Author: roovari

ಮಂಗಳೂರು : ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ.) ಅಶೋಕನಗರ, ಉರ್ವಸ್ಟೋರ್ ಮಂಗಳೂರು ಇದರ ವತಿಯಿಂದ ಕರ್ನಾಟಕ ರಾಜ್ಯ ಮಹಿಳಾ ಜಾನಪದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ ‘ಮಹಿಳಾ ವೈಭವ -2026’ ಕಾರ್ಯಕ್ರಮವನ್ನು ದಿನಾಂಕ 01 ಮತ್ತು 02 ಫೆಬ್ರುವರಿ 2026ರಂದು ಬೆಳಿಗ್ಗೆ 9-30 ಗಂಟೆಗೆ ಮಂಗಳೂರಿನ ನೆಹರು ಮೈದಾನ ಮತ್ತು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ. ದಿನಾಂಕ 01 ಫೆಬ್ರುವರಿ 2026ರಂದು ಮಂಗಳೂರಿನ ನೆಹರು ಮೈದಾನದ ಅಬ್ಬಕ್ಕ ವೇದಿಕೆಯಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ‘ಮಹಿಳಾ ರತ್ನ’ ಪ್ರಶಸ್ತಿ ಪ್ರದಾನ, ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. ಬೆಳಿಗ್ಗೆ 8-30 ಗಂಟೆಗೆ ಮಹಿಳಾ ಜಾಥಾ, ಧ್ವಜಾರೋಹಣ ಮತ್ತು ಜಾನಪದ ಕ್ರೀಡೋತ್ಸವ ನಡೆಯಲಿದೆ. ಕುದ್ಮುಲ್ ರಂಗರಾವ್ ಪುರಭವನದಲ್ಲಿ ವಿಚಾರಗೋಷ್ಠಿಗಳು, ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ, ಆರೋಗ್ಯ ಶಿಬಿರ, ಮಾರಾಟ ಮಳಿಗೆ ಉದ್ಘಾಟನೆ ನಡೆಯಲಿದೆ. ದಿನಾಂಕ 02 ಫೆಬ್ರುವರಿ 2026ರಂದು ಸಂಜೆ 3-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸನ್ಮಾನ್ಯ ಜೈಜುನ್ನೀಸಾ ಇವರು ದೀಪ ಪ್ರಜ್ವಲನೆ…

Read More

ಮೂಡುಬಿದಿರೆ : ಸುರಸಾರವ ಸಂಗೀತ ಶಾಲೆಯ ದ್ವಿತೀಯ ವರ್ಷದ ಸಂಗೀತೋತ್ಸವ-2026 ‘ದಣಿದ ದನಿಗೆ ರಾಗದ ಬೆಸುಗೆ’ ಕಾರ್ಯಕ್ರಮವು ದಿನಾಂಕ 25 ಜನವರಿ 2026ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು. ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಎಂ. ಉದ್ಘಾಟಿಸಿ ಮಾತನಾಡಿ, “ರಾಗ-ತಾಳಗಳ ಮೂಲಕ ಭಗವಂತನನ್ನು ಸಾಕ್ಷಾತ್ಕಾರಗೊಳಿಸಬಹುದಾಗಿದೆ. ಸಂಗೀತದ ಮೂಲಕ ದೈವಾನುಭವ ಪಡೆಯಲು ಸಾಧ್ಯ, ಸಂಗೀತ ಒಂದು ದೈವಿಕ ಕಲೆ. ಇದು ಮನಸ್ಸು, ದೇಹ ಹಾಗೂ ಪ್ರಕೃತಿಯೊಂದಿಗೂ ಸಂಯೋಜನೆ ಸಾಧಿಸಿ ಮಾನವನ ಬದುಕನ್ನು ಹಸನಾಗಿಸುತ್ತದೆ” ಎಂದು ಹೇಳಿದರು. ಕಲಾ ಪೋಷಕ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಯಶವಂತ್ ಎಂ.ಜಿ. ಪ್ರಸ್ತಾವಿಕವಾಗಿ ಮಾತನಾಡಿ, “ತಮ್ಮ ಸಂಗೀತ ಸಾಧನೆಯನ್ನು ವೈಯಕ್ತಿಕ ಮಟ್ಟಕ್ಕೆ ಸೀಮಿತಗೊಳಿಸದೆ ಸಮಾಜದ ಮಕ್ಕಳಿಗೆ ಉಪಯೋಗವಾಗುವ ಉದ್ದೇಶದಿಂದ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಪ್ರಾರಂಭದಲ್ಲಿ ಸ್ವಗೃಹದಲ್ಲೇ ಸಂಗೀತ ತರಗತಿಗಳನ್ನು ಆರಂಭಿಸಿದ್ದು, ಇಂದು ಅನೇಕ ವಿದ್ಯಾರ್ಥಿಗಳು ಸಂಗೀತ ಶಿಕ್ಷಣ ಪಡೆಯುತ್ತಿದ್ದಾರೆ. ಜಿ ಕನ್ನಡ ವಾಹಿನಿಯ ‘ಸರಿಗಮಪ’ ರಿಯಾಲಿಟಿ ಶೋ ನಂತರ ದೊರೆತ ಅನುಭವಗಳು ಕಲಾವಿದರಿಗೆ ಸೂಕ್ತ…

Read More

ಮಂಗಳೂರು : ನಂತೂರು ಶ್ರೀ ಭಾರತಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ, ಹವ್ಯಕ ಸಭಾ ಮಂಗಳೂರು ಹಾಗೂ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇವುಗಳು ಜಂಟಿಯಾಗಿ ಆಯೋಜಿಸಿದ ‘ಕೌಟುಂಬಿಕ ಹಾಗೂ ಸಾಮಾಜಿಕ ಮೌಲ್ಯಗಳ ಅನಿವಾರ್ಯತೆ’ ಎಂಬ ವಿಚಾರಗೋಷ್ಠಿಯು ದಿನಾಂಕ 25 ಜನವರಿ 2026ರಂದು ನಡೆಯಿತು. ಈ ವಿಚಾರಗೋಷ್ಠಿಯಲ್ಲಿ ಸಂಪನ್ನೂಲ ವ್ಯಕ್ತಿಯಾಗಿ ಮಾತನಾಡಿದ ಮಾಯಾಮೃಗ ಖ್ಯಾತಿಯ ಹಿರಿಯ ಖ್ಯಾತ ನಟ ಹಾಗೂ ಆದಾಯ ತೆರಿಗೆ ಇಲಾಖೆಯ ನಿವೃತ್ತ ಸಹ ಆಯುಕ್ತರಾದ ಸೇತುರಾಮ್ “ನಾವು ಅಪ್ರಾಮಾಣಿಕರಾದರೆ ನಮ್ಮ ಸುತ್ತಲಿನವರೂ ನಮಗೆ ಅಪ್ರಾಮಾಣಿಕರಾಗಿಯೇ ಕಾಣುತ್ತಾರೆ. ಅದೇ ನಾವು ಪ್ರಾಮಾಣಿಕರಾಗಿದ್ದರೆ ಎಲ್ಲರೂ ಪ್ರಾಮಾಣಿಕರೇ. ಸಮಾಜದಲ್ಲಿ ಮೌಲ್ಯಗಳು ಸತ್ತಿವೆ ಎನ್ನುವುದು ಸರಿಯಲ್ಲ. ಮೌಲ್ಯಗಳು ಸತ್ತಿದ್ದರೆ ಲಂಚ ತೆಗೆದುಕೊಳ್ಳುವವರು ಯಾಕೆ ನೇರವಾಗಿ ತೆಗೆದುಕೊಳ್ಳುತ್ತಿಲ್ಲ. ಅವರೊಳಗಿನ ಅಂತಸ್ಸಾಕ್ಷಿ ಅದು ಸರಿ ಅಲ್ಲ ಎನ್ನುವ ಕಾರಣದಿಂದಲ್ಲವೇ? ನಮಗೆ ಈಗ ಯಾರ ಬಗ್ಗೆಯೂ ಯಾರ ಬಗ್ಗೆಯೂ ನಂಬಿಕೆ ಇಲ್ಲ. ಮೆಷೀನ್ ಗಳನ್ನು ನಂಬುವ ನಾವು ಮನುಷ್ಯರನ್ನು ನಂಬುವುದಿಲ್ಲ. ಬೃಹತ್ ನಗರಗಳಿಗೆ…

Read More

ಮಂಗಳೂರು : ಕರಾವಳಿ ಲೇಖಕಿಯರ-ವಾಚಕಿಯರ ಸಂಘವು 2025-26ನೇ ಸಾಲಿನ ನಾನಾ ದತ್ತಿ ಪ್ರಶಸ್ತಿಗಳನ್ನು ಘೋಷಿಸಿದೆ. ಮುಂಬಯಿಯ ಡಾ. ಸುನೀತಾ ಶೆಟ್ಟಿ ಪ್ರಾಯೋಜಿಸುವ ‘ತೌಳವ ಸಿರಿ’ ಪ್ರಶಸ್ತಿಗೆ ತುಳು ಮತ್ತು ಕನ್ನಡ ಭಾಷೆಯ ಹಿರಿಯ ಲೇಖಕಿ ಕ್ಯಾಥರಿನ್ ರಾಡ್ರಿಗಸ್ ಆಯ್ಕೆಯಾಗಿದ್ದಾರೆ. ಕರಾವಳಿಯ ಮೊದಲ ತಲೆಮಾರಿನ ಲೇಖಕಿ ಚಂದ್ರಭಾಗಿ ರೈ ಇವರ ಹೆಸರಿನ ದತ್ತಿನಿಧಿ ಪುಸ್ತಕ ಬಹುಮಾನಕ್ಕೆ ಲೇಖಕಿಯರಿಂದ ಅಪ್ರಕಟಿತ ಕವನ ಸಂಕಲನದ ಹಸ್ತಪ್ರತಿಯನ್ನು ಆಹ್ವಾನಿಸಲಾಗಿದ್ದು, ಬಾಗಲಕೋಟೆಯ ಮುರ್ತುಜಾ ಬೇಗಂ ಕೊಡಗಲಿಯವರ ‘ಹಣತೆ ಹಚ್ಚಿ ಬಿಡಿ ಹೆಜ್ಜೆ ಹೆಜ್ಜೆಗೂ’ ಕೃತಿಯು ಬಹುಮಾನ ಪಡೆದುಕೊಂಡಿದೆ. ‘ಡಾ. ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿ’ಗೆ ಸಂಶೋಧನಾತ್ಮಕ ಕೃತಿಗಳನ್ನು ಆಹ್ವಾನಿಸಲಾಗಿದ್ದು, ಲೇಖಕಿ, ಸಂಘಟಕಿ ಸುಖಲಾಕ್ಷಿ ವೈ. ಸುವರ್ಣ ಇವರ ‘ಮುಂಬಯಿ ಮತ್ತು ಮಹಿಳೆ’ ಕೃತಿ ಆಯ್ಕೆಯಾಗಿದೆ. ದಿನಾಂಕ 07 ಫೆಬ್ರುವರಿ 2026ರಂದು ಮಧ್ಯಾಹ್ನ 2-30ಕ್ಕೆ ಉರ್ವಸ್ಟೋರ್‌ನ ಸಂಘದ ಸಾಹಿತ್ಯ ಸದನದ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.…

Read More

ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 115ನೇ ತಿಂಗಳ ಕಾರ್ಯಕ್ರಮ, ಹನ್ನೊಂದನೇ ವಾರ್ಷಿಕೋತ್ಸವ ಹಾಗೂ ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ- 2026’ ಪ್ರದಾನ ಸಮಾರಂಭವು ದಿನಾಂಕ 25 ಜನವರಿ 2026ರಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ವಿಜೃಂಭಣೆಯಿಂದ ಜರುಗಿತು. ಶ್ರೀ ಏಕನಾಥೇಶ್ವರಿ ಭಜನಾ ಮಂಡಳಿ ಕುಂದೇಶ್ವರ ಇವರು ವಿಷ್ಣು ಸಹಸ್ರನಾಮ ಪಠಿಸಿದರು. ಶ್ರೀಮತಿ ವಸಂತಿ ಆರ್. ಪಂಡಿತ್ ಹಾಗೂ ಹಾಲ್ಮಕ್ಕಿ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ಗಂಗೊಳ್ಳಿ ಇವರ ಭಜನಾ ಕಾರ್ಯಕ್ರಮ ನಡೆಯಿತು. ಡಾ. ಕಾಶೀನಾಥ್ ಪೈ ಪ್ರಾರ್ಥಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರುರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಪ್ರಾರಂಭವಾಯಿತು. ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್‌ರು ವೇದಿಕೆಯಲ್ಲಿರುವ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಡಾ. ಕಾಶೀನಾಥ್ ಪೈ ಗಂಗೊಳ್ಳಿ, ಕರ್ನಾಟಕ ಬ್ಯಾಂಕ್ ಅಧಿಕಾರಿ (ನಿವೃತ್ತ) ಜನಾರ್ದನ ಹಂದೆ, ಉಪ್ಪಿನಕುದ್ರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ದೇವಡಿಗ ನೂಜಾಡಿ ಹಾಗೂ ಉಪ್ಪಿನಕುದ್ರು…

Read More

ದೂರದ ಮುಂಬೈಯಲ್ಲಿ ನೆಲೆಸಿ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗಳ ಬಣ್ಣ ಬನಿಯನ್ನು ಗಾಢಗೊಳಿಸುತ್ತ ಬಂದಿರುವ ಪತ್ರಕರ್ತ ಲೇಖಕ ಶ್ರೀನಿವಾಸ ಜೋಕಟ್ಟೆ ಇವರ ಹೊಸ ಕಥಾ ಸಂಕಲನ ಅನೇಕ ದೃಷ್ಟಿಯಿಂದ ನಮ್ಮ ಗಮನವನ್ನು ಸೆಳೆಯುತ್ತದೆ. ‘ಅದೆಲ್ಲಾ ಬಿಟ್ಟು’ ಇದು ಲೇಖಕ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಇವರ ಇತ್ತೀಚಿನ ಕತೆಗಳ ಸಂಕಲನ. ಇದರಲ್ಲಿ ವೈವಿಧ್ಯಮಯವಾದ 27 ಕತೆಗಳಿವೆ. ಜೋಕಟ್ಟೆ ಇವರ ಕತೆಗಳಲ್ಲಿ ವಿಶೇಷವಾಗಿ ಕಂಡುಬರುವುದು ವರ್ತಮಾನದ ವಾಸ್ತವ ದರ್ಶನ, ವಿವರಣೆ ಹಾಗೂ ವಿಶ್ಲೇಷಣೆ. ಸಮಾಜದ ಎಲ್ಲ ಬಗೆಯ ವಿದ್ಯಮಾನಗಳನ್ನು ಪ್ರಶ್ನಿಸುವ, ಆತ್ಮವಿಮರ್ಶೆಗೊಳಪಡಿಸುವ ಯತ್ನ ಈ ಕತೆಗಳಲ್ಲಿ ಎದ್ದು ಕಾಣುತ್ತದೆ. ಆಧುನೀಕರಣ, ಜಾಗತೀಕರಣ ನಗರೀಕರಣ ಮೊದಲಾದವುಗಳ ಪರಿಣಾಮವಾಗಿ ತಲೆ ಎತ್ತುವ ಹೊಸ ಸಂವೇದನೆಗಳನ್ನು, ಮುಂಬೈ ಮಹಾನಗರದ ಬದುಕಿನ ಸಂಕೀರ್ಣ ಮುಖಗಳನ್ನು, ವರ್ತಮಾನದ ಸಾಮಾಜಿಕ ರಾಜಕೀಯ ವಿದ್ಯಮಾನಗಳನ್ನು ಜೋಕಟ್ಟೆಯವರು ಕತೆಯಾಗಿ ಕಟ್ಟಿ ಕೊಟ್ಟಿರುವ ಪರಿ ನಮ್ಮ ಗಮನವನ್ನು ಸೆಳೆಯುತ್ತದೆ. ಇಲ್ಲಿನ ಕತೆಗಳು ಸಮಕಾಲೀನ ಬದುಕಿನ ವಿವಿಧ ಸ್ತರಗಳೊಂದಿಗೆ ನಿಕಟವಾದ ಸಂಪರ್ಕವನ್ನಿಟ್ಟುಕೊಂಡಿವೆ. ಹದಿಹರೆಯದ ಪ್ರೇಮ, ನಂಬಿಕೆ, ಅಪನಂಬಿಕೆ, ಯುವ…

Read More

ಪುತ್ತೂರು : ಎಸ್.ಡಿ.ಪಿ. ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಮತ್ತು ಎಸ್.ಡಿ.ಪಿ. ರೆಮಿಡೀಸ್ ಆ್ಯಂಡ್ ರಿಸರ್ಚ್ ಸೆಂಟರ್ ಇದರ ವತಿಯಿಂದ ‘ಕಲೋಪಾಸನಾ 2026’ 22ನೇ ವರ್ಷದ ಸಾಂಸ್ಕೃತಿಕ ಕಲಾ ಸಂಭ್ರಮವನ್ನು ದಿನಾಂಕ 31 ಜನವರಿ 2026ರಿಂದ 02 ಫೆಬ್ರುವರಿ 2026ರವರೆಗೆ ಸಂಜೆ 6-00 ಗಂಟೆಗೆ ಎಸ್.ಡಿ.ಪಿ. ರೆಮಿಡೀಸ್ ಆ್ಯಂಡ್ ರಿಸರ್ಚ್ ಸೆಂಟರ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 31 ಜನವರಿ 2026ರಂದು ಈ ಕಾರ್ಯಕ್ರಮವನ್ನು ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದುಷಿ ಅನಹಿತ ಮತ್ತು ಅಪೂರ್ವ ಚೆನೈ ಇವರ ಹಾಡುಗಾರಿಕೆಗೆ ವಿದ್ವಾನ್ ಎಲ್. ರಾಮ ಕೃಷ್ಣನ್ ವಯಲಿನ್, ವಿದ್ವಾನ್ ದಿಲ್ಲಿ ಸಾಯಿರಾಮ್ ಮೃದಂಗ ಮತ್ತು ವಿದ್ವಾನ್ ಜಿ. ಎಸ್. ರಾಮಾನುಜಂ ಘಟಂನಲ್ಲಿ ಸಹಕರಿಸಲಿದ್ದಾರೆ. ದಿನಾಂಕ 01 ಫೆಬ್ರುವರಿ 2026ರಂದು ಖ್ಯಾತ ಮಳಯಾಳಂ ಚಿತ್ರನಟಿ ನವ್ಯ ನಾಯರ್ ಇವರಿಂದ ಭರತನಾಟ್ಯ ಹಾಗೂ ದಿನಾಂಕ 02 ಫೆಬ್ರುವರಿ 2026ರಂದು ಶ್ರೀ ಹನುಮಗಿರಿ…

Read More

ಬಂಟ್ವಾಳ : ಖ್ಯಾತ ರಂಗಕರ್ಮಿ ಬಿ.ವಿ.ಕಾರಂತ ನೆನಪಿನ ಮಂಚಿ ನಾಟಕೋತ್ಸವವು ದಿನಾಂಕ 29 ಮತ್ತು 30 ಜನವರಿ 2026ರಂದು ಸಂಜೆ 6-00 ಗಂಟೆಗೆ ಮಂಚಿ ಕುಕ್ಕಾಜೆಯ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ನಡೆಯಲಿದೆ ಎಂದು ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಕಜೆ ರಾಮಚಂದ್ರ ಭಟ್ ತಿಳಿಸಿದ್ದಾರೆ. ದಿನಾಂಕ 29 ಜನವರಿ 2026ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಯಕ್ಷರಂಗಾಯಣ ನಿರ್ದೇಶಕ ಬಿ.ಆರ್. ವೆಂಕಟ್ರಮಣ ಐತಾಳ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ ವಹಿಸಲಿದ್ದು, ಅತಿಥಿಗಳಾಗಿ ಪತ್ರಕರ್ತ ಹಾಗೂ ರಂಗನಟ ರತ್ನದೇವ್ ಶೆಟ್ಟಿ ಮತ್ತು ರಂಗಕಲಾವಿದ ಸುರೇಶ್ ಕೊಟ್ಟಾರಿ ಭಾಗವಹಿಸುವರು. ಸಭಾ ಕಾರ್ಯಕ್ರಮದ ಬಳಿಕ ಕಾರ್ಕಳ ಯಕ್ಷರಂಗಾಯಣ ರೆಪರ್ಟರಿ ಕಲಾವಿದರಿಂದ ಡಾ. ಶಿವರಾಮ ಕಾರಂತ ರಚನೆ, ಭಿನ್ನಷಡ್ಜ ಸಂಗೀತ, ಗಣೇಶ್ ಮಂಡಾರ್ತಿ ಇವರ ನಿರ್ದೇಶನದಲ್ಲಿ ‘ಸೋಮಿಯ ಸೌಭಾಗ್ಯ’ ಪ್ರದರ್ಶನಗೊಳ್ಳುವುದು. ದಿನಾಂಕ 30 ಜನವರಿ 2026ರಂದು ಹಿರಿಯ ನ್ಯಾಯವಾದಿ ಕೆ. ರಮೇಶ್ ಉಪಾಧ್ಯಾಯ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದ್ದು, ಅಭಿರುಚಿ…

Read More

ಮೂಲ್ಕಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಯೋಜಿಸುವ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಖ್ಯಾತ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ. ನಿನಾಸಂ ಸಂಸ್ಥೆಯಲ್ಲಿ ರಂಗಪದವಿ ಮುಗಿಸಿದ ಬಳಿಕ ಮೂರು ದಶಕಗಳಿಂದ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೇ, ಮೂನ್ನೂರಕ್ಕೂ ಹೆಚ್ಚು ತುಳು ಮತ್ತು ಕನ್ನಡ ನಾಟಕಗಳನ್ನು ವಿನ್ಯಾಸಗೊಳಿಸಿದ್ದಾರೆ. ಲೋಕಶಾಕುಂತಲ, ಶಸ್ತ್ರಪರ್ವ, ಹಯ ವದನ, ದರ್ಮತ್ತಿಮಾಯೆ, ಪಿಲಿಪತ್ತಿ ಗಡಸ್, ಅವ್ವಾ ಗೌಡರ ಮಲ್ಲಿ ಹೀಗೆ ಅನೇಕ ನಾಟಕಗಳು, ಕಥನಕವನಗಳನ್ನು ರಂಗದಲ್ಲಿ ಮೂಡಿಸಿದ್ದಾರೆ. ಅನೇಕ ರಂಗಗೀತೆಗಳನ್ನು ರಚಿಸಿದ್ದಾರೆ. ಸಂಗೀತ ನಿರ್ದೇಶನ ಮಾಡಿದ್ದಾರೆ. ಸಾಯುವವನೇ ಚಿರಂಜೀವಿ ಏಕವ್ಯಕ್ತಿ ನಾಟಕ ನೂರಕ್ಕೂ ಹೆಚ್ಚು ಪ್ರಯೋಗ ಕಂಡಿದೆ. ನಾಡಿನ ಖ್ಯಾತ ನಟ, ನಟಿಯರಿಗೆ ಏಕವ್ಯಕ್ತಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಮುದ್ರಾಡಿ, ಮಲ್ಲಾಡಿಹಳ್ಳಿ, ಚಿತ್ರದುರ್ಗ, ಕುಕ್ಕೆಸುಬ್ರಹ್ಮಣ್ಯ ಹೀಗೆ ನಾಡಿನಾದ್ಯಂತ ರಂಗಭೂಮಿಯ ಬೆಳವಣಿಗೆಗೆ ಸಹಕರಿಸಿದ್ದಾರೆ. 50ಕ್ಕೂ ಹೆಚ್ಚು…

Read More

ಕಾಸರಗೋಡು : ಡಾ. ವಾವನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ಸಾರಥ್ಯದ ‘ಸೀತಮ್ಮ ಪುರುಷ ನಾಯಕ ಸ್ಮಾರಕ’ ಕನ್ನಡ ಭವನ ಗ್ರಂಥಾಲಯ (ರಿ.223/2008) ಇದರ ಅಂಗ ಸಂಸ್ಥೆಯಾದ, ಬೆಂಗಳೂರು ಕರ್ನಾಟಕ ಸರಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಇವರಿಂದ ದಿನಾಂಕ 02 ಫೆಬ್ರುವರಿ 2025ರಂದು ಉದ್ಘಾಟನೆಗೊಂಡ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಇದರ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಿರುವ ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ-2026ವು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನದ ಸಭಾಂಗಣದಲ್ಲಿ ‘ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್. ಅರಸ್’ ವೇದಿಕೆಯಲ್ಲಿ ದಿನಾಂಕ 22 ಫೆಬ್ರುವರಿ 2026 ಭಾನುವಾರ ನಡೆಯಲಿದೆ. ಕವಿಗೋಷ್ಠಿ, ಯುವ ಕವಿಗೋಷ್ಠಿ, ವಿಚಾರಗೋಷ್ಠಿ, ‘ಕವಿ ಕಾವ್ಯವಿಭೂಷಣ’, ‘ಕವಿ ಕಾವ್ಯ ಕಂಠೀರವ’ ಪ್ರಶಸ್ತಿ ಪ್ರದಾನ ಸಮ್ಮೇಳನ ಸರ್ವಾಧ್ಯಕ್ಷರ ಅದ್ಧೂರಿ ಮೆರವಣಿಗೆ, ಸಾಂಸ್ಕೃತಿಕ ಕಲಾ ವೈಭವ, ಯಕ್ಷಗಾನ ಬಯಲಾಟ, 101 ಮಂದಿಯಿಂದ ಪ್ರಾತಃಕಾಲ ಭಜನೆ ಇತ್ಯಾದಿ ಸನಾತನ ಸಂಸ್ಕೃತಿಯೊಂದಿಗೆ ಕಾರ್ಯಕ್ರಮ ನಡೆಸಲು ಆಲೋಚನೆ ನಡೆಯುತ್ತಿದೆ ಎಂದು ಕನ್ನಡ ಭವನದ ಸ್ಥಾಪಕರೂ, ಕೇರಳ…

Read More