದ ನಾ ನಿನಾದ, ಬಿಸಿಲು ಹೊತ್ತ ಬೆಳದಿಂಗಳು, ಕಲಾಕೃತಿಯಾದ ಚಂದನದ ಗೊಂಬೆ, ಉಸಿರು ಉಸಿರ ಸಪ್ತಸ್ವರ ಮೊದಲಾದ ಕೃತಿಗಳನ್ನು ಅವರು ರಚಿಸಿ ಪ್ರಕಟಿಸಿದ್ದು ಪ್ರತಿದಿನ ಬರೆದಿಟ್ಟ ಪುಟಗಳನ್ನು ಆನ್ ಲೈನ್ ಪ್ರತಿಲಿಪಿಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದವರು. ಅವರ ಪುಸ್ತಕಗಳನ್ನು ಕರ್ನಾಟಕ ಸರಕಾರದ ಗ್ರಂಥಾಲಯ ಇಲಾಖೆ ಮಾತ್ರವಲ್ಲ ಬಂಗಾಲದ ಗ್ರಂಥಾಲಯ ಇಲಾಖೆಯ ಕನ್ನಡ ವಿಭಾಗ ಖರೀದಿಸಿರುವುದು ವಿಶೇಷ. ಬೆಂಗಳೂರಿನ ಫೇಸ್ ಫೌಂಡೇಶನ್ ಟ್ರಸ್ಟ್, ವಿಕ್ರಮ ಪ್ರಕಾಶನ ಸಹಿತ ಹೆಸರಾಂತ ಪ್ರಕಾಶನ ಸಂಸ್ಥೆಗಳ ಮೂಲಕ ಇವರ ಕೃತಿಗಳು ಪ್ರಕಟವಾಗಿವೆ. ಸಾಹಿತಿ, ಅಂಕಣಕಾರ ಸಂತೋಷ್ ಕುಮಾರ ಮೆಹೆಂದಳೆ…
ಕಾಸರಗೋಡು : ತುಲುವೆರೆ ಜಾಲ್ ಕಣ್ವತೀರ್ಥ ಇದರ ಆಶ್ರಯದಲ್ಲಿ ತುಳುನಾಡ ಮಕ್ಕಳ ಸಾಂಸ್ಕೃತಿಕ ಮತ್ತು ಸಾಹಿತ್ಯ ಸೇವಾ ಕೂಟ ಹಾಗೂ ಶ್ರೀ ಮಾತಾ ಕಲಾ ಮಂದಿರ ವೈಶಾಲಿ ಕುಂಜತ್ತೂರು ತೂಮಿನಾಡು ಇವರ ಸಹಯೋಗದಲ್ಲಿ ದಿನಾಂಕ 21 ಫೆಬ್ರವರಿ 2026ರಂದು ನಡೆಯಲಿರುವ ‘ಮಕ್ಕಳ ಬಹುಭಾಷಾ ಕವಿಗೋಷ್ಠಿ’ಯಲ್ಲಿ ಸ್ವರಚಿತ ಕವನ ವಾಚನ ಮಾಡಲು ಆಸಕ್ತಿ ಇರುವ 16 ವರ್ಷದ ಒಳಗಿನ ಮಕ್ಕಳು ತಮ್ಮ ಹೆಸರನ್ನು ದಿನಾಂಕ 10 ಫೆಬ್ರವರಿ 2026ರ ಒಳಗೆ ನೀಡಬೇಕು. ಆಸಕ್ತರು 9605864329 ಈ ಸಂಖ್ಯೆಗೆ ವಾಟ್ಸಪ್ ಮಾಡಿ. ಸ್ಥಳ : ಶ್ರೀ ಮಾತಾ ಕಲಾಲಯ ವೈಶಾಲಿ ಕುಂಜತ್ತೂರು ತೂಮಿನಾಡ್, ಕ್ರಿಕ್ ಹಾಲ್ ನ ಹತ್ತಿರ, ಕುಂಜತ್ತೂರು ಬಸ್ ಸ್ಟಾಂಡಿನ ಬಳಿ, ಮಂಜೇಶ್ವರ, ಕಾಸರಗೋಡು.
ಶಿರ್ವ : ಬೆಳ್ಳಿ ಗ್ರಾಮದ ಪಾಂಬೂರು ಪರಿಚಯ ಪ್ರತಿಷ್ಠಾನದ ಆಶ್ರಯದಲ್ಲಿ ದಿನಾಂಕ 8 ರಿಂದ 14 ಫೆಬ್ರವರಿ 2026ರವರೆಗೆ 7 ದಿನಗಳ ‘ಪರಿಚಯ ರಂಗೋತ್ಸವ 2026’ ಪಾಂಬೂರು ರಂಗಪರಿಚಯದಲ್ಲಿ ನಡೆಯಲಿದೆ. ಪ್ರತೀ ದಿನ ಸಂಜೆ ಗಂಟೆ 6-30ರಿಂದ ಏಳು ದಿನಗಳ ಪರ್ಯಂತ ಕನ್ನಡ, ತುಳು, ಕೊಂಕಣಿ, ಅರೆಭಾಷೆ ಮತ್ತು ಮಲಯಾಳಂ ಭಾಷೆಗಳ ಏಳು ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಪ್ರಕಾಶ್ ನೊರೊನ್ಹಾ ತಿಳಿಸಿದ್ದಾರೆ. ದಿನಾಂಕ 08 ಫೆಬ್ರವರಿ 2026ರಂದು ಹಿರಿಯ ರಂಗಕರ್ಮಿ ಹಾಗೂ ಕಲಾವಿದೆ ಗೀತಾ ಸುರತ್ಕಲ್ ರಂಗೋತ್ಸವಕ್ಕೆ ಚಾಲನೆ ನೀಡಲಿದ್ದು, ದಿನಾಂಕ 14 ಫೆಬ್ರವರಿ 2026ರಂದು ಕೊಂಕಣಿಯ ಹಿರಿಯ ಸಾಹಿತಿ, ನಾಟಕಕಾರ ಹಾಗೂ ಶಿಕ್ಷಣ ತಜ್ಞ ಡಾ. ಎವಿನ್ ಡಿಸೋಜಾ ಅವರ ಸಮಾರೋಪ ಸಂದೇಶದೊಂದಿಗೆ ಸಂಪನ್ನಗೊಳ್ಳಲಿದೆ. ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ನಾಟಕಗಳ ಪ್ರಾಯೋಜಕತ್ವ ವಹಿಸಿದ್ದು, ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮತ್ತು ನಿವೃತ್ತ ಕನ್ನಡ ಉಪನ್ಯಾಸಕ ಕೆ.ಎಸ್. ಶ್ರೀಧರಮೂರ್ತಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಲ್ಲಾ…
ಧಾರವಾಡ : ‘ಆರ್ಯ’ ಎಂಬ ಹೆಸರಿನಿಂದ ಸಾಹಿತ್ಯ ಕೃತಿ ರಚಿಸಿದ ಪಿ.ಆರ್. ಆಚಾರ್ಯ ಇವರು ಚಿತ್ರಕಲಾವಿದ, ನಾಟಕಕಾರರೂ ಆಗಿದ್ದರು. 1945ರ ಡಿಸೆಂಬರ್ 7ರಂದು ಉಡುಪಿಯಲ್ಲಿ ಜನಿಸಿದ ಆಚಾರ್ಯ ಅವರ ತಂದೆ ವಿಠಲಾಚಾರ್ಯ ಮತ್ತು ತಾಯಿ ರುಕ್ಮಿಣಿ. ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಆರ್ಯ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಮತ್ತು ಸ್ನಾತಕೋತ್ತರ (ಸಂಸ್ಕೃತ) ಪದವಿ ಪಡೆದಿದ್ದರು. 1963ರಲ್ಲಿ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಸ್ವಾಮೀಜಿಯಾಗಿ ಸನ್ಯಾಸತ್ವ ಸ್ವೀಕರಿಸಿದ್ದರು. 1973ರಲ್ಲಿ ಸನ್ಯಾಸತ್ವ ಬಿಡುವುದರ ಜೊತೆಗೆ ಮಠದ ವ್ಯವಸ್ಥೆಯಿಂದ ಹೊರಬಂದ ಆರ್ಯ ಅವರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿ ಕೆಲಸ ಆರಂಭಿಸಿದರು. 1976ರಲ್ಲಿ ಗೃಹಸ್ಥಾಶ್ರಮ ಸ್ವೀಕರಿಸಿ ಧಾರವಾಡದಲ್ಲಿಯೇ ನೆಲೆ ನಿಂತರು. ಕೇವಲ ಮೂರು ವರ್ಷದ ನಂತರ ಅವರು ಪತ್ನಿ ವಿಯೋಗ ಅನುಭವಿಸಬೇಕಾಯಿತು. ಚಿತ್ರಕಲೆ-ಸಾಹಿತ್ಯ- ನಾಟಕ ಆರ್ಯ ಅವರ ಪ್ರೀತಿಯ ಕಲಾ ಪ್ರಕಾರಗಳು. ಸ್ವಯಂ ಚಿತ್ರಕಲೆಯನ್ನು ಕಲಿತ ಆರ್ಯ ಅವರು ಧಾರವಾಡದ ಮನೋಹರ ಗ್ರಂಥಮಾಲೆಯ ಹಲವಾರು ಗ್ರಂಥಗಳಿಗೆ ಮುಖಪುಟ ರಚಿಸಿದ್ದಾರೆ.…