Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ದ್ರಾವಿಡ ಭಾಷಾ ಅನುವಾದಕರ ಸಂಘ (ಡಿ.ಬಿ.ಟಿ.ಎ.)ದ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಡಿ.ಬಿ.ಟಿ.ಎ. ಅನುವಾದ ಪ್ರಶಸ್ತಿಗೆ ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎ. ಮೋಹನ ಕುಂಟಾರ್ ಆಯ್ಕೆಯಾಗಿದ್ದಾರೆ ಎಂದು ಡಿಬಿಟಿಎ ಸಂಘದ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ತಿಳಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಮಲಯಾಳಂ ಸಾಹಿತಿ ತಕಳಿ ಶಿವಶಂಕರ ಪಿಳ್ಳೆ ಅವರ ಪ್ರಸಿದ್ಧ ಕಾದಂಬರಿ ‘ಚೆಮ್ಮೀನ್’ನ ಕನ್ನಡ ಅನುವಾದಕ್ಕೆ ಪ್ರಶಸ್ತಿ ಲಭಿಸಿದೆ. ಡಿ.ಬಿ.ಟಿ.ಎ. ವತಿಯಿಂದ ನೀಡುತ್ತಿರುವ ಈ ಪ್ರಶಸ್ತಿಯು ರೂ.11,111/- ನಗದು, ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 26 ಸೆಪ್ಟೆಂಬರ್ 2025ರಂದು ನಯನ ಸಭಾಂಗಣದಲ್ಲಿ ಜರುಗಲಿದೆ.
ಮಂಗಳೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಸಂಸ್ಥೆಯ 30ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ‘ಮೂಕಾಂಬಿಕಾ ಮೂವತ್ತರ ಮಾರ್ದನಿ’ ಶೀರ್ಷಿಕೆಯಲ್ಲಿ ಮಂಗಳೂರಿನ ಕಲಾಸೂರ್ಯ ನೃತ್ಯಾಲಯ ಪ್ರಸ್ತುತ ಪಡಿಸುವ ‘ಕಲಾಭವ -02’ ಪ್ರಸ್ತುತಿಯನ್ನು ದಿನಾಂಕ 13 ಸೆಪ್ಟೆಂಬರ್ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಜೈಲ್ ರೋಡ್, ಮೊದಲನೇ ಮಹಡಿ ಸುಬ್ರಹ್ಮಣ್ಯ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ. ಸುಬ್ರಹ್ಮಣ್ಯ ಸಭಾದ ಅಧ್ಯಕ್ಷರಾದ ಎ.ಪಿ. ಕೃಷ್ಣ ಇವರು ಅಭ್ಯಾಗತರಾಗಿ ಭಾಗವಹಿಸಲಿದ್ದು, ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು ಇವರ ಶಿಷ್ಯೆ ಪ್ರಣಮ್ಯ ಪಾಲೆಚ್ಚಾರ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಉಡುಪಿ : ತುಳು ಕೂಟ ಉಡುಪಿ (ರಿ.) ಇದರ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು, ದಿನಾಂಕ 11 ಸೆಪ್ಟೆಂಬರ್ 2025ರಂದು ನಡೆದ ಸಭೆಯಲ್ಲಿ ಪತ್ರಕರ್ತ ಜನಾರ್ದನ್ ಕೊಡವೂರು ಚುನಾವಣಾ ಅಧಿಕಾರಿಯ ನೆಲೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ಗೌರವ ಸಲಹೆಗಾರರಾಗಿ ಉಡುಪಿ ವಿಶ್ವನಾಥ ಶೆಣೈ, ಗೌರವಾಧ್ಯಕ್ಷರಾಗಿ ಭಾಸ್ಕರಾನಂದ ಕುಮಾರ್, ಅಧ್ಯಕ್ಷರಾಗಿ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷರಾಗಿ ಭುವನಪ್ರಸಾದ್ ಹೆಗ್ಡೆ, ದಿವಾಕರ ಸನಿಲ್, ಶೋಭಾ ಶೆಟ್ಟಿ, ವಿ.ಕೆ. ಯಾದವ್, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ್ ಕಿದಿಯೂರ್, ಜೊತೆ ಕಾರ್ಯದರ್ಶಿಯಾಗಿ ಜ್ಯೋತಿ ದೇವಾಡಿಗ, ಸಂತೋಷ್ ಕುಮಾರ್, ಮೋಹನ್ ಶೆಟ್ಟಿ ಮೂಡನಿಡಂಬೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ., ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ ಶೆಟ್ಟಿ ತೋನ್ಸೆ, ಉದಯ ಕುಮಾರ್ ತೆಂಕನಿಡಿಯೂರ್, ಶಿಲ್ಪಾ ಜೋಷಿ ಆಯ್ಕೆಯಾದರು. ತುಳು ಕೂಟದ ವಿವಿಧ ವಿಭಾಗಗಳಿಗೂ ಸಂಚಾಲಕರು ಹಾಗೂ ಪದಾಧಿಕಾರಿಗಳನ್ನು ನೇಮಿಸಲಾಯಿತು. ತುಳುಮಿನದನದ ಸಂಚಾಲಕರಾಗಿ ದಯಾನಂದ ಕೆ. ಕಪ್ಪೆಟ್ಟು, ಕೆಮ್ತೂರು ತುಳು ನಾಟಕ ಪರ್ಬದ ಸಂಚಾಲಕರಾಗಿ ಪ್ರಭಾಕರ ಭಂಡಾರಿ, ನಿಟ್ಟೂರು, ತುಳು ಭಾವಗೀತೆ ಸ್ಪರ್ಧೆಯ ಸಂಚಾಲಕರಾಗಿ…
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸತ್ಯ ಸಾರಮಾನಿ ಯಕ್ಷಗಾನ ಕಲಾ ಮಂಡಳಿ ಮಿಜಾರ್ ಇವರ ಜಂಟಿ ಆಶ್ರಯದಲ್ಲಿ ತುಳು ಯಕ್ಷಗಾನ ಪ್ರದರ್ಶನವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ತುಳು ಭವನದ ಸಿರಿ ಚಾವಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಬುದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ತುಳು ನಾಡಿನ ಅವಳಿ ವೀರರ ಪಾಡ್ದನ ಸಾಹಿತ್ಯ ಆಧಾರಿತ ಅಮರ ಕಥೆ ‘ಕಾರ್ನಿಕದ ಕಾನದ ಕಟದೆರ್’ ಪ್ರಸಂಗದ ಯಕ್ಷಗಾನದ ಹಿಮ್ಮೇಳದಲ್ಲಿ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಮತ್ತು ಚಂದ್ರಶೇಖರ ಕಕ್ಕೆಪದವು ಭಾಗವತರಾಗಿ, ಆನಂದ ಪಡ್ರೆ ಚಂಡೆಯಲ್ಲಿ, ಗುರುಪ್ರಸಾದ್ ಬೊಳಿಂಜಡ್ಕ ಮದ್ದಲೆಯಲ್ಲಿ ಮತ್ತು ರಾಮ ಬಿ. ಅರಳ ಚಕ್ರತಾಳದಲ್ಲಿ ಸಹಕರಿಸಲಿದ್ದಾರೆ.
ವಿದುಷಿ ಸೌಮ್ಯಶ್ರೀ ಇಂದು ನಡೆದ ತನ್ನ ರಂಗಪ್ರವೇಶದ ಮುದವಾದ ಶುಭ ಮುಂಜಾನೆಯಲ್ಲಿ ತನ್ನ ಸಾತ್ವಿಕಾಭಿನಯದ ಸೊಬಗಿನ ನೃತ್ಯವಲ್ಲರಿಯಿಂದ ಗಮನ ಸೆಳೆದಳು. ‘ದಿ ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್’ -ನೃತ್ಯಸಂಸ್ಥೆಯ ನೃತ್ಯಗುರು ಶ್ರೀಮತಿ ಅಕ್ಷರ ಭಾರದ್ವಾಜ್ ಅವರ ಬದ್ಧತೆಯ ಉತ್ತಮ ಮಾರ್ಗದರ್ಶನದಲ್ಲಿ ಅವಳು, ನಗರದ ಎ.ಡಿ.ಎ. ರಂಗಮಂದಿರದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿ ‘ಮಾರ್ಗಂ’ ಸಂಪ್ರದಾಯದ ಹಲವು ಕೃತಿಗಳನ್ನು ಸಾಕ್ಷಾತ್ಕರಿಸಿ ಕಲಾರಸಿಕರ ಮೆಚ್ಚುಗೆ ಗಳಿಸಿದಳು. ಕರ್ನಾಟಕದ ಭರತನಾಟ್ಯ ಮೈಸೂರು ಪರಂಪರೆಯ ಶ್ರೀಮಂತಿಕೆಯನ್ನು ಒಳಗೊಂಡಿರುವ ‘ಜಯ ಜಾನಕೀ ರಮಣ’ – ‘ತೋಡಯ ಮಂಗಳಂ’ (ರಚನೆ- ಭದ್ರಾಚಲಂ ರಾಮದಾಸರು) ಶ್ರೀರಾಮನಿಗೆ ಈ ಮಂಗಳಗೀತೆಯ ಮೂಲಕ ‘ಪುಷ್ಪಾಂಜಲಿ’ಯನ್ನು ಅರ್ಪಿಸಿ, ತನ್ನ ಪ್ರಸ್ತುತಿಯನ್ನು ಶುಭಾರಂಭಿಸಿದಳು ಕಲಾವಿದೆ. ನಂಜನಗೂಡು ಪರಂಪರೆಯನ್ನು ಒಳಗೊಂಡಿರುವ ‘ಅಷ್ಟದಿಕ್ಪಾಲಕ ಸ್ತೋತ್ರ’ದಲ್ಲಿ ಅಷ್ಟದಿಕ್ಪಾಲಕರನ್ನು ಆರಾಧಿಸಿ, ಪೂರ್ವದಲ್ಲಿ ಇಂದ್ರ, ಆಗ್ನೇಯದಲ್ಲಿ ಅಗ್ನಿ, ದಕ್ಷಿಣದಲ್ಲಿ ಯಮ, ನೈರುತ್ಯದಲ್ಲಿ ನ್ರಿತ್ತಿ, ಪಶ್ಚಿಮದಲ್ಲಿ ವರುಣ, ವಾಯುವ್ಯದಲ್ಲಿ ವಾಯು, ಉತ್ತರದಲ್ಲಿ ಕುಬೇರ, ಈಶಾನ್ಯದಲ್ಲಿ ಈಶಾನನಿಗೆ ಅವರ ದಿವ್ಯ ಸೊಗಸಾದ ಭಂಗಿಗಳಲ್ಲಿ ನಮನ ಸಲ್ಲಿಸಿದ್ದು ನಯನ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ‘ಮನೋಹರಿ ಪಾರ್ಥಸಾರಥಿ ಮನುಶ್ರೀ ದತ್ತಿ’ ಪ್ರಶಸ್ತಿಗೆ ಹಿರಿಯ ಬರಹಗಾರ್ತಿ ಎಲ್. ಗಿರಿಜಾ ರಾಜ್ ಇವರನ್ನು ಆಯ್ಕೆ ಮಾಡಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪುರಸ್ಕರಿಸಲು ಅತ್ತಿಮಬ್ಬೆ ಪ್ರತಿಷ್ಟಾನ ಟ್ರಸ್ಟ್ (ರಿ.) ಈ ಪುರಸ್ಕಾರವನ್ನು ಸ್ಥಾಪಿಸಿದ್ದು 2009ರಿಂದಲೂ ಇದು ನಿರಂತರವಾಗಿ ನಡೆದುಕೊಂಡು ಶಕ್ತ ಪರಂಪರೆ ರೂಪುಗೊಂಡಿದೆ. 2025ನೆಯ ಸಾಲಿನಲ್ಲಿ ಈ ಪುರಸ್ಕಾರಕ್ಕೆ ಪಾತ್ರವಾಗಿರುವ ಎಲ್. ಗಿರಿಜಾ ರಾಜ್ ಚಿತ್ರದುರ್ಗದಲ್ಲಿ ಜನಿಸಿ ಬೆಂಗಳೂರಿನಲ್ಲಿ ನೆಲೆಗೊಂಡವರು. ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿರುವ ಇವರ ಒಟ್ಟು ಹದಿನಾರು ಕೃತಿಗಳು ಅಚ್ಚಾಗಿದ್ದು ಕಥೆ-ಲೇಖನ ಸೇರಿದಂತೆ ಹಲವು ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಅಚ್ಚಾಗಿವೆ. ಲೇಖಕಿಯರ ಸಂಘವೂ ಸೇರಿದಂತೆ ಹಲವು ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನಾಡೋಜ ಡಾ. ಮಹೇಶ ಜೋಶಿಯವರ ನೇತೃತ್ವದಲ್ಲಿ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ದತ್ತಿದಾನಿಗಳ ಪರವಾಗಿ ಡಾ. ವರದಾ ಶ್ರೀನಿವಾಸ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಎಂ.…
ಬೆಂಗಳೂರು : ಕಪ್ಪಣ್ಣ ಅಂಗಳ ಇದರ ವತಿಯಿಂದ ರಮಾ ಭಾರದ್ವಾಜ್ ಇವರಿಂದ ‘ಅವತರಣ’ ನಾಟ್ಯದ ಕಥೆ ನೃತ್ಯ ಕಾರ್ಯಕ್ರಮವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಸಂಜೆ 06-30 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದ ಕಪ್ಪಣ್ಣ ಅಂಗಳದಲ್ಲಿ ಆಯೋಜಿಸಲಾಗಿದೆ.
ಮಡಿಕೇರಿ : ಗೋಣಿಕೊಪ್ಪಲಿನ ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಬಹುಭಾಷಾ ಕವಿಗೋಷ್ಠಿಯು ದಿನಾಂಕ 26 ಸೆಪ್ಟೆಂಬರ್ 2026ರ ಶುಕ್ರವಾರ ಬೆಳಿಗ್ಗೆ 10-00 ಗಂಟೆಗೆ ಗೋಣಿಕೊಪ್ಪಲು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸಲಾಗುವ ಶ್ರೀ ಕಾವೇರಿ ದಸರಾ ಕಲಾ ವೇದಿಕೆಯಲ್ಲಿ ಆಯೋಜಿಸಲಾಗಿದೆ. ಗೋಣಿಕೊಪ್ಪಲು ಬಹುಭಾಷಾ ಕವಿಗೋಷ್ಠಿ ಆಯೋಜನ ಸಮಿತಿಯ ಅಧ್ಯಕ್ಷರಾಗಿರುವ ಕೋಳೆರ ದಯಾ ಚಂಗಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಂಚಾಲಕರಾಗಿ ಶ್ರೀಮತಿ ಎಸ್.ಎಂ, ರಜನಿ, ಕಾರ್ಯದರ್ಶಿಯಾಗಿ ಶ್ರೀಮತಿ ಶೀಲಾ ಬೋಪಣ್ಣ, ಸಹಕಾರ್ಯದರ್ಶಿಯಾಗಿ ಟಿ.ಅರ್. ವಿನೋದ್, ನಿರ್ದೇಶಕರಾಗಿ ಶ್ರೀಮತಿ ಚಂದನಾ ಮಂಜುನಾಥ್, ಶ್ರೀಮತಿ ಓಮನ, ಶ್ರೀಮತಿ ಉಳುವಂಗಡ ಕಾವೇರಿ, ಜಗದೀಶ್ ಜೋಡುಬೀಟಿ, ಕೆ.ವಿ. ರಾಮಕೃಷ್ಣ, ಶ್ರೀ ಕಾವೇರಿ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸಂಯೋಜಕ ಎಂ.ಕೆ. ಚಂದನ್ ಕಾಮತ್, ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ ಮತ್ತು ಕನ್ನಡ ಸಾಹಿತ್ಯ ಪರಿಷತ್…
ಉಡುಪಿಯ ಪ್ರತಿಷ್ಠಿತ ಸಂಸ್ಥೆ ರಾಗ ಧನ (ರಿ.) ಇದರ ಆಶ್ರಯದಲ್ಲಿ ರಾಗರತ್ನಮಾಲಿಕೆ -40 ತಿಂಗಳ ಸರಣಿ ಕಾರ್ಯಕ್ರಮವು ಚೆನ್ನೈಯ ಭಾರದ್ವಾಜ್ ಸುಬ್ರಹ್ಮಣ್ಯಂ ಇವರ ಸಂಗೀತ ಕಛೇರಿಯೊಂದಿಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು. ಉತ್ತಮ ಶಾರೀರ ಭಾವಸ್ಪಷ್ಟತೆ, ಉಚ್ಚಾರ ಸ್ಪುಟತೆ, ಲಯ ಶುದ್ಧತೆಯಿಂದ ವಿದ್ವತ್ಪೂರ್ಣ ಕಚೇರಿ ನೀಡಿದವರು ಚೆನ್ನೈನ ಭಾರದ್ವಾಜ್ ಸುಬ್ರಹ್ಮಣ್ಯಂ. ಆರಂಭದಲ್ಲಿ ವಲಚಿ ನವರಾಗಮಾಲಿಕೆಯನ್ನು ಆದಿತಾಳದಲ್ಲಿ ಸುಂದರವಾಗಿ ಹಾಡಿ ಚರಣ ಭಾಗದಲ್ಲಿ ಬೇರೆ ಬೇರೆ ರಾಗಗಳಿಗೆ ಸ್ವರ ಪ್ರಸ್ತಾರವನ್ನು ಅಚ್ಚುಕಟ್ಟಾಗಿ ಹಾಕಿ ಹಾಡಿದರು. ಮುಂದೆ ಆರಭಿ ರಾಗದ ಚುಟುಕಾದ ರಾಗಾಲಾಪನೆ ‘ವಿಘ್ನೇಶ್ವರ ಶುಭಕಾರಕ’ ಕೃತಿಗೆ ಸ್ವರ ಪ್ರಸ್ತಾರವನ್ನು ನೀಡಿದರು. ತದನಂತರ ಶುದ್ಧಧನ್ಯಾಸಿ ರಾಗಾಲಾಪನೆ ‘ನಾರಾಯಣ ನಿನ್ನ’ ಪುರಂದರದಾಸರ ದೇವರ ನಾಮವು ಸ್ವರಪ್ರಸ್ತಾರದೊಂದಿಗೆ ಮೂಡಿ ಬಂದದು ಶ್ಲಾಘನೀಯವಾಗಿತ್ತು. ಮುಂದುವರಿದು ವೇಗವಾಗಿ ‘ಮಾಳವಿ’ ರಾಗದಲ್ಲಿ ‘ನೆನರುಂಚಿನ’ ಆದಿತಾಳದಲ್ಲಿ ಕೃತಿಯನ್ನು ಪ್ರಸ್ತುತಪಡಿಸಿದರು. ಕಛೇರಿ ಮುಂದುವರಿಯುತ್ತಾ ಭೈರವಿ ರಾಗ ಆಲಾಪನೆಯೂ ದೀರ್ಘವಾಗಿ ಒಂದೇ ಉಸಿರಿನಲ್ಲಿ ನಿಂತ ಪರಿ ಅನನ್ಯ. ‘ನನ್ನುಬ್ರೋವಲಲಿತ’ ಕೃತಿಯನ್ನು…
ಹೈದರಬಾದ್ : ಹೈದರಾಬಾದಿನಲ್ಲಿ ಸ್ಥಳೀಯ ಶಾಸಕರಾದ ಕಾಲೇರು ವೆಂಕಟೇಶ್ ಹಾಗೂ ಡಿಸಿಪಿ ರಾಹುಲ್ ಹೆಗ್ಡೆಯವರ ಉಪಸ್ಥಿತಿಯಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಇದರ 44ನೇ ಘಟಕದ ಉದ್ಘಾಟನಾ ಸಮಾರಂಭವು ದಿನಾಂಕ 10 ಸೆಪ್ಟೆಂಬರ್ 2025ರ ಬುಧವಾರದಂದು ನಡೆಯಿತು. ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕರು, ಸುಪ್ರಭಾತ ಗ್ರೂಪ್ಸ್ ಆಫ್ ಹೋಟೆಲ್ ಹೈದರಾಬಾದಿನ ಮಾಲೀಕರಾದ ಕೃಷ್ಣಮೂರ್ತಿ ಮಂಜ ಅವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರೆ ಶ್ರೀ ಎನ್. ಶ್ರೀಧರ್ ರಾವ್ ಗೌರವಾಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಟಿ. ಸತ್ಯನಾರಾಯಣ ಹತ್ತಾವರ ಮತ್ತು ಏ. ಜಯರಾಮ ಶೆಟ್ಟಿ, ಕಾರ್ಯದರ್ಶಿಯಾಗಿ ಜಿ. ರತ್ನಾಕರ್ ರೈ, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಸುಮತಿ ನಿರಂಜನ್ ರಾವ್ ಮತ್ತು ಕೋಶಾಧಿಕಾರಿಯಾಗಿ ಎನ್. ಕೆ. ರಮಾ ಮೂರ್ತಿಯವರು ಹಾಗೂ 18 ಮಂದಿ ಸದಸ್ಯರು ತಮ್ಮ ಸ್ಥಾನವನ್ನು ಅಲಂಕರಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣಮೂರ್ತಿ ಮಂಜ ಅವರು ಕಳೆದ ಯಕ್ಷದ್ರುವ ದಶಮ ಸಂಭ್ರಮಕ್ಕೆ ಹೈದರಾಬಾದಿನಿಂದ ಘೋಷಿಸಿದ ಹತ್ತು ಲಕ್ಷದ ಮೊತ್ತವನ್ನು ಸಹೃದಯಿ ದಾನಿಗಳ ಮೂಲಕ ಪಟ್ಲ ಸತೀಶ್ ಶೆಟ್ಟಿ ಅವರಿಗೆ…