Author: roovari

ಮೈಸೂರು : ಮಂಡ್ಯ ರಮೇಶ್ ನೇತೃತ್ವದ ‘ನಟನ ಮೈಸೂರು’ ಆಯೋಜಿಸುವ ‘ರಜಾ ಮಜಾ’ ಮಕ್ಕಳ ಬೇಸಿಗೆ ಶಿಬಿರವು ದಿನಾಂಕ 11 ಏಪ್ರಿಲ್ 2025ರಂದು ಮೈಸೂರಿನ ದಟ್ಟಗಳ್ಳಿಯ ಸುಪ್ರೀಮ್ ಪಬ್ಲಿಕ್ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ನಟನದ 24ನೇ ವರ್ಷದ ಈ ಕಾರ್ಯಕ್ರಮವು ಮಕ್ಕಳು, ಪೋಷಕರು, ಅತಿಥಿಗಳ ಮುಂದೆ ಸಂಭ್ರಮದಿಂದ ಅನಾವರಣಗೊಂಡಿತು. ಅಲ್ಲಿ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದರಿದ್ದರು, ಈ ತುತ್ತ ತುದಿಗೆ ಆಧುನಿಕ ರಂಗಭೂಮಿಯ ಡಿಪ್ಲೋಮಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿದ್ದರು, ಜನಪ್ರಿಯ ಹಿರಿಯ ಸಿನಿಮ ಕ್ರಿಯಾಶೀಲ ನಿರ್ದೇಶಕರಿದ್ದರು, ನಟನ ಯಾನದಿಂದ ಹೊರಟು ಹೋಟೆಲ್ ಉದ್ಯಮದಲ್ಲಿ ಮೇರು ಸಾಧಿಸಿದ ಮಾಲೀಕರಿದ್ದರು, ಶಿಕ್ಷಣ ತಜ್ಞರಿದ್ದರು. ಕಲಾವಿದ ಮನಸ್ಸಿನ ಪೋಷಕರು ಮಕ್ಕಳು ತುಂಬಿ ತುಳುಕಿದರು. ಪ್ರತಿಯೊಬ್ಬರೂ ಅವರ ಅನುಭವಗಳನ್ನು ಮಕ್ಕಳಿಗಾಗಿ ಹಂಚಿಕೊಳ್ಳುತ್ತಿದ್ದಾಗ ವಿಚಾರ, ವಿನೋದ, ಭಾವುಕತೆ ಮಕ್ಕಳ ಮನಸ್ಸಿನಲ್ಲಿ ಕನಸುಗಳಾಗಿ ಅರಳಿಕೊಳ್ಳುತ್ತಿದ್ದುದನ್ನು ತೀರಾ ಸಮೀಪದಲ್ಲಿ ಕಂಡೆ. ಮುಂದಿನ 26 ದಿನಗಳ ಶಿಬಿರದಲ್ಲಿ ಆ ಮಕ್ಕಳ ಅರ್ಥಪೂರ್ಣ ಕಲಿಕಾ ಸಂಭ್ರಮದ ನಾಂದಿಯಾಗಿ ಇಡೀ ಕಾರ್ಯಕ್ರಮ ಚೇತೋಹಾರಿಯಾಗಿತ್ತು ! ಹೊರಡುವ ಮುನ್ನ ಹಿರಿಯ…

Read More

ಬೆಂಗಳೂರು : ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ದಿನಾಂಕ 10 ಏಪ್ರಿಲ್ 2025ರಂದು ನಡೆದ ನಾಡಿನ ಸಾಹಿತಿಗಳು ಮತ್ತು ಸಾಂಸ್ಕೃತಿಕ ಪರಿಚಾರಕರಾದ ಡಾ. ರಾಮಲಿಂಗೇಶ್ವರಾ ಸಿಸಿರಾ ಇವರ ಬದುಕು-ಬರಹದ ಕುರಿತು ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ 2025ರ ಸಾಲಿನ ‘ಡಾ. ಸಿಸಿರಾ ಯುವ ಸಾಹಿತ್ಯ ಸಾಂಸ್ಕೃತಿಕ ಪ್ರಶಸ್ತಿ’ಯನ್ನು ನಾಡೋಜ ಪ್ರೊ. ಹಂಪನಾ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಹಾಗೂ ನಾಡೋಜ ಡಾ. ವೂಡೇ ಪಿ. ಕೃಷ್ಣ, ಖ್ಯಾತ ವಿಮರ್ಶಕರಾದ ಡಾ. ಬೈರಮಂಗಲ ರಾಮೇಗೌಡರು, ಹಿರಿಯ ಸಾಹಿತಿಗಳಾದ ಕೆ.ಎಂ. ರೇವಣ್ಣ, ಉಪನ್ಯಾಸಕರಾದ ಡಾ. ವಾದಿರಾಜ್, ಕವಯತ್ರಿ ಶ್ರೀಮತಿ ಶಾಂತಿ ವಾಸು ಹಾಗೂ ಡಾ. ರಾಮಲಿಂಗೇಶ್ವರಾ ಸಿಸಿರಾ ಇವರುಗಳು ಎಮ್. ರಮೇಶ ಕಮತಗಿ ಇವರಿಗೆ ಅವರ ಎಂಟು ವರ್ಷದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖ ಪ್ರಶಸ್ತಿಗಳಲ್ಲೊಂದಾದ ‘ಕನ್ನಡ ಚಳವಳಿ ವೀರ ಸೇನಾನಿ ಮ. ರಾಮಮೂರ್ತಿ ದತ್ತಿ ಪ್ರಶಸ್ತಿ’ಗೆ ಮೈಸೂರಿನ ಕನ್ನಡ ಹೋರಾಟಗಾರ ಸ.ರ. ಸುದರ್ಶನ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ರಾಜ್ಯಾದ್ಯಂತ ಕನ್ನಡ ಚಳುವಳಿಗೆ ಶಕ್ತಿಯನ್ನು, ಹೋರಾಟದ ಸ್ಪೂರ್ತಿಯನ್ನು ತುಂಬಿದಂತಹ ಮ. ರಾಮಮೂರ್ತಿಯವರ ಹೆಸರಿನಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದತ್ತಿಯನ್ನು ಸ್ಥಾಪಿಸಿದ್ದು, ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿಗಳ ರಕ್ಷಣೆಗೆ ಹಾಗೂ ಪ್ರಗತಿಗೆ ಶ್ರಮಿಸಿ ಎಲೆ ಮರೆಯ ಕಾಯಿಗಳಂತಿರುವ ಕನ್ನಡ ಕಾರ್ಯಕರ್ತರಿಗೆ ಈ ಗೌರವ ಸಲ್ಲಬೇಕೆಂದು ಆಶಿಸಿದ್ದಾರೆ. 2025ನೆಯ ಸಾಲಿಗೆ ಈ ಪುರಸ್ಕಾರಕ್ಕೆ ಪಾತ್ರರಾಗಿರುವ ಮೈಸೂರಿನ ಸ.ರ.ಸುದರ್ಶನ ಗೋಕಾಕ್ ಚಳುವಳಿಯ ಆರಂಭದಿಂದಲೂ ಕನ್ನಡ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು, ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿಸಲು, ಕನ್ನಡಕ್ಕೆ ದೊರೆತ ಶಾಸ್ತ್ರೀಯ ಸ್ಥಾನಮಾನದ ಸದ್ಭಳಕೆ ಕುರಿತು ಹೀಗೆ ನಿರಂತರವಾಗಿ ಕನ್ನಡಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆಡಳಿತ…

Read More

ಬೆಂಗಳೂರು : ವಿಜಯನಗರ ಬಿಂಬ (ರಿ.) ರಂಗ ಶಿಕ್ಷಣ ಕೇಂದ್ರ, ಮಕ್ಕಳ ವಿಭಾಗ ಅರ್ಪಿಸುವ ‘ಚಿಣ್ಣರ‌ ಚಿತ್ತಾರ 2025’ದ ಪುಟಾಣಿಗಳಿಂದ ಎರಡು ಚೊಟಾಣಿ ನಾಟಕಗಳು, ಶಿಶುಗೀತೆಗಳ ಗಾಯನ ಮತ್ತು ಕಲಾಪ್ರದರ್ಶನವನ್ನು ದಿನಾಂಕ 14 ಏಪ್ರಿಲ್ 2025ರಂದು ಸಂಜೆ ಗಂಟೆ 5-3ಕ್ಕೆ ಹಂಪಿನಗರ ಚಿತ್ರಕೂಟ ಮಾಂಟೆಸ್ಸರಿಯಲ್ಲಿ ಆಯೋಜಿಸಲಾಗಿದೆ. ಮಕ್ಕಳ ಸಾಹಿತಿ ಶ್ರೀಮತಿ ಪ್ರೇಮಾ ಶಿವಾನಂದ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಡಾ. ಎಸ್.ವಿ. ಕಶ್ಯಪ್ ಇವರು ರಚಿಸಿರುವ ಡಾ. ಸುಷ್ಮಾ ಎಸ್.ವಿ. ಇವರ ನಿರ್ದೇಶನದಲ್ಲಿ ‘ಚಿರತೆ ಚರಿತೆ’ ಮತ್ತು ಡಾ. ಬೃಂದಾ ಇವರ ರಚನೆ ಮತ್ತು ನಿರ್ದೇಶನದಲ್ಲಿ ‘ಸಂಖ್ಯಾ ನಗರಿ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

Read More

ಧಾರವಾಡ : ತಮ್ಮ ಕೊಳಲು ಹಾಗೂ ಕಂಠಸಿರಿಯ ನಾದದಿಂದ ಸಂಗೀತ ಸರಸ್ವತಿಗೆ ಸೇವೆ ಸಲ್ಲಿಸಿ ಹಿಂದುಸ್ಥಾನಿ ಸಂಗೀತದ ಪರಂಪರೆಯನ್ನು ಕರ್ನಾಟಕದಲ್ಲಿ ಪ್ರಚವ-ಪ್ರಸಾರ ಪಡಿಸಿದ ಸಂಗೀತ ದಿಗ್ಗಜ ದಿವಂಗತ ಪಂಡಿತ್ ವೆಂಕಟೇಶ್ ಗೋಡ್ಖಿಂಡಿಯವರ ಸ್ಮರಣಾರ್ಥವಾಗಿ, ಸಂಜೋಗ್ ಸಂಸ್ಥೆ ಗೋಡ್ಖಿಂಡಿ ಮ್ಯೂಸಿಕ್ ಮತ್ತು ಎಡ್ಯುಟೇನ್ಮೆಂಟ್ ಪ್ರೈ.ಲಿ. ಹಾಗೂ ಕೇಂದ್ರ ಸಂಸ್ಕೃತಿ ಇಲಾಖೆ ಅವರ ಸಂಯುಕ್ತ ಆಶ್ರಯದಲ್ಲಿ ‘ಸ್ವರಶೃದ್ಧಾಂಜಲಿ’ ಸಂಗೀತ ಕಾರ್ಯಕ್ರಮವನ್ನು ದಿನಾಂಕ 19 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಧಾರವಾಡದ ಸೃಜನಾ ಡಾ. ಅಣ್ಣಾಜಿರಾವ್ ಶಿರೂರ ರಂಗ ಮಂದಿರದಲ್ಲಿ ಹಮ್ಮಿಕೊಂಡಿದೆ. ಈ ನಾದ ನಮನವನ್ನು ಸಂಜೋಗ್ ಬಾನ್ಸುರಿ ಮಹಾವಿದ್ಯಾಲಯದ ಯುವ ಗಾಯಕ-ಗಾಯಕಿಯರು ‘ಪಂಡಿತ್ ವೆಂಕಟೇಶ್ ಗೋಡ್ಖಿಂಡಿ ಅವರು ಸಂಗೀತ ಸಂಯೋಜಿಸಿ ಜನಪ್ರಿಯಗೊಳಿಸಿದ ಭಕ್ತಿಗೀತೆಗಳನ್ನು ಹಾಡುವ ಮುಖೇನ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆಯನ್ನು ನೀಡಲಿದ್ದಾರೆ. ಹೆಸರಾಂತ ಗಾಯಕರು ಪಂ. ಸೋಮನಾಥ ಮರಡೂರ ಹಾಗೂ ಪಂ. ವೆಂಕಟೇಶ ಕುಮಾರ ಅವರು ಪಂ. ವೆಂಕಟೇಶ ಗೋಡ್ಖಿಂಡಿಯವರ ಬಗ್ಗೆ, ನೆನಪುಗಳನ್ನು ಹಂಚಿಕೊಳ್ಳುತ್ತ ನುಡಿ ನಮನ ಸಲ್ಲಿಸಲಿದ್ದಾರೆ. ತದನಂತರ ಗೋಡ್ಖಿಂಡಿ ತ್ರಯರು-ಅಂದೆ…

Read More

ಮಂಗಳೂರು : ಕರಾವಳಿಯ ನಾಟ್ಯಪ್ರಪಂಚಕ್ಕೆ ಮಹಾನ್ ಕೊಡುಗೆ ನೀಡಿದ ಪಂದನಲ್ಲೂರು ಶೈಲಿಯ ಭರತನಾಟ್ಯ ನಿಪುಣೆ, ನೃತ್ಯಗುರು ಕಮಲಾ ಭಟ್ ಅವರ ಸ್ಮರಣಾರ್ಥವಾಗಿ ಕರಂಗಲ್ಪಾಡಿಯ ಸುಬ್ರಹ್ಮಣ್ಯ ಸಭಾ ಸದನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಅವರ ಶಿಷ್ಯೆ ವಿನಯ ರಾವ್ ಆಯೋಜಿಸಿದ್ದ ‘ಕಮಲಾಂಜಲಿ’ ಕಾರ್ಯಕ್ರಮವು ದಿನಾಂಕ 10 ಏಪ್ರಿಲ್ 2025ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ತನ್ನ ಶಿಷ್ಯೆಯ ಸಂಸ್ಮರಣೆ ಮಾಡುತ್ತಾ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ “ಪಂದನಲ್ಲೂರು ಶೈಲಿಯ ಭರತನಾಟ್ಯವನ್ನು ನಗರಾದ್ಯಂತ ಪ್ರಚಾರ ಮಾಡಿ, ನೂರಾರು ಪ್ರತಿಭಾಶಾಲಿ ಶಿಷ್ಯರನ್ನು ತಯಾರಿಸಿ, ನೃತ್ಯಜಗತ್ತಿಗೆ ಮಹತ್ತರ ಕೊಡುಗೆ ನೀಡಿದ ಕಮಲಾ ಭಟ್ ಅವರು ತಮ್ಮ ಜೀವನವನ್ನೆಲ್ಲ ಕಲಾಸೇವೆಗೆ ಅರ್ಪಿಸಿರುವರು. ಸುಧೀರ್ಘ 45 ವರ್ಷಗಳ ನಟರಾಜನ ಸೇವೆ ಮಾಡಿದ ಅವರು, ಕಲೆಯೇ ದೇವತೆ, ಕಲೆಯೇ ಧರ್ಮ ಎಂಬ ಭಾವನೆಯೊಂದಿಗೆ ತಮ್ಮ ತಪಸ್ಸನ್ನು ಮುಂದುವರಿಸಿದ್ದರು. ಅವರ ಶಿಷ್ಯರು ಇಂದು ನೃತ್ಯದ ಸಂಸ್ಕೃತಿಯನ್ನು ಮುಂದುವರೆಸುತ್ತಿರುವುದು ನಿಜವಾದ ಅರ್ಥದ ಗುರುಪರಂಪರೆಯ ಪ್ರತೀಕವಾಗಿದೆ” ಎಂದು ಹೇಳಿದರು. “ಕಮಲಾ…

Read More

ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಸಹಕಾರದಲ್ಲಿ, ಕಾಸರಗೋಡು ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಬೇಕಲ ರಾಮ ನಾಯಕರವರ ಬದುಕು – ಬರಹದ ಕುರಿತ ಸ್ಮರಣಾಂಜಲಿ ಕಾರ್ಯಕ್ರಮವು ದಿನಾಂಕ 27 ಏಪ್ರಿಲ್ 2025ರಂದು ಅಪರಾಹ್ನ 2-00 ಗಂಟೆಗೆ ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯುವ ವಸಂತ ಚುಟುಕು ಕವಿಗೋಷ್ಠಿಯಲ್ಲಿ ಕಾಸರಗೋಡು ಜಿಲ್ಲೆಯ ಆಸಕ್ತ ಕವಿಗಳಿಗೆ ಚುಟುಕುಗಳನ್ನು ವಾಚಿಸಲು ಅವಕಾಶವಿದೆ. ಚುಟುಕು ಕವನಕ್ಕೆ ವಿಷಯ ನಿರ್ಬಂಧವಿಲ್ಲ. ಒಬ್ಬರು ನಾಲ್ಕು ಸಾಲಿನ ಉತ್ತಮ ಎನಿಸುವ ಮೂರು ಚುಟುಕುಗಳನ್ನು ವಾಚಿಸಬಹುದು. ಆಸಕ್ತರು ದಿನಾಂಕ 20 ಏಪ್ರಿಲ್ 2025ರ ಮೊದಲು 9447490344 ಸಂಖ್ಯೆಗೆ ವಾಟ್ಸಪ್ ಮೂಲಕ ತಮ್ಮ ಭಾಗವಹಿಸುವಿಕೆಯನ್ನು ತಿಳಿಸಬೇಕೆಂದು ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ತಿಳಿಸಿದ್ದಾರೆ.

Read More

ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ-ತೆಕ್ಕಟ್ಟೆ, ಧಮನಿ ಟ್ರಸ್ಟ್ (ರಿ.) ತೆಕ್ಕಟ್ಟೆ ಮತ್ತು ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಚಂದಕ್ಕಿ ಬಾರೇ ಕಥೆ ಹೇಳೆ’ ರಜಾ ರಂಗು 2025 ಬೇಸಿಗೆ ಶಿಬಿರವು ದಿನಾಂಕ 11 ಏಪ್ರಿಲ್ 2025ರಂದು ಸೇವಾಸಂಗಮದ ನಿಸರ್ಗದಲ್ಲಿ ಉದ್ಘಾಟನೆಗೊಂಡಿತು. ಚಿಟ್ಟೆ ಬುತ್ತಿಯನ್ನು ಬಿಚ್ಚಿಡುವ ಮೂಲಕ ಈ ಶಿಬಿರವನ್ನು ಉದ್ಘಾಟಿಸಿದ ರಂಗಕರ್ಮಿ ಡಾ. ಶ್ರೀಪಾದ ಭಟ್ ಇವರು ಮಾತನಾಡಿ “ಕಥೆಯ ಮುಖೇನ ಅನೇಕ ವಿಷಯವನ್ನು ಮಂಡಿಸುವುದಕ್ಕೆ ಸಾಧ್ಯವಾಗುತ್ತದೆ. ಕಥೆಗೆ ದೇಹದ ಪ್ರತೀ ಅಂಗಾಂಗಗಳೂ ಪ್ರಾಮುಖ್ಯ. ದೇಹದ ಯಾವುದೇ ಒಂದು ಅಂಗಾಂಗಳನ್ನು ಉಪಯೋಗಿಸದೇ ಕಥೆ ಹೇಳಿದರೆ ಅದು ಅಷ್ಟು ಸ್ವಾರಸ್ಯಕರವಾಗಿ ಪರಿಣಾಮ ಬೀರುವುದಿಲ್ಲ. ಮಕ್ಕಳ ಚಲನವಲನಗಳಿಗೆ ಮಹತ್ವ ನೀಡಿ ಪರಿಣಾಮಕಾರಿಯಾಗಿ ಸಮಾಜಮುಖಿಯಾಗಿ ಸ್ಪಂದಿಸುವುದಕ್ಕೆ ಕಥೆ ಹೇಳುವ ರೀತಿಯನ್ನು ಅರಿತಿರಬೇಕು. ‘ರಜಾರಂಗು-25’ ಮಕ್ಕಳ ಬೇಸಿಗೆ ಶಿಬಿರವು ಕಥೆಗಳ ಆಧಾರಿತ ಚಿತ್ರ, ನೃತ್ಯ, ಆಟ, ಪಾಠಗಳನ್ನು ಕಲಿಸುತ್ತದೆ” ಎಂದು ಹೇಳಿದರು. ಶಿಬಿರದ ಮೌಲ್ಯವನ್ನು ಉತ್ಕೃಷ್ಟ ಮಟ್ಟದಲ್ಲಿ ಕಂಡುಕೊಂಡ…

Read More

ಮಂಗಳೂರು : ಸಮುದಾಯ ಮಂಗಳೂರು, ಭಗತ್ ಸಿಂಗ್ ಮೆಮೊರಿಯಲ್ ಟ್ರಸ್ಟ್ (ರಿ.) ಪಂಜಿಮೊಗರು ಮತ್ತು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಪಂಜಿಮೊಗರು ಇವರ ಸಂಯುಕ್ತ ಆಶ್ರಯದಲ್ಲಿ ‘ಚಿಣ್ಣರ ಸಂಭ್ರಮ 2025’ ಬೇಸಿಗೆ ರಜಾ ಶಿಬಿರವನ್ನು ದಿನಾಂಕ 13 ಏಪ್ರಿಲ್ 2025ರಿಂದ 16 ಏಪ್ರಿಲ್ 2025ರವೆರೆಗೆ ಪಂಜಿಮೊಗರು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಉಚಿತ ಶಿಬಿರದಲ್ಲಿ 4ನೇ ತರಗತಿ ಮೇಲ್ಪಟ್ಟ ಯಾವುದೇ ಶಾಲೆಯ ಮಕ್ಕಳು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9448427787, 8050107203 ಮತ್ತು 7795309161 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಬೆಂಗಳೂರು : ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ (ರಿ.) ಹಾಗೂ ಮೋಹನ ತರಂಗಿಣಿ ಸಂಗೀತ ಸಭಾ ಇದರ ‘76ನೇ ವಾರ್ಷಿಕ ಸಂಗೀತ ನೃತ್ಯ ಸಂಭ್ರಮ ಹಾಗೂ ಶರಣ ನುಲಿಯ ಚಂದಯ್ಯ, ಬುದ್ಧ, ಬಸವ, ಡಾ. ಬಿ.ಆರ್. ಅಂಬೇಡ್ಕರ್ ಜಯಂತೋತ್ಸವದ ಪ್ರಯುಕ್ತ ದಿನಾಂಕ 13 ಮತ್ತು 14 ಏಪ್ರಿಲ್ 2025ರಂದು ಮಧ್ಯಾಹ್ನ 2-30 ಗಂಟೆಗೆ ವಿದ್ಯಾಲಯದ 2ನೇ ಮಹಡಿಯಲ್ಲಿ ‘ಅಮ್ಮನ ನೆನಪಿನಂಗಳದಲ್ಲಿ ಅಪ್ಪನ ಶತಮಾನೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ 13 ಏಪ್ರಿಲ್ 2025ರಂದು ಕೀರ್ತಿಶೇಷರಾದ ಶ್ರೀಮತಿ ಶಾರದಮ್ಮ ಗುರು ಕರ್ನಾಟಕ ಕಲಾಶ್ರೀ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಗಾಮದ ಶ್ರೀ ಕೆ. ಮಂಜಪ್ಪರವರ ಸ್ಮರಣಾರ್ಥ ‘ಮಂಜುದಾಸ ರಾಜ್ಯ ಪ್ರಶಸ್ತಿ’ಯನ್ನು ಖ್ಯಾತ ಸಂಗೀತ ನಿರ್ದೇಶಕರು ಶ್ರೀ ವಿ. ಮನೋಹರ ಇವರಿಗೆ ಪ್ರದಾನ ಮಾಡಲಾಗುವುದು. ವಿದುಷಿ ಶ್ರೀಮತಿ ಕೆ.ಎಸ್. ದಾಕ್ಷಾಯಣಿ ರಾಜಕುಮಾರ, ವಿದುಷಿ ಶ್ರೀಮತಿ ಕೆ.ಎಸ್. ದಮಯಂತಿ ರಾಮಸ್ವಾಮಿ ಹಾಗೂ ವಿದ್ಯಾರ್ಥಿಗಳಿಂದ ದಾಸವಾಣಿ, ವಿದುಷಿ ಶ್ರೀಮತಿ ಲೀನಾ ದತ್ತಾತ್ರೇಯ ಫಡ್ನಾವಿಸ್ ಇವರ ಹಿಂದೂಸ್ಥಾನಿ ಗಾಯನಕ್ಕೆ…

Read More