ಬೆಂಗಳೂರು : ಕಾಜಾಣ ಪ್ರಸ್ತುತ ಪಡಿಸುವ ಶೈಲಜ ವಿಜಯಕುಮಾರ್ ರಚಿಸಿರುವ ‘ದರ್ಪಣ ಸುಂದರಿ’ ನಾಟಕ ಪ್ರದರ್ಶನವನ್ನು ದಿನಾಂಕ 18 ಜೂನ್ 2026ರಂದು ಸಂಜೆ ಗಂಟೆ 7-00ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಳ್ಳಲಾಗಿದೆ. ರಂಜಿತ ನಾಗರಾಜ್ ಅಭಿನಯದ ಏಕವ್ಯಕ್ತಿ ನಾಟಕವನ್ನು ಡಾ. ಬೇಲೂರು ರಘುನಂದನ್ ಇವರು ರಂಗಪಠ್ಯ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 8123407755 ಸಂಖ್ಯೆಯನ್ನು ಸಂಪರ್ಕಿಸಿರಿ.

