Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಕವಿ ಮಿತ್ರರು ಸಂಪದ ಸಾಲು ಪತ್ರಿಕೆ ಮತ್ತು ಶ್ರೀ ಸದಾಶಿವಯ್ಯ ಜರಗನಹಳ್ಳಿ ಇವರ ಸಾರಥ್ಯದ ಸಾಹಿತ್ಯ ಸಂಸ್ಕೃತಿ ವೇದಿಕೆಯ ವತಿಯಿಂದ ದಿನಾಂಕ 18 ಜನವರಿ 2026ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರಿನ ಅಗರ ಗ್ರಾಮದ ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ಸ್ಟೇಷನ್ ಬಳಿ ಶತ ಕವಿಗಳ ‘ಕವಿ ಗೋಷ್ಠಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕವನ ವಾಚನದ ವಿಷಯ ಯಾವುದೇ ಆಗಿರಬಹುದು, ಆದರೆ ಕವನಗಳು ಪದ್ಯ ರೂಪದಲ್ಲೇ ಇರಬೇಕು. ಕವಿಗಳು ತಮ್ಮ ಕವನವನ್ನೇ ವಾಚಿಸಬೇಕು. ಸಮಯಾವಕಾಶ : 2 ನಿಮಿಷಗಳು, ಸಾಲುಗಳು : 16 ಸಾಲುಗಳು. ನೋಂದಣಿ ವಿವರಗಳು : ಆಸಕ್ತ ಕವಿಗಳು ನೋಂದಾಯಿಸಿಕೊಳ್ಳಬಹುದು. ಹೆಸರು ನೋಂದಾಯಿಸಿದವರು ತಪ್ಪದೇ ಕಾರ್ಯಕ್ರಮಕ್ಕೆ ಹಾಜರಾಗಬೇಕು. ಭಾಗವಹಿಸಲು ಸಾಧ್ಯವಾಗದಿದ್ದರೆ ತಮ್ಮ ಬದಲಿಗೆ ಮತ್ತೊಬ್ಬರನ್ನು ಕಳಿಸಬೇಕು. 100 ಕವಿಗಳಿಗೆ ಮಾತ್ರ ಅವಕಾಶ, ಮೊದಲು ಬಂದವರಿಗೆ ಆದ್ಯತೆ, ಉಚಿತ ಪ್ರವೇಶ ವಾಚಿಸಿದ ಕವನದ ಒಂದು ಪ್ರತಿಯನ್ನು ನಿಮ್ಮ ಸಂಪೂರ್ಣ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳೊಂದಿಗೆ ಆಯೋಜಕರಿಗೆ ನೀಡಬೇಕು. ವಾಚಿಸಿದ ಕವನಗಳು…
ಮಂಗಳೂರು : ಮಂಗಳೂರಿನ ಕಥಾಬಿಂದು ಪ್ರಕಾಶನ ಪಿ.ವಿ. ಪ್ರದೀಪ್ ಕುಮಾರ್ ಅವರ ಪರಿಕಲ್ಪನೆಯೊಂದಿಗೆ 2007ರಲ್ಲಿ ಪ್ರಾರಂಭವಾದ ಪ್ರಕಾಶನ ಸಂಸ್ಥೆ. 18 ವಸಂತಗಳಲ್ಲಿ ದೇಶ ವಿದೇಶಗಳಲ್ಲಿ ಸಾಹಿತ್ಯ ಕಾರ್ಯಕ್ರಮದೊಂದಿಗೆ ಕನ್ನಡ ಕಂಪು ಪಸರಿಸುವ ಮೂಲಕ ವಿದೇಶಗಳಲ್ಲಿಯೂ ಕೂಡ ಕನ್ನಡ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ. 2024ರಲ್ಲಿ ಮಂಗಳೂರಿನ ಪುರಭವನದಲ್ಲಿ ಒಂದೇ ದಿನ 50 ಕೃತಿಗಳನ್ನು ಬಿಡುಗಡೆ ಮಾಡಿದ್ದಾರೆ. ಒಂದೆರಡು ತಿಂಗಳ ಅಂತರದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 50 ಕೃತಿಗಳನ್ನು ಅನಾವರಣ ಮಾಡಿದ್ದು, ಅದೇ ವರ್ಷ ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ, ದ್ವಿಭಾಷಾ ಕವಿಗೋಷ್ಠಿಗಳನ್ನು ಹೈದರಾಬಾದಿನಲ್ಲಿ ನಡೆಸಿದ್ದಾರೆ. ಈ ಎಲ್ಲಾ ಕೃತಿಗಳ ಲೇಖಕರೂ ಉದಯೋನ್ಮುಖ ಬರಹಗಾರರು ಎನ್ನುವುದು ಗಮನಾರ್ಹ. ಎಲೆಮರೆಯ ಕಾಯಿಯಂತೆ ಇರುವ ಪ್ರತಿಭಾವಂತರನ್ನು ಗುರುತಿಸಿ ತೆಗೆದು ಪುಸ್ತಕ ಲೋಕಕ್ಕೆ ಪರಿಚಯಿಸುತ್ತಾ ಬಂದಿದ್ದರೂ, ಈ ದಾರಿ ಮುಳ್ಳಿನ ಹಾದಿಯೇ ಆಗಿತ್ತು. ಪ್ರಕಾಶನ ಸಂಸ್ಥೆ ನಡೆಸುವುದೆಂದರೆ ಕಬ್ಬಿಣದ ಕಡಲೆ ಎಂದು ತಿಳಿದಿದ್ದರೂ ಪ್ರದೀಪ್ ಕುಮಾರ್ ಅವರು ಸಾಹಸದಿಂದ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬರುವುದರ ಜೊತೆಗೆ ಕಳೆದ ವರ್ಷ ಮತ್ತೆ…
ಬೆಂಗಳೂರು : ಕರ್ನಾಟಕ ಗಜಲ್ ಅಕಾಡೆಮಿ (ರಿ.) ಇದರ ವತಿಯಿಂದ ‘ಕನ್ನಡ ಗಜಲ್ ಕಮ್ಮಟ’ವನ್ನು ದಿನಾಂಕ 18 ಜನವರಿ 2026ರಂದು ಬೆಳಿಗ್ಗೆ 9-30 ಗಂಟೆಗೆ ಬೆಂಗಳೂರು ವಿಜಯನಗರ 3ನೇ ಮುಖ್ಯ ರಸ್ತೆಯಲ್ಲಿರುವ ಶಾಸಕರ ಕಛೇರಿಯಲ್ಲಿ ಆಯೋಜಿಸಲಾಗಿದೆ. ಖ್ಯಾತ ಗಜಲ್ಕಾರರಾದ ಹಾ.ಮ. ಸತೀಶ್ ಹಾಗೂ ಯುವ ಗಜಲ್ಕಾರರು ಗೋಷ್ಠಿಯಲ್ಲಿ ಜೊತೆಯಾಗಲಿದ್ದಾರೆ.
ಕೋಟ : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ವತಿಯಿಂದ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣೆ ಮತ್ತು ಉಡುಪ ಹಂದೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 18 ಜನವರಿ 2026ರಂದು ಸಂಜೆ 4-00 ಗಂಟೆಗೆ ಕೋಟ ಪಟೇಲರ ಮನೆ ಅಂಗಣದಲ್ಲಿ ಆಯೋಜಿಸಲಾಗಿದೆ. 4-00 ಗಂಟೆಗೆ ನಡೆಯಲಿರುವ ಗಮಕ ವಾಚನ – ವ್ಯಾಖ್ಯಾನದಲ್ಲಿ ಕಾಸರಗೋಡಿನ ದಿವ್ಯಾ ಕಾರಂತ್ ವಾಚನ ಹಾಗೂ ಜಯಲಕ್ಷ್ಮೀ ಕಾರಂತ್ ವ್ಯಾಖ್ಯಾನ ನೀಡಲಿದ್ದಾರೆ. 5-00 ಗಂಟೆಗೆ ಸಾಲಿಗ್ರಾಮ ಮಕ್ಕಳ ಮೇಳದ ಪ್ರಾಕ್ತನ ಕಲಾವಿದರಾದ ಪ್ರದೀಪ ಶೆಟ್ಟಿ ಇವರಿಂದ ಉಡುಪ ಸಂಸ್ಮರಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಮೊಳಹಳ್ಳಿ ಕೃಷ್ಣ ಮೊಗವೀರ ಇವರಿಗೆ ‘ಉಡುಪ ಪ್ರಶಸ್ತಿ’ ಮತ್ತು ನಿವೃತ್ತ ಶಿಕ್ಷಕ ಸಾಂಸ್ಕೃತಿಕ ಚಿಂತಕರಾದ ಮುರಳಿ ಕಡೆಕಾರ್ ಇವರಿಗೆ ‘ಹಂದೆ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಗುವುದು. 6-30 ಗಂಟೆಗೆ ಸಾಲಿಗ್ರಾಮ ಶ್ರೀ ಗುರು ಪ್ರಸಾದಿತ ಯಕ್ಷಗಾನ ಮಂಡಳಿಯ ಕಲಾವಿದರಿಂದ ಯಕ್ಷಕವಿ ಹಳೆಮಕ್ಕಿ ರಾಮ ವಿರಚಿತ ‘ಕೃಷ್ಣಾರ್ಜುನ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಕೋಟ : ಯಕ್ಷಾಂಗಣ ಟ್ರಸ್ಟ್ ಬೆಂಗಳೂರು ಸಂಯೋಜನೆಯಲ್ಲಿ ಆದಿತ್ಯ ಹೆಗಡೆ ವಿರಚಿತ ‘ಮಿತ್ರ ವಿಂದಾ ಪರಿಣಯ’ ಪೌರಾಣಿಕ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 17 ಜನವರಿ 2026ರಂದು ಸಂಜೆ 5-00 ಗಂಟೆಗೆ ಕೋಟ ಹಂದೆ ಶ್ರೀ ಮಹಾಗಣಪತಿ ಮಹಾವಿಷ್ಣು ದೇವಸ್ಥಾನದ ನಾಗಪ್ಪಯ್ಯ ಹಂದೆ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಮುಮ್ಮೇಳದಲ್ಲಿ ಭಾಗವತರಾಗಿ ಲಂಬೋದರ ಹೆಗಡೆ ನಿಟ್ಟೂರು, ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ, ಚೆಂಡೆಯಲ್ಲಿ ಶಿವಾನಂದ ಕೋಟ ಮತ್ತು ಸುದೀಪ ಉರಾಳ ಹಾಗೂ ಮುಮ್ಮೇಳದಲ್ಲಿ ತಮ್ಮಣ್ಣ ಗಾಂವ್ಕರ್, ಆದಿತ್ಯ ಹೆಗಡೆ, ಶಶಾಂಕ್ ಪಾಟೀಲ್, ರಾಘವೇಂದ್ರ ತುಂಗ ಕೆ., ಸ್ಪೂರ್ತಿ ಭಟ್, ಅಬ್ದುಲ್ ರವೂಫ್, ನರಸಿಂಹ ತುಂಗ, ರಾಘವೇಂದ್ರ ತುಂಗ, ಶಶಾಂಕ ಉರಾಳ, ಮಹೇಶ್ ಮಧ್ಯಸ್ಥ, ರಾಜು ಪೂಜಾರಿ, ನಾಗರಾಜ ಪೂಜಾರಿ ಇನ್ನಿತರರು ಸಹಕರಿಸಲಿದ್ದಾರೆ.
ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ವತಿಯಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾಭವನ ಮಂಗಳೂರು ಮತ್ತು ರಾಮಕೃಷ್ಣ ಮಠ ಇವುಗಳ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ಸಂಗೀತ ತ್ರಿಮೂರ್ತಿಗಳಾದ ಪುರಂದರದಾಸ, ಕನಕದಾಸ ಮತ್ತು ವಾದಿರಾಜರ ‘ಆರಾಧನೋತ್ಸವ 2026’ ಕಾರ್ಯಕ್ರಮವನ್ನು ದಿನಾಂಕ 17 ಮತ್ತು 18 ಜನವರಿ 2026ರಂದು ಮಂಗಳೂರಿನ ರಾಮಕೃಷ್ಣ ಮಠದ ಅಮೃತ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 17 ಜನವರಿ 2026ರಂದು ಸಂಜೆ 3-45 ಗಂಟೆಗೆ ಪಂಚರತ್ನ ಗೋಷ್ಠಿ ಗಾಯನಕ್ಕೆ ಕುಮಾರಿ ಮಹತೀ ಕೆ. ಕಾರ್ಕಳ ವಯೋಲಿನ್ ನಲ್ಲಿ ಮತ್ತು ಅವಿನಾಶ್ ಬೆಳ್ಳಾರೆ ಇವರು ಮೃದಂಗದಲ್ಲಿ ಸಹಕರಿಸಲಿದ್ದಾರೆ. ಗಂಟೆ 5-15ಕ್ಕೆ ಚೆನ್ನೈಯ ಸುನಿಲ್ ಗಾರ್ಜಿಯನ್ ಇವರ ಹಾಡುಗಾರಿಕೆಗೆ ಬೆಂಗಳೂರಿನ ವೈಭವ ರಮಣಿ ವಯೋಲಿನ್, ಬೆಂಗಳೂರಿನ ಬಿ.ಎಸ್. ಪ್ರಶಾಂತ್ ಮೃದಂಗ ಹಾಗೂ ಮಂಗಳೂರಿನ ಸುಮುಖ ಕಾರಂತ್ ಖಂಜೀರದಲ್ಲಿ ಸಾಥ್ ನೀಡಲಿದ್ದಾರೆ. ದಿನಾಂಕ 18 ಜನವರಿ 2026ರಂದು ಸಂಜೆ 3-00 ಗಂಟೆಗೆ ಸುರತ್ಕಲ್ ನ ಸಂಗೀತರಂಗ ಸಂಸ್ಥೆಯ ಗುರು…
ಕನ್ನಡದ ಮಹತ್ವದ ಕವಯತ್ರಿಯರಲ್ಲಿ ಒಬ್ಬರಾದ ಮಾಲತಿ ಪಟ್ಟಣಶೆಟ್ಟಿಯವರ ‘ಎಷ್ಟೊಂದು ನಾವೆಗಳು’ (2009) ವಿಶಿಷ್ಟವಾದ ಕವನ ಸಂಕಲನವಾಗಿದೆ. ಇಲ್ಲಿನ ಕವಿತೆಗಳಲ್ಲಿ ಪ್ರೀತಿಯ ಹುಡುಕಾಟವನ್ನು ಕಾಣಬಹುದು. ಹುಡುಕಾಟದ ನಡುವೆ ಸಂಭ್ರಮ, ಸಂಕಟ, ವಿಷಾದ, ವ್ಯಾಕುಲತೆಗಳು ಕಾಣಿಸಿಕೊಳ್ಳುತ್ತವೆ. ಪ್ರೀತಿಯನ್ನು ತನ್ನೆಲ್ಲ ತೀವ್ರತೆಯೊಂದಿಗೆ ಹುಡುಕುವ ಕವಿತೆಗಳಲ್ಲಿ ಪ್ರತಿಮೆ ಸಂಕೇತಗಳು ಪೂರಕವಾಗಿ ದುಡಿಯುತ್ತವೆ. ಒಂದರ್ಥದಲ್ಲಿ ಇದು ಅಮೂರ್ತತೆಯ ಶೋಧ. ಇಂಥ ಹುಡುಕಾಟ ಸುಲಭವಲ್ಲ. ಅದರ ಹಾದಿಯಲ್ಲಿ ನಿರಾಸೆಯು ಬರುತ್ತದೆ. ಹುಡುಕಾಟದ ಹಾದಿಯಲ್ಲಿದ್ದ ಕವಯತ್ರಿಗೆ ಒಂಟಿತನವು ಕಾಡತೊಡಗುತ್ತದೆ. ಆದರೆ ಅವರು ಅದನ್ನು ಆಪ್ತವಾಗಿ ಅನುಭವಿಸುವುದರಿಂದ ಋಣಾತ್ಮಕವೆನಿಸುವುದಿಲ್ಲ. ಒಂದು ಪ್ರೀತಿ ಸತ್ತರೆ ಎದೆಗೆ ಬರ್ಚಿ ನೆಟ್ಟಂತೆ ಜಗತ್ತೇ ಸುಟ್ಟು ಹೋದಂತೆ ನಿಂತ ನೆಲವೇ ನುಂಗಿದಂತೆ ಸಾವು ಆಪ್ತವಾದಂತೆ (ಎಷ್ಟೊಂದು ನಾವೆಗಳಲ್ಲಿ ಎಷ್ಟೊಂದು ಪಯಣ, ಪುಟ 2) ಎನ್ನುವಲ್ಲಿ ಸಾವನ್ನೇ ಆಪ್ತವಾಗಿ ಕಾಣುವ ನಿರ್ಲಿಪ್ತ ಮನಸ್ಥಿತಿಯನ್ನು ಬೆಳೆಸಿಕೊಂಡಿರುವ ಕವಯತ್ರಿಯು ಅನಾಥಪ್ರಜ್ಞೆಯನ್ನು ಆಪ್ತವಾಗಿ ಕಂಡಿದ್ದರಲ್ಲಿ ಅಚ್ಚರಿಯಿಲ್ಲ. ಭ್ರಮೆ ಮತ್ತು ವಾಸ್ತವಗಳ ನಡುವಿನ ವ್ಯತ್ಯಾಸವನ್ನು ತಿಳಿಯದ ಮೂರ್ಖರು ಭ್ರಮೆಯನ್ನೇ ವಾಸ್ತವವೆಂದು ನಂಬಿ ಬದುಕುತ್ತಾರೆ. ಆದರೆ ಇಲ್ಲಿ…
ಬಾಗಲಕೋಟೆ : ಕರ್ನಾಟಕ ಬಯಲಾಟ ಅಕಾಡೆಮಿಯಿಂದ ಪ್ರತಿವರ್ಷದಂತೆ ನೀಡುವ ‘ಗೌರವ ಪ್ರಶಸ್ತಿ’ಗೆ ಐವರನ್ನು ಹಾಗೂ ‘ವಾರ್ಷಿಕ ಪ್ರಶಸ್ತಿ’ಗೆ ಹತ್ತು ಜನ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಕೆ.ಆರ್ು. ದುರ್ಗಾದಾಸ್ ತಿಳಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯಿಂದ ಕೊಡಮಾಡುವ ‘ಗೌರವ ಪ್ರಶಸ್ತಿ’ಗೆ ಬಳ್ಳಾರಿ ಜಿಲ್ಲೆಯ ಕೆ. ಈರಣ್ಣ (ಬಯಲಾಟ), ಕೊಪ್ಪಳ ಜಿಲ್ಲೆಯ ಹನಮಂತಪ್ಪ ಪೂಜಾರ (ಸಣ್ಣಾಟ), ಬೆಳಗಾವಿಯ ಕಾಡಪ್ಪ ಯಲ್ಲಪ್ಪ ಉಪ್ಪಾರ (ಸಣ್ಣಾಟ), ಹಾಸನ ಜಿಲ್ಲೆಯ ಆರ್.ಬಿ. ಪಟ್ಟೇಗೌಡ (ಮೂಡಲಪಾಯ), ಬೆಳಗಾವಿಯ ಸುಶೀಲಮ್ಮ ಹೆಗಡೆ (ದೊಡ್ಡಾಟ)ದಲ್ಲಿ ಭಾಜನರಾಗಿದ್ದಾರೆ. ‘ವಾರ್ಷಿಕ ಪ್ರಶಸ್ತಿ’ಗೆ ಮೈಸೂರು ಜಿಲ್ಲೆಯ ಎಚ್.ಸಿ. ಶಿವಬುದ್ದಿ (ಸೂತ್ರದ ಗೊಂಬೆಯಾಟ), ಮಂಡ್ಯ ಜಿಲ್ಲೆಯ ಜಯಪ್ರಕಾಶಗೌಡ (ಮೂಡಲಪಾಯ), ವಿಜಯನಗರ ಜಿಲ್ಲೆಯ ಹೊಳೆಯಾಚೆ ಕೊಟ್ರಪ್ಪ (ಬಯಲಾಟ), ಬಾಗಲಕೋಟೆ ಜಿಲ್ಲೆಯ ಶಿವಾಜಿ ಜಾಧವ (ಬಯಲಾಟ), ಚಿತ್ರದುರ್ಗ ಜಿಲ್ಲೆಯ ನಂದಗೋಪಾಲ (ಬಯಲಾಟ), ಧಾರವಾಡ ಜಿಲ್ಲೆಯ ಮಲ್ಲಪ್ಪ ಕರಿಮಲ್ಲಣ್ಣವರ (ದೊಡ್ಡಾಟ), ಬಳ್ಳಾರಿ ಜಿಲ್ಲೆಯ ಬಂಡ್ರಿ ಲಿಂಗಪ್ಪ (ಬಯಲಾಟ), ವಿಜಯನಗರ ಜಿಲ್ಲೆಯ ಚೂಟಿ ಚಿದಾನಂದ (ಬಯಲಾಟ). ದಾವಣಗೆರೆ…
ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ 2025ನೆಯ ಸಾಲಿನ ವಿವಿಧ ಪುಸ್ತಕ ಬಹುಮಾನಗಳಿಗೆ ಲೇಖಕಿಯರಿಂದ ಕಾದಂಬರಿ, ಕಥಾಸಂಕಲನ, ವಿಜ್ಞಾನ ಕೃತಿಗಳು, ಲಲಿತ ಪ್ರಬಂಧ, ಅನುವಾದ ಕೃತಿ, ಕವನ ಸಂಕಲನ, ಪ್ರವಾಸ ಸಾಹಿತ್ಯ, ನಾಟಕ, ಹಾಸ್ಯ ಕೃತಿ, ಮಕ್ಕಳ ಸಾಹಿತ್ಯ, ಆತ್ಮಕಥನ ಮುಂತಾದ ಕೃತಿಗಳನ್ನು ಆಹ್ವಾನಿಸಲಾಗಿದೆ. (2025ರ ಜನವರಿಯಿಂದ 2025ರ ಡಿಸೆಂಬರ್ ವರೆಗೆ ಪ್ರಕಟಗೊಂಡಿರಬೇಕು.) ಕೃತಿಗಳನ್ನು ದಿನಾಂಕ 10 ಫೆಬ್ರುವರಿ 2026ರೊಳಗಾಗಿ ಕರ್ನಾಟಕ ಲೇಖಕಿಯರ ಸಂಘ (ರಿ.) ಬೆಂಗಳೂರು, ನಂ.206, 2ನೇ ಮಹಡಿ, ವಿಜಯ ಮ್ಯಾನ್ ಶನ್, 2ನೇ ಕ್ರಾಸ್, 2ನೇ ಮುಖ್ಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು – 560018 ಈ ವಿಳಾಸಕ್ಕೆ ಕಳಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಸಿ, ಸಂಘದ ಕಾರ್ಯದರ್ಶಿ – ಸುಮಾ ಸತೀಶ್ – 9481480220 ಉಪಾಧ್ಯಕ್ಷರು – ಸರ್ವಮಂಗಳಾ- 9448818900 1. ಕಾಕೋಳು ಸರೋಜಮ್ಮ ಪ್ರಶಸ್ತಿ (ಕಾದಂಬರಿ) 2. ಭಾಗ್ಯ ನಂಜಪ್ಪ ಪ್ರಶಸ್ತಿ (ವಿಜ್ಞಾನ ಸಾಹಿತ್ಯ) 3. ನಾಗರತ್ನ ಚಂದ್ರಶೇಖರ್ ಪ್ರಶಸ್ತಿ (ಲಲಿತ ಪ್ರಬಂಧ) 4. ಜಿ.ವಿ.…
ಮಂಗಳೂರು : ‘ಅನುಪಮ’ ಮಹಿಳಾ ವೇದಿಕೆಯ ಬೆಳ್ಳಿ ಹಬ್ಬದ ಸಂಭ್ರಮ ಮತ್ತು ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 15 ಜನವರಿ 2026ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯೆ ಸಮೀನಾ ಅಫ್ಶಾನ್ ಇವರ ವಹಿಸಲಿದ್ದು, ಅನುಪಮ ಮಾಸಿಕದ ಪ್ರಧಾನ ಸಂಪಾದಕಿ ಶಹನಾಝ್ ಎಂ. ಇವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಗೌರವಾನ್ವಿತ ವಿಧಾನ ಸಭಾ ಸ್ಪೀಕರ್ ಯು.ಟಿ. ಕಾದರ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದು, ಖ್ಯಾತ ಸಾಹಿತಿ ಕೆ. ಶರೀಫಾ ಇವರು ವಿಶೇಷ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಕೆ.ಎ. ರೋಹಿಣಿ, ಲೇಖಕಿ ಸರಸ ಬಿ. ಕೃಷ್ಣ ಕಮ್ಮರಡಿ, ಸಮಾಜ ಸೇವಕಿ ಹರಿಣಿ ಕೆ. ಮತ್ತು ಹಿರಿಯ ಓದುಗರಾದ ಆಯಿಶಾ ಇ. ಶಾಫಿ ಇವರನ್ನು ಸನ್ಮಾನಿಸಲಾಗುವುದು.