Author: roovari

ಮಂಗಳೂರು : ಕನ್ನಡ ಭವನ ದಕ್ಷಿಣ ಕನ್ನಡ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ‘ಏಕದಿನ ಸಾಹಿತ್ಯ ಅಭಿಯಾನ’ ಕನ್ನಡದ ನಡಿಗೆ ಶಾಲೆಯ ಕಡೆಗೆ ಪೆರ್ಮುದೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೋಡಿಕೆರೆ ಕುಳಾಯಿ ಇಲ್ಲಿ ದಿನಾಂಕ 01 ಜನವರಿ 2026ರಂದು ನಡೆಯಿತು. ಶಿಕ್ಷಕಿ ಹಾಗೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ರೇಖಾ ಸುದೇಶ್ ರಾವ್ ಕನ್ನಡ ಶಾಲನ್ನು ಹೊದಿಸಿ ಅತಿಥಿ ಅಭ್ಯಾಗತರನ್ನು ಸ್ವಾಗತಗೈದರು. ಶಾಲಾ ಸಂಚಾಲಕರಾದ ಶ್ರೀಯುತ ರಮೇಶ್ ರಾವ್ ಕಾರ್ಯಕ್ರಮ ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಕಾರ್ಯಾಧ್ಯಕ್ಷ ಶ್ರೀ ಉಮೇಶ್ ರಾವ್ ಕುಂಬ್ಳೆ ಪ್ರಸ್ತಾಪಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಕ್ಷಮಾ ಗೌರಿ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಂದ ಮಕ್ಕಳ ಕವನ ವಾಚನ ನೆರವೇರಿತು ಹಾಗೂ ಪೆರ್ಮುದೆ ಶಾಲಾ ವಿಶ್ರಾಂತ ಶಿಕ್ಷಕಿ ಶ್ರೀಮತಿ ಕೃಷ್ಣವೇಣಿ ರಸ ಪ್ರಶ್ನೆ ಕಾರ್ಯಕ್ರಮ ನೆರವೇರಿಸಿದರು. ಸುಮಾರು 20ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಕ್ಷಮಾ ಗೌರಿ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು.…

Read More

ಪೆರ್ಡೂರು : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ವತಿಯಿಂದ ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ‘ಹಿರಿಯೆರೊಟ್ಟಿಗೊಂಜಿ ದಿನ’ ಕಾರ್ಯಕ್ರಮವು ದಿನಾಂಕ 28 ಡಿಸೆಂಬರ್ 2025ರಂದು ಸಂಭ್ರಮದಿಂದ ಜರಗಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ 60ರಿಂದ 96 ವರ್ಷಗಳ ವರೆಗಿನ ನೂರಾರು ಹಿರಿಯ ನಾಗರಿಕರು ಪಾಲ್ಗೊಂಡು ಆಡಿ, ಹಾಡಿ, ನರ್ತಿಸಿ ಸಂಭ್ರಮಿಸಿದ್ದು ಕಾರ್ಯಕ್ರಮ ಅವರಲ್ಲಿ ಹೊಸ ಹುರುಪನ್ನು ನೀಡಿತು. ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭ ಪ್ರತೀಕ್ಷಾ ಕೋಟ್ಯಾನ್ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮದ ಮುಖಂಡರೂ, ಸಮಿತಿಯ ಗೌರವಾಧ್ಯಕ್ಷರೂ ಆದ ಶಾಂತಾರಾಮ ಸೂಡ “ಇಂದು ಹಲವಾರು ಮುಂದುವರಿದ ಕುಟುಂಬಗಳಲ್ಲಿ ವೃದ್ಧಾಪ್ಯ ಎನ್ನುವುದು ಶಾಪವಾಗಿ ಪರಿಣಮಿಸಿದೆ. ಒಂದು ರೀತಿಯಲ್ಲಿ ನೀರಸ ಜೀವನವಾಗಿ ಹೆಚ್ಚಿನವರು ಮನರಂಜನೆಯಿಂದ ವಂಚಿತರಾಗಿದ್ದಾರೆ. ಅಂತಹ ಹಿರಿಯರಿಗೆ ಜೀವನೋತ್ಸಾಹ ತುಂಬಲು ಇಂತಹ ಕಾರ್ಯಕ್ರಮಗಳು ಅತೀ ಅಗತ್ಯವಾಗಿವೆ. ಈ ಸಮಿತಿ ಸಮಾಜದ ಕೊರತೆಗಳನ್ನು ಗಮನದಲ್ಲಿರಿಸಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಹೊಸತನವನ್ನು ನೀಡುತ್ತಿರುವುದು ಸಂತಸದ ಸಂಗತಿ” ಎಂದರು. ಸಂಜೆ ನಡೆದ ಸಮಾರೋಪ…

Read More

ಬಲಿ (ದೀಪಾವಳಿ) ಕಾಡು ಪ್ರಾಣಿ ಹಾವಳಿಗೆ ಗದ್ದೆ ತೋಟ ಬಲಿ ವೋಟಿನ ಆಸೆಗಾಗಿ ರಾಜ್ಯದ ಹಿತ ಬಲಿ ಆಧುನಿಕತೆಯ ರಭಸದಲ್ಲಿ ಮನ:ಶಾಂತಿ ಬಲಿ ಇವನೆಲ್ಲ ನೋಡಿ ಕಳವಳಗೊಂಡನು ಬಲಿ ! ದಾಂಪತ್ಯ ಸರಿಯಾಗಿ ಸಾಗಿದರೆ ಹಾಲ್ಜೇನು ಸತ್ಯ ಕಿರಿ ಕಿರಿಯು ಇದ್ದರದು ನರಕವೇ ನಿತ್ಯ ಅರಿತು ಬಾಳಲು ಬಾಳು ಅರಳಿರುವ ಸುಮವು ಅದರ ಗಂಧದ ಘಮವು ಸಗ್ಗಕ್ಕೆ ಸಮವು ! ಸರ್ದಾರ್ ವಲ್ಲಭ ಭಾಯ್ ಪಟೇಲ್ ದೇಶದೇಕತೆಗಾಗಿ ನೀವ್ ಟೊಂಕ ಕಟ್ಟಿ ಬದ್ಧತೆಯ ಮೌಲ್ಯದಿಂ ಮನ ಮನವ ಮುಟ್ಟಿ ದೃಢ ಚಿತ್ತ ಗುರಿಯತ್ತ ಎಂದೆಂದು ಗಟ್ಟಿ ಭವ್ಯ ಭವಿತವ್ಯಕ್ಕೆ ನೀಡಿ ಹೊಸ ದಿಟ್ಟಿ ! ಕನ್ನಡ ನಾಡು ಅನ್ನ ನೀಡಿದೆ ಚಿನ್ನ ನೀಡಿದೆ ಎನ್ನ ತನವನು ನೀಡಿದೆ ಚೆನ್ನ ಬಾಳಿಗೆ ಬೆಳಕ ನೀಡುವ ಹೊನ್ನಿನಕ್ಷರ ಕಲಿಸಿದೆ ನಿನ್ನ ಉನ್ನತ ಹಿರಿಮೆ ಗರಿಮೆಯ ಮುನ್ನ ಎಲ್ಲೆಡೆ ಸಾರಿದೆ ಕನ್ನಡಮ್ಮನೆ ನಿನ್ನ ಇದಿರಲಿ ಎನ್ನ ತಲೆಯಿದು ಬಾಗಿದೆ ! ನಮನ ಮಡಿಲಲ್ಲಿ ಮುದ್ದಿಸುತ ಸಿಹಿ…

Read More

ಪುತ್ತೂರು : ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಹಾಗೂ ಹಿಂದಿ ಉಪನ್ಯಾಸಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸಾಹಿತಿ ಡಾ. ವಿಷ್ಣು ಕೆ. ಇವರು ರಚಿಸಿರುವ ಮೂರು ಕೃತಿಗಳ ಲೋಕಾರ್ಪಣಾ ಸಮಾರಂಭವು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಸಹಕಾರದೊಂದಿಗೆ ದಿನಾಂಕ 27 ಡಿಸೆಂಬರ್ 2025ರಂದು ಪುತ್ತೂರಿನ ಅನುರಾಗ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು. ‘ಮೋದಿಜೀ ನಮ್ಮ ಮನೆಗೆ ಬಂದರು – ಅಂತರಾತ್ಮದ ಭೇಟಿ’ ಎಂಬ ವಿಶಿಷ್ಟ ಕೃತಿಯನ್ನು ನಿವೃತ್ತ ಪ್ರಾಂಶುಪಾಲರಾದ ಡಾ. ಎನ್. ಪರಮೇಶ್ವರ ಭಟ್ ಇವರು, ಮನೋವೈಜ್ಞಾನಿಕ ಕಥಾಸಂಕಲನ ‘ಅಂತರ್ಯುದ್ಧ’ ಕೃತಿಯನ್ನು ಪ್ರಾಧ್ಯಾಪಕರಾದ ಪ್ರೊ. ಹರಿನಾರಾಯಣ ಮಾಡಾವು ಇವರು, ಕನ್ನಡಕ್ಕೆ ಭಾಷಾಂತರಿಸಿದ ‘ಐತರೇಯೋಪನಿಷದ್’ ಕೃತಿಯನ್ನು ಬೆಟ್ಟಂಪಾಡಿ ಸರ್ಕಾರಿ ಪ್ರೌಢಶಾಲೆಯ ಸಹಾಯಕ ಶಿಕ್ಷಕಿ ಕುಮಾರಿ ಉಮಾ ಇವರು ಲೋಕಾರ್ಪಣೆ ಮಾಡಿದರು. ವಿವೇಕಾನಂದ ಸ್ವಾಯತ್ತೆ ಕಾಲೇಜಿನ ಪರೀಕ್ಷಾಂಗ ಕುಲ ಸಚಿವರಾದ ಡಾ ಶ್ರೀಧರ್ ಎಚ್.ಜೀ. ಇವರು ಮಾತೃದೇವೋಭವ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ದೀಪ ಪ್ರಜ್ವಲನ, ಅತಿಥಿಗಳಿಗೆ…

Read More

ಕಾಸರಗೋಡು : ಕವಿ, ಸಾಹಿತಿ, ವಿದ್ವಾಂಸ, ಸಾಹಿತ್ಯ ಸಂಘಟಕ ಹಾಗೂ ಮಾಧ್ಯಮತಜ್ಞ ಡಾ. ವಸಂತಕುಮಾರ ಪೆರ್ಲ ಇವರಿಗೆ ಕನ್ನಡ ಭವನ ಕೊಡಮಾಡುವ ಪ್ರತಿಷ್ಠಿತ ‘ಗೋವಿಂದ ಪೈ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ ಘೋಷಣೆಯಾಗಿದೆ. ಡಾ. ಪೆರ್ಲ ಇವರು ಗಡಿನಾಡಾದ ಕಾಸರಗೋಡಿನವರಾಗಿದ್ದು, ಕಳೆದ ಐವತ್ತು ವರ್ಷಗಳಿಂದ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ  ನಿರಂತರ ದುಡಿಯುತ್ತಿದ್ದಾರೆ. ಸಾಹಿತ್ಯದ ನಾನಾ ವಿಭಾಗಗಳಲ್ಲಿ, ಕನ್ನಡ, ತುಳು, ಇಂಗ್ಲೀಷ್ ಮತ್ತು ಹವ್ಯಕ ಭಾಷೆಯಲ್ಲಿ ಇದುವರೆಗೆ 55ಕ್ಕೆ ಮೇಲ್ಪಟ್ಟು ಕೃತಿ ರಚನೆ ಮಾಡಿದ್ದಾರೆ. ಸಾಹಿತ್ಯ ರಚನೆ, ಸಂಘಟನೆ, ಸಂವರ್ಧನೆ, ಕಿರಿಯರಿಗೆ ಪ್ರೋತ್ಸಾಹ ಹೀಗೆ ಕನ್ನಡ ನಾಡುನುಡಿಯನ್ನು ಕಟ್ಟುವ ಎಲ್ಲ ಕ್ಷೇತ್ರಗಳಲ್ಲಿ ದುಡಿದು ಓರ್ವ ಸಾಧಕರಾಗಿದ್ದಾರೆ. ಸಾಹಿತ್ಯದ ನಾನಾ ಪ್ರಕಾರಗಳಲ್ಲಿ – ಅಂದರೆ ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಸಂಪಾದನೆ, ಪ್ರಬಂಧ, ವ್ಯಕ್ತಿಚಿತ್ರ, ಪ್ರವಾಸ ಕಥನ, ಅನುವಾದ ಮೊದಲಾದ ಕ್ಷೇತ್ರಗಳಲ್ಲಿ ಇವರ ಕೃತಿ ರಚನೆಯ ವ್ಯಾಪ್ತಿಯಿದ್ದು, ಇವರ ಕೆಲವು ರಚನೆಗಳು ತುಳು, ಕೊಂಕಣಿ, ಮಲಯಾಳಂ, ತಮಿಳು, ತೆಲುಗು, ಹಿಂದಿ, ಪಂಜಾಬಿ, ನೇಪಾಳಿ ಮತ್ತು ಇಂಗ್ಲೀಷ್…

Read More

ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ರಂಗಾಯಣ ಕಲಬುರಗಿ ಇವರ ಸಹಯೋಗದೊಂದಿಗೆ ‘ಕಾಲಚಕ್ರ’ ನಾಟಕ ಪ್ರದರ್ಶನವನ್ನು ದಿನಾಂಕ 02 ಜನವರಿ 202ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ರಂಗಸಮಾಜ ಸದಸ್ಯರಾದ ಶಶಿಧರ್ ಭಾರಿಘಾಟ್ ಮತ್ತು ಡಾ. ಕೆ. ರಾಮಕೃಷ್ಣಯ್ಯ ಇವರು ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹುಲಗಪ್ಪ ಕಟ್ಟಿಮನಿ ಇವರ ನಿರ್ದೇಶನದಲ್ಲಿ ರಂಗಾಯಣ ಕಲಬುರಗಿ ತಂಡದವರು ನಾಟಕ ಪ್ರದರ್ಶನ ನೀಡಲಿದ್ದಾರೆ.

Read More

ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಹಾಗೂ ಬಲ್ಮಠ ಸರಕಾರಿ ಪದವಿಪೂರ್ವ ಬಾಲಕಿಯರ ಕಾಲೇಜು ಇವರ ಸಹಯೋಗದಲ್ಲಿ 116ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮವು ದಿನಾಂಕ 30 ಡಿಸೆಂಬರ್ 2025ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ವನಿತಾ ದೇವಾಡಿಗ ಇವರು ವಹಿಸಿದ್ದು, ಮುಖ್ಯ ಸಂಪನ್ಮೂಲ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ.ಎನ್. ಹಾಗೂ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಹಾಗೂ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಶಕುಂತಳ ಶೆಟ್ಟಿ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕಿ ಲೇಖಕಿ ಸುಧಾ ನಾಗೇಶ್ ಕಾರ್ಯಕ್ರಮ ನಿರೂಪಿಸಿ, ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಯಶೋಧರವರು ವಂದಿಸಿದರು.

Read More

ಉಡುಪಿ : ರಂಗಭೂಮಿ ಉಡುಪಿ ವತಿಯಿಂದ ‘ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ’ ಕಾರ್ಯಕ್ರಮವು ದಿನಾಂಕ 29 ಡಿಸೆಂಬರ್ 2025ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಉದ್ಘಾಟನೆಗೊಂಡಿತು. ಈ ವರ್ಷದ ‘ರಂಗಭೂಮಿ ರಂಗಶಿಕ್ಷಣ’ ಅಭಿಯಾನದಲ್ಲಿ ಉಡುಪಿ ನಗರದ ಆಯ್ದ 11 ಪ್ರೌಢಶಾಲೆಗಳ 250ಕ್ಕೂ ಅಧಿಕ ಮಕ್ಕಳ ಭಾಗವಹಿಸುವಿಕೆಯಲ್ಲಿ 11 ಹೆಸರಾಂತ ನಿರ್ದೇಶಕರಿಂದ ತಯಾರಾದ 11 ಕಿರು ನಾಟಕಗಳು ಪ್ರದರ್ಶನಗೊಳ್ಳಲಿದೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಂಗಭೂಮಿ ಉಡುಪಿ ಅಧ್ಯಕ್ಷರು ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ “ಮಕ್ಕಳಲ್ಲಿ ರಂಗ ಪ್ರಜ್ಞೆ ಬೆಳೆಸುವ ಮೂಲಕ ನೈತಿಕ ಮೌಲ್ಯಗಳ ತಳಹದಿಯಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ರಂಗ ಶಿಕ್ಷಣದಿಂದ ಮಕ್ಕಳಲ್ಲಿ ಮನೋವಿಕಾಸ, ಎಲ್ಲರ ಮುಂದೆ ಮಾತನಾಡುವ ಧೈರ್ಯ, ಭಾಷಾ ಜ್ಞಾನ ಜೊತೆಗೆ ಬದುಕನ್ನು ಎದುರಿಸುವ ಜೀವನ ಮೌಲ್ಯಗಳ ಪಾಠ ದೊರೆಯುತ್ತದೆ. ಮುಂದೆ ಅವರು ಕಲಾವಿದರಾಗುತ್ತಾರೋ ಬಿಡುತ್ತಾರೋ ಅವರಿಗೆ ಬಿಟ್ಟ ವಿಷಯ. ಆದರೆ ಒಂದು ಸುಸಂಸ್ಕೃತ ಸಮಾಜ…

Read More

ಬದಿಯಡ್ಕ : ಕಾಸರಗೋಡಿನ ಬದಿಯಡ್ಕ ಬಳಿಯ ವೀಣಾವಾದಿನಿ ಸಂಗೀತ ವೈದಿಕ ತಾಂತ್ರಿಕ ವಿದ್ಯಾಪೀಠದ ನಾಲ್ಕು ದಿವಸಗಳ ವಾರ್ಷಿಕೋತ್ಸವದ ಶುಭ ಸಮಾರಂಭವು ದಿನಾಂಕ 25 ಡಿಸೆಂಬರ್ 2025ರಂದು ಜರಗಿತು. ಬೆಳಗ್ಗೆ ಬ್ರಹ್ಮಶ್ರೀ ಅನಂತ ಭಟ್ ಚೂರಿಕ್ಕೋಡು ಇವರಿಂದ ಶ್ರೀ ಮಹಾಗಣಪತಿ ಹೋಮ, ಬ್ರಹ್ಮಶ್ರೀ ರಾಧೇಶ್ಯಾಮ್ ಪರಂಬರ ಇವರಿಂದ ಲಕ್ಷಾರ್ಚನೆ ಸೇವೆ, ಬ್ರಹ್ಮಶ್ರೀ ಬಾಲಕೃಷ್ಣ ಭಟ್ ಇವರಿಂದ ಚಕ್ರಾಬ್ಜ ಪೂಜೆ ಹಾಗೂ ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ ಇವರಿಂದ ನವಗ್ರಹ ಪೂಜೆ ಮುಂತಾದ ವೈದಿಕ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನೆರವೇರಿತು. ನವಗ್ರಹ ಪೂಜಾ ವಿಧಿಯ ಸಂದರ್ಭದಲ್ಲಿ ವೀಣಾವಾದಿನಿಯ ಸಂಸ್ಥಾಪಕರೂ ಗುರುಗಳೂ ಆದ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಮತ್ತು ಶಿಷ್ಯವೃಂದದವರಿಂದ ನವಗ್ರಹ ಕೃತಿಗಳ ಆಲಾಪನೆಯು ವಿಶೇಷ ಆಕರ್ಷಣೆಯಾಗಿತ್ತು. ಹಾಡುಗಾರಿಕೆಗೆ ವಯಲಿನ್ ನಲ್ಲಿ ಕುಮಾರಿ ಧನಶ್ರೀ ಶಬರಾಯ ಹಾಗೂ ಮೃದಂಗದಲ್ಲಿ ಚೇರ್ತಲ ಕೃಷ್ಣ ಕುಮಾರ್ ಸಹಕರಿಸಿದರು. ವಾರ್ಷಿಕೋತ್ಸವದ ಎರಡನೆಯ ದಿನದ ಕಾರ್ಯಕ್ರಮವು ದಿನಾಂಕ 26 ಡಿಸೆಂಬರ್ 2025ರಂದು ಪೂರ್ವಾಹ್ನ ಘಂಟೆ 6-30ಕ್ಕೆ ಮಹಾಗಣಪತಿ ಹೋಮದೊಂದಿಗೆ ಪ್ರಾರಂಭಗೊಂಡು…

Read More

ಅಮ್ಮ ನಿನ್ನ ನೆನಪೆ ನನ್ನ ಬಾಳಿಗೊಂದು ಶಕ್ತಿ ಮರೆಯಲೆಂತು ಉಣಿಸಿ ಉಳಿಸಿ ಕೊಟ್ಟು ಹೋದ ಪ್ರೀತಿ ||ಪ.|| ಅಂಕೆಯಿರದೆ ಕಟ್ಟಿಕೊಂಡೆ ಕಣ್ಣತುಂಬ ಕನಸು ಶಂಕೆಯಿರದೆ ನೋಡಿಕೊಂಡೆ ಆಗಲೆಂದು ನನಸು| ಮೌನದಲ್ಲೆ ಪುಳಕಗೊಂಡೆ ಕಂಡು ಮಡಿಲ ಸೊಗಸು ಬಿಂಕದಿಂದ ಹೇಳಿಕೊಂಡೆ ಅದುವೆ ನನ್ನ ಕೂಸು ||೧|| ಕಲಿಸಿ ರೀತಿ-ನೀತಿ, ಮಿತಿಯು ಮೀರದಂತೆ ದಾಟಿ ತಿಳಿಸಿ, ಬೆಳೆಸಿ, ಒಲವ ಆಳ ರಾಗ-ಭಾವ ಮೀಟಿ | ಮಾತಿಗಿಂತ ದುಡಿದೆ ಹೆಚ್ಚು ದಣಿವರಿಯದ ಮೇಟಿ ತ್ಯಾಗ, ಸಹನೆ, ಕರುಣೆಯೊಡಲು ನಿನಗೆ ನೀನೆ ಸಾಟಿ ||೨|| ಅಪ್ಪಿ ನಾನು ಮುದದಿ ನೀನು ಹಾಕಿ ಕೊಟ್ಟ ದಾರಿ ಭಯದ ಮನದಿ ಎಲ್ಲಿ ಗುರಿಯು ತಪ್ಪಬಹುದೊ ಜಾರಿ | ಗುಡುಗೊ, ಮಳೆಯೊ ಬಿಡದೆ ನಡೆದೆ, ತಿರುಗಲಿಲ್ಲ ಹೆದರಿ ಜತನದಿಂದ ಕಾಯ್ದೆ ಬದುಕು ಹೋಗದಂತೆ ಸೋರಿ ||೩|| – ರೂಪಕಲಾ ಆಳ್ವ

Read More