ಮೈಸೂರು : ಅಂತರಂಗ ಅಭಿನಯಿಸುವ ಖ್ಯಾತ ಕಾದಂಬರಿಕಾರ ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಇವರ ಕಥೆ ಆಧಾರಿತ ‘ಒಳ ಚರಂಡಿ ಪುರಾಣ’ ನಾಟಕ ಪ್ರದರ್ಶನವನ್ನು ದಿನಾಂಕ 29 ಏಪ್ರಿಲ್ 2026ರಂದು ಸಂಜೆ ಗಂಟೆ 7-30ಕ್ಕೆ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ನಾಟಕವನ್ನು ಡಾ. ಗೌರೀಶ ಜೋಶಿ ಪರಿಕಲ್ಪನೆ ಮತ್ತು ರಂಗರೂಪ ನೀಡಿದ್ದು, ಅರ್ಚನಾ ಶ್ಯಾಮ್ ರಂಗವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗೆ ಅಂಕಲ್ ಶ್ಯಾಂ : 98809 14509 ಮತ್ತು ಬಿ.ವಿ. ಮುರಳೀಧರ್ 99869 11321 ಸಂಖ್ಯೆಗಳನ್ನು ಸಂಪರ್ಕಿಸಿರಿ.

