Author: roovari

ರಂಗ ಚಟುವಟಿಕೆಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆ. ವಿ. ಸುಬ್ಬಣ್ಣ ಎಂದೇ ಪ್ರಖ್ಯಾತರಾಗಿರುವ ಇವರ ಮೂಲ ಹೆಸರು ಕುಂಟಗೋಡು ವಿಭೂತಿ ಸುಬ್ಬಣ್ಣ. ಇವರ ತಂದೆ ಕೆ. ವಿ. ರಾಮಪ್ಪ, ತಾಯಿ ಸಾವಿತ್ರಮ್ಮ. ಮೂಲಮನೆ ‘ಕುಂಟಗೋಡು’ ಇದು ಒಂದು ಪುಟ್ಟ ಹಳ್ಳಿ. ‘ವಿಭೂತಿ’ ಇವರ ಮನೆತನದ ಹೆಸರು. ಬಿ. ಎ. ಆನರ್ಸ ಪದವಿಯನ್ನು ರ್‍ಯಾಂಕ್ ನಲ್ಲಿ ಉತ್ತೀರ್ಣರಾಗಿ, ಉದ್ಯೋಗಕ್ಕೆ ಅವಕಾಶಗಳಿದ್ದರೂ, ಅಡಿಕೆ ಬೆಳೆಗಾರರಾದ ಇವರು ಹಳ್ಳಿಗೆ ಬಂದು ಮಾಡಿದ ಸಾಧನೆ ಅಪೂರ್ವವಾದದ್ದು, ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ ಒಂದು ಚಿಕ್ಕ ಊರು ಹೆಗ್ಗೋಡಿನಲ್ಲಿ 1932 ಫೆಬ್ರವರಿ 20ರಂದು ಇವರ ಜನನವಾಯಿತು. ಇವರು ಹೆಗ್ಗೋಡಿನಲ್ಲಿದ್ದುಕೊಂಡೇ ‘ನೀನಾಸಂ’ ಎಂದು ಖ್ಯಾತಿವೆತ್ತ ‘ನೀಲಕಂಠೇಶ್ವರ ನಾಟ್ಯ ಸೇವಾ ಸಂಘ’ವನ್ನು 1949ರಲ್ಲಿ ಸ್ಥಾಪಸಿ ಸ್ಥಾಪಕಸದಸ್ಯರಾದರು. ಆದರೆ 1974ರಲ್ಲಿ ಕಟ್ಟಿದ ‘ನೀನಾಸಂ ಚಿತ್ರ ಸಮಾಜ’ ಭಾರತದ ಮೊತ್ತಮೊದಲ ಗ್ರಾಮೀಣ ಸಿನಿಮಾ ಸೊಸೈಟಿ ಎಂಬ ಕೀರ್ತಿಯನ್ನು ಪಡೆದಿದೆ. ‘ ನೀನಾಸಂ’ ನ ರಂಗ ಚಟುವಟಿಕೆಗಳ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥೆಯು ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯ ಮಂಗಳ ಸಭಾಂಗಣದಲ್ಲಿ ದಿನಾಂಕ 21 ಮತ್ತು 22 ಫೆಬ್ರವರಿ 2025ರಂದು ನಡೆಯಲಿರುವ 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಧನಂಜಯ ಮೂಡುಬಿದಿರೆ ಇವರನ್ನು ಸನ್ಮಾನಿಸಲಿದೆ. ಬಿ. ಎಸ್‌. ಸಿ. ಪದವಿ ಹಾಗೂ ಫ್ರೆಂಚ್ ಪ್ರೈಮರಿ ಪದವಿ ಗಳಿಸಿರುವ ಧನಂಜಯ ಮೂಡುಬಿದಿರ 37 ವರ್ಷಗಳ ಕಾಲ ‘ಹೊಸದಿಗಂತ’, ‘ಮುಂಗಾರು’, ‘ಕನ್ನಡ ಜನಾಂತರಂಗ’, ‘ಜನ ಈದಿನ’ ಮತ್ತು ‘ಉದಯವಾಣಿ’ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಕೊಪ್ಪಳ ಮತ್ತು ಮಂಡ್ಯದಲ್ಲಿ 90ರ ದಶಕದಲ್ಲಿ ನಡೆದಿದ್ದ ಅ. ಭಾ. ಕನ್ನಡ ಸಾಹಿತ್ಯ ಸಮ್ಮೇಳನ, ಮೂಡುಬಿದಿರೆಯಲ್ಲಿ ನಡೆದಿದ್ದ 71ನೇ ಅ. ಭಾ. ಕ. ಸಾಹಿತ್ಯ ಸಮ್ಮೇಳನ, ಬೆಳಗಾವಿ, ಮಂಗಳೂರು ಮೊದಲಾದೆಡೆ ನಡೆದಿದ್ದ ಅ. ಭಾ. ಕ. ಸಾ. ಸಮ್ಮೇಳನಗಳಲ್ಲಿ ಭಾಗಿಯಾಗಿ ಸಮಗ್ರ ವರದಿ ಪ್ರಕಟಿಸಿದ್ದಾರೆ. ಸಾಹಿತ್ಯದಲ್ಲೂ ಆಸಕ್ತಿ ಹೊಂದಿರುವ ಇವರ ಬರವಣಿಗೆಯ ಕವನ, ಕಥೆ, ಹಾಸ್ಯ, ವ್ಯಕ್ತಿ/ಸ್ಥಳ…

Read More

ಮಂಜೇಶ್ವರ: ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಮತ್ತು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಜಂಟಿ ಆಶ್ರಯದಲ್ಲಿ ಭಾಷಾಂತರಕಾರರ ನಾಲ್ಕನೇ ಸಮಾವೇಶ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ದಿನಾಂಕ 17 ಫೆಬ್ರವರಿ 2025ರಂದು ಮಂಜೇಶ್ವರದ ಗೋವಿಂದ ಪೈ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ. ವಿ. ಪರಮಶಿವ ಮೂರ್ತಿ ಮಾತನಾಡಿ “ಭಾಷಾ ಶಾಸ್ತ್ರದ ವಿಷಯಕ್ಕೆ ಸಂಬಂಧಿಸಿದ ವಿದ್ವಾಂಸರು ಇತ್ತೀಚೆಗೆ ಕಡಿಮೆಯಾಗುತ್ತಿದ್ದಾರೆ. ಭಾಷಾ ಶಾಸ್ತ್ರದ ವಿಷಯ ಮರೀಚಿಕೆಯಾಗಿದೆ. ಭಾಷೆ ಮತ್ತು ಸಂಸ್ಕೃತಿಯ ವಿಚಾರ ಚಿಂತಾಜನಕವಾಗಿದೆ. ಈಗಿನ ವಿದ್ಯಾರ್ಥಿಗಳು ಅಂಕಗಳ ಹಿಂದೆ ಹೋಗುತ್ತಾರೆ. ಆದ್ದರಿಂದ ಭಾಷೆ ಮತ್ತು ಸಂಸ್ಕೃತಿ ಅಳಿಸಿ ಹೋಗುವ ಆತಂಕ ಎದುರಾಗಿದೆ. ಶಾಸ್ತ್ರೀಯ ಬೇರುಗಳು ಉಳಿದರೆ ಮಾತ್ರ ಹೊಸ ಜ್ಞಾನ ಲಭಿಸಲು ಸಾಧ್ಯ. ಈ ನಿಟ್ಟಿನಲ್ಲಿ ಡಾ. ಸುಭಾಷ್ ಪಟ್ಟಾಜೆಯವರ ‘ಬಹುಮುಖಿ’, ವಿಶ್ವನಾಥ ನಾಗಠಾಣ ಅವರ ‘ಕೃತಿಶೋಧ’, ಡಾ.ಮೋಹನ ಕುಂಟಾರ್ ಅವರ ‘ಇರುಳಿನ ಆತ್ಮ’ ಹಾಗೂ ‘ಪುರಾಣ ಕಥಾ ಕೋಶ’…

Read More

ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನಲ್ಲಿ ದಿನಾಂಕ 18 ಫೆಬ್ರವರಿ 2025ರಂದು ಹಂಪಿ ಕನ್ನಡ ವಿ.ವಿ.ಯ ಸಹಭಾಗಿತ್ವದೊಂದಿಗೆ ಭಾಷಾಂತರ ಪ್ರಕ್ರಿಯೆಯ ಕುರಿತಾದ ವಿಚಾರ ಸಂಕಿರಣದ ಸಂದರ್ಭದಲ್ಲಿ ಸಂಜೆಯ ಹೊತ್ತು ಮಂಗಳೂರಿನ ‘ಸೌರಭ ಸಂಗೀತ ನೃತ್ಯ ಶಾಲೆ’ಯ ನೃತ್ಯ ವಿದುಷಿ ಡಾ. ಶ್ರೀವಿದ್ಯಾ ಇವರ ನೇತೃತ್ವದಲ್ಲಿ ಡಾ. ಮೋಹನ ಕುಂಟಾರ್ ರವರ ‘ಲೋಕಾಂತದ ಕಾವು’ ಎಂಬ ಕವನ ಸಂಕಲನದಿಂದ ಆಯ್ದ ಕವಿತೆಗಳನ್ನಾಧರಿಸಿದ ನೃತ್ಯ ಪ್ರದರ್ಶನವಿತ್ತು. ಒಂದು ಗಂಟೆಯ ಕಾಲ ನಡೆದ ಈ ಕಾರ್ಯಕ್ರಮವು ತುಂಬಾ ರಂಜನೀಯವಾಗಿತ್ತು, ಮಾತ್ರವಲ್ಲದೆ ಪ್ರೇಕ್ಷಕರ ಅರಿವಿನ ವ್ಯಾಪ್ತಿಯನ್ನು ವಿಸ್ತರಿಸುವಂತೆಯೂ ಇತ್ತು. ಎರಡು ಆರಂಭಿಕ ಭಾವಗೀತೆಗಳ ನಂತರ ತಂಡವು ಪ್ರಸ್ತುತ ಪಡಿಸಿದ ‘ಮಹಾಬಲಿ’ ಮತ್ತು ‘ಕೋಟಿ ಪುಣ್ಯ’ ಎಂಬ ರೂಪಕಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಜನಮನದಲ್ಲಿ ಉಳಿಯುವಂತಿದ್ದವು. ‘ಮಹಾಬಲಿ’ ರೂಪಕದಲ್ಲಿ ಮೊದಲಿಗೆ ಮಹಾಬಲಿಯು ಓಣಂ ಹಬ್ಬದ ಕಾಲದ ಕಥೆಯ ಪ್ರಕಾರ ತನ್ನ ಪ್ರಜೆಗಳೆಲ್ಲ ಹೇಗಿದ್ದಾರೆ ಎಂದು ನೋಡಲು ನಾಡಿಗೆ ಬರುತ್ತಾನೆ. ಆದರೆ ಬಂದು ನೋಡಿದಾಗ ಅಲ್ಲೇನಿದೆ? ಬರೇ ಅವ್ಯವಸ್ಥೆಯ ರಾಶಿ.…

Read More

ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಸಂಸ್ಥೆ, ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ಯಲ್ಲಾಪುರ ತಾಲೂಕು ಘಟಕದ ಸಹಕಾರದಲ್ಲಿ ನಾಡಿನ ಪ್ರಸಿದ್ಧ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಸರ್ವಾಧ್ಯಕ್ಷತೆಯಲ್ಲಿ ದಿನಾಂಕ 23 ಫೆಬ್ರವರಿ 2025 ಭಾನುವಾರ ಯಲ್ಲಾಪುರದ ಅಡಿಕೆ ಭವನದಲ್ಲಿ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ಪ್ರಥಮ ಶಿಶು ಸಾಹಿತ್ಯ ಸಮ್ಮೇಳನದ ಲೋಗೋ ಬಿಡುಗಡೆ ಕಾರ್ಯಕ್ರಮವು ದಿನಾಂಕ 19 ಫೆಬ್ರವರಿ 2025ರಂದು ಹಾಸನದ ಮದನಗೌಡರ ನಿವಾಸದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಲೋಗೋ ಅನಾವರಣಗೊಳಿಸಿ ಮಾತನಾಡಿದ ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಬಿ. ಮದನಗೌಡ “ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಇದರಡಿಯಲ್ಲಿ ಕೊಟ್ರೇಶ್ ಎಸ್. ಉಪ್ಪಾರ್ ನೇತೃತ್ವದ ತಂಡ ಕರ್ನಾಟಕದ ಉದ್ದಗಲಕ್ಕೂ ಕನ್ನಡದ ಕಂಪನ್ನು ಸೂಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಸಾಹಿತ್ಯ ವೇದಿಕೆ ಈಗಾಗಲೇ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಲವು ರಾಜ್ಯಮಟ್ಟದ ಸಮ್ಮೇಳನಗಳನ್ನು ಹಮ್ಮಿಕೊಂಡಿದ್ದು, ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ…

Read More

ಹೊನ್ನಾವರ : ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ.) ಇದರ 90ನೇ ವರ್ಷದ ಸಂಭ್ರಮ ಹಾಗೂ ಕೆರೆಮನೆ ಶಂಭು ಹೆಗಡೆ ‘ರಾಷ್ಟ್ರೀಯ ನಾಟ್ಯೋತ್ಸವ -15’ವನ್ನು ದಿನಾಂಕ 22 ಫೆಬ್ರವರಿ 2025ರಿಂದ 02 ಮಾರ್ಚ್ 2025ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಗುಣವಂತೆಯ ಯಕ್ಷಾಂಗಣದಲ್ಲಿ ಆಯೋಜಿಸಲಾಗಿದೆ.    ದಿನಾಂಕ 22 ಫೆಬ್ರವರಿ 2025ರಂದು ಸಂಜೆ 4-30 ಗಂಟೆಗೆ ಮಾನ್ಯ ಸಂಸದರು ವಿಶ್ವೇಶ್ವರ ಹೆಗಡೆ ಕಾಗೇರಿ ಇವರ ಅಧ್ಯಕ್ಷತೆಯಲ್ಲಿ ಸಚಿವರಾದ ಮಂಕಾಳು ಎಸ್. ವೈದ್ಯ ಇವರು ಶ್ರೀ ಇಡಗುಂಜಿ ಮೇಳದ 90ನೇ ವರ್ಷದ ಸಂಭ್ರಮ ಹಾಗೂ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವವನ್ನು ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ನಿರಂಜನ ವಾನಳ್ಳಿ ಇವರು ಪ್ರದರ್ಶನಾಂಗಣವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು ಸಂಸ್ಥೆಗೆ ‘ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಂಜೆ 6-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಮಾ ವೈದ್ಯನಾಥನ್ ಮತ್ತು ತಂಡ ದೆಹಲಿ ಮತ್ತು ಸಹ…

Read More

ಮಂಗಳೂರು : ಮಂಗಳೂರಿನ ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟಿನ ವತಿಯಿಂದ ನಡೆದ ‘ಗಾನಯೋಗಿ ಪಂಚಾಕ್ಷರಿ -ಪುಟ್ಟರಾಜ ಗವಾಯಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತೋತ್ಸವ’ ಕಾರ್ಯಕ್ರಮವು ದಿನಾಂಕ 16 ಫೆಬ್ರವರಿ 2025 ರಂದು ಮಂಗಳೂರಿನ ವಿ. ಟಿ. ರಸ್ತೆಯಲ್ಲಿರುವ ಕೃಷ್ಣ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ-ಕಲಾವಿದರಾಗಿ ಭಾಗವಹಿಸಿದ ಮೈಸೂರಿನ ಪಂಡಿತ್ ವೀರಭದ್ರಯ್ಯ ಹಿರೇಮಠ ಮಾತನಾಡಿ “ಗದುಗಿನ ವೀರೇಶ್ವರ ಪುಣ್ಯಾಶ್ರಮದ ವಾತಾವರಣದಲ್ಲಿ ಬೆಳೆದ ಸಂಗೀತ ಪರಂಪರೆ ಅಪಾರ. ಇಂತಹ ಗುರುಶಿಷ್ಯ ಪರಂಪರೆಯಿಂದಲೇ ಸಂಗೀತ ವಿದ್ಯೆಯು ವಿದ್ಯಾರ್ಥಿಗೆ ಸಿದ್ಧಿಸುವುದು. ಇಂದಿನ ಅನೇಕ ಕಲಾವಿದರಿಗೆ ಪಂಚಾಕ್ಷರಿ- ಪುಟ್ಟರಾಜ ಗವಾಯಿಗಳ ಸಂಬಂಧದಿಂದಲೇ ಸಂಗೀತವು ಶುದ್ಧ ರೀತಿಯಲ್ಲಿ ಉಳಿದು ಮುಂದುವರಿದಿದೆ” ಎಂದರು. ಮೈಸೂರಿನ ಸಮೀರ್ ರಾವ್ ಇವರಿಂದ ಬಾನ್ಸುರಿ ವಾದನ, ಭೀಮಾಶಂಕರ್ ಬಿದನೂರ್ ಹಾಗೂ ಪಂಚಮಿ ಬಿದನೂರ್ ಇವರಿಂದ ತಬಲ ಸೋಲೋ ಹಾಗೂ ಪಂಡಿತ್ ವೀರಭದ್ರಯ್ಯ ಹಿರೇಮಠ ಇವರಿಂದ ಹಿಂದುಸ್ತಾನಿ ಗಾಯನ ಕಚೇರಿ ನಡೆಯಿತು ಇವರಿಗೆ ಹಾರ್ಮೋನಿಯಂನಲ್ಲಿ ಶ್ರೀರಾಮ ಭಟ್ ಮತ್ತು ತಬಲಾದಲ್ಲಿ ಬೆಂಗಳೂರಿನ ಆದರ್ಶ್ ಶೆಣೈ ಸಹಕರಿಸಿದರು. ಟ್ರಸ್ಟಿನ…

Read More

ದಾವಣಗೆರೆ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ (ರಿ.) ಇದರ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಿಂದ ದಿನಾಂಕ 11 ಫೆಬ್ರವರಿ 2025ರಂದು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಯಕ್ಷರಂಗ, ಯಕ್ಷಗಾನ, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಇವರಿಗೆ ‘ಯಕ್ಷಗಾನ ಗೊಂಬೆಸಿರಿ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಲಾಯಿತು ಎಂದು ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ತಿಳಿಸಿದ್ದಾರೆ. “ದಾವಣಗೆರೆಯಲ್ಲಿ ಯಕ್ಷಗಾನ ಸೇರಿದಂತೆ ಕಲೆ, ಸಾಹಿತ್ಯ, ಸಂಗೀತ ಹೀಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಕಠಿಣ ಪರಿಶ್ರಮದಿಂದ ಯಾವುದೇ ಸ್ವಾರ್ಥವಿಲ್ಲದೇ ಹೊಸ ಹೊಸ ಪರಿಕಲ್ಪನೆಗಳೊಂದಿಗೆ ಸಾಧನೆಯ ಜತೆಯಲ್ಲಿ ದಾವಣಗೆರೆಯ ಮಹಿಳೆಯರಿಗೆ ಯಕ್ಷಗಾನ ಪ್ರದರ್ಶನ ಯಶಸ್ವಿಗೊಳಿಸಿದ ಶೆಣೈಯರಿಗೆ ಅಭಿಮಾನದಿಂದ ಅಭಿನಂದಿಸಲಾಗಿದೆ” ಎಂದು ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಗೀತಾಂಜಲಿ ಭಾಸ್ಕರ್ ಕಾಮತ್ ತಿಳಿಸಿದ್ದಾರೆ. ವೇದಿಕೆಯಲ್ಲಿ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಶ್ರೀಮತಿ ಸನ್ನಿಧಿ…

Read More

ಕೋಟೇಶ್ವರ: ಯಶಸ್ವಿ ಕಲಾ ವೃಂದ ಕೋಟ ತೆಕ್ಕಟ್ಟೆ ಇದರ ವತಿಯಿಂದ ಶುಭಾಶಯ ಯಕ್ಷಗಾನ ರಂಗ ಪ್ರಸ್ತುತಿಯು ದಿನಾಂಕ 18 ಫೆಬ್ರವರಿ 2025ರಂದು ಬೀಜಾಡಿ ಗಣಪಯ್ಯ ಚಡಗರ ಇವರ ಮನೆಯಂಗಳದ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅನಿರುದ್ಧ ಹಾಗೂ ಸುಪ್ರಿತಾ ದಂಪತಿಗಳನ್ನು ಗೌರವಿಸಿದ ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ ಮಾತನಾಡಿ “ವರ್ಷವಿಡೀ ಕಲೋಲ್ಲಾಸದಿಂದಲೇ ಪರ್ಯಟನ ನಡೆಸಿ ನೂರೆಂಟು ಕಾರ್ಯಕ್ರಮದ ಸಂಕಲ್ಪ ಪೂರೈಸಿ ಜಯದ ಪತಾಕೆಯನ್ನು ರಾಜ್ಯದಾದ್ಯಂತ ಹಾರಿಸಿದ ಸಂಸ್ಥೆ ಯಶಸ್ವೀ ಕಲಾವೃಂದ. ಕಲಾವಿದನೋರ್ವನ ಮನೆಯಲ್ಲಿ ಕಲಾ ಸಂಸ್ಥೆಗೆ ಅವಕಾಶ ನೀಡಿ ಕಲಾ ಮನಸ್ಸುಗಳಿಗೆ ವೇದಿಕೆ ಕಲ್ಪಿಸಿದ ಗಣಪಯ್ಯ ಚಡಗರ ಮಗನ ಮದುವೆಯಲ್ಲಿ ದೊರೆತ ಅಪೂರ್ವ ಅವಕಾಶ ಯಶಸ್ವೀ ಸಂಸ್ಥೆಗೆ ಸಂದ ಗೌರವ” ಎಂದರು. ಕಾರ್ಯಕ್ರಮದಲ್ಲಿ ಗಣಪಯ್ಯ ಚಡಗ, ಶ್ರೀಮತಿ ಶಾಲಿನಿ, ಅನಂತ ಮಂಜ, ಶ್ರೀಮತಿ ಸವಿತಾ ಮಂಜ, ಗುರು ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ರಾಹುಲ್ ಕುಂದರ್ ಕೋಡಿ, ಪೂಜಾ ಆಚಾರ್, ಪಂಚಮಿ ವೈದ್ಯ ಉಪಸ್ಥಿತರಿದ್ದರು. ಬಳಿಕ ಶುಭಾಶಯ ಯಕ್ಷಗಾಯನ ಪ್ರಸ್ತುತಿಗೊಂಡಿತು.

Read More

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ನಿರಂಜನ 100 ವರ್ಷದ ನೆನಪಿನ ಉತ್ಸವ ಕಾರ್ಯಕ್ರಮವನ್ನು ದಿನಾಂಕ 22 ಫೆಬ್ರವರಿ 2025ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ತುಳು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ ಗಂಟೆ 11-45ಕ್ಕೆ ‘ನಿರಂಜನ ಇವರ ಬದುಕು ಬರಹ’ದ ಕುರಿತು ವಿಚಾರಗೋಷ್ಠಿ, ಮಧ್ಯಾಹ್ನ 12-30 ಗಂಟೆಗೆ ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳಿಂದ ‘ಪದರಂಗಿತ’, 2-00 ಗಂಟೆಗೆ ವಿದ್ಯಾರ್ಥಿ ಗೋಷ್ಠಿಯಲ್ಲಿ ನಿರಂಜನ ಇವರ ಸಾಹಿತ್ಯ ಹೊಸ ತಲೆಮಾರಿನ ದೃಷ್ಠಿಯಿಂದ ಎಂಬ ವಿಷಯದ ಬಗ್ಗೆ ಸಂವಾದ, 3-30 ಗಂಟೆಗೆ ವಿಚಾರಗೋಷ್ಠಿ, 4-30 ಗಂಟೆಗೆ ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ (ರಿ.) ಇವರಿಂದ ‘ಪದರಂಗಿತ’, ಸಂಜೆ 5-30 ಗಂಟೆಗೆ ಚಿರಸ್ಮರಣೆ…

Read More