Author: roovari

ಅಂದು ಮುದವಾದ ಬೆಳಗು ಅರಳುತ್ತಿದ್ದ ಸಮಯ. ರವೀಂದ್ರ ಕಲಾಕ್ಷೇತ್ರದ ವೇದಿಕೆಯ ಹೂದೋಟದಲ್ಲಿ ಹಿತವಾಗಿ ಉಲಿಯುತ್ತಿದ್ದ ಮುದ್ದುಹಕ್ಕಿಗಳ ಕಲರವ. ಬಣ್ಣ ಬಣ್ಣದ ಸಿಂಗರದಲ್ಲಿ ಮಿಂದೆದ್ದ ಪುಟಾಣಿಗಳ ಹೆಜ್ಜೆ-ಗೆಜ್ಜೆಯ ನಲಿವಿನ ಸಂಭ್ರಮ. ತಾವು ಕಲಿತ ನಾಟ್ಯವನ್ನು ಕಲಾರಸಿಕರ ಸಮ್ಮುಖ ಪ್ರದರ್ಶಿಸುವ ಅಪರಿಮಿತ ಉಮೇದು- ಉತ್ಸಾಹ ಮಕ್ಕಳ ಮೊಗಗಳಲ್ಲಿ ಪುಟಿಯುತ್ತಿತ್ತು. ಸಂದರ್ಭ- ನಾಟ್ಯ ಕುಸುಮಾಂಜಲಿ ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ‘ಹೆಜ್ಜೆ-ಗೆಜ್ಜೆ- ಮಧುರ ನಾದ ಸಂಭ್ರಮ’ದ ನೃತ್ಯಹಬ್ಬ. ನಾಡಿನ ಖ್ಯಾತ ನೃತ್ಯಜ್ಞೆ ಹಿರಿಯ ನಾಟ್ಯಗುರು, ಸುಮನೋಹರ ಸೃಜನಶೀಲ ನೃತ್ಯ ಸಂಯೋಜನೆಗೆ ಹೆಸರಾದ ವಿದುಷಿ ಗೀತಾ ಶ್ರೀನಾಥ್ ಇವರ ಬದ್ಧತೆಯ ನೃತ್ಯ ಗರಡಿಯಲ್ಲಿ ರೂಹುಗೊಂಡ ಅನೇಕಾನೇಕ ಶಿಷ್ಯರ ಸಮೂಹ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸಜ್ಜಾಗಿ ಅಂದು ವೇದಿಕೆಯ ಮೇಲೆ ನಿಂತಿದ್ದರು. ‘ಪುಷ್ಪಾಂಜಲಿ’ಯೊಂದಿಗೆ ಶುಭಾರಂಭಗೊಂಡ ಪ್ರಸ್ತುತಿಯ ಮನೋಹರತೆ ಕಡೆಯ ಕೃತಿಯವರೆಗೂ ನಿರಂತರವಾಗಿ ಒಂದೇ ಚೈತನ್ಯಪೂರ್ಣತೆ ಕಾಪಾಡಿಕೊಂಡು ಬಂದದ್ದು, ಗುರು ಗೀತಾ ಶ್ರೀನಾಥ್ ಇವರ ನೃತ್ಯ ಶಿಕ್ಷಣದ ವೈಶಿಷ್ಟ್ಯ. ಅಲರಿಪು ಭರತನಾಟ್ಯದ ಪ್ರಥಮ ಅಂಗ. ಕೇವಲ ನೃತ್ತಭಾಗವಾದರೂ ಸುಂದರ ಅಂಗಿಕಾಭಿನಯದಿಂದ ಮನಸೆಳೆಯಿತು.…

Read More

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ದಿನಾಂಕ 12ರಿಂದ 14 ಜನವರಿ 2026ರವರೆಗೆ ಮೂರು ದಿನಗಳ ಕಾಲ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನಲ್ಲಿ ‘ಸಾತ್ವಿಕಾಭಿನಯ ಕಮ್ಮಟ’ ನಡೆಯಲಿದೆ. ಶತಾವಧಾನಿ ಡಾ. ಆರ್. ಗಣೇಶ್ ಇವರ ನಿರ್ದೇಶನದಲ್ಲಿ ನಡೆಯಲಿರುವ ಈ ಕಮ್ಮಟದಲ್ಲಿ ಡಾ. ಶೋಭಾ ಶಶಿಕುಮಾ‌ರ್ ಮತ್ತು ಬಳಗದವರು ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಯಕ್ಷಗಾನದ ವಿದ್ವಾಂಸರು, ಯಕ್ಷಗಾನ ಗುರುಗಳು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಬನ್ನಂಜೆ ಸಂಜೀವ ಸುವರ್ಣ, ಡಾ. ಎಂ. ಪ್ರಭಾಕರ ಜೋಶಿ, ಎಂ.ಎಲ್. ಸಾಮಗ, ಸುಣ್ಣಂಬಳ ವಿಶ್ವೇಶ್ವರ ಭಟ್, ಡಾ. ಪಾದೇಕಲ್ಲು ವಿಷ್ಣು ಭಟ್, ಮಂಟಪ ಪ್ರಭಾಕರ ಉಪಾಧ್ಯಾಯ. ಶ್ರೀಮತಿ ಪ್ರತಿಭಾ ಸಾಮಗ, ಲಕ್ಷ್ಮೀನಾರಾಯಣ ಭಟ್ ಕಟೀಲು, ಪ್ರಥ್ವಿರಾಜ್ ಕವತ್ತಾರ್, ವಾಸುದೇವ ರಂಗಾ ಭಟ್, ಅಂಡಾಲ ದೇವೀಪ್ರಸಾದ ಶೆಟ್ಟಿ, ಸರ್ಪಂಗಳ ಈಶ್ವರ ಭಟ್ ಮೊದಲಾದ ವಿದ್ವಾಂಸರು, ಕಲಾರಂಗದ ಯಕ್ಷಶಿಕ್ಷಣದ ಗುರುಗಳು, ಯಕ್ಷಗಾನ ತರಬೇತಿ ಕೇಂದ್ರದ ಗುರುಗಳು, ವಿವಿಧ ಮೇಳಗಳ ಹಿರಿಯ ಕಲಾವಿದರು…

Read More

ಬೆಳಗಾವಿ : ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟ್ (ರಿ.) ಇದರ ವತಿಯಿಂದ ಪ್ರತಿವರ್ಷ ನೀಡುವ ‘ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ’ಗೆ 2025ನೇ ಸಾಲಿಗೆ ಎರಡು ಕೃತಿಗಳು ಪುರಸ್ಕೃತಗೊಂಡಿದ್ದು, ಬೆಳಗಾವಿಯ ಶ್ರೀಮತಿ  ಜ್ಯೋತಿ ಬದಾಮಿ ಇವರ ‘ಋಣಿ’ ಮತ್ತು ಡಾ. ಸುನೀಲ ಪರೀಟ ಇವರ ‘ಬಹುದೊಡ್ಡ ಪ್ರಶ್ನೆ’ ಕೃತಿಗಳು ಆಯ್ಕೆಯಾಗಿದೆ. 2026ನೇ ಸಾಲಿನಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿ ಪ್ರಧಾನವನ್ನು ಮಾಡಲಾಗುವುದು ಮತ್ತು ತಮ್ಮ ಕೃತಿಗಳನ್ನು ಕಳುಹಿಸಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲ ಕವಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಪ್ರತಿಷ್ಠಾನದ ಅಧ್ಯಕ್ಷರು ಡಾ. ರಮೇಶ್ ಕರ್ಕಿ, ಡಾ ವಿಜಯಲಕ್ಷ್ಮಿ ಪುಟ್ಟಿ ಮತ್ತು ಕಾರ್ಯದರ್ಶಿ ಪ್ರೊ. ಗಿರೀಶ್ ಕರ್ಕಿ ತಿಳಿಸಿದ್ದಾರೆ.

Read More

ಪುತ್ತೂರು : ಸುನಾದ ಸಂಗೀತ ಕಲಾ ಶಾಲೆಯ ಪುತ್ತೂರು ಶಾಖೆಯ ವತಿಯಿಂದ ‘ಸುನಾದ ಸಂಗೀತೋತ್ಸವ’ವನ್ನು ದಿನಾಂಕ 10 ಮತ್ತು 11 ಜನವರಿ 2026ರಂದು ಪುತ್ತೂರಿನ ನೆಹರು ನಗರದ ಸುನಾದ ವಸತಿಯುತ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ. ದಿನಾಂಕ 10 ಜನವರಿ 2026ರಂದು ಮಧ್ಯಾಹ್ನ 2-00 ಗಂಟೆಗೆ ಸುನಾದ ಸಂಗೀತ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, ಸಂಜೆ 6-30 ಗಂಟೆಗೆ ನಡೆಯಲಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ವೇಣು ವಾದನದಲ್ಲಿ ಮೈಸೂರಿನ ವಿದ್ವಾನ್ ವಿ. ವಂಶೀಧರ್ ವೇಣುವಾದನ, ವಿದ್ವಾನ್ ವೇಣುಗೋಪಾಲ ಶಾನುಬೋಗ್ ವಯಲಿನ್, ಡಾ. ಅಕ್ಷಯ ನಾರಾಯಣ ಮೃದಂಗದಲ್ಲಿ ಮತ್ತು ವಿದ್ವಾನ್ ಬಾಲಕೃಷ್ಣ ಭಟ್ ಮೋರ್ಸಿಂಗ್ ನಲ್ಲಿ ಸಹಕರಿಸಲಿದ್ದಾರೆ. ದಿನಾಂಕ 11 ಜನವರಿ 2026ರಂದು ಬೆಳಿಗ್ಗೆ 9-00 ಗಂಟೆಗೆ ಸುನಾದ ಸಂಗೀತ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, ಮಧ್ಯಾಹ್ನ 12-00 ಗಂಟೆಗೆ ಸುನಾದ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಪಂಚರತ್ನ ಗೋಷ್ಠಿ ಗಾಯನ, ಸಂಜೆ 6-30 ಗಂಟೆಗೆ ನಡೆಯಲಿರುವ…

Read More

ಮಂಗಳೂರು : ಪ್ರತಿಷ್ಠಿತ ಸಾಹಿತ್ಯೋತ್ಸವಗಳಲ್ಲಿ ಒಂದಾದ ‘ಮಂಗಳೂರು ಲಿಟ್‌ಫೆಸ್ಟ್’ನ ಎಂಟನೇ ಆವೃತ್ತಿಯು ದಿನಾಂಕ 10 ಮತ್ತು 11 ಜನವರಿ 2026ರಂದು ಮಂಗಳೂರಿನ ‘ಡಾ. ಟಿ.ಎಂ.ಎ. ಪೈ ಇಂಟರ್ ನ್ಯಾಷನಲ್ ಕನ್ವೆನ್ಷಲ್ ಸೆಂಟರ್’ನಲ್ಲಿ ನಡೆಯಲಿದೆ. ಈ ಸಲದ ಮಂಗಳೂರು ಲಿಟ್ ಫೆಸ್ಟ್ ಪ್ರಶಸ್ತಿಗೆ ಖ್ಯಾತ ಇತಿಹಾಸಕಾರ್ತಿ, ರಾಜ್ಯಸಭಾ ಸದಸ್ಯರಾದ ಪದ್ಮಶ್ರೀ ಡಾ. ಮೀನಾಕ್ಷಿ ಜೈನ್ ಆಯ್ಕೆಯಾಗಿದ್ದು, ಎರಡು ದಿನ ನಡೆಯಲಿರುವ ‘ಮಂಗಳೂರು ಲಿಟ್ ಫೆಸ್ಟ್’ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಲಿಟ್ ಫೆಸ್ಟ್ ಆಯೋಜಿಸುತ್ತಿರುವ ಭಾರತ್ ಫೌಂಡೇಷನ್ ತಿಳಿಸಿದೆ. ಸಮಾರಂಭದಲ್ಲಿ ಭಾರತದ ಬಾಹ್ಯ ಗುಪ್ತಚರ ಸಂಸ್ಥೆ ‘ರಾ’ದ ಮಾಜಿ ಮುಖ್ಯಸ್ಥರಾದ ವಿಕ್ರಂ ಸೂದ್, ವಿಶ್ವಸಂಸ್ಥೆಯಲ್ಲಿ ಭಾರತದ ಮೊದಲ ಮಹಿಳಾ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅಂಬಾಸಿಡರ್ ರುಚಿರಾ ಕಾಂಬೋಜ್, ವಿಶ್ವ ಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಅಂಬಾಸಿಡರ್ ಟಿ.ಎಸ್. ತಿರುಮೂರ್ತಿ, ಎ.ಎನ್.ಐ. ಸಂಪಾದಕೀಯ ನಿರ್ದೇಶಕಿ ಸ್ಮಿತಾ ಪ್ರಕಾಶ್, ಪದ್ಮಜಾ ಜೋಶಿ, ಪಿ. ಶೇಷಾದ್ರಿ, ಮಳವಿಕಾ ಅವಿನಾಶ್ ಮತ್ತು ಪಲ್ಲವಿ ರಾವ್…

Read More

ಮಂಗಳೂರು : ಕವಿತಾ ಟ್ರಸ್ಟ್ ನೀಡುವ 2025ನೇ ಸಾಲಿನ ‘ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿ’ಗೆ ‘ವಲ್ಲಿ ವಗ್ಗ’ ಎಂಬ ಕಾವ್ಯನಾಮದಲ್ಲಿ ಬರೆಯುವ ವಲೇರಿಯನ್ ಡಿಸೋಜ ಇವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ರೂ.25,000/- ನಗದು, ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ. ದಿನಾಂಕ 11 ಜನವರಿ 2026ರಂದು ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ನಲ್ಲಿರುವ ಮದರ್ ತೆರೇಸಾ ಪೀಸ್‌ ಪಾರ್ಕ್‌ನಲ್ಲಿ ನಡೆಯುವ 20ನೇ ಕವಿತಾ ಫೆಸ್ತ್ ಉತ್ಸವದ ಸಂದರ್ಭದಲ್ಲಿ ಪ್ರಸಿದ್ಧ ಕೊಂಕಣಿ ಬರಹಗಾರ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಣ್ಣ ಕಥೆಗಾರ ದಾಮೋದರ್ ಮಾವೊ ಇವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಕವಿತಾ ಟ್ರಸ್ಟಿನ ಮಥಾಯಸ್ ಕುಟುಂಬ ಕಾವ್ಯ ಪ್ರಶಸ್ತಿಯನ್ನು ಮಂಗಳೂರು ಬಳಿಯ ಕುಪ್ಪೆಪದವುವಿನ ಜೋಸೆಫ್ ಮಥಾಯಸ್ ಸ್ಥಾಪಿಸಿದ್ದು, ಇವರು ದುಬೈನ ಮೆರಿಟ್ ಫ್ರೈಟ್ ಸಿಸ್ಟಮ್ಸ್ ಎಲ್‌ಎಲ್‌ಸಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಈ ಪ್ರಶಸ್ತಿಯನ್ನು ಇಲ್ಲಿಯವರೆಗೆ ಗೋವಾ, ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕದ ಹದಿನೇಳು ಕವಿಗಳಿಗೆ ನೀಡಲಾಗಿದೆ. ವಲ್ಲಿ ವಗ್ಗ 18ನೇ ಪ್ರಶಸ್ತಿ ವಿಜೇತರಾಗಿದ್ದಾರೆ.…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮುಂಬಯಿಯ ಕವಯಿತ್ರಿ ಜಯಲಕ್ಷ್ಮೀ ಎಸ್. ಜೋಕಟ್ಟೆಯವರ ‘ಕವಿತೆಗಳು’ ಕವನ ಸಂಕಲನವು ಅವರ ಹುಟ್ಟುಹಬ್ಬದ ದಿನವಾದ ದಿನಾಂಕ 03 ಜನವರಿ 2026ರಂದು ಎಸ್‌.ಡಿ.ಎಂ. ಕಾನೂನು ಕಾಲೇಜಿನ ಸಭಾಗೃಹದಲ್ಲಿ ಬಿಡುಗಡೆಗೊಂಡಿತು. ಕವಿತಾಸಂಕಲನ ಬಿಡುಗಡೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿ, “ಜಯಲಕ್ಷ್ಮೀ ಇವರ ಹುಟ್ಟುಹಬ್ಬದಂದೇ ಅವರ ಚೊಚ್ಚಲ ಕವಿತಾ ಸಂಕಲನ ಕನ್ನಡ ಸಾಹಿತ್ಯ ಪರಿಷತ್ತು ವೇದಿಕೆಯಿಂದ ಬಿಡುಗಡೆ ಅಗುತ್ತಿರುವುದು ಸಂತೋಷವಾದರೆ ಅವರು ಇಂದು ನಮ್ಮ ಜೊತೆಗಿಲ್ಲ ಅನ್ನುವುದಕ್ಕೆ ದುಃಖವೂ ಆಗುತ್ತಿದೆ. ಮುಂಬಯಿಯಲ್ಲಿ ಸಕ್ರಿಯ ಪತ್ರಕರ್ತರಾಗಿರುವ ಅವರ ಪತಿ ಶ್ರೀನಿವಾಸ ಜೋಕಟ್ಟೆಯವರು ನನಗೆ ಮೂರು ದಶಕಗಳಿಂದ ಪರಿಚಿತರು. ಮುಂಬಯಿಯ ಸಾಹಿತ್ಯ ವಲಯವನ್ನು ನಾವು ಮರೆಯುವಂತಿಲ್ಲ, ಅಲ್ಲಿನ ವಿವಿ ಕನ್ನಡ ವಿಭಾಗದ ವಿದ್ಯಾರ್ಥಿ ನಾನು. ಅಲ್ಲಿನವರ ನಾಡಪ್ರೇಮ ಶ್ಲಾಘನೀಯ” ಎಂದು ಹೇಳಿದರು.…

Read More

ಹೊನ್ನಾವರ : ಬಡಗುತಿಟ್ಟಿನ ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಪರಂಪರೆಯಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದ ಹಿರಿಯ ಯಕ್ಷಗಾನ ಭಾಗವತ ಕಡತೋಕಾ ಲಕ್ಷ್ಮೀನಾರಾಯಣ ಭಾಗವತ (98) ಇವರು ದಿನಾಂಕ 05 ಜನವರಿ 2026ರಂದು ನಿಧನ ರಾಗಿದ್ದಾರೆ. ಇವರ ನಿಧನದಿಂದ ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ. ಮೃತರು ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಡತೋಕಾ ಗ್ರಾಮದವರಾಗಿದ್ದ ಲಕ್ಷ್ಮೀನಾರಾಯಣ ಭಾಗವತರು, ಯಕ್ಷಗಾನ ಲೋಕದ ಸವ್ಯಸಾಚಿ ಎಂದೇ ಖ್ಯಾತರಾಗಿದ್ದ ಮಂಜುನಾಥ ಭಾಗವತರ ಹಿರಿಯ ಸಹೋದರರಾಗಿದ್ದರು. ವೃತ್ತಿಯಿಂದ ಕಡತೋಕಾ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು, ಕಲೆ ಮತ್ತು ಬದುಕನ್ನು ಸಮನ್ವಯಗೊಳಿಸಿದ ಅಪರೂಪದ ವ್ಯಕ್ತಿತ್ವವಾಗಿದ್ದರು. ಸ್ವಲ್ಪ ಕಾಲ ವೇಷಧಾರಿಯಾಗಿ ಕೆರೆಮನೆ ಶಿವರಾಮ ಹೆಗಡೆಯವರ ಜತೆ ಪಾತ್ರ ಮಾಡಿದ್ದರು. ಕರ್ಕಿ ಮೇಳದ ಪ್ರಮುಖ ಭಾಗವತರಾಗಿ ಗುರುತಿಸಿಕೊಂಡಿದ್ದ ಅವರು, ಸುಮಾರು 50 ವರ್ಷಕ್ಕೂ ಅಧಿಕ ಕಾಲ ಯಕ್ಷಗಾನ ಭಾಗವತಿಕೆಯಲ್ಲಿಯೇ ತೊಡಗಿಸಿಕೊಂಡಿದ್ದರು. ಅನೇಕ ಶಿಷ್ಯರನ್ನು ತಯಾರಿಸಿ, ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಯಕ್ಷಗಾನ…

Read More

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಹಿರಿಯ ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಅಧ್ಯಕ್ಷತೆಯಲ್ಲಿ ಮಂಗಳೂರು ತಾಲೂಕು ‘ಬ್ಯಾರಿ ಸಾಹಿತ್ಯ ಸಮ್ಮೇಳನ’ವು ದಿನಾಂಕ 04 ಜನವರಿ 2026ರಂದು ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ ನಡೆಯಿತು. ಗಾಯಕ ಶರೀಫ್ ನಿರ್ಮುಂಜೆ ಧ್ಯೇಯ ಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ರಾಜೇಶ್ ಸ್ವಾಗತಿಸಿ, ಯು.ಕೆ. ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಗುರುಪುರ ಕೈಕಂಬದ ಸಬೀಲುಲ್ ಹುದಾ ಅಲ್‌ಬಿರ್ ಶಾಲಾ ವಠಾರದಿಂದ ಸಭಾಂಗಣದವರೆಗೆ ಸಮ್ಮೇಳನಾಧ್ಯಕ್ಷ ಮೆರವಣಿಗೆ ನಡೆಯಿತು. ಸ್ವಾಗತ ಸಮಿತಿ ಗೌರವಾಧ್ಯಕ್ಷ ಎಂ.ಹೆಚ್. ಮೊಹಿದಿನ್ ಅಡ್ಡೂರು ಉದ್ಘಾಟಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಎಚ್. ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನಾಧ್ಯಕ್ಷರ ಭಾಷಣ ಮೇಲೆ ಚರ್ಚಾ ಗೋಷ್ಠಿ, ಬ್ಯಾರಿ ಕವಿಗೋಷ್ಠಿ, ದಫ್ ಮತ್ತು ಬ್ಯಾರಿ ಹಾಡುಗಳ ಸಂಭ್ರಮ ನಡೆದವು. ಸಮಾರೋಪದಲ್ಲಿ ನಾನಾ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.…

Read More

ಮಂಗಳೂರು : ನೃತ್ಯ ಸುಧಾ (ರಿ.) ಮಂಗಳೂರು – ಉಡುಪಿ ಇದರ ವತಿಯಿಂದ ಇಪ್ಪತ್ತೊಂದು ಸಂವತ್ಸರಗಳ ನೃತ್ಯ ಪಯಣದ ಮೆಲುಕು ‘ನೃತ್ಯ ಸುಧಾರ್ಪಣಂ -2026’ ಕಾರ್ಯಕ್ರಮವನ್ನು ದಿನಾಂಕ 11 ಜನವರಿ 2026ರಂದು ಸಂಜೆ 4-30 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಂಗಳೂರು ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್, ಕದ್ರಿ ನೃತ್ಯ ವಿದ್ಯಾನಿಲಯದ ನಿರ್ದೇಶಕರಾದ ಗುರು ವಿದ್ವಾನ್ ಯು.ಕೆ. ಪ್ರವೀಣ್ ರಾವ್ ಮತ್ತು ಭರತಾಂಜಲಿಯ ನಿರ್ದೇಶಕರಾದ ಗುರು ವಿದುಷಿ ಪ್ರತಿಮಾ ಶ್ರೀಧರ್ ಇವರುಗಳು ಅಭ್ಯಾಗತರಾಗಿ ಭಾಗವಹಿಸಲಿದ್ದು, ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ.

Read More