Author: roovari

ಮನುಷ್ಯನ ಸಂಬಂಧಗಳ ಕೊಂಡಿ ಸಡಿಲವಾಗುತ್ತಿರುವ ಪ್ರಸ್ತುತ ಕಾಲಮಾನದಲ್ಲಿ ‘ಗೋಕುಲ ನಿರ್ಗಮನ’ ನಾಟಕ ಮನುಷ್ಯ ಸಂಬಂಧಗಳ ಮಹತ್ವವನ್ನು ತಿಳಿಹೇಳುತ್ತದೆ. ಗೋಕುಲ ನಿರ್ಗಮನವು ಒಂದು ಪೌರಾಣಿಕ ನಾಟಕ. ಇಲ್ಲಿ ಗೋಕುಲದ ಜನರ ಜೀವನದ ಚಿತ್ರಣವು ಅದ್ಭುತವಾಗಿ ಮೂಡಿಬಂದಿದೆ. ಗೋಕುಲದ ಜನರು, ಕೃಷ್ಣ ಹಾಗೂ ಕೊಳಲಿನ ಜೊತೆಗೆ ಹೊಂದಿದ ಭಾವನಾತ್ಮಕ ಸಂಬಂಧ ನಾಟಕದ ಕೇಂದ್ರಬಿಂದುವಾಗಿ ನಿಲ್ಲುತ್ತದೆ. ಗೋಪಾಲಕರು-ಗೋಪಿಕೆಯರು, ಕೃಷ್ಣ, ಬಲರಾಮ, ಅಕ್ರೂರ, ಸುದಾಸ, ಸುಬಲ ಎಲ್ಲ ಪಾತ್ರಗಳ ನಟನೆ ಅದರಲ್ಲೂ ಕೃಷ್ಣನೊಂದಿಗಿರುವ ರಾಧೆ, ಬಲರಾಮ, ಶ್ರೀಧಾಮನ ದೃಶ್ಯಗಳು ಮನದೊಳಗುಳಿಯುತ್ತವೆ. ಶ್ರೀಧಾಮನ ಪಾತ್ರ ಪ್ರೇಕ್ಷಕರನ್ನು ಪ್ರತಿಬಾರಿಯೂ ನಗುವಿನ ಅಲೆಯಲ್ಲಿ ತೇಲಿಸುತ್ತದೆ. ಗೋಕುಲದ ಚಿಕ್ಕಮಕ್ಕಳಿಂದ ಹಿಡಿದು ಹಿರಿಜೀವಗಳ ತನಕ ಕೃಷ್ಣನು ಕೊಳಲನೂದುವುದನ್ನು ಆಲಿಸಲು ತೋರುವ ತುಡಿತ ಹಾಗೂ ಕೃಷ್ಣನ ಮೇಲಿನ ಪ್ರೀತಿ ಪ್ರತಿ ಸನ್ನಿವೇಶದಲ್ಲೂ ಕಾಣುತ್ತದೆ. ಕೃಷ್ಣನು ಕೊಳಲನ್ನು ಮತ್ತು ಗೋಕುಲವನ್ನು ಒಲ್ಲದ ಮನಸ್ಸಿನಿಂದ ತೊರೆದು ಬಲರಾಮ ಮತ್ತು ಅಕ್ರೂರನೊಂದಿಗೆ ಮಥುರೆಗೆ ಹೋಗುವ ಆ ದುಃಖದ ಪ್ರಸಂಗ, ಕೃಷ್ಣ ಗೋಕುಲವನ್ನು ಬಿಟ್ಟು ಹೋಗಬಾರದಿತ್ತು ಎನ್ನುವ ಭಾವನೆಯನ್ನು ಮೂಡಿಸುತ್ತದೆ. ಗೋಕುಲ…

Read More

ಹಾಸನ : ಕನ್ನಡ ಸಾಹಿತ್ಯ ಪರಿಷತ್ತು ಹಾಸನ ಹಾಗೂ ಪ್ರತಿಮಾ ಟ್ರಸ್ಟ್ ಸಹಯೋಗದಲ್ಲಿ ದಿನಾಂಕ 22 ನವೆಂಬರ್ 2025ರಂದು ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ‘ಕಪ್ಪು ಹಲ್ಲಿನ ಕಥೆ’ ಕಾದಂಬರಿಯ ಎರಡನೇ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕಾದಂಬರಿ ಕುರಿತು ಸುದೀರ್ಘ ಚರ್ಚೆ, ವಿಮರ್ಶೆ, ಅನಿಸಿಕೆಗಳು, ಅಭಿಪ್ರಾಯಗಳ ಮೂಲಕ ಹೊಸ ಮೆರಗು ತಂದುಕೊಟ್ಟಿತು. ವೇದಿಕೆಯಲ್ಲಿ ದಿವ್ಯಸಾನಿಧ್ಯ ವಹಿಸಿದ್ದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಚ್.ಎಲ್. ಮಲ್ಲೇಶಗೌಡ, ಹಿರಿಯ ಪತ್ರಕರ್ತರಾದ ಆರ್.ಪಿ. ವೆಂಕಟೇಶ ಮೂರ್ತಿ, ಸಾಹಿತಿಗಳಾದ ಶ್ರೀಮತಿ ದಯಾ ಗಂಗನಘಟ್ಟ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಚ್.ಎನ್. ಲೋಕೇಶ್, ಕಾರ್ಯದರ್ಶಿಗಳಾದ ಬೊಮ್ಮೇಗೌಡ ಇವರುಗಳು ಉಪಸ್ಥಿತರಿದ್ದರು.

Read More

ಕಾರ್ಕಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಯಕ್ಷ ರಂಗಾಯಣ ಕಾರ್ಕಳ ಇವರ ಸಹಯೋಗದಲ್ಲಿ ‘ನಾಟಕೋತ್ಸವ’ವನ್ನು ದಿನಾಂಕ 26, 27 ಮತ್ತು 28 ನವೆಂಬರ್ 2025ರಂದು ಪ್ರತೀ ದಿನ ಸಂಜೆ 6-30 ಗಂಟೆಗೆ ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದ ಬಯಲು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಕಳ ಯಕ್ಷ ರಂಗಾಯಣ ರೆಪರ್ಟರಿ ಕಲಾವಿದರು ದಿನಾಂಕ 26 ನವೆಂಬರ್ 2025ರಂದು ಬಿ.ಆರ್. ವೆಂಕಟರಮಣ ಐತಾಳ ಇವರ ನಿರ್ದೇಶನದಲ್ಲಿ ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’, ದಿನಾಂಕ 27 ನವೆಂಬರ್ 2025ರಂದು ಗಣೇಶ್ ಮಂದಾರ್ತಿ ಇವರ ನಿರ್ದೇಶನದಲ್ಲಿ ‘ಸೋಮಿಯ ಸೌಭಾಗ್ಯ’ ಮತ್ತು ದಿನಾಂಕ 28 ನವೆಂಬರ್ 2025ರಂದು ಶ್ರೀಕಾಂತ್ ಎನ್.ವಿ. ಇವರ ನಿರ್ದೇಶನದಲ್ಲಿ ‘ಮಹಾತ್ಮರ ಬರವಿಗಾಗಿ’ ನಾಟಕಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

Read More

ಸುರತ್ಕಲ್ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದಿಂದ ಸುರತ್ಕಲ್ ಹೋಬಳಿ ಘಟಕದ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 11 ಡಿಸೆಂಬರ್ 2025ರಂದು ಕಾಟಿಪಳ್ಳ ನಾರಾಯಣ ಗುರು ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ. ಹೋಬಳಿ ಮಟ್ಟದ ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೀತಾ ಸುರತ್ಕಲ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶೀನಾಥ ತಿಳಿಸಿದ್ದಾರೆ. ಹೋಬಳಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಸಂಸ್ಥೆಯ ಅಧ್ಯಕ್ಷ ಪಿ. ದಯಾಕರ್ ನೇತೃತ್ವದಲ್ಲಿ ನಾರಾಯಣಗುರು ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಸಾಹಿತ್ಯ ಸಮ್ಮೇಳನದ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು. ಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಿ. ದಯಾಕರ್, ಆಡಳಿತಾಧಿಕಾರಿ ಡಾ. ಗಣೇಶ್ ಅಮೀನ್ ಸಂಕಮಾ‌ರ್, ಸುರತ್ಕಲ್ ಹೋಬಳಿ ಘಟಕದ ಅಧ್ಯಕ್ಷೆ ಗುಣವತಿ ರಮೇಶ್, ಗೋವಿಂದದಾಸ ಪದವಿ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಪ್ರೊ.…

Read More

ಉಡುಪಿ : ರಂಗಭೂಮಿ ಉಡುಪಿ ಸಂಸ್ಥೆಯು ಹಮ್ಮಿಕೊಂಡಿದ್ದ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯು ದಿನಾಂಕ 23 ನವೆಂಬರ್ 2025ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಪ್ರಾರಂಭವಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ “ರಂಗಭೂಮಿ ಉಡುಪಿ, ವರ್ಷದಲ್ಲಿ 25ಕ್ಕೂ ಅಧಿಕ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುವ ಮೂಲಕ ಉಡುಪಿಯ ಇತಿಹಾಸ ಪುಟದಲ್ಲಿ ಭದ್ರವಾದ ಸ್ಥಾನ ಪಡೆದಿರುವುದು ನಾವೆಲ್ಲಾ ಹೆಮ್ಮೆ ಪಡುವ ವಿಚಾರವಾಗಿದೆ. ಇಂದು ರಂಗಭೂಮಿಯತ್ತ ಸಭಿಕರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ. ನಮ್ಮ ಮಣ್ಣಿನ ಸೊಗಡಾಗಿರುವ ಯಕ್ಷಗಾನ, ನಾಟಕ ಮೊದಲಾದ ಕಲಾಪ್ರಕಾರಗಳನ್ನು ಸೂರ್ಯಚಂದ್ರರು ಇರುವ ತನಕ ಉಳಿಸಿಕೊಂಡು ಹೋಗಬೇಕಾಗಿದೆ. ಆದರೆ ಇಂದು ಜನರ ಆಸಕ್ತಿಗೆ ತಕ್ಕಂತೆ ನಾಟಕಗಳನ್ನು ಮಾರ್ಪಾಟು ಮಾಡಿಕೊಳ್ಳಬೇಕೋ ಅಥವಾ ನಾಟಕಕ್ಕೆ ಸರಿಯಾಗಿ ಜನರನ್ನು ಕರೆಸುವ ಕೆಲಸ ಮಾಡಬೇಕೋ ಎಂಬ ಗೊಂದಲ ಸಂಘಟಕರನ್ನು ಕಾಡುತ್ತಿದೆ. ಈ ಎಲ್ಲಾ ಸವಾಲುಗಳ ನಡುವೆಯೇ ಛಲ ಬಿಡದೆ ಕಳೆದ 45 ವರ್ಷಗಳಿಂದ ಈ ಕನ್ನಡ ನಾಟಕ ಸ್ಪರ್ಧೆಯನ್ನು…

Read More

ಬೆಂಗಳೂರು : ಸಮಾಜಮುಖಿ ಪ್ರಕಾಶನವು 2025ನೇ ಸಾಲಿನ ‘ಸಮಾಜಮುಖಿ ವಾರ್ಷಿಕ ಕಥಾ ಸ್ಪರ್ಧೆ’ಗೆ ಕಥೆಗಳನ್ನು ಆಹ್ವಾನಿಸಿದೆ. ಬಹುಮಾನಕ್ಕೆ ಆಯ್ಕೆಯಾಗುವ ಐದು ಕಥೆಗಳ ಲೇಖಕರಿಗೆ ತಲಾ ರೂ. ಐದು ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಲಾಗುತ್ತದೆ. ಮೆಚ್ಚುಗೆ ಪಡೆದ ಹತ್ತು ಕಥೆಗಳಿಗೆ ಸಮಾಜಮುಖಿ ವಾರ್ಷಿಕ ಕಥಾ ಸಂಕಲನದಲ್ಲಿ ಅವಕಾಶ ಒದಗಿಸಲಾಗುತ್ತದೆ. ಅಪ್ರಕಟಿತ ಕಥೆಗಳಿಗೆ ಎರಡು ಸಾವಿರ ಪದಗಳ ಮಿತಿಯಿದ್ದು, ನುಡಿ ಅಥವಾ ಯೂನಿಕೋಡ್ ಲಿಪಿಯಲ್ಲಿರಬೇಕು. ಕಥೆಗಳನ್ನು ದಿನಾಂಕ 31 ಡಿಸೆಂಬರ್ 2025ರೊಳಗೆ [email protected]ಗೆ ಕಳುಹಿಸಬೇಕು ಎಂದು ಪ್ರಕಾಶನದ ಚಂದ್ರಕಾಂತ ವಡ್ಡು ತಿಳಿಸಿದ್ದಾರೆ.

Read More

ಕೋಣಾಜೆ : ‘ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷಭಾರತಿ ಪುತ್ತೂರು ಇವರ ಸಹಯೋಗದಲ್ಲಿ ನಡೆಯಲಿರುವ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2025’ ಮಂಗಳೂರಿನ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ದಿನಾಂಕ 23 ನವೆಂಬರ್ 2025ರಂದು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿ.ವಿ. ಕುಲಸಚಿವ ಕೆ. ರಾಜು ಮೊಗವೀರ “ಅನೇಕ ಕಲಾಪ್ರಕಾರಗಳ ನಡುವೆ ಯಕ್ಷಗಾನ ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುವ ಕಲೆಯಾಗಿ ಗುರುತಿಸಿದೆ. ಕರಾವಳಿಯ ಭಾಷೆ, ಸಂಸ್ಕೃತಿ, ಭಾವ ಯಕ್ಷಗಾನದಲ್ಲಿ ಪ್ರಕಟವಾಗುತ್ತವೆ. ಕಲಾವಿದರು ಕಲೆಯ ಆತ್ಮವಾದರೆ ಕಲಾ ಪೋಷಕರು ಕಲೆಯ ಹೃದಯವಿದ್ದಂತೆ. ಯಕ್ಷಗಾನ ಕಲಾವಿದರ ಪುರಾಣ ಜ್ಞಾನ, ಶುದ್ದ ಕನ್ನಡ ಮಾದರಿಯಾದುದು. ಕಲಾವಿದರ ವಿಶ್ಲೇಷಣಾ ಶಕ್ತಿ ಉನ್ನತಮಟ್ಟದಲ್ಲಿರುತ್ತದೆ. ಅವರ ಮೂಲಕ ಸಾಹಿತ್ಯ, ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಸಾಧ್ಯ” ಎಂದು ಹೇಳಿದರು. ಕಲಾಪ್ರೇಮಿ, ಕಲಾಪೋಷಕರಾದ ಉದ್ಯಮಿ ರವೀಂದ್ರ…

Read More

ಮಂಗಳೂರು : ಮಂಗಳೂರಿನ ಆರೋಹಣಂ ಸಂಗೀತ ಶಾಲೆಯ ದಶಮಾನೋತ್ಸವದ ಅಂಗವಾಗಿ ದಿನಾಂಕ 22 ಮತ್ತು 23 ನವೆಂಬರ್ 2025ರಂದು ಎರಡು ದಿನಗಳ ಸಂಗೀತ ಮಹೋತ್ಸವ ‘ದಶಕ ಸಮರ್ಪಣಂ’ ಕಾರ್ಯಕ್ರಮವು ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ್ ಕಟೀಲ್ “ಆಧುನಿಕ ಜಗತ್ತಿನ ಜಂಜಾಟದಲ್ಲಿ ಎಲ್ಲರೂ ಒತ್ತಡದಿಂದಲೇ ಬದುಕುತ್ತಿದ್ದಾರೆ. ಒತ್ತಡ ನಿವಾರಣೆಗಾಗಿ ಅನೇಕ ರೀತಿಯ ಔಷಧ, ಕೌನ್ಸೆಲಿಂಗ್ ಮೊರೆ ಹೋಗುತ್ತಾರೆ. ಆದರೆ ಒಂದಷ್ಟು ಹೊತ್ತು ಸಂಗೀತ ಕೇಳಿದರೆ ತಂನಿಂತಾನೆ ಒತ್ತಡ ನಿವಾರಣೆಯಾಗಲಿದೆ. ಒತ್ತಡ ನಿವಾರಣೆಗೆ ಸಂಗೀತವೇ ಉತ್ತಮ ಕೌನ್ಸೆಲಿಂಗ್. ಡಾ. ಆನಿಶ್ ವಿ. ಭಟ್ ರವರು ಸ್ಥಾಪಿಸಿದ ಮಂಗಳೂರಿನ ಆರೋಹಣಂ ಸಂಗೀತ ಶಾಲೆಯು ಇಂದು ಹತ್ತು ವರ್ಷಗಳನ್ನು ಪೂರೈಸಿದೆ. ಈ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ಸಂಸ್ಥೆ ನೀಡುತ್ತಿದೆ. ಅಲ್ಲದೆ ಹತ್ತಾರು ಸಂಗೀತ ಕಾರ್ಯಕ್ರಮಗಳನ್ನು ಸಂಘಟಿಸುವುದರ ಮೂಲಕ ಸಂಗೀತ ಪ್ರೇಮಿಗಳಿಗೂ ಸಂಗೀತ ಕೇಳುವ ಅವಕಾಶವನ್ನು ಕಲ್ಪಿಸುತ್ತಿದ್ದಾರೆ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆದು…

Read More

ಮಂಗಳೂರು : ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ವೇದಿಕೆ ಮತ್ತು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮಂಗಳೂರು ಇವರ ಆಶ್ರಯದಲ್ಲಿ ದಿನಾಂಕ 23 ನವೆಂಬರ್ 2025ರಂದು ಏರ್ಪಡಿಸಿದ್ದ ಕುಂಬ್ಳೆ ಸುಂದರ ರಾವ್ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಂಗಳೂರಿನ ಕೆನರಾ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ನಾ. ದಾಮೋದರ ಶೆಟ್ಟಿ “ಯಕ್ಷಗಾನ ಕಲಾವಿದರು ರಾತ್ರಿ ಹಗಲು ಕಷ್ಟಪಟ್ಟು ಪುರಾಣದ ಹಾಗೂ ಚರಿತ್ರೆಯ ವಿಚಾರಗಳನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದ್ದಾರೆ. ಅವರ ತ್ಯಾಗವನ್ನು ಯಾರೂ ಅಲ್ಲಗಳೆಯಲಾಗದು. ಅವರ ತ್ಯಾಗಕ್ಕೆ ಮಹತ್ವ ಹಾಗೂ ಬೆಲೆ ಕೊಡೋಣ. ಯಕ್ಷಗಾನಕ್ಕೆ ವಿಶೇಷವಾದ ಗೌರವ ಇದೆ. ಆ ಗೌರವವನ್ನು ಉಳಿಸಲು ಯಾರೂ ಅಡ್ಡಿಪಡಿಸುವುದು ಬೇಡ. ಪುರಸ್ಕರಿಸುವುದಕ್ಕೆ ಸಾಧ್ಯವಾದಷ್ಟು ದೇಣಿಗೆ ನೀಡೋಣ” ಎಂದು ಹೇಳಿದರು. ವಿದ್ವಾಂಸ ಪ್ರಭಾಕರ ಜೋಶಿ ಮಾತನಾಡಿ “ನೇಕಾರರ ಕುಟುಂಬದ ಕುಂಬ್ಳೆ ಸುಂದರ ರಾವ್ ಇವರಿಗೆ ಮಗ್ಗ ಒಲಿಯಲಿಲ್ಲ. ಆದರೆ ಯಕ್ಷಗಾನ ಒಲಿಯಿತು. ಯಕ್ಷಗಾನ ಕಲಾವಿದನೊಬ್ಬ ಜನರಿಂದ ಚುನಾಯಿತರಾಗಿ ಶಾಸಕರಾಗಿದ್ದು…

Read More

ನೃತ್ಯ ಕ್ಷೇತ್ರದಲ್ಲಿ ಜಿಲ್ಲೆಗೆ ಶ್ರೀಮಂತಿಕೆಯನ್ನು ತಂದು ಕೊಟ್ಟು, ಗುರು ಶಿಷ್ಯ ಪರಂಪರೆಗೆ ಮಾದರಿಯಾದ ನೃತ್ಯ ಸಂಸ್ಥೆ ನಾಟ್ಯನಿಕೇತನ ಕೊಲ್ಯ ಎಂದು ಯೂನಿವರ್ಸಿಟಿ ಕಾಲೇಜಿನ ನಿವೃತ್ತ ಪ್ರೊಫೆಸರ್ ಡಾ. ಕೆ ಎಂ ಉಷಾ ನುಡಿದರು. ಅವರು ನಾಟ್ಯನಿಕೇತನದ ಸಭಾಗೃಹ ಇಲ್ಲಿ ನಾಟ್ಯಮೋಹನ ನವತ್ಯುತ್ಸವ ನೃತ್ಯಸರಣಿ 23 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಪಂದನಲ್ಲೂರು ಶೈಲಿಯ ನೃತ್ಯ ಶೈಲಿಯನ್ನು ಕಳೆದ ಹಲವು ದಶಕಗಳಿಂದ ಬೋಧಿಸುತ್ತಾ ಇಂದು ದೇಶ ವಿದೇಶಗಳಲ್ಲಿ ಸಹಸ್ರಾರು ಶಿಷ್ಯವರ್ಗವನ್ನು ಹೊಂದಿರುವ ನಾಟ್ಯಕ್ಷೇತದ ಭೀಷ್ಮರೆಂದೇ ಪ್ರಸಿದ್ಧಿಯನ್ನು ಪಡೆದ ನಾಟ್ಯಾಚಾರ್ಯ ಉಳ್ಳಾಲ್ ಮೋಹನ ಕುಮಾರ್ ಅಭಿನಂದನೀಯರು ಎಂದರು.ಅದೇ ರೀತಿಯಲ್ಲಿ ತಂದೆಯವರ 90 ತುಂಬಿದ ಹರ್ಷದ ಪ್ರಾರಂಭಿಸಿದ ಈ ಕಾರ್ಯಕ್ರಮದ ರೂವಾರಿ ಸುಪುತ್ರಿ ರಾಜಶ್ರೀ ಉಳ್ಳಾಲ್ ರನ್ನು ಸಹ ಶ್ಲಾಘಿಸಲೇಬೇಕು ಎಂದರು. ಉಳ್ಳಾಲ್ ಮೋಹನ ಕುಮಾರ್ ಶಾಸ್ತ್ರೀಯ ಚೌಕಟ್ಟಿನಲ್ಲಿ ಭಾವಪೂರ್ಣ ಅಭಿನಯದ ಮೂಲಕ ನೃತ್ಯ ಪ್ರಸ್ತುತಿ ಮಾಡಿದ ಹಿರಿಯ ಶಿಷ್ಯೆ ಇಂಗ್ಲೆಂಡಿನ ವಿದುಷಿ ಚಿತ್ರಾಲೇಖಾ ಬೋಳಾರ್ ಮತ್ತು ಅವರ ಸುಪುತ್ರಿ ಆನಯ್ಯ ವಸುಧ ಆಶೀರ್ವದಿಸಿ ಅಭಿನಂದಿಸಿದರು. ಗುರುಗಳ…

Read More