Author: roovari

ಬಂಟ್ವಾಳ : ಕಲಾನಿಕೇತನ ಡಾನ್ಸ್ ಫೌಂಡೇಷನ್ ಕಲ್ಲಡ್ಕ ಇವರು ಪ್ರಸ್ತುತ ಪಡಿಸುವ ‘ರಜತ ಕಲಾ ಯಾನ’ದ ಸರಣಿ ‘ಕಲಾ ಪರ್ವ 2025’ವನ್ನು ದಿನಾಂಕ 27 ಡಿಸೆಂಬರ್ 2025ರಂದು ಸಂಜೆ 3-30 ಗಂಟೆಗೆ ಬಂಟ್ವಾಳ ಬಿ.ಸಿ. ರೋಡಿನಲ್ಲಿರುವ ಸ್ಪರ್ಶ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ ಇವರು ದೀಪ ಪ್ರಜ್ವಲನೆ ಮಾಡಿ ಈ ಸರಣಿಯನ್ನು ಉದ್ಘಾಟನೆ ಮಾಡಲಿದ್ದು, ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರಸ್ತುತಿ ನಡೆಯಲಿದೆ. ನಟುವಾಂಗದಲ್ಲಿ ವಿದುಷಿ ವಿದ್ಯಾ ಮನೋಜ್, ಹಾಡುಗಾರಿಕೆಯಲ್ಲಿ ವಿದ್ವಾನ್ ಕೃಷ್ಣ ಆಚಾರ್ಯ ಮತ್ತು ವಿದುಷಿ ಶ್ರೀದೇವಿ ಕಲ್ಲಡ್ಕ, ಮೃದಂಗದಲ್ಲಿ ವಿದ್ವಾನ್ ಗಿತೇಶ್ ಎ.ಜಿ. ನೀಲೇಶ್ವರ ಹಾಗೂ ಕೊಳಲಿನಲ್ಲಿ ಎ.ಎಸ್. ಹರಿಪ್ರಸಾದ್ ನೀಲೇಶ್ವರಂ ಸಹಕರಿಸಲಿದ್ದಾರೆ.

Read More

ಬೆಂಗಳೂರು : ಭಾರತ ಯಾತ್ರ ಕೇಂದ್ರ ಬೆಂಗಳೂರು ಇದರ ವತಿಯಿಂದ ಡಾ. ಅಜಯ ಕುಮಾರ ಸಿಂಹ ಇವರ ‘ಹರಿಯಲು ಬಿಡು’ ಕವನ ಸಂಕಲನ ಅನಾವರಣ ಕಾರ್ಯಕ್ರಮವನ್ನು ದಿನಾಂಕ 27 ಡಿಸೆಂಬರ್ 2025ರಂದು ಸಂಜೆ 5-30 ಗಂಟೆಗೆ ಬೆಂಗಳೂರು ಕನ್ನಡ ಭವನ ಕರ್ನಾಟಕ ನಾಟಕ ಅಕಾಡೆಮಿಯ ರಂಗ ಚಾವಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ನಿವೃತ್ತ ಐ.ಎ.ಎಸ್. ಅಧಿಕಾರಿ ಡಾ. ಬಿರಂಜೀವ ಸಿಂಗ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್ತು ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್ ಇವರು ಕೃತಿ ಅನಾವರಣ ಮಾಡಲಿದ್ದಾರೆ. ಪ್ರಸಿದ್ಧ ಅನುವಾದಕರಾದ ಡಾ. ವನಮಾಲಾ ವಿಶ್ವನಾಥ ಇವರು ಪುಸ್ತಕ ಪರಿಚಯ ಮಾಡಲಿದ್ದು, ಅನುವಾದಕರಾದ ಡಾ. ಹೆಚ್.ಎಸ್. ಶಿವಪ್ರಕಾಶ್ ಇವರು ಮಾತನಾಡಲಿದ್ದಾರೆ.

Read More

ಹುಬ್ಬಳ್ಳಿ : ಹುಬ್ಬಳ್ಳಿಯ ಪ್ರಸಿದ್ಧ ಹಿಂದೂಸ್ತಾನಿ ಸಂಗೀತಗಾರ, ಪ್ರಸಕ್ತ ಕಾಲಘಟ್ಟದ ಖ್ಯಾತ ಸಂಗೀತ ಗುರು ಪಂಡಿತ್ ಅಶೋಕ ಹುಗ್ಗಣ್ಣವರ (64) ಇನ್ನಿಲ್ಲ. ಅವರು ದಿನಾಂಕ 24 ಡಿಸೆಂಬರ್ 2025ರಂದು ತಡರಾತ್ರಿ ದಾವಣಗೆರೆಯಲ್ಲಿ ನಿಧನರಾದರು. ಪಾರ್ಥಿವ ಶರೀರವನ್ನು ಗುರುವಾರ ನಸುಕಿನಲ್ಲಿ ಹುಬ್ಬಳ್ಳಿ ಲಿಂಗರಾಜನಗರ ಬಡಾವಣೆಯ ಅವರ ಸ್ವಗೃಹ ‘ಬನಶ್ರೀ’ಗೆ ತಂದು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿಯ ವಿದ್ಯಾನಗರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಉಪನ್ಯಾಸಕಿಯಾಗಿರುವ ಪತ್ನಿ ವೀಣಾ, ವಿಜ್ಞಾನಿ ಹಾಗೂ ಗಾಯಕರಾಗಿರುವ ವಿನಾಯಕ್ ಸೇರಿದಂತೆ ಅಪಾರ ಬಂಧು ಬಾಂಧವರು ಮತ್ತು ಶಾಸ್ತ್ರೀಯ ಸಂಗೀತ ಲೋಕದ ಅಸಂಖ್ಯ ಕಲಾಬಳಗವನ್ನು ಅವರು ಅಗಲಿದ್ದಾರೆ. ಗ್ವಾಲಿಯರ್ ಘರಾಣೆಯ ಕಲಾವಿದರಾಗಿದ್ದ ಅವರು ಪಂಡಿತ್ ಲಿಂಗರಾಜ ಬುವಾ ಯರಗುಪ್ಪಿ ಶಿಷ್ಯರು. ಶೈಕ್ಷಣಿಕವಾಗಿ ಪ್ರತಿಭಾಶಾಲಿಯಾಗಿದ್ದ ಅಶೋಕ ಹುಗ್ಗಣ್ಣವರ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಾರಂಭದಲ್ಲಿ ಎಂ.ಎಸ್ಸಿ ಪಡೆದರು. ಆ ನಂತರ ಶಾಸ್ತ್ರೀಯ ಸಂಗೀತದೆಡೆಗಿನ ತೀವ್ರ ತುಡಿತದಿಂದಾಗಿ ಸಂಗೀತ ಶಾಸ್ತ್ರ ಎಂ.ಎ. ವ್ಯಾಸಂಗ ಮಾಡಿ, ಹೊನ್ನಾವರ ಎಸ್‌.ಡಿ.ಎಂ. ಕಾಲೇಜಿನ ಸಂಗೀತ ವಿಭಾಗವನ್ನು ಎರಡೂವರೆ ದಶಕಗಳ…

Read More

ಒಡಿಯೂರು : ಶ್ರೀ ಗುರುದೇವಾನಂದ ಸ್ವಾಮೀಜಿ ಇವರ ಮಾರ್ಗದರ್ಶನದಲ್ಲಿ ದಿನಾಂಕ 27 ಮತ್ತು 28 ಜನವರಿ 2025ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆಯುವ ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ – ಬ್ರಹ್ಮಕಲಶೋತ್ಸವ ಅಂಗವಾಗಿ ಒಡಿಯೂರು ಬೀದಿ ನಾಟಕ ಸ್ಪರ್ಧೆ ಆಯೋಜಿಸಲಾಗಿದೆ. ಒಡಿಯೂರು ರಥೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ವಂದೇ ಮಾತರಂ ಹಾಡಿಗೆ 150 ವರ್ಷ ತುಂಬಿರುವ ಸವಿನೆನಪಿಗೆ ದಿನಾಂಕ 27 ಜನವರಿ 2025ರಂದು ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನವು ನಡೆಯಲಿದೆ. ಇದು ಶ್ರೀ ಸಂಸ್ಥಾನದಲ್ಲಿ ನಡೆಯುವ 26ನೇ ಸಮ್ಮೇಳನ ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ವ್ಯಾಪ್ತಿಯಲ್ಲಿ ಒಡಿಯೂರು ಬೀದಿ ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ದಿನಾಂಕ 19 ಮತ್ತು 20 ಜನವರಿ 2025ರಂದು ನಡೆಯುವ ಸ್ಪರ್ಧೆಯಲ್ಲಿ ವಂದೇ ಮಾತರಂ ವಿಷಯದ ಬಗ್ಗೆ ಬೀದಿ ನಾಟಕ ಪ್ರದರ್ಶಿಸಬೇಕು. ನಾಟಕದ ಸಮಯ 10+2 ನಿಮಿಷಗಳು, ಕನ್ನಡ ಅಥವಾ ತುಳು ಭಾಷೆಯಲ್ಲಿ…

Read More

ಉಡುಪಿ : 47ನೆಯ ‘ವಾದಿರಾಜ ಕನಕದಾಸ ಸಂಗೀತೋತ್ಸವ’ ಹಾಗೂ ವಾದಿರಾಜ-ಕನಕದಾಸ ಸಾಹಿತ್ಯ ಮಂಥನ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 28 ಡಿಸೆಂಬರ್ 2025ರ ಆದಿತ್ಯವಾರದಂದು ಉಡುಪಿ ಎಂ.ಜಿ.ಎಂ ಕಾಲೇಜು ಆವರಣದ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ.ಜಿ.ಎಂ. ಕಾಲೇಜು ಉಡುಪಿ, ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ) ಪರ್ಕಳ ಸಂಸ್ಥೆಗಳು ಸಂಘಟಿಸಿವೆ. ಬೆಳಿಗ್ಗೆ 9-30 ಗಂಟೆಗೆ ಈ ಕಾರ್ಯಕ್ರಮವನ್ನು ಹಿರಿಯ ವಿದ್ವಾಂಸರು, ವಿಶ್ರಾಂತ ಕುಲಪತಿಗಳೂ ಆದ ಡಾ. ಬಿ.ಎ. ವಿವೇಕ ರೈ ಕಾರ್ಯಕ್ರಮ ಉದ್ಘಾಟಿಸಿ ‘ವಾದಿರಾಜ ಕನಕದಾಸ ಸಾಹಿತ್ಯ ಮಂಥನ’ ಕೃತಿ ಬಿಡುಗಡೆ ಮಾಡಲಿದ್ದಾರೆ. ಕನಕ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿಗಳಾದ ಡಾ. ಬಿ. ಜಗದೀಶ್ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಲಿದ್ದು, ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥರಾದ ಡಾ. ರಮೇಶ್ ಟಿ.ಎಸ್. ಇವರು…

Read More

ಪುತ್ತೂರು : ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ ಕೆ. ವಿಷ್ಣು ಕೆ. ಇವರ ಮೂರು ಕೃತಿಗಳ ಲೋಕಾರ್ಪಣಾ ಸಮಾರಂಭವನ್ನು ದಿನಾಂಕ 27 ಡಿಸೆಂಬರ್ 2025ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ಅನುರಾಗ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ‘ಮೋದಿಜೀ ನಮ್ಮ ಮನೆಗೆ ಬಂದರು (ಅಂತರಾತ್ಮದ ಭೇಟಿ)’ ಕೃತಿಯನ್ನು ನಿವೃತ್ತ ಪ್ರಾಂಶುಪಾಲರಾದ ಡಾ. ಎನ್. ಪರಮೇಶ್ವರ ಭಟ್ ಇವರು, ‘ಅಂತರ್ಯುದ್ದ (ಮನೋವೈಜ್ಞಾನಿಕ ಕಥೆಗಳು)’ ಕೃತಿಯನ್ನು ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಹರಿ ನಾರಾಯಣ ಮಾಡಾವು ಮತ್ತು ‘ಐತರೇಯೋಪನಿಷದ್ (ಕನ್ನಡ ಭಾಷಾಂತರ)’ ಕೃತಿಯನ್ನು ಶಿಕ್ಷಕಿ ಕುಮಾರಿ ಉಮಾ ಇವರುಗಳು ಲೋಕಾರ್ಪಣೆಗೊಳಿಸಲಿದ್ದಾರೆ. ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಹಾಗೂ ಹಿಂದಿ ಉಪನ್ಯಾಸಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ವಿಷ್ಣು ಕೆ. ಇವರು, ತಮ್ಮ ವೃತ್ತಿಜೀವನದಲ್ಲಿ ಕೇವಲ ಪಾಠ ಬೋಧನೆಗೆ ಸೀಮಿತರಾಗದೆ, ಉತ್ತಮ ಮಾನವೀಯ ಮೌಲ್ಯಗಳನ್ನು…

Read More

ಮುಂಬೈ : ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ದಿನಾಂಕ 20 ಡಿಸೆಂಬರ್ 2025ರಂದು ರಾನಡೆ ಭವನದಲ್ಲಿ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪರಮಶಿವಮೂರ್ತಿ ಇವರು ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತ “ಕನ್ನಡದಲ್ಲಿ ಸಿಗುವಷ್ಟು ವೈವಿಧ್ಯಮಯ ಶಾಸನಗಳು ಬೇರೆ ಯಾವ ಭಾಷೆಗಳಲ್ಲೂ ಸಿಗುವುದಿಲ್ಲ. ಕನ್ನಡದ ಶಾಸನಗಳು ಸಾಂಸ್ಕೃತಿಕ ವಿಚಾರಕ್ಕೆ ಹೆಚ್ಚಿನ ಮಹತ್ವವನ್ನು ನೀಡಿವೆ. ಐದನೆಯ ಶತಮಾನದಲ್ಲಿ ರಚಿತವಾದ ಶಾಸನವು ಕನ್ನಡದ ಮೊದಲ ಲಭ್ಯ ಶಾಸನವಾಗಿದೆ. ಮೊದಲ ಮರಾಠಿ ಶಾಸನ ಕರ್ನಾಟಕದಲ್ಲಿ ದೊರೆತಿರುವುದು ವಿಶೇಷ. ಅನೇಕ ಪ್ರತಿಭಾವಂತ ಕವಿಗಳು ಮೊದಲು ಶಾಸನಗಳನ್ನು ಬರೆಯುತ್ತಿದ್ದರು. ವೃತ್ತಗಳು ದೊಡ್ಡ ಪ್ರಮಾಣದಲ್ಲಿ ಶಾಸನಗಳಲ್ಲೂ ಬಳಕೆಯಾಗಿರುವುದನ್ನು ಕಾಣಬಹುದು. ಕರ್ನಾಟಕ ಇತಿಹಾಸ ಅಕಾಡೆಮಿಯು 400ಕ್ಕೂ ಹೆಚ್ಚು ಶಾಸನಗಳನ್ನು ಪ್ರಕಟ ಮಾಡಿದೆ. ಶಾಸನಗಳಲ್ಲಿ ಕಲ್ಪನಾಲೇಖಕ್ಕೆ ಆಸ್ಪದ ಕಡಿಮೆ. ಶಾಸನಗಳನ್ನು ಇಟ್ಟುಕೊಂಡು ಕನ್ನಡ ಸಾಹಿತ್ಯ ಚರಿತ್ರೆಯನ್ನು ಚರ್ಚಿಸುವ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು. “ಸಾಹಿತ್ಯ ಮತ್ತು ಶಾಸನಗಳನ್ನು ಜೊತೆಯಾಗಿ ಇಟ್ಟರೆ ಅನೇಕ ಕೊಂಡಿಗಳನ್ನು ಬೆಸೆಯುವುದು ಸಾಧ್ಯವಾಗುತ್ತದೆ. ಸಾಹಿತ್ಯಕ್ಕೆ…

Read More

ಧಾರವಾಡ : ಸಾಹಿತ್ಯ ಗಂಗಾ ಸಂಸ್ಥೆಯು ಹಿರಿಯ ಲೇಖಕಿ ದಿ. ಸುನಂದಾ ಬೆಳಗಾಂವಕರ ಇವರ ಸ್ಮರಣಾರ್ಥ ಕೊಡಮಾಡುವ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿಗೆ 2025ರಲ್ಲಿ ಪ್ರಕಟವಾದ ಕಾದಂಬರಿಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಯು ರೂ.10,000/- ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಆಸಕ್ತ ಲೇಖಕ/ಕಿಯರು ನಿಯಮಾನುಸಾರವಾಗಿ ಕಾದಂಬರಿಗಳನ್ನು ಕಳುಹಿಸಬಹುದು. ನಿಯಮಗಳು : * 01-01-2025ರಿಂದ 31-12-2025ರವರೆಗೆ ಪ್ರಕಟವಾದ ಸ್ವತಂತ್ರ ಕಾದಂಬರಿಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. * ಅನುವಾದ, ಅನುಸೃಷ್ಟಿ, ರೂಪಾಂತರ ಮತ್ತು ಪ್ರೇರಿತ ಕಾದಂಬರಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. * ಆಸಕ್ತ ಲೇಖಕ/ಕಿಯರು, ಪ್ರಕಾಶಕರು, ಹಿತೈಷಿಗಳು ಅಥವಾ ಓದುಗರು ಕಾದಂಬರಿ ಕಳುಹಿಸಬಹುದು. * ನಿಗದಿತ ದಿನಾಂಕದೊಳಗೆ ಕಾದಂಬರಿಯ ಮೂರು ಪ್ರತಿಗಳು, ಪರಿಚಯ ಪತ್ರ ಮತ್ತು ಒಂದು ಫೋಟೋವನ್ನು ಕಳುಹಿಸಬೇಕು. * ಕಾದಂಬರಿಯ ಗುಣಮಟ್ಟವೊಂದೇ ಪ್ರಶಸ್ತಿ ಆಯ್ಕೆಯ ಏಕೈಕ ಮಾನದಂಡವಾಗಿರುತ್ತದೆ. * ಕಾದಂಬರಿಗಳನ್ನು ಕಳಿಸಲು ಕೊನೆಯ ದಿನಾಂಕ 31 ಜನವರಿ 2026. * ಫಲಿತಾಂಶ ಪ್ರಕಟವಾಗುವ ದಿನಾಂಕ 01 ಎಪ್ರಿಲ್ 2026. ನಮ್ಮ ವಿಳಾಸ…

Read More

ಮಂಗಳೂರು : ಕರಾವಳಿಯ ಶ್ರೀಮಂತ ಜಾನಪದ ಸಂಸ್ಕೃತಿಗೆ ವೈಚಾರಿಕ ಆಯಾಮ ನೀಡುವ ಮಹತ್ವದ ಸಂಶೋಧನಾ ಕೃತಿಯಾದ ‘ಭೂತಾರಾಧನೆ – ಮಾಯದ ನಡೆ ಜೋಗದ ನುಡಿ’ ಕೃತಿಯ ಬಿಡುಗಡೆ ಸಮಾರಂಭವು ಕ್ರಿಯೇಟಿವ್ ಪುಸ್ತಕ ಮನೆ, ಕಾರ್ಕಳ ಮತ್ತು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ದಿನಾಂಕ 20 ಡಿಸೆಂಬರ್ 2025ರಂದು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಎಲ್.ಎಫ್. ರಸ್ಕಿನ್ಹ ಸಭಾಂಗಣದಲ್ಲಿ ನಡೆಯಿತು. ಕೃತಿಯನ್ನು ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ ಹಾಗೂ ವಿಶ್ರಾಂತ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಇವರು ಅನಾವರಣಗೊಳಿಸಿ ಮಾತನಾಡಿ, “ಭೂತಾರಾಧನೆ ಕೇವಲ ಆಚರಣೆಯಲ್ಲ. ಅದು ಸಮುದಾಯದ ಸ್ಮೃತಿ, ನಂಬಿಕೆ ಮತ್ತು ಬದುಕಿನ ದರ್ಶನ. ಡಾ. ಕೆ. ಚಿನ್ನಪ್ಪ ಗೌಡರ ಈ ಕೃತಿ ಜಾನಪದ ಅಧ್ಯಯನ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಲಿದೆ.” ಎಂದು ಅಭಿಪ್ರಾಯಪಟ್ಟರು. ಕೃತಿ ಅವಲೋಕನವನ್ನು ಡಾ. ರಾಜಶೇಖರ್ ಹಳೆಮನೆ ಇವರು ನಡೆಸಿ, “ಭೂತಾರಾಧನೆಯ ಆಚರಣೆ, ನುಡಿ, ನಡೆ ಮತ್ತು ಸಮಾಜದ ಒಳಹೊಮ್ಮುಗಳನ್ನು ವೈಜ್ಞಾನಿಕ ದೃಷ್ಟಿಯಿಂದ…

Read More

ಕಾಸರಗೋಡು : “ಸಂಗೀತಕ್ಕೆ ಜನರನ್ನು ಒಟ್ಟು ಮಾಡುವ ಶಕ್ತಿಯಿದೆ. ಒಳ್ಳೆಯ ಸಂಗೀತವನ್ನು ಕೇಳುವುದರ ಜೊತೆಗೆ ಅನುಭವಿಸಬೇಕು. ಆಗಲೇ ಹೃದಯದ ಕಪಾಟು ತೆರೆದುಕೊಳ್ಳುತ್ತದೆ.” ಎಂದು ಖ್ಯಾತ ಕೀರ್ತನಕಾರ ಛಾಯಾ ಚಿತ್ರಗ್ರಾಹಕ ಕಲಾವಿದ ಪ್ರಭಾಕರ ರಾವ್ ಹೇಳಿದರು. ಅವರು ‘ರಂಗಚಿನ್ನಾರಿ’ಯ ಸಂಗೀತ ಘಟಕ ‘ಸ್ವರಚಿನ್ನಾರಿ’ ನೇತೃತ್ವದಲ್ಲಿ ಪದ್ಮಗಿರಿ ಕಲಾಕುಟೀರದಲ್ಲಿ ದಿನಾಂಕ 21 ಡಿಸೆಂಬರ್ 2025ರ ಭಾನುವಾರ ಜರಗಿದ ‘ಅಂತರ್ಧ್ವನಿ -12’ ಕರೋಕೆ ಗಾಯಕರ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡುತ್ತಿದ್ದರು. “ಈಗಿನ ಕಾಲದ ಕಲಾವಿದರಿಗೆ ಎಲ್ಲಾ ರೀತಿಯ ಸೌಕರ್ಯವಿದೆ. ಆದ್ದರಿಂದ ಹೆಚ್ಚೆಚ್ಚು ಕಲಾವಿದರು ಸಂಗೀತ ಕ್ಷೇತ್ರಕ್ಕೆ ಬರುತ್ತಾರೆ” ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಉದ್ಯಮಿ, ಸಮಾಜ ಸೇವಕ ಜೀವಾನಂದ ಪ್ರಭು ಮಾತನಾಡಿ “ಕಾಸರಗೋಡಿನ ಸಂಗೀತ ಕಲಾವಿದರಿಗೆ ಸೂಕ್ತ ವೇದಿಕೆ ನಿರ್ಮಾಣ ಮಾಡಿದ ‘ರಂಗಚಿನ್ನಾರಿ’ ಸಂಸ್ಥೆಯ ಸಂಗೀತ ಘಟಕ ‘ಸ್ವರಚಿನ್ನಾರಿ’ಯ ಪದಾಧಿಕಾರಿಗಳನ್ನು ಅಭಿನಂದಿಸಿದರಲ್ಲದೆ ಸತತ ಒಂದು ವರುಷಗಳಿಂದ ಹಾಡುತ್ತಿರುವ ಗಾಯಕ ಗಾಯಕಿಯರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಸರಗೋಡಿನ ಖ್ಯಾತ ವೈದ್ಯರು, ಗಾಯಕರೂ ಆಗಿರುವ ಡಾ. ಸಂತೋಷ…

Read More