Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮುಂಬಯಿಯ ಕವಯಿತ್ರಿ ಜಯಲಕ್ಷ್ಮೀ ಎಸ್. ಜೋಕಟ್ಟೆಯವರ ‘ಕವಿತೆಗಳು’ ಕವನ ಸಂಕಲನವು ಅವರ ಹುಟ್ಟುಹಬ್ಬದ ದಿನವಾದ ದಿನಾಂಕ 03 ಜನವರಿ 2026ರಂದು ಎಸ್.ಡಿ.ಎಂ. ಕಾನೂನು ಕಾಲೇಜಿನ ಸಭಾಗೃಹದಲ್ಲಿ ಬಿಡುಗಡೆಗೊಂಡಿತು. ಕವಿತಾಸಂಕಲನ ಬಿಡುಗಡೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿ, “ಜಯಲಕ್ಷ್ಮೀ ಇವರ ಹುಟ್ಟುಹಬ್ಬದಂದೇ ಅವರ ಚೊಚ್ಚಲ ಕವಿತಾ ಸಂಕಲನ ಕನ್ನಡ ಸಾಹಿತ್ಯ ಪರಿಷತ್ತು ವೇದಿಕೆಯಿಂದ ಬಿಡುಗಡೆ ಅಗುತ್ತಿರುವುದು ಸಂತೋಷವಾದರೆ ಅವರು ಇಂದು ನಮ್ಮ ಜೊತೆಗಿಲ್ಲ ಅನ್ನುವುದಕ್ಕೆ ದುಃಖವೂ ಆಗುತ್ತಿದೆ. ಮುಂಬಯಿಯಲ್ಲಿ ಸಕ್ರಿಯ ಪತ್ರಕರ್ತರಾಗಿರುವ ಅವರ ಪತಿ ಶ್ರೀನಿವಾಸ ಜೋಕಟ್ಟೆಯವರು ನನಗೆ ಮೂರು ದಶಕಗಳಿಂದ ಪರಿಚಿತರು. ಮುಂಬಯಿಯ ಸಾಹಿತ್ಯ ವಲಯವನ್ನು ನಾವು ಮರೆಯುವಂತಿಲ್ಲ, ಅಲ್ಲಿನ ವಿವಿ ಕನ್ನಡ ವಿಭಾಗದ ವಿದ್ಯಾರ್ಥಿ ನಾನು. ಅಲ್ಲಿನವರ ನಾಡಪ್ರೇಮ ಶ್ಲಾಘನೀಯ” ಎಂದು ಹೇಳಿದರು.…
ಹೊನ್ನಾವರ : ಬಡಗುತಿಟ್ಟಿನ ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಪರಂಪರೆಯಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದ ಹಿರಿಯ ಯಕ್ಷಗಾನ ಭಾಗವತ ಕಡತೋಕಾ ಲಕ್ಷ್ಮೀನಾರಾಯಣ ಭಾಗವತ (98) ಇವರು ದಿನಾಂಕ 05 ಜನವರಿ 2026ರಂದು ನಿಧನ ರಾಗಿದ್ದಾರೆ. ಇವರ ನಿಧನದಿಂದ ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ. ಮೃತರು ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಡತೋಕಾ ಗ್ರಾಮದವರಾಗಿದ್ದ ಲಕ್ಷ್ಮೀನಾರಾಯಣ ಭಾಗವತರು, ಯಕ್ಷಗಾನ ಲೋಕದ ಸವ್ಯಸಾಚಿ ಎಂದೇ ಖ್ಯಾತರಾಗಿದ್ದ ಮಂಜುನಾಥ ಭಾಗವತರ ಹಿರಿಯ ಸಹೋದರರಾಗಿದ್ದರು. ವೃತ್ತಿಯಿಂದ ಕಡತೋಕಾ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು, ಕಲೆ ಮತ್ತು ಬದುಕನ್ನು ಸಮನ್ವಯಗೊಳಿಸಿದ ಅಪರೂಪದ ವ್ಯಕ್ತಿತ್ವವಾಗಿದ್ದರು. ಸ್ವಲ್ಪ ಕಾಲ ವೇಷಧಾರಿಯಾಗಿ ಕೆರೆಮನೆ ಶಿವರಾಮ ಹೆಗಡೆಯವರ ಜತೆ ಪಾತ್ರ ಮಾಡಿದ್ದರು. ಕರ್ಕಿ ಮೇಳದ ಪ್ರಮುಖ ಭಾಗವತರಾಗಿ ಗುರುತಿಸಿಕೊಂಡಿದ್ದ ಅವರು, ಸುಮಾರು 50 ವರ್ಷಕ್ಕೂ ಅಧಿಕ ಕಾಲ ಯಕ್ಷಗಾನ ಭಾಗವತಿಕೆಯಲ್ಲಿಯೇ ತೊಡಗಿಸಿಕೊಂಡಿದ್ದರು. ಅನೇಕ ಶಿಷ್ಯರನ್ನು ತಯಾರಿಸಿ, ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಯಕ್ಷಗಾನ…
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಹಿರಿಯ ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಅಧ್ಯಕ್ಷತೆಯಲ್ಲಿ ಮಂಗಳೂರು ತಾಲೂಕು ‘ಬ್ಯಾರಿ ಸಾಹಿತ್ಯ ಸಮ್ಮೇಳನ’ವು ದಿನಾಂಕ 04 ಜನವರಿ 2026ರಂದು ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ನಡೆಯಿತು. ಗಾಯಕ ಶರೀಫ್ ನಿರ್ಮುಂಜೆ ಧ್ಯೇಯ ಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ರಾಜೇಶ್ ಸ್ವಾಗತಿಸಿ, ಯು.ಕೆ. ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಗುರುಪುರ ಕೈಕಂಬದ ಸಬೀಲುಲ್ ಹುದಾ ಅಲ್ಬಿರ್ ಶಾಲಾ ವಠಾರದಿಂದ ಸಭಾಂಗಣದವರೆಗೆ ಸಮ್ಮೇಳನಾಧ್ಯಕ್ಷ ಮೆರವಣಿಗೆ ನಡೆಯಿತು. ಸ್ವಾಗತ ಸಮಿತಿ ಗೌರವಾಧ್ಯಕ್ಷ ಎಂ.ಹೆಚ್. ಮೊಹಿದಿನ್ ಅಡ್ಡೂರು ಉದ್ಘಾಟಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಎಚ್. ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನಾಧ್ಯಕ್ಷರ ಭಾಷಣ ಮೇಲೆ ಚರ್ಚಾ ಗೋಷ್ಠಿ, ಬ್ಯಾರಿ ಕವಿಗೋಷ್ಠಿ, ದಫ್ ಮತ್ತು ಬ್ಯಾರಿ ಹಾಡುಗಳ ಸಂಭ್ರಮ ನಡೆದವು. ಸಮಾರೋಪದಲ್ಲಿ ನಾನಾ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.…
ಮಂಗಳೂರು : ನೃತ್ಯ ಸುಧಾ (ರಿ.) ಮಂಗಳೂರು – ಉಡುಪಿ ಇದರ ವತಿಯಿಂದ ಇಪ್ಪತ್ತೊಂದು ಸಂವತ್ಸರಗಳ ನೃತ್ಯ ಪಯಣದ ಮೆಲುಕು ‘ನೃತ್ಯ ಸುಧಾರ್ಪಣಂ -2026’ ಕಾರ್ಯಕ್ರಮವನ್ನು ದಿನಾಂಕ 11 ಜನವರಿ 2026ರಂದು ಸಂಜೆ 4-30 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಂಗಳೂರು ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್, ಕದ್ರಿ ನೃತ್ಯ ವಿದ್ಯಾನಿಲಯದ ನಿರ್ದೇಶಕರಾದ ಗುರು ವಿದ್ವಾನ್ ಯು.ಕೆ. ಪ್ರವೀಣ್ ರಾವ್ ಮತ್ತು ಭರತಾಂಜಲಿಯ ನಿರ್ದೇಶಕರಾದ ಗುರು ವಿದುಷಿ ಪ್ರತಿಮಾ ಶ್ರೀಧರ್ ಇವರುಗಳು ಅಭ್ಯಾಗತರಾಗಿ ಭಾಗವಹಿಸಲಿದ್ದು, ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ.
ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) ಶಿವಮೊಗ್ಗ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.) ಶಿವಮೊಗ್ಗ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿವಮೊಗ್ಗ ಇವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಇಪ್ಪತ್ತೊಂದನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 08 ಜನವರಿ 2026ರಂದು ಬೆಳಗ್ಗೆ 10-30 ಗಂಟೆಗೆ ಶಿವಮೊಗ್ಗ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀಕಾಂತ ಪಿ.ಬಿ. ಇವರು ಈ ಸಮ್ಮೇಳನವನ್ನು ಉದ್ಘಾಟನೆ ಮಾಡಲಿದ್ದು, ಕುಮಾರಿ ಹಂಸಿಕಾ ಜೆ. ತಮ್ಮಡಿಹಳ್ಳಿ ಇವರು ಸಮ್ಮೇಳನ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಿ. ಮಂಜುನಾಥ ಇವರು ಆಶಯ ಮಾತುಗಳನ್ನಾಡಲಿದ್ದಾರೆ. ರಾಷ್ಟ್ರಕವಿ ಕುವೆಂಪು ಇವರು ಬರೆದ ‘ಬೊಮ್ಮನಹಳ್ಳಿಯ ಕಿಂದರ ಜೋಗಿ’ ಶತಮಾನದ ಸಂಭ್ರಮ ಪ್ರಯುಕ್ತ ಶಿವಮೊಗ್ಗ ಸಹ್ಯಾದ್ರಿ ರಂಗ ತರಂಗ ತಂಡದವರಿಂದ ಮಂಜುನಾಥ ತೇಜಸ್ವಿನಿ ಇವರ ನಿರ್ದೇಶನದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಕವಯತ್ರಿ ಕುಮಾರಿ ರುಕ್ಮಿಣಿ ಬಿ.ಎಲ್. ಇವರ ಅಧ್ಯಕ್ಷತೆಯಲ್ಲಿ…
ಬೆಂಗಳೂರು : ಖ್ಯಾತ ‘ನಾಟ್ಯ ಕಲಾಕ್ಷೇತ್ರ’ (ಹೆಬ್ಬಾಳ) ನೃತ್ಯಸಂಸ್ಥೆಯ ನೃತ್ಯಗುರು ಹಾಗೂ ನೃತ್ಯ ಕಲಾವಿದ ಪ್ರಶಾಂತ್ ಗೋಪಾಲ್ ಶಾಸ್ರೀ ಇವರು ಬದ್ಧತೆಗೆ ಇನ್ನೊಂದು ಹೆಸರು. ಇಂದಿನ ಪುರುಷ ನರ್ತಕರಲ್ಲಿ ಗಮನಾರ್ಹರಾಗಿರುವ ಪ್ರಶಾಂತ್ ಉತ್ತಮ ನೃತ್ಯ ಕಲಾವಿದರಾಗಿದ್ದು, ತಮ್ಮ ಶಿಷ್ಯರನ್ನೂ ಆ ದಿಸೆಯಲ್ಲಿ ಉತ್ತಮವಾಗಿ ತಯಾರು ಮಾಡುತ್ತಿರುವ ನುರಿತ ಉತ್ತಮ ಗುರುವೂ ಹೌದು. ಇಂಥವರ ಸಮರ್ಥ ಗರಡಿಯಲ್ಲಿ ರೂಪುಗೊಂಡ ನೃತ್ಯಶಿಲ್ಪ ಶ್ರೀಮತಿ ಎಂ.ಎಸ್. ಕೀರ್ತನಾ ತನ್ನ 7ನೆಯ ವಯಸ್ಸಿನಿಂದಲೇ ನೃತ್ಯ ಕಲಿಯುತ್ತ ನಾಡಿನಾದ್ಯಂತ ಅನೇಕ ಪ್ರತಿಷ್ಠಿತ ವೇದಿಕೆ- ದೇವಾಲಯಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾಳೆ. ಎಂ.ಬಿ.ಎ. ಪದವೀಧರೆಯಾದ ಕೀರ್ತನಾ ಚಿತ್ರಕಲೆ, ಸಂಗೀತ, ಸಮಾಜಸೇವೆ ಇನ್ನಿತರ ಉತಮ ಹವ್ಯಾಸಗಳನ್ನು ಬೆಳೆಸಿಕೊಂಡಿರುವ ಬಹುಮುಖ ಪ್ರತಿಭೆಯಾದ ಇವಳು ಕಳೆದ 17 ವರ್ಷಗಳಿಂದ ಅತ್ಯಂತ ಆಸಕ್ತಿಯಿಂದ ಭರತನಾಟ್ಯಾಭ್ಯಾಸ ಮಾಡುತ್ತಿದ್ದು, ಗುರು ಪ್ರಶಾಂತ್ ಶಾಸ್ತ್ರಿಯವರ ಉನ್ನತ ಮಾರ್ಗದರ್ಶನದಲ್ಲಿ ಮುಂದುವರೆಯುತ್ತಿದ್ದಾಳೆ. ಆತ್ಮವಿಶ್ವಾಸದಿಂದ ನೃತ್ಯದ ವಿವಿಧ ಆಯಾಮಗಳನ್ನು ಮೈಗೂಡಿಸಿಕೊಂಡಿರುವ ಇವಳು ಇದೀಗ ತನ್ನ ಮೊದಲ ಏಕವ್ಯಕ್ತಿ ಕಲಾಪ್ರದರ್ಶನಕ್ಕೆ ಸಿದ್ಧಳಾಗಿದ್ದಾಳೆ. ಕೀರ್ತನಳ ನೃತ್ಯ…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ಕರಾವಳಿ ಉತ್ಸವ ಪ್ರಯುಕ್ತ ಮಂಗಳೂರಿನ ಶರಧಿ ಪ್ರತಿಷ್ಠಾನ ಆಯೋಜಿಸುವ, ಅಸ್ತ್ರ ಗೋಲ್ಡ್ ಮತ್ತು ಡೈಮಂಡ್ಸ್ ಸಹಕಾರದೊಂದಿಗೆ ‘ಕಲಾಪರ್ಬ’ ಚಿತ್ರ- ಶಿಲ್ಪ- ಸಾಂಸ್ಕೃತಿಕ ಮೇಳವು ಕದ್ರಿ ಪಾರ್ಕಿನಲ್ಲಿ ದಿನಾಂಕ 09ರಿಂದ 11 ಜನವರಿ 2026ರವರೆಗೆ ನಡೆಯಲಿದೆ ಎಂದು ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಎಸ್.ಎಂ. ಶಿವಪ್ರಕಾಶ್ ತಿಳಿಸಿದ್ದಾರೆ. ದಿನಾಂಕ 06 ಜನವರಿ 2026ರಂದು ಕದ್ರಿ ಪಾರ್ಕಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ “ಈಗಾಗಲೇ 120 ಮಳಿಗೆಗಳಲ್ಲಿ ರಾಜ್ಯಾದ್ಯಂತ ಕಲಾವಿದರ ಸಾವಿರಾರು ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ ಮಕ್ಕಳಿಗಾಗಿ ಚಿತ್ರ ಕಲಾಸ್ಪರ್ಧೆ ನಡೆಯಲಿದೆ. ಕಲಾವಿದರಿಗೆ ಉತ್ತೇಜನ ಸಿಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಉತ್ಸವದಲ್ಲಿ ದೇಶದ 120ಕ್ಕೂ ಅಧಿಕ ಕಲಾವಿದರು ಪಾಲ್ಗೊಳ್ಳಲಿದ್ದು 5,000ಕ್ಕೂ ಅಧಿಕ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ” ಎಂದು ಹೇಳಿದರು. ದಿನಾಂಕ 09 ಜನವರಿ 2026ರಂದು ಸಂಜೆ ಗಂಟೆ 5-30ಕ್ಕೆ ಕಲಾ ಪರ್ಬ ಉದ್ಘಾಟನೆ, ಮಳಿಗೆಗಳ ಉದ್ಘಾಟನೆ ಹಾಗೂ ಶಿಲ್ಪಕಲಾ ಮಳಿಗೆಗಳ ಉದ್ಘಾಟನೆ,…
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮಂಗಳ ಗಂಗೋತ್ರಿ ಇವರ ಆಶ್ರಯದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 07 ಜನವರಿ 2026ರಂದು ಅಪರಾಹ್ನ 2-30 ಗಂಟೆಗೆ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ಬಿ.ಎ. ವಿವೇಕ ರೈ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜಶ್ರೀ ಟಿ. ರೈ ಪೆರ್ಲ ಇವರ ‘ನೀ ಮಾಯೆಯೋ ನಿನ್ನೊಳು ಮಾಯೆಯೋ’ ಎಂಬ ಕಥಾ ಸಂಕಲನ ಲೋಕಾರ್ಪಣೆಗೊಳ್ಳಲಿದೆ. ಮಂಗಳೂರು ವಿಶ್ವವಿದ್ಯಾನಿಲಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ನಾಗಪ್ಪ ಗೌಡ ಆರ್. ಇವರು ಕೃತಿ ಬಿಡುಗಡೆ ಮಾಡಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ. ಸೋಮಣ್ಣ ಹೊಂಗಳ್ಳಿ ಇವರು ಕೃತಿ ಪರಿಚಯ ಮಾಡಲಿದ್ದಾರೆ.
ಮಂಗಳೂರು : ಮಹಾಲಸಾ ಕಾಲೇಜ್ ಆಫ್ ವಿಶುವಲ್ ಆರ್ಟ್ಸ್ ಇದರ ಅಪ್ಲೈಡ್ ಆರ್ಟ್ಸ್ ವಿಭಾಗದ ಮುಖ್ಯಸ್ಥ ಹಾಗೂ ಪ್ರಸಿದ್ದ ಚಿತ್ರಕಲಾವಿದ ಸಯ್ಯದ್ ಆಸಿಫ್ ಅಲಿ (53) ಹೃದಯಾಘಾತದಿಂದ ದಿನಾಂಕ 05 ಜನವರಿ 2026ರಂದು ನಿಧನ ಹೊಂದಿದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಿತ್ರಕಲಾ ಕಾಲೇಜಿನಲ್ಲಿದ್ದ ಅವರಿಗೆ ತೀವ್ರ ಹೃದಯಾಘಾತವಾಗಿದ್ದು ತತ್ಕ್ಷಣ ಸಹೋದ್ಯೋಗಿಗಳು ಕರಂಗಲಪಾಡಿಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರು ಆದರೆ ದಾರಿಮಧ್ಯೆ ಅವರು ಕೊನೆಯುಸಿರೆಳೆದರು. ಅವರ ಪತ್ನಿ 10 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದು, ಮಗಳು ದುಬೈಯಲ್ಲಿ ಉದ್ಯೋಗದಲ್ಲಿದ್ದು ಹಾಗೂ ಮಗ ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಕಲಿಯುತ್ತಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಲೂರಿನವರಾದ ಅವರು, ಮಂಗಳೂರಿನ ಭಗವತಿ ನಗರದ ನಿವಾಸಿಯಾಗಿದ್ದರು. ತುಮಕೂರಿನ ಆರ್.ಕೆ.ಎನ್. ಚಿತ್ರಕಲಾ ವಿದ್ಯಾಲಯದಲ್ಲಿ ಜಿಡಿ ಆರ್ಟ್ ಪದವಿ ಮತ್ತು ಹಂಪಿ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಇನ್ ವಿಷುವಲ್ ಆರ್ಟ್ ಸ್ನಾತಕೋತ್ತರ ಪದವಿ ಪಡೆದಿದ್ದರು. 30 ವರ್ಷಗಳಿಂದ ಮಂಗಳೂರು ಮಹಾಲಸಾ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, ಜಲವರ್ಣ, ಫೋರ್ಟ್ ರೈಟ್ ಚಿತ್ರಕಲಾ ತಜ್ಞರಾಗಿದ್ದರು. ಅಖಿಲ ಭಾರತ ರಾಷ್ಟ್ರಮಟ್ಟದ…
ಉಡುಪಿ : ಹೆಜ್ಜೆ ಗೆಜ್ಜೆ ಫೌಂಡೇಶನ್ (ರಿ.) ಉಡುಪಿ-ಮಣಿಪಾಲ್ ಇದರ ವತಿಯಿಂದ ‘ಪುರಂದರ ಗಾನ ನರ್ತನ’ ಶ್ರೀ ಪುರಂದರ ದಾಸರ ರಚನೆಗಳಿಗೆ ಏಕವ್ಯಕ್ತಿ ಗಾನ ನೃತ್ಯಾರ್ಪಣೆ ಕಾರ್ಯಕ್ರಮವು ದಿನಾಂಕ 03 ಜನವರಿ 2026ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಕಲಾವಿದೆ ವಿದುಷಿ ದೀಕ್ಷಾ ರಾಮಕೃಷ್ಣ ನಿರಂತರ 6 ಗಂಟೆ 13 ನಿಮಿಷ ಪುರಂದರ ದಾಸರ ಗೀತೆ ಹಾಡುತ್ತ ಅದಕ್ಕೆ ತಕ್ಕದಾಗಿ ನರ್ತಿಸುತ್ತ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ (ಜಿಬಿಒಡಬ್ಲ್ಯು) ದಾಖಲಿಸಿದರು. ಜಿಬಿಒಡಬ್ಲ್ಯುವಿನ ಏಷಿಯಾ ಹೆಡ್ ಡಾ. ಮನಿಶ್ ವಿಷ್ಣೋಯಿ ಪ್ರಮಾಣ ಪತ್ರ ವಿತರಿಸಿ “ದೀಕ್ಷಾರವರು ಪುರಂದರ ದಾಸರ ಗೀತೆ ಗಾಯನದ ಜತೆಗೆ ನೃತ್ಯ ಮಾಡಿರುವುದು ವಿಶೇಷವಾದುದು” ಎಂದರು. ದೀಕ್ಷಾ ರಾಮಕೃಷ್ಣರವರು ಮಾತನಾಡಿ “ಭರತನಾಟ್ಯ ಹಾಗೂ ಸಂಗೀತ ಎರಡಲ್ಲೂ ನಾನು ಸಕ್ರಿಯವಾಗಿರುವುದರಿಂದ ಅವೆರಡನ್ನೂ ಒಟ್ಟಿಗೆ ತರಲು ಯೋಚಿಸಿದ್ದೆ. ಹಾಗಾಗಿ ಈ ಪುರಂದರ ಗಾನ ನರ್ತನ ಪರಿಕಲ್ಪನೆ ಮೂಡಿತು. ನಿರಂತರ ಪ್ರಯತ್ನದಿಂದ ಸಾಧ್ಯವಾಗದೆ. ದೇವ ಹಾಗೂ ದೈವ ಶಕ್ತಿಯ…