Subscribe to Updates

    Get the latest creative news from FooBar about art, design and business.

    What's Hot

    ಕುದ್ರೋಳಿಯ ನಾರಾಯಣ ಗುರು ವಿದ್ಯಾಸಂಸ್ಥೆಯಲ್ಲಿ ಚಿತ್ರಕಲಾ ಸ್ಪರ್ಧೆ

    August 24, 2026

    ಬಹುಮುಖ ಪ್ರತಿಭೆಯ ನೃತ್ಯಕಲಾವಿದೆ ಮಾನಸ ರಾವ್ ರಂಗಪ್ರವೇಶ | ಆಗಸ್ಟ್ 28

    August 24, 2026

    ‘ಅರ್ಥಾಂಕುರ-28’ ಸರಣಿ ತಾಳಮದ್ದಲೆಯಲ್ಲಿ ‘ನಾನ್’ ಯಕ್ಷಕೃತಿ ಬಿಡುಗಡೆ

    August 24, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಅರ್ಥಾಂಕುರ-28’ ಸರಣಿ ತಾಳಮದ್ದಲೆಯಲ್ಲಿ ‘ನಾನ್’ ಯಕ್ಷಕೃತಿ ಬಿಡುಗಡೆ
    Book Release

    ‘ಅರ್ಥಾಂಕುರ-28’ ಸರಣಿ ತಾಳಮದ್ದಲೆಯಲ್ಲಿ ‘ನಾನ್’ ಯಕ್ಷಕೃತಿ ಬಿಡುಗಡೆ

    August 24, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಳ್ತೂರು : ಉಳ್ತೂರು ಮಹಾಲಿಂಗೇಶ್ವರ ದೇಗುಲದಲ್ಲಿ ನಮ್ಮ ಉಳ್ತೂರು ಬಳಗ, ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಜಂಟಿ ಸಹಯೋಗದಲ್ಲಿ ದಿನಾಂಕ 23 ಆಗಸ್ಟ್ 2026ರಂದು ಆಯೋಜಿಸಿದ ‘ಅರ್ಥಾಂಕುರ-28 ’ ಸರಣಿ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.

    ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ವಿಜಯಲಕ್ಷ್ಮಿ ರಾಮದಾಸ ಅಡಿಗ ಇವರು ಮಾತನಾಡಿ “ನಿರಂತರ ಚಟುವಟಿಕೆಯಿಂದಲೇ ಉಭಯ ಸಂಸ್ಥೆಗಳು ಹೆಸರಾಗಿದೆ. ಈತನ್ಮದ್ಯೆ ಉಳ್ತೂರಿನಲ್ಲಿಯೂ ಹೊಸ ತಲೆಮಾರಿನ ಅರ್ಥದಾರಿಗಳನ್ನು ತಯಾರಿಸುವ ಸದುದ್ಧೇಶದಿಂದ ಅರ್ಥಾಂಕುರವನ್ನು ಆಯೋಜಿಸುತ್ತಿರುವುದು ಸಂತಸ ತಂದಿದೆ. ಉಳ್ತೂರಿನ ಯಕ್ಷಗಾನಾಸಕ್ತರಿಗೆ ರಸಾನುಭೂತಿಗೆ ಉತ್ತಮ ಅವಕಾಶ ದೊರೆತಂತಾಗಿದೆ” ಎಂದು ಹೇಳಿದರು.

    ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ‘ನಾನ್’ ಯಕ್ಷಕೃತಿಯನ್ನು ಬಿಡುಗಡೆ ಮಾಡಿದ ಪ್ರಾಚಾರ್ಯ ದೇವದಾಸ್ ರಾವ್ ಮಾತನಾಡಿ “ಕುಂದಾಪ್ರ ಕನ್ನಡ ಭಾಷಾಭಿಮಾನ ವಿಶ್ವವ್ಯಾಪಿಯಾಗಿದೆ. ಅದರಲ್ಲಿಯೂ ಯಕ್ಷಗಾನವನ್ನು ಕುಂದಾಪ್ರ ಕನ್ನಡದಲ್ಲಿ ಬರೆಯುವ ಕಾಯಕ ಕಷ್ಟಕರವಾದದ್ದು. ಸಾಹಿತ್ಯವನ್ನು ಹೊಂದಿಸಿಕೊಂಡು ಛಂದಸ್ಸಿಗನುಗುಣವಾಗಿ ಪದ್ಯ ರೂಪಕ್ಕೆ ತರುವುದು ಸುಲಭ ಸಾಧ್ಯವಲ್ಲ. ಇಂತಹ ಕ್ಲಿಷ್ಟಕರ ಸಾಹಸಗೈದ ಪ್ರಸಾದ್ ಮೊಗೆಬೆಟ್ಟು ಯಕ್ಷ ಕೃತಿಯನ್ನು ಶ್ಲಾಘಿಸಲೇ ಬೇಕು” ಎಂದು ಹೇಳಿದರು.

    ಎ. ರವೀಂದ್ರ ಶೆಟ್ಟಿ, ರಮೇಶ್ ಅಡಿಗ ಉಳ್ತೂರು, ಬಾಬು ಪೂಜಾರಿ ಮಲ್ಯಾಡಿ, ಪ್ರಸಾದ್ ಕುಮಾರ್ ಮೊಗೆಬೆಟ್ಟು, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಯಶಸ್ವಿ ಕಲಾವೃಂದದ ಗೌರವಾಧ್ಯಕ್ಷ ಗೋಪಾಲ ಪೂಜಾರಿ ಸ್ವಾಗತಿಸಿ, ಯಕ್ಷ ನುಡಿಸಿರಿ ಬಳಗದ ಅಧ್ಯಕ್ಷ ಡಾ. ಜಗದೀಶ್ ಶೆಟ್ಟಿ ಪ್ರಸ್ತಾವನೆಗೈದರು. ಪ್ರತಾಪ್ ಶೆಟ್ಟಿ ಉಳ್ತೂರು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತಾಳಮದ್ದಳೆ ‘ನಾನ್’ ರಂಗ ಪ್ರಸ್ತುತಿಗೊಂಡಿತು.

    baikady Book release Literature Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleವಿಶ್ವ ಕೊಂಕಣಿ ಕೇಂದ್ರದಲ್ಲಿ ಕೊಂಕಣಿ ಮಾನ್ಯಾತಾ ದಿವಸ ಆಚರಣೆ
    Next Article ಬಹುಮುಖ ಪ್ರತಿಭೆಯ ನೃತ್ಯಕಲಾವಿದೆ ಮಾನಸ ರಾವ್ ರಂಗಪ್ರವೇಶ | ಆಗಸ್ಟ್ 28
    roovari

    Add Comment Cancel Reply


    Related Posts

    ಕುದ್ರೋಳಿಯ ನಾರಾಯಣ ಗುರು ವಿದ್ಯಾಸಂಸ್ಥೆಯಲ್ಲಿ ಚಿತ್ರಕಲಾ ಸ್ಪರ್ಧೆ

    August 24, 2026

    ಬಹುಮುಖ ಪ್ರತಿಭೆಯ ನೃತ್ಯಕಲಾವಿದೆ ಮಾನಸ ರಾವ್ ರಂಗಪ್ರವೇಶ | ಆಗಸ್ಟ್ 28

    August 24, 2026

    ವಿಶ್ವ ಕೊಂಕಣಿ ಕೇಂದ್ರದಲ್ಲಿ ಕೊಂಕಣಿ ಮಾನ್ಯಾತಾ ದಿವಸ ಆಚರಣೆ

    August 24, 2026

    ಕಣ್ಣೂರಿನ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ‘ಭರತನಾಟ್ಯ ಕಾರ್ಯಾಗಾರ’

    August 24, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.