Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಸಂಗೀತ ಪರಿಷತ್ ಸಂಸ್ಥೆಯು ಸ್ಥಾಪನೆಯಾದ ಆರಂಭದ ಹಂತದಲ್ಲಿ ಹಲವು ಮನೆ ಮನೆಗಳಲ್ಲಿ ಸಂಗೀತ ಕಛೇರಿಯನ್ನು ಹಮ್ಮಿಕೊಂಡು ಬರುತ್ತಿತ್ತು. ಕರ್ನಾಟಕ ಸಂಗೀತವನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳಿಸಿ ಬೆಳೆಸುವ ಮಹತ್ತರ ಆಶಯದೊಂದಿಗೆ ಕಲಾಭಿಮಾನಿಗಳಿಗೆ ಸಂಗೀತವನ್ನು ನೀಡುವುದರೊಂದಿಗೆ ಸಂಸ್ಥೆಯ ಪರಿಚಯ, ಕಲಾಭಿಮಾನಿಗಳ ಪರಿಚಯ, ಕಲಾವಿದರ ಪರಿಚಯ ಹೀಗೆ ಒಂದು ಕುಟುಂಬದಂತೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಸಂಸ್ಥೆಯು ಬೆಳೆಯುತ್ತಿದ್ದಂತೆ ದೊಡ್ಡ ದೊಡ್ಡ ಪ್ರಮಾಣದ ಕಾರ್ಯಕ್ರಮಗಳು ಆರಂಭವಾಯಿತು. ಗೃಹ ಸಂಗೀತವು ಸಭಾಭವನಕ್ಕೆ ಸ್ಥಳಾಂತರಗೂಂಡಿತು. 2013 ಅಕ್ಟೋಬರ್ 18ರಂದು ನಾವು ಕಲಾವಿದರೂ ಹಾಗೂ ಕಲಾಭಿಮಾನಿಗಳೊಂದಿಗೆ ದೂರದ ಊರುಗಳಿಗೆ ತೆರಳಿ (ಶೃಂಗೇರಿ) ಒಂದು ದಿನದ ಪ್ರವಾಸ (ಸಂಗೀತ ಯಾತ್ರಾ) ಅಲ್ಲಿಯ ಸಭಾದ ಜೊತೆಯಲ್ಲಿ ಕಛೇರಿ ಹೀಗೆ ವಿಭಿನ್ನ ಯೋಜನೆಯನ್ನು ಆರಂಭಿಸಲಾಯಿತು. ಸುಬ್ರಹ್ಮಣ್ಯದಲ್ಲೂ ಕಾರ್ಯಕ್ರಮ ಆಯೋಜಿಸಿತ್ತು. ಇದೀಗ ನಮ್ಮ ಸದಸ್ಯರು, ಕಲಾಭಿಮಾನಿಗಳು ಹಾಗೂ ಕಲಾಪೋಷಕರ ಆಸ್ಥೆಯಂತೆ ಈ ಯೋಜನೆಯ ಪುನರಾರಂಭ ಇದೇ ಬರುವ ದಿನಾಂಕ 14 ಫೆಬ್ರುವರಿ 2026ರ ಶನಿವಾರ ವಾಮಂಜೂರಿನ ಚರ್ಚ್ ಮುಂಭಾಗ ಮೆಂಡೋನ್ಸ ಗಾರ್ಡನ್ ಗ್ಲೋಬಲ್…
ಕಿನ್ನಿಗೋಳಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ವತಿಯಿಂದ ಖ್ಯಾತ ಸಾಹಿತಿ ಡಾ. ಬಿ. ಜನಾರ್ದನ ಭಟ್ ಬರೆದ ‘ತುಳುನಾಡಿನ ಬೆರ್ಮರು’ ಕೃತಿಯ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮವು ದಿನಾಂಕ 15 ಫೆಬ್ರವರಿ 2026ರಂದು ಸಂಜೆ ಗಂಟೆ 3-45ಕ್ಕೆ ಸಚ್ಚೇರಿಪೇಟೆ ಸೇತುವೆ ಬಳಿಯ ಶಾಂಭವಿ ನದಿ ತಟದಲ್ಲಿರುವ ಆಳಗುಂಡಿ ಬ್ರಹ್ಮಸ್ಥಾನದಲ್ಲಿ ನಡೆಯಲಿದೆ. ಕೆ.ಎಲ್. ಕುಂಡಂತಾಯ, ಪೊಸ್ರಾಲು ರಾಘವೇಂದ್ರ ಭಟ್ ಪೊಸ್ರಾಲು, ಜಗದೀಶ ಶೆಟ್ಟಿ ನಡಿಗುತ್ತು, ಕೆ. ಸತ್ಯಶಂಕರ ಶೆಟ್ಟಿ ಇವರುಗಳು ಭಾಗವಹಿಸಲಿದ್ದಾರೆ. ತುಳುನಾಡಿನ ಪ್ರಧಾನ ಆರಾಧ್ಯ ದೈವವಾದ ಬೆರ್ಮೆರ್ ಎಂದರೆ ಯಾರು ಎನ್ನುವ ವಿಚಾರ ವಿದ್ವಾಂಸರಿಂದ ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಲ್ಪಡುತ್ತಿದೆ. ಬೆರ್ಮೆರ ಯಾರು ಎಂಬ ಚರ್ಚೆಗೆ ಹೊಸ ದಿಕ್ಕನ್ನು ತೋರಿಸಿದ ಡಾ. ಬಿ. ಜನಾರ್ದನ ಭಟ್ಟರು ಎರಡು ಬಗೆಯ ಬೆರ್ಮರನ್ನು ಗುರುತಿಸಿದ್ದಾರೆ. ಶಾಲಿವಾಹನನು ತುಳುನಾಡಿನ ಸಾತವಾಹನ ಅರಸನೆಂಬ ಗೋವಿಂದ ಪೈಗಳ ಸೂಚನೆಯನ್ನು ವಿಸ್ತರಿಸಿ ಶಾಸ್ತಾವು ಅಥವಾ ಶಾಸ್ತಾರನೆ ಭೂತ ಬ್ರಹ್ಮ ಎಂಬ ವಾದವನ್ನು ಹೊಸದಾಗಿ…
ಮಂಗಳೂರು : ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಮತ್ತು ರಂಗ ಅಧ್ಯಯನ ಕೇಂದ್ರ ಆಯೋಜನೆಯಲ್ಲಿ ದಿನಾಂಕ 13 ಫೆಬ್ರವರಿ 2026ರಂದು ಬೆಳಗ್ಗೆ ಗಂಟೆ 10-00ಕ್ಕೆ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ಎಲ್.ಎಫ್. ರಸ್ಕಿನ್ಹ ಸಭಾಂಗಣದಲ್ಲಿ ಕೃತಿ ಲೋಕಾರ್ಪಣೆ, ಸಂವಾದ ಮತ್ತು ವಿನೂತನ ಯಕ್ಷಪ್ರಸ್ತುತಿ ಕಾರ್ಯಕ್ರಮ ನಡೆಯಲಿದೆ. ತುಮಕೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಇವರು ಯಕ್ಷಗಾನ ಮತ್ತು ಕರಾವಳಿಯ ಸಾಮಾಜಿಕ ಇತಿಹಾಸದ ಕುರಿತು ಸಂಶೋಧನೆ ನಡೆಸಿ ಬರೆದ ‘ಅಳವು ಅರಿಯದ ಭಾಷೆ’ ಎಂಬ ಪುಸ್ತಕದ ಬಿಡುಗಡೆ, ಸಂವಾದ ನಡೆಯಲಿದೆ. ಪಟ್ಲ ಸತೀಶ್ ಶೆಟ್ಟಿ ಪುಸ್ತಕ ಬಿಡುಗಡೆ ಮಾಡಲಿದ್ದು, ಸುಪ್ರಸಿದ್ಧ ಯಕ್ಷಗಾನ ಕಲಾವಿದ ವಾಸುದೇವ ರಂಗಾಭಟ್ಟ, ಪ್ರಾಧ್ಯಾಪಕ ಪ್ರೊ. ಐವಾನ್ ಫ್ರಾನ್ಸಿಸ್ ಲೋಬೋ, ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ್ ಕೆ. ಶೆಟ್ಟಿ, ಕವಿ ಡಾ. ಚೇತನ್ ಸೋಮೇಶ್ವರ, ಸಹಾಯಕ ಪ್ರಾಧ್ಯಾಪಕರಾದ ಡಾ. ಜೈಬುನ್ನೀಸಾ ಅಬ್ದುಲ್ಲಾ ರಜಾಕ್ ಹಮ್ಮಬ್ಬ ಮತ್ತು ಇಂಗ್ಲೆಂಡ್ ನ ಯೂನಿವರ್ಸಿಟಿ ಆಫ್ ಬಾತ್ ನ ಸಂಶೋಧಕ…
ಜೀಜೀಯವರ ಕವಿತೆಗಳೆಂದರೆ ಸೂಜಿಯಂತೆ. ಸೂಜಿ ಸಣ್ಣದಾದರೂ ಅದರ ಗುಣ ದೊಡ್ಡದು. ಸೂಜಿ ಇರುವುದು ಚುಚ್ಚುವುದಕ್ಕಲ್ಲ. ಹೊಲಿದು ಒಂದು ಮಾಡುವುದಕ್ಕೆ. ಅಂತಹ, ಒಂದು ಮಾಡುವ ಗುಣ- ಒಂದಾಗಿಸುವ ಗುಣ- ಒಟ್ಟುಗೂಡಿಸುವ ಗುಣ ಜೀ ಜೀಯವರ ಕವಿತೆಗಳಿಗಿವೆ. ಕಾಂತೆಯನ್ನು ಕವಿತೆಯಾಗಿ ಕಂಡಾಗ ಸಂಸಾರ ತುಂಡಾಗದೆ ಯಾವತ್ತಿಗೂ ಒಂದಾಗಿಯೇ ಇರುವುದಂತೂ ಸತ್ಯ. ಅಂತಹ ಪರಮ ಸತ್ಯವನ್ನು ಅರಿತುಕೊಂಡ ಗಣೇಶ ಪ್ರಸಾದ್ ಜೀ ಅವರು ಕಾಂತೆಯಲ್ಲಿ ಕವಿತೆ ಕಾಣುತ್ತಾರೆ, ಕವಿತೆಯಲ್ಲಿ ಕಾಂತೆಯನ್ನು ಕಾಣುತ್ತಾರೆ. ಇಂತಹ ಕಾಣ್ಕೆಗಳು ಸಿಗುವುದು ಬದುಕನ್ನು ಚೆಲುವಾಗಿಸಿಕೊಂಡಾಗ. ಮುದ್ದು ಮುದ್ದಾದ ಮುದ್ದಣ ಕಾಂತೆಯನ್ನು (ಮನೋರಮೆಯನ್ನು) ತನ್ನ ಜೊತೆ ಕುಳ್ಳಿರಿಸಿಕೊಂಡು ಗದ್ಯದಲ್ಲಿ ಕಥೆ ಹೇಳುತ್ತೇನೆ ಎನ್ನುತ್ತಾ, ಗದ್ಯವನ್ನೇ ಕಾವ್ಯವಾಗಿಸಿದ ಮಹನೀಯ. ಜೀ ಜೀ ಯವರು ಕಾಂತೆಯನ್ನು ತನ್ನ ಜೊತೆಗಿರಿಸಿಕೊಂಡು ಕವಿತೆಯನ್ನು ಕಂಡುಕೊಂಡವರು. ಹಾಗಾಗಿ ಇಲ್ಲಿ ಕಾ0ತೆಯಲ್ಲಿ ಕವಿತೆಯೂ, ಕವಿತೆಯಲ್ಲಿ ಕಾಂತೆಯೂ ಇಡೀ ಸಂಕಲನದ ಬರಹಗಳಲ್ಲಿ ಕಾಣುತ್ತಿರುವುದು ವಿಶೇಷವಾಗಿದೆ. ಕಾಂತೆ ಮತ್ತು ಕವಿತೆ ಎರಡು ಸಮಾನ ಭಾವವಾಗಿ ಒಂದಕ್ಕೊಂದು ಮಿಳಿತಗೊಂಡು ಇಲ್ಲಿನ ಸಾಲುಗಳಲ್ಲಿ ಪ್ರತಿಬಿಂಬಿಸುತ್ತಿರುವುದು ಕವಿ ದೃಷ್ಟಿಯ…
ಮಂಗಳೂರು : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ‘ವೀರರಾಣಿ ಅಬ್ಬಕ್ಕ ಉತ್ಸವ 2025-2026’ ಕಾರ್ಯಕ್ರಮವನ್ನು ದಿನಾಂಕ 14 ಫೆಬ್ರವರಿ 2026ರಂದು ಪೆರ್ಮನ್ನೂರು ತೊಕ್ಕೊಟ್ಟು ಒಳಪೇಟೆಯ ಡಾ. ಅಂಬೇಡ್ಕರ್ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 2-00 ಗಂಟೆಗೆ ಸ್ವರ ಮಾಧುರ್ಯ ತಂಡದ ಶ್ರೀಮತಿ ಯಶಸ್ವಿನಿ ಉಳ್ಳಾಲ್ ಇವರಿಂದ ‘ನಾಡು ನುಡಿ ಗೀತೋತ್ಸವ’, 3-00 ಗಂಟೆಗೆ ಅಲ್ ಅಝ್ಝಾರಿಯಾ ದಫ್ ತಂಡದಿಂದ ದಫ್ ಕಾರ್ಯಕ್ರಮ ಮತ್ತು ಹುಸೈನ್ ಕಾಟಿಪಳ್ಳ ಬಳಗದಿಂದ ಬ್ಯಾರಿ ಹಾಡುಗಳ ಸಂಭ್ರಮ, 3-30 ಗಂಟೆಗೆ ಯುವವಾಹಿನಿ (ರಿ.) ಕೊಲ್ಯ ಘಟಕದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 4-00 ಗಂಟೆಗೆ ಕೊಂಕಣಿ ಕಾರ್ಯಕ್ರಮದಲ್ಲಿ ಕುಡುಂಬಿ ನೃತ್ಯ, 4-30 ಗಂಟೆಗೆ ಬಲೇ ತೆಲಿಪಾಲೆ ಖ್ಯಾತಿಯ ಪ್ರಶಂಸಾ ಕಾಪು ತಂಡದವರಿಂದ ‘ಹಾಸ್ಯ ವೈವಿಧ್ಯ – ಬಲೇ ತೆಲಿಪಾಲೆ’, 5-00 ಗಂಟೆಗೆ ಪಜೀರು ನೃತ್ಯಲಹರಿ ನಾಟ್ಯಾಲಯದ ವಿದುಷಿ ರೇಶ್ಮಾ ನಿರ್ಮಲ್ ಭಟ್ ಇವರಿಂದ ‘ಸ್ವಾಗತ ನೃತ್ಯ’ ಪ್ರಸ್ತುತವಿದೆ. ಸಂಜೆ 5-30 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ…
ಮಿತ್ತಬೈಲು : ಶ್ರೀಮದ್ ಭಾಗವತ ಪುರಾಣದ ಪುರಾಣದ ಪ್ರವಚನಕಾರರು ವಿದ್ವಾನ್ ಬ್ರಹ್ಮಾವರ ರಾಮಕೃಷ್ಣ ಭಟ್ ಇವರಿಂದ ‘ಶ್ರೀಮದ್ ಭಾಗವತ ಪುರಾಣ’ ಪ್ರವಚನ ಕಾರ್ಯಕ್ರಮವನ್ನು ದಿನಾಂಕ 13ರಿಂದ 19 ಫೆಬ್ರವರಿ 2026ರವರೆಗೆ ಪ್ರತಿದಿನ ಸಂಜೆ 6-00 ಗಂಟೆಯಿಂದ 7-30ರ ತನಕ ಮಿತ್ತಬೈಲು ಶ್ರೀ ರಾಮ ಭಜನಾ ಮಂದಿರದಲ್ಲಿ ಆಯೋಜಿಸಲಾಗಿದೆ. ದಿನಾಂಕ 13 ಫೆಬ್ರವರಿ 2026ರಂದು ಸಂಜೆ 4-30 ಗಂಟೆಗೆ ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ಮಹಿಳಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, 7-30 ಗಂಟೆಗೆ ಮಂಗಳೂರಿನ ಕುಮಾರಿ ಶ್ವೇತ ಕಾಮತ್ ಇವರಿಂದ ‘ಭಜನ್ ಸಂಧ್ಯಾ’ ನಡೆಯಲಿದೆ. ದಿನಾಂಕ 14 ಫೆಬ್ರವರಿ 2026ರಂದು ಸಂಜೆ 4-30 ಗಂಟೆಗೆ ಮಂಗಳೂರಿನ ಶ್ರೀ ವೀರ ವೆಂಕಟೇಶ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ 9-00 ಗಂಟೆಗೆ ಅಮೃತ ಮಿತ್ರ ಹವ್ಯಾಸಿ ಮಹಿಳೆಯರ ಬಳಗ ಸದಸ್ಯರು ಹಾಗೂ ಹವ್ಯಾಸಿ ಕಲಾವಿದರ ಕೂಡುವಿಕೆಯಿಂದ ‘ಶ್ರೀ ಕೃಷ್ಣಲೀಲೆ ಕಂಸವಧೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ದಿನಾಂಕ 15 ಫೆಬ್ರವರಿ 2026ರಂದು ಸಂಜೆ…
ಬಂಟ್ವಾಳ : ಆಭಿರುಚಿ ಜೋಡುಮಾರ್ಗ ಸಾಹಿತ್ಯಕ ಸಾಂಸ್ಕೃತಿಕ ವೇದಿಕೆ ಬಂಟ್ವಾಳ ಹಾಗೂ ಬಿ.ವಿ. ಕಾರಂತ ರಂಗ ಭೂಮಿಕಾ ಟ್ರಸ್ಟ್ (ರಿ.) ಮಂಚಿ ಇವರ ಸಹಯೋಗದಲ್ಲಿ ನಾಟಕ ಪ್ರದರ್ಶನವನ್ನು ದಿನಾಂಕ 15 ಫೆಬ್ರವರಿ 2026ರಂದು ಸಂಜೆ 6-30 ಗಂಟೆಗೆ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ತೀರ್ಥಹಳ್ಳಿಯ ನಟಮಿತ್ರರು ಹವ್ಯಾಸಿ ಕಲಾ ಸಂಘ (ರಿ.) ಇವರು ಭಾರತ್ ರಂಗ ಮಹೋತ್ಸಹಕ್ಕೆ ಆಯ್ಕೆಯಾದ ‘ಆ ಊರು – ಈ ಊರು’ ನಾಟಕವನ್ನು ಅಭಿನಯಿಸಲಿದ್ದು, ಜಿ.ಬಿ. ಜೋಷಿ ರಚಿಸಿರುವ ಹರಿವಿನಾಯಕ ಸಂಗೀತ ಹಾಗೂ ಹುಲುಗಪ್ಪ ಕಟ್ಟೀಮನಿ ನಿರ್ದೇಶನ ಮಾಡಿರುತ್ತಾರೆ.
ದೇವದುರ್ಗ : ಚುಟುಕು ಸಾಹಿತ್ಯ ಪರಿಷತ್ತು ದೇವದುರ್ಗ ತಾಲೂಕು ಘಟಕ ರಾಯಚೂರು ಜಿಲ್ಲಾ ಇದರ ವತಿಯಿಂದ ದೇವದುರ್ಗ ತಾಲೂಕು ಎರಡನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ದಿನಾಂಕ 14 ಫೆಬ್ರವರಿ 2026ರಂದು ದೇವದುರ್ಗ ಹೊಸ ಬಸ್ ನಿಲ್ದಾಣ ಹತ್ತಿರ ಇರುವ ಶ್ರೀ ಮುರಿಗೆಪ್ಪ ಸಾಹು ಖೇಣೇದ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಮುಂಜಾನೆ 7-30 ಗಂಟೆಗೆ ಧ್ವಜಾರೋಹಣ, 8-00 ಗಂಟೆಗೆ ಕನ್ನಡ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಮತ್ತು 10-00 ಗಂಟೆಗೆ ಚುಟುಕು ಯುಗಾಚಾರ್ಯ ಸನ್ಮಾನ್ಯ ಡಾ. ಎಂ.ಜಿ.ಆರ್. ಅರಸ್ ಇವರು ಚುಟುಕು ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಭಾವದೀಟಿಯ ಬೆಳ್ಳಿಚುಕ್ಕಿಗಳು’ ಭೀಮೋಜಿರಾವ್ ಜಗತಾಪ ಇವರ ಹನಿಗವನ ಸಂಕಲನ, ‘ಚುಟುಕು ಕುಟುಕು’ ಸ್ಮರಣ ಸಂಚಿಕೆ, ‘ಅರಸು ಚುಟುಕು ಚಿತ್ತಾರಗಳು’ ಸೀತಾಲಕ್ಷ್ಮಿ ವರ್ಮರವರ ಕೃತಿ ಮತ್ತು ‘ಚುಟುಕು ಚಮತ್ಕಾರ’ ಶಿವರಾಯ ಅಕ್ಕರಕಿ ಇವರ ಚುಟುಕು ಸಂಕಲನ ಬಿಡುಗಡೆಗೊಳ್ಳಲಿದೆ. ಮಧ್ಯಾಹ್ನ 1-00 ಗಂಟೆಗೆ ಚುಟುಕು ಸಾಹಿತ್ಯ ಸಂಕೀರ್ಣ ಗೋಷ್ಠಿ -01ನ್ನು ಶ್ರೀದೇವಿ ರಾಜಶೇಖರ ನಾಯಕ ಇವರು…
ಕೋಟ : ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಅಮೃತೇಶ್ವರಿ ಮಹಿಳಾ ಮೀನುಗಾರರ ಸಹಕಾರಿ ಸಂಘ ಕೋಟ, ಉಸಿರು ಮತ್ತು ನೆನಪು ಕೋಟ ಇವರ ಸಾರಥ್ಯದಲ್ಲಿ ಕಾಲಮಿತಿ ಸಾಹಿತ್ಯ ಸಮ್ಮೇಳನದ ಮೂರನೆಯ ಸಂಚಿಕೆಯಾಗಿ ಮಹಿಳೆಯರ ಸಾಹಿತ್ಯ ಸಮ್ಮೇಳನವು ದಿನಾಂಕ 15 ಮಾರ್ಚ್ 2026ರಂದು ನಡೆಯಲಿದೆ. ಈ ಸಮ್ಮೇಳನದಲ್ಲಿ ಮಹಿಳೆಯರ ಕವಿಗೋಷ್ಠಿ ನಡೆಯಲಿದ್ದು, ಕವಿಗೋಷ್ಠಿಯಲ್ಲಿ ಭಾಗವಹಿಸುವವರು ದಿನಾಂಕ 25 ಫೆಬ್ರವರಿ 2026ರ ಒಳಗೆ ತಮ್ಮ ಹೆಸರನ್ನು ಕೆ. ವಾಣಿಶ್ರೀ ಅಶೋಕ್ ಐತಾಳ 9535705355 ಇವರಿಗೆ ಕಳುಹಿಸಬೇಕಾಗಿ ಪ್ರತಿಷ್ಠಾನದ ಗೌರವ ಅಧ್ಯಕ್ಷ ಆನಂದ ಸಿ. ಕುಂದರ್, ಅಧ್ಯಕ್ಷ ಸತೀಶ್ ಬಾರಿಕೆರೆ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಹಾಗೂ ಕಾರ್ಯಕ್ರಮದ ನಿರ್ದೇಶಕರಾದ ಸುಶೀಲಾ ಸೋಮಶೇಖರ್, ಪಂಚಾಯತ್ ಪಿಡಿಒ ರವೀಂದ್ರ ರಾವ್, ಕಾಯದರ್ಶಿ ಸುಮತಿ ಅಂಚನ್ ತಿಳಿಸಿದ್ದಾರೆ.
ಪುತ್ತೂರು : ಭಾರತ ಉತ್ಕೃಷ್ಟ ಕ್ಷಾತ್ರ ಪರಂಪರೆಯನ್ನು ಹೊಂದಿರುವ ಮಹಾನ್ ರಾಷ್ಟ್ರ. ಪುರುಷರು ಮಹಿಳೆಯರಾದಿಯಾಗಿ ಅನೇಕರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ನೀಡಿದ್ದಾರೆ. ಅದೆಷ್ಟೋ ವೀರಗಾಥೆ ಇತಿಹಾಸದ ಪುಟಗಳಲ್ಲಿ ಅಳಿದು ಹೋಗಿದೆ. ಇನ್ನೊಂದಷ್ಟು ವಿಚಾರಗಳು ಬಲವಂತಕ್ಕೆ ಮಣಿದು ತೆರೆಮರೆಗೆ ಸರಿಸಲ್ಪಟ್ಟಿವೆ. ಅಂತಹ ಪರಂಪರೆಯಲ್ಲಿ ಕ್ಷಾತ್ರ ತೇಜದಲ್ಲಿ ಹೊಳೆಯಬೇಕಾಗಿದ್ದ ಮಹಿಳೆಯರದ್ದೂ ಸೇರಿಕೊಂಡಿದೆ ಅನ್ನುವುದು ದುರಂತ. ಹೆಣ್ಣನ್ನು ಅಬಲೆ, ಶೋಷಿತೆ ಎಂದು ನಮ್ಮ ಇತಿಹಾಸ ಪುಸ್ತಕಗಳು ಬಿಂಬಿಸಿದ್ದೇ ಹೆಚ್ಚು. ಆದರೆ ನಿಜವಾದ ಭಾರತದ ಇತಿಹಾಸವನ್ನು ಗಮನಿಸಿದರೆ ಅಲ್ಲಿ ಅಪ್ರತಿಮ ಧೈರ್ಯ, ಶೌರ್ಯ, ತ್ಯಾಗ ಮತ್ತು ಬುದ್ಧಿಮತ್ತೆಯನ್ನು ಮೆರೆದ ಅನೇಕ ವೀರ ಮಹಿಳೆಯರು ದೇಶಭಕ್ತಿಯ ಅತ್ಯುತ್ತಮ ನಿದರ್ಶನ ನೀಡಿರುವುದನ್ನು ಗಮನಿಸಬಹುದು. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕ, ಓನಕೆ ಓಬವ್ವ, ರಾಣಿ ದುರ್ಗಾವತಿ ಮೊದಲಾದವರು ಪರಕೀಯರ ವಿರುದ್ಧ ಮತ್ತು ಅನ್ಯಾಯದ ವಿರುದ್ಧ ಹೋರಾಡಿ, ಇಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಭವ್ಯ ಭಾರತದ ಕನಸು ನನಸಾಗಬೇಕಾದರೆ ಅಳಿದು ಹೋಗುವುತ್ತಿರುವುದನ್ನು ಕೆದಕ…