Author: roovari

ಮಂಗಳೂರು : ಕಥಾಬಿಂದು ಪ್ರಕಾಶನ ಮತ್ತು ಯುಗಪುರುಷ ಕಿನ್ನಿಗೋಳಿ ಇವರ ಜಂಟಿ ಆಶ್ರಯದಲ್ಲಿ ಪಿ. ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ‘ಕಥಾಬಿಂದು ಸಾಹಿತ್ಯಾವಲೋಕನ’ ಕಾರ್ಯಕ್ರಮವನ್ನು ದಿನಾಂಕ 08 ಫೆಬ್ರವರಿ 2026ರಂದು ಸಂಜೆ 4-00 ಗಂಟೆಗೆ ಮಂಗಳೂರು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಡಾ. ಪ್ರೇಮ ಪಿ.ವೈ.ಕೆ. ಇವರ ‘ನೀಲಿರಾಗ’ ಕವನ ಸಂಕಲನ ಲೋಕಾರ್ಪಣೆಗೊಳ್ಳಲಿದೆ.

Read More

ಪುತ್ತೂರು : ಬಾರ್ಯ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಹಾಗೂ ಪರಿವಾರ ದೈವಗಳ ಆಡಳಿತ ಸೇವಾ ಟ್ರಸ್ಟ್ (ರಿ.) ಇದರ ವತಿಯಿಂದ ಜಾತ್ರೋತ್ಸವದ ಅಂಗವಾಗಿ ತಾಳಮದ್ದಳೆ ಕೂಟವು ದಿನಾಂಕ 07 ಫೆಬ್ರವರಿ 2026ರಂದು ಪೂರ್ವಾಹ್ನ 10-00 ಗಂಟೆಗೆ ಶ್ರೀ ಕ್ಷೇತ್ರ ಬಾರ್ಯದಲ್ಲಿ ನಡೆಯಲಿದೆ. ‘ಜಾಂಬವತಿ ಕಲ್ಯಾಣ’ ಎಂಬ ಆಖ್ಯಾನದ ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ, ಚೆಂಡೆ ಮದ್ದಳೆಯಲ್ಲಿ ಪದ್ಯಾಣ ಜಯರಾಮ ಭಟ್ ಮತ್ತು ಮುರಳೀಧರ ಕಲ್ಲೂರಾಯ ಹಾಗೂ ಮುಮ್ಮೇಳದಲ್ಲಿ ಗಣರಾಜ ಕುಂಬ್ಳೆ, ಡಾ. ಶ್ರೀಪತಿ ಕಲ್ಲೂರಾಯ, ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಶ್ರೀಮತಿ ರಾಜಶ್ರೀ ಶಬರಾಯ ಸಹಕರಿಸಲಿದ್ದಾರೆ.

Read More

ಕುಂದಾಪುರ : ಹಿರಿಯ ಪತ್ರಕರ್ತ, ತರಬೇತುದಾರ ಕೋಣಿ ಮಹಾಬಲೇಶ್ವರ ಕಾರಂತರ ಸ್ಮರಣೆಯಲ್ಲಿ ಕುಂದಾಪುರದ ‘ಕುಂದಪ್ರಭ’ ಸಂಸ್ಥೆಯಿಂದ ನೀಡಲಾಗುತ್ತಿರುವ ‘ಕೋ. ಮ. ಕಾರಂತ ಪ್ರಶಸ್ತಿ’ಗೆ ಈ ವರ್ಷ ಪ್ರತಿಭಾವಂತ ಕುಂಚ ಕಲಾವಿದ, ಪ್ರಗತಿಪರ ಉದ್ಯಮಿ, ಇಂಜಿನಿಯರ್ ಬಳ್ಕೂರು ಜಯರಾಮ ಉಡುಪ ಇವರನ್ನು ಆಯ್ಕೆ ಮಾಡಲಾಗಿದೆ. ಬಳ್ಕೂರಿನ ನಿವೃತ್ತ ಮುಖ್ಯ ಶಿಕ್ಷಕ, ಉಳ್ಳೂರು ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿಗಳಾಗಿದ್ದ ದಿ. ಬಿ. ಸುಬ್ರಾಯ ಉಡುಪ ಮತ್ತು ದಿ. ಭಾಗೀರಥಿ ಉಡುಪ ಅವರ ಪುತ್ರರಾಗಿರುವ ಇವರು ರೇಖಾ ಚಿತ್ರ, ಚುಕ್ಕಿ ಚಿತ್ರ, ವ್ಯಂಗ್ಯ ಚಿತ್ರಕಾರರಾಗಿದ್ದು, ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ವ್ಯಂಗ್ಯ ಚಿತ್ರ, ರೇಖಾ ಚಿತ್ರ, ವ್ಯಕ್ತಿ ಚಿತ್ರ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ವೃತ್ತಿಯಲ್ಲಿ ‘ಮೇಕ್ ಇನ್ ಇಂಡಿಯಾ’ ದೃಷ್ಟಿಕೋನ ಹೊಂದಿದವರಾಗಿದ್ದು, ದೇಶಕ್ಕಾಗಿ ವಿವಿಧ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದಾರೆ. ದೇಶದ ಹೆಲಿಕಾಪ್ಟರ್, ವಿಮಾನ, ಕ್ಷಿಪಣಿ ಯೋಜನೆಗಳಿಗೆ ತಾಂತ್ರಿಕ ವಿನ್ಯಾಸ ನೀಡಿದವರು. ತೇಜಸ್ ಯುದ್ಧ ವಿಮಾನಕ್ಕಾಗಿ ಬ್ಯಾಕಪ್ ಡಿಸ್‌ಪ್ಲೇ ಯುನಿಟ್ ವಿನ್ಯಾಸ ಅಭಿವೃದ್ಧಿ ಪ್ರಮಾಣಿಕರಣ ಇವರ ಸಾಧನೆ, ಬೆಂಗಳೂರಿನ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು 2024ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೂ ಪ್ರಕಟವಾದ ಕೃತಿಗಳನ್ನು ಒಟ್ಟು 54 ಪ್ರಕಾರದ ದತ್ತಿಗಳ 58 ಪ್ರಶಸ್ತಿಗಳಿಗೆ ಬರಹಗಾರರಿಂದ ಪುಸ್ತಕಗಳನ್ನು ಆಹ್ವಾನಿಸಲಾಗಿತ್ತು. ಆ ಪೈಕಿ ವಸುದೇವ ಭೂಪಾಲಂ ದತ್ತಿಯಲ್ಲಿ ನಾಲ್ಕು ಪುಸ್ತಕಗಳಿಗೂ ಮತ್ತು ರತ್ನಾಕರವರ್ಣಿ-ಮುದ್ದಣ ಅನಾಮಿಕ ದತ್ತಿಯಲ್ಲಿ ಎರಡು ಪುಸ್ತಕಗಳಿಗೂ ಬಹುಮಾನ ನೀಡಲಾಗುತ್ತದೆ ಎಂದು ಕ.ಸಾ.ಪ. ಆಡಳಿತಾಧಿಕಾರಿ ತಿಳಿಸಿದ್ದಾರೆ. ರಾಜ್ಯ, ದೇಶ ಮತ್ತು ವಿದೇಶಗಳಿಂದ ಸುಮಾರು 900 ಕೃತಿಗಳು ಬಂದಿದ್ದು, ಡಾ. ಕೆ. ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ 19 ಜನ ಪರಿಣಿತ ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ಆಯಾ ಪ್ರಕಾರಗಳಲ್ಲಿ ವಿದ್ವತ್ ಹೊಂದಿದ ಸದಸ್ಯರುಗಳ 5 ತಂಡಗಳನ್ನು ರಚಿಸಿ ಪುಸ್ತಕಗಳನ್ನು ಆಯ್ಕೆ ಮಾಡಲಾಯಿತು. ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಮತ್ತು ಡಾ. ಮದನಕೇಸರಿ ಜೈನ ದತ್ತಿಗೆ ಡಾ. ಹೆಚ್.ಡಿ. ಜಯಪದ್ಮಕುಮಾರ್ ಅವರ ಆರಾಧ್ಯಪುಣ್ಯಸೂತ್ರ. ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿಗೆ ಡಾ. ಪದ್ಮರಾಜ ದಂಡಾವತಿ ಇವರ ಜೈನ ಧರ್ಮ, ಡಾ. ಹೆಚ್.ಎಸ್. ಮದನಕೇಸರಿ ಮತ್ತು ಎಂ.ಪಿ. ಗುಣಮಾಲ ದತ್ತಿಗೆ ರವಿ ಸೋಮಣ್ಣ…

Read More

ಕುಂಭಾಶಿ : ಶ್ರೀ ಕ್ಷೇತ್ರ ಆನೆಗುಡ್ಡೆ ಕುಂಭಾಶಿ ಸಹಕಾರದೊಂದಿಗೆ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಇವರ ಸಹಯೋಗದೊಂದಿಗೆ ಸಂಕಷ್ಟಹರ ಚತುರ್ಥಿ ಶುಭ ದಿನದಂದು ‘ಅರ್ಥಾಂಕುರ’ ತಾಳಮದ್ದಳೆ’ ಕಾರ್ಯಕ್ರಮ ದಿನಾಂಕ 05 ಫೆಬ್ರವರಿ 2026ರಂದು ಆನೆಗುಡ್ಡೆ ದೇಗುಲದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪ್ರಸಿದ್ಧ ಅರ್ಥದಾರಿ ವಾಸುದೇವ ರಂಗ ಭಟ್ ಇವರು ಮಾತನಾಡಿ “ಅರ್ಥಾಂಕುರದ ದೀಪ ಶ್ರೀ ಮಹಾಗಣಪತಿಯ ಸನ್ನಿಧಿಯಲ್ಲಿ ಸೇವಾರೂಪದಲ್ಲಿ ಬೆಳಗಿದೆ. ಬಹಳ ಅರ್ಥಪೂರ್ಣ ಭಾವ ನಮ್ಮದು. ನಮ್ಮೂರಿನ ಕ್ಷೇತ್ರಗಳು ಆ ಕ್ಷೇತ್ರದ ಆಶ್ರಯಗಳಲ್ಲಿ ಬೆಳೆಯಬೇಕಾದ ಕಲೆಗಳ ಕುರಿತಾಗಿ, ಒಂದು ಸ್ಪಷ್ಟತೆ, ಒಂದು ನಿರ್ದಿಷ್ಟತೆ ಇದ್ದು ಆರಂಭಿಸಿದ ಉಪಕ್ರಮ ಇದು. ಕಲೆಯ ಹೆಸರಲ್ಲಿ ಭಾರತೀಯವಾದಂತಹ ಯಾವುದೂ ಪೋಷಿತವಾಗಬಹುದು. ಯಾಕೆಂದರೆ ಭಾರತೀಯ ಕಲೆಗಳ ಸತ್ವವಾಗಿರುವುದು ಧಾರ್ಮಿಕತೆ, ಭಕ್ತಿ, ಶೃದ್ಧೆಗಳು. ಹಾಗೆಯೇ ಯಕ್ಷಗಾನ ತಾಳಮದ್ದಳೆಗೆ ಧಾರ್ಮಿಕ ಕೇಂದ್ರಗಳಲ್ಲಲ್ಲದೇ ಬೇರೆ ಕಡೆಗಳಲ್ಲಿ ಪೋಷಣೆ ಸಿಗುವಂತಿಲ್ಲ. ಕಲೆಗಳು ನಮ್ಮ ಅನನ್ಯತೆಯೂ ಹೌದು, ವೈಶಿಷ್ಟ್ಯವೂ ಹೌದು. ಈ ಕಲೆಗಳಿಗೆ…

Read More

ಮುಂಬೈ : ಮೈಸೂರು ಅಸೋಸಿಯೇಷನ್ ಮುಂಬಯಿಯ ಶತಮಾನೋತ್ಸವದ ಪ್ರಯುಕ್ತ ಆಯೋಜಿಸಿದ ‘ನೇಸರು ಜಾಗತಿಕ ಶಿಶು ಕವನ ರಚನಾ ಸ್ಪರ್ಧೆ -2025’, ‘ನೇಸರು ಜಾಗತಿಕ ಸಣ್ಣ ಕತೆ ಸ್ಪರ್ಧೆ 2025’ ಮತ್ತು ‘ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ -2025’ಯ ಫಲಿತಾಂಶ ಪ್ರಕಟವಾಗಿದೆ. ‘ನೇಸರು ಜಾಗತಿಕ ಶಿಶು ಕವನ ರಚನಾ ಸ್ಪರ್ಧೆ -2025’ಯ ಪ್ರಥಮ ಬಹುಮಾನಕ್ಕೆ ಗುರುರಾಜ್ ಇವರ ‘ನನಗೂ ಒಂದು ರೋಬೋ ಸಿಕ್ಕರೆ’, ದ್ವಿತೀಯ ಬಹುಮಾನಕ್ಕೆ ಡಾ. ಟಿ.ಎಚ್. ಲವಕುಮಾರ ಇವರ ‘ಅಮ್ಮನ ಡಬ್ಬಿ’, ತೃತೀಯ ಬಹುಮಾನಕ್ಕೆ ರಮ್ಯ ಕೆ.ಜಿ. ಇವರ ‘ಪುಟ್ಟಿಯ ಮಳೆ ರಜೆ’ ಹಾಗೂ ಮೆಚ್ಚುಗೆಯ ಬಹುಮಾನಕ್ಕೆ ಮೀನಾಕ್ಷಿ ಸುರೇಶ್ ಭಾಂಗಿ ಇವರ ‘ಬಾರೋ ಭೂಮಿಯ ಕಂದ’ ಮತ್ತು ಸತ್ಯವತಿ ಭಟ್ ಕೊಳ ಚಪ್ಪು ಇವರ ‘ಬಸವಣ್ಣ’ ಕವನ ಆಯ್ಕೆಯಾಗಿದೆ. ‘ನೇಸರು ಜಾಗತಿಕ ಸಣ್ಣ ಕತೆ ಸ್ಪರ್ಧೆ 2025’ಯ ಪ್ರಥಮ ಬಹುಮಾನಕ್ಕೆ ವಿವೇಕ ಬೆಟ್ಕುಳಿ ಇವರ ‘ಹರಕೆ ಹುಂಜ’, ದ್ವಿತೀಯ ಬಹುಮಾನಕ್ಕೆ ಜಯರಾಮಚಾರಿ ಇವರ ‘ನೆಲದ ಗಾಯ’,…

Read More

ರಾಮನಗರ : ಕರ್ನಾಟಕ ಜಾನಪದ ಪರಿಷತ್ತು 2026ರ ಸಾಲಿನ ಜಾನಪದ ಲೋಕ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದ್ದು, 08 ಫೆಬ್ರವರಿ 2026ರಂದು ಜಾನಪದ ಲೋಕದಲ್ಲಿ ನಡೆಯುವ ಜಾನಪದ ಲೋಕೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮೈಸೂರು ಜಾನಪದ ವಿದ್ವಾಂಸ ಪ್ರೊ. ಹಿ.ಶಿ. ರಾಮಚಂದ್ರೇಗೌಡ, ದಕ್ಷಿಣ ಕನ್ನಡ ಜಿಲ್ಲೆ ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪಗೌಡ, ತುಮಕೂರು ಜಿಲ್ಲೆ ಕಾಡುಗೊಲ್ಲರ ಗಣಿ ವಾದನ ಕಲಾವಿದ ಚಿಕ್ಕಣ್ಣ, ಬೆಂಗಳೂರಿನ ಜನಪದ ಛಾಯಾಗ್ರಾಹಕ ಡಾ. ಸಿರಿಗಂಧ ವಿ. ಶ್ರೀನಿವಾಸಮೂರ್ತಿ, ಚಾಮರಾಜನಗರ ಜಿಲ್ಲೆಯ ಜೋಗುಳಪದ ಹಾಡುಗಾರರಾದ ಚಿನ್ನಮ್ಮ ಮಂಡ್ಯದ ಪೂಜಾ, ಮರಗಾಲು ಕುಣಿತ ಕಲಾವಿದ ಕೆ.ಪಿ. ದೇವರಾಜು, ಬೆಂಗಳೂರು ದಕ್ಷಿಣದ ಪೂಜಾ ಕುಣಿತ ಕಲಾವಿದ ಶಿವಮಾದಯ್ಯ, ಮೂಡಲಪಾಯ ಯಕ್ಷಗಾನ ಕಲಾವಿದರಾದ ಭೈರಪ್ಪ (ಗಂಗಣ್ಣ), ರಾಯಚೂರಿನ ತತ್ವಪದ ಕಲಾವಿದೆ ನಾರಾಯಣಪ್ಪ ಮಾಡಶಿರಾವಾರ, ಬೆಂಗಳೂರಿನ ತಂಬೂರಿ ಕಲಾವಿದ ಸಿದ್ದರಾಜು ಎಂ. ಇವರುಗಳು ಜಾನಪದ ಲೋಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಧಾರವಾಡದ ಸಾಹಸ ಕಲಾವಿದ ಮುತ್ತಪ್ಪ ಬಸವಂತಪ್ಪ ದಾತನಾಳ, ಕೇರಳ ಕಾಸರಗೋಡಿನ ಯಕ್ಷಗಾನ…

Read More

ಅಂದು – ಬೆಂಗಳೂರಿನ ದೊಡ್ದ ಕಲ್ಲಸಂದ್ರದ ಕುಮಾರನ್ಸ್ ಶಾಲೆಯ ‘ಮೀನಾಕ್ಷಿ ರಂಗಮಂಚ’ದ ಮೇಲೆ ಕೋಪಾವಿಷ್ಟಳಾಗಿ ಸಿಡಿದೆದ್ದ ದ್ರೌಪದಿಯ ವೀರಾವೇಶದ ಕಟುನುಡಿಗಳು, ಹೆಂಡತಿಗೆ ಅಪಮಾನವಾಗುತ್ತಿದ್ದರೂ ತೆಪ್ಪನೆ ಕುಳಿತ ನಿರಭಿಮಾನಿ ಗಂಡಂದಿರ ಷಂಡತ್ವವನ್ನು ಚುಚ್ಚಿ ಪ್ರಶ್ನಿಸಿದ ಆತ್ಮಾಭಿಮಾನಿಯೊಬ್ಬಳ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಗುಡುಗಿದ ಪುಟ್ಟ ನಟಿ- ನರ್ತಕಿ ‘ಆದ್ಯ’ಳನ್ನು ಕಂಡು ಇಡೀ ಸಭಾಸದನದ ವೀಕ್ಷಕ ಸಮಸ್ತರೂ ಬೆರಗಾಗಿದ್ದರು ! ಪ್ರಸ್ತುತಿಯ ಪ್ರಾರಂಭದಿಂದ ಅಂತ್ಯದವರೆಗೂ ರಂಗದ ಮೇಲೆ ಲೀಲಾಜಾಲವಾಗಿ, ಮನಮೋಹಕವಾಗಿ ನಾಟ್ಯವಾಡುತ್ತ ಕಲಾರಸಿಕರನ್ನು ಮೋಡಿ ಮಾಡಿದ ಬಾಲ ಗಂಧರ್ವೆಯಂತೆ ಶೋಭಿಸಿದ ಪುಟಾಣಿ ‘ಆದ್ಯ’ ನಿಜಕ್ಕೂ ಚೋದ್ಯವೆನಿಸಿದಳು. ಹತ್ತು ವರ್ಷದ ಬಾಲಪ್ರತಿಭೆಗೆ ಇದ್ದ ಅದಮ್ಯ ಆತ್ಮವಿಶ್ವಾಸ, ಹದವರಿತ ಹೆಜ್ಜೆಗಳ ಮೇಲಿನ ಹತೋಟಿ, ಸೊಗಸಾದ ಅಭಿನಯ ಕೌಶಲ್ಯ ಮತ್ತು ರಂಗಪ್ರಜ್ಞೆ ನೋಡುಗರ ಮೇಲೆ ಉಂಟುಮಾಡಿದ ಪರಿಣಾಮ ನಿಜಕ್ಕೂ ಸ್ಮರಣೀಯ. ಇಷ್ಟು ಚಿಕ್ಕವಯಸ್ಸಿಗೆ ನೃತ್ಯದ ವಿವಿಧ ಆಯಾಮಗಳನ್ನು ಅರಿತು ಅಷ್ಟೇ ಸುಲಲಿತವಾಗಿ ನಿರೂಪಿಸಿದ ಉದಯೋನ್ಮುಖ ನೃತ್ಯಕಲಾವಿದೆ ‘ಆದ್ಯ’ಳ ಮೊದಲ ಹೆಜ್ಜೆಯ ವಿದ್ಯುಕ್ತ ‘ಆದ್ಯೋತ್ಸವ’ ಯಶಸ್ವಿಯಾಗಿ ನೆರವೇರಿತು. ‘ನಾಟ್ಯ ಸಿಂಚನ…

Read More

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ ಮಂಗಳೂರು ಇದರ ಕೇಂದ್ರ ಮಹಿಳಾ ಘಟಕದ ನವಮ ವಾರ್ಷಿಕೋತ್ಸವವು ದಿನಾಂಕ 02 ಫೆಬ್ರವರಿ 2026ರಂದು ಪಾವಂಜೆ ದೇವಸ್ಥಾನದ ಆವರಣದಲ್ಲಿ ನಡೆಯಿತು. ಸುರತ್ಕಲ್ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್ ಅಧ್ಯಕ್ಷತೆ ವಹಿಸಿದ್ದು, “ಯಕ್ಷ ಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿಯವರು ಆಸಕ್ತ ಕಲಾವಿದರ ಬದುಕಿಗೆ ಶಕ್ತಿ ತುಂಬಿದ್ದಾರೆ. ಕಲಾವಿದರ ವೈಯಕ್ತಿಕ ಬದುಕಿನ ಸತ್ಯವನ್ನು ಶೋಧಿಸಿದ ಪಟ್ಲರವರು ಆ ಕಾರಣಕ್ಕಾಗಿಯೇ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿ ಕಲಾವಿದರಿಗೆ ಆಸರೆಯಾದರು. ಟ್ರಸ್ಟ್ ಮೂಲಕ ನಿರಂತರ ಕಾರ್ಯಯೋಜನೆಗಳನ್ನು ಕೈಗೊಳ್ಳುತ್ತಿರುವ ಪಟ್ಲರ ಸಾಧನೆ ಶ್ಲಾಘನೆಗೆ ಪಾತ್ರವಾಗಿದೆ” ಎಂದು ತಿಳಿಸಿದರು. ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, “ಕೇಂದ್ರೀಯ ಮಹಿಳಾ ಘಟಕ ಒಂಬತ್ತು ವರ್ಷಗಳಿಂದ ಕಲಾ ಸೇವೆ ಮಾಡುತ್ತಾ ಬಂದಿರುತ್ತದೆ. ಕೇಂದ್ರೀಯ ಘಟಕ ಎಲ್ಲ ಕಡೆ ವಿಸ್ತರಣೆಯಾಗಲಿ” ಎಂದರು. ಇದೇ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಮಹಿಳಾ ಘಟಕದ ವತಿಯಿಂದ…

Read More

ಪಾರ್ಟಿ-ಕಂಪೆನಿಗಳೆಂದು ಸದಾ ಸ್ನೇಹಿತರೊಂದಿಗೆ ಬಿಡುವಿನ ಸಮಯವನ್ನು ಕಳೆಯುವ ಇಂದಿನ ಯುವಜನತೆ ಕೆಲವೊಮ್ಮೆ ‘ಸೋಲೋಟ್ರಿಪ್’ ಎಂದು ದೂರ ಪ್ರವಾಸ ಹೋಗುವುದೂ ಇದೆ. ಇವತ್ತಿನ ಕಾಲದಲ್ಲಿ ಸೋಲೋಟ್ರಿಪ್ ಅಂದರೆ ಸ್ನೇಹಿತರನ್ನು ಬಿಟ್ಟು ಒಬ್ಬರೇ ವಿಮಾನ-ರೈಲು-ಬಸ್ಸು-ಕಾರುಗಳಲ್ಲಿ ತಿಂಗಳಿಗೆ ಮೊದಲೇ ಬುಕ್ ಮಾಡಿ ಇಳಿದುಕೊಳ್ಳಲು ಹೋಟೆಲ್ ವ್ಯವಸ್ಥೆಯನ್ನೂ ಮೊದಲೇ ಮಾಡಿಕೊಂಡು ಹೋಗುವುದು. ಕೆಲವರು ನೂರಾರು ಕಿ.ಮೀ.ಗಳಷ್ಟು ದೂರದ ಬೈಕ್ ಸವಾರಿಯ ಸಾಹಸಕ್ಕೆ ಕೈ ಹಾಕುವುದೂ ಇದೆ. ಆದರೆ ಖ್ಯಾತ ಲೇಖಕ ಶಶಿಧರ ಹಾಲಾಡಿಯವರು ತಮ್ಮ ಹೊಸ ಕೃತಿ ‘ನನ್ನ Solo ಟ್ರಿಪ್’ನಲ್ಲಿ ಹೇಳುತ್ತಿರುವುದು ಇಂಥ ಪ್ರವಾಸಗಳ ಬಗ್ಗೆ ಅಲ್ಲ. ಇದು ಅವರು ಎಳೆಯ ಹುಡುಗ ಹಾಗೂ ಯುವಕರಾಗಿದ್ದ ಕಾಲದಲ್ಲಿ-ಅಂದರೆ 1970-80ರ ದಶಕಗಳಲ್ಲಿ – ಅವರ ಊರಾದ ಹಾಲಾಡಿಯ ಸುತ್ತುಮುತ್ತ, ಸಹ್ಯಾದ್ರಿ ಪ್ರದೇಶ, ವೃತ್ತಿಜೀವನ ಆರಂಭಿಸಿದ ಅರಸೀಕೆರೆಯ ಸುತ್ತುಮುತ್ತಲಿದ್ದ ಕಾಡು-ಗುಡ್ಡ-ಬೆಟ್ಟಗಳಿಗೆ ಕಾಲ್ನಡಿಗೆಯಲ್ಲಿ ಮತ್ತು ಸೈಕಲ್ ಸವಾರಿಯ ಮೂಲಕ ಏಕಾಂಗಿಯಾಗಿ ಮಾಡಿದ ಪ್ರವಾಸಗಳ ಬಗ್ಗೆ. ಆಗ ಇವತ್ತು ಎಲ್ಲೆಡೆ ಸಾಮಾನ್ಯವಾಗಿ ಬಿಟ್ಟಿರುವ ರಸ್ತೆಗಳು ಮತ್ತು ವಾಹನ ಸಂಪರ್ಕಗಳು ಏನೂ ಇರಲಿಲ್ಲ.…

Read More