Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಇದರ ತುಮಕೂರು ಜಿಲ್ಲೆ ತಿಪಟೂರು ತಾಲೂಕು ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ‘ಅಂತರ್ಜಾಲ ಆಧಾರಿತ ಅಂತರ್ರಾಜ್ಯಮಟ್ಟದ ಚಿತ್ರ ಕಾವ್ಯ ರಚನೆ ಸ್ಪರ್ಧೆ’ಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ಕವಿಗಳು ದಿನಾಂಕ 30 ಮೇ 2025ರಂದು ಸಂಜೆ 05 ಗಂಟೆಯೊಳಗೆ ತಮ್ಮ ಹೆಸರನ್ನು ಈ ಕೆಳಗಿನ ಸಂಪರ್ಕ ಸಂಖ್ಯೆಗಳಿಗೆ ವಾಟ್ಸಪ್ ಮೂಲಕ ನೋಂದಾಯಿಸಿಕೊಳ್ಳಬಹುದು. ದಿನಾಂಕ 01 ಜೂನ್ 2025ರಂದು ಬೆಳಿಗ್ಗೆ 08ರಿಂದ ರಾತ್ರಿ 08ರವರೆಗೆ ದತ್ತ ಚಿತ್ರಕ್ಕೆ ಸಂಬಂಧಿಸಿದ ಕವಿತೆಗಳನ್ನು ಈ ಕೆಳಕಂಡ ಸಂಖ್ಯೆಗಳಿಗೆ ವಾಟ್ಸಪ್ ಮೂಲಕ ಕಳುಹಿಸಿಕೊಡಬೇಕು. ಲತಾಮಣಿ ಎಂ.ಕೆ. ತುರುವೇಕೆರೆ – ಅಧ್ಯಕ್ಷರು : 8904095119 ಶಿಲ್ಪಾ ಎನ್. – ಕಾರ್ಯದರ್ಶಿ : 7975168956. ದಿನಾಂಕ 05 ಜೂನ್ 2025ರಂದು ಸಂಜೆ 07-30 ಗಂಟೆಗೆ ಫಲಿತಾಂಶ ಪ್ರಕಟವಾಗಲಿದ್ದು, ಸ್ಪರ್ಧೆಗೆ ಕಳುಹಿಸಿದ ಕವಿತೆಗಳನ್ನು ಹಿರಿಯ ಅನುಭವಿ ಕವಿಗಳಿಂದ ಮೌಲ್ಯಮಾಪನ ಮಾಡಿಸಲಾಗುವುದು. ಆಯ್ಕೆಯಾದ ಪ್ರಥಮ, ದ್ವಿತೀಯ, ತೃತೀಯ ಹಾಗೂ ಅತ್ಯುತ್ತಮ, ಉತ್ತಮ…
ಬೆಂಗಳೂರು : ಡ್ರಾಮಾಟ್ರಿಕ್ಸ್ ಬೆಂಗಳೂರು ಪ್ರಸ್ತುತ ಪಡಿಸುವ ‘ಬೀಚಿ ರಸಾಯನ’ ನಾಟಕದ ಪ್ರದರ್ಶನವು ದಿನಾಂಕ 30 ಮೇ 2025ರಂದು ಸಂಜೆ ಘಂಟೆ 7.00ಕ್ಕೆ ಬೆಂಗಳೂರಿನ ಬಸವನಗುಡಿಯಲ್ಲಿರುವ ವಾಡಿಯಾ ಸಭಾಂಗಣದಲ್ಲಿ ನಡೆಯಲಿದೆ. ಬೀಚಿ ರಸಾಯನ : ಬದುಕಿನ ನಿತ್ಯ ಬಳಕೆಯಲ್ಲಿ ಜಡ್ಡುಗಟ್ಟಿಸಿಕೊಂಡ ಎಷ್ಟೊ ಪದಗಳಿಗೆ ಬೀಚಿಯವರು ಹೊಸ ಅರ್ಥ ದಕ್ಕಿಸಿಕೊಟ್ಟು ಒಂದು ಪದಕೋಶ ಸಿದ್ಧಮಾಡಿದರು. ಅದೇ ‘ತಿಮ್ಮ ರಸಾಯನ’ ಕೃತಿ. ಇಲ್ಲಿಂದ ಪದಗಳು ಮತ್ತು ಅವುಗಳಿರುವ ಹೊಸ ಅರ್ಥಗಳನ್ನ ಹೆಕ್ಕಿ ಪ್ರಸ್ತುತ ನಾಟಕವನ್ನ ಹೆಣೆಯಲಾಗಿದೆ. ಕಥಾವಸ್ತು ಸ್ವತಂತ್ರ, ಆದರೆ ಅದರ ಒಳಗಿನ ಪದ ಮತ್ತು ಅರ್ಥಗಳ ಜೀವಧಾತು ಬೀಚಿ ಅವರದು. ಭಕ್ತಿ ನಿಜವಾಗಿದ್ದರೆ ಸಾಲದು, ಅದು ಜಾತಿ ಸೋಂಕಿನಿಂದಲೂ ಮುಕ್ತವಾಗಿರಬೇಕು ಎಂಬುದನ್ನು ನಾಟಕೀಯವಾಗಿ ಹೇಳುವ ನಾಟಕ ಇದು. ಇಲ್ಲಿ ಭಕ್ತಿಯ ಪ್ರತೀಕವಾಗಿ ‘ಜಾನಕಮ್ಮ’ ಇದ್ದಾರೆ. ಹಾಗೇ ಎಲ್ಲಿ ಭಕ್ತಿಯ ಪರಾಕಾಷ್ಠತೆ ಇರುತ್ತದೆಯೋ ಅಲ್ಲಿ ವಸ್ತುನಿಷ್ಠ ಗ್ರಹಿಕೆಯೂ ಇರುತ್ತದೆ. ಗುರುಮೂರ್ತಿ ಈ ಪಾತ್ರದ ಸಂಕೇತ. ಈ ಭಕ್ತಿ ಮತ್ತು ವಸ್ತುನಿಷ್ಠತೆಗೆ ತನ್ನದೇ ಆದ ಗುಂಗು…
ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ವಿಜ್ಞಾನ ಕೃತಿಗಳನ್ನು ಲೇಖಕಿಯರಿಂದ ಆಹ್ವಾನಿಸಲಾಗಿದೆ. ಖ್ಯಾತ ವಿಜ್ಞಾನ ಲೇಖಕಿ ದಿವಂಗತ ಡಾ. ನಳಿನಿ ಮೂರ್ತಿ ಹೆಸರಿನಲ್ಲಿ ಅವರ ಪತಿ ಎಸ್. ನರಸಿಂಹ ಮೂರ್ತಿಯವರು ಕರ್ನಾಟಕ ಲೇಖಕಿಯರ ಸಂಘದಲ್ಲಿ ದತ್ತಿನಿಧಿಯನ್ನು ಸ್ಥಾಪಿಸಿದ್ದು, ಪ್ರಶಸ್ತಿಯು ರೂಪಾಯಿ 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ ಎಂದು ಸಂಘದ ಅಧ್ಯಕ್ಷೆ ಡಾ. ಎಚ್. ಎಲ್. ಪುಷ್ಪ ತಿಳಿಸಿದ್ದಾರೆ. ವಿಜ್ಞಾನಕ್ಕೆ ಸಂಬಂಧಿಸಿದ ಕೃತಿಗಳು ಹಾಗೂ ವೈಜ್ಞಾನಿಕ ಕತೆ, ಕಾದಂಬರಿ ಹಾಗೂ ಸಂಕೀರ್ಣ (ವೈದ್ಯಕೀಯ/ ತಂತ್ರಜ್ಞಾನ/ ಕೃಷಿ ವಿಜ್ಞಾನ/ ಪರಿಸರ ವಿಜ್ಞಾನ)ಕ್ಕೆ ಸಂಬಂಧಿಸಿದ ಕೃತಿಗಳನ್ನು ಲೇಖಕಿಯರಿಂದ ಆಹ್ವಾನಿಸಲಾಗಿದ್ದು, ಜನವರಿ 2024ರಿಂದ ಡಿಸೆಂಬರ್ 2024ರ ಅವಧಿಯಲ್ಲಿ ಪ್ರಕಟಗೊಂಡಿರಬೇಕು, ಕೃತಿಗಳು ಸ್ವತಂತ್ರವಾಗಿದ್ದು, ಅನುವಾದ ಕೃತಿಗಳನ್ನು ಪರಿಗಣಿಸುವುದಿಲ್ಲ. ಮೂರು ಪ್ರತಿಗಳನ್ನು, ಕರ್ನಾಟಕ ಲೇಖಕಿಯರ ಸಂಘ, ಫ್ಲಾಟ್ ನಂ, 206, ವಿಜಯ ಮಾನ್ಷನ್, 2ನೆಯ ಮಹಡಿ, 2ನೆಯ ಮುಖ್ಯರಸ್ತೆ, 2ನೆಯ ತಿರುವು, ಚಾಮರಾಜಪೇಟೆ, ಬೆಂಗಳೂರು – 560018 ಇಲ್ಲಿಗೆ…
ಸವಣೂರು : ಶ್ರವಣರಂಗ ಸವಣೂರು ಇದರ ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆಯು ದಿನಾಂಕ 25 ಮೇ 2025ರಂದು ಸವಣೂರಿನ ಪಿ. ಎಂ. ಶ್ರೀ ವೀರಮಂಗಲ ಶಾಲೆಯಲ್ಲಿ ನಡೆಯಿತು. ದಿ.ರಾಮಚಂದ್ರ ಅರ್ಬಿತ್ತಾಯ ಸಂಸ್ಮರಣೆ ಹಾಗೂ ಸುಶ್ರಾವ್ಯ ಸ್ವರದ ಯಕ್ಷಗಾನ ಭಾಗವತರಾದ ಕು. ರಚನಾ ಚಿದ್ಗಲ್ ಇವರಿಗೆ ‘ಶ್ರವಣಸ್ವರ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಯಾಗಿದ್ದುಕೊಂಡು ಯಕ್ಷಗಾನದಲ್ಲಿ ಸಾಧನೆ ಮಾಡುತ್ತಿರುವ ಕಲಾವಿದರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಸಮಾರಂಭದಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ರವಿಚಂದ್ರ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ, ಹಿರಿಯ ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಹರ್ಷಗುತ್ತು, ಎಸ್. ಡಿ. ಎಂ. ಸಿ. ಸದಸ್ಯರಾದ ರಮೇಶ್ ಗೌಡ, ಹರೀಶ್, ಆನಂದ ಗುತ್ತು, ಜಯಪ್ರಕಾಶ್, ಯಮುನಾ, ಶಿಕ್ಷಕಿ ಹೇಮಾವತಿ, ಯಕ್ಷಗಾನದ ವಿದ್ಯಾರ್ಥಿಗಳು, ಪೋಷಕರು, ಊರವರು ಪಾಲ್ಗೊಂಡರು. ಸಭಾ ಕಾರ್ಯಕ್ರಮದ ಬಳಿಕ ‘ಜಾಂಬವತಿ ಕಲ್ಯಾಣ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಸವಣೂರು, ಕು. ರಚನಾ…
ಮಂಗಳೂರು: ಗಾನ ಗಂಧರ್ವ ಡಾ.ಎಸ್.ಪಿ. ಬಾಲ ಸುಬ್ರಹ್ಮಣ್ಯಂ ಅವರ ಜನ್ಮದಿನೋತ್ಸವದ ಅಂಗವಾಗಿ ಗಾಯಕ ಯಶವಂತ ಎಂ. ಜಿ. ಇವರಿಂದ 24 ಗಂಟೆಗಳ ಕಾಲ ನಿರರ್ಗಳವಾಗಿ ಗಾಯನ ಕಾರ್ಯಕ್ರಮ ‘ಬಾಲಗಾನ ಯಶೋಯಾನ’ ದಿನಾಂಕ 03 ಜೂನ್ 2025ರ ಮಧ್ಯಾಹ್ನ ಘಂಟೆ 3.00 ರಿಂದ 04 ಜೂನ್ 2025 ಮಧ್ಯಾಹ್ನ ಘಂಟೆ 3.00 ರವರೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ದಿನಾಂಕ 03 ಜೂನ್ 2025ರ ಮಧ್ಯಾಹ್ನ ಘಂಟೆ 1.30ಕ್ಕೆ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ವಿರಾಜಪೇಟೆಯ ಡಿವೈಎಸ್ಪಿ ಎಸ್. ಮಹೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಹಾಗೂ ನಾನಾ ಗಣ್ಯರು ಭಾಗವಹಿಸಲಿದ್ದಾರೆ. 04 ಜೂನ್ 2025ರಂದು ಮಧ್ಯಾಹ್ನ ಘಂಟೆ 3.00ಕ್ಕೆ ನಡೆಯಲಿರುವ ಸಮಾರೋಪದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದು, ನಾನಾ ಗಣ್ಯರು ಉಪಸ್ಥಿತರಿರುವರು ಎಂದು ಮನಪಾ ಮಾಜಿ ಸದಸ್ಯ ಹಾಗೂ ಗಾಯಕರಾದ ಜಗದೀಶ ಶೆಟ್ಟಿ ತಿಳಿಸಿದ್ದಾರೆ. ನಿರಂತರ ಗಾಯನದಲ್ಲಿ ಒಂದೊಂದು ಗಂಟೆಗೆ 5 ನಿಮಿಷಗಳ ವಿರಾಮ ಇರುತ್ತದೆ.…
ಯಕ್ಷರಂಗದ ಶ್ರೇಷ್ಠ ಭಾಗವತರಾದ ಶ್ರೀ ಕುರಿಯ ಗಣಪತಿ ಶಾಸ್ತ್ರಿಯವರು 2025ನೇ ಸಾಲಿನ ಪ್ರತಿಷ್ಠಿತ ‘ಪಟ್ಲ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ದಿನಾಂಕ 01 ಜೂನ್ 2025ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಲಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ಇದರ ದಶಮಾನೋತ್ಸವ ಸಂಭ್ರಮದಲ್ಲಿ ಸ್ವಾಮೀಜಿಗಳ ಹಾಗೂ ಗಣ್ಯರ ಸಮಕ್ಷದಲ್ಲಿ, ಯಕ್ಷರಂಗಕ್ಕೆ ಸಂಬಂಧಪಟ್ಟ ಈ ಪ್ರಶಸ್ತಿಯನ್ನು ಕುರಿಯರಿಗೆ ಪ್ರದಾನ ಮಾಡಲಾಗುವುದು ಎಂದು ಪಟ್ಲ ಫೌಂಡೇಶನ್ನಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ ಶೆಟ್ಟಿಯವರು ತಿಳಿಸಿದ್ದಾರೆ. ಪಟ್ಲ ಪ್ರಶಸ್ತಿಯು ಒಂದು ಲಕ್ಷ ನಗದನ್ನು ಹೊಂದಿದ್ದು, ಸರಕಾರೇತರ ಮಟ್ಟದಲ್ಲಿ ಪ್ರತಿಷ್ಠಿತ ಹಾಗೂ ಅತೀ ದೊಡ್ಡ ಪ್ರಶಸ್ತಿ ಎನಿಸಿಕೊಂಡಿದೆ. ಹಿಮ್ಮೇಳದೊಂದಿಗೆ ಮುಮ್ಮೇಳದ ಅಂಗವನ್ನೂ ತಿಳಿದವರು ಮಾತ್ರ ‘ಭಾಗವತ’ ಎನಿಸಿಕೊಳ್ಳುತ್ತಾರೆ. ಕುರಿಯ ಗಣಪತಿ ಶಾಸ್ತ್ರಿಯವರು ಈ ನಿಟ್ಟಿನಲ್ಲಿ ‘ಭಾಗವತ ಶ್ರೇಷ್ಠ’ ಎಂಬುದು ಅತಿಶಯೋಕ್ತಿಯ ಮಾತಾಗಲಾರದು. ತಲೆಗೆ ರುಮಾಲು ಸುತ್ತಿ, ಹಣೆಗೆ ತಿಲಕವಿಟ್ಟು, ಶುಭ್ರವಾದ ವಸ್ತ್ರ ಧರಿಸಿ, ಜಾಗಟೆ ಹಿಡಿದು ರಂಗಸ್ಥಳದಲ್ಲಿ ಕುರಿಯ ಭಾಗವತರು ಕುಳಿತುಕೊಂಡರೆ, ಅಂದು ಅದ್ಭುತ ಯಕ್ಷಗಾನ ಪ್ರದರ್ಶನ ಕಾಣುವ ಸೌಭಾಗ್ಯ…
ಹಾಸನ : ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆ ಹಾಸನ ಇವರ ವತಿಯಿಂದ ಕವಯಿತ್ರಿ ಶ್ರೀಮತಿ ರೇಖಾ ಪ್ರಕಾಶ್ ಇವರ ಪ್ರಾಯೋಜಕತ್ವದಲ್ಲಿ ‘ಲಕ್ಷ್ಮೀ ನಿವಾಸ’, 6ನೇ ಕ್ರಾಸ್, ಎರಡನೇ ಹಂತ, ಆದಾಯ ತೆರಿಗೆ ಕಛೇರಿ ಹಿಂಭಾಗ, ವಿಜಯನಗರ, ಹಾಸನ ಇಲ್ಲಿ ದಿನಾಂಕ 01 ಜೂನ್ 2025ರ ಭಾನುವಾರದಂದು ಸಂಜೆ 3-30 ಗಂಟೆಗೆ ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮೊದಲಿಗೆ ಕವಯಿತ್ರಿ ಶ್ರೀಮತಿ ಡಾ. ಶಾಂತ ಅತ್ನಿಯವರ ‘ಕಷ್ಟಗಳಿಗೂ ಸಾವಿದೆ’ ಕೃತಿ ಕುರಿತು ಸಾಹಿತಿಗಳಾದ ಶ್ರೀಮತಿ ವಾಣಿ ಮಹೇಶ್ ಇವರಿಂದ ವಿಶ್ಲೇಷಣೆ ಹಾಗೂ ಆಗಮಿಸಿದ ಕವಿಗಳಿಂದ ಕವನವಾಚನ ಮತ್ತು ವಿಮರ್ಶೆ ಹಾಗೂ ಎಂ. ಕುಸುಮರವರ ‘ಸಂವಾದಿ’ ಕವನ ಸಂಕಲನ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು, ಸಾಹಿತ್ಯಾಸಕ್ತರು ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರಾದ ಶ್ರೀಮತಿ ಸುಕನ್ಯಾ ಮುಕುಂದರವರು ಕೋರಿರುತ್ತಾರೆ. ಸಂಪರ್ಕಕ್ಕಾಗಿ ಸಂಖ್ಯೆಗಳು ಸುಕನ್ಯಾ ಮುಕುಂದ – 81238 27811, ರೇಖಾ ಪ್ರಕಾಶ್ – 8660468341, ಸಮುದ್ರವಳ್ಳಿ ವಾಸು -9449311298, ವಾಣಿ ಮಹೇಶ್…
ಬೆಂಗಳೂರು : ನ್ಯೂ ವೇವ್ ಬುಕ್ಸ್ ಮತ್ತು ಪ್ರಗತಿ ಗ್ರಾಫಿಕ್ಸ್ ಬೆಂಗಳೂರು ಅರ್ಪಿಸುವ ರಾಜೇಂದ್ರ ಬಿ. ಶೆಟ್ಟಿ ರಚಿಸಿರುವ ‘ಮೊಗ್ಗರಳಿ ಹೂವಾಗಿ’, ‘ಗಣಿತ ಬಹಳ ಸುಲಭ’ ಮತ್ತು ‘ಮ್ಯಾಥ್ಸ್ ಈಸ್ ಈಸೀ’ ಎಂಬ ಪುಸ್ತಕಗಳ ಅನಾವರಣ ಸಮಾರಂಭವನ್ನು ದಿನಾಂಕ 01 ಜೂನ್ 2025 ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ಅಶ್ವಥ್ ಕಲಾ ಭವನದಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಪತ್ರಕರ್ತ ಸಾಹಿತಿ ಜೋಗಿ, ಕಥಾಗುಚ್ಛದ ಸಂಸ್ಥಾಪಕಿ ಲತಾ ಜೋಶಿ, ಕವಿ ಡಾ. ಎ. ಭಾನು, ರಂಗಕರ್ಮಿ ಶ್ರೀಪತಿ ಮಂಜನಬೈಲು, ಅಂಕಣಗಾರ ಎನ್. ರಾಮನಾಥ್, ಜನಪದ ತಜ್ಞರಾದ ಡಾ. ಎಂ. ಬೈರೇಗೌಡ, ಪರಂಪರಾ ಕಲ್ಚರಲ್ ಫೌಂಡೇಷನ್ (ರಿ.) ಇದರ ಅಧ್ಯಕ್ಷರಾದ ಜಿ.ಪಿ. ರಾಮಣ್ಣ ಮತ್ತು ಲೇಖಕರಾದ ರಾಜೇಂದ್ರ ಬಿ. ಶೆಟ್ಟಿ ಇವರುಗಳು ಭಾಗವಹಿಸಲಿದ್ದಾರೆ.
ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ವತಿಯಿಂದ ದಿನಾಂಕ 22 ಮೇ 2025ರಂದು ಮಂಗಳೂರು ಆಕಾಶವಾಣಿ ಕಚೇರಿಯಲ್ಲಿ ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಸೂರ್ಯನಾರಾಯಣ ಭಟ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸೂರ್ಯ ನಾರಾಯಣ ಭಟ್ ಪಿ.ಎಸ್. “ಆಕಾಶವಾಣಿಯಲ್ಲಿ ಸುದೀರ್ಘ 36 ವರ್ಷ ಅತ್ಯಂತ ನಿಷ್ಠೆ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಕೆಲಸ ನಿರ್ವಹಿಸಿ ಇದೀಗ ಸಂತೃಪ್ತಿಯಿಂದ ಸೇವೆಯಿಂದ ನಿವೃತ್ತನಾಗಲಿದ್ದೇನೆ. ಮುಂದೆಯೂ ಸಾಹಿತ್ಯ ಸೇವೆ ಮಾಡುವ ಹಂಬಲವಿದೆ” ಎಂದು ಹೇಳಿದರು. ಕ.ಸಾ.ಪ. ಮಂಗಳೂರು ಅಧ್ಯಕ್ಷ ಡಾ. ಮಂಜುನಾಥ ರೇವಣ್ಕರ್, ಕೇಂದ್ರ ಸಮಿತಿಯ ಮಾರ್ಗದರ್ಶಿ ಸಮಿತಿಯ ಸದಸ್ಯ ಡಾ. ಮುರಲಿ ಮೋಹನ ಚೂಂತಾರು, ಕಾರ್ಯದರ್ಶಿ ಗಣೇಶ್ ಪ್ರಸಾದ್ಜೀ, ರಘು ಶೆಟ್ಟಿ, ಸನತ್ ಕುಮಾರ್ ಜೈನ್, ಸುಖಲಾಕ್ಷಿ ಆರ್. ಸುವರ್ಣ, ರತ್ನಾವತಿ ಜೆ. ಬೈಕಾಡಿ ಸಮ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಕ.ಸಾ.ಪ.ದ ಸದಸ್ಯರಾದ ಕೃಷ್ಣಪ್ಪ ನಾಯ್ಕ, ನಿಜಗುಣ ದೊಡ್ಡಮನಿ, ಪ್ರತಾಪ್ ಕುಮಾರ್, ಮಂಗಳೂರು ಆಕಾಶವಾಣಿಯ ಚಂದ್ರಶೇಖರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು : ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇದರ ರಜತ ಮಹೋತ್ಸವ ಸಂಭ್ರಮ ಸಮಾರಂಭದ ಅಂಗವಾಗಿ ಆಯೋಜಿಸಿದ 15 ದಿನಗಳ ಯಕ್ಷಪಕ್ಷ – ರಜತ ಸರಯೂ ಕಾರ್ಯಕ್ರಮದ 9ನೇ ದಿನದ ಕಾರ್ಯಕ್ರಮ ದಿನಾಂಕ 26 ಮೇ 2025ರ ಸೋಮವಾರದಂದು ಕದ್ರಿ ದೇವಳದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕದ್ರಿ ದೇವಸ್ಥಾನದ ಟ್ರಸ್ಟಿಗಳಲ್ಲಿ ಓರ್ವರಾದ ಶ್ರೀ ರಾಜೇಂದ್ರ ಮಾತನಾಡಿ “ಯಕ್ಷಗಾನದ ಬಗ್ಗೆ ಅಧ್ಯಯನ. ಅದರ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ನಾವು ಜೀವನದಲ್ಲಿ ಎತ್ತರಕ್ಕೆ ಏರಬಹುದು. ಹಾಗೆಯೇ ಸರಯೂ ಸಂಸ್ಥೆಯ ಶಿಕ್ಷಣಾರ್ಥಿಗಳು ಕೂಡಾ ಪುರಾಣ ಕಥೆಗಳಲ್ಲಿ ಬರುವ ಆದರ್ಶ ಪಾತ್ರಗಳನ್ನು ಅಭ್ಯಸಿಸಿ ಉತ್ತಮ ಜೀವನ ನಡೆಸಬೇಕು. ರಜತ ವರ್ಷಗಳ ಇತಿಹಾಸವುಳ್ಳ ಈ ಸಂಸ್ಥೆ ಇನ್ನೂ ಬೆಳಗಲಿ” ಎ೦ದರು. ‘ಚಾರ್ಲಿ ಚಾಪ್ಲಿನ್’ ಖ್ಯಾತಿಯ ಹಾಸ್ಯಗಾರ ಸೀತಾರಾಂ ಕುಮಾರ್ ಕಟೀಲು ತಮ್ಮ ತಿರುಗಾಟದ ಅನುಭವವನ್ನು ವಿವರಿಸುತ್ತಾ ಸಂಸ್ಥೆಗೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಯೋಗಪಟು, ತುಳುಕೂಟದ ಉಪಾಧ್ಯಕ್ಷರಾದ ಜೆ. ವಿ. ಶೆಟ್ಟಿ ಇವರಿಗೆ ‘ಯಕ್ಷ ಸರಯೂ’ ಬಿರುದಿತ್ತು…