Author: roovari

ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಕೆನರಾ ಕಾಲೇಜಿನ ಸಭಾಂಗಣದಲ್ಲಿ ದಿನಾಂಕ 08-07-2024ರಂದು ಶ್ರೀಮತಿ ವೀಣಾ ಟಿ. ಶೆಟ್ಟಿಯವರ ಲೇಖನಗಳ ಸಂಗ್ರಹ ‘ಗೋಡೆಯ ಮೇಲಿನ ಚಿತ್ತಾರ’ ಕೃತಿ ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿದ ಬರಹಗಾರ್ತಿ, ಅನುವಾದಕರಾದ ಡಾ. ಪಾರ್ವತಿ ಜಿ. ಐತಾಳ್ ಇವರು “ಎಡ ಬಲ ಪಂಥದಿಂದಾಗಿ ಸಾಹಿತ್ಯ ಕ್ಷೇತ್ರ ಸೊರಗುತ್ತಿದೆ, ಇಲ್ಲಿ ಪ್ರಾಮಾಣಿಕತೆಗಿಂತ ಪ್ರತಿಷ್ಠೆಯೇ ಮುಖ್ಯವಾಗುತ್ತಿದೆ. ಅರ್ಹತೆಗೆ ಪುರಸ್ಕಾರ ಸಿಗುವ ಬದಲು ಪಂಥದ ಮೇಲೆ ನಿರ್ಧರಿತವಾಗುತ್ತದೆ. ಹಾಗಾಗಿ ಹೊಸ ಸಾಹಿತಿಗಳಲ್ಲಿ ಗೊಂದಲ ಮೂಡುತ್ತಿದೆ. ಭಾವನೆ ಹಾಗೂ ಸಂವೇದನಾಶೀಲತೆಗೆ ‘ಗೋಡೆಯ ಮೇಲಿನ ಚಿತ್ತಾರ’ ವೇದಿಕೆಯಾಗಿದೆ. ನಿಜ ಜೀವನ ಹಾಗೂ ಪ್ರಕೃತಿಯೊಂದಿಗಿನ ಸಂಬಂಧ ತೆರೆದುಕೊಂಡಿದೆ. ಕೃತಿಯಲ್ಲಿ ಲೇಖಕಿಯ ವ್ಯಕ್ತಿತ್ವಕ್ಕೆ ಅಭಿವ್ಯಕ್ತಿ ಸಿಕ್ಕಿದೆ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕಲು ಕಾರಣವಾಗಿದೆ. ಸರಳವಾದ ಲಲಿತವಾದ, ಶಕ್ತಿಯುತವಾದ ಲೇಖನಗಳಿದ್ದು ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇಂತಹ ಮತ್ತಷ್ಟು ಸಾಹಿತ್ಯ ಕೃಷಿಯ ಅಗತ್ಯವಿದೆ” ಎಂದು ಹೇಳಿದರು. ಚಿಂತಕ ಡಾ. ಅರುಣ್ ಉಳ್ಳಾಲ ಅವರು ಕೃತಿ ಪರಿಚಯ…

Read More

ಕಾಸರಗೋಡು : ದಿ. ಕೊಡಗಿನ ಗೌರಮ್ಮನ ಮೊಮ್ಮಕ್ಕಳು ಹಾಗೂ ಹವ್ಯಕ ಮಹಾ ಮಂಡಲ ಮಾತೃ ಮಂಡಳಿ ಸಹಯೋಗದಲ್ಲಿ ಹವ್ಯಕ ಮಹಿಳೆಯರಿಗಾಗಿ ಸಣ್ಣ ಕಥಾ ಸ್ಪರ್ಧೆ ಆಯೋಜಿಸಲಾಗಿದೆ. ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಎಲ್ಲಾ ವಯೋಮಾನದ ಹವ್ಯಕ ಮಹಿಳೆಯರು ಭಾಗವಹಿಸಬಹುದು. ಈ ಹಿಂದೆ ಇದೇ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗೆದ್ದವರಿಗೆ ಅವಕಾಶವಿಲ್ಲ. ಈವರೆಗೆ ಎಲ್ಲೂ ಪ್ರಕಟವಾಗದ, ಭಾಷಾಂತರ ಅಲ್ಲದ 8 ಪುಟಗಳಿಗೆ ಮೀರದ ಸಾಮಾಜಿಕ ಕತೆಯನ್ನು ಅಂಚೆ ಮೂಲಕ ವಿಜಯಾ ಸುಬ್ರಹ್ಮಣ್ಯ ಕುಂಬಳೆ, ಸಂಚಾಲಕಿ, ಕೊಡಗಿನ ಗೌರಮ್ಮ ಕಥಾ ಸ್ಪರ್ಧೆ, ಕಾರ್ತಿಕೇಯ, ನಾರಾಯಣಮಂಗಲ, ಅಂಚೆ : ಕುಂಬಳೆ -671321, ಕಾಸರಗೋಡು ಜಿಲ್ಲೆ ವಿಳಾಸಕ್ಕೆ ದಿನಾಂಕ 30-08-2024ರ ಒಳಗೆ ತಲುಪುವಂತೆ ಕಳುಹಿಸಬೇಕು.

Read More

ಮಂಗಳೂರು : ಡಾ. ಜಗದೀಶ ಎಸ್. ಕಾಬನೆಯವರು ಅಧ್ಯಕ್ಷರಾಗಿರುವ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ ವತಿಯಿಂದ ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿಯವರಿಗೆ ‘ಮುಂಗಾರು ಸಿರಿ ಪ್ರಶಸ್ತಿ’ಯನ್ನು 30-06-2024ರಂದು ಪ್ರದಾನ ಮಾಡಲಾಯಿತು. ವೈದ್ಯಕೀಯ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಕನ್ನಡ ನಾಡು ನುಡಿ, ನೆಲ, ಜಲ, ಭಾಷೆ, ರಂಗಭೂಮಿ, ಸಂಗೀತ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಶಾಲು, ಹಾರ ಹಾಗೂ ಫಲಕ ಸಹಿತವಾಗಿ ಈ ಪ್ರಶಸ್ತಿಯನ್ನು ನೀಡಲಾಯಿತು. ಚಿತ್ರರಂಗದ ಕಲಾವಿದರ ಸಹಿತ ಹಲವರು ಮತ್ತು ಅನೇಕ ಕವಿಗಳು‌ ಈ ಕಾರ್ಯಕ್ರಮ ಹಾಗೂ ಜೊತೆಗೆ ನಡೆದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

Read More

ಮಂಗಳೂರು : ಕಿಶೋರ ರಂಗ ಪಯಣ 2024, ಕಲಾಭಿ ಮಕ್ಕಳ ರಂಗಭೂಮಿ ಪ್ರಸ್ತುತ ಪಡಿಸಿದ ಭುವನ್ ಮಣಿಪಾಲ ರಂಗರೂಪ ಮತ್ತು ನಿರ್ದೇಶನದಲ್ಲಿ ‘ಮೊಗ್ಲಿ’ ನಾಟಕವು ದಿನಾಂಕ 06-07-2024ರಂದು ಸಂಜೆ 7-00 ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವ ವಿದ್ಯಾನಿಲಯ) ಸಹೋದಯ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು. ಆಂಗ್ಲ ಭಾಷೆಯ ರುಡ್ಯಾರ್ಡ್ ಕಿಪ್ಲಿಂಗ್ ಅವರ ಜಂಗಲ್ ಬುಕ್ ಈ ನಾಟಕದ ಕಥಾವಸ್ತುವಾಗಿ ಇದರ ಕಥಾ ನಾಯಕ ಮೊಗ್ಲಿಯ ಸುತ್ತ ಕಾಡಿನಲ್ಲಿ ನಡೆಯುವ ಸನ್ನಿವೇಶಗಳನ್ನು ಉಪಯೋಗಿಸಿ ಪ್ರಸ್ತುತ ಕಾಲಘಟ್ಟದ ಸಮಸ್ಯೆಗಳನ್ನು ತೋರಿಸುವ ವಿಶೇಷ ಪ್ರಯತ್ನವನ್ನು ಭುವನ್ ಮಣಿಪಾಲ್ ಇವರ ನಿರ್ದೇಶನದಲ್ಲಿ, ಕಲಾಭಿ ಮಕ್ಕಳ ರಂಗಭೂಮಿಯ ಮ್ಯಾನೇಜರ್ ಆದ ಧನುಷ್ ಕಾಮತ್ ಅವರ ನೇತೃತ್ವದಲ್ಲಿ ಈ ಪುಟ್ಟ ತಂಡ ಮಾಡಿದೆ. ಕಾರ್ಯಕ್ರಮದ ಅಭ್ಯಾಗತರಾಗಿ ಹೋಟೇಲ್ ದೀಪ ಕಂಫರ್ಟಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಊರ್ಮಿಳಾ ರಮೇಶ್, ದೃಶ್ಯ ಕಲಾವಿದರಾದ ಶ್ರೀ ಕರಣ್ ಆಚಾರ್ಯ, ಅಮೃತ ವಿದ್ಯಾಲಯದ ಕ್ಯಾಂಪಸ್ ನಿರ್ದೇಶಕರಾದ ಶ್ರೀ ಯತೀಶ್ ಬೈಕಂಪಾಡಿ, ಕರ್ನಾಟಕ ಬ್ಯಾಂಕಿನ ಉಪ ಮಹಾಪ್ರಬಂಧಕರಾದ…

Read More

ಪುತ್ತೂರು : ವಾಹಿನಿ ಕಲಾ ಸಂಘ, ದರ್ಬೆ, ಪುತ್ತೂರು ಇದರ ವತಿಯಿಂದ ಕಥಾಸ್ಪರ್ಧೆ-2024 ಮತ್ತು ಕವನ ಸ್ಪರ್ಧೆ-2024ನ್ನು ಆಯೋಜಿಸಲಾಗಿದೆ. ನಿಯಮಗಳು : 1. ಬರಹಗಾರರು ತಮ್ಮ ಇಷ್ಟದ ವಿಷಯದಲ್ಲಿ ಕತೆ, ಕವನಗಳನ್ನು ಕಳುಹಿಸಬಹುದು. 2. ಕತೆ, ಕವನಗಳು ಸ್ವತಂತ್ರವಾಗಿರಬೇಕು. ಅನುವಾದ, ಅನುಕರಣೆಗಳಿಗೆ ಅವಕಾಶವಿಲ್ಲ. 3. ಕತೆ, ಕವನಗಳು ಈ ಹಿಂದೆ ಎಲ್ಲಿಯೂ ಪ್ರಕಟಗೊಂಡಿರಬಾರದು. ವಿದ್ಯುನ್ಮಾನ ಮಾಧ್ಯಮಗಳಲ್ಲೂ ಪ್ರಕಟಿಸಿರಬಾರದು. 4. ಯುವ ಮತ್ತು ಸಾರ್ವಜನಿಕ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗುವುದು. ಸ್ಪರ್ಧೆಗಳಲ್ಲಿ ದೇಶವಿದೇಶಗಳಲ್ಲಿ ವಾಸಿಸುವ ಕನ್ನಡಿಗರೆಲ್ಲರೂ ಭಾಗವಹಿಸಬಹುದು. 16ರಿಂದ 25 ವರ್ಷ ವಯೋಮಿತಿಯೊಳಗಿನ ವ್ಯಕ್ತಿಗಳು ಯುವ ವಿಭಾಗಕ್ಕೆ ಸ್ಪರ್ಧಿಸಬಹುದು. ಅವರು ವಿದ್ಯಾರ್ಥಿಗಳೇ ಆಗಿರಬೇಕು ಎಂದಿಲ್ಲ. ವಯಸ್ಸಿನ ಸ್ಪಷ್ಟೀಕರಣಕ್ಕಾಗಿ, ಶಾಲಾ ಪ್ರಮಾಣಪತ್ರ/ ಆಧಾರ್/ ಆದಾಯ ತೆರಿಗೆ ಪಾನ್ ಕಾರ್ಡ್ ಇವುಗಳಲ್ಲಿ ಒಂದರ ಪ್ರತಿಯನ್ನು ಲಗತ್ತಿಸಬೇಕು. 5. ಕತೆಗಳು ಆರುನೂರು ಪದಗಳನ್ನು ಮೀರಬಾರದು. ಕವನಗಳು ಮೂವತ್ತು ಸಾಲುಗಳ ಒಳಗಿರಬೇಕು. ಕವನಗಳು ಛಂದೋಬದ್ಧವಾಗಿರಬೇಕು. ಷಟ್ಪದಿ, ಚೌಪದಿ, ಗಜಲ್, ಸಾನೆಟ್ ಇತ್ಯಾದಿಗಳಿಗೆ ಅವಕಾಶ ಇದೆ. ಚುಟುಕು, ಮುಕ್ತಕ,…

Read More

ಮಂಗಳೂರು : ಹಿರಿಯ ಜಾನಪದ ವಿದ್ವಾಂಸ, ಕವಿ – ಸಾಹಿತಿ ಡಾ. ವಾಮನ ನಂದಾವರ ಅವರಿಗೆ 80 ತುಂಬಿದ ಸಂದರ್ಭದಲ್ಲಿ ಅವರು ವಾಸ್ತವ್ಯವಿರುವ ಗುರುಪುರ ಬಳಿಯ ಶಿವರಾವ್ ನೂಯಿ ಫೌಂಡೇಶನ್ ಉಳಾಯಿಬೆಟ್ಟು ಇಲ್ಲಿನ ‘ಅವತಾರ್’ನಲ್ಲಿ ದಿನಾಂಕ 06-07-2024ರಂದು ಸರಳ ಸಮಾರಂಭವೊಂದು ಜರಗಿತು. ಫೌಂಡೇಶನ್ನಿನ ಆಡಳಿತ ಮಂಡಳಿ ಸಹಯೋಗದಲ್ಲಿ ಶ್ರೀಮತಿ ಚಂದ್ರಕಲಾ ನಂದಾವರ ಮತ್ತು ಮಕ್ಕಳು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಆಹ್ವಾನಿತ ಅತಿಥಿಗಳ ಸಮ್ಮುಖದಲ್ಲಿ ಹಿರಿಯ ಕಲಾವಿದರಿಂದ ‘ಭೀಷ್ಮಪರ್ವ’ ಯಕ್ಷಗಾನ ತಾಳಮದ್ದಳೆ ಜರಗಿತು. ಡಾ. ಎಂ. ಪ್ರಭಾಕರ ಜೋಶಿ (ಭೀಷ್ಮ), ಭಾಸ್ಕರ ರೈ ಕುಕ್ಕುವಳ್ಳಿ (ಕೌರವ), ಜಿ.ಕೆ. ಭಟ್ ಸೇರಾಜೆ (ಶ್ರೀಕೃಷ್ಣ) ಮತ್ತು ನಿತ್ಯಾನಂದ ಕಾರಂತ ಪೊಳಲಿ (ಅರ್ಜುನ) ಅರ್ಥಧಾರಿಗಳಾಗಿದ್ದರು. ಭಾಗವತರಾಗಿ ಶಿವಪ್ರಸಾದ್ ಎಡಪದವು, ಹಿಮ್ಮೇಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಕೃಷ್ಣ ಪ್ರಕಾಶ್ ಉಳಿತಾಯ ಮತ್ತು ಅಂಬಾತನಯ ಅರ್ನಾಡಿ ಭಾಗವಹಿಸಿದ್ದರು. ಪ್ರೊ. ಬಿ.ಎ. ವಿವೇಕ ರೈ ಸೇರಿದಂತೆ ಹಿರಿಯ ಸಾಹಿತಿಗಳು, ಗಣ್ಯರು ಮತ್ತು ಅವತಾರ್ ನಿವಾಸಿಗಳು ಉಪಸ್ಥಿತರಿದ್ದರು. ಪ್ರೊ. ಚಂದ್ರಕಲಾ ನಂದಾವರ ಸ್ವಾಗತಿಸಿ…

Read More

ಮಂಗಳೂರು : ಕುಡ್ಲ ಆರ್ಟ್ಸ್ ಫೆಸ್ಟಿವಲ್, ನೃತ್ಯಾಂಗಣ ಮತ್ತು ಅಮೃತ ವಿದ್ಯಾಲಯಂ ಇವುಗಳ ಸಹಯೋಗದಲ್ಲಿ ಪಸ್ತುತ ಪಡಿಸುವ ‘ಶರಸೇತು ಬಂಧನ’ ಹರಿಕಥೆಯು ದಿನಾಂಕ 14-07-2024ರಂದು ಸಂಜೆ ಗಂಟೆ 6-30ಕ್ಕೆ ಮಂಗಳೂರಿನ ಬೋಳೂರ್ ಅಮೃತ ವಿದ್ಯಾಲಯಂನಲ್ಲಿ ಪ್ರಸ್ತುತಗೊಳ್ಳಲಿದೆ. ಈ ಹರಿಕಥೆ ಕಾರ್ಯಕ್ರಮದಲ್ಲಿ ಹರಿದಾಸ ಶ್ರೇಣಿ ಮುರಳಿಯವರಿಗೆ ಶ್ರೀಪತಿ ಭಟ್ ಬೆಲ್ಲೇರಿ ಹಾರ್ಮೋನಿಯಂನಲ್ಲಿ ಮತ್ತು ಕೌಶಿಕ್ ಮಂಜನಾಡಿ ತಬಲಾದಲ್ಲಿ ಸಹಕರಿಸಲಿದ್ದಾರೆ.

Read More

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು, ‘ಕಾಂಜವೇ’ ಸಾಂಸ್ಕೃತಿಕ ವೇದಿಕೆ ಬೆಳ್ತಂಗಡಿ, ವಿದ್ಯಾಪ್ರಕಾಶನ ಅತ್ತಾವರ ಮಂಗಳೂರು ಹಾಗೂ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಇದರ ಸಹಯೋಗದೊಂದಿಗೆ ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 12-07-2024ರಂದು ಮಂಗಳೂರಿನ ಕೆನರಾ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಶೀನಾ ನಾಡೋಳಿಯವರ ‘ಬೊಳಂತ್ಯೆ-ಉರ್ಪೆಲ್’, ‘ಧರ್ಮದೃಷ್ಟಿ’ ಮತ್ತು ಪ್ಲೀಸ್ ನನ್ನ ಫೀಸ್ ಕೊಡಿ’ ಎಂಬ ಮೂರು ಕೃತಿಗಳನ್ನು ವಿಶ್ರಾಂತ ಉಪಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಇವರು ಲೋಕಾರ್ಪಣೆಗೊಳಿಸಲಿದ್ದು, ಆಂಗ್ಲ ಭಾಷಾ ಪ್ರಾಧ್ಯಾಪಕರಾದ ಶ್ರೀ ನಂದಕಿಶೋರ್ ಎಸ್. ಮತ್ತು ಖ್ಯಾತ ರಂಗಕರ್ಮಿಯಾದ ಶ್ರೀ ಮೋಹನ್ ಚಂದ್ರ ಯು. ಇವರುಗಳು ಪುಸ್ತಕ ಪರಿಚಯ ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ್ ಗಟ್ಟಿ ಇವರು ಅಧ್ಯಕ್ಷತೆ ವಹಿಸಲಿದ್ದು, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಶೆಟ್ಟಿ, ಖ್ಯಾತ ಸಾಹಿತಿಗಳಾದ ಶ್ರೀ ರಘು ಇಡ್ಕಿದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ದಯಾನಂದ…

Read More

ಕಾಂತಾವರ: ಯಕ್ಷದೇಗುಲ ಕಾಂತಾವರದ ವಾರ್ಷಿಕ ಆಟ ,ಕೂಟ, ಬಯಲಾಟ ಸಹಿತ 22 ನೇ ‘ಯಕ್ಷೋಲ್ಲಾಸ’  ಕಾರ್ಯಕ್ರಮವು ದಿನಾಂಕ 21-07-2024ನೇ ಭಾನುವಾರದಂದು ಶ್ರೀ ಕ್ಷೇತ್ರ ಕಾಂತಾವರದಲ್ಲಿ ನಡೆಯಲಿದೆ. ಅಂದು ಯಕ್ಷ ರಂಗದ ಸಿಡಿಲ ಮರಿ ಖ್ಯಾತಿವೆತ್ತ  ಪುತ್ತೂರು ದಿ. ಡಾ. ಶ್ರೀಧರ ಭಂಡಾರಿ  ಸಂಸ್ಮರಣಾ ಪ್ರಶಸ್ತಿಯನ್ನು ಧರ್ಮಸ್ಥಳ ಮೇಳದ ನಿವೃತ್ತ ಕಲಾವಿದ ನಿಡ್ಲೆ ಗೋವಿಂದ ಭಟ್ ಇವರಿಗೆ ಹಾಗೂ  ಸವ್ಯ ಸಾಚಿ ಕಲಾವಿದ ಬಾಯಾರು ದಿ. ಪ್ರಾಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿಯನ್ನು  ಸುರತ್ಕಲ್ ಮೇಳದ ನಿವೃತ್ತ ಕಲಾವಿದ  ಪುತ್ತಿಗೆ ಕುಮಾರ ಗೌಡ ಇವರಿಗೆ ನೀಡಲು ಸಂಸ್ಥೆಯ ಆಯ್ಕೆ ಸಮಿತಿ  ತೀರ್ಮಾನಿಸಿದೆ.  ಅಂದು ನಡೆಯುವ ಸಭಾ ಸಂಭ್ರಮದಲ್ಲಿ  ಕ್ಷೇತ್ರದ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳರ ಅಧ್ಯಕ್ಷತೆಯಲ್ಲಿ ಕಾರ್ಕಳ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ವಿ. ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ನಗದು ಪುರಸ್ಕಾರವನ್ನು ಒಳಗೊಂಡಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ತಿಳಿಸಿದ್ದಾರೆ. ಪುತ್ತಿಗೆ ಕುಮಾರ ಗೌಡ ನಿಡ್ಲೆ…

Read More

ಮೈಸೂರು: ಮೈಸೂರಿನ ಗಾನಭಾರತಿ ಸಾಂಸ್ಕೃತಿಕ ವೇದಿಕೆಯ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಮಂಗಳೂರಿನ ನಾದನೃತ್ಯ ಕಲಾಸಂಸ್ಥೆಯ ನಿರ್ದೇಶಕಿ ಡಾ. ಭ್ರಮರಿ ಶಿವಪ್ರಕಾಶರಿಂದ ‘ಕುಮಾರವ್ಯಾಸ ನೃತ್ಯಭಾರತ’ ಎಂಬ ಶಾಸ್ತ್ರೀಯ ಭರತನಾಟ್ಯ ಕಾರ್ಯಕ್ರಮವು ದಿನಾಂಕ 04-07-2024 ರಂದು ಮೈಸೂರಿನ ಕುವೆಂಪು ನಗರದಲ್ಲಿರುವ ವೀಣೆ ಶೇಷಣ್ಣ  ಭವನದಲ್ಲಿ ನಡೆಯಿತು. ಗಾನಭಾರತಿಯ ಅಧ್ಯಕ್ಷೆ ನಿವೃತ್ತ ಕನ್ನಡ ಪ್ರಾಧ್ಯಾಪಕಿ, ಸಂಗೀತಜ್ಞೆ, ವಿಮರ್ಶಕಿ ಡಾ. ರಮಾ ವಿ. ಬೆಣ್ಣೂರು ಮಾತನಾಡಿ “ಕುಮಾರವ್ಯಾಸ ಹಾಡಿದ ಕೃಷ್ಣ ಕಥೆಯ ನೃತ್ಯ ಪ್ರಸ್ತುತಿಯು ಕನ್ನಡನಾಡಿನ ಕಲಾಪ್ರಪಂಚದಲ್ಲಿ ಒಂದು ಅನನ್ಯ ಪ್ರಯತ್ನ. ಕನ್ನಡ ಸಾಹಿತ್ಯ ಕೃತಿ ಆಧಾರಿತ ಪ್ರಸ್ತುತಿಯನ್ನೇ ಪ್ರೋತ್ಸಾಹಿಸಲು ಬಯಸಿ ಪ್ರಾಯೋಜಿಸಿದ ಶ್ರೀ ರವಿ ಬಳೆ ದಂಪತಿಗಳ ಸಹೃದಯತನವು ಶ್ಲಾಘನೀಯ.” ಎಂದರು.

Read More