Author: roovari

ಮಂಗಳೂರು : ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಅಪರೇಟಿವ್ ಸೊಸೈಟಿ ಲಿ., ಇದರ ವಜ್ರಮಹೋತ್ಸವ ಮತ್ತು ಸ್ಥಾಪಕರ ದಿನಾಚರಣೆ ಪ್ರಯುಕ್ತ ‘ಚಿತ್ರ ಸಿಂಚನ -2025’ ಭಾವಚಿತ್ರ ಬಿಡಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. 8ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ.ವರೆಗೆ ಕಿರಿಯರ ವಿಭಾಗ ಮತ್ತು ಹಿರಿಯರ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 0824 2451320, 9972644237 ಮತ್ತು 9845220198 ಸಂಖ್ಯೆಯನ್ನು ಸಂಪರ್ಕಿಸಿರಿ. ಸೂಚನೆಗಳು: • A3 ಸೈಜ್ ಡ್ರಾಯಿಂಗ್ ಶೀಟ್. • ವಾಟರ್ ಕಲರ್ ಅಥವಾ ಅಕ್ರಿಲಿಕ್ ಕಲರ್ ಬಳಸಬಹುದು. • ನೈಜವಾಗಿ ಬಿಡಿಸಿದ ಬಹುವರ್ಣದ ಚಿತ್ರಗಳಾಗಿರಬೇಕು. • ಸೃಜನಶೀಲತೆ, ಬಣ್ಣ ಸಂಯೋಜನೆ, ಅಚ್ಚುಕಟ್ಟಾಗಿರುವಿಕೆಗೆ ಆದ್ಯತೆ ನೀಡಲಾಗುವುದು. • ದಿನಾಂಕ 31-08-2025ರೊಳಗೆ ತಾವು ಬಿಡಿಸಿದ ಚಿತ್ರದಲ್ಲಿ ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಿಭಾಗ ನಮೂದಿಸಿ ಈ ಮೇಲೆ ನೀಡಿರುವ ವಿಳಾಸಕ್ಕೆ ಕಳುಹಿಸಿಕೊಡಬೇಕು. • ದಿನಾಂಕ 08-09-2025ರಂದು ಸೋಮವಾರಿ ಸಂಸ್ಥಾಪಕರ ಜನ್ಮದಿನದಂದು ಅಂತಿಮ ಸುತ್ತಿಗೆ ಆಯ್ಕೆಯಾದ ಎರಡು ವಿಭಾಗದ ತಲಾ 5 ಮಂದಿಗೆ LIVE…

Read More

ಬೆಂಗಳೂರು : ಮಂದಾರ ಗಾಯನ ಚೇತನ ಟ್ರಸ್ಟ್ (ರಿ.) ಬೆಂಗಳೂರು ಇದರ ವತಿಯಿಂದ ಡಾ. ಕಾ. ವೆಂ. ಶ್ರೀನಿವಾಸ ಮೂರ್ತಿ ವಿರಚಿತ ಭಾವಗೀತೆ, ಕನ್ನಡಪರ ಗೀತೆ ಹಾಗೂ ಜನಪದ ಗೀತೆಗಳ ‘ಕಾರ್ಯಾಗಾರ ಮತ್ತು ಗಾಯನ ಕಾರ್ಯಕ್ರಮವನ್ನು ದಿನಾಂಕ 24 ಆಗಸ್ಟ್ 2025ರಂದು ಬೆಂಗಳೂರು ಜೆ.ಸಿ. ರಸ್ತೆ, ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಆಯೋಜಿಸಲಾಗಿದೆ. ಮಧ್ಯಾಹ್ನ 2-00 ಗಂಟೆಗೆ ಕಾರ್ಯಾಗಾರ ಮತ್ತು 5-30 ಗಂಟೆಗೆ ಗೀತ ಗಾಯನ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಗಾಯಕರು ಸಂಸ್ಥೆಯ ಅಧ್ಯಕ್ಷರೂ ಸಂಘಟಕರೂ ಆದ ಎರ್ರಿಸ್ವಾಮಿ ಎಚ್. ಇವರನ್ನು 9743060285 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

Read More

ಉಡುಪಿ : ಬ್ರಹ್ಮಾವರ ತಾಲೂಕು ಮುಂಡ್ಕಿನಜಡ್ಡುವಿನ ವಿದುಷಿ ದೀಕ್ಷಾ ವಿ. ಇವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಮಣಿಪಾಲದ ರತ್ನ ಸಂಜೀವ ಕಲಾಮಂಡಲ ವತಿಯಿಂದ ‘ನವರಸ ದೀಕ್ಷಾ ವೈಭವಂ’ ಎಂಬ ಶಿರೋನಾಮೆಯಲ್ಲಿ ಉಡುಪಿ ಅಜ್ಜರಕಾಡಿನ ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಮತ್ತು‌ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಭರತನಾಟ್ಯ ಪ್ರದರ್ಶನಕ್ಕೆ ದಿನಾಂಕ 21 ಆಗಸ್ಟ್ 2025ರ ಗುರುವಾರ ಚಾಲನೆ ನೀಡಿದರು. ದಿನಾಂಕ 21 ಆಗಸ್ಟ್ 2025ರಿಂದ 30 ಆಗಸ್ಟ್ 2025ರವರೆಗೆ 216 ಗಂಟೆಗಳ ಒಟ್ಟು ಒಂಬತ್ತು ದಿನಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಾಸಕ ಕೆ. ರಘುಪತಿ ಭಟ್, “ಯಾವುದೇ ಸಾಧನೆ ಮಾಡುವುದಕ್ಕೆ ಧೈರ್ಯ ಮತ್ತು ಸಂಕಲ್ಪ ಬೇಕು. ಉಡುಪಿಯ ಕುವರಿ ತಾನು ಕಲಿತ ಕಾಲೇಜಿನಲ್ಲಿಯೇ ಈ ವಿನೂತನ ಸಾಧನೆಯತ್ತ ಮುನ್ನುಗ್ಗಿರುವುದು ವಿಶೇಷ. ಅವರ ಸಂಕಲ್ಪಕ್ಕೆ ಯಶಸ್ಸು ಸಿಗಲಿ” ಎಂದು ಶುಭ ಹಾರೈಸಿದರು. ಕಲಾಗುರು ಶ್ರೀಧರ ರಾವ್ ಬನ್ನಂಜೆ…

Read More

ಉಡುಪಿ : ಉಡುಪಿಯ ಚಿತ್ರಕಲಾ ಮಂದಿರ ಕಲಾಶಾಲೆಯಲ್ಲಿ ಚಿತ್ರಕಲೆಯ ಬಗೆಗಿನ ಕಲಾ ಪದವಿಯನ್ನು 2002-2007ರ ಸಾಲಿನಲ್ಲಿ ಪೂರೈಸಿದ ಕಲಾವಿದರ ತಂಡವು 18 ವರ್ಷಗಳ ನಂತರ ಮತ್ತೊಮ್ಮೆ ಜೊತೆ ಸೇರುತ್ತ ತಾವು ಕಲಿತ ಕಲಾಶಾಲೆಯಲ್ಲಿಯೇ ‘ಸಂಗಮ’ ಸಮೂಹ ಚಿತ್ರಕಲೆ ಪ್ರದರ್ಶನ ಹಾಗೂ ಗುರುವಂದನೆ ಕಾರ್ಯಕ್ರಮ ನಡೆಸಲು ಯೋಜಿಸಿದೆ. ಈ ಕಲಾಪ್ರದರ್ಶನವು ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯಿರುವ ಕಲಾಶಾಲೆಯಲ್ಲಿನ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ದಿನಾಂಕ 23 ಆಗಸ್ಟ್ 2025ರ ಶನಿವಾರದಂದು ಪೂರ್ವಾಹ್ನ 10-30ಕ್ಕೆ ಮಧುರಂ ವೈಟ್ ಲೋಟಸ್‌ನ ಆಡಳಿತ ನಿರ್ದೇಶಕರಾದ ಅಜಯ್ ಪಿ. ಶೆಟ್ಟಿಯವರಿಂದ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಸ್ಮರಣಿಕಾ ಸಂಸ್ಥೆಯ ಸಂಸ್ಥಾಪಕರಾದ ದಿವಾಕರ್ ಸನಿಲ್ ಹಾಗೂ ಕಲಾಶಾಲೆಯ ನಿರ್ದೇಶಕರಾದ ಡಾ. ನಿರಂಜನ್ ಯು.ಸಿ.ಯವರು ಉಪಸ್ಥಿತರಿರುತ್ತಾರೆ. ಇದೇ ಸಂದರ್ಭದಲ್ಲಿ ತಮಗೆ ಕಲಿಸಿದ ಗುರುಗಳಿಗೆ ಗುರುವಂದನೆ ಸಲ್ಲಿಸುವ ಸನ್ಮಾನ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಗುರುಗಳಾಗಿರುವ ಕಲಾಭೀಷ್ಮ ದಿ. ಕೆ.ಎಲ್. ಭಟ್‌ರವರ ಸಂಸ್ಮರಣೆ, ಕಲಾವಿದ ಗುರುಗಳಾದ ವಿಶ್ವೇಶ್ವರ ಪರ್ಕಳ, ಡಾ. ನಿರಂಜನ್‌ಯು.ಸಿ., ಡಾ. ವಿಶ್ವನಾಥ ಎ.ಎಸ್., ಬಸವರಾಜಕುತ್ನಿ,…

Read More

ಹೊಸದುರ್ಗ : ಕನ್ನಡ ಸಾಹಿತ್ಯ ಪರಿಷತ್ ಹೊಸದುರ್ಗ ತಾಲೂಕು ಇದರ ವತಿಯಿಂದ ಸೆಪ್ಟಂಬರ್ ಎರಡನೇ ವಾರದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಕವಿಗೋಷ್ಠಿಗೆ ಚಿತ್ರದುರ್ಗ ಜಿಲ್ಲೆಯ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಎಂ.ಆರ್. ಶಾಂತಪ್ಪ ಮತ್ತು ಕಾರ್ಯದರ್ಶಿಗಳು ತಿಳಿಸಿದ್ದಾರೆ. ದಿನಾಂಕ 14 ಸೆಪ್ಟೆಂಬರ್ 2025ರಂದು ಭಾನುವಾರ ಬೆಳಿಗ್ಗೆ 11-30 ಗಂಟೆಗೆ ಜಿಲ್ಲಾಮಟ್ಟದ ಕವಿಗೋಷ್ಠಿಯನ್ನು ನಡೆಸಲು ಉದ್ದೇಶಿಸಿದ್ದು, ಭಾಗವಹಿಸುವ ಜಿಲ್ಲೆಯ ಕವಿಗಳು ಸೆಪ್ಟೆಂಬರ್ 05ರೊಳಗೆ ತಾವು ವಾಚನ ಮಾಡಲಿರುವ ಒಂದು ಕವಿತೆ ಹಾಗೂ ಭಾವಚಿತ್ರದೊಂದಿಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಟಿ.ಬಿ. ಸರ್ಕಲ್, ಪ್ರಮುಖ ರಸ್ತೆ, ಹೊಸದುರ್ಗ 577527 ಚಿತ್ರದುರ್ಗ ಜಿಲ್ಲೆ ಇಲ್ಲಿಗೆ ಅಂಚೆ ಮತ್ತು ಕೊರಿಯರ್ ಮೂಲಕ ಕಳುಹಿಸಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದ್ದು, ಹೆಚ್ಚಿನ ಮಾಹಿತಿಗೆ ಕಾರ್ಯದರ್ಶಿಗಳಾದ ಡಾ. ಚಂದ್ರು ಕಲಾವಿದ ಮೊಬೈಲ್ ನಂಬರ್ 9902851319 ಮತ್ತು ಎಂ.ಎಸ್. ರಮೇಶ್ ಮತ್ತೋಡು 7353933539 ಉಪಾಧ್ಯಕ್ಷರಾದ ನಾಗತಿಹಳ್ಳಿ ಮಂಜುನಾಥ್ ಮೊಬೈಲ್ ನಂಬರ್ 9986994558…

Read More

ಉಡುಪಿ : ಶ್ರೀ ಕೃಷ್ಣ ಮಠ ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಪ್ರಯುಕ್ತ ದಿನಾಂಕ 17 ಆಗಸ್ಟ್ 2025ರಂದು ಉಡುಪಿಯಲ್ಲಿ ಪುತ್ತೂರು ಶ್ರೀ ಭಗವತೀ ಯಕ್ಷಕಲಾ ಬಳಗ ಇವರ ವತಿಯಿಂದ ಯಕ್ಷಗಾನಾರ್ಪಣೆ ಕಾರ್ಯಕ್ರಮ ನಡೆಯಿತು. ಪರ್ಯಾಯ ಪೀಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿ, “ಶ್ರೀ ಭಗವತೀ ಯಕ್ಷಕಲಾ ಬಳಗ ಸಂಸ್ಥೆಯು ಮಾಡುತ್ತಿರುವ ಯಕ್ಷಗಾನಾರ್ಪಣೆಯು ಶ್ರೀಕೃಷ್ಣನ ಜನ್ಮಾಷ್ಟಮಿಯ ಸಂಭ್ರಮ” ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಯಕ್ಷಗಾನ ಕಲೆ ಒಂದು ದೈವೀಕಲೆ, ಆಕರ್ಷಣೀಯ ಕಲೆ ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಅದು ಇಂದಿನ ಪೀಳಿಗೆಯಿಂದ ಆಗಬೇಕು. ಮಕ್ಕಳು ತಂದೆ ತಾಯಿ ಮತ್ತು ಗುರುವನ್ನು ಗೌರವಿಸಬೇಕು. ಅಂತಹ ಸಂಸ್ಕಾರ ಸಂಸ್ಕೃತಿ ಯಕ್ಷಗಾನ ಕಲೆಯಿಂದ ಸಿಗುತ್ತದೆ” ಎಂದು ಹೇಳಿದರು. ಶ್ರೀ ಭಗವತೀ ಯಕ್ಷಕಲಾ ಬಳಗದ ಅಧ್ಯಕ್ಷ ಪ್ರಮೋದ್ ತಂತ್ರಿ…

Read More

ತೀರ್ಥಹಳ್ಳಿ : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ತಾಲೂಕು ಸಮಿತಿ ತೀರ್ಥಹಳ್ಳಿ ಶಿವಮೊಗ್ಗ ಜಿಲ್ಲೆ ಇವರ ವತಿಯಿಂದ ದಿನಾಂಕ 25 ಆಗಸ್ಟ್ 2025ರಂದು ಬೆಳಗ್ಗೆ 10-30 ಗಂಟೆಗೆ ತೀರ್ಥಹಳ್ಳಿಯ ಕನ್ನಡ ಭವನದಲ್ಲಿ ‘ವಿಶ್ವ ಜಾನಪದ ದಿನಾಚರಣೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಜಾನಪದ ಪರಿಷತ್ತು ತೀರ್ಥಹಳ್ಳಿ ಇದರ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಜಯಶೀಲ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ ಇದರ ಅಧ್ಯಕ್ಷರಾದ ಟಿ.ಕೆ. ರಮೇಶ್ ಶೆಟ್ಟಿ ಇವರು ಉದ್ಘಾಟನೆ ಮಾಡಲಿದ್ದಾರೆ. ಸಂಸ್ಕೃತಿ ಚಿಂತಕರಾದ ನೆಂಪೆ ದೇವರಾಜ್ ಇವರು ಉಪನ್ಯಾಸ ನೀಡಲಿದ್ದು, ಇದೇ ಸಂದರ್ಭದಲ್ಲಿ ಗಾಯಕಿ ಶ್ರೀಮತಿ ಐ.ಎಂ. ಸ್ನೇಹಲೋಕ ದೇವಂಗಿ ಇವರನ್ನು ಸನ್ಮಾನಿಸಲಾಗುವುದು.

Read More

ಮಂಗಳೂರು : ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ಣಾಟಕ ಇದರ ಮಹಾಸಭೆಯು ದಿನಾಂಕ 17 ಆಗಸ್ಟ್ 2025ರಂದು ಮೂಡಬಿದರೆ ಸಮಾಜ ಮಂದಿರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಆಮಂತ್ರಣ ಪರಿವಾರದ ಜಿಲ್ಲಾಧ್ಯಕ್ಷರಾದ ನಿರೀಕ್ಷಿತಾ ಮಂಗಳೂರು ಇವರು ವಹಿಸಿದ್ದರು. ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಮಾತಾನಾಡಿ ಒಂದು ವರ್ಷದ ಕಾರ್ಯಕ್ರಮ ಪ್ರಗತಿ ಮತ್ತು ಎಲ್ಲಾ ಪದಾಧಿಕಾರಿಗಳ ಸರ್ವ ರೀತಿಯ ಸಹಕಾರವನ್ನು ನೆನೆದು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳ ನೂತನ ಸಮಿತಿ ರಚಿಸುವ ಬಗ್ಗೆ ಮಾತಾನಾಡಿ ಅಭಿಪ್ರಾಯ ಪಡೆಯಲಾಯಿತು. ಜಿಲ್ಲಾಧ್ಯಕ್ಷರಾದ ನಿರೀಕ್ಷಿತಾ ಮಂಗಳೂರು ಮುಂದಿನ ಬದಲಾವಣೆ ಕುರಿತು ಒಪ್ಪಿಗೆ ಸೂಚಿಸಿ ಈವರೆಗೆ ಎಲ್ಲರೂ ತಮ್ಮ ಮನೆಯವರಂತೆ ಪ್ರೀತಿಯ ಸಹಕಾರವನ್ನು ಸ್ಮರಿಸಿ ಮುಂದೆಯ ಉತ್ತಮ ಸಹಕಾರ ನೀಡುವುದಾಗಿ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಅಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ನೂತನ ಅಧ್ಯಕ್ಷರಾಗಿ ಅನುಭವಿ ಸಾಹಿತಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿರುವ ವಿಂಧ್ಯಾ ಎಸ್. ರೈ ಕಡೇಶಿವಾಲಯ ಮತ್ತು ನೂತನ ಉಪಾಧ್ಯಕ್ಷರಾಗಿ ಉಪನ್ಯಾಸಕಿ ಹಾಗೂ…

Read More

ತೀರ್ಥಹಳ್ಳಿ : ನಟಮಿತ್ರರು ಹವ್ಯಾಸಿ ಕಲಾ ತಂಡದ ಆಶ್ರಯದಲ್ಲಿ ನಟಮಿತ್ರರು ತಂಡದ ಹಿರಿಯ ಕಿರಿಯ ಕಲಾವಿದರ ಸಮ್ಮಿಲನದಲ್ಲಿ ತೀರ್ಥಹಳ್ಳಿಯ ಶ್ರೀ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ದಿನಾಂಕ 24 ಮತ್ತು 25 ಆಗಸ್ಟ್ 2025ರಂದು ಸಂಜೆ 6-30 ಗಂಟೆಗೆ ‘ಆ ಊರು ಈ ಊರು’ ಎನ್ನುವ ವಿಭಿನ್ನ ಶೈಲಿಯ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ನಟಮಿತ್ರರು ತಂಡದ ಅಧ್ಯಕ್ಷ ಸಂದೇಶ್ ಜವಳಿಯವರು ತಿಳಿಸಿದ್ದಾರೆ. ದಿನಾಂಕ 20 ಆಗಸ್ಟ್ 2025ರಂದು ಗೋಪಾಲಗೌಡ ರಂಗ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ನಾಟಕದ ಪೋಸ್ಟರ್ ಗಳನ್ನು ಸಹ ಕಲಾವಿದರುಗಳ ಜೊತೆಗೂಡಿ ಬಿಡುಗಡೆಗೊಳಿಸಿ ಮಾತನಾಡಿದ ಸಂದೇಶ್ ಜವಳಿ “ಈ ನಾಟಕದ ರಚನೆಯನ್ನು ಡಾ. ಜಿ.ಬಿ. ಜೋಷಿ (ಜಡಭರತ)ಯವರು ಮಾಡಿದ್ದು, ನಾಡಿನ ಖ್ಯಾತ ರಂಗಕರ್ಮಿಗಳಲ್ಲಿ ಒಬ್ಬರಾಗಿರುವ ಹುಲಗಪ್ಪ ಕಟ್ಟೀಮನಿಯವರು ವಿನ್ಯಾಸ ಮತ್ತು ನಿರ್ದೇಶನ ಮಾಡಲಿದ್ದಾರೆ. ಶಿವಕುಮಾರ್ ಟಿ‌.ಆರ್. ಇವರ ಸಹ ನಿರ್ದೇಶನ, ಅರವಿಂದ ಟಿ.ಆರ್. ಇವರ ರಂಗ ಸಜ್ಜಿಕೆ, ಗುರುರಾಜ್ ಪಿ.ವಿ. ಇವರ ಪ್ರಸಾಧನ ಮತ್ತು ಹರಿವಿನಾಯಕ ಇವರ ಸಂಗೀತ…

Read More

ಬಂಟ್ವಾಳ : ಇಂಟಾಕ್ ಮಂಗಳೂರು ಅಧ್ಯಾಯ, ಎಚ್.ಇ.ಸಿ.ಎಸ್. ಇಂಟಾಕ್ ಮತ್ತು ಇಂಟಾಕ್ ಹೆರಿಟೇಜ್ ಕ್ಲಬ್, ಸರಕಾರಿ ಪ್ರೌಢಶಾಲೆ, ಮಂಚಿ ಇವರ ಸಹಯೋಗದಲ್ಲಿ ಶಂಕರ ಕೊರಗ ಗುತ್ತಕಾಡು ಮತ್ತು ಸುಪ್ರಿಯಾ ಇವರಿಂದ ಶಾಲಾ ಮಕ್ಕಳಿಗಾಗಿ ಒಂದು ದಿನದ “ಸಾಂಪ್ರದಾಯಿಕ ಬುಟ್ಟಿ ತಯಾರಿಕಾ ಕಾರ್ಯಾಗಾರ”ವನ್ನು ದಿನಾಂಕ 23 ಆಗಸ್ಟ್ 2025ರಂದು ಬೆಳಿಗ್ಗೆ 09-30ರಿಂದ ಸಂಜೆ 4-00ರವರೆಗೆ ಬಂಟ್ವಾಳ ತಾಲೂಕು ಮಂಚಿ ಕೊಳ್ಳಾಡು ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ರೇಶ್ಮಾ ಶೆಟ್ಟಿ – 78992 31166 ಮತ್ತು ತಾರಾನಾಥ ಕೈರಂಗಳ – 98448 20979 ಸಂಖ್ಯೆಯನ್ನು ಸಂಪರ್ಕಿಸಿರಿ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಶಂಕರವರು ಕಿನ್ನಿಗೋಳಿ ಸಮೀಪದ ಗುತ್ತಕಾಡು ಎಂಬ ಊರಿನಲ್ಲಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಕೊರಗ ಸಮುದಾಯದವರಾಗಿದ್ದು, ಸುಮಾರು 20 ವರುಷಗಳ ಹಿಂದೆ ಕಿನ್ನಿಗೋಳಿ ಪರಿಸರದಲ್ಲಿನ ಕೊರಗ ಮಹಿಳಾ ವಿವಿಧೋದ್ದೇಶ ಸಹಕಾರಿ ಸೊಸೈಟಿಯಲ್ಲಿ ಬುಟ್ಟಿ ತಯಾರಿಕೆಯಲ್ಲಿ ತರಬೇತುದಾರರಾಗಿ ಹಾಗೂ ವ್ಯಾಪಾರಿಯಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿರುತ್ತಾರೆ. ಸಿಬ್ಲ, ಹೂವಿನ ಬುಟ್ಟಿ, ಹೂದಾನಿ ಹಾಗೂ…

Read More