Author: roovari

ಬೆಂಗಳೂರು : ಜನಪದರು ಸಾಂಸ್ಕೃತಿಕ ವೇದಿಕೆ (ರಿ.) ಪ್ರಸ್ತುತ ಪಡಿಸುವ ‘ಜ್ಞಾನ ದೇಗುಲ’ ನಮ್ಮೂರ ಸರ್ಕಾರಿ ಶಾಲೆ ನಾಟಕ ಪ್ರದರ್ಶನವನ್ನು ದಿನಾಂಕ 20 ಫೆಬ್ರವರಿ 2026ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಬಸವನ ಗುಡಿಯಲ್ಲಿರುವ ವಾಡಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕಕ್ಕೆ ಸಿದ್ಧೇಶ್ವರ ನನಸುಮನೆ ಇವರ ರಚನೆ ಮತ್ತು ನಿರ್ದೇಶನ, ಜನಾರ್ದನ್ ದಾಸರಹಳ್ಳಿ ಇವರ ಸಂಗೀತ ಹಾಗೂ ರಾಜಪ್ಪ ಕೋಲಾರ ಇವರ ಗಾಯನವಿದೆ. ನಮ್ಮ ಸರ್ಕಾರಿ ಶಾಲೆಗಳು ನಶಿಸಿ ಹೋಗುತ್ತಿರುವುದಕ್ಕೆ ಕಾರಣ ಯಾರು? ನಮ್ಮ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಹಾಗೂ ಬೆಳೆಯಬೇಕಾದರೆ ಯಾರೆಲ್ಲರ ಜವಾಬ್ದಾರಿ ಇರಬೇಕು, ಒಣ ಪ್ರತಿಷ್ಠೆಗೆ ಖಾಸಗಿ ಶಾಲೆಗೆ ಮಕಳನ್ನು ಸೇರಿಸಿ ಎದುರಿಸುವ ಸಮಸ್ಯೆಗಳ ಕುರಿತಾದ ಪರಿಣಾಮಕಾರಿ ದೃಶ್ಯಗಳುಳ್ಳ ಈ ‘ಜ್ಞಾನ ದೇಗುಲ’ ನಾಟಕವನ್ನು ನೋಡಲು ಕುಟುಂಬ ಸಮೇತರಾಗಿ ತಪ್ಪದೇ ಬನ್ನಿ.

Read More

ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನದ ಆಶ್ರಯದಲ್ಲಿ ‘ಸ್ತ್ರೀ ಶಕ್ತಿ’ ಎಂಬ ಪರಿಕಲ್ಪನೆಯಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ದಿನಾಂಕ 22 ಫೆಬ್ರವರಿ 2026ರಂದು ಭಾನುವಾರ ಸಂಜೆ 5-00 ಗಂಟೆಗೆ ಮಂಗಳೂರಿನ ಉರ್ವ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ನಡೆಯಲಿದೆ. ಉತ್ಕೃಷ್ಟ ಮಟ್ಟದ ‘ಶಾಸ್ತ್ರೀಯ ಗಾಯನ ಜುಗಲ್‌ಬಂಧಿ’ ಮತ್ತು ‘ವಯೋಲಿನ್ ಟ್ರಿಯೋ’ ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಸಂಗೀತಪ್ರಿಯರಿಗೆ ಇದೊಂದು ಸಂಗೀತದ ರಸದೌತಣವಾಗಲಿದೆ. ಪೂರ್ವಾರ್ಧದಲ್ಲಿ ಯಲ್ಲಾಪುರದ ಕುಮಾರಿ ವಿಭಾ ಹೆಗ್ಡೆ ಮತ್ತು ಬೆಂಗಳೂರಿನ ಕುಮಾರಿ ಶಿವಾನಿ ಮಿರ್ಜಾಕಾರ್‌ ಇವರಿಂದ ‘ಶಾಸ್ತ್ರೀಯ ಗಾಯನ ಜುಗಲ್‌ಬಂಧಿ’ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಹಾರ್ಮೋನಿಯಂನಲ್ಲಿ ಮಂಗಳೂರಿನ ಕುಮಾರಿ ಮೇಧಾ ಜಿ. ಭಟ್ ಮತ್ತು ಭೋಪಾಲ್‌ನ ಕುಮಾರಿ ವಿಜೇತಾ ಹೆಗ್ಡೆಯವರು ತಬ್ಲಾದಲ್ಲಿ ಸಾಥ್ ನೀಡಲಿದ್ದಾರೆ. ಉತ್ತಾರಾರ್ಧದಲ್ಲಿ ಮುಂಬೈನ ಡಾ. ಸಂಗೀತ ಶಂಕರ್, ರಾಗಿಣಿ ಶಂಕರ್ ಮತ್ತು ನಂದಿನಿ ಶಂಕರ್‌ ಇವರಿಂದ ‘ವಯೋಲಿನ್ ಟ್ರಿಯೋ’ ಕಾರ್ಯಕ್ರಮ ನಡೆಯಲಿದೆ. ಇವರಿಗೆ ತಬ್ಲಾದಲ್ಲಿ ಮುಂಬೈನ ಅನುರಾಧ ಪಾಲ್‌ ಇವರು ಸಾಥ್ ನೀಡಲಿದ್ದಾರೆ. ಈ…

Read More

ಬೆಂಗಳೂರು : ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್, ಬೆಂಗಳೂರು ಲೀಜನ್ ಇವರ ವತಿಯಿಂದ ದಿನಾಂಕ 07 ಮತ್ತು 08 ಮಾರ್ಚ್ 2026ರಂದು ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನ ವಿಜಯೋತ್ಸವ 2026 ಸಂಬಂಧ ಉದಯೋನ್ಮುಖ ಕವಿ-ಕವಯತ್ರಿಯರಿಗೆ ಕವನ ಸ್ಪರ್ಧೆ ಏರ್ಪಡಿಸಿದೆ. ‘ವನ್ಯಜೀವಿ ಸಂರಕ್ಷಣೆ ನಮ್ಮ ಹೊಣೆ’ ಕುರಿತು 16 ಸಾಲುಗಳಿಗೆ ಮೀರದಂತೆ ಒಂದು ಕವನವನ್ನು ರಚಿಸಿ ಸ್ಪರ್ಧೆಗೆ ಕಳುಹಿಸಿಕೊಡಬಹುದಾಗಿದೆ. ಪ್ರಥಮ ಬಹುಮಾನ ರೂ.3000/-, ದ್ವಿತೀಯ ಬಹುಮಾನ ರೂ.2000/-, ತೃತೀಯ ಬಹುಮಾನ ರೂ.1000/- ಆಗಿದ್ದು, ಆಸಕ್ತರು ತಮ್ಮ ಕವನವನ್ನು ಸಿ.ಎಸ್. ಚಂದ್ರಶೇಖರ್, ಅಧ್ಯಕ್ಷರು, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್, 114, 4ನೇ ಮೇನ್, ಗಿರಿಧಾಮ ಲೇಔಟ್, ರಾಜರಾಜೇಶ್ವರಿ ನಗರ, ಬೆಂಗಳೂರು 560098 ಈ ವಿಳಾಸಕ್ಕೆ ದಿನಾಂಕ 28 ಫೆಬ್ರವರಿ 2026ರೊಳಗೆ ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಿ ಕಳುಹಿಸಬೇಕು. ದಿನಾಂಕ 07 ಮಾರ್ಚ್ 2026ರಂದು ಬಂಟರ ಸಂಘ, ಅತ್ತಿಗುಪ್ಪೆಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು.

Read More

ಮಂಗಳೂರು : ಉಮಾಮಹೇಶ್ವರ ಯಕ್ಷಗಾನ ಅಧ್ಯಯನ ಕೇಂದ್ರ, ಅತ್ತಾವರ ಮಂಗಳೂರು ಇಲ್ಲಿನ ಭಾಗವತಿಕೆ ವಿದ್ಯಾರ್ಥಿಗಳಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ ಪುರಸ್ಕೃತರು ಮತ್ತು ಯಕ್ಷಗುರುಗಳಾದ ಶ್ರೀ ರಾಮ ಸಾಲಿಯಾನ್ ಮಂಗಲ್ಪಾಡಿ ಇವರ ನಿರ್ದೇಶನದಲ್ಲಿ ‘ಯಕ್ಷ-ಗಾನಾರ್ಚನೆ’ ಕಾರ್ಯಕ್ರಮವು ದಿನಾಂಕ 13 ಫೆಬ್ರವರಿ 2026ರಂದು ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶ್ರೀ ರಾಮ ಸಾಲಿಯಾನ್ “ಯಕ್ಷಗಾನದ ಜೀವಾಳವಾದ ಭಾಗವತಿಕೆಯಲ್ಲಿ ತರಬೇತಿಯು ಸಾಂಪ್ರದಾಯಿಕ ಗಾಯನ ಶೈಲಿ, ತಾಳ-ಲಯ ಜ್ಞಾನ ಮತ್ತು ಸಾಹಿತ್ಯದ ಭಾವನೆಗಳನ್ನು ಅರ್ಥೈಸಿಕೊಂಡರೆ ಮುಂದೆ ಯಕ್ಷಗಾನ ಕ್ಷೇತ್ರದಲ್ಲಿ ಉತ್ತಮ ಭಾಗವತರಾಗಿ ಉತ್ತಮ ಹೆಸರ ಪಡೆಯಬಹುದು” ಎಂದು ಹೇಳಿದರು. ಸಮಾರಂಭದಲ್ಲಿ ಉಮಾಮಹೇಶ್ವರ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಲಕ್ಷೀಶ ಉಪಾಧ್ಯಾಯರು, ಉಮಾಮಹೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರಾದ ಶ್ರಿ ಕೇಶವ ಮಳಲಿ, ಉಮಾಮಹೇಶ್ವರ ಯಕ್ಷಗಾನ ಕೇಂದ್ರದ ಅಧ್ಯಕ್ಷರಾದ ಶ್ರಿ ಜಯದೇವ, ಗೌರವಾಧ್ಯಕ್ಷರಾದ ಶ್ರೀ ಚಂದ್ರಶೇಖರ್ ರೈಯವರು ಉಪಸ್ಥಿತರಿದ್ದರು. ಶ್ರೀ ದೇವಿಯವರು ಪ್ರಾರ್ಥನೆಗೈದರು. ಶ್ರೀ ಪ್ರಸಾದಣ್ಣರವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.…

Read More

ಮಂಗಳೂರು : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡ ‘ಸಂಗೀತ, ನೃತ್ಯ ವಿಚಾರ ಸಂಕಿರಣ’ ಸಂಭ್ರಮ 2026 ಕಾರ್ಯಕ್ರಮವು ದಿನಾಂಕ 14 ಫೆಬ್ರವರಿ 2025ರಂದು ಮಂಗಳೂರಿನ ತುಳು ಭವನದ ಸಿರಿ ಚಾವಡಿಯಲ್ಲಿ ಜರುಗಿತು. ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ನಿಕಟಪೂರ್ವ ಯೋಜನ ನಿರ್ದೇಶಕ ಪ್ರೊ. ಬೋಳಾರ ಶಿವರಾಮ್ ಶೆಟ್ಟಿ “ಸಂಗೀತ ನೃತ್ಯ ಶಿಲ್ಪ ಹಾಗೂ ಸಾಹಿತ್ಯ ದೈವಿಕ ಕಲೆ. ಇವೆಲ್ಲವೂ ನಮ್ಮ ಸಂಸ್ಕಾರದಿಂದ ಕೈ ಗೂಡುತ್ತವೆ. ಎಲ್ಲಿ ಸಂಸ್ಕಾರವಿದೆಯೋ ಅಲ್ಲಿ ಸಂಸ್ಕೃತಿ ಅಚ್ಚಳಿಯದೆ ಉಳಿಯುತ್ತದೆ. ಸಂಶೋಧನೆ ಎಂದರೆ ಏನು? ಸತ್ಯವನ್ನು ತೋರಿಸುವುದು ಒಂದು ವಿಷಯದ ಮೇಲೆ ದೀರ್ಘವಾದ ಅಧ್ಯಯನ ಇರುವುದನ್ನೇ ಪುನರಪಿ ಶೋಧಿಸುವುದು” ಎಂದು ನುಡಿದರು. ಅಧ್ಯಕ್ಷತೆ ವಹಿಸಿದ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಡಾ. ಶುಭ ಧನಂಜಯ್ ಅವರು “ನಮ್ಮ ಅಕಾಡೆಮಿಯಿಂದ ಇಂತಹ ವಿಚಾರ ಸಂಕಿರಣ, ಸಂಗೀತ ನೃತ್ಯಕ್ಕೆ ಬೇಕಾದಂತ ಹಲವು ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಎಟಕುವಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ವ್ಯವಸ್ಥಿತವಾಗಿ ಮಾಡಬೇಕೆಂದು…

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರೌಢಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮುಕ್ತ ನಾಟಕ ಸ್ಪರ್ಧೆ ಏರ್ಪಡಿಸಲಾಗಿದೆ. ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಸಾಹಿತಿ ನಾ. ಡಿಸೋಜರವರ ದತ್ತಿ ಆಶಯದಂತೆ ಈ ನಾಟಕ ಸ್ಪರ್ಧೆ ನಡೆಯಲಿದೆ. ನಾಟಕ ತಂಡದಲ್ಲಿ ಆರು ಮಂದಿ ಕಲಾವಿದರು ಇರಬೇಕು.‌ 20 ನಿಮಿಷಗಳ ನಾಟಕ ಪ್ರದರ್ಶಿಸಬೇಕು. ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ ಯಾವುದೇ ಪ್ರಕಾರದ ನಾಟಕಗಳನ್ನು ಪ್ರದರ್ಶಿಸಬಹುದು. ಈ ಸ್ಪರ್ಧೆಯು ಮಡಿಕೇರಿಯಲ್ಲಿ ಮಾರ್ಚ್ ಮೊದಲ ವಾರದಲ್ಲಿ ನಡೆಯಲಿದೆ. ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ಈ ಕೆಳಗಿನ ವಿಳಾಸಕ್ಕೆ ದಿನಾಂಕ 25 ಫೆಬ್ರವರಿ 2026ರ ಒಳಗಾಗಿ ಈ ಕೆಳಗೆ ಸೂಚಿಸಿದ ಮೊಬೈಲ್ ಸಂಖ್ಯೆ 9113892396ಗೆ ವಾಟ್ಸಪ್ ಮೂಲಕ ಕಳುಹಿಸತಕ್ಕದ್ದು ಅಥವಾ ಅಧ್ಯಕ್ಷರು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುದರ್ಶನ ವೃತ್ತದ ಬಳಿ, ಮಡಿಕೇರಿ ಈ ವಿಳಾಸಕ್ಕೆ ಪತ್ರ ಮುಖೇನ ತಿಳಿಸಬೇಕಾಗಿ ಕೊಡಗು ಜಿಲ್ಲಾ ಕನ್ನಡ…

Read More

ಪುತ್ತೂರು : ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿನ ಇತಿಹಾಸ ವಿಭಾಗ ಹಾಗೂ ಐ.ಕ್ಯೂ.ಎ.ಸಿ., ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಸಹಯೋಗದೊಂದಿಗೆ ‘ಅಬ್ಬಕ್ಕ @5೦೦ ರಾಷ್ಟ್ರೀಯ ವಿಚಾರ ಸಂಕಿರಣ’ವು ದಿನಾಂಕ 16 ಫೆಬ್ರವರಿ 2026ರಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ ಜರಗಿತು. ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವೆ ಶೋಭಾ ಕರಂದ್ಲಾಜೆ “ನಾವು ಅಗತ್ಯವಾಗಿ ತಿಳಿಯಬೇಕಿದ್ದ ಹಾಗೂ ಯುವ ಜನಾಂಗ ಅರಿಯಬೇಕಾದ ಚರಿತ್ರೆಯನ್ನು ಮರೆಯಾಗಿಸಿದ್ದು ವಿಪರ್ಯಾಸ. ಪ್ರಥಮ ಸ್ವಾತಂತ್ರ್ಯತ ಸಂಗ್ರಾಮಕ್ಕೂ ಮೊದಲೇ ಪರಕೀಯರ ವಿರುದ್ಧ ಕೆಚ್ಚೆದೆಯ ಹೋರಾಟ ಪ್ರಾರಂಭಿಸಿದವಳು ಅಬ್ಬಕ್ಕ. ತಾನು ಒಬ್ಬನೇ ನಿಂತು ಬ್ರಿಟೀಷರಿಗೆ ಸವಾಲೆಸೆದ ಕಿತ್ತೂರು ಚೆನ್ನಮ್ಮನಂಥವರ ಉದಾಹರಣೆಯನ್ನು ನಾವು ಗಮನಿಸಬಹುದು. ನಮ್ಮ ಬದುಕಿಗೆ ಪ್ರೇರಣೆಯಾಗಬಲ್ಲ ನಮ್ಮ ಚರಿತ್ರೆಯನ್ನು ನಾವು ಅಗತ್ಯವಾಗಿ ತಿಳಿಯಬೇಕು” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಪುತ್ತೂರು ವಿವೇಕಾನಂದ…

Read More

ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘವು 2024ನೇ ಸಾಲಿನ ‘ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ’ ಬಹುಮಾನಕ್ಕೆ ಐವರು ಲೇಖಕಿಯರ ಕೃತಿಗಳನ್ನು ಆಯ್ಕೆ ಮಾಡಿದೆ. ಶಿವಮೊಗ್ಗದ ಸವಿತಾ ನಾಗಭೂಷಣ ಇವರ ‘ದಿನದ ಪ್ರಾರ್ಥನೆ’ ಕಥಾ ಸಂಕಲನ, ಉಡುಪಿಯ ಕಾತ್ಯಾಯಿನಿ ಕುಂಜುಬೆಟ್ಟು ಇವರ ‘ತಂಬೂರಿ’ ಕವನ ಸಂಕಲನ, ಬೆಂಗಳೂರಿನ ರೇಣುಕಾ ಕೋಡಗುಂಟಿ ಇವರ ‘ಚಿಗುರೊಡೆದ ಬೇರು’ ಕಥಾ ಸಂಕಲನ, ಮೈಸೂರಿನ ಗೀತಾ ಸೀತಾರಾಮ ಇವರ ‘ಮಾಳ್ವ ಸಾಮ್ರಾಜ್ಯದ ರಾಜಯೋಗಿನಿ ಅಹಲ್ಯಾಬಾಯಿ ಹೋಳ್ಕರ್’ ಕಾದಂಬರಿ ಮತ್ತು ಶಿವಮೊಗ್ಗದ ಕೆ.ಎಸ್. ಪವಿತ್ರಾ ಇವರ ‘ಧೀತನನ’ ಅಂಕಣ ಕೃತಿಗಳು ಆಯ್ಕೆಯಾಗಿವೆ. ಪ್ರಶಸ್ತಿಯು ತಲಾ ರೂ.15,000/- ನಗದು ಒಳಗೊಂಡಿದೆ. ಮಾರ್ಚ್ ಮೊದಲ ವಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರಹಲಗತ್ತಿ ತಿಳಿಸಿದ್ದಾರೆ.

Read More

ಕಾಸರಗೋಡು : ತುಲುವೆರೆ ಜಾಲ್ ಕಣ್ವತೀರ್ಥ ಇದರ ಆಶ್ರಯದಲ್ಲಿ ತುಳುನಾಡ ಮಕ್ಕಳ ಸಾಂಸ್ಕೃತಿಕ ಮತ್ತು ಸಾಹಿತ್ಯ ಸೇವಾ ಕೂಟ ಹಾಗೂ ಶ್ರೀ ಮಾತಾ ಕಲಾ ಮಂದಿರ ವೈಶಾಲಿ ಕುಂಜತ್ತೂರು ತೂಮಿನಾಡು ಇವರ ಸಹಯೋಗದಲ್ಲಿ ‘ಮಕ್ಕಳ ಬಹುಭಾಷಾ ಕವಿಗೋಷ್ಠಿ’ ಮತ್ತು ‘ಕವಿತೆ ಹುಟ್ಟುವ ಗುಟ್ಟು’ ಕಾರ್ಯಾಗಾರವನ್ನು ದಿನಾಂಕ 22 ಫೆಬ್ರವರಿ 2026ರಂದು ಬೆಳಿಗ್ಗೆ 9-30 ಗಂಟೆಗೆ ವೈಶಾಲಿ ತೂಮಿನಾಡು ಶ್ರೀ ಮಾತಾ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ. 16 ವರ್ಷದ ಒಳಗಿನ ಮಕ್ಕಳಿಂದ ‘ಬಹುಭಾಷಾ ಕವಿಗೋಷ್ಠಿ’ ನಡೆಯಲಿದ್ದು, ಜಿಲ್ಲಾ ಮಟ್ಟದ ಪ್ರತಿಭೆ ಕುಮಾರಿ ರಶ್ಮಿತಾ ಕುಲಾಲ್ ಇವರು ಅಧ್ಯಕ್ಷತೆ ವಹಿಸಲಿರುವರು. ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತಡ್ಕ ಇವರು ಕಾರ್ಯಾಗಾರ ನಡೆಸಿಕೊಡಲಿದ್ದು, ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರಿಕಾ ಶುಭಾಶಂಸನೆಗೈಯ್ಯಲಿದ್ದಾರೆ. ಇದೇ ಸಂದರ್ಭದಲ್ಲಿ ಅಂಗನವಾಡಿ ಜೋಕ್ಲೆನ ಪದ ಪಂತೊ ಇದರ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು.

Read More

ಉಡುಪಿಯ ಪ್ರತಿಷ್ಠಿತ ರಾಗ ಧನ ಸಂಸ್ಥೆಯ ಆಶ್ರಯದಲ್ಲಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದ್ದ 38ನೆಯ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವದ ಎರಡನೇ ದಿನದಂದು ಪಿಳ್ಳಾರಿ ಗೀತೆಗಳು ಹಾಗೂ ತ್ಯಾಗರಾಜರ ಘನ ಪಂಚರತ್ನ ಗೋಷ್ಠಿಗಾಯನ ಉಡುಪಿಯ ಸಂಗೀತ ಗುರುಗಳು ಹಾಗೂ ಶಿಷ್ಯಂದಿರೊಡಗೂಡಿ ಸಮರ್ಪಕವಾಗಿ ನಡೆಸಿಕೊಟ್ಟರು. ಆ ಬಳಿಕ ಪ್ರಜ್ಞಾ ಅಡಿಗ ಇವರಿಂದ ಸಂಗೀತ ಕಛೇರಿ ನಡೆಯಿತು. ಕಾನಡ ಅಟತಾಳ ವರ್ಣ ಮುಂದೆ ‘ನಿನ್ನಚೆಪ್ಪ ಕಾರಣಮೇಮಿಮಾನಸ’ ರಾಗ ಮಂದಾರಿಯಲ್ಲಿ, ‘ಭಜರೇ ಮಾನಸ’ ಆಭೇರಿ ರಾಗದಲ್ಲಿ ನಾಟ ಕುರುಂಜಿ ರಾಗದಲ್ಲಿ ‘ಪಾರ್ವತಿ ಕುಮಾರ ಭಾವಯೇ’ ಮಿಶ್ರ ಛಾಪು ತಾಳದಲ್ಲಿ ‘ರಾಕಾಶಶಿವದನಾ’ ಟಕ್ಕ ರಾಗದಲ್ಲಿ ತುಂಬಾ ಸುಂದರವಾಗಿ ಮೂಡಿ ಬಂತು. ಎಲ್ಲ ಪ್ರಸ್ತುತಿಗಳೂ ಮನೋಹರವಾದ ಆಲಾಪನೆ ಸುಂದರವಾದ ಸ್ವರಕಲ್ಪನೆಯಿಂದ ಮೂಡಿಬಂತು. ಮುಂದೆ ನೆರೆದಿದ್ದ ಸಂಗೀತ ಶೋತೃಗಳು ನಿರೀಕ್ಷಿಸುತ್ತಿದ್ದ ‘ರಾಗ-ತಾನ-ಪಲ್ಲವಿ’ ಪ್ರಸ್ತುತಿ ಪ್ರಾರಂಭದ ದುರ್ಗಾ ರಾಗದಲ್ಲಿ ಅತ್ಯಂತ ಮೋಹಕವಾಗಿ, ಸರಸ್ವತಿ ರಾಗದಲ್ಲಿ ದೇವಿಯ ಕೋಮಲತೆ, ಗಾಂಭೀರ್ಯವನ್ನು ಹಾಗೂ ಲಲಿತ ರಾಗದಲ್ಲಿ ಲಾಲಿತ್ಯವನ್ನೂ ಅತ್ಯಂತ…

Read More