ಚಿತ್ರದುರ್ಗ : ಅ.ಭಾ.ವಿ.ಪ. ಹಿರಿಯ ಕಾರ್ಯಕರ್ತರ ಬಳಗ ಚಿತ್ರದುರ್ಗ-ದಾವಣಗೆರೆ ಜಿಲ್ಲೆ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕದ ಸಹಯೋಗದಲ್ಲಿ ರಾಜ್ಯಮಟ್ಟದ ಕನ್ನಡ ಸಣ್ಣಕಥೆ, ಕವನಗಳ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತ ಬರಹಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯದ ಎಲ್ಲಾ ವಿಭಾಗದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಕನ್ನಡ ಸಣ್ಣಕಥೆ, ಕವನಗಳ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕಥೆ-ಕವನ ಎರಡಕ್ಕೂ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ. ಪ್ರಥಮ ಬಹುಮಾನ ರೂ.10,000/-, ದ್ವಿತೀಯ ರೂ.7,000/-, ತೃತೀಯ ರೂ.3,000/- ನೀಡಲಾಗುತ್ತದೆ. ಬರಹಗಾರರು ದಿನಾಂಕ 31 ಆಗಸ್ಟ್ 2026ರೊಳಗಾಗಿ ತಮ್ಮ ಬರಹವನ್ನು ಭಾರತೀಯ ಅಂಚೆ ಸ್ಪೀಡ್ಪೋಸ್ಟ ಮೂಲಕವೇ ಟಿ.ಆರ್. ಉದಯರವಿ, ಗುರು ಕೃಪ, ಶೃಂಗೇರಿ ಮಠದ ರಸ್ತೆ, ಚಿತ್ರದುರ್ಗ -577501, ಸಂಖ್ಯೆ : 96064 92583 ವಿಳಾಸಕ್ಕೆ ಕಳುಹಿಸಬೇಕು.
