Author: roovari

ಮಂಜೇಶ್ವರ : ಸವಿಹೃದಯದ ಕವಿಮಿತ್ರರು ವೇದಿಕೆ ಪೆರ್ಲ ಇದರ ವತಿಯಿಂದ ಮಂಜೇಶ್ವರ ಗೋವಿಂದ ಪೈ ನಿವಾಸ ಗಿಳಿವಿಂಡುವಿನಲ್ಲಿ ದಿನಾಂಕ 25 ಡಿಸೆಂಬರ್ 2025ರಂದು ಕೃತಿ ಬಿಡುಗಡೆ ಹಾಗೂ ಕವಿಗೋಷ್ಠಿಯು ಜರಗಿತು. ಈ ಕಾರ್ಯಕ್ರಮದಲ್ಲಿ ‘ಕಥಾ ದೀಪ್ತಿ’ ಸಂಪಾದಿತ ಕತೆಗಳು ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಶಂಪಾ ಪ್ರತಿಷ್ಠಾನ ಬೆಂಗಳೂರು ಸಂಸ್ಥಾಪಕ, ವಿಶ್ರಾಂತ ಪ್ರಾಧ್ಯಾಪಕಿ ಡಾ.ಪ್ರಮೀಳಾ ಮಾಧವ್ “ಕತೆ ಕೇಳುವ, ಹೇಳುವ ಅಭ್ಯಾಸ ಸೃಜನಶೀಲ ಮನಸ್ಸುಗಳನ್ನು ಸೃಷ್ಟಿಸುತ್ತವೆ. ಹಿಂದೆ ಹೆಚ್ಚಿನ ಮಕ್ಕಳು ಕತೆ ಹೇಳಲು ಹಿರಿಯರಿಗೆ ದುಂಬಾಳು ಬೀಳುತ್ತಿದ್ದರು. ಕತೆ ಮುಗಿದ ಬಳಿಕ ಕೂಡಾ ಹೇಳುತ್ತಿದ್ದ ಕತೆಯನ್ನು ಬೆಳೆಸಿ (ಸೃಷ್ಟಿಸಿ) ಮಕ್ಕಳಿಗೆ ಹೇಳುವ ಸಾಮರ್ಥ್ಯವನ್ನು ಹಿರಿಯರು ಹೊಂದಿದ್ದರು. ಕತೆಗಾಗಿ ಹಟ ಹಿಡಿಯುತ್ತಿದ್ದ ಸಣ್ಣ ಮಕ್ಕಳ ಕೈಗೆ ಇಂದು ಹಿರಿಯರು ಮೊಬೈಲ್ ಕೊಟ್ಟು ಸುಮ್ಮನಾಗಿಸುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಬದುಕು ಸುಂದರಗೊಳಿಸುವುದು, ಸ್ವಾಸ್ಥ್ಯ, ಸಮಾಜ ರೂಪಿಸುವುದು ಎಲ್ಲಾ ಸಾಹಿತ್ಯ ಪ್ರಕಾರಗಳ ಆಶಯವಾಗಿದೆ” ಎಂದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡು ಘಟಕದ ಅಧ್ಯಕ್ಷ ಡಾ.…

Read More

ಮಂಗಳೂರು : ಕಲಾವಿದ ಪ್ರವೀಣ್ ಕುಮಾರ್ ಅವರ ಕುಂಚದಿಂದ ಮೈಸೂರು ಮತ್ತು ತಾಂಜಾವೂರು ಶೈಲಿಯಲ್ಲಿ ಹೊರಹೊಮ್ಮಿರುವ ಕಲಾಕೃತಿಗಳ ‘ವರ್ಣ ಬೆಳದಿಂಗಳು’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ನಗರದ ಪ್ರಸಾದ್‌ ಆರ್ಟ್‌ ಗ್ಯಾಲರಿಯಲ್ಲಿ ದಿನಾಂಕ 02ರಿಂದ 05 ಜನವರಿ 2025ರವರೆಗೆ ಆಯೋಜಿಸಲಾಗಿದೆ. ದಿನಾಂಕ 02 ಜನವರಿ 2025ರಂದು ಸಂಜೆ ಗಂಟೆ 5-30ಕ್ಕೆ ದೃಢವ್ರತ ಗೊರಿಕ್‌ರವರು ಪ್ರದರ್ಶನ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಸಮೀರ್ ಪುರಾಣಿಕ್ ಭಾಗವಹಿಸಲಿದ್ದು, ಅಸ್ಟ್ರೋ ಮೋಹನ್ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಕಲಾ ತರಬೇತಿ ಪಡೆದಿರುವ ಪಿ. ಪ್ರವೀಣ್ ಕುಮಾರ್ ಇವರು ಕಳೆದ 24 ವರ್ಷಗಳಿಂದ ಸುಮಾರು 4,000ಕ್ಕೂ ಅಧಿಕ ಚಿತ್ರಕಲೆಗಳನ್ನು ರಚಿಸಿದ್ದಾರೆ. ಸುಮಾರು 15ರಷ್ಟು ಕಲಾಕೃತಿಗಳು ಪ್ರದರ್ಶನಗೊಳ್ಳಲಿದೆ. ದೇವರುಗಳ ಕಲಾತ್ಮಕ ಚಿತ್ರಣಗಳನ್ನು ಚಿನ್ನದ ತಗಡಿನ ಎಂಬೋಸ್‌ನ ಮೂಲಕ ರಚಿಸಲ್ಪಟ್ಟ ರೂ.20 ಸಾವಿರದಿಂದ ರೂ.80 ಸಾವಿರ ವರೆಗಿನ ಚಿತ್ರಕಲೆಗಳು ಪ್ರದರ್ಶನದಲ್ಲಿ ಲಭ್ಯವಿರಲಿವೆ ಎಂದು ಕಲಾವಿದ ದಿನೇಶ್ ಹೊಳ್ಳ ತಿಳಿಸಿದ್ದಾರೆ. ದಿನಾಂಕ 03ರಿಂದ 05 ಜನವರಿ 2025ರವರೆಗೆ ಬೆಳಗ್ಗೆ 10-00ರಿಂದ 7-00 ಗಂಟೆಗೆ…

Read More

ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿಯಿಂದ ಕೊಡಮಾಡುವ ಪಂಚಮಿ ಟ್ರಸ್ಟ್ ಉಡುಪಿ ಪ್ರಾಯೋಜಿತ ‘ಪಂಚಮಿ ಪುರಸ್ಕಾರ 2026’ಕ್ಕೆ ಕನ್ನಡದ ಹಿರಿಯ ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ, ನಟ, ನಾಟಕಕಾರ, ಸಾಹಿತಿ ಟಿ.ಎನ್. ಸೀತಾರಾಂ ಆಯ್ಕೆಯಾಗಿದ್ದಾರೆ. ಜನವರಿ ತಿಂಗಳಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಗೌರವದನ ಒಂದು ಲಕ್ಷದೊಂದಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಟಿ.ಎನ್. ಸೀತಾರಾಂ : ಕಿರುತೆರೆ ದಾರಾವಾಹಿ ಮೂಲಕ ಮನೆಮಾತಾಗಿರುವ ಟಿ.ಎನ್. ಸೀತಾರಾಂ 1948ರ ಡಿಸೆಂಬರ್ 6ರಂದು ಜನಿಸಿದರು. ಪತ್ರಕರ್ತ, ಕತೆಗಾರ, ನಾಟಕಕಾರ, ಚಿತ್ರನಟ, ಚಿತ್ರ ನಿರ್ದೇಶಕರಾಗಿಯೂ ಛಾಪು ಮೂಡಿಸಿದವರು. ಮೂಲತಃ ಗೌರಿಬಿದನೂರಿನವರಾದ ಸೀತಾರಾಂ, ತಂದೆಯವರು ನಾರಾಯಣರಾಯರು ಮತ್ತು ತಾಯಿ ಸುಂದರಮ್ಮನವರು. ಕೃಷಿಯನ್ನಾಶ್ರಯಿಸಿದ ಕುಟುಂಬ ಅವರದ್ದು. ಪ್ರಾರಂಭಿಕ ವಿದ್ಯಾಭ್ಯಾಸವನ್ನು ದೊಡ್ಡಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ಪೂರೈಸಿದ ಸೀತಾರಾಂ ಮುಂದೆ ಬೆಂಗಳೂರು ನ್ಯಾಷನಲ್ ಕಾಲೇಜಿನ ವಿದಾರ್ಥಿಯಾದರು. ಬಿ.ಎಸ್ಸಿ, ಬಿ.ಎಲ್. ಓದಿದ ಇವರು ನ್ಯಾಯವಾದದ ಕಾಯಕವನ್ನು ಒಂದಷ್ಟು ನಡೆಸಿದರಾದರೂ, ಆಂತರ್ಯದ…

Read More

ಮಂಗಳೂರು : ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಉರ್ವಸ್ಟೋರ್ ಶ್ರೀಮಹಾಗಣಪತಿ ದೇವಸ್ಥಾನದ ಸಹಯೋಗದಲ್ಲಿ ದಿನಾಂಕ 25 ಡಿಸೆಂಬರ್ 2025ರಂದು ಉರ್ವಸ್ಟೋರ್ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಆಯೋಜಸಿದ್ದ ಶೇಣಿ ಸಂಸ್ಮರಣೆ, ಪ್ರಶಸ್ತಿ ಪ್ರದಾನ-2025 ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಅರ್ಥದಾರಿ, ಪ್ರವಚನಕಾರ ಮೂಡಂಬೈಲು ಗೋಪಾಲಕೃಷ್ಣ ಶಾಸ್ತಿ “ತಾಳಮದ್ದಳೆಯಲ್ಲಿ ಸ್ತ್ರೀ ಪಾತ್ರಗಳನ್ನು ಗೆಲ್ಲಿಸಬೇಕೆಂದು ಸದಾ ಬಯಸಿದೆ. ಅಂಥಹ ಪಾತ್ರಗಳ ಬಗ್ಗೆ ಅಧ್ಯಯನ ಮಾಡಿ, ಅವುಗಳಿಗೆ ಗೌರವ ಸಿಗುವಂತೆ ಮಾಡಲು ಪ್ರಯತ್ನಿಸಿದೆ. ಶೇಣಿ, ಪೆರ್ಲ, ಸಾಮಗದ್ವಯರು ಸೇರಿದಂತೆ ಹಿರಿಯರು ನನ್ನ ಪ್ರಯತ್ನವನ್ನು ಮೆಚ್ಚಿದರು. ಶೇಣಿ ನನ್ನ ಪರೋಕ್ಷ ಗುರುಗಳು. ಅವರ ಜತೆ ವೇದಿಕೆಯಲ್ಲಿ ಒಡನಾಟ ನನ್ನ ಅಧ್ಯಯನಶೀಲತೆ ಹೆಚ್ಚಿಸಿತು. ನನ್ನ ಜನ್ಮದಿನದಂದೇ ಶೇಣಿ ಪ್ರಶಸ್ತಿ ಲಭಿಸಿದೆ. ಹಿಂದೆ ಜನ್ಮದಿನದಂದೇ ಪೆರ್ಲ ಪ್ರಶಸ್ತಿಯೂ ಲಭಿಸಿತ್ತು. ಇದು ನನ್ನ ಪುಣ್ಯ” ಎಂದು ಹೇಳಿದರು. ಟ್ರಸ್ಟ್ ಅಧ್ಯಕ್ಷರಾದ ಹರಿದಾಸ ಕೆ. ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ…

Read More

ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ, ಸಮ್ಮೇಳನ ಸ್ವಾಗತ ಸಮಿತಿ ವತಿಯಿಂದ 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಕುಕ್ಕುಜಡ್ಕದ ಚೊಕ್ಕಾಡಿ ವಿದ್ಯಾ ಸಂಸ್ಥೆಯಲ್ಲಿ ದಿನಾಂಕ 30 ಡಿಸೆಂಬರ್ 2025ರಂದು ನಡೆಯಲಿದೆ. ಮುಂಜಾನೆ ಗಂಟೆ 8-45ಕ್ಕೆ ಕುಕ್ಕುಜಡ್ಕ ಪೇಟೆಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ಹೊರಡಲಿದೆ. ಸಾಹಿತಿ ಕೆ.ಆರ್. ತೇಜಕುಮಾರ್ ಬಡ್ಡಡ್ಕ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದು, ಮೆರವಣಿಗೆಗೆ ಮಾಜಿ ಸಚಿವ ಎಸ್. ಅಂಗಾರ ಚಾಲನೆ ನೀಡಲಿದ್ದಾರೆ. ಅಮರಮುಡ್ನೂರು ಗ್ರಾ.ಪಂ. ಅಧ್ಯಕ್ಷೆ ಜಾನಕಿ ಕಂದಡ್ಕ ರಾಷ್ಟ್ರ ಧ್ವಜಾರೋಹಣ, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ಹಾಗೂ ಸುಳ್ಯ ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ಕನ್ನಡ ಧ್ವಜಾರೋಹಣ ಮಾಡಲಿದ್ದಾರೆ. ಸಾಹಿತ್ಯ ಸಮ್ಮೇಳನವನ್ನು ಹಿರಿಯ ಸಾಹಿತಿ ಕೆ.ಪಿ. ಸುರೇಶ್ ಕಂಜರ್ಪಣೆ ಉದ್ಘಾಟಿಸಲಿದ್ದು, ಶಾಸಕಿ ಭಾಗೀರಥಿ ಮುರುಳ್ಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ನೂತನ ಕೃತಿಗಳನ್ನು…

Read More

ಧಾರವಾಡ : ಅನುಷ್ಕಾ ಪ್ರಕಾಶನ, ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 26 ಡಿಸೆಂಬರ್ 2025ರಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರೊ. ಮಾಲತಿ ಪಟ್ಟಣಶೆಟ್ಟಿಯವರ ‘ಕಣ್ಣಂಚಿನ ತಾರೆ’, ವಿಕಾಸ ಹೊಸಮನಿಯವರ ‘ಜೀವ ಸಂವಾದ’, ಡಾ. ಸುಭಾಷ್ ಪಟ್ಟಾಜೆಯವರ ‘ಕಾಡುಸಂಪಿಗೆ’ ಮತ್ತು ‘ಮಾಲತಿ ಪಟ್ಟಣಶೆಟ್ಟಿ ವ್ಯಕ್ತಿತ್ವ – ಸಾಹಿತ್ಯ’ ಎಂಬ ನಾಲ್ಕು ಕೃತಿಗಳು ಲೋಕಾರ್ಪಣೆಗೊಂಡವು. ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಖ್ಯಾತ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲರು “ಸಾಹಿತ್ಯ ಮನುಷ್ಯತ್ವದ ಘನತೆಯನ್ನು ಎತ್ತಿ ಹಿಡಿಯಬೇಕು. ಕರುಣೆ ಮತ್ತು ಕ್ರೌರ್ಯಗಳ ಸಂಘರ್ಷದಲ್ಲಿ ಕಾರುಣ್ಯ ಗೆಲ್ಲಬೇಕು. ಸಾಹಿತ್ಯವು ಒಂದು ಕಲೆ. ಅದು ಮಾನವನ ಅನುಭವದ ಸಾರವನ್ನು ಹಿಡಿದಿಟ್ಟು, ಓದುಗನ ಜೀವನದೊಂದಿಗೆ ಬೆರೆತು, ಅವನಿಗೆ ಅರ್ಥಪೂರ್ಣ ಅನುಭವವನ್ನು ನೀಡಬೇಕು. ಪ್ರಸ್ತುತ ಸಾಹಿತ್ಯದ ಕುರಿತು ಮಾತನಾಡುತ್ತಾ ಲೇಖಕರಿಗೆ ಶುಭವನ್ನು ಕೋರಿದರು. ‘ಜೀವ ಸಂವಾದ’ ಕೃತಿಯ ಕುರಿತು ಮಾತನಾಡಿದ ಪ್ರೊ. ಅರುಂಧತಿ ಸವದತ್ತಿಯವರು “ಐದು ದಶಕಗಳ ಕಾದಂಬರಿ ಸಾಹಿತ್ಯದ ಸಿಂಹಾವಲೋಕನ ಮಾಡುವುದು…

Read More

ಮೂಡುಬಿದಿರೆ : ಮೂಡುಬಿದಿರೆಯ ಆಳ್ವಾಸ್ ಕಾಲೇಜು (ಸ್ವಾಯತ್ತ)ನ ಕನ್ನಡ ವಿಭಾಗ ಹಾಗೂ ಗಾಂಧಿ ವಿಚಾರ ವೇದಿಕೆಗಳ ಜಂಟಿ ಆಶ್ರಯದಲ್ಲಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ದಿನಾಂಕ 19 ಡಿಸೆಂಬರ್ 2025ರಂದು ಉದಯ ಕುಮಾರ್ ಹಬ್ಬು ಇವರ ‘ಉತ್ತರ ಸತ್ಯಾಗ್ರಹ ಗೀತಾ’ ಅನುವಾದಿತ ಕೃತಿ ಬಿಡುಗಡೆಗೊಂಡಿತು. ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ “ಮಹಾತ್ಮಾ ಗಾಂಧೀಜಿಯವರ ಚಿಂತನೆಗಳು ಇಂದಿನ ಕಾಲಘಟ್ಟದಲ್ಲಿ ಪ್ರಸ್ತುತವಾಗಿದ್ದು, ಯುವ ಸಮುದಾಯ ಗಾಂಧೀಜಿಯವರ ಚಿಂತನೆಗಳನ್ನು ಅಧ್ಯಯನ ಮಾಡಬೇಕಾಗಿದೆ. ಮಹಾರಾಷ್ಟ್ರದ ಕವಯಿತ್ರಿ ಪಂಡಿತಾ ಕ್ಷಮಾರಾವ್ 1948ರಲ್ಲಿ ಸಂಸ್ಕೃತದಲ್ಲಿ ಬರೆದ ‘ಉತ್ತರ ಸತ್ಯಾಗ್ರಹ ಗೀತಾ’ ಕಾವ್ಯವು 1931ರಿಂದ 1944ರವರೆಗಿನ ಸತ್ಯಾಗ್ರಹದ ಹೋರಾಟದ ಕಥನವನ್ನು ಒಳಗೊಂಡಿದ್ದು ಹಿರಿಯ ಸಾಹಿತಿ ಉದಯ ಕುಮಾರ್ ಹಬ್ಬು ಕನ್ನಡಕ್ಕೆ ಗದ್ಯಾನುವಾದ ಮಾಡಿದ್ದು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯಾಗಿದೆ. ಗಾಂಧೀಜಿಯವರ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಆಧ್ಯಾತ್ಮಿಕ ಚಿಂತನೆಗಳು ಈ ಕೃತಿಯಲ್ಲಿ ಒಡ ಮೂಡಿದ್ದು ಆಧುನಿಕ ಭಾರತದ ಇತಿಹಾಸದ ಘಟನೆಗಳು ಕಾವ್ಯ ರೂಪದಲ್ಲಿ…

Read More

ಬೆಂಗಳೂರು : ರಂಗಾಯಣ ಧಾರವಾಡ, ಶ್ರಮಣ ಸಂಸ್ಕೃತಿ ಟ್ರಸ್ಟ್ (ರಿ.) ದೊಡ್ಡಬಳ್ಳಾಪುರ ಸಹಕಾರದಲ್ಲಿ ಧಾರವಾಡ ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸುವ ‘ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ’ ನಾಟಕ ಪ್ರದರ್ಶನ ದಿನಾಂಕ 29 ಡಿಸೆಂಬರ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಈ ನಾಟಕದ ರಂಗರೂಪ ಮತ್ತು ನಿರ್ದೇಶನ ಪ್ರಕಾಶ ಗರುಡ, ಸಂಗೀತ ಸಂಯೋಜನೆ ರಾಘವ ಕಮ್ಮಾರ, ರಂಗವಿನ್ಯಾಸ ಶ್ವೇತಾರಾಣಿ ಎಚ್.ಕೆ., ವಸ್ತ್ರವಿನ್ಯಾಸ ರಜನಿ ಗರುಡ, ರಂಗವಿನ್ಯಾಸ ವೆಂಕಟೇಶ ಬಡಿಗೇರ, ಬೆಳಕಿನ ವಿನ್ಯಾಸ ಮಧು ಮಳವಳ್ಳಿ ಇವರದ್ದು.

Read More

ಖ್ಯಾತ ‘ಶ್ರದ್ಧಾ ಡ್ಯಾನ್ಸ್ ಸೆಂಟರ್’ ನೃತ್ಯಶಾಲೆಯ ಬದ್ಧತೆಯ ಗುರುವೆಂದು ಹೆಸರಾದ, ಸ್ವತಃ ಅತ್ಯುತ್ತಮ ನೃತ್ಯ ಕಲಾವಿದೆಯಾದ ವಿದುಷಿ ಶಮಾ ಕೃಷ್ಣಾ ಇವರ ವಿಶಿಷ್ಟ ನಾಟ್ಯಶಿಕ್ಷಣದಲ್ಲಿ ಕಲಾಪ್ರಪೂರ್ಣವಾಗಿ ಅರಳಿದ ಪುಟ್ಟ ಕಲಾವಿದೆ ವಿದಿತಾ ನವೀನ್, ತನ್ನ ಮನೋಜ್ಞ ನೃತ್ಯ ವೈಖರಿಯಿಂದ ಸಮಸ್ತ ಕಲಾರಸಿಕರನ್ನು ಮಂತ್ರಮುಗ್ಧಗೊಳಿಸಿದಳು. ಸಂದರ್ಭ – ನಗರದ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ಈ ಬಾಲಪ್ರತಿಭೆ ತನ್ನ ವಯಸ್ಸಿಗೂ ಮೀರಿದ ನುರಿತಾಭಿನಯ, ಮಿಂಚಿನ ಸಂಚಾರದ ಅಪೂರ್ವ ನೃತ್ತ ವಿನ್ಯಾಸಗಳಿಂದ, ಬೆರಗುಗೊಳಿಸಿದ ಆಂಗಿಕಾಭಿನಯದಿಂದ ಚಿರಸ್ಮರಣೀಯವಾದ ವಿಶೇಷ ಅನುಭವವನ್ನು ಕಟ್ಟಿಕೊಟ್ಟಳು. ವೇದಿಕೆಯ ಮೇಲೆ ಮಿಂಚಿನ ಬಳ್ಳಿಯೊಂದು, ಇಡೀ ರಂಗವನ್ನು ಬಳಸಿಕೊಂಡು ಪ್ರತಿಯೊಂದು ನೃತ್ಯ ಕೃತಿಯನ್ನೂ ವಿಶೇಷ ಆಯಾಮದಲ್ಲಿ ಪ್ರಫುಲ್ಲವಾಗಿ ಪ್ರಸ್ತುತಿಪಡಿಸಿದ್ದು ಕಲಾವಿದೆಯ ಅಸ್ಮಿತೆಯೇ ಸರಿ. ವಿಘ್ನ ವಿನಾಯಕನ ಆರಾಧನೆಯ ವಿಶಿಷ್ಟ ನೋಟದಿಂದ ಆರಂಭವಾದ ವಿದಿತಾಳ ಸುಮನೋಹರ ನೃತ್ಯದ ಹೆಜ್ಜೆಗಳು ‘ನರಸಿಂಹ ಕೌತ್ವಂ’ದ ನಾರಸಿಂಹನ ಕೌತುಕ ಭಂಗಿಗಳು, ಉಗ್ರಸ್ವರೂಪದ ಸಾಕ್ಷಾತ್ಕಾರದಲ್ಲಿ ಮೈ ನವಿರೇಳಿಸಿತು. ಕಲಾವಿದೆಯ ಆತ್ಮವಿಶ್ವಾಸದ ಹಸನ್ಮುಖದ ಭಾವ-ಭಂಗಿಗಳು, ಲೀಲಾಜಾಲದ ಆನಂದದ ನೃತ್ಯ ನೋಡುಗರನ್ನು ಕಣ್ಣೆವೆ ಮಿಟುಕಿಸದಂತೆ…

Read More

ಉಡುಪಿ : ರಂಗಭೂಮಿ (ರಿ) ಉಡುಪಿ ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಮತ್ತು ಬೆಂಗಳೂರು, ಉಡುಪಿಯ ಪ್ರೌಢ ಶಾಲೆಗಳು, ರಂಗ ತಂಡಗಳು, ಕಲಾ ಪೋಷಕರು ಮತ್ತು ಎಂ.ಜಿ.ಎಂ. ಕಾಲೇಜಿನ ಸಹಕಾರದೊಂದಿಗೆ ‘ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ’ವನ್ನು ದಿನಾಂಕ 29 ಮತ್ತು 30 ಡಿಸೆಂಬರ್ 2025ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ. ದಿನಾಂಕ 29 ಡಿಸೆಂಬರ್ 2025ರಂದು ಬೆಳಿಗ್ಗೆ 9-30 ಗಂಟೆಗೆ ರಂಗಭೂಮಿ ಇದರ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಸ್ವರೂಪ ಟಿ.ಕೆ. ಇವರು ಈ ನಾಟಕೋತ್ಸವದ ಉದ್ಘಾಟನೆ ಮಾಡಲಿದ್ದಾರೆ. ಬೆಳಿಗ್ಗೆ ಗಂಟೆ 10-45ಕ್ಕೆ ಕುಂಜಿಬೆಟ್ಟು ಶಾರದಾ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿಗಳಿಂದ ‘ಪುಷ್ಪರಾಣಿ’, 11-45ಕ್ಕೆ ಕಲ್ಯಾಣಪುರ ಮಿಲಾಗ್ರಿಸ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಕಾಡಿನ ಪಕ್ಷಿ ಪ್ಯಾಟೆಗೆ ಬಂತು’, ಮಧ್ಯಾಹ್ನ ಗಂಟೆ 12-45ಕ್ಕೆ ಉಡುಪಿ ವಿದ್ಯೋದಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ‘ಅಳಿಲು ಮರಿಯ ಹೊರಳು…

Read More