Author: roovari

ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಆಯೋಜಿಸಿದ್ದ ಕಲಾ ಪ್ರತಿಭೋತ್ಸವದ ವಾದ್ಯ ಸಂಗೀತ ವಿಭಾಗದಲ್ಲಿ ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಹಿಮಾಂಗಿ ಡಿ. ಉಳ್ಳಾಲ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಮೈಸೂರು ರಂಗಾಯಣ ಕಲಾ ಮಂದಿರದಲ್ಲಿ ನಡೆದ ವಿಭಾಗ ಮಟ್ಟದ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಸುರತ್ಕಲ್‌ನ ಗೋವಿಂದ ದಾಸ್ ಕಾಲೇಜಿನ ಅಂತಿಮ ವರ್ಷದ ಡಿಗ್ರಿ ವಿದ್ಯಾರ್ಥಿನಿಯಾಗಿರುವ ಇವರು, ವಿದ್ವಾನ್ ಮಾಧವ ಆಚಾರ್ಯ ಉಡುಪಿ ಇವರ ಶಿಷ್ಯೆ. ಪ್ರಸಿದ್ದ ತಬಲಾ ವಾದಕ ದೀಪಕ್ ರಾಜ್ ಉಳ್ಳಾಲ ಹಾಗೂ ಧನಲಕ್ಷ್ಮಿ ದಂಪತಿಗಳ ಸುಪುತ್ರಿಯಾದ ಇವರು ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Read More

ಮಂಗಳೂರು : ಕರ್ನಾಟಕ ಪ್ರಾಂತೀಯ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ (ರಿ.) ಇದರ ವತಿಯಿಂದ ನೀಡುವ 2026ನೇ ಸಾಲಿನ ‘ಸಂದೇಶ ಪ್ರಶಸ್ತಿ’ಗೆ ಏಳು ಮಂದಿ ಸಾಧಕರು ಹಾಗೂ ಒಂದು ಸಂಸ್ಥೆ ಆಯ್ಕೆಯಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯೆ ಕನ್ನಪ್ಪ ಫರ್ನಾಂಡಿಸ್‌ ತಿಳಿಸಿದ್ದಾರೆ. ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ (ಕನ್ನಡ ಸಾಹಿತ್ಯ), ಪ್ಯಾಟ್ರಿಕ್ ಕಾಮಿಲ್ ಮೋರಾಸ್ (ಕೊಂಕಣಿ ಸಾಹಿತ್ಯ), ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ (ತುಳು ಸಾಹಿತ್ಯ), ಪತ್ರಕರ್ತೆ ತುಂಗ ರೇಣುಕ (ಮಾಧ್ಯಮ), ಸೈಮನ್ ಪಾಯ್ಸ್ (ಕೊಂಕಣಿ ಸಂಗೀತ), ಶ್ರೀನಿವಾಸ ಜಿ. ಕಪ್ಪಣ್ಣ (ಕಲೆ), ಡಾ. ದತ್ತಾತ್ರೇಯ ಅರಳಿಕಟ್ಟೆ (ಶಿಕ್ಷಣ) ಹಾಗೂ ವಿಶೇಷ ಪ್ರಶಸ್ತಿಗೆ ಬಳ್ಳಾರಿಯ ನವಜೀವನ ರಿಹ್ಯಾಬಿಲಿಟೇಶನ್ ಸೆಂಟರ್‌ ಫಾರ್‌ ಡಿಸೇಬಲ್ಡ್ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಸಂದೇಶ ಪ್ರತಿಷ್ಠಾನ ಟ್ರಸ್ಟಿ ರಾಯ್ ಕ್ಯಾಸ್ಟಲಿನೊ ಮಾತನಾಡಿ “ದಿನಾಂಕ 21 ಜನವರಿ 2026ರಂದು ಸಂಜೆ ಗಂಟೆ 5-30ಕ್ಕೆ ಪ್ರತಿಷ್ಠಾನದ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ…

Read More

ಮಂಜೇಶ್ವರ : ಕಲಾಕುಂಚ ಕಾಸರಗೋಡು ಶಾಖೆಯ ವಾರ್ಷಿಕೋತ್ಸವವು ಕುಂಜತ್ತೂರಿನ ವೈಶಾಲಿ ಮನೆಯ ಶ್ರೀ ಮಾತಾ ಕಲಾಲಯ ಸಭಾಂಗಣದಲ್ಲಿ ದಿನಾಂಕ 04 ಜನವರಿ 2026ರಂದು ಶ್ರೀ ಲಕ್ಷ್ಮೀ ಟೀಚರ್ ಕಣ್ಣಪ್ಪ ಮಾಸ್ಟರ್ ಮೆಮೋರಿಯಲ್ ಟ್ರಸ್ಟಿನ ಸಹಯೋಗದೊಂದಿಗೆ ಸಂಭ್ರಮ ಸಡಗರದಿಂದ ಜರಗಿತು. ಕಾರ್ಯಕ್ರಮವನ್ನು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಶಿವಶಂಕರ ಉದ್ಘಾಟಿಸಿ, “ಆಧುನಿಕ ಮಾಧ್ಯಮಗಳು ನೀಡುವ ಮನರಂಜನೆಗಳು ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಸ್ಥಿತಿಯಲ್ಲಿ ಕಲಾಕುಂಚ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳಿಂದ ಯುವ ಪೀಳಿಗೆ ಮೌಲ್ಯಯುತ ಬದುಕನ್ನು ಹಾಗೂ ಸಾಹಿತ್ಯ ಆಸಕ್ತಿಯನ್ನು ಮೂಡಿಸಿಕೊಳ್ಳಲು ಸಾಧ್ಯವಾಗುತ್ತಿರುವುದು ಶ್ಲಾಘನೀಯ” ಎಂದರು. ಅತಿಥಿಯಾಗಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀರ ಅಡಪ ಸಂಕಬೈಲು ಮಾತನಾಡಿ ಕಲಾಕುಂಚದ ಕಾರ್ಯ ಚಟುವಟಿಕೆಗಳನ್ನು ಮೆಚ್ಚಿ ಅಕಾಡೆಮಿ ಮೂಲಕ ಯಥಾಸಾಧ್ಯ ಸಹಕಾರ ನೀಡುವುದಾಗಿ ನುಡಿದರು. ಅಧ್ಯಕ್ಷತೆಯನ್ನು ಕಲಾಕುಂಚ ಕೇರಳ ಶಾಖೆಯ ಅಧ್ಯಕ್ಷೆ ಜಯಲಕ್ಷ್ಮಿ ಕಾರಂತ ಮಂಗಲ್ಪಾಡಿ ವಹಿಸಿದ್ದರು. ಕಲಾಕುಂಚದ ಗೌರವಾಧ್ಯಕ್ಷ, ನಿವೃತ್ತ ಅಧ್ಯಾಪಕ ಸಾಹಿತಿ ವಿ.ಬಿ. ಕುಳಮರ್ವ, ಸಾಹಿತಿ ಕವಿ ರಾಧಾಕೃಷ್ಣ ಕೆ.…

Read More

ಕೋಟ : ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ನೆನಪು ಮೂವೀಸ್ ಕೋಟ, ಉಸಿರು ಕೋಟ, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮಾಹಿತಿ ಕೇಂದ್ರ ಕೋಟತಟ್ಟು ಇವರ ಆಸರೆಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದೆ. ಸ್ಪರ್ಧೆಯು ಜೂನಿಯರ್ ವಿಭಾಗದಲ್ಲಿ (5ರಿಂದ 7ನೇ ತರಗತಿ) ಮತ್ತು ಸೀನಿಯರ್ ವಿಭಾಗದಲ್ಲಿ (8ರಿಂದ 10ನೇ ತರಗತಿ) ನಡೆಯಲಿದೆ. ಜೂನಿಯರ್ ಮತ್ತು ಸೀನಿಯರ್ ಎರಡು ವಿಭಾಗಕ್ಕೂ ಒಂದೊಂದು ವಿಷಯ ಕೊಡಲಾಗುವುದು. ಸ್ಪರ್ಧೆಯ ನಿಯಮಗಳು : ಜೂನಿಯರ್ ವಿಭಾಗಕ್ಕೆ ಐಚ್ಚಿಕ (ಅವರ ಆಯ್ಕೆ), ಸೀನಿಯರ್ ವಿಭಾಗಕ್ಕೆ ಕರಾವಳಿ ವೈಭವ, ಪೆನ್ಸಿಲ್ ಶೇಡಿಂಗ್ ಒಂದನ್ನು ಹೊರತು ಪಡಿಸಿ ಬೇರೆ ಯಾವ ಬಣ್ಣವನ್ನು, ಬಳಸಿಕೊಂಡು ಚಿತ್ರ ರಚಿಸಬಹುದು (ಪೆನ್ಸಿಲ್ ಆರ್ಟ್ ಗೆ ಯಾವುದೇ ಮಾನ್ಯತೆ ನೀಡಲಾಗುವುದಿಲ್ಲ) ಜೂನಿಯರ್ ವಿಭಾಗದ ನೊಂದಾವಣೆಗಾಗಿ ಶೈಲಜಾ ಕೆ.ಎನ್. (9663750499) ಹಾಗೂ ಸೀನಿಯರ್ ವಿಭಾಗದ ನೊಂದಾವಣೆಗಾಗಿ ಚಿತ್ರಕಲಾ…

Read More

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ‘ನೃತ್ಯೋತ್ಕ್ರಮಣ’ ರಂಗಪ್ರವೇಶ ಸ್ಮೃತಿ ಸಂಧ್ಯಾ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 11 ಜನವರಿ 2026ರಂದು ಸಂಜೆ ಗಂಟೆ 5-00ಕ್ಕೆ ಪುತ್ತೂರಿನ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ನೃತ್ಯ ಕಲಾವಿದರು, ಗುರುಗಳಾದ ಡಾ. ವೀಣಾ ಮೂರ್ತಿ ವಿಜಯ್ ಮತ್ತು ವಿದುಷಿ ರಾಜಶ್ರೀ ಉಳ್ಳಾಲ ಹಾಗೂ ದಂತ ವೈದ್ಯರಾದ ಡಾ. ಆಶಾ ಇವರುಗಳು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆಯ ಪತ್ರಕರ್ತ ಲೋಕೇಶ್ ಬನ್ನೂರು ಇವರನ್ನು ಗೌರವಿಸಲಾಗುವುದು. ವಿದ್ವಾನ್ ಬಿ. ದೀಪಕ್ ಕುಮಾರ್ ಇವರ ಭರತನಾಟ್ಯ ಪ್ರದರ್ಶನಕ್ಕೆ ನಟುವಾಂಗ ಮತ್ತು ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ಬೆಂಗಳೂರಿನ ವಿದ್ವಾನ್ ಜಿ. ಗುರುಮೂರ್ತಿ, ಕೊಳಲಿನಲ್ಲಿ ಮಂಗಳೂರಿನ ಕುಮಾರಿ ಮೇಧಾ ಉಡುಪ ಮತ್ತು ಪಿಟೀಲಿನಲ್ಲಿ ಕುಮಾರಿ ತನ್ಮಯಿ ಉಪ್ಪಂಗಳ ಸಹಕರಿಸಲಿದ್ದಾರೆ.

Read More

ಮಂಗಳೂರು : ತೆಂಕುತಿಟ್ಟು ಯಕ್ಷಗಾನದ ಬಹುಮುಖ ಪ್ರತಿಭೆಯ ಪ್ರಸಿದ್ದ ಯುವ ವೇಷಧಾರಿ, ಯಕ್ಷ ಗುರು, ಸಂಘಟಕ, ಪ್ರಯೋಗಶೀಲ ನಿರ್ದೇಶಕ ರಾಕೇಶ್ ರೈ ಅಡ್ಕ ಇವರಿಗೆ ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ ಪ್ರದಾನವು ದಿನಾಂಕ 11 ಜನವರಿ 2026ರಂದು ಕದ್ರಿ ಕಂಬಳ ಗುತ್ತಿನ ಪಾವಂಜೆ ಮೇಳದ ಸೇವೆ ಆಟದ ವೇದಿಕೆಯಲ್ಲಿ ಜರಗಲಿದೆ. ರಾಕೇಶ್ ರೈ ಅಡ್ಕ ಇವರು ಪ್ರಖರ ರಾಷ್ಟ್ರೀಯವಾದಿ ಸಂಘಟಕ, ಶಿಕ್ಷಕ ದಿ. ಜಲಂಧರ ರೈ ಇವರ ಶಿಷ್ಯರಾಗಿ ಹವ್ಯಾಸಿ ವಲಯದಲ್ಲಿ ಸಿದ್ದಿ ಪ್ರಸಿದ್ದಿ ಪಡೆದು ಪುಂಡು, ಸ್ತ್ರೀ, ರಾಜವೇಷ ನಿರ್ವಹಣೆಯಲ್ಲಿ ಅನುಪಮ ಸಾಧನೆ ಮಾಡಿ ಕಟೀಲು, ಬಪ್ಪನಾಡು ಮೇಳಗಳಲ್ಲಿ ಮೆರೆದು, ಪಟ್ಲ ಭಾಗವತರ ಪಾವಂಜೆ ಮೇಳದಲ್ಲಿ ಕಲಾ ವ್ಯವಸಾಯ ಮಾಡುತ್ತಾ ಬಪ್ಪನಾಡು ಮೇಳದಲ್ಲಿ ಅತಿಥಿ ಕಲಾವಿದರರಾಗಿ ದುಡಿಯುವ ಕಲಾವಿದರು. ಮೇಳಗಳ ತಿರುಗಾಟದ ಜೊತೆಯಲ್ಲೇ ಮೂರು ಜಿಲ್ಲೆಗಳಲ್ಲಿ 19 ಕೇಂದ್ರಗಳಲ್ಲಿ ಯಕ್ಷಗಾನ ತರಬೇತಿ ನೀಡುವ ಯಕ್ಷ ಗುರು ಇವರಾಗಿದ್ದಾರೆ. ಕದ್ರಿ ಕಂಬಳಗುತ್ತಿನ ಯಜಮಾನರಾಗಿ, ಹವ್ಯಾಸಿ ಯಕ್ಷಗಾನ ಅರ್ಥಧಾರಿಗಳಾಗಿದ್ದ ಬಾಲಕೃಷ್ಣ…

Read More

ಕೋಟ : ಕೋಟೇಶ್ವರದ ಎನ್.ಆರ್.ಎ.ಎಮ್.ಎಚ್. ಪ್ರಕಾಶನದ ವತಿಯಿಂದ ಕೋಟದ ಮಿತ್ರಮಂಡಳಿಯ ಸಹಕಾರದೊಂದಿಗೆ ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡಾ. ಕಾರಂತ ಸಭಾಂಗಣದಲ್ಲಿ ದಿನಾಂಕ 07 ಜನವರಿ 2026ರಂದು ‘ವರ್ಣತಂತು’ ಕಾದಂಬರಿಯ ಲೇಖಕಿ ರಮ್ಯ ಎಸ್. ರವರಿಗೆ ‘ಚಡಗ ಕಾದಂಬರಿ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಸಾಹಿತಿ ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಇವರು ಪ್ರಶಸ್ತಿಯ ಮಹತ್ವದ ಕುರಿತು ಮಾತನಾಡಿ, ಯಾವುದೇ ಬಣಕ್ಕೆ ಸಾಹಿತ್ಯಕ ವಲಯಕ್ಕೆ ಸೇರದಿರುವ ಮೂವರು ಸಾಮಾನ್ಯ ಓದುಗರ ಅಭಿಪ್ರಾಯದೊಂದಿಗೆ ಪ್ರಶಸ್ತಿಗೆ ಪಾತ್ರವಾಗುವ ಕೃತಿಯ ಆಯ್ಕೆಯು ಸಂಪೂರ್ಣವಾಗಿ ಪಕ್ಷಪಾತ ರಹಿತವಾಗಿರುತ್ತದೆ ಎಂಬುವುದೇ ಮುಖ್ಯ. ಅಂತೆಯೇ ಹಲವರ ಓದಿಗೆ ಪರ್ಯಾಯವಾಗಿ ಕಾರಣವಾಗುವ ಸ್ಪರ್ಧಾ ಪ್ರಾಯೋಜಕರು ಅಭಿನಂದನಾರ್ಹರು” ಎಂದರು. “ಬದುಕು ಸವಾಲು ಗಳನ್ನು ಒಡ್ಡುತ್ತಾ ಹೋದ ಹಾಗೆ ವಿಜ್ಞಾನ ಹೊಸ ಉತ್ತರಗಳನ್ನು ಹುಡುಕಿ ಕೊಡುತ್ತಾ ಹೋಗುವ ಚೋದ್ಯವನ್ನು ರಮ್ಯ ಎಸ್.ರವರ ‘ವರ್ಣತಂತು’ ಕಾದಂಬರಿ ತೆರೆದಿಡುತ್ತದೆ. ಸಾಹಿತ್ಯ ಇರುವುದು ಮನರಂಜನೆಗಾಗಿ ಮಾತ್ರವಲ್ಲ ಎನ್ನುವುದನ್ನು ಸ್ಪಷ್ಟಪಡಿಸುವ ಕೆಲಸವನ್ನು ಈ ಕಾದಂಬರಿಯು ಮಾಡಿದಂತಿದೆ” ಎಂದು…

Read More

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಯಕ್ಷ ಪ್ರತಿಭೆ (ರಿ.) ಮಂಗಳೂರು ಇವರ ಸಹಯೋಗದಲ್ಲಿ ತುಳು ಯಕ್ಷಗಾನ ಪ್ರಸಂಗಗಳ ಭೀಷ್ಮ ಎಂದು ಖ್ಯಾತರಾಗಿದ್ದ ಕೆ. ಅನಂತರಾಮ ಬಂಗಾಡಿ ಇವರ ಸಂಸ್ಮರಣಾ ಗೋಷ್ಠಿ ಹಾಗೂ ತುಳು ಯಕ್ಷಗಾನ ಪ್ರದರ್ಶನವು ದಿನಾಂಕ 11 ಜನವರಿ 2026ರಂದು ಅಪರಾಹ್ನ ಗಂಟೆ 3-00ಕ್ಕೆ ಉರ್ವಸ್ಟೋರಿನ ತುಳು ಭವನದ ಸಿರಿಚಾವಡಿಯಲ್ಲಿ ನಡೆಯಲಿದೆ. ಹಿರಿಯ ಯಕ್ಷಗಾನ ಕಲಾವಿದರಾದ ಕೊಳ್ತಿಗೆ ನಾರಾಯಣ ಗೌಡ ಇವರು ‘ತುಳು ಯಕ್ಷಗಾನ ಪ್ರಸಂಗಗಳಿಗೆ ಅನಂತರಾಮ ಬಂಗಾಡಿಯವರ ಕೊಡುಗೆ’ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಇವರು ಅಧ್ಯಕ್ಷತೆ ವಹಿಸುವರು. ಮ್ಯಾಪ್ಸ್ ಕಾಲೇಜಿನ ಉಪಪ್ರಾಂಶುಪಾಲ ಡಾ. ಪ್ರಭಾಕರ ನೀರುಮಾರ್ಗ ಮತ್ತು ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಟ್ರಸ್ಟಿ ಶ್ರೀಮತಿ ವೇಣಿ ಮರೋಳಿ ಇವರುಗಳು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿಚಾರಗೋಷ್ಠಿಯ ಬಳಿಕ ಯಕ್ಷ ಪ್ರತಿಭೆ ಸಂಸ್ಥೆಯ ಸಂಚಾಲಕ ಸಂಜಯ್ ಕುಮಾರ್ ಗೋಣಿಬೀಡು ಇವರ ಸಂಯೋಜನೆಯಲ್ಲಿ…

Read More

ಹಳೆಯಂಗಡಿ : ಜಿಲ್ಲಾ ಪ್ರಶಸ್ತಿ ಪುರಸ್ಕೃತ ಹಳೆಯಂಗಡಿಯ ಯುವತಿ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ಹಳೆಯಂಗಡಿಯ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್ ಹಾಗೂ ಮಹಿಳಾ ಮಂಡಲ ಇವುಗಳ ಸಹಯೋಗದಲ್ಲಿ ‘ಭಜನಾ ಸ್ಪರ್ಧಾ ಸಂಭ್ರಮ-2026’ ಕಾರ್ಯಕ್ರಮವನ್ನು ದಿನಾಂಕ 11 ಜನವರಿ 2026ರಂದು ಬೆಳಿಗ್ಗೆ ಗಂಟೆ 9-30ಕ್ಕೆ ಹಳೆಯಂಗಡಿಯ ಯುವಕ ಮಂಡಲದ ಬೊಳ್ಳೂರು ವಾರಿಜ ವಾಸುದೇವ ಕಲಾವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಸ್ಪರ್ಧೆಯನ್ನು ಪಡುಪಣಂಬೂರು ಹೊಯಿಗೆಗುಡ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಳ ಆಡಳಿತ ಮೊಕ್ತೇಸರ ಎಚ್. ರಂಗನಾಥ ಭಟ್ ಇವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಪೂರ್ಣಮಾ ಯತೀಶ್ ರೈ ಸುರತ್ಕಲ್ ಇವರು ವಹಿಸಲಿದ್ದಾರೆ. ಸುರತ್ಕಲ್ ಗೋವಿಂದಾಸ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಅಕ್ಷತಾ ವಿ. ಶೆಟ್ಟಿ ಸುರತ್ಕಲ್, ಯುವತಿ ಮಂಡಲದ ಸ್ಥಾಪಕ ಅಧ್ಯಕ್ಷೆ ಹಾಗೂ ಹಿರಿಯ ಮೋಹಿನಿ ಕಾಮೆರೊಟ್ಟು ಇವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ ಗಂಟೆ 10-00ರಿಂದ ಸಂಜೆ 4-00ರವರೆಗೆ ಭಜನಾ ಸ್ಪರ್ಧೆ…

Read More

ಉಡುಪಿ : ಶ್ರೀ ಕಾಳಿಕಾಂಬಾ ಭಜನಾ ಸಂಘ, ಶ್ರೀದೇವಿ ಮಹಿಳಾ ಮಂಡಳಿ ಮತ್ತು ಬಾಲ ಸಂಸ್ಕಾರ ಕೇಂದ್ರ ಇವರ ವತಿಯಿಂದ ಮಕರ ಸಂಕ್ರಾಂತಿ ವಿಶೇಷ ಕಾರ್ಯಕ್ರಮವನ್ನು ದಿನಾಂಕ 15 ಜನವರಿ 2026ರಂದು ಉಡುಪಿ ತೆಂಕನಿಡಿಯೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 9-30 ಗಂಟೆಗೆ ಶ್ರೀ ಕಾಳಿಕಾಂಬಾ ಭಜನಾ ಸಂಘದ ಅಧ್ಯಕ್ಷರಾದ ಟಿ. ಕೃಷ್ಣ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ತೆಂಕನಿಡಿಯೂರು ಶ್ರೀಮತಿ ಸುಗುಣ ಮಹಾಬಲ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಸಂಜೆ 4-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಉಡುಪಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಯ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಭಕ್ತಿಗೀತೆ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆ, ಉಡುಪಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ಮತ್ತು ಭಾವಗಾನ ಸ್ಪರ್ಧೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಭಾಷಣ…

Read More