Author: roovari

ಬಂಟ್ವಾಳ : ಖ್ಯಾತ ರಂಗಕರ್ಮಿ ಬಿ.ವಿ.ಕಾರಂತ ನೆನಪಿನ ಮಂಚಿ ನಾಟಕೋತ್ಸವವು ದಿನಾಂಕ 29 ಮತ್ತು 30 ಜನವರಿ 2026ರಂದು ಸಂಜೆ 6-00 ಗಂಟೆಗೆ ಮಂಚಿ ಕುಕ್ಕಾಜೆಯ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ನಡೆಯಲಿದೆ ಎಂದು ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಕಜೆ ರಾಮಚಂದ್ರ ಭಟ್ ತಿಳಿಸಿದ್ದಾರೆ. ದಿನಾಂಕ 29 ಜನವರಿ 2026ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಯಕ್ಷರಂಗಾಯಣ ನಿರ್ದೇಶಕ ಬಿ.ಆರ್. ವೆಂಕಟ್ರಮಣ ಐತಾಳ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ ವಹಿಸಲಿದ್ದು, ಅತಿಥಿಗಳಾಗಿ ಪತ್ರಕರ್ತ ಹಾಗೂ ರಂಗನಟ ರತ್ನದೇವ್ ಶೆಟ್ಟಿ ಮತ್ತು ರಂಗಕಲಾವಿದ ಸುರೇಶ್ ಕೊಟ್ಟಾರಿ ಭಾಗವಹಿಸುವರು. ಸಭಾ ಕಾರ್ಯಕ್ರಮದ ಬಳಿಕ ಕಾರ್ಕಳ ಯಕ್ಷರಂಗಾಯಣ ರೆಪರ್ಟರಿ ಕಲಾವಿದರಿಂದ ಡಾ. ಶಿವರಾಮ ಕಾರಂತ ರಚನೆ, ಭಿನ್ನಷಡ್ಜ ಸಂಗೀತ, ಗಣೇಶ್ ಮಂಡಾರ್ತಿ ಇವರ ನಿರ್ದೇಶನದಲ್ಲಿ ‘ಸೋಮಿಯ ಸೌಭಾಗ್ಯ’ ಪ್ರದರ್ಶನಗೊಳ್ಳುವುದು. ದಿನಾಂಕ 30 ಜನವರಿ 2026ರಂದು ಹಿರಿಯ ನ್ಯಾಯವಾದಿ ಕೆ. ರಮೇಶ್ ಉಪಾಧ್ಯಾಯ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದ್ದು, ಅಭಿರುಚಿ…

Read More

ಮೂಲ್ಕಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಯೋಜಿಸುವ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಖ್ಯಾತ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ. ನಿನಾಸಂ ಸಂಸ್ಥೆಯಲ್ಲಿ ರಂಗಪದವಿ ಮುಗಿಸಿದ ಬಳಿಕ ಮೂರು ದಶಕಗಳಿಂದ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೇ, ಮೂನ್ನೂರಕ್ಕೂ ಹೆಚ್ಚು ತುಳು ಮತ್ತು ಕನ್ನಡ ನಾಟಕಗಳನ್ನು ವಿನ್ಯಾಸಗೊಳಿಸಿದ್ದಾರೆ. ಲೋಕಶಾಕುಂತಲ, ಶಸ್ತ್ರಪರ್ವ, ಹಯ ವದನ, ದರ್ಮತ್ತಿಮಾಯೆ, ಪಿಲಿಪತ್ತಿ ಗಡಸ್, ಅವ್ವಾ ಗೌಡರ ಮಲ್ಲಿ ಹೀಗೆ ಅನೇಕ ನಾಟಕಗಳು, ಕಥನಕವನಗಳನ್ನು ರಂಗದಲ್ಲಿ ಮೂಡಿಸಿದ್ದಾರೆ. ಅನೇಕ ರಂಗಗೀತೆಗಳನ್ನು ರಚಿಸಿದ್ದಾರೆ. ಸಂಗೀತ ನಿರ್ದೇಶನ ಮಾಡಿದ್ದಾರೆ. ಸಾಯುವವನೇ ಚಿರಂಜೀವಿ ಏಕವ್ಯಕ್ತಿ ನಾಟಕ ನೂರಕ್ಕೂ ಹೆಚ್ಚು ಪ್ರಯೋಗ ಕಂಡಿದೆ. ನಾಡಿನ ಖ್ಯಾತ ನಟ, ನಟಿಯರಿಗೆ ಏಕವ್ಯಕ್ತಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಮುದ್ರಾಡಿ, ಮಲ್ಲಾಡಿಹಳ್ಳಿ, ಚಿತ್ರದುರ್ಗ, ಕುಕ್ಕೆಸುಬ್ರಹ್ಮಣ್ಯ ಹೀಗೆ ನಾಡಿನಾದ್ಯಂತ ರಂಗಭೂಮಿಯ ಬೆಳವಣಿಗೆಗೆ ಸಹಕರಿಸಿದ್ದಾರೆ. 50ಕ್ಕೂ ಹೆಚ್ಚು…

Read More

ಕಾಸರಗೋಡು : ಡಾ. ವಾವನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ಸಾರಥ್ಯದ ‘ಸೀತಮ್ಮ ಪುರುಷ ನಾಯಕ ಸ್ಮಾರಕ’ ಕನ್ನಡ ಭವನ ಗ್ರಂಥಾಲಯ (ರಿ.223/2008) ಇದರ ಅಂಗ ಸಂಸ್ಥೆಯಾದ, ಬೆಂಗಳೂರು ಕರ್ನಾಟಕ ಸರಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಇವರಿಂದ ದಿನಾಂಕ 02 ಫೆಬ್ರುವರಿ 2025ರಂದು ಉದ್ಘಾಟನೆಗೊಂಡ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಇದರ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಿರುವ ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ-2026ವು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನದ ಸಭಾಂಗಣದಲ್ಲಿ ‘ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್. ಅರಸ್’ ವೇದಿಕೆಯಲ್ಲಿ ದಿನಾಂಕ 22 ಫೆಬ್ರುವರಿ 2026 ಭಾನುವಾರ ನಡೆಯಲಿದೆ. ಕವಿಗೋಷ್ಠಿ, ಯುವ ಕವಿಗೋಷ್ಠಿ, ವಿಚಾರಗೋಷ್ಠಿ, ‘ಕವಿ ಕಾವ್ಯವಿಭೂಷಣ’, ‘ಕವಿ ಕಾವ್ಯ ಕಂಠೀರವ’ ಪ್ರಶಸ್ತಿ ಪ್ರದಾನ ಸಮ್ಮೇಳನ ಸರ್ವಾಧ್ಯಕ್ಷರ ಅದ್ಧೂರಿ ಮೆರವಣಿಗೆ, ಸಾಂಸ್ಕೃತಿಕ ಕಲಾ ವೈಭವ, ಯಕ್ಷಗಾನ ಬಯಲಾಟ, 101 ಮಂದಿಯಿಂದ ಪ್ರಾತಃಕಾಲ ಭಜನೆ ಇತ್ಯಾದಿ ಸನಾತನ ಸಂಸ್ಕೃತಿಯೊಂದಿಗೆ ಕಾರ್ಯಕ್ರಮ ನಡೆಸಲು ಆಲೋಚನೆ ನಡೆಯುತ್ತಿದೆ ಎಂದು ಕನ್ನಡ ಭವನದ ಸ್ಥಾಪಕರೂ, ಕೇರಳ…

Read More

ಉಡುಪಿ : ಪ್ರಕಾಶ್ ಮಲ್ಪೆ ಇವರ ‘ರತ್ನಗರ್ಭಾ ವಸುಂಧರಾ’ ಕೃತಿ ಲೋಕರ್ಪಣಾ ಸಮಾರಂಭವನ್ನು ದಿನಾಂಕ 29 ಜನವರಿ 2026ರಂದು ಪೂರ್ವಾಹ್ನ 10-00 ಗಂಟೆಗೆ ಉಡುಪಿಯ ಶ್ರೀ ಪೂರ್ಣಪ್ರಜ್ಞಾ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ಅದಮಾರು ಮಠದ ಶ್ರೀ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಆಧ್ಯಾತ್ಮಿಕ ಚಿಂತಕರಾದ ಡಾ. ವೀಣಾ ಬನ್ನಂಜೆ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಕಾರ್ಯವಾಹರು ಪ್ರಕಾಶ್ ಪಿ.ಎಸ್. ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Read More

ಜಗತ್ತಿನಲ್ಲಿ ಅದೆಷ್ಟೋ ಕ್ರೂರ ಘಟನೆಗಳು ನಡೆಯುತ್ತವೆ. ಉತ್ತಮ ಬರಹಗಾರನು ಅವುಗಳನ್ನು ಕಥಾ ವಸ್ತುವನ್ನಾಗಿ ಆಯ್ದುಕೊಂಡು ಸತ್ಯವೆಂಬಂತೆ ನಿರ್ವಹಿಸುವಾಗ ನಿಜ ಘಟನೆಗಿಂತಲೂ ಹೆಚ್ಚು ಪ್ರಖರತೆಯನ್ನು ಪಡೆಯುತ್ತದೆ. ಬದುಕಿನ ವೃತ್ತವನ್ನು ಸಂಕ್ಷಿಪ್ತವಾಗಿಸಿ ಕಾಲಕೋಶದೊಳಗೆ ಕೂರಿಸುವುದರಿಂದ ತೀವ್ರ ಪರಿಣಾಮವನ್ನು ಉಂಟುಮಾಡುತ್ತದೆ. ನಾಲ್ಕು ದಶಕಗಳ ಹಿಂದೆ ಪ್ರಕಟವಾಗಿದ್ದ ಡಾ. ನಾ. ಮೊಗಸಾಲೆಯವರ ‘ನೆಲ ಮುಗಿಲುಗಳ ಮಧ್ಯೆ’ ಎಂಬ ಕಾದಂಬರಿ ಇತ್ತೀಚೆಗೆ ಪುನರ್ಮುದ್ರಣಗೊಂಡಿದೆ. ಘಟನೆಗಳನ್ನು ಪೋಣಿಸಿದ ರೀತಿ, ಹದವರಿತ ನಿರ್ಲಿಪ್ತ ವಿವರಣೆ, ತನ್ನದೇ ಶೈಲಿಯ ಸಂಭಾಷಣೆಗಳು ಕೃತಿಯ ಯಶಸ್ಸಿಗೆ ಕಾರಣವಾಗಿವೆ. ಭಾವನಾತ್ಮಕತೆ, ಪಾತ್ರಗಳ ಮಾನಸಿಕ ಗೊಂದಲಗಳು ಕಾದಂಬರಿಗೆ ಜೀವ ತುಂಬಿವೆ. ಪಾತ್ರಚಿತ್ರಣ ಪಾತ್ರ ಸೃಷ್ಟಿಯಲ್ಲಿ ಕಾದಂಬರಿಕಾರನ ಪ್ರತಿಭೆ ಅದ್ವಿತೀಯವಾಗಿದೆ. ಪ್ರಕಾಶ ಎಂಬ ಮಧ್ಯವಯಸ್ಕನೇ ಮುಖ್ಯ ಪಾತ್ರವೆಂದುಕೊಂಡು ಓದುಗನು ಅವನ ಜೊತೆಗೆ ಸಾಗಿದರೆ ಹಿನ್ನೋಟ ತಂತ್ರದ ಮೂಲಕ ಎಲಿಜಾ ಮುಂದೆ ಬರುತ್ತಾಳೆ. ಆತ್ಮಹತ್ಯೆ ಇದರ ಮುಖ್ಯ ಕಥಾವಸ್ತು ಎಂದು ಭಾವಿಸಿದರೆ ಅಂಥ ಆತಂಕ ನಿಧಾನವಾಗಿ ಇಲ್ಲದಾಗುತ್ತದೆ. ಪ್ರಕಾಶನು ನಗರದ ವಸತಿಗೃಹಕ್ಕೆ ಬರುವ ದಾರಿಯಲ್ಲಿ ಎಲಿಜಾಳ ಭೇಟಿಯಾಗುತ್ತದೆ. ಅವನು ತಂಗಿದ ಕೋಣೆಯ…

Read More

ಮಂಗಳೂರು : ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಕೃತಿ ಲೋಕಾರ್ಪಣೆ, ತುಳು ಮತ್ತು ಕನ್ನಡ ಕವಿಗೋಷ್ಠಿ ಸಹಿತ ‘ಸಾಹಿತ್ಯ ವೈಭವ 2026’ ಕಾರ್ಯಕ್ರಮ ದಿನಾಂಕ 25 ಜನವರಿ 2026ನೇ ಭಾನುವಾರ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಮಂಗಳೂರು ಇಲ್ಲಿನ ಅಭಿಷೇಕ ಮಂದಿರ ಸಭಾಂಗಣದ ಚುಟುಕು ಬ್ರಹ್ಮ ದಿನಕರ ದೇಸಾಯಿ ವೇದಿಕೆಯಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ನೇಮು ಪೂಜಾರಿ ಇರಾ ಇವರ ‘ಚುಟುಕು ಕಾವ್ಯ ಕಾಮಿನಿ’ ಎಂಬ ಚುಟುಕುಗಳ ಸಂಕಲನ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ಇವರ ‘ಕೋಲ್ಮಿಂಚು’ ಎಂಬ ನ್ಯಾನೋ ಕತೆಗಳ ಸಂಕಲನವನ್ನು ಕನ್ನಡ ಸಾಹಿತ್ಯ ಪರಿಷತ್ತು ಇದರ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು. ‘ಚುಟುಕು ಕಾವ್ಯ ಕಾಮಿನಿ’ ಕೃತಿಯನ್ನು ಕವಯಿತ್ರಿ, ಸಾಹಿತಿ ಹಾಗೂ ವಿಮರ್ಶಕರಾದ ವಿ. ಸೀತಾಲಕ್ಷ್ಮಿ ವರ್ಮ ವಿಟ್ಲ ಅರಮನೆ ಪರಿಚಯಿಸಿದರೆ, ‘ಕೋಲ್ಮಿಂಚು’ ಕೃತಿಯನ್ನು…

Read More

ಹೆಸರಾಂತ ಹಿರಿಯ ಸಂಶೋಧಕಿ ಡಾ. ಜೋತ್ಸ್ನಾ ಕಾಮತ್ ಕನ್ನಡ ಸಾಹಿತ್ಯ ಲೋಕದ ಅನನ್ಯ ಬರಹಗಾರ್ತಿ ಮತ್ತು ಒಬ್ಬ ದಿಟ್ಟ ನಿಲುವಿನ ದಕ್ಷ ಆಡಳಿತಗಾರ್ತಿ. 1937 ಜನವರಿ 24ರಂದು ಶ್ರೀ ಶಾರದಾ ಬಾಯಿ ಮತ್ತು ಗಣೇಶ ರಾವ್ ದಂಪತಿಗಳ ಪುತ್ರಿಯಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಜನಿಸಿದರು. ಇವರ ವಿದ್ಯಾಭ್ಯಾಸವೆಲ್ಲ ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಯಲ್ಲಿ ನಡೆಯಿತು. ಕೊಂಕಣಿ, ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ಬೆಂಗಾಳಿ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಪರಿಣತರಾದ ಇವರು ಇತಿಹಾಸದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಬಿ.ಎ. ಪದವಿಯ ಬಳಿಕ ಒಂದು ವರ್ಷ ‘ಡಿಪ್ಲೋಮಾ ಇನ್ ಎಜುಕೇಶನ್’ ಅಧ್ಯಯನ ಮಾಡಿ ಧಾರವಾಡದ ವನಿತಾ ಹೈಸ್ಕೂಲಿನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡರು. ಡಾ. ಬಿ.ಎ. ಸಾಲೆತೊರೆ, ಡಾ. ಪಿ.ಬಿ. ದೇಸಾಯಿ ಮತ್ತು ಡಾ. ಜಿ.ಎಸ್. ದೀಕ್ಷಿತ್ ರಂತಹ ಇತಿಹಾಸ ವಿದ್ವಾಂಸರಿಂದ ಪ್ರಭಾವಿತರಾಗಿ ಎರಡು ವರ್ಷಗಳ ಕಾಲ ಸಹಾಯಕ ಸಂಶೋಧಕಿಯಾಗಿ ಕಾರ್ಯ…

Read More

ಬಂಟ್ವಾಳ : ಡಾ. ಗೀತಾ ಎನ್. ಇವರ ‘ಹಕ್ಕಿಮರಿ ಮತ್ತು ಇತರ ಕಿಶೋರ ಗೀತೆಗಳು’ ಕವನಸಂಕಲನ ಲೋಕಾರ್ಪಣಾ ಕಾರ್ಯಕ್ರಮವು ದಿನಾಂಕ 13 ಜನವರಿ 2026ರಂದು ಬಿ.ಸಿ.ರೋಡಿನ ಕೈಕುಂಜೆ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಪಾಣೆಮಂಗಳೂರು ಶಾರದಾ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಪರಮೇಶ್ವರ ಜಿ. ಹೆಗಡೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, “ಗೀತಾ ಎನ್. ಅವರು ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು, ಛಂದೋಬದ್ಧ ಕವನಗಳನ್ನು ಷಟ್ಟದಿಗಳನ್ನು ಬರೆದಿರುವುದಲ್ಲದೆ, ಕಿಶೋರ ಗೀತೆಗಳನ್ನು ಪ್ರಕಟಿಸಿರುವುದು ಶ್ಲಾಘನೀಯ” ಎಂದರು. ಅತಿಥಿಯಾಗಿದ್ದ ಉಪನ್ಯಾಸಕ ವಿಶ್ವನಾಥ್ ಶುಭ ಹಾರೈಸಿದರು. ಕೃತಿ ಕುರಿತು ಮುನ್ನುಡಿ ಬರೆದಿರುವ ಆಂಗ್ಲ ಭಾಷಾ ಉಪನ್ಯಾಸಕ, ಸಾಹಿತಿ ರಾಧೇಶ ತೋಳ್ತಾಡಿ ಮಾತನಾಡಿ, “ಮಕ್ಕಳ ಕವಿತೆಗೆ ವಿಶೇಷ ಸ್ಥಾನಮಾನಗಳಿದ್ದು, ಮಕ್ಕಳ ಜೊತೆ ಹೆಚ್ಚು ಒಡನಾಡುವ ಮಹಿಳೆಯರ ದನಿ ಮಕ್ಕಳ ಕವಿತೆಗಳ ಕ್ಷೇತ್ರದಲ್ಲಿ ವಿರಳವಾಗುತ್ತಿರುವ ಹೊತ್ತಿನಲ್ಲಿ ಡಾ. ಗೀತಾ ಎನ್. ಅವರ ಕೃತಿ ಬಂದದ್ದು ಸಂತಸದ ಸಂಗತಿ.…

Read More

ಮಂಗಳೂರು : ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲ (ರಿ.) ಇವರ ವತಿಯಿಂದ ‘ಗುರುಕುಲ ಉತ್ಸವ 2026’ ತ್ರಯೋದಶ ನಾಟ್ಯ ಸಂಭ್ರಮವು ದಿನಾಂಕ 17 ಜನವರಿ 2026ರಂದು ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ದಿ ವಿನಾಯಕ ಸಭಾ ವೇದಿಕೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೆ.ಸಿ ಇಂಟರ್ನ್ಯಾಷನಲ್ ಸ್ಕೂಲ್ ಕಾರ್ಕಳ ಇದರ ಉಪಾಧ್ಯಕ್ಷರಾದ ಪದ್ಮ ಪ್ರಸಾದ್ ಜೈನ್ “ಮಕ್ಕಳಿಗೆ ಸಂಸ್ಕೃತಿಯ ಪರಿಚಯ ಮಾಡಿಕೊಡುವುದರಿಂದ ಸಂಸ್ಕಾರಯುತ ಸಮಾಜವನ್ನು ಸೃಷ್ಟಿಸಲು ಸಾಧ್ಯ. ಮಂತ್ರ ನಾಟ್ಯಕಲಾ ಗುರುಕುಲವು ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ” ಎಂಬುದಾಗಿ ಅಭಿಪ್ರಾಯಪಟ್ಟರು. ಸಭಾಧ್ಯಕ್ಷತೆಯನ್ನು ಶ್ರೀ ರಾಜೇಶ್ ಅತ್ತಾವರ ಇವರು ವಹಿಸಿದ್ದು, ಹರೀಶ್ ಮಾಸ್ಟರ್, ಆನಂದ ಕೆ. ಅಸೈಗೋಳಿ, ನರೇಶ್ ಪಂಡಿತ್ ಹೌಸ್, ಗುರುಕುಲದ ಗೌರವಾಧ್ಯಕ್ಷೆ ಶ್ರೀಮತಿ ಶಕೀಲಾ ಜನಾರ್ದನ, ಟ್ರಸ್ಟಿಗಳು ಶ್ರೀಮತಿ ಶೈನಾ ಶ್ರಾವಣ್, ಬಬಿತಾ ಕಿರಣ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ನಡೆದ ಈ ಕಾರ್ಯಕ್ರಮದಲ್ಲಿ ಏಕಾದಶ ತಂಡಗಳ ಭರತನಾಟ್ಯ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ ನೆರವೇರಿತು.…

Read More

ಧಾರವಾಡ : ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ 2026ನೇ ಸಾಲಿನ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ಗೆ ಧಾರವಾಡದ ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹಾಗೂ ಹಾವೇರಿಯ ಹಿರಿಯ ಕವಿ ಸತೀಶ ಕುಲಕರ್ಣಿ ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷರಾದ ಡಾ. ಸರಜೂ ಕಾಟ್ಕರ್ ಪ್ರಶಸ್ತಿ ಪುರಸ್ಕೃತರ ಮಾಹಿತಿ ಪ್ರಕಟಿಸಿದರು. ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ಯು ರೂ. ಒಂದು ಲಕ್ಷ ನಗದು ಹಾಗೂ ಸ್ಮರಣಿಕೆ ಹೊಂದಿದೆ. ಆದರೆ ಈ ಸಲ ಇಬ್ಬರು ಸಾಧಕರಿಗೆ ಪ್ರಶಸ್ತಿ ಹಂಚಿರುವ ಹಿನ್ನೆಲೆಯಲ್ಲಿ ತಲಾ ರೂ.50 ಸಾವಿರ ನೀಡಲಾಗುವುದು. ದಿನಾಂಕ 31 ಜನವರಿ 2026ರಂದು ಸಂಜೆ ಗಂಟೆ 5-00ಕ್ಕೆ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

Read More