Author: roovari

ಸುರತ್ಕಲ್ : ಅನುದಾನಿತ ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿ ಇಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ವತಿಯಿಂದ 2025 – 2026 ನೇ ಸಾಲಿನ ಶೈಕ್ಷಣಿಕ ವರ್ಷದ ಯಕ್ಷಧ್ರುವ ಯಕ್ಷಶಿಕ್ಷಣ ಯಕ್ಷಗಾನ ತರಬೇತಿಯ ಉದ್ಘಾಟನಾ ಸಮಾರಂಭವು ದಿನಾಂಕ 30 ಜುಲೈ 2025 ರಂದು ನಡೆಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಸುರತ್ಕಲ್ ಘಟಕ ಇದರ ಉಪಾಧ್ಯಕ್ಷರಾದ ಶ್ರೀ ಲೀಲಾಧರ ಶೆಟ್ಟಿ ಕಟ್ಲ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಹಿಂದೂ ವಿದ್ಯಾದಾಯಿನೀ ಸಂಘದ ಅಧ್ಯಕ್ಷರಾದ ಶ್ರೀ ಜಯಚಂದ್ರ ಹತ್ವಾರ್ ಉದ್ಘಾಟಿಸಿದರು. ಯಕ್ಷಶಿಕ್ಷಣ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಮಂಗಳೂರು ಇದರ ಸಂಚಾಲಕರಾದ ಶ್ರೀ ಪಣಂಬೂರು ವಾಸುದೇವ ಐತಾಳ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಿಂದೂ ವಿದ್ಯಾದಾಯಿನೀ ಸಂಘದ ಜೊತೆ ಕಾರ್ಯದರ್ಶಿಗಳಾದ ಶ್ರೀ ಎಮ್. ಜಿ. ರಾಮಚಂದ್ರ ಮುಕ್ಕ, ಶ್ರೀ ವೆಂಕಟರಮಣ ಶಾಲೆಯ ಸಂಚಾಲಕರಾದ ಶ್ರೀಮತಿ ಕಲಾವತಿ ಕೆ., ಶ್ರೀ ವೆಂಕಟರಮಣ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ…

Read More

ಕಾಸರಗೋಡು : ಕೇರಳ-ಕರ್ನಾಟಕ ಕನ್ನಡ ನುಡಿ ಸಂಭ್ರಮ, ಚುಟುಕು ಕವಿ ಕಾವ್ಯ ಸಂಗಮ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿ ಸಾಹಿತಿ, ಕವಯತ್ರಿ, ಸಂಘಟಕಿ, ತೊದಲ್ನುಡಿ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರು, ದ್ರಾವಿಡ ಭಾಷಾ ಅನುವಾದಕ ಸಂಘ, ಬೆಂಗಳೂರು ಇದರ ಅಧ್ಯಕ್ಷರಾದ ಡಾ. ಸುಷ್ಮಾ ಶಂಕರ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಇಮ್ಮಡಿ ಹಳ್ಳಿರಸ್ತೆ, ವೈಟ್ ಫೀಲ್ಡ್ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್‌(ರಿ.), ಡಾ. ಸುಷ್ಮಾ ಶಂಕರ್ ಪ್ರಧಾನ ಸಂಪಾದಕರಾಗಿರುವ ತೊದಲ್ನುಡಿ ಮಾಸ ಪತ್ರಿಕೆ ಮತ್ತು ಗಡಿನಾಡು ಕಾಸರಗೋಡಿನ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ಸಾರಥ್ಯದ ಕನ್ನಡ ಭವನ ಮತ್ತು ಗ್ರಂಥಾಲಯ(ರಿ.), ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಕಾಸರಗೋಡು, ಕಾಸರಗೋಡು ಕನ್ನಡ ಭವನ ಪ್ರಕಾಶನ, ಸಂಯುಕ್ತ ಆಶ್ರಯದಲ್ಲಿ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್(ರಿ.) ಅಡಿಟೋರಿಯಮ್‌ನಲ್ಲಿ ದಿನಾಂಕ 20 ಜುಲೈ 2025ರ ಭಾನುವಾರ ಬೆಳಿಗ್ಗೆ ಘಂಟೆ 10.00 ರಿಂದ ಕಾರ್ಯಕ್ರಮ ಜರುಗಲಿರುವುದು. “ಕೇರಳ-ಕರ್ನಾಟಕ ಕನ್ನಡ ನುಡಿ ಸಂಭ್ರಮ” “ಚುಟುಕು ಕವಿ…

Read More

ಕೋಲಾರ : ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ( ರಿ) ಕಮತಗಿ ಹಾಗೂ ಕಾಸರಗೋಡು ಕನ್ನಡ ಭವನ ಜಿಲ್ಲಾ ಘಟಕ ಕೋಲಾರ ವತಿಯಿಂದ ಗಡಿ ನಾಡು ಸಾಹಿತ್ಯ ಸಮ್ಮೇಳನವನ್ನು ದಿನಾಂಕ 19 ಜುಲೈ 2025ರ ಶನಿವಾರ ಕೋಲಾರದ ಪತ್ರಕರ್ತರ ಭವನದಲ್ಲಿ ಬೆಳಗ್ಗೆ 9:30ರಿಂದ ಸಂಜೆ 5:00ಗಂಟೆಯವರೆಗೆ ನಡೆಸಲು ಪೂರ್ವಭಾವಿ ಸಭೆ ನಡೆಸಲಾಯಿತು.ಈ ಸಂದರ್ಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿರುವ ಹಿರಿಯ ಸಾಹಿತಿ ಹಾಗೂ ರಂಗ ನಿರ್ದೇಶಕರಾದ ಡಾ. ಇಂಚರ ನಾರಾಯಣ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಸಮ್ಮೇಳನದಲ್ಲಿ ಕನ್ನಡ ಧ್ವಜಾರೋಹಣ, ಸರ್ವಾಧ್ಯಕ್ಷರ ಮೆರವಣಿಗೆ, ಪುಸ್ತಕ ಮಳಿಗೆ ಉದ್ಘಾಟನೆ, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಸಲಾಗುವುದು ಎಂದು ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ(ರಿ) ಇದರ ಅಧ್ಯಕ್ಷರಾದ ಶ್ರೀ ಎಮ್. ರಮೇಶ ಕಮತಗಿರವರು ಸಭೆಯಲ್ಲಿ ಹಿರಿಯರ ಸಮ್ಮುಖದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಕಾಸರಗೋಡು ಕನ್ನಡ ಭವನ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಿ. ವಿ. ನಂಜುಂಡಪ್ಪ, ಸ್ವರ್ಣ ಭೂಮಿ…

Read More

ಹಸಿರು ಚಪ್ಪರದಡಿ ಹಸೆಮಣೆಯನೇರಿ ಅವನ ವರಿಸಿಕೊಂಡೊಡನೆ ಕೇಳುತಿಹರೆಲ್ಲ ಮುಟ್ಟು ನಿಂತಿತೇ? ನನಗಿನ್ನೂ ಇಪ್ಪತ್ತು ಹೊಸ ಊರಿನ ಹೊಸ ಬದುಕಿಗೆ ಹೊಂದಿಕೊಳ್ಳುವಷ್ಟು ಸಮಯವಿನ್ನು ಬೇಕಿತ್ತು ಗುಡಿಸಿ, ಒರಸಿ ಅಂಗಳವ ಅಲಂಕರಿಸಿ ಉಂಡುದನು ತೊಳೆದು ಉಟ್ಟುದನು ಒಗೆದು ದಣಿದು ಮಲಗಿರಲು ಅವ ಮುಟ್ಟಿದೊಡನೆ ಮುದುಡಿ ಮೌನವಾಗುತ್ತಿದ್ದೆ… ಮೊದಲು ಮುಟ್ಟಾದೊಡನೆ ಅಮ್ಮ ಸಂಭ್ರಮಿಸಿದ್ದಳು ಕೊಬ್ಬರಿ, ಬೆಲ್ಲ, ಉತ್ತತ್ತಿಯ ತುಪ್ಪದೊಳು ನೆನೆಸಿ ಕೊಟ್ಟು ನೆತ್ತಿಗೆ ಎಣ್ಣೆಯ ಸವರಿ ನೀರೆರೆಯುತ್ತಿದ್ದಳು.. ಇಂದೂ ಮುಟ್ಟಾಗಿದೆ ನನಗೆ ಅಡುಗೆ ಮನೆಗೆ ಪ್ರವೇಶವಿಲ್ಲ ದನಕೆ ಮೇವನಿಕ್ಕುವಂತಿಲ್ಲ ಬಚ್ಚಲಲಿ ಮೀಯುವಂತಿಲ್ಲ ನಾ ಉಣ್ಣುವ ಬಟ್ಟಲೊಂದಿಗೆ ಮನೆಯ ಮೂಲೆಯೇ ನನಗೆಲ್ಲ ಸಮಯ ಸರಿದಿದೆ ವರುಷಗಳು ಕಳೆದಿವೆ, ಜೊತೆ ಜೊತೆಗೆ ಮುಟ್ಟು ನಿಂತಿತೇ ಪ್ರಶ್ನೆಯು ನನ್ನ ಜೊತೆಗೆ ಸಾಗುತಿದೆ….. ಈಗೀಗ ನಾಮಕರಣ, ತೊಟ್ಟಿಲು ಶಾಸ್ತ್ರ, ಉಡಿ ತುಂಬುವ ಶಾಸ್ತ್ರಕ್ಕೂ ನನಗೆ‌ ಆಮಂತ್ರಣವಿಲ್ಲ ಎಷ್ಟು ಹೆತ್ತಿರುವೆ ? ಏಕೆ ಹೆರಲಿಲ್ಲ ? ಪ್ರಶ್ನೆಗಳಿಗೂ ಕೊರತೆಯಿಲ್ಲ… ಆ ಮರಕೆ ತೊಟ್ಟಿಲ ಕಟ್ಟಿ ಈ ಮರಕೆ ದಾರವ ಕಟ್ಟಿ ಅಲ್ಲಿ ಮಿಂದು…

Read More

‘ವಚನ ಪಿತಾಮಹ’ ಎಂದು ಪ್ರಖ್ಯಾತರಾದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಇವರು ಫ. ಗು. ಹಳಕಟ್ಟಿ ಎಂದೇ ಪ್ರಸಿದ್ಧರು. ಹಳಕಟ್ಟಿ ಮನೆತನದವರಾದ ಇವರ ತಂದೆ ಗುರುಬಸಪ್ಪ ಹಳಕಟ್ಟಿ ಹಾಗೂ ತಾಯಿ ದಾನಾದೇವಿ. ತಂದೆ ಗುರುಬಸಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಸಾಹಿತ್ಯ ಸೇವೆಯನ್ನು ಪ್ರವೃತ್ತಿ ಮಾಡಿಕೊಂಡವರು. ‘ಇಂಗ್ಲೆಂಡಿನ ಇತಿಹಾಸ’, ‘ಏಕನಾಥ ಸಾಧುಗಳ ಚರಿತ್ರೆ’, ‘ಫ್ರಾನ್ಸ್ ದೇಶದ ರಾಜ್ಯ ಕ್ರಾಂತಿ’, ‘ಸಿಕಂದರ ಬಾದಶಹನ ಚರಿತ್ರೆ’ ಇತ್ಯಾದಿ ಕೃತಿಗಳನ್ನು ಆ ಕಾಲದಲ್ಲೇ ರಚಿಸಿ ಸಾಹಿತಿಯಾಗಿ ಬಹಳಷ್ಟು ಪ್ರಸಿದ್ಧರಾಗಿದ್ದವರು. ಮಾತ್ರವಲ್ಲದೆ ‘ವಾಗ್ಭೂಷಣ’ ಎಂಬ ಆಗಿನ ಪತ್ರಿಕೆಯಲ್ಲಿ ಹಲವಾರು ಲೇಖಕನಗಳನ್ನು ಬರೆದು ಜನ ಮೆಚ್ಚುಗೆ ಪಡೆದಿದ್ದರು . ಹೀಗಾಗಿ ಫ. ಗು. ಹಳಕಟ್ಟಿಯವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿ ಬಂದಿತ್ತು. ಇವರು ಸಂಶೋಧಕ, ಸಾಹಿತ್ಯ ಪ್ರಚಾರಕ ಮತ್ತು ಸಂಪಾದಕರಾಗಿ ದುಡಿದವರು. 1896ರಲ್ಲಿ ಮೆಟ್ರಿಕ್ ಮುಗಿಸಿ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಮುಂಬೈಯ ‘ಸೈಂಟ್ ಝೇವಿಯರ್’ ಕಾಲೇಜಿಗೆ ಸೇರಿದರು. ಇಲ್ಲಿ ಇತರರು ತಮ್ಮ ಭಾಷೆಯ ಬಗ್ಗೆ ಅತೀವ ಅಭಿಮಾನವನ್ನು ತಾಳಿರುವಾಗ ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ಅಭಿಮಾನ…

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 05 ಜುಲೈ 2025ರಂದು ʼಕಾವ್ಯಾಂ ವ್ಹಾಳೊ-4ʼ ಶೀರ್ಷಿಕೆಯಡಿ ಕವಿ ಗೋಷ್ಠಿಯನ್ನು ಹಮ್ಮಿಕೊಂಡಿದೆ. ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿರಿಯ ಬರಹಗಾರರಾದ ಶ್ರೀ ಎಡ್ವಿನ್‌ ನೆಟ್ಟೊ (ಎಡಿ ನೆಟ್ಟೊ)ಇವರನ್ನು ಸನ್ಮಾನಿಸಲಾಗುವುದು. ಶ್ರೀ ಅರುಣ್‌ ಜಿ. ಶೇಟ್‌ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀ ವೆಂಕಟೇಶ್‌ ನಾಯಕ್‌ ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಶ್ರೀಮತಿ ಫೆಲ್ಸಿ ಲೋಬೊ ದೆರೆಬೈಲ್‌ ಇವರು ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕವಿಗೋಷ್ಠಿಯಲ್ಲಿ ಶ್ರೀಮತಿ ಜೋಯ್ಸ್‌ ಕಿನ್ನಿಗೋಳಿ, ಶ್ರೀ ಹೆನ್ರಿ ಮಸ್ಕರೇನ್ಹಸ್‌, ಶ್ರೀ ಎಡ್ವರ್ಡ್ ಲೋಬೊ, ಶ್ರೀ ಲಾರೆನ್ಸ್ ಬ್ಯಾಪ್ಟಿಸ್ಟ್, ಶ್ರೀಮತಿ ಜೂಲಿಯೆಟ್‌ ಫರ‍್ನಾಂಡಿಸ್‌, ಶ್ರೀ ರೋಬರ್ಟ್ ಡಿಸೋಜ, ಶ್ರೀ ವಾಸುದೇವ ಶ್ಯಾನ್‌ಭಾಗ್‌, ಶ್ರೀಮತಿ ಕುಸುಮಾ ಕಾಮತ್‌, ಶ್ರೀ ಮೆಲ್ವಿನ್‌ ವಾಸ್‌ ನೀರ್‌ಮಾರ್ಗ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಲಿರುವರು.

Read More

ಕಾಂತಾವರ : ಕಳೆದ ನಲುವತ್ತೇಳು ವರುಷಗಳಿಂದ ಮುದ್ದಣ ಕಾವ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವ ಕಾಂತಾವರ ಕನ್ನಡ ಸಂಘವು 2025ರ ಸಾಲಿನ ‘ಮುದ್ದಣ ಕಾವ್ಯ ಪ್ರಶಸ್ತಿ’ಗೆ ಮುದ್ರಣಕ್ಕೆ ಸಿದ್ಧವಾಗಿರುವ ಕವನ ಸಂಗ್ರಹದ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಪ್ರಶಸ್ತಿಯು ರೂಪಾಯಿ 10,000 ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ. ಆಸಕ್ತರು ಹೆಚ್ಚಿನ ಮಾಹಿತಿಯನ್ನು ಕನ್ನಡ ಸಂಘ [email protected] ಎನ್ನುವ  ಮೈಲ್ ಐಡಿ  ಮೂಲಕ ಪಡೆದುಕೊಳ್ಳಬಹುದು. ಇಲ್ಲವೇ ಅಧ್ಯಕ್ಷರನ್ನು (9900701666) ಅಥವಾ ಪ್ರಧಾನ ಕಾರ್ಯದರ್ಶಿ ಅವರನ್ನು (9008978366) ಮೇಲಿನ ದೂರವಾಣಿಯಲ್ಲಿ ಸಂಪರ್ಕಿಸಬಹುದು. ಹಸ್ತಪ್ರತಿಗಳ ಸ್ವೀಕಾರಕ್ಕೆ ಕೊನೆಯ ದಿನಾಂಕ 15  ಸಪ್ಟಂಬರ್ 2025 ಆಗಿದ್ದು, ಪ್ರಶಸ್ತಿಯನ್ನು 01 ನವೆಂಬರ್ 2025ರಂದು  ಘೋಷಣೆ ಮಾಡಲಾಗುವುದು  ಎಂದು ಕನ್ನಡ ಸಂಘ ತಿಳಿಸಿದೆ.

Read More

ಮಂಜೇಶ್ವರ : ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗಳಿಗೆ ಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್‌ನ ಕೇರಳ ಗಡಿನಾಡ ಘಟಕದ ಪರಿಷತ್‌ ನಡಿಗೆ ಹಿರಿಯ ಸಾಧಕರ ಕಡೆಗೆ ಎಂಬ ಕಾರ್ಯಕ್ರಮದ ಅಂಗವಾಗಿ ಕಸೂತಿ ಮತ್ತು ಕರಕುಶಲ ತಜ್ಞೆ, ಸಾಹಿತಿ, ಅಂಕಣಗಾರ್ತಿ ಶಶಿಕಲಾ ಬಾಯಾರು ಅವರನ್ನು ಬಾಯಾರು ಸಮೀಪದ ಸಜಂಕಿಲದಲ್ಲಿರುವ ಅವರ ನಿವಾಸವಾದ ಸ್ವಸ್ತಿಕದಲ್ಲಿ ದಿನಾಂಕ 27 ಜೂನ್ 2025ರಂದು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ ಇದರ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಶಶಿಕಲಾ ಬಾಯಾರು ಇವರನ್ನು ಅಭಿನಂದಿಸಿದರು. ಅಭಿನಂದನಾ ಭಾಷಣ ಮಾಡಿದ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷರಾದ ಪ್ರೊ. ಪಿ. ಎನ್‌. ಮೂಡಿತ್ತಾಯ ಮಾತನಾಡಿ “ವಿದ್ವಾನ್ ಪೆರ್ಲ ಕೃಷ್ಣ ಭಟ್ ಇವರ ಪುತ್ರಿಯಾಗಿರುವ ಶಶಿಕಲಾ ಬಾಯಾರು ಕಾಸರಗೋಡಿನ ಹೆಮ್ಮೆಯ ಕಸೂತಿ ಚಿತ್ರಕಲಾವಿದೆ. ಅವರ ವ್ಯಕ್ತಿಚಿತ್ರಗಳು ಅಪೂರ್ವವಾದವುಗಳು. ಅವರ ಪತ್ರಾರ್ಜಿತ ಎಂಬ…

Read More

ಬೆಂಗಳೂರು : ಬಿ. ಎಂ. ಶ್ರೀ. ಪ್ರತಿಷ್ಠಾನ (ರಿ.), ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರ ಆಯೋಜಿಸುವ ‘ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ 2025’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 06 ಜುಲೈ 2025ರ ಭಾನುವಾರ ಬೆಳಗ್ಗೆ ಘಂಟೆ 10.30ಕ್ಕೆ ಬೆಂಗಳೂರಿನ ಎಂ. ವಿ. ಸೀ. ಸಭಾಂಗಣದ ಬಿ. ಎಂ.ಶ್ರೀ. ಕಲಾಭವನದಲ್ಲಿ ನಡೆಯಲಿದೆ. ಬಿ. ಎಂ. ಶ್ರೀ. ಪ್ರತಿಷ್ಠಾನ ಇದರ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಪದ್ಮರಾಜ ಎನ್. ದೇಸಾಯಿ ಇವರು ಜೈನ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಚಾರಕರು ಹಾಗೂ ಕರ್ನಾಟಕ ಜೈನ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಶ್ರೀ ಎಸ್. ಜಿತೇಂದ್ರ ಕುಮಾರ್ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳು ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಸಂಶೋಧಕರಾದ ನಾಡೋಜ ಡಾ. ಹಂಪ ನಾಗರಾಜಯ್ಯ ಭಾಗವಹಿಸಲಿದ್ದು, ಖ್ಯಾತ ಲೇಖಕಿ ಹಾಗೂ ಪ್ರಾಧ್ಯಾಪಕಿಯಾದ ಡಾ. ಪದ್ಮಿನಿ…

Read More

ತೀರ್ಥಹಳ್ಳಿ : ನಟಮಿತ್ರರು ತೀರ್ಥಹಳ್ಳಿಯ ಪ್ರತಿಷ್ಠಿತ ಹವ್ಯಾಸಿ ಕಲಾ ಬಳಗ ಇದರ ಆಶ್ರಯದಲ್ಲಿ ದಿನಾಂಕ 13 ಜುಲೈ 2025ರ ಭಾನುವಾರದಂದು ಸಂಜೆ ಗಂಟೆ 6-30ಕ್ಕೆ ಸರಿಯಾಗಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಬೆಂಗಳೂರಿನ ರಂಗಸಂಪದ ತಂಡದಿಂದ ಖ್ಯಾತ ಚಲನಚಿತ್ರ ನಟಿ, ರಂಗಭೂಮಿ ಕಲಾವಿದೆ ಶ್ರೀಮತಿ ಉಮಾಶ್ರೀ ಅಭಿನಯದ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ನಟ ಮಿತ್ರರು ತಂಡದ ಅಧ್ಯಕ್ಷರಾದ ಸಂದೇಶ ಜವಳಿ ದಿನಾಂಕ 29 ಜೂನ್ 2025ರಂದು ತೀರ್ಥಹಳ್ಳಿಯ ರಥಬೀದಿಯಲ್ಲಿರುವ ರಾಮ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪುರಾಣದಲ್ಲಿನ ಯಯಾತಿಯ ಕಥನವನ್ನು ಆಧರಿಸಿದ ಈ ನಾಟಕ ಯಯಾತಿಯ ಹೆಂಡತಿ ಶರ್ಮಿಷ್ಠೆಯನ್ನು ಕೇಂದ್ರೀಕರಿಸಿ ರಚಿಸಲಾಗಿದೆ. ಕನ್ನಡ ರಂಗಭೂಮಿ ಹಿರಿತೆರೆ, ಕಿರುತೆರೆ ಕ್ಷೇತ್ರದ ಅಭಿನೇತ್ರಿ ಶ್ರೀಮತಿ ಉಮಾಶ್ರೀ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಕನ್ನಡ ರಂಗಭೂಮಿಯಲ್ಲಿ ಅನುಪಮವಾದ ಸೇವೆ ಸಲ್ಲಿಸುತ್ತಿರುವ ಮಹಾನ್ ಕಲಾವಿದೆ. ಉಮಾಶ್ರೀಯವರು ಭಾರತೀಯ ಅಭಿನಯ ಪರಂಪರೆಯಲ್ಲಿ ಒಂದು ಅಮೂಲ್ಯವಾದ ಮಾದರಿ ಹವ್ಯಾಸಿ, ವೃತ್ತಿ, ಗ್ರಾಮೀಣ ಕೈಗಾರಿಕಾ ರಂಗಭೂಮಿಯನ್ನು ಸೇರಿದಂತೆ ರಂಗದ…

Read More