ಮಂಡ್ಯ : ಮಂಡ್ಯದ ಎಂ.ಆರ್ನ.ಎಂ. ಪ್ರಕಾಶನವು ಕನ್ನಡ ಕಥಾ ಜಗತ್ತಿನ ವಾರ್ಷಿಕ ಸ್ಪರ್ಧೆಯಾದ ‘ಎಂ.ಆರ್ಮ.ಎಂ. ಕಥಾ ಸ್ಪರ್ಧೆ -2026’ಯನ್ನು ಆಯೋಜಿಸುತ್ತಿದೆ.
ಕಥೆ ಕಳುಹಿಸುವ ಮುನ್ನ ಕಥೆಗಾರರು ಗಮನಿಸಬೇಕಾದ ನಿಯಮಗಳು :
* ಸ್ಪರ್ಧೆಗೆ ಕಳುಹಿಸುವ ಕಥೆಯು ಸ್ವತಂತ್ರ ರಚನೆ ಆಗಿರಬೇಕು. ಇದಕ್ಕೂ ಮೊದಲು ಯಾವುದೇ ಪತ್ರಿಕೆ, ನಿಯತಕಾಲಿಕೆ, ಸಾಮಾಜಿಕ ಮಾಧ್ಯಮ, ಬ್ಲಾಗ್, ಆಕಾಶವಾಣಿ, ದೃಶ್ಯ ಮಾಧ್ಯಮ ಸೇರಿದಂತೆ ಎಲ್ಲಿಯೂ ಪ್ರಕಟ ಅಥವಾ ಪ್ರಸಾರವಾಗಿರಬಾರದು.
* ಕಥೆಗೆ ಗರಿಷ್ಠ ಮಿತಿಗಳು-ಎರಡು ಸಾವಿರ ಪದಗಳು ಮಾತ್ರ.
* ಕಥೆಯನ್ನು ನುಡಿ ತಂತ್ರಾಂಶದಲ್ಲಿ ಟೈಪ್ ಮಾಡಿ ಕಳುಹಿಸಿಕೊಡಬೇಕು. (ಕೈ ಬರಹದ ಕಥೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ).
* ಕಥೆಗಾರರು ತಮ್ಮ ಹೆಸರು, ಅಂಚೆ ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ಇತ್ತೀಚಿನ ಭಾವಚಿತ್ರದೊಂದಿಗೆ 80 ಪದ ಮೀರದಂತೆ ಕಿರು ಪರಿಚಯವನ್ನು ಪ್ರತ್ಯೇಕ ಪುಟದಲ್ಲಿ ಕಥೆಯ ಜೊತೆಗೆ ಕಳುಹಿಸಿಕೊಡಬೇಕು.
* ಸ್ಪರ್ಧೆಗೆ ಕಳುಹಿಸುವ ಕಥೆಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸುವುದಿಲ್ಲ.
* ಆಯ್ಕೆಯಾಗುವ ಕಥೆಗಳನ್ನು ಎಂ.ಆರ್.ಎಂ. ಪ್ರಕಾಶನವು ಯಾವುದೇ ಸ್ವರೂಪದಲ್ಲಿ ಯಾವಾಗ ಬೇಕಾದರೂ ಬಳಸಿಕೊಳ್ಳುವ ಹಕ್ಕುಗಳನ್ನು ಕಾಯ್ದಿರಿಸಿಕೊ೦ಡಿರುತ್ತದೆ.
* ತೀರ್ಪುಗಾರರ ಮತ್ತು ಸಂಪಾದಕರ ತೀರ್ಮಾನವೇ ಅಂತಿಮವಾಗಿರುತ್ತದೆ.
* ಕಥೆಗಳನ್ನು ಕಳುಹಿಸಬೇಕಾದ ಇ-ಮೇಲ್ ವಿಳಾಸ: [email protected].
* ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ : 78990 41175, 89719 01560, 94494 95941
* ಮೆಚ್ಚಿಗೆ ಪಡೆದ ಕಥೆಗಳಿಗೆ ವಿಶೇಷ ಬಹುಮಾನ ನೀಡಲಾಗುವುದು.

