Author: roovari

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ, ಚಿರಂತನ ಚ್ಯಾರಿಟೇಬಲ್ ಟ್ರಸ್ಟ್, ನಾಗರಿಕ ಸಲಹಾ ಸಮಿತಿ ಸುರತ್ಕಲ್ ಮತ್ತು ಸಪ್ತಕ ಬೆಂಗಳೂರು ಜೊತೆಯಾಗಿ ಸುರತ್ಕಲ್ ನಾಗಬನ ರೋಡ್ ಇಲ್ಲಿರುವ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ದಿನಾಂಕ 04 ಅಕ್ಟೋಬರ್ 2025ರಂದು ಭೈರಪ್ಪ ನಮನ, ಗಾಯನ, ವಾದನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿದ ಚಿಂತಕ ಡಾ. ಅಜಕ್ಕಳ ಗಿರೀಶ್ ಭಟ್ “ಬದುಕಿನಲ್ಲಿ ಎದುರಾದ ನೋವುಗಳನ್ನು ಎದುರಿಸಿ ಅನುಭವಗಳನ್ನು ಕಲಾ ಕೃತಿಯನ್ನಾಗಿಸಿ ಜನ ಮೆಚ್ಚುಗೆ ಪಡೆದ ಸಾಹಿತಿ ಡಾ. ಎಸ್.ಎಲ್. ಭೈರಪ್ಪರು ಜೀವನದ ಸತ್ಯ ಹಾಗೂ ಮೌಲ್ಯಗಳಿಗೆ ಮಹತ್ವವನ್ನು ನೀಡಿ ನುಡಿದಂತೆ ನಡೆದವರು. ನವ್ಯ ಸಾಹಿತ್ಯದ ಪ್ರಭಾವದ ಕಾಲದಲ್ಲಿ ವಿಭಿನ್ನವಾಗಿ ಕಲಾಕೃತಿಗಳನ್ನು ನೀಡಿದ ಭೈರಪ್ಪರು ನಮಗೆ ಹೆಚ್ಚು ಆಪ್ತರಾಗುತ್ತಾರೆ. ‘ಧರ್ಮಶ್ರೀ’ ಕಾದಂಬರಿಯಿಂದ ತೊಡಗಿ ‘ಉತ್ತರ ಕಾಂಡ’ದವರೆಗಿನ ಅವರ ಕೃತಿಗಳು ಅನನ್ಯ ಅನುಭವಗಳನ್ನು ನೀಡುತ್ತವೆ. ಹಿರಿದಾದ ಅನುಭವ, ವಸ್ತು ವೈವಿಧ್ಯ, ಕಲೆಗಾರಿಕೆ, ನಂಬಿದ ತತ್ವಗಳ ಕುರಿತು ಬದ್ಧತೆಗಳಿಂದ ವಿವಿಧ ನೆಲೆಗಳ ಕಾದಂಬರಿಗಳನ್ನು…

Read More

ಮಂಗಳೂರು : ಮಾಂಡ್‌ ಸೊಭಾಣ್‌ ಮತ್ತು ಸುಮೇಳ್‌ ಆಯೋಜಿಸಿದ ಅಂತರ ರಾಷ್ಟ್ರೀಯ ಸಂಗೀತ ದಿನ ಮತ್ತು ತಿಂಗಳ ವೇದಿಕೆ ಸರಣಿಯ 286ನೇ ಕಾರ್ಯಕ್ರಮವು ದಿನಾಂಕ 05 ಅಕ್ಟೋಬರ್ 2025ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಗೀತ ಶಿಕ್ಷಕಿ ಕಾರ್ಮೆಲಿಟಾ ಆಲ್ವಾರಿಸ್‌ “ಸಂಗೀತವು ಜೀವನವನ್ನು ಮಧುರಗೊಳಿಸುತ್ತದೆ. ಸಂಗೀತ ಶಿಕ್ಷಕಿಯಾಗುವ ದೊಡ್ಡ ಭಾಗ್ಯ ನನ್ನದು. ಕಳೆದ 40 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತದ ಧಾರೆಯೆರೆದಿದ್ದೇನೆ. ಸಂಗೀತ ಕಲಿಸುವಾಗ ನನಗೆ ಆತ್ಮತೃಪ್ತಿ ಸಿಕ್ಕಿದೆ ಹಾಗೂ ಇಂದು ಬಯಸದೆ ಈ ಸನ್ಮಾನ ಲಭಿಸಿದೆ.ʼʼ ಎಂದು ಸಂತಸ ವ್ಯಕ್ತ ಪಡಿಸಿದರು. ಮಾಂಡ್‌ ಸೊಭಾಣ್‌ ಅಧ್ಯಕ್ಷರಾದ ಲುವಿ ಪಿಂಟೊ ಸನ್ಮಾನ ನೆರವೇರಿಸಿದರು. ಸುಮೇಳ್‌ ಸಂಯೋಜಕಿ ರೈನಾ ಸಿಕ್ವೇರಾ ಪ್ರಸ್ತಾವಿಕ ನುಡಿಗಳನ್ನಾಡಿದರು. ಪ್ರೇಮಿ ಲೋಬೊ ಸನ್ಮಾನ ಪತ್ರ ವಾಚಿಸಿದರು. ಪದಾಧಿಕಾರಿಗಳಾದ ರೊನಿ ಕ್ರಾಸ್ತಾ, ಸುನಿಲ್ ಮೊಂತೇರೊ, ಕ್ಲಾರಾ ಪಿಂಟೊ ಮತ್ತು ಸನ್ಮಾನಿತರ ಪತಿ ವಿಲ್ಫ್ರೆಡ್‌ ಆಲ್ವಾರಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಶ್ಲಿನ್ ವಿಸ್ಮಯಾ ಲೋಬೊ ಕಾರ್ಯಕ್ರಮ ನಿರೂಪಣೆ ಮಾಡಿದರು. ಕೇರನ್‌…

Read More

ಬೆಂಗಳೂರು : ಕನ್ನಡದ ವಿಶಿಷ್ಟ ಬರಹಗಾರ ಮೊಗಳ್ಳಿ ಗಣೇಶ್‌ (62) ಇವರು ದಿನಾಂಕ 04 ಅಕ್ಟೋಬರ್ 2025ರಂದು ನಿಧನ ಹೊಂದಿದ್ದಾರೆ. ಈಗ ತಾನೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ನಿವೃತ್ತರಾಗಿ ಹೊಸ ಚಿಂತನೆಗಳಲ್ಲಿ ತೊಡಗಿಸಿಕೊಂಡಿದ್ದ ಇವರಿಂದ ಕನ್ನಡ ಸಾಹಿತ್ಯ ಇನ್ನೂ ಮಹತ್ವದ್ದನ್ನು ನಿರೀಕ್ಷಿಸುತ್ತಿತ್ತು. ಅವರ ಅಕಾಲಿಕ ಮರಣ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲಿಯೂ ದಲಿತ ಸಾಹಿತ್ಯದಲ್ಲಿ ದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ ಎಂದು ನಾಡೋಜ ಡಾ. ಮಹೇಶ ಜೋಶಿಯವರು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ. ‘ಬುಗುರಿ’ ಕಥೆಯ ಮೂಲಕ ಸಂಚಲನವನ್ನು ಉಂಟು ಮಾಡಿದ್ದ ಮೊಗಳ್ಳಿ ಕನ್ನಡಕ್ಕ ದಕ್ಕಿದ ಬಹಳ ಶಕ್ತಿಶಾಲಿ ಲೇಖಕ. ತಮ್ಮ ಆಳವಾದ ಚಿಂತನೆ ಮತ್ತು ಸೋಪಜ್ಞ ಭಾಷೆಯ ಮೂಲಕ ಕನ್ನಡಕ್ಕೆ ಹೊಸ ಕಸುವನ್ನು ತುಂಬಿದ್ದರು. ಅವರ ಕಥೆಗಳು ಇಂಗ್ಲೀಷ್‌ಗೆ ಅನುವಾದವಾಗಿದ್ದರೆ ಜಾಗತಿಕ ಪುರಸ್ಕಾರಗಳನ್ನು ಖಂಡಿತವಾಗಿಯೂ ಪಡೆಯುತ್ತಿದ್ದವು. ಆದಿಮ ಸಂವೇದನೆಯನ್ನು, ದಲಿತರ ನೋವುಗಳನ್ನು ಅವರಂತೆ ಹಿಡಿದಿಟ್ಟ ಇನ್ನೊಬ್ಬ ಲೇಖಕರಿಲ್ಲ. ಅವರು ಬಳಸುತ್ತಿದ್ದ ನುಡಿಗಟ್ಟು ಕೂಡ ನೋವಿನಲ್ಲಿ ಎದ್ದಿ ಬಂದಂತಿತ್ತು. ಬುಗುರಿ, ಅತ್ತೆ,…

Read More

ಉಡುಪಿ : ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಇವರನ್ನು 2025ನೇ ಸಾಲಿನ ‘ಕೇಶವ ಪ್ರಶಸ್ತಿ’ಗೆ ಆಯ್ಕೆ ಮಾಡಿರುವುದಾಗಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಪ್ರಶಸ್ತಿಯನ್ನು ದಿನಾಂಕ 18 ಅಕ್ಟೋಬರ್ 2025ರಂದು ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಇಪ್ಪತ್ತೈದು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಡಾ. ರಮಾನಂದ ಬನಾರಿಯವರು ಖ್ಯಾತ ಪ್ರಸಂಗಕರ್ತ ಕೀರಿಕ್ಕಾಡು ವಿಷ್ಣು ಭಟ್ಟ ಹಾಗೂ ಜಾನಪದ ಹಾಡುಗಾರ್ತಿ ಪರಮೇಶ್ವರಿ ಅಮ್ಮನವರ ಪುತ್ರನಾಗಿ 1940 ಜೂನ್ 4ರಂದು ಕಾಸರಗೋಡಿನ ಕೀರಿಕ್ಕಾಡಿನಲ್ಲಿ ಜನಿಸಿದರು. ಬನಾರಿಯವರು ವೃತ್ತಿಯಿಂದ ವೈದ್ಯರಾಗಿದ್ದು, ಪ್ರವೃತ್ತಿಯಿಂದ ಬರಹಗಾರರು ಮತ್ತು ತಾಳಮದ್ದಳೆ ಅರ್ಥಧಾರಿಗಳು. ಕಲ್ಲಿಕೋಟೆ ವೈದ್ಯಕೀಯ ಮಹಾವಿದ್ಯಾಲಯದಿಂದ ಎಂ.ಬಿ.ಬಿ.ಎಸ್. ಪದವೀಧರರು. ವೃತ್ತಿಯೊಂದಿಗೆ ಸುಮಾರು 20ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. 10ಕ್ಕೂ ಹೆಚ್ಚು ಸಂಪಾದಿತ ಕೃತಿಗಳು ಪ್ರಕಟವಾಗಿವೆ. ಅವುಗಳಲ್ಲಿ ಎಳೆಯರ ಗೆಳೆಯ (ಮಕ್ಕಳ ಕವನ ಸಂಕಲನ), ಕೊಳಲು, ನಮ್ಮಿಬ್ಬರ ನಡುವೆ, ನೆನಪುಗಳ ನೆರಳಿನಲ್ಲಿ,…

Read More

ಧರ್ಮಸ್ಥಳ : ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಹೂವಿನಕೋಲು ಅಭಿಯಾನವು ದಿನಾಂಕ 04 ಅಕ್ಟೋಬರ್ 2025ರಂದು ಧರ್ಮಸ್ಥಳದ ದೇಗುಲದಲ್ಲಿ ನಡೆಯಿತು. ಈ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಧರ್ಮಸ್ಥಳ ದೇಗುಲದ ಶ್ರೀಮತಿ ಹೇಮಾವತಿ ವೀರೇಂದ್ರ ಹೆಗ್ಗಡೆಯವರು “ನವರಾತ್ರಿಯ ಆಚರಣೆಯನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಯಶಸ್ವಿ ಕಲಾವೃಂದ ಹಳೆಯ ಯಕ್ಷ ಕಲಾ ಪ್ರಕಾರವಾದ ಹೂವಿನಕೋಲನ್ನು ನವರಾತ್ರಿಯ ಸಂದರ್ಭದಲ್ಲಿ ಕರಾವಳಿಯುದ್ದಕ್ಕೂ ಮನೆ ಮನೆಗಳಿಗೆ ತಂಡವನ್ನು ಕೊಂಡಯ್ದು ಮನೆಯ ಮನಗಳಿಗೆ ಹರಸಿ, ಪ್ರದರ್ಶಿಸುವ ಕಲೆ ಚಿತ್ತಾಕರ್ಷಕವಾದದ್ದು. ಕಲಿಕೆಯ ಜೊತೆಗೆ ಪೌರಾಣಿಕ ಕಥೆಯ ಸ್ತುತಿ ಎನ್ನುವುದು ಮನೆಗಳಲ್ಲಿ ಪಸರಿಸುವ ಕಾರ್ಯ ಹೆಚ್ಚು ಆಪ್ತವಾಗಿದೆ. ಮಕ್ಕಳ ನಿರರ್ಗಳ ಮಾತುಗಾರಿಕೆ ಹೂವಿನಕೋಲಿನಂತಹ ಕಲಾ ಪ್ರಕಾರದಲ್ಲಿ ಬೆಳೆದಿದೆ ಎನ್ನಬಹುದು. ಈ ತಂಡದಲ್ಲಿ ಭಾಗವಹಿಸಿದ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ” ಎಂದು ಅಭಿಪ್ರಾಯಪಟ್ಟರು. “ಪ್ರದರ್ಶನದ ಜೊತೆ ಜೊತೆಗೆ ಕಲಿಕೆಯನ್ನು ಒಳಗೊಂಡ ಈ ಪ್ರಕಾರ ಮಕ್ಕಳು ಸಾಂಸ್ಕೃತಿಕ ಕ್ಷೇತದಲ್ಲಿ ಬೆಳೆಯುವುದಕ್ಕೆ ಹೆಚ್ಚು ಪೂರಕ. ಮೊಬೈಲ್ ಯುಗದಲ್ಲಿಯೂ ಗಮನ ಸೆಳೆಯುವ ಈ ಕಲೆಯನ್ನು ಸಮಾಜದ ಗಣ್ಯರು ಪೋಷಿಸಬೇಕು”…

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ‘ಕಾವ್ಯಾಂ ವ್ಹಾಳೊ-7’ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ದಿನಾಂಕ 04 ಅಕ್ಟೋಬರ್ 2025ರಂದು ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಪ್ರಾಸ್ತಾವಿಕವಾಗಿ ಮಾತಾನಾಡಿ “ಕವಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಕಾಡೆಮಿಯು ಪ್ರತಿ ತಿಂಗಳು ಕವಿಗೋಷ್ಟಿಯನ್ನು ಹಮ್ಮಿಕೊಳ್ಳುತ್ತದೆ. ಇದು ಎಲ್ಲಾ ಯುವ ಕವಿಗಳಿಗೆ ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಲು ಅವಕಾಶವಾಗಲಿʼ ಎಂದು ಹೇಳಿದರು. ಖ್ಯಾತ ಹಿರಿಯ ಸಂಗೀತಗಾರರಾದ ಶ್ರೀ ಮುರಳೀಧರ್ ಕಾಮತ್ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇವರು ಮಾತನಾಡಿ, “ತುಂಬಾ ಜನರಿಗೆ ಸಂಗೀತದಲ್ಲಿ ಆಸಕ್ತಿ ಇದೆ. ಸಂಗೀತಕ್ಕೆ ತುಂಬಾ ಪ್ರೋತ್ಸಾಹ ಸಿಗುತ್ತಿದೆ. ಕೊಂಕಣಿಯಲ್ಲೂ ಸಂಗೀತ ಹಾಡುತ್ತೇನೆ ಎಂಬುದು ನನಗೆ ಹೆಮ್ಮೆಯ ವಿಷಯ” ಎಂದರು. ಪ್ರಮುಖ ಉಪಾನ್ಯಾಸಕರಾಗಿ ಆಗಮಿಸಿದ, ಸಾಹಿತಿ ಹಾಗೂ ನಾಟಕ ಬರಹಗಾರರಾದ ಫಾ. ಆಲ್ವಿನ್ ಸೆರಾವೊರವರು ಸಾಹಿತ್ಯದ ಬಗ್ಗೆ ಮಾತಾನಾಡಿ “ಸಾಹಿತ್ಯವು ಕೇವಲ ಕಾಲ್ಪನಿಕವಲ್ಲದೇ ಅನುಭವದಿಂದ ಬರುತ್ತದೆ. ಪ್ರತಿ ಕೆಲಸವು ಚಿಂತನೆಯಿಂದ ಪ್ರಾರಂಭವಾಗುತ್ತದೆ. ಶೃಂಗಾರ, ನವರಸವಿದ್ದಲ್ಲಿ ಮಾತ್ರ ಅದನ್ನು…

Read More

ಮಂಗಳೂರು :ಮಾಂಡ್‌ ಸೊಭಾಣ್‌ ಮತ್ತು ಸುಮೇಳ್‌ ನೀಡುವ ಅಂತರರಾಷ್ಟ್ರೀಯ ಸಂಗೀತ ದಿನದ ಸನ್ಮಾನವನ್ನು ಸಂಗೀತ ತರಬೇತುದಾರರಾದ ಮಂಗಳೂರಿನ ಕಾರ್ಮೆಲಿಟಾ ಆಲ್ವಾರಿಸ್‌ ಇವರಿಗೆ ಘೋಷಿಸಲಾಗಿದೆ. 05 ಆಕ್ಟೋಬರ್‌ 2025ರಂದು ಶಕ್ತಿನಗರದ ಕಲಾಂಗಣದಲ್ಲಿ ಸಂಜೆ 6.30 ಗಂಟೆಗೆ ನಡೆಯುವ ತಿಂಗಳ ವೇದಿಕೆ ಸರಣಿಯ 286 ನೇ ಕಾರ್ಯಕ್ರಮದಲ್ಲಿ ಈ ಸನ್ಮಾನ ನೆರವೇರಿಸಲಾಗುವುದು. ಮಾಂಡ್‌ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ರೊನಾಲ್ಡ್‌ ಕ್ರಾಸ್ತಾ, ಕೋಶಾಧಿಕಾರಿ ಸುನಿಲ್‌ ಮೊಂತೇರೊ, ಸುಮೇಳ್‌ ಸಂಯೋಜಕಿ ರೈನಾ ಸಿಕ್ವೇರಾ ಮತ್ತು ಖಜಾಂಚಿ ಕ್ಲಾರಾ ಪಿಂಟೊ ಉಪಸ್ಥಿತರಿದ್ದು ಸನ್ಮಾನ ನೆರವೇರಿಸುವರು. ತನ್ನ 9 ನೇ ವರ್ಷದಲ್ಲಿ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಇವರು ಮರಿಯಾಣ್‌ ಪಿಂಟೊ, ವಿಮಲಾ ಲೋಬೊ, ಗ್ಲೇಡಿಸ್‌ ಸಿಲ್ವರ್‌ ಇತ್ಯಾದಿ ಸಂಗೀತ ಶಿಕ್ಷಕರಿಂದ ವಯೊಲಿನ್‌, ಕೀ ಬೋರ್ಡ್‌ ಕಲಿತರು. ಲಂಡನ್ನಿನ ಪ್ರತಿಷ್ಟಿತ ಟ್ರಿನಿಟಿ ಕಾಲೇಜಿನಿಂದ ಉತ್ತೀರ್ಣರಾಗಿ, ಕಲಿಸಲು ಆರಂಭಿಸಿದರು. ಅವರಲ್ಲಿ ಎಲ್ಲಾ ವಯೋಮಾನದ ವಿದ್ಯಾರ್ಥಿಗಳು ಸಂಗೀತ ಕಲಿತಿದ್ದಾರೆ. ಅವರಿಂದ ಶಿಕ್ಷಣ ಪಡೆದ ಹಲವಾರು ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ…

Read More

ಮಂಗಳೂರು: ಶರನ್ನವರಾತ್ರಿ ಪ್ರಯುಕ್ತ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ‘ದಸರಾ ಕವಿಗೋಷ್ಠಿ – 2025’ ದಿನಾಂಕ 02 ಅಕ್ಟೋಬರ್ 2025 ರಂದು ನಡೆಯಿತು. ನವರಸ ರಂಜನೆಯ ಬಹುಭಾಷಾ ಕವಿಮೇಳದ ಅಧ್ಯಕ್ಷತೆ ವಹಿಸಿದ ಕವಿ, ಸಾಹಿತಿ ಮತ್ತು ಮಾಧ್ಯಮ ತಜ್ಞ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ “ದಸರಾ ಕನ್ನಡಿಗರ ನಾಡಹಬ್ಬ. ವಿಜಯನಗರ ಅರಸರ ಕಾಲದಿಂದಲೂ ಅದು ಕೇವಲ ಧಾರ್ಮಿಕ ಆಚರಣೆಯಾಗಿರದೆ ಅದರಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತಿತ್ತು.ಆಧುನಿಕ ಸಮಾಜದ ಸಂಭ್ರಮೋಲ್ಲಾಸ ಏನೇ ಇದ್ದರೂ ಈ ಉತ್ಸವ ನಡೆವಲ್ಲಿ ನಮ್ಮ ಸಾಹಿತ್ಯ- ಸಂಸ್ಕೃತಿಯ ಮೆರುಗು ನೀಡಿ ದಸರಾವನ್ನು ಅರ್ಥಪೂರ್ಣವಾಗಿ ಆಚರಿಸುವ ಅಗತ್ಯವಿದೆ. ನವರಾತ್ರಿ ಧಾರ್ಮಿಕ ಹಬ್ಬ. ಹಬ್ಬಗಳಲ್ಲಿ ರಾಷ್ಟ್ರೀಯ, ನಾಡ ಹಬ್ಬ, ಜಾತಿ-ಧರ್ಮಗಳಿಗೆ ಸಂಬಂಧಿಸಿದವುಗಳಿವೆ. ಹಿಂದಿನ ಕಾಲದಲ್ಲೂ ಹಬ್ಬಗಳಿದ್ದವು. ಆಗ ಮಾಧ್ಯಮಗಳ ಸೌಕರ್ಯ ಈಗಿನಷ್ಟು ಇರಲಿಲ್ಲ. ಇಚ್ಛಾಶಕ್ತಿಯಿಂದ ನೈತಿಕ ನೆಲೆಯಲ್ಲಿ ಆಚರಣೆ ಇತ್ತು. ಹಬ್ಬ ಎನ್ನುವುದು ಮನುಕುಲವನ್ನು ಬೆಸೆಯುವ ಆಚರಣೆಯಾಗಬೇಕು. ಈ ಆಚರಣೆಗಳು ವಿಘಟನೆಯನ್ನು ಮಾಡುವುದಾಗಬಾರದು ಎಂಬ ಮರ್ಮವನ್ನು ನಾವೆಲ್ಲ ತಿಳಿಯಬೇಕು.…

Read More

ಬಾಗಲಕೋಟೆ : ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ಬಾಗಲಕೋಟೆ ಮತ್ತು ಮಹಿಳಾ ತಾಲೂಕು ಘಟಕ ಮುಧೋಳ ಹಾಗೂ ಲೋಕಾಪೂರ ಇವರ ವತಿಯಿಂದ ‘ಪ್ರಥಮ ಕನ್ನಡ ಜಾನಪದ ಮಹಿಳಾ ಸಮ್ಮೇಳನ -2025’ವನ್ನು ದಿನಾಂಕ 05 ಅಕ್ಟೋಬರ್ 2025ರಂದು ಬಾಗಲಕೋಟೆ ಲೋಕಾಪೂರದ ಎ.ಪಿ.ಎಂ.ಸಿ. ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀಮತಿ ಯಲ್ಲವ್ವ ರೊಡ್ಡಪ್ಪನವರ ಸಮ್ಮೇಳನಾಧ್ಯಕ್ಷರಾಗಿರುತ್ತಾರೆ. ಧ್ವಜಾರೋಹಣ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆಯೊಂದಿಗೆ ಪ್ರಾರಂಭವಾಗುವ ಈ ಸಮ್ಮೇಳನವನ್ನು ಕನ್ನಡ ಜಾನಪದ ಪರಿಷತ್ ಇದರ ರಾಜ್ಯಾಧ್ಯಕ್ಷರಾದ ಡಾ. ಎಸ್. ಬಾಲಾಜಿ ಇವರ ಅಧ್ಯಕ್ಷತೆಯಲ್ಲಿ ಸಚಿವರಾದ ಆರ್.ಬಿ. ತಿಮ್ಮಾಪೂರ ಇವರು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಸಚಿವರಾದ ಮುರರೇಶ ಆರ್. ನಿರಾಣಿ ಇವರು ‘ಜಾನಪದ ಸಿರಿ’ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಪಾರಿಜಾತ ಕಲಾನಿಧಿ ‘ಬರಗಿ ರಾಚಯ್ಯ’ ಕವನ ಸಂಕಲನ ಬಿಡುಗಡೆಯಾಗಲಿದೆ. ಮಧ್ಯಾಹ್ನ 12-00 ಗಂಟೆಗೆ ನಡೆಯುವ ಗೋಷ್ಠಿಯಲ್ಲಿ ‘ಸಮ್ಮೇಳನಾಧ್ಯಕ್ಷರ ಬದುಕು ಹಾಗೂ (ಸಾಧನೆ) ನಡೆದು ಬಂದ ದಾರಿ’ ಬಗ್ಗೆ ಸಾಹಿತಿ ಅನಿತಾ ರಾಮನಗೌಡ ಪಾಟೀಲ ವಿಷಯ ಮಂಡನೆ…

Read More

ಪುತ್ತೂರು :  ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿಯ ಪ್ರಧಾನ ಶಾಖೆಯಲ್ಲಿ ದಿನಾಂಕ 02 ಅಕ್ಟೋಬರ್ 2025ರ  ಗುರುವಾರ ವಿಜಯದಶಮಿ ಮತ್ತು ಗೆಜ್ಜೆ ಪೂಜೆ ಕಾರ್ಯಕ್ರಮ ಇಲ್ಲಿನ ಬರೆಕರೆ ವೆಂಕಟ್ರಮಣ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಆರಂಭದಲ್ಲಿ ಅಕಾಡೆಮಿ ವಿದ್ಯಾರ್ಥಿಗಳು ಬೃಹತ್ ನಟರಾಜ ವಿಗ್ರಹದ ಜೊತೆ ಆವರಣದಲ್ಲಿ ಮೆರವಣಿಗೆಯಲ್ಲಿ ಸಾಗಿ ಸಭಾಭವನ ಪ್ರವೇಶಿಸಿದರು. ಅಲ್ಲಿ ನಟರಾಜ ವಿಗ್ರಹ ಮತ್ತು ಗೆಜ್ಜೆಗೆ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್‌ ವಿಜಯದಶಮಿಯ ಗೆಜ್ಜೆ ಪೂಜೆ ನೆರವೇರಿಸಿದರು. ಮಹಾ ಮಂಗಳಾರತಿ ಬಳಿಕ ಪ್ರತಿ ವಿದ್ಯಾರ್ಥಿಗಳೂ ಗೆಜ್ಜೆ ಪ್ರದಾನ ಮಾಡಿ ಆಶೀರ್ವಾದ ಮಾಡಲಾಯಿತು. ಬಳಿಕ ಗೆಜ್ಜೆ ಧರಿಸಿದ ವಿದ್ಯಾರ್ಥಿಗಳು ಸಾಂಕೇತಿಕವಾಗಿ ನಟರಾಜನಿಗೆ ಹಾಗೂ ಗುರುವಿಗೆ ನೃತ್ಯ ನಮನ ಸಲ್ಲಿಸಿದರು. ಈ ಸಂದರ್ಭ ಹೊಸ ವಿದ್ಯಾರ್ಥಿಗಳ ಸೇರ್ಪಡೆಯೂ ನೆರವೇರಿತು. ಹಿರಿಯ ಪತ್ರಕರ್ತ ಪ್ರೊ. ವಿ. ಬಿ. ಅರ್ತಿಕಜೆ, ನೃತ್ಯೋಪಾಸನಾ ಕಲಾ ಅಕಾಡೆಮಿ ಅಧ್ಯಕ್ಷರಾದ ಮಂಜುನಾಥ್ ಪಿ. ಎಸ್., ಉಪಾಧ್ಯಕ್ಷ ಡಾ. ಕೃಷ್ಣ ಕುಮಾರ್, ಕಾರ್ಯದರ್ಶಿ ಆತ್ಮಭೂಷಣ್‌ ಮತ್ತಿತರರು ಉಪಸ್ಥಿತರಿದ್ದರು.

Read More